‘ರಾಜ್ಯ ಒಕ್ಕಲಿಗರ ಸಂಘ’ದ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದ ಎರಡೇ ತಿಂಗಳಲ್ಲಿ ಅವಿಶ್ವಾಸ ಮಂಡನೆ, ಗರಿಗೆದರಿದ ಕುದುರೆ ವ್ಯಾಪಾರ,ರೆಸಾರ್ಟ್ ರಾಜಕೀಯ! ಪಟ್ಟಭದ್ರ ಆಸ್ತಿ ಲೂಟಿಕೋರರು ಅವಿಶ್ವಾಸದ ಹಿಂದಿರುವ ಶಂಕೆ,ಸಮುದಾಯ ಎಚ್ಚೆತ್ತುಕೊಳ್ಳಲಿ, ಒಕ್ಕಲಿಗ ಜನಾಂಗದ ಮಾನ ಮೂರು ಕಾಸಿಗೆ ಹರಾಜಾಗುವ ಮುನ್ನ ಒಕ್ಕಲಿಗ ಸಮುದಾಯದ ಮಠಾಧೀಶರು, ಮುತ್ಸದ್ಧಿ ನಾಯಕರು ಬುದ್ದಿ ಹೇಳಲಿ.



118 ವರ್ಷಗಳ ಇತಿಹಾಸ ಇರುವ ಪ್ರತಿಷ್ಠಿತ ರಾಜ್ಯ ಒಕ್ಕಲಿಗರ ಸಂಘ ಅನೇಕ ಮುತ್ಸದ್ದಿ ಮಹನೀಯರಿಂದ ಸಂಸ್ಥಾಪಿಸಲ್ಪಟ್ಟು ಬೆಳೆದದ್ದು, ನಂತರ ಕೆಲವು ಸ್ವಾರ್ಥ ಹಾಗು ದುರಾಸೆಯ ಲೂಟಿಕೋರರ ಕೈಗೆ ಸಿಲುಕಿ ನೌಕರರಿಗೆ ಸಂಬಳ ಕೊಡಲೂ ಪರದಾಡುವ ಸ್ಥಿತಿಗೆ ಬಂದದ್ದು ವಿಪರ್ಯಾಸ ಎನಿಸಿತ್ತು. ಇತ್ತೀಚೆಗಿನ ಕೆಲ ಉತ್ತಮ ಆಡಳಿತಗಾರರಿಂದ ಸಂಘದ ಸ್ಥಿತಿ ಸರಿ ಹೋಗುತ್ತಿದೆ ಎಂಬ ಅತಾವರಣ ಸೃಷ್ಟಿಯಾಗುತ್ತಿರುವಾಗ ಹೊಸ ಆಡಳಿತ ಮಂಡಳಿಯ ಭರವಸೆಯ ಹೆಜ್ಜೆಗಳು ಸಮುದಾಯಕ್ಕೆ ಒಳಿತು ಮಾಡಬಹುದು ಎನ್ನುವ ಹೊತ್ತಲ್ಲೇ ಪರವಾಗಿಲ್ಲ,ಉತ್ತಮರೆನಿಸಿಕೊಂಡಿದ್ದ ಕೆಲವು ನಿರ್ದೇಶಕರನ್ನು ಅಧಿಕಾರ, ಹಣದ ಆಮಿಷದ ಖೆಡ್ಡಾಕ್ಕೆ ಕೆಡವಿ, ಕೇವಲ ಎರಡೇ ತಿಂಗಳಲ್ಲಿ ಉತ್ತಮ ಆಡಳಿತದ ಭರವಸೆ ಮೂಡಿಸಿದ್ದ ಶಾಸಕ ಬಾಲಕೃಷ್ಣ ಅವರ ತಂಡದ ಕೆಲವರನ್ನೇ ಕುದುರೆ ವ್ಯಾಪಾರ ಮಾಡಿ ಕೆಳಗಿಳಿಸಲು ಅವಿಶ್ವಾಸ ಮಂಡಿಸುತ್ತಿರುವುದು ಸಮುದಾಯವನ್ನು ಆತಂಕಕ್ಕೆ ದೂಡಿದೆ. ಹಾಗು ಇದರ ಹಿಂದೆ ಸಚ್ಚೇಪಾಳ್ಯ ಜಮೀನು ಲೂಟಿಕೋರ ಖಾಸಗೀ ಬಿಲ್ಡರ್ ಗಳ ಲಾಭಿ ಇರುವ ಶಂಕೆ ವ್ಯಕ್ತವಾಗುತ್ತಿದೆ.ಆದ್ದರಿಂದ ಇದನ್ನೆಲ್ಲಾ ಮೂಕ ಪ್ರೇಕ್ಷಕರಾಗಿ ಸುಮ್ಮನೆ ನೋಡುತ್ತಾ ಕೂರದೆ, 5 ಲಕ್ಷಕ್ಕೂ ಮಿಗಿಲಾದ ಅಜೀವ ಸದಸ್ಯರು ಜಾಗೃತರಾಗಿ ಎಚ್ಚೆತ್ತು ಪ್ರಶ್ನಿಸಬೇಕಿದೆ.

ಕೇವಲ ಎರಡು ತಿಂಗಳಲ್ಲೇ ನಮಗೆ ಎಂಥಾ ಭರವಸೆ ಮೂಡಿಸಿತ್ತು ಪ್ರಸ್ತುತ ಇರುವ ಸಮಿತಿ, ಅದರಲ್ಲಿ ನೀವು ಯಾವ ತಪ್ಪನ್ನು ಕಂಡಿರಿ !? ಸಂಘದಲ್ಲಿ ನಡೆದಿರುವ ಮೂರ್ನಾಲ್ಕು ತಾತ್ಕಾಲಿಕ ಕಾರ್ಯಕಾರೀ ಸಮಿತಿ ಸಭೆಗಳಲ್ಲಿ ಚರ್ಚೆಯನ್ನೇ ಮಾಡದೆ ಅಧಿಕಾರ ಲಾಲಸೆಗೆ ಈ ರೀತಿ ವಾಮಮಾರ್ಗ ಹಿಡಿಯುತ್ತಾ,ನಿರ್ದೇಶಕರ ಹೈಜಾಕ್ ಮಾಡಿ, ರೆಸಾರ್ಟ್ ಗೆ ಕರೆದೊಯ್ದು ಕುದುರೆ ವ್ಯಾಪಾರ ಮಾಡುತ್ತಿರುವುದರ ಹಿಂದಿನ ಮರ್ಮವೇನು!? ಇದರ ಹಿಂದೆ ಇರುವ ಲೂಟಿಕೋರ ಲಾಭಿಗೆ ಮಣಿದು, ಸಂಘದ ಹಿತಾಸಕ್ತಿ ಬಲಿಗೊಡುವುದು ಯಾವ ನ್ಯಾಯ..!? ಒಕ್ಕಲಿಗ ಸಂಘದ ಉನ್ನತ ಶಿಕ್ಷಣ ಸಂಸ್ಥೆಗಳ ಪ್ರತಿಷ್ಠಿತ ಘನತೆಗೆ ಕುಂದು ಉಂಟಾಗುವುದು ನಿಮಗೆ ಅರಿವಲ್ಲವೇ.!?

ಸಾಕುಮಾಡಿ ಈ ಹುಚ್ಚಾಟವಾ.!?

ಕೇವಲ ಎರಡು ತಿಂಗಳ ಚಿಕ್ಕ ಅವಧಿಯಲ್ಲಿನ ನೂತನ ಸಮಿತಿಯ ಉತ್ತಮ ಆಡಳಿತವ ಏಕೆ ಸಹಿಸಿಕೊಳ್ಳಲಾಗುತ್ತಿಲ್ಲ..!?

* ಪ್ರಸ್ತುತ ಇರುವ ಬಿ.ಐ.ಟಿ. ಜೊತೆಗೆ ಕೆಂಗೇರಿ ಹಾಗು ಶ್ರೀ ಗಂಧದಕಾವಲಿನಲ್ಲಿ ಮತ್ತೆರಡು ಇಂಜಿನಿಯರಿಂಗ್ ಕಾಲೇಜು ಆರಂಭಿಸಲು ತೆಗೆದುಕೊಂಡಿದ್ದ ನಿರ್ಣಯ ಖುಷಿಯ ವಿಚಾರ ಅಲ್ಲವೇ!?

* ನಾವು ಹೋರಾಟ ಮಾಡಿದ್ದ ಸಂಘದಿಂದ ಕೈಬಿಟ್ಟು ಹೋಗಿದ್ದ ಶ್ರೀ ಗಂಧದ ಕಾವಲಿನ 10 ಎಕರೆ ಭೂಮಿಯನ್ನು ಸರ್ಕಾರದೊಂದಿಗಿನ ಸಮನ್ವಯತೆಯಿಂದ ಸಂಘದ ಹೆಸರಿಗೆ ‘ಪಹಣಿ ‘ ತಂದಂತಹ ಕ್ರಮ ಷಹಬ್ಬಾಸ್ ಎನ್ನುವಂತದ್ದಲ್ಲವೇ..!?

* ಸಂಘದ ‘ಕೆಂಪೇಗೌಡ ಆಸ್ಪತ್ರೆ’ಯಲ್ಲಿ ಉಚಿತ ಹೆರಿಗೆ ಸೌಲಭ್ಯ ನೀಡಿ ಜನಾನುರಾಗಿತ್ವ ಗಳಿಸಿ, ಆಸ್ಪತ್ರೆ ಸುಸಜ್ಜಿತ ಉತ್ತಮ ದರ್ಜೆಗೇರುತ್ತಿರುವುದನ್ನು ಇಡೀ ಸಮುದಾಯ ಪ್ರಶಂಸಿಸಿ ಎಮ್ಮೆ ಪಡುತ್ತಿದೆ, ಆದರೆ ನೀವು ಇಂತಹ ಆಡಳಿತ ಕೆಡವಲೊರಟಿದ್ದೀರಿ ಇದು ಸರಿಯೇ..!?

* ಕಳೆದ 9 ವರ್ಷಗಳಿಂದ ನಡೆಸದೇ ಇದ್ದ ಸಂಘದ ಸಾಮಾನ್ಯ ಸಭೆ (general body )ಯನ್ನು ಸೆ.29ಕ್ಕೆ ನಿಗದಿಗೊಳಿಸಿ, ಉತ್ತಮ

ವಿಚಾರಗಳ ಚರ್ಚೆಗೆ ಅನುವು ಮಾಡಿಕೊಟ್ಟ ಕ್ರಮ ನಿಮಗೆ ಸರಿ ಎನಿಸಿಲ್ಲವೇ…!? * ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ‘ಪ್ರತಿಭಾ ಪುರಸ್ಕಾರ ‘ ಕಾರ್ಯಕ್ರಮ ರೂಪಿಸಿದ್ದು ನಿಮಗೆ ಯಾಕೆ ಸರಿ ಎನಿಸುತ್ತಿಲ್ಲ!?

* ಕೇವಲ ಎರಡೇ ತಿಂಗಳಲ್ಲಿನ ಅವಧಿಯಲ್ಲಿ ದೆಹಲಿಗೆ ಓಡಾಡಿ ಪ್ರತಿಷ್ಠಿತ’ ಕೆಂಪೇಗೌಡ ಮೆಡಿಕಲ್ ಕಾಲೇಜಿಗೆ’ 180ಮೆಡಿಕಲ್ ಸೀಟುಗಳು ಹಾಗು 68 ಪಿ.ಜಿ.ಸೀಟುಗಳನ್ನು ಹೆಚ್ಚಿಸಲು ಬಾಲಕೃಷ್ಣ ನೇತೃತ್ವದ ತಂಡ ಕೈಗೊಂಡ ಕ್ರಮ ನಿಮಗೆ ಸಹ್ಯವಾಗಲಿಲ್ಲವೇ..!?

* ಎಲ್ಲಾ ಜಿಲ್ಲೆಗಳಲ್ಲೂ ಸಂಘದ ಶಿಕ್ಷಣ ಹಾಗು ಆರೋಗ್ಯ ಸೇವೆ ವಿಸ್ತರಿಸಲು ಸಂಸ್ಥೆಗಳ ಸ್ಥಾಪನೆಗೆ ಆಯಾ ಜಿಲ್ಲೆಗಳಲ್ಲೇ ಸಂಘಕ್ಕೆ ಆಸ್ತಿ ಕೊಳ್ಳಲು ತೆಗೆದುಕೊಂಡ ತೀರ್ಮಾನ ನಿಮಗೆ ಸರಿ ಎನಿಸಲಿಲ್ಲವೇ!? ಈ ಹಿಂದಿನ ಕೆಲವು ಖದೀಮರಂತೆ ಅವರವರ ಸ್ವಂತ ಹೆಸರಿಗೆ

ಮಾಡಿಸಿಕೊಳ್ಳಬೇಕಿತ್ತೇ..!? వారు భూరg. 94 ఈ శుదురి వరద రుద రంజి ఇద్దు. ఇదు విందనాయ..

ಒಂದು ಆಡಳಿತ ಸಮಿತಿ ಅಸ್ತಿತ್ವಕ್ಕೆ ಬಂದು ಕನಿಷ್ಠ ಒಂದು ವರ್ಷ ಅಥವಾ 6 ತಿಂಗಳಾದರೂ ಆಡಳಿತ ನಡೆಸಲೂ ಬಿಡದೆ, ಯಾವ ತಪೂ ಇರದ, ಅಂತಹ ತಪ್ಪೇನಾದರೂ ಆಗಿದ್ದರೆ ಕಾರ್ಯಕಾರೀ ಸಮಿತಿಯಲ್ಲಿ ಚರ್ಚಿಸದೆ, ಕೇವಲ ಅಧಿಕಾರ ಲಾಲಸೆ ಹಾಗು ಸಂಘದ ಆಸ್ತಿ ನುಂಗುವ ದುಷ್ಟ ಶಕ್ತಿಗಳ ಜೊತೆ ಕೈಜೋಡಿಸಿ ಈ ರೀತಿಯ ದುಸ್ಸಾಹಸಕ್ಕೆ ಕೈ ಹಾಕಿದ್ದೀರೆಂಬ ಆರೋಪಗಳಿಗೆ ಉತ್ತರ ಕೊಡದೆ ಪಲಾಯನ ಮಾಡಿ ರೆಸಾರ್ಟ್ ನಲ್ಲಿ ಕುಳಿತು ನೀವು ನಡೆಸುತ್ತಿರುವ ಕೃತ್ಯದಿಂದ ಇಡೀ ಒಕ್ಕಲಿಗ ಸಮುದಾಯ ತಲೆತಗ್ಗಿಸಬೇಕಿದೆ.ಇಡೀ ಜನಾಂಗದ ಮಾನ-ಮರ್ಯಾದೆ ಹಾದಿ ಬೀದಿಯಲ್ಲಿ ಹರಾಜು ಹಾಕುವ ಈ ಸ್ವಾರ್ಥದಿಂದ ಒಕ್ಕಲಿಗ ಜನಾಂಗ ತಲೆತಗ್ಗಿಸಬೇಕಾಗಿದೆ, ಆದ್ದರಿಂದ ಒಕ್ಕಲಿಗ ಸಮುದಾಯದ ಶ್ರೀ ಗುರುಗಳು, ಎಲ್ಲ ಪಕ್ಷಗಳ ಮುತ್ಸದ್ದಿ ಮುಖಂಡರು ಕೂಡಲೇ ಇಂತಹವರನ್ನ ಕರೆದು ಬುದ್ದಿ ಹೇಳುವ ಮೂಲಕ ಸಮುದಾಯದ ಹಾಗು ಸಂಘದ ಗೌರವ ಕಾಪಾಡಬೇಕಾಗಿ ಸಮುದಾಯದ ಕಾಳಜಿಯಿಂದ ನಿರಂತರವಾಗಿ ಹೋರಾಟ ಮಾಡುತ್ತಿರುವ ಹೋರಾಟಗಾರರು ಈ ಪತ್ರಿಕಾಗೋಷ್ಠಿಯ ಮೂಲಕ ಮನವಿ ಮಾಡುತ್ತಾ ಸಂಘದ 5 ಲಕ್ಷಕ್ಕೂ ಮೀರಿದ ಅಜೀವ ಸದಸ್ಯರು ಚುನಾವಣೆ ಬಂದಾಗ ಮಾತ್ರ ಕೇವಲ ಮತ ಹಾಕಿ ಸುಮ್ಮನಾಗದೆ, ಮಾತೃಸಂಸ್ಥೆ ಉಳಿವಿಗಾಗಿ ಇಂತಹ ಸಂದರ್ಭದಲ್ಲಿ ಎಚ್ಚೆತ್ತು ಹೋರಾಟಕ್ಕಿಳಿದು, ಸಮುದಾಯದ ಸೇವೆ ಮಾಡಲು ಆರಿಸಿರುವ ನಿರ್ದೇಶಕರು ಸ್ವಾರ್ಥಿಗಳಾಗಲೊರಟಾಗ ಬುದ್ದಿ ಹೇಳುವ ಕೆಲಸವನ್ನೂ ಮಾಡುವಂತವರಾಗಬೇಕೆಂದು ಆಗ ಮಾತ್ರ ಮಾತೃಸಂಸ್ಥೆ’ ರಾಜ್ಯ ಒಕ್ಕಲಿಗರ ಸಂಘ’ ಉಳಿಯುತ್ತದೆಂದು ಈ ಪತ್ರಿಕಾಗೋಷ್ಠಿ ಯ ಮೂಲಕ ಮನವಿ ಮಾಡುತ್ತಿದ್ದೇವೆ ಎಂದು ಕೆ.ಎನ್.ಲಿಂಗೇಗೌಡ-ಪ್ರಧಾನ ಸಂಚಾಲಕರು, ಸಂಘದ ಮುಖಂಡರುಗಳಾದ A. S. ಗೋವಿಂದೇಗೌಡ ಹಾಗೂ R. G. S. ಗೌಡ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.

City Today News 9341997936