‘ರಾಯರ ಸನ್ನಿಧಿಗೆ ಭಕ್ತ ಜನ ಸಾಗರ” ಪ್ರಾತ:ಸ್ಮರಣೀಯ ಶ್ರೀ 1008 ಶ್ರೀ ಸುಯಮಿಂದ್ರತೀರ್ಥ ಶ್ರೀಪಾದರ “ಆರಾಧನಾ “ಮಹೋತ್ಸವ

ಬೆಂಗಳೂರಿನ ಜಯನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಅನುಗ್ರಹ ಆದೇಶದಂತೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್. ಕೆ. ವಾದೀಂದ್ರಾಚಾರ್ಯರ ಮತ್ತು ಧರ್ಮಾಧಿಕಾರಿಗಳಾದ  ಶ್ರೀ ಜಿ. ಕೆ. ಆಚಾರ್ಯರ ನೇತೃತ್ವದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಯಮಿಂದ್ರತೀರ್ಥ ಶ್ರೀಪಾದರ ಆರಾಧನಾ ಮಹೋತ್ಸವವು ವಿಶೇಷ ಉತ್ಸವಗಳೊಂದಿಗೆ ನೆರವೇರಿತು ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದರು. ಇದೇ ಸಂದರ್ಭದಲ್ಲಿ ಆಂಗ್ಲ ಕ್ಯಾಲೆಂಡರ್ ಪ್ರಕಾರ ನೂತನ ವರ್ಷದ ಅಂಗವಾಗಿ  ನೂರಾರು ಭಕ್ತರು ಸನ್ನಿಧಿಗೆ ಆಗಮಿಸಿ, ಗುರುರಾಯರ ದರ್ಶನ ಪಡೆದು ಹುಗ್ಗಿ, ಪೊಂಗಲ್ ಪ್ರಸಾದವನ್ನು ಸ್ವೀಕರಿಸಿ ಶ್ರೀ ಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು.

City Today News 9341997936