ಲೋಕ ಕಲ್ಯಾಣಕ್ಕಾಗಿ ನಡೆಸುತ್ತಿರುವ ಸಹಸ್ರ ಚಂಡಿಕಾ ಮಹಾಯಾಗ

ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ತಾವರೆಕೆರೆ ಆದಿಶಕ್ತಿ ಗ್ರಾಮದೇವತೆ ಶ್ರೀ ಮಾರಮ್ಮ ದೇವಿ ಸಮಿತಿ ವತಿಯಿಂದ ಗ್ರಾಮಸ್ಥರೆಲ್ಲರೂ ಒಟ್ಟುಗೂಡಿ ಲೋಕ ಕಲ್ಯಾಣಕ್ಕಾಗಿ ದಿನಾಂಕ 07:10,2022ರ ಶುಕ್ರವಾರದಿಂದ ದಿನಾಂಕ 09.10.2022ರ ಭಾನುವಾರದವರೆಗೆ ಸುಮಾರು 200 ಮುತ್ತಿಕರು, ಯಜ್ಞ ಪ್ರವೀಣರಿಂದ ಜಗತ್ತಿನ ಸಕಲ ಜೀವರಾಶಿಗಳ ಹಿತ ಬಯಸಿ ಲೋಕ ಕಲ್ಯಾಣಕ್ಕಾಗಿ ಗ್ರಾಮೀಣ ಭಾಗದಲ್ಲಿ ವಿಶೇಷವಾದ ಸಹಸ್ರ ಚಂಡಿಕಾ ಮಹಾಯಾಗವನ್ನು ಮಾಗಡಿ ಮುಖ್ಯರಸ್ತೆಯ ತಾವರೆಕೆರೆ ಗ್ರಾಮದೇವತೆ ಶ್ರೀ ಮಾರಮ್ಮ ದೇವಿ ದೇವಸ್ಥಾನದ ಬಳಿ ಹಮ್ಮಿಕೊಂಡಿದ್ದು, ಈ ಮಹತ್ಕಾರ್ಯದ ವಿಚಾರ ಜನತೆಗೆ ತಲುಪಲು ತಾವು ಸುದ್ದಿ ಪ್ರಕಟಿಸಬೇಕೆಂದು ಸಮಸ್ತ ಗ್ರಾಮಸ್ಥರು ತಮ್ಮನ್ನು ಕೋರಿಕೊಳ್ಳುತ್ತಾ, ತಮ್ಮ ಸುದ್ದಿ ಸಂಸ್ಥೆಗೆ ಜಗನ್ಮಾತೆ ಶ್ರೀ ಮಾರಮ್ಮ ದೇವಿಯ ಅನುಗ್ರಹ ಸಿಗಲೆಂದು ಹರಸುತ್ತೇವೆ ಎಂದು ಚಿಕ್ಕವೀರಯ್ಯ ತಾವರೆಕೆರೆ ಹಾಗೂ ಅಕ್ಕಪಕ್ಕದ ಗ್ರಾಮಸ್ಥರ ಪರವಾಗಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು

ಪತ್ರಿಕಾ ಗೋಷ್ಠಿಯಲ್ಲಿ ನರಸಿಂಹಯ್ಯ, ಅನ್ಜನಪ್ಪ ಹಾಗೂ ಗಿರೀಶ್ ಉಪಸ್ತಿತರಿದ್ದರು

City Today News

9341997936