ಶನಿವಾರ ರಮಾ ಶರ್ಮ ಅವರ”ಆ ಮಧುರ ಕ್ಷಣಗಳು” ಲೋಕಾರ್ಪಣೆ

ನಾಡಿನ ಹೆಸರಾಂತ ಸ್ನೇಹ ಬುಕ್ ಹೌಸ್ ಸಂಸ್ಥೆ ಪ್ರಕಟಿಸಿರುವ ಶ್ರೀಮತಿ ರಮಾ ಶರ್ಮ ಅವರ ಚೊಚ್ಚಲ ಕೃತಿ “ಆ ಮಧುರ ಕ್ಷಣಗಳು” ಲೋಕಾರ್ಪಣೆ ಸಮಾರಂಭವನ್ನು ದಿನಾಂಕ 10:08:2024 ರ ಶನಿವಾರ ಬೆಳಗ್ಗೆ 11 ಗಂಟೆಗೆ ಬೆಂಗಳೂರು ನಗರದ ಕುಮಾರ ಕೃಪ ರಸ್ತೆಯಲ್ಲಿರುವ ಚಿತ್ರಕಲಾ ಪರಿಷತ್ ನಲ್ಲಿ ಹಮ್ಮಿಕೊಳ್ಳಲಾಗಿದೆ
ಕರ್ನಾಟಕ ವಿಧಾನಸಭೆ ಯ ಮಾಜಿ ಸಭಾದ್ಯಕ್ಷರು ಹಾಗೂ ಚಿತ್ರಕಲಾ ಪರಿಷತ್ ನ ಅಧ್ಯಕ್ಷರಾದ ಬಿ.ಎಲ್.ಶಂಕರ್ ಅವರು ಪುಸ್ತಕ ಲೋಕಾರ್ಪಣೆ ಮಾಡಲಿದ್ದು ಖ್ಯಾತ ಸಾಹಿತಿ ಹಾಗೂ ಸಂಸ್ಕೃತಿ ಚಿಂತಕಿ ಡಾ.ಜಯಂತಿ ಮನೋಹರ್ ಅಧ್ಯಕ್ಷತೆ ವಹಿಸುತ್ತಾರೆ,ಕಲಾವಿದೆ ಗಿರೀಜಾ ಹರೀಶ್ ಅವರು ಪುಸ್ತಕ ಪರಿಚಯ ಮಾಡಲಿದ್ದು ಚಿತ್ರಕಲಾ ಪರಿಷತ್ತಿನ ಕಾರ್ಯದರ್ಶಿ ಶಶಿಧರ್ ರಾವ್ ಹಾಗೂ ಆ ಮಧುರ ಕ್ಷಣಗಳು ಕೃತಿಯ ಲೇಖಕಿ ರಮಾ ಶರ್ಮ ಅವರು ಉಪಸ್ಥಿತಿರಿರುತ್ತಾರೆ.
ಪ್ರತಿಭಾವಂತ ಬರಹಗಾರರನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸಿ ಪ್ರೊತ್ಸಾಹಿಸುವುದರಲ್ಲಿ ಸದಾ ಮುಂಚೂಣಿಯಲ್ಲಿರುವ ಸ್ನೇಹ ಬುಕ್ ಹೌಸ್ ಇಲ್ಲಿಯವರೆಗೆ 520 ಕ್ಕೂ ಹೆಚ್ಚು ಕೃತಿಯನ್ನು ಪ್ರಕಟಿಸಿದ್ದು .ಸುಮಾರು 130 ಲೇಖಕರು ತಮ್ಮ ಚೊಚ್ಚಲ ಕೃತಿಯ ಮೂಲಕ ಸ್ನೇಹ ಬುಕ್ ಹೌಸ್ ನಿಂದ  ಪುಸ್ತಕ ಜಗತ್ತಿಗೆ ಪರಿಚಯಿಸಲ್ಪಟ್ಟಿದ್ದು ಹೆಮ್ಮೆ ಪಡುವಂತಹ ಸಂಗತಿಯಾಗಿದೆ.ಇದೀಗ ಶ್ರೀಮತಿ ರಮಾ ಶರ್ಮ ಅವರು “ಆ ಮಧುರ ಕ್ಷಣಗಳು” ಚೊಚ್ಚಲ ಕೃತಿಯ ಮೂಲಕ ಸಾಹಿತ್ಯ ಜಗತ್ತಿಗೆ ಪ್ರವೇಶಿಸುತ್ತಿದ್ದಾರೆ.

City Today News 9341997936