ಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮ ಮಂಡಳಿಯು ದಿನಾಂಕ 20-02-2023 ರಂದು ಸರ್ಕಾರಿ ಆದೇಶ ಸಂಖ್ಯೆ ಹಿಂವಕ 85 ಬಿ.ಸಿ.ಎ. 2023ರಲ್ಲಿ ಸ್ಥಾಪನೆಯಾಗಿದ್ದು ಅದರನ್ವಯ ನಿಗಮದ ನೋಂದಣಿ, ಅಧಿಕೃತ ಕಛೇರಿ ಹಾಗೂ ಅನುಷ್ಠಾನ ಹಾಗೂ ಅನುಧಾನಕ್ಕಾಗಿ ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಒಂದು ದಿನದ ಶಾಂತಿಯುತ ಹೋರಾಟ

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಸುವರ್ಣ ಕರ್ನಾಟಕ ಗಾಣಿಗ ಮಹಾಸಭದ ನೇತೃತ್ವದಲ್ಲಿ ದಿನಾಂಕ : 05-02-2024ನೇ ಸೋಮವಾರ ಬೆಳಗ್ಗೆ 10:30ಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಒಂದು ದಿನದ ಶಾಂತಿಯುತ ಹೋರಾಟ ಹಮ್ಮಿಕೊಂಡಿದ್ದು, ಇದರ ಉದ್ದೇಶ ರಾಜ್ಯದಲ್ಲಿ ಸುಮಾರು 50-60 ಲಕ್ಷ ಜನಸಂಖ್ಯೆ ಇದ್ದು ನಮ್ಮ ಸಮಾಜವು ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಹಿಂದುಳಿದ ಸಮುದಾಯವಾಗಿದೆ.

ಹಲವಾರು ವರ್ಷಗಳಿಂದ ತಮ್ಮ ಕುಲ ಕಸಬನ್ನು ಕಳೆದುಕೊಂಡು ತಮ್ಮ ಜೀವನ ಸಾಗಿಸಲಾಗದೆ ಮತ್ತು ಮಕ್ಕಳನ್ನು ಶೈಕ್ಷಣಿಕವಾಗಿ ಪೋಷಿಸಲಾಗದೆ ಆರ್ಥಿಕವಾಗಿ ಹಿಂದುಳಿದಿದೆ. ಈ ನಿಟ್ಟಿನಲ್ಲಿ ಕಳೆದ ದಿನಾಂಕ : 13-02-2023 ರಂದು ಸಮಸ್ತ ಗಾಣಿಗರ ಪರವಾಗಿ ಇದೇ ಫ್ರೀಡಂ ಪಾರ್ಕ್ನಲ್ಲಿ ಹೋರಾಟ ನಡೆಸಿದಾಗ ಹಿಂದಿನ ಬಿಜೆಪಿ ಸರ್ಕಾರ ನಮ್ಮ ಹೋರಾಟ ಮತ್ತು ಮನವಿಯನ್ನು ಪುರಸ್ಕರಿಸಿ ನಿಗಮ ಮಂಡಳಿಯನ್ನು ಘೋಷಣೆಮಾಡಿ ಸ್ಥಾಪನೆ ಮಾಡಿತ್ತು.

ಆದರೆ ಈಗಿನ ಸರ್ಕಾರ ಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮ ಮಂಡಳಿಯು ದಿನಾಂಕ 20- 02-2023 ರಂದು ಸರ್ಕಾರಿ ಆದೇಶ ಸಂಖ್ಯೆ ಹಿಂವಕ 85 ಬಿ.ಸಿ.ಎ. 2023ರಲ್ಲಿ ಸ್ಥಾಪನೆಯಾಗಿದ್ದು ಅದರನ್ವಯ ನಿಗಮದ ನೋಂದಣಿ, ಅಧಿಕೃತ ಕಛೇರಿ ಹಾಗೂ ಅನುಷ್ಠಾನ ಹಾಗೂ ಅನುಧಾನವನ್ನು ನೀಡಿಲ್ಲ. ಈ ಎಲ್ಲಾ ಬೇಡಿಕೆಗಳನ್ನು ಪಡೆಯುವ ಸಲುವಾಗಿ ರಾಜ್ಯದ ಸಮಸ್ತ ಗಾಣಿಗರ ಪರವಾಗಿ ಈ ಹೋರಾಟವನ್ನು ಹಮ್ಮಿಕೊಂಡಿದ್ದೇವೆ. ನಮ್ಮ ಎಲ್ಲಾ ಸಮುದಾಯದವರು ಈ ಹೋರಾಟಕ್ಕೆ ಹೆಚ್ಚಿನ ಪ್ರಚಾರ ನೀಡಿ ಯಶಸ್ವಿಯಾಗಲು ಸಹಕರಿಸಿ. ಗಾಣಿಗರ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸಬೇಕೆಂದು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮನವಿ ಮಾಡಿಕೊಂಡರು.

City Today News 9341997936