ಶ್ರೀ ರಾಘವೇಂದ್ರ ಗುರುಸಾರ್ವಭೌಮರ 404ನೇ ‘ಪಟ್ಟಾಭಿಷೇಕೋತ್ಸವ -ರಾಯರ ಸ್ವರ್ಣ ಲೇಪಿತ ಸುವರ್ಣ ಪಾದಕ್ಕೆ ಪುಷ್ಪವೃಷ್ಟಿ-ಉದ್ಘಾಟನೆ”

ಬೆಂಗಳೂರು : ಜಯನಗರ 5ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ  ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್. ಕೆ. ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ‘ಕಲಿಯುಗ ಕಾಮಧೇನು’ ಶ್ರೀ ರಾಘವೇಂದ್ರ ಸ್ವಾಮಿಗಳವರ “404ನೇ ಪಟ್ಟಾಭಿಷೇಕೋತ್ಸವ”ದ ಅಂಗವಾಗಿ ಶ್ರೀ ಬಾಳಗಾರು ಮಠದ ಮೂಲ ಸಂಸ್ಥಾನದ ಕಿರಿಯ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ 1008 ಶ್ರೀ ಅಕ್ಷೋಭ್ಯ ರಾಮಪ್ರಿಯತೀರ್ಥ ಶ್ರೀಪಾದಂಗಳವರ ಅಮೃತ ಹಸ್ತದಿಂದ ಶ್ರೀ ಗುರುರಾಯರ ಬೃಂದಾವನಕ್ಕೆ ಸಹಸ್ರ ಕಳಶ ಕ್ಷೀರಾಭಿಷೇಕವು ವಿಶೇಷವಾಗಿ ನೆರವೇರಿತು. ತದನಂತರ ಸ್ವರ್ಣ ಸಿಂಹಾಸನದಲ್ಲಿ ಶ್ರೀ ಗುರುರಾಯರ ಸುವರ್ಣ ಲೇಪಿತ ಪಾದುಕೆಯನ್ನು ಇರಿಸಿ ‘ಪುಷ್ಪವೃಷ್ಟಿ”ಯೊಂದಿಗೆ “ಉದ್ಘಾಟನಾ” ಕಾರ್ಯಕ್ರಮವು ನೆರವೇರಿತು. ನಂತರದಲ್ಲಿ ವಿಶೇಷ ಉತ್ಸವ  ಹೋಮಗಳೊಂದಿಗೆ ಪರಮಪೂಜ್ಯ ಶ್ರೀಪಾದಂಗಳವರು ತಮ್ಮ ಅಮೃತ ಹಸ್ತದಿಂದ ಸಂಸ್ಥಾನ ಪೂಜೆಯನ್ನು ನೆರವೇರಿಸಿ  ಶ್ರೀ ಗುರುರಾಯರ ಬೃಂದಾವನಕ್ಕೆ ಮಹಾಮಂಗಳಾರತಿಯನ್ನು ಸಲ್ಲಿಸಿ, ಭಕ್ತರಿಗೆ ಅನುಗ್ರಹ ಸಂದೇಶವನ್ನು ನೀಡಿದರು ಎಂದು ಶ್ರೀ ನಂದಕಿಶೋರಾಚಾರ್ಯರು ತಿಳಿಸಿದರು. ಈ ವಿಶೇಷವಾದ ಶ್ರೀ ರಾಘವೇಂದ್ರಸ್ವಾಮಿಗಳವರ “ಪಟ್ಟಾಭಿಷೇಕ ಉತ್ಸವ”ದಲ್ಲಿ ಭಾಗವಹಿಸಿದ ಸಹಸ್ರಾರು ಭಕ್ತರು ತೀರ್ಥ ಪ್ರಸಾದವನ್ನು ಸ್ವೀಕರಿಸಿ, ಗುರುಗಳಿಂದ ಫಲ ಮಂತ್ರಾಕ್ಷತೆಯನ್ನು ಪಡೆದು ಶ್ರೀ ಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು. ಈ ಸಂದರ್ಭದಲ್ಲಿ ರಾಜಾ ಶ್ರೀ  ಬಂಡಿಯಾಚಾರ್ಯ, ಆರ್ ಕೆ ವಾದಿಂದ್ರ ಆಚಾರ್ಯ, ಶ್ರೀ ಕೃಷ್ಣ ಗುಂಡಾಚಾರ್ಯ ಇನ್ನು ಹಲವಾರು ಗಣ್ಯರು ಭಕ್ತರು ಭಾಗವಹಿಸಿದ್ದರು.

City Today News 9341997936

ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಭವ್ಯ ಪರಂಪರೆಯ ಪೂರ್ವಿಕ ಗುರುಗಳಾದ ಶ್ರೀನರಹರಿತೀರ್ಥರ ಆರಾಧನಾ ಮಹೋತ್ಸವ

ಶ್ರೀಮಾನ್ಮೂಲರಾಮ ದೇವರನ್ನು ಮೂಲಮಹಾ ಸಂಸ್ಥಾನಕ್ಕೆ ಕರೆತಂದ ಮಹನೀಯ ಚರಣರಾದ, ಶ್ರೀಮಧ್ವಾಚಾರ್ಯರ ಶಿಷ್ಯರಾದ ಶ್ರೀ ನರಹರಿ ತೀರ್ಥರ ಆರಾಧನೆಯನ್ನು  ಶ್ರೀಮಧ್ವಾಚಾರ್ಯರ ಮೂಲಮಹಾ ಸಂಸ್ಥಾನಾಧೀಶ್ವರರಾದ ಪರಮಪೂಜ್ಯ ಶ್ರೀ ಸುಬುಧೇಂದ್ರತೀರ್ಥರು ವೈಭವದಿಂದ ಶಿಷ್ಯ ಪರಿವಾರ ಸಮೇತರಾಗಿ ಆಚರಿಸಲಿದ್ದಾರೆ. 

ಈ ಐತಿಹಾಸಿಕ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ನಾಡಿನ ವಿವಿಧ ನಗರಗಳಿಂದ ಶ್ರೀಮಠದ ಶಿಷ್ಯರೂ, ಶ್ರಿವ್ಯಾಸರಾಜ ಮಠ, ಶ್ರೀಪಾದರಾಜಮಠದ ಶಿಷ್ಯರನ್ನು ಒಳಗೊಂಡು ಅನೇಕ ನಿಷ್ಠಾವಂತ ಮಾಧ್ವರೆಲ್ಲರೂ ತೆರಳುತ್ತಿದ್ದಾರೆ.

ಜಯನಗರದ 5th block ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಿಂದಲೂ ವಿವಿಧ ವಾಹನಗಳ ಮೂಲಕ ಯುವ ಸಮೂಹವು ಈಗಾಗಲೇ ಹೊರಟಿದ್ದಾರೆ.

ನಾಡಿನ ವಿವಿಧ ನಗರಗಳಲ್ಲಿರುವ ಶ್ರೀಮಠದ ಶಿಷ್ಯರು, ಭಕ್ತರು ಎಲ್ಲರೂ ಶ್ರೀ ನರಹರಿ ತೀರ್ಥರ ಈ ಐತಿಹಾಸಿಕ ಆರಾಧನೆಯಲ್ಲಿ ಪಾಲ್ಗೊಂಡು ಶ್ರೀಮನ್ ಮೂಲರಾಮದೇವರ, ಶ್ರೀ ನರಹರಿ ತೀರ್ಥರ ಹಾಗು ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಅನುಗ್ರಹವನ್ನು ಪಡೆಯಬೇಕು. ಎಲ್ಲರಿಗೂ ಸ್ವಾಗತ..

City Today News 9341997936