
ಎಲುವಹಳ್ಳಿ ಮಾಲೂರು ತಾಲೂಕು, ಕೊಲಾರಜಿಲ್ಲೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿರುವ ಶೌಚಾಲಯಗಳನ್ನು ಮತ್ತು ಶೌಚಲಯ ಗುಂಡಿಗಳನ್ನು ವಿದ್ಯಾರ್ಥಿಗಳಿಂದ ಶುಚಿತ್ವಗೊಳಿಸಿರುವ ವಿಚಾರ ಮಾದ್ಯಮಗಳಲ್ಲಿ ಬಿತ್ತಾರಗೊಂಡಿತ್ತು, ತದನಂತರ ಬೆಂಗಳೂರಿನ ಆಂದ್ರ ಹಳ್ಳಿಯಲ್ಲಿರುವ ಸರಕಾರಿಶಾಲೆ ಮತ್ತು ಶಿವಮೊಗ್ಗ ಜಿಲ್ಲೆಯ ಗುಡ್ಡದ ನೇರಳ ಕೆರೆ ಸರಕಾರಿ ಶಾಲೆಯ ವಿದಾರ್ಥಿಗಳಿಂದ ಶೌಚಾಲಯವನ್ನು ಶುಚಿತ್ವ ಗೊಳಿಸಿರುವ ಅಮಾನುಷ ಕೃತ್ಯವು ತಿಳಿದು ಬಂದಿರುವುದರಿಂದ ಈ ಹೀನ ಕೃತ್ಯದ ವಿರುದ್ಧ ಬೆಂಗಳೂರಿನ ಕಾಡುಗೊಡಿ ನಿವಾಸಿ ಸಾಮಾಜಿಕ ಕಾರ್ಯಕರ್ತ ಶ್ರೀ ಪರಮೇಶ್.ವಿ ಎಂಬುವವರು ಸಾರ್ವಜನಿಕ ಹಿತಾಸಕ್ತಿ ರಿಟ್ ಅರ್ಜಿಯನ್ನು ತನ್ನ ವಕೀಲರಾದ ಧರ್ಮಪಾಲ ರವರ ಮೂಲಕ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಸಲ್ಲಿಸಿದರು. ಆ ರೀಟ್ ಅರ್ಜಿ ಸಂಖ್ಯೆ 29294/2023. ಇದರಲ್ಲಿ ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿ ಮತ್ತು ಇತರನ್ನು ಪ್ರತಿವಾದಿಗಳನ್ನಾಗಿ ಮಾಡಿರುತ್ತಾರೆ. ಈ ಕೃತ್ಯಕ್ಕೆ ಸಂಬಂದಪಟ್ಟವರ ವಿರುದ್ಧ ಸೂಕ್ತ ಕ್ರಮಕೈಗೊಳಲು ಪ್ರಕರಣವನ್ನು ಸಿ ಐ ಡಿ ಗೆ ಹಸ್ತಾಂತರಿಸಿ, ಈ ಪ್ರಕರಣದ ಬಗ್ಗೆ ಒಂದು ಸೂಕ್ತ ಕಮಿಟಿ ರಚನೆ ಮಾಡಿ ಸರಕಾರಕ್ಕೆ ವರದಿ ಸಲ್ಲಿಸಬೇಕು ಅಲ್ಲದೆ 10 ವರ್ಷಗಳಿಂದ ಇಲ್ಲಿಯ ತನಕ ಇಂತಹ ಎಷ್ಟು ಪ್ರಕರಣ ಬೆಳಕಿಗೆ ಬಂದಿದೆ ಎಂಬ ವರದಿ ನ್ಯಾಯಲಕ್ಕೆ ಸಲ್ಲಿಸಬೇಕೆಂಬ ಮನವಿಯನ್ನು ಪಿರ್ಯಾದುದಾರರು ತನ್ನ
ಅರ್ಜಿಯಲ್ಲಿ ಕೇಳಿಕೊಂಡಿದ್ದಾರೆ ಸದ್ರಿರಿಟ್ ಅರ್ಜಿ ತಾ. 28-12-2623 ರಂದು ನ್ಯಾ. ನಟರಾಜ ಮತ್ತು ನ್ಯಾ ಕೆ.ವಿ ಅರವಿಂದ ಅವರಿದ್ದ ವಿಭಾಗಿಯ ಪೀಠದಲ್ಲಿ ವಿಚಾರಣೆಗೆ ಬಂದು ಎಲ್ಲಾ ಪ್ರತಿವಾದಿಗಳಿಗೆ ನೋಟಿಸು ಜಾರಿ ಮಾಡಿ ಆದೇಶಿಸಿದ್ದಾರೆ. ಸದರಿ ಅದೇಶ ಪ್ರತಿ ಮತ್ತು ರಿಟ್ ಅರ್ಜಿಯ ಪ್ರತಿಗಳನ್ನು ಇಲ್ಲಿ ಲಗತ್ತಿಸಿದೆ ಎಂದು ಧರ್ಮಪಾಲ ವಕೀಲರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು
City Today News 9341997936

You must be logged in to post a comment.