108 ಆರೋಗ್ಯ ಕವಚ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ 3 ತಿಂಗಳ ವೇತನ  ಬಾಕಿ

ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, 108 ಆರೋಗ್ಯ ಕವಚ ಯೋಜನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ 3 ತಿಂಗಳ ವೇತನ ಪಾವತಿಯಾಗದೇ ಸಾಕಷ್ಟು ತೊಂದರೆಯಾಗಿರುತ್ತದೆ. ಇದೇ ರೀತಿ ಸುಮಾರು 4 ರಿಂದ 5 ವರ್ಷದಿಂದಲೂ ಸಹ ವೇತನ ವಿಚಾರವಾಗಿ 108 ಸಿಬ್ಬಂದಿಗಳು ತೊಂದರೆ ಅನುಭವಿಸುತ್ತಾ ಬಂದಿರುತ್ತೇವೆ. ಸರ್ಕಾರ ಮತ್ತು ಜಿ.ವಿ.ಕೆ ಸಂಸ್ಥೆಯ ಒಡಂಬಡಿಕೆಯ ಪ್ರಕಾರ ವಾರ್ಷಿಕ ವೇತನ ಹೆಚ್ಚಳ ಆಗಬೇಕಾಗಿದ್ದು, 2023ರ ಶೇಕಡಾ 15% ವೇತನ ಪರಿಷ್ಕರಣಿಯೂ ಸಹ ಆಗಿರುವುದಿಲ್ಲ ಹಾಗೇ ಇತ್ತಿಚ್ಚಿನ ದಿನಗಳಲ್ಲಿ ಮಾನ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ ಕನಿಷ್ಟ ವೇತನವು ಸಹ ಜಾಲ ಮಾಡಿ 108 ಸಿಬ್ಬಂದಿಗಳಿಗೆ ವೇಶನವನ್ನು ರೂ. 36008/- ಗಳಿಗೆ ವೇತನ ನಿಗಧಿಮಾಡಿದ್ದು, ಈ ವೇತನವನ್ನು ಸುಮಾರು 8 ತಿಂಗಳುಗಳ ಕಾಲ ನೀಡಿ ತದ ನಂತರ ಏಕಾಏಕ 6000/- ರೂಗಳನ್ನು ಕಡಿತ ಮಾಡಿ 30000/- ರೂಗಳನ್ನು ನೀಡಿರುತ್ತಾರೆ. ಮತ್ತೊಮ್ಮೆ ಪ್ರಸ್ತುತ ವೇತನದಲ್ಲಿ ಕಡಿಮೆಯಾಗುವಂತ ಮಾಹಿತಿಯು ಸರ್ಕಾರದ ಅಧಿಕಾರಿಗಳ ಮಟ್ಟದಲ್ಲಿ ಕೇಳಿಬರುತ್ತಿದ್ದು 108 ಅಂಬ್ಯುಲೆನ್ಸ್‌ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ವಾಟ್ಸಪ್ ಗ್ರೂಪ್‌ನಲ್ಲಿ ವದಂತಿಯ ಸಂದೇಶಗಳು ಹಲದಾಡುತ್ತಿರುತ್ತವೆ. ಹಾಗಾಗಿ ಮಾನ್ಯ ಆರೋಗ್ಯ ಸಚಿವರು ಈ ಮೇಲಿನ ಎಲ್ಲಾ ಅಂಶಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಬಾಕಿ ಇರುವ 4 ತಿಂಗಳ ವೇತನವನ್ನು ಈ ಕೂಡಲೇ ಬಿಡುಗಡೆ ಮಾಡಿಸಿ 108 ಸಿಬ್ಬಂದಿಗಳು ದಿನನಿತ್ಯ ಅನುಭವಿಸುತ್ತಿರುವ ಹಾಗೂ ಪ್ರಸ್ತುತ ಇರುವ ಸಮಸ್ಯೆಗಳ ಬಗ್ಗೆ ಮಾನ್ಯ ಅಧ್ಯಕ್ಷತೆಯಲ್ಲಿ ಸಭೆಯನ್ನು ನಡೆಸಿ ಸಭಾ ನಡವಳಿಯನ್ನು ಮಾಡಿಕೊಟ್ಟು ಮುಂದಿನ ದಿನಗಳಲ್ಲಿ ಇದೇ ರೀತಿಯ ಸಮಸ್ಯೆಗಳು ಬಾರದ ರೀತಿಯಲ್ಲಿ ಕ್ರಮ ಕೈಗೊಂಡು ನಮ್ಮ ಸಿಬ್ಬಂದಿಗಳಿಗೆ ಇನ್ನು ಉತ್ತಮ ರೀತಿಯಲ್ಲಿ ಸೇವೆ ಮಾಡಲು ಅವಕಾಶ ಕಲ್ಪಿಸಿಕೊಡಬೇಕಾಗಿ ತಮ್ಮಲ್ಲಿ ಎಲ್ಲಾ ಜಿಲ್ಲಾ ಸಿಬ್ಬಂದಿಗಳ ವರವಾಗಿ ಕೇಳಿಕೊಳ್ಳುತ್ತೇವೆ. “ಈ ಮೇಲಿನ ಎಲ್ಲಾ ಅಂಶಗಳನ್ನು ಮುಂದಿನ 10 ದಿನಗಳೊಳಗಾಗಿ ಸಲಪಡಿಸಿ ಕೊಡದ ಪಕ್ಷದಲ್ಲಿ ನಾವು ಯಾವುದೇ ರೀತಿಯ ಬೇರೆ ದಾಲ ಕಾಣದೇ ಅಸಹಾಯಕರಾಗಿ ಮುಷ್ಕರ ಕೈಗೊಳ್ಳುತ್ತೇವೆ ಎಂದು ಈ ಮೂಲಕ ತಿಳಿಸಲು ವಿಷಾದಿಸುತ್ತೇವೆ ಈ ಸಂದರ್ಭದಲ್ಲಿ ಸಾರ್ವಜನಿಕ ಸೇವೆಗೆ ಅನಾನುಕೂಲತೆಗಳು ಉಂಟಾದಲ್ಲಿ ನೇರವಾಗಿ ಸಂಬಂಧಿಸಿದ ಸಂಸ್ಥೆಯೇ ಹೊಣೆಯಾಗುತ್ತದೆ ಎಂದು ಈ ಮೂಲಕ ತಿಳಿಯಪಡಿಸಲಾಗಿದೆ ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಶಂಕರ,ಜಿಲ್ಲಾಧ್ಯಕ್ಷರು ಬೆಂಗಳೂರು ಜಿಲ್ಲೆ, ತಿಳಿಸಿದರು.

City Today News 9341997936