ಪ್ರಜೆಗಳೆಲ್ಲರೂ ನೆಮ್ಮದಿಯಾಗಿ ಬದುಕಲು, ರಾಜ್ಯದ ಮತ್ತು ದೇಶದ ಚುನಾವಣಾ ವ್ಯವಸ್ಥೆಯಲ್ಲಿ ಮತ್ತು ಆಡಳಿತದಲ್ಲಿ ಪಾರದರ್ಶಕತೆ ಸುವ್ಯವಸ್ಥೆ ತರಲು ಹಾಗೂ ದೇಶದ ಪ್ರಜೆಗಳು ಅನೈತಿಕತೆ, ಭ್ರಷ್ಟಾಚಾರದ ಬಗ್ಗೆ ಪ್ರಶ್ನಿಸಲು ಮುಂದಾಗಿ -ಎಲ್.ನಾಗರಾಜ್

ಪ್ರೆಸ್ ಕ್ಲಬ್ ನ ಸುದ್ದಿಗಾರರೊಂದಿಗೆ ಮಾತ ನಾಡಿದ ,ಸಂಚಾಲಕರು,ಸಮಾಜ ಸೇವಕರು ಎಲ್. ನಾಗರಾಜ್ ರವರು ಇದುವರೆಗೂ ಹತ್ತಾರು ಚುನಾವಣೆಯಲ್ಲಿ ಪ್ರಾಮಾಣಿಕತೆಯಿಂದ ಸ್ಪರ್ಧಿಸಿ 20,000 ಒಟ್ಟು ಮತ ಗಳಿಸಿ; ದೇಶದ ಹಾಗೂ ಜನಸೇವೆಯಲ್ಲಿ, ಅನೇಕ ಹೋರಾಟಗಳನ್ನು ಮಾಡಿ, ಜೈಲು ವಾಸವನ್ನೂ ಅನುಭವಿಸಿದ್ದೇನೆ” ಎಂದರು.

ಸಾಮಾಜಿಕ ಕಾರ್ಯಗಳಲ್ಲಿ ಈ ಇಳಿ ವಯಸ್ಸಿನಲ್ಲಿ “ಇಂದಿಗೂ; ಸ್ವತಃ ಧನ್ಯತೆ , ಪ್ರಾಮಾಣಿಕವಾಗಿ ತೊಡಗಿಸಿಕೊಂಡು ಎಲ್ಲಾ ರಂಗಗಳಲ್ಲೂ ಪಾರದರ್ಶಕತೆ & ಅಭಿವೃದ್ಧಿ ತರಲು ಶ್ರಮಿಸುತ್ತಿರುವೆನು” ಎಂದು ಮಾಧ್ಯಮದವರ ಮುಂದೆ ತಿಳಿಸಿದ್ದಾರೆ.
“ಇನ್ನಾದರೂ ನಾಯಕರು, ಅಧಿಕಾರಿಗಳು ಎಲ್ಲಾ ರಂಗಗಳಲ್ಲೂ ದುಂದು ವೆಚ್ಚ, ಅಪರಾಧ ಮಾಡದೇನೇ ದೇಶದ ಮತ್ತು ಪ್ರಜೆಗಳ ಸರ್ವತೋಮುಖ ಬೆಳವಣಿಗೆಗೆ, ಸಾರ್ವಜನಿಕರ ತೆರಿಗೆ ಹಣದ ಸದುಪ ಯೋಗಕ್ಕೆ – ಸೇವೆಗೆ ಶ್ರಮಿಸಲು” ಮನವಿ ಮಾಡಿ, ಕರೆ ನೀಡಿದ್ದಾರೆ.

City Today News 9341997936

ರಾಜ್ಯದಲ್ಲಿರುವ ಉಪ್ಪಾರ ಸಮಾಜದ ಬಂಧುಗಳು ರಾಜ್ಯ “ಬಿಜೆಪಿ” ಅಭ್ಯರ್ಥಿಗಳಿಗೆ ಬೆಂಬಲಿಸಬಾರದೆಂದು ಮನವಿ – ಎಸ್. ಶಿವಕುಮಾರ್

ನಮ್ಮ ರಾಜ್ಯದಲ್ಲಿ ದಿನಾಂಕ 10/05/2023 ರ ಚುನಾವಣೆ ನಡೆಯುತ್ತಿದ್ದು ರಾಜ್ಯದಲ್ಲಿರುವ ಉಪ್ಪಾರ ಸಮಾಜದ ಬಂಧುಗಳು ರಾಜ್ಯ “ಬಿಜೆಪಿ” ಅಭ್ಯರ್ಥಿಗಳಿಗೆ ಬೆಂಬಲಿಸಬಾರದೆಂದು ಮನವಿ ಮಾಡುತ್ತೇನೆ. 2008 ರಿಂದ 2013 ರವರೆಗೆ 2020 ರಿಂದ 2023 ರ ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ ಸರ್ಕಾರವು ಉಪ್ಪಾರ ಸಮಾಜಕ್ಕೆ ರಾಜಕೀಯವಾಗಿ ಶೈಕ್ಷಣಿಕವಾಗಿ, ಆರ್ಥಿಕವಾಗಿ ಅನ್ಯಾಯವನ್ನೇ ಮಾಡುತ್ತಾ ಬಂದಿರುವುದು ತಮಗೆಲ್ಲಾ ತಿಳಿದ ವಿಷಯವಾಗಿದೆ. ರಾಜಕೀಯವಾಗಿ ಕಾಂಗ್ರೇಸ್ ಸರ್ಕಾರ ಅನೇಕ ಸಮಾಜದ ಅಭಿವೃದ್ಧಿಯನ್ನು ಮಾಡಿದೆ ಉದಾಹರಣೆಗೆ : ಭಗೀರಥ ಜಯಂತಿ ಆಚರಣೆ, ವಿದ್ಯಾರ್ಥಿವೇತನ, ಎರಡು ಬಾರಿ ವಿಧಾನ ಪರಿಷತ್ತಿಗೆ ಸಮಾಜದ ಮುಖಂಡರು ನಾಮಕರಣ ಮಾಡಿದ್ದು, ಉಪ್ಪಾರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದ್ದು, ಕರ್ನಾಟಕ ಲೋಕಾಸೇವಾ ಆಯೋಗದ ಸದಸ್ಯರನ್ನು ನೇಮಿಸಿದ್ದು, ವಿವಿಧ ನಿಗಮಗಳಲ್ಲಿ ಅವಕಾಶ ಮಾಡಿಕೊಟ್ಟಿದ್ದು ಹೀಗೆ ಹತ್ತು ಹಲವಾರು ಅವಕಾಶ ಮಾಡಿಕೊಟ್ಟಿದೆ, ಜೆ.ಡಿ.ಎಸ್ ಪಕ್ಷವು ಸಹ ಒಮ್ಮೆ ವಿಧಾನ ಪರಿಷತ್ತಿಗೆ ಅವಕಾಶ ಕಲ್ಪಸಿದೆ ಆದರೆ ಬಿಜೆಪಿ ಕಳೆದ ಚುನಾವಣೆಯಲ್ಲೇ ಆಗಲಿ ಈ ಚುನಾವಣೆಯಲ್ಲೇ ಆಗಲಿ ಬಹಳಷ್ಟು ಆಕಾಂಕ್ಷಿಗಳಿದ್ದರೂ ಒಬ್ಬರಿಗೂ ಅವಕಾಶ ಮಾಡಿಕೊಡಲಿಲ್ಲ ಆದರೇ ಕಾಂಗ್ರೇಸ್ ಪಕ್ಷವೂ ಕಳೆದ 3 ಚಾಮರಾಜನಗರದಿಂದ ಶ್ರೀ. ಪುಟ್ಟರಂಗ ಶೆಟ್ಟಿಯವರಿಗೆ ಅವಕಾಶ ಕೊಟ್ಟಿದ್ದು ಸಹಾಯಮಾಡಿ, ಅವರನ್ನು ಗೆಲ್ಲಿಸಿ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಮಂತ್ರಿಯನ್ನು ಸಹಾ ಚುನಾವಣೆಯಿಂದಲೂ ಎಲ್ಲಾ ರೀತಿಯ ಮಾಡಿರುತ್ತಾರೆ. ಆದರೆ, ಬಿ.ಜೆ.ಪಿ ಯವರು ಅವರನ್ನು ಸೋಲಿಸಲು ಸ್ಥಳಿಯರಿಗೆ ಅವಕಾಶ ಮಾಡದೇ ಪ್ರಭಾವಿ ಮಂತ್ರಯಾದ ಶ್ರೀ.ಸೋಮಣ್ಣ ರನ್ನು ಅಭ್ಯರ್ಥಿಯನ್ನಾಗಿ ಮಾಡಿರುತ್ತಾರೆ. ಶೋಷಿತ ಸಮಾಜವನ್ನು ರಾಜಕೀಯವಾಗಿ ತುಳಿಯುವುದೇ ಆಗಿದೆ, ಆದ್ದರಿಂದ ಸಮಾಜದ ಬಂಧುಗಳ ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಬಿ.ಜೆ.ಪಿ ಅಭ್ಯರ್ಥಿಗಳ ಬೆಂಬಳಿಸಬಾರದು ಎಂದು ತಮ್ಮಗಳ ಮೂಲಕ ಮನವಿ ಮಾಡುತ್ತೇವೆ ಎಂದು ಎಸ್. ಶಿವಕುಮಾರ್, ಮಾಜಿ ಅಧ್ಯಕ್ಷರು, ರಾಜ್ಯ ಉಪ್ಪಾರ ಅಭಿವೃದ್ಧಿ ನಿಯಮಿತಿ, ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಥಿಯಲ್ಲಿ ತಿಳಿಸಿದರು

City Today News – 9341997936