ಪರಾಜಿತಗೊಂಡಿರುವ ವ್ಯಕ್ತಿಗೆ ಛಲವಾದಿ ಮಹಾಸಭಾ ರಾಜ್ಯಾಧ್ಯಕ್ಷ ಎಂದು ಮನ್ನಣೆ ನೀಡಿ ಆಹ್ವಾನ ಪತ್ರಿಕೆಯಲ್ಲಿ ಹೆಸರು ಮುದ್ರಿಸಿರುವುದರಿಂದ ಜಿಲ್ಲಾಧಿಕಾರಿಗಳ ಮೇಲೆ ಈ ಕೂಡಲೇ ಕಾನೂನು ಕ್ರಮವನ್ನು ಜರುಗಿಸಬೇಕೆಂದು ಮಾನ್ಯ ಮುಖ್ಯಮಂತ್ರಿರವರಲ್ಲಿ ಛಲವಾದಿ ಮಹಾಸಭಾ (ರಿ) ಒತ್ತಾಯ

ಛಲವಾದಿ ಮಹಾಸಭಾ (ರಿ) ರಾಜ್ಯ ಸಮಿತಿಯು ಈ ಪತ್ರಿಕಾಗೋಷ್ಠಿಯ ಮುಖೇನ ತಿಳಿಯಪಡಿಸುವುದೇನೆಂದರೆ, ಚಿತ್ರದುರ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಛಲವಾದಿ ಮಹಾಸಭಾದ ಸಂಯುಕ್ತ ಆಶ್ರಯದಲ್ಲಿ ಛಲವಾದಿ ಸಮುದಾಯದ ಹೆಮ್ಮೆಯ ನಾಯಕಿ, ವೀರವನಿತೆ ಒನಕೆ ಒಬ್ಬವ್ವನವರ ಜಯಂತಿ ಕಾರ್ಯಕ್ರಮವನ್ನು દ્ર ರಾಜ್ಯ ಸರ್ಕಾರವು ದಿನಾಂಕ : 18-12-2022, ಭಾನುವಾರದಂದು ಮಧ್ಯಾಹ್ನ 1.00 ಗಂಟೆಗೆ ನಿಗಧಿಪಡಿಸಿದ್ದು ಸದರಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಛಲವಾದಿ ಕುಮಾರ್, ರಾಜ್ಯಾಧ್ಯಕ್ಷರು, ಛಲವಾದಿ ಮಹಾಸಭಾ ಎಂದು ಇವರನ್ನು ವಿಶೇಷ ಆಹ್ವಾನಿತರು ಎಂದು ನಮೂದಿಸಲಾಗಿದೆ. ಇದರ ಬಗ್ಗೆ ಸ್ಪಷ್ಟನೆ ಕೊಡುವ ಸಲುವಾಗಿ ಮಾನ್ಯ ಉಚ್ಛ ನ್ಯಾಯಾಲಯದ W.P.No.14701/2022: 29-07-2022 33 17-08-20228 ಆದೇಶದನ್ವಯ ಛಲವಾದಿ ಮಹಾಸಭೆಗೆ ದಿನಾಂಕ : 07-08-2022 ರಂದು ಚುನಾವಣೆ ನಡೆದು ನಿವೃತ್ತ IAS ಅಧಿಕಾರಿ ಶ್ರೀ ಕೆ.ಶಿವರಾಮುರವರ ನೇತೃತ್ವದ ಕಾನೂನುಬದ್ಧ ಕಾರ್ಯಕಾರಿ ಸಮಿತಿಯು ರಚನೆಯಾಗಿ ರಾಜ್ಯಾದ್ಯಂತ ಛಲವಾದಿ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಕಾರ್ಯ ನಿರ್ವಹಿಸಿಕೊಂಡು ಬಂದಿರುತ್ತೇವೆ. ಆದಾಗ್ಯೂ ರಾಜ್ಯ ಉಚ್ಛ ನ್ಯಾಯಾಲಯದ W.P. No. 17272/2022ರ ದಿನಾಂಕ : 07-09-2022ರ ಆದೇಶದನ್ವಯ ಚುನಾವಣೆಯಲ್ಲಿ ಛಲವಾದಿ ಕುಮಾರ್ ಅಲಿಯಾಸ್ ಹೆಚ್.ಪಿ. ಕುಮಾರ್ ಮತ್ತು ಹೆಚ್. ಅಣ್ಣಪ್ಪಸ್ವಾಮಿ ಹಾಗೂ ಸಂಗಡಿಗರು ಹೀನಾಯವಾಗಿ ಪರಾಜಿತಗೊಂಡಿರುತ್ತಾರೆ ಮತ್ತು ಹೀನಾಯವಾಗಿ ಸೋತಿರುವುದನ್ನು ಸಹಿಸಿಕೊಳ್ಳದೆ ದ್ವೇಷ ಮತ್ತು ಅಸೂಹೆಯಿಂದ ಮಾನ್ಯ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಚುನಾವಣೆ ತಕರಾರು ಪಿಟಿಷನ್ WP No. 17272/2022 ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆಯಾಗಿ ಮಾನ್ಯ ಉಚ್ಛ ನ್ಯಾಯಾಲಯವು ಚುನಾವಣಾ ತಕರಾರು ಅರ್ಜಿಯನ್ನು ವಜಾ ಗೊಳಿಸಿರುತ್ತಾರೆ.

ಈ ಮೇಲ್ಕಂಡ ವಿಷಯವು ತಿಳಿದುಕೊಂಡಿದ್ದರೂ ಸಹ ಚಿತ್ರದುರ್ಗ ಜಿಲ್ಲಾಡಳಿತವು ಸದರಿ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಛಲವಾದಿ ಮಹಾಸಭಾದ ಅಧಿಕಾರವಿಲ್ಲದ ಅನಧಿಕೃತ ವ್ಯಕ್ತಿಗಳಾದ (1) ಛಲವಾದಿ ಕುಮಾರ್ ಅಲಿಯಾಸ್ ಹೆಚ್.ಪಿ.ಕುಮಾರ್, ರಾಜ್ಯಾಧ್ಯಕ್ಷರು, ಛಲವಾದಿ ಮಹಾಸಭಾ (2) ಹೆಚ್‌. ಅಣ್ಣಪ್ಪಸ್ವಾಮಿ, ಜಿಲ್ಲಾಧ್ಯಕ್ಷರು, ಛಲವಾದಿ ಮಹಾಸಭಾ, ಚಿತ್ರದುರ್ಗ ಮತ್ತು (3) ದಯಾನಂದ, ಉಪಾಧ್ಯಕ್ಷರು, ಛಲವಾದಿ ಮಹಾಸಭಾ, ಚಿತ್ರದುರ್ಗ ಎಂಬುವವರನ್ನು ವಿಶೇಷ ಆಹ್ವಾನಿತರಾಗಿ ಆಹ್ವಾನಿಸಿ ಆಮಂತ್ರಣ ಪತ್ರದಲ್ಲಿ ಮುದ್ರಿಸಿ ರಾಜ್ಯಾದ್ಯಂತ ಪ್ರಕಟಣೆ ಮಾಡಿರುವುದನ್ನು ನಾವು ಖಂಡಿಸುತ್ತೇವೆ ಹಾಗೂ ಶಿಷ್ಟಾಚಾರ ಉಲ್ಲಂಘನೆ ಮಾಡಿ ಚುನಾವಣೆಯಲ್ಲಿ ಪರಾಜಿತಗೊಂಡಿರುವ ವ್ಯಕ್ತಿಗೆ ಛಲವಾದಿ ಮಹಾಸಭಾ ರಾಜ್ಯಾಧ್ಯಕ್ಷ ಎಂದು ಮನ್ನಣೆ ನೀಡಿ ಆಹ್ವಾನ ಪತ್ರಿಕೆಯಲ್ಲಿ ಹೆಸರು ಮುದ್ರಿಸಿರುವುದರಿಂದ ಜಿಲ್ಲಾಧಿಕಾರಿಗಳ ಮೇಲೆ ಈ ಕೂಡಲೇ ಕಾನೂನು ಕ್ರಮವನ್ನು ಜರುಗಿಸಬೇಕೆಂದು ಮಾನ್ಯ ಮುಖ್ಯಮಂತ್ರಿರವರಲ್ಲಿ ಒತ್ತಾಯ ಮಾಡುತ್ತೇವೆ.

ಆದುದರಿಂದ ಮಾನ್ಯ ಮುಖ್ಯಮಂತ್ರಿಗಳು ಈಗಲಾದರೂ ಆಗಿರುವ ಪ್ರಮಾದವನ್ನು ಸರಿಪಡಿಸಿ ದಿನಾಂಕ : 18-12-2022 ರಂದು ನಡೆಯುವ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಛಲವಾದಿ ಮಹಾಸಭಾದ ಅಧಿಕಾರವಿಲ್ಲದ ಅನಧಿಕೃತ ವ್ಯಕ್ತಿಗಳಾದ (1) ಛಲವಾದಿ ಕುಮಾರ್ ಅಲಿಯಾಸ್ ಹೆಚ್.ಪಿ.ಕುಮಾರ್, ರಾಜ್ಯಾಧ್ಯಕ್ಷರು, ಛಲವಾದಿ ಮಹಾಸಭಾ (2) ಹೆಚ್‌. ಅಣ್ಣಪ್ಪಸ್ವಾಮಿ, ಜಿಲ್ಲಾಧ್ಯಕ್ಷರು, ಛಲವಾದಿ ಮಹಾಸಭಾ, ಚಿತ್ರದುರ್ಗ ಮತ್ತು (3) ದಯಾನಂದ, ಉಪಾಧ್ಯಕ್ಷರು, ಛಲವಾದಿ ಮಹಾಸಭಾ, ಚಿತ್ರದುರ್ಗ, ಇವರುಗಳನ್ನು ಕೈಬಿಟ್ಟು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಯುವಂತೆ ಛಲವಾದಿ ಮಹಾಸಭಾ(ರಿ)ವು ಆಗ್ರಹಿಸುತ್ತದೆ.

ಒಂದು ವೇಳೆ ಈ ಪ್ರಮಾದವನ್ನು ಸರಿಪಡಿಸದೇ ಕಾರ್ಯಕ್ರಮವನ್ನು ನಡೆಸಿದರೆ ಛಲವಾದಿ ಮಹಾಸಭಾದ ಎಲ್ಲಾ ಸದಸ್ಯರುಗಳು ಕಾರ್ಯಕ್ರಮದಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

ಎಸ್.ಕೆ.ಶಿವಕುಮಾರ್, ಎಸ್.ಸಿದ್ದರಾಜು ಮತ್ತು ಕೆ.ಪರಶುರಾಮ್ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತಿಯಿದ್ದರು.

City Today News – 9341997936

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ 22-12-2022 ರಂದು ಬೆಳಗಾವಿ ಚಲೋ ಚಳುವಳಿ

ಅಂಗನವಾಡಿ ವ್ಯವಸ್ಥೆಯೊಳಗೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುವುದನ್ನು ವಿರೋಧಿಸಿ, ಕನಿಷ್ಟ ವೇತನ ಜಾರಿಗೊಳಿಸುವುದು. ಗ್ರಾಚ್ಯುಟಿ ಸೌಲಭ್ಯ, ನಿವೃತ್ತಿ ವೇತನ ಜಾರಿ, ಕಳಪೆ ಮೊಬೈಲ್‌ಗಳ ಬದಲಿಗೆ ಮಿನಿಟ್ಯಾಬ್‌ಗಳನ್ನು ನೀಡುವುದು ಸೇರಿದಂತೆ ಅಂಗನವಾಡಿ ನೌಕರರು ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವಂತೆ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ರಾಜ್ಯ ಸರ್ಕಾರವನ್ನು ಒತ್ತಾಯಿಸಲು ಎಐಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ನೇತೃತ್ವದಲ್ಲಿ ದಿನಾಂಕ 22-12-2022 ರಂದು ಬೆಳಗಾವಿ ಚಲೋ ಚಳುವಳಿ”ಯನ್ನು ಹಮ್ಮಿಕೊಳ್ಳಲಾಗಿದೆ .

ಕಳೆದ 46 ವರ್ಷಗಳಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಡಿಯಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಅನುಷ್ಠಾನದ ರೂವಾರಿಗಳಾಗಿ ಕೇವಲ ಗೌರವಧನದ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರುಗಳಿಗೆ ಔಧ್ಯಮಿಕ ಮತ್ತು ಆರ್ಥಿಕ ಭದ್ರತೆ ನೀಡುವ ಕುರಿತು ನಿರ್ಲಕ್ಷ ವಹಿಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೇವಲ ಬಳಕೆಯ ವಸ್ತುಗಳಂತೆ ದುಡಿಸಿಕೊಳ್ಳುವ ಮೂಲಕ ಶೋಷಣೆ ಮಾಡಲಾಗುತ್ತಿದೆ.

ಸೇವಾ ಹಿರಿತನದ ಆಧಾರದ ಮೇಲೆ ಕಾರ್ಯಕರ್ತೆಯರಿಗೆ ನೀಡಲಾಗುತ್ತಿರುವ ಗೌರವಧನದ ಮಾಸಿಕ ಹತ್ತರಿಂದ ಹನ್ನೊಂದುವರೆ ಸಾವಿರ ಹಾಗೂ ಸಹಾಯಕಿಯರಿಗೆ ಐದರಿಂದ ಐದುವರೆ ಸಾವಿರ

ರೂಪಾಯಿ ಸಂಭಾವನೆಯಲ್ಲಿ ಇಂದಿನ ಬೆಲೆ ಏರಿಕೆ ಸೂಚ್ಯಂಕಕ್ಕನುಗುಣವಾಗಿ ಬದುಕು ನಡೆಸುವುದು ಅತ್ಯಂತ ದುಸ್ಥರವಾಗಿದೆ.

ಆದುದರಿಂದ ಅಂಗನವಾಡಿ ವ್ಯವಸ್ಥೆಯನ್ನು ಉಳಿಸಿ-ಬೆಳೆಸಲು ಪೂರಕವಾಗಿ ಈ ಕೆಳಕಂಡ ಬೇಡಿಕೆಗಳನ್ನು ಈಡೇರಿಸಲು ಕ್ರಮ ತೆಗೆದುಕೊಳ್ಳಬೇಕೆಂದು ರಾಜ್ಯ ಸರ್ಕಾರವನ್ನು ಅಗ್ರಹಿಸುತ್ತಿದ್ದೇವೆ.

ಬೇಡಿಕೆಗಳು :-

1. ಎಲ್.ಕೆ.ಜಿ-ಯು.ಕೆ.ಜಿ ತರಗತಿಗಳನ್ನು ಅಂಗನವಾಡಿ ಕೇಂದ್ರಗಳಲ್ಲಿಯ ಪ್ರಾರಂಭಿಸಲು ಒತ್ತಾಯಿಸಿ: ಕೇಂದ್ರ ಸರ್ಕಾರ ರೂಪಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿ(NEP)ಯನ್ನು ಅಂಗನವಾಡಿ ವ್ಯವಸ್ಥೆಯೊಳಗೆ ಜಾರಿಗೊಳಿಸಲು ಏಕಪಕ್ಷೀಯವಾಗಿ ಆತುರ ಪಡುತ್ತಿರುವ ರಾಜ್ಯ ಸರ್ಕಾರದ ನಿಲುವು ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ICDS) ಯ ಮೂಲ ಆಶಯಗಳಿಗೆ ಚ್ಯುತಿಯನ್ನುಂಟು ಮಾಡಲಿದೆ . ಆರು ವರ್ಷದ ವಯೋಮಾನದೊಳಗಿನ ಮಕ್ಕಳು ಮತ್ತು ಗರ್ಭಿಣಿ-ಬಾಣಂತಿಯರ ಪೌಷ್ಠಿಕ ಆಹಾರ-ಆರೋಗ್ಯದ ಬಗ್ಗೆ ಕಾಳಜಿವಹಿಸಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕೇಂದ್ರಗಳನ್ನು ಎನ್.ಇ.ಪಿ ಅಡಿಯಲ್ಲಿ ಶಾಲಾ ಪ್ರಾಂಗಣಕ್ಕೆ ಒಳಪಡಿಸಿದರೆ ಐ.ಸಿ.ಡಿ.ಎಸ್ ಯೋಜನೆ ಅವಸಾನವಾಗಲಿದೆ. ಮಕ್ಕಳು ಮತ್ತು ಮಹಿಳೆಯರಿಗೆ ದೊರೆಯುತ್ತಿರುವ ಪೂರಕ ಪೌಷ್ಠಿಕ ಆಹಾರಕ್ಕೆ ಕಡಿವಾಣ ಬೀಳಲಿದ್ದು, ಭದ್ರತಾ ಕಾಯ್ದೆಯ ಸವಲತ್ತುಗಳಿಂದ ಮಕ್ಕಳು-ಮಹಿಳೆಯರು ವಂಚಿತರಾಗಲಿದ್ದಾರೆ. ಆದುದರಿಂದ ಈಗಿರುವ ಅಂಗನವಾಡಿ ವ್ಯವಸ್ಥೆಯನ್ನೆ ಮತ್ತಷ್ಟು ಬಲಗೊಳಿಸಲು ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್.ಕೆ.ಜಿ-ಯು.ಕೆ.ಜಿ ಪ್ರಾರಂಭಿಸಲು ಅವಕಾಶ ಮಾಡಬೇಕು ಹಾಗೂ ಮಕ್ಕಳ ಕಲಿಕೆಗೆ ಪೂರಕವಾಗಿ ಅಂಗನವಾಡಿ ಶಿಕ್ಷಕಿಯರಿಗೆ ಸೂಕ್ತ ತರಬೇತಿ ಮತ್ತು ಪಠ್ಯ ಪುಸ್ತಕಗಳನ್ನು ಒದಗಿಸಬೇಕು. ಹಾಗೂ ಮಕ್ಕಳಿಗೆ ಸಮವಸ್ತ್ರ ಹಾಗೂ ವರ್ಗಾವಣೆ ಪತ್ರ ನೀಡುವ ಜವಾಬ್ದಾರಿಯನ್ನು ಅಂಗನವಾಡಿ ಕೇಂದ್ರಗಳಿಗೆ ವಹಿಸಬೇಕೆಂದು ಒತ್ತಾಯಿಸುತ್ತೇವೆ.

2. ಕನಿಷ್ಠ ವೇತನ: ಇಂದಿನ ಬೆಲೆ ಏರಿಕೆ ಸೂಚ್ಯಂಕಕ್ಕನುಗುಣವಾಗಿ ಅಂಗನವಾಡಿ ಸಿಬ್ಬಂದಿಗಳಿಗೆ ನೀಡಲಾಗುತ್ತಿರುವ ಗೌರವ ಧನದಲ್ಲಿ ಜೀವನ ನಿರ್ವಹಣೆ ಕಷ್ಟ ಸಾಧ್ಯವಾಗಿದ್ದು, ಮಾಸಿಕ ಕನಿಷ್ಠ ವೇತನ 31500 ರೂಪಾಯಿ ನೀಡಲು ಕನಿಷ್ಠ ವೇತನ ಜಾರಿಗೊಳಿಸಬೇಕೆಂದು ಒತ್ತಾಯಿಸುತ್ತೇವೆ.

3. ಗ್ರಾಚ್ಯುಟಿ : ಗ್ರಾಚ್ಯುಟಿ ಸೌಲಭ್ಯ ಪಡೆಯಲು ಅಂಗನವಾಡಿ ಉದ್ಯೋಗಿಗಳು ಅರ್ಹರು ಎಂಬುದಾಗಿ ಗುಜರಾತ್ ಪ್ರಕರಣದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು,

ಸದರಿ ತೀರ್ಪಿನ ಆಧಾರದಲ್ಲಿ ರಾಜ್ಯದಲ್ಲಿ ಅಂಗವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗ್ರಾಚ್ಯುಟಿ ಸೌಲಭ್ಯ ನೀಡಲು ಆಡಳಿತಾತ್ಮಕ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇವೆ.

4. ಕಳಪೆ ಗುಣಮಟ್ಟದ ಮೊಬೈಲ್‌ಗಳನ್ನು ವಾಪಸ್ ಪಡೆದು ಮಿನಿಟ್ಯಾಬ್‌ಗಳನ್ನು ನೀಡಬೇಕು: ಅಂಗನವಾಡಿ ಕಾರ್ಯಕರ್ತೆಯರಿಗೆ ಕೇಂದ್ರಗಳಲ್ಲಿ ಫಲಾನುಭವಿಗಳ ದಾಖಲೆಗಳ ಸಂಗ್ರಹಕ್ಕಾಗಿ ನೀಡಲಾಗಿರುವ ಎಲ್.ಜಿ ಮೊಬೈಲ್‌ಗಳು ಅತ್ಯಂತ ಕಳಪೆ ಗುಣಮಟ್ಟದಿಂದ ಕೂಡಿದ್ದಾಗಿದ್ದು, ಕ್ಷಿಪ್ರಗತಿಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಹಾಗೂ ಸಂಗ್ರಹಣ ಸಾಮರ್ಥ್ಯವು ಸಹ ಕಡಿಮೆ ಜಿಬಿಯದಾಗಿದ್ದು ಗ್ರಾಮಾಂತರ ಪ್ರದೇಶಗಳಲ್ಲಿ ನೆಟ್‌ವರ್ಕ್ ಸಮಸ್ಯೆಯು ಎದುರಾಗುತ್ತಿದ್ದು ಸುಲಲಿತವಾಗಿ ಕಾರ್ಯನಿರ್ವಹಿಸಲಾಗುತ್ತಿಲ್ಲ. ಹಾಗೂ ಮೊಬೈಲ್‌ಗಳು ಅತ್ಯಂತ ಚಿಕ್ಕದಾಗಿರುವುದರಿಂದ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವ ಕಾರ್ಯಕರ್ತೆಯರಿಗೆ ಸಣ್ಣ ಅಕ್ಷರಗಳು ಗೋಚರಿಸದೆ ದಾಖಲೆ ಸಂಗ್ರಹಣೆ ಮಾಡಲು ತೊಡಕುಂಟಾಗುತ್ತಿದೆ. ಅದುದರಿಂದ ವಿತರಿಸಲಾಗಿರುವ ಮೊಬೈಲ್‌ಗಳನ್ನು ಹಿಂಪಡೆದು ಅದರ ಬದಲಿಗೆ ಮಿನಿಟ್ಯಾಬ್‌ಗಳನ್ನು ನೀಡಬೇಕೆಂದು ಒತ್ತಾಯಿಸುತ್ತೇವೆ.

5. ಮಾರಣಾಂತಿಕ ಕಾಯಿಲೆ ಹೊಂದಿರುವವರಿಗೆ ಸ್ವಯಂ ನಿವೃತ್ತಿಗೆ ಅವಕಾಶ ಮಾಡಿಕೊಡುವ ಮೂಲಕ ಅವರಿಗೆ ಪರಿಹಾರ ಒದಗಿಸಬೇಕು ಹಾಗೂ ಅಂಗನವಾಡಿ ನೌಕರರನ್ನು ಸಾಮಾಜಿಕ ಸುರಕ್ಷ ಯೋಜನೆಯಾದ ಇ.ಎಸ್‌.ಐ ಸೌಲಭ್ಯ ಹಾಗೂ ಸರ್ಕಾರಿ ನೌಕರರಿಗಾಗಿ ರೂಪಿಸಿರುವ ನೌಕರ ಸ್ನೇಹಿ ಉಚಿತ ವೈದ್ಯಕೀಯ ಯೋಜನೆಯ ಸೌಲಭ್ಯ ಒದಗಿಸಲು ಕ್ರಮ ವಹಿಸಬೇಕೆಂದು ಒತ್ತಾಯಿಸಿ, ದಿನಾಂಕ 22.12.2022 ರಂದು ಗುರುವಾರ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಸರ್ಕಾರದ ಗಮನ ಸೆಳೆದು ಸಮಸ್ಯೆಗಳ ಪರಿಹಾರಕ್ಕಾಗಿ “ಬೆಳಗಾವಿ ಚಲೋ” ಚಳುವಳಿ ನಡೆಸುವ ಮೂಲಕ ಬೆಳಗಾವಿಯ ಸುವರ್ಣ ವಿಧಾನಸೌಧದ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು. ಬಿ.ಅಮ್ಜದ್ – ರಾಜ್ಯಾಧ್ಯಕ್ಷರು & ಜಯಮ್ಮ – ರಾಜ್ಯ ಪ್ರಧಾನ ಕಾರ್ಯದರ್ಶಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು

City Today News – 9341997936

ಡಾ. ಬಿ.ಆರ್.ಅಂಬೇಡ್ಕರ್ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನ ವಿಶ್ವವಿದ್ಯಾಲಯ ನಿರ್ಮಾಣ ಕಾರ್ಯದಲ್ಲಿ ಬಾರೀ ದೊಡ್ಡ ಮೊತ್ತದ ಅಕ್ರಮ ನಡೆದಿದೆ – ಅಹಿಂದ ರಕ್ಷಣಾ ವೇದಿಕೆ ಕಾರ್ಯದರ್ಶಿ ಜಿ.ಕೆ.ಜಯರಾಮ್

ಅಂಬೇಡ್ಕರ್ ವಿಶ್ವ ವಿದ್ಯಾಲಯ ನಿರ್ಮಾಣದಲ್ಲಿ ಬಾರೀ ಅವ್ಯವಹಾರ- ಅಹಿಂದ ನಾಯಕರ ಆರೋಪ

ಡಾ. ಬಿ.ಆರ್.ಅಂಬೇಡ್ಕರ್ ಲಂಡನ್ ಸ್ಕೂಲ್ ಆಪ್ ಎಕನಾಮಿಕ್ಸ್ ವಿಶ್ವವಿದ್ಯಾಲಯ ನಿರ್ಮಾಣ ಕಾರ್ಯದಲ್ಲಿ ಬಾರೀ ದೊಡ್ಡ ಮೊತ್ತದ ಆಕ್ರಮ ನಡೆದಿದೆ ಎಂದು ಅಹಿಂದ ರಕ್ಷಣಾ ವೇದಿಕೆ ಕಾರ್ಯದರ್ಶಿ ಜಿ.ಕೆ.ಜಯರಾಮ್ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾರು 350 ರಿಂದ 400 ಕೋಟಿ ರೂಪಾಯಿ ಹಣ ಬಿಡುಗಡೆ ಗೊಳಿಸಲಾಗಿದ್ದು, ಈ ಮಹತ್ವದ ಯೋಜನೆಯನ್ನು ಯಾರಿಗೆ ಗುತ್ತಿಗೆ ನೀಡಲಾಗಿದೆ. ಇಷ್ಟು ದೊಡ್ಡ ಮಟ್ದದ. ಹಣವನ್ನು ನೀಡಿ ನಿರ್ಮಾಣ ಮಾಡಲಾಗಿರುವ ವಿ.ವಿ ಯನ್ನು ಇದುವರೆಗೂ ಉದ್ಘಾಟನೆಗೊಂಡಿಲ್ಲ. ಈ ಬಗ್ಗೆ ದಲಿತ ನಾಯಕರು ಕಣ್ಮುಚ್ಚಿ ಕುಳಿತಿದ್ದು , ಇವರಿಗೆ ಎಷ್ಟು ಹಣ ಸಂದಾಯವಾಗಿದೆ ಎಂದು ತಿಳಿಸಿದರು.
ಇದುವರೆಗೂ ಬೃಹತ್ ಪ್ರಮಾಣದಲ್ಲಿ ನಿರ್ಮಾಣ ಮಾಡಿರುವ ಅಂಬೇಡ್ಕರ್ ಪ್ರತಿಮೆಯನ್ನು ಉದ್ಘಾಟನೆ ಮಾಡಿಲ್ಲ. ಕೂಡಲೇ ಈ ಪುತ್ಥಳಿ ಯನ್ನು ಅನಾವರಣಗೊಳಿಸಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ರಾದ ಮುನೀರ್ ಎಸ್ ಬಿ. ಚೌದ್ರಿ, ಸುರೇಶ ನಾಯಕ ಮತ್ತಿತರರು ಹಾಜರಿದ್ದರು.

City Today News

9341997936

ರಾಜ್ಯ ಸರ್ಕಾರ ಈ ನಮ್ಮ ಹಕ್ಕೊತ್ತಾಯಗಳನ್ನು ಒಂದು ತಿಂಗಗೋಳಗೆ ಈಡೇರಿಸಲಿಲ್ಲ ವಾದಲ್ಲಿ ರಾಜ್ಯದಾದ್ಯಂದ ಸ್ವಚ್ಚತಾ ಕೆಲಸ ಸ್ಥಗಿತಗೊಳಿಸಿ ಅನಿರ್ಧಿಷ್ಟಾ ಮುಷ್ಕರ ನಡೆಸಲು ತೀರ್ಮಾನಿಸಲಾಗುವುದು

ಬೆಂಗಳೂರು ಮಹಾನಗರಪಾಲಿಕೆ ಸೇರಿದಂತೆ ರಾಜ್ಯದ ವಿವಿಧ ನಗರಸ್ಥಳೀಯ ಸಂಸ್ಥೆಗಳಲ್ಲಿ ಅನೇಕ ವರ್ಷಗಳಿಂದ ಸ್ವಚ್ಛತೆ ಕೆಲಸ ಮಾಡುತ್ತಿರುವ ನೇರ ಪಾವತಿ ಪೌರಕಾರ್ಮಿಕರು , ಗುತ್ತಿಗೆ ಪೌರಕಾರ್ಮಿಕರು , ಕಸಾಗಿಸುವ ಲೋಡರ್ , ಕ್ಲೀನರ್ , ಕಸದ ವಾಹನ ಚಾಲಕರು ಮತ್ತು ಒಳಚರಂಡಿ ಸ್ವಚ್ಚತಗಾರರನ್ನು ಈತಕ್ಷಣ ಖಾಯಂ ನೇಮಕಾತಿ ಮಾಡಲು ರಾಜ್ಯ ಸರ್ಕಾರವನ್ನು ಒತ್ತಾಯಿಸಲು ದಿನಾಂಕ : 31.08.2021 ರಂದು ಮಹಾಸಂಘದ ವತಿಯಿಂದ ಪತ್ರಿಕಾಗೋಷ್ಟಿ ಮೂಲಕ ಈ ಕೆಲಗಿನ ಹಕ್ಕೊತ್ತಾಯಗಳನ್ನು ಸಲ್ಲಿಸಲಾಗುವುದು . ಹಾಗೂ ರಾಜ್ಯ ಸರ್ಕಾರ ಈ ನಮ್ಮ ಹಕ್ಕೊತ್ತಾಯಗಳನ್ನು ಒಂದು ತಿಂಗಗೋಳಗೆ ಈಡೇರಿಸಲಿಲ್ಲ ಅಂದರೆ ರಾಜ್ಯದಾದ್ಯಂದ ಸ್ವಚ್ಚತಾ ಕೆಲಸ ಸ್ಥಗಿತಗೊಳಿಸಿ ಅನಿರ್ಧಿಷ್ಟಾ ಮುಷ್ಕರ ನಡೆಸಲು ತೀರ್ಮಾನಿಸಲಾಗುವುದು ಎಂದು ಮಾಧ್ಯಮಗಳ ಮೂಲಕ ತಿಳಿಸುತ್ತಿದ್ದೇವೆ .

ಹಕ್ಕೊತ್ತಾಯಗಳು : 1. ಎಲ್ಲಾ ನೇರ ಪಾವತಿ ಪೌರಕಾರ್ಮಿಕರು ಮತ್ತು ಮೇಸ್ತ್ರಿಗಳು ಹಾಗೂ ಗುತ್ತಿಗೆ ಲೋಡರ್ , ಕ್ಲಿನರ್ , ಮತ್ತು ಕಸ ಸಾಗಿಸುವ ವಾಹನಗಳಾದ ಅಟೊ , ಮತ್ತು ಟಿಪ್ಪರ್ ಚಾಲಕರು , ಸಹಾಯಕರನ್ನು ಮತ್ತು ಒಳಚರಂಡಿ ( ಯುಜಿಡಿ ) ಸ್ವಚ್ಚತಾ ಕಾರ್ಮಿಕರನ್ನು ಕೂಡಲೆ ಖಾಯಂಗೊಳಿಸಬೇಕು 2 , ಬೃಹತ್ ಬೆಂಗಳೂರು ಮಹನಗರ ಪಾಲಿಕೆ ಯು ಘನತ್ಯಾಜ್ಯ ನಿರ್ವಹಣೆಗಾಗಿ ಪ್ರತ್ಯೇಕವಾದ ಖಾಸಗಿ ಕಂಪನಿ ರಚಿಸಿರುವುದು ಮತ್ತು ಘನತ್ಯಾಜ್ಯ ನಿರ್ವಹಣೆಯಲ್ಲಿ ಕಾರ್ಮಿಕರಾದ ಲೋಡರ್ , ಕ್ಲಿನರ್ , ಮತ್ತು ಕಸ ಸಾಗಿಸುವ ವಾಹನಗಳಾದ ಅಟೊ , ಮತ್ತು ಟಿಪ್ಪರ್ ಚಾಲಕರು , ಸಹಾಯಕರು ಇವರನ್ನು ಖಾಸಗಿ ಕಂಪನಿಯ ವ್ಯಾಪ್ತಿಗೆ ಸೇರಿಸಲು ಯೋಜನೆ ಸಿದ್ದಪಡಿಸಲಾಗಿದೆ , ಇದು ಕಾರ್ಮಿಕರ ವಿರೋಧಿ ದೋರಣೆಯಾಗಿದೆ , ಅದ್ದರಿಂದ ಪ್ರಸ್ತುತ ಘನ ತ್ಯಾಜ್ಯ ನಿರ್ವಹಣೆಯಲ್ಲಿ ತೊಡಗಿರುವ ಕಾರ್ಮಿಕರನ್ನು ಬಿ ಬಿ ಎಂ ಪಿ ಯಲ್ಲಿಯೇ ಖಾಯಂ ಕಾರ್ಮಿಕರಾಗಿ ನೇಮಿಸಿಕೊಳ್ಳಬೇಕು ಮತ್ತು ಈ ಎಲ್ಲಾ ಕಾರ್ಮಿಕರಿಗೆ ಉದ್ಯೋಗ ಭದ್ರತೆ ನೀಡಬೇಕು . 3. ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ನೇರ ಪಾವತಿ ಪೌರಕಾರ್ಮಿಕರಲ್ಲಿ ಅನೇಕರು 60 ವರ್ಷ ಪೂರೈಸುತ್ತಿದ್ದಾರೆ , ಅವರನ್ನು ಯಾವುದೇ ಪರಿಹಾರ ನೀಡದೆ ಅನ್ಯಾಯವಾಗಿ ನಿವೃತ್ತಿಗೊಳಿಸುತ್ತಿದ್ದಾರೆ , ಅದ್ದರಿಂದ 60 ವರ್ಷ ಪೂರೈಸುತ್ತಿರುವ ಪೌರಕಾರ್ಮಿಕರು ಮತ್ತು ಮೇಸ್ತ್ರಿಗಳು ವಯಸ್ಸಾದ ಮೇಲೆ ಬೀದಿಪಾಲಾಗುತ್ತಿದ್ದಾರೆ , ಅದ್ದರಿಂದ ಅವರ ಅವಲಂಬಿತರಿಗೆ ಉದ್ಯೋಗ ನೀಡಬೇಕು . ಮತ್ತು ನಿವೃತ್ತಿ ಪರಿಹಾರವಾಗಿ ಪರಿಹಾರವಾಗಿ ತಲಾ ರೂ.10.ಲಕ್ಷ ಹಣ ನೀಡಿ ಗೌರವದಿಂದ ನಿವೃತ್ತಿಗೊಳಿಸಬೇಕು . 4 , ವಿಶ್ರಾಂತಿ ಗೃಹ , ಶೌಚ್ಚಾಲಯ , ಬೀಸಿನೀರು ಮತ್ತು ಸುರಕ್ಷಿತ ಸಲಕರಣೆ : ಬೆಂಗಳೂರು ಮಹಾನಗರ ಪಾಲಿಕೆ ಮತ್ತು ರಾಜ್ಯದ ನಗರಸ್ಥಳೀಯ ಸಂಸ್ಥೆಗಳಲ್ಲಿ 54,000 ಸಾವಿರಕ್ಕೂ ಹೆಚ್ಚು ಪೌರಕಾರ್ಮಿಕರು ದುಡಿಯುತ್ತಿದ್ದಾರೆ , ಅವರಲ್ಲಿ ಶೇ .90 ಮಹಿಳೆಯಾರಿದ್ದಾರೆ . ಬೆಳಿಗ್ಗೆ 5.30 ಗಂಟೆಗೆ ತಮ್ಮ ಕೆಲಸ ಪ್ರಾರಂಬಿಸುತ್ತಾರೆ . ಈ ಕಾರ್ಮಿಕರು ಅತ್ಯವಶ್ಯಕವಾಗಿ ಬೇಕಾಗಿರುವ ಶೌಚಾಲಯ , ವಿಶ್ರಾಂತಿ ಕೊಠಡಿ , ಕುಡಿಯುವ ನೀರು , ಕೈಕಾಲು ಸ್ವಚ್ಛಮಾಡಿಕೊಳ್ಳಲು ಬಿಸಿನೀರಿನ ವ್ಯವಸ್ಥೆ ಮಾಡುವಂತೆ ಅನೇಕ ವರ್ಷಗಳಿಂದ ಒತ್ತಾಯಿಸುತ್ತಿದ್ದೇವೆ , ಅದರೆ ಇದೂವರೆವಿಗೂ ಈ ಕುರಿತು ಸೂಕ್ತ ಕ್ರಮ ಜರುಗಿಸಿಲ್ಲ , ಆದ್ದರಿಂದ ಈ ಕೂಡಲೇ ವ್ಯವಸ್ಥೆ ಮಾಡಬೇಕು ,

5. ಭವಿಷ್ಯ ನಿಧಿ ಮತ್ತು ಇ ಎಸ್ ಐ ಪಾವತಿಸದೆ ವಂಚಿಸಿರುವುದು : 2018 ರಿಂದ ಪೌರಕಾರ್ಮಿಕರು ಮತ್ತು ಮೇಸ್ತಿಗಳು ಬಿ ಬಿ ಎಂ ಪಿ ಹಾಗೂ ನಗರಸ್ಥಳೀಯ ಸಂಸ್ಥೆಗಳ ಅಡಿಯಲ್ಲಿ ನೇರವಾಗಿ ಮಾಸಿಕ ವೇತನ ಪಡೆಯುತ್ತಿದ್ದಾರೆ . 2018 ರಿಂದ ಇಲ್ಲಿಯವರೆಗೂ ಭವಿಷ್ಯ ನಿಧಿ ಮತ್ತು ಇ ಎಸ್ ಐ ವಂತಿಗೆಯನ್ನು ಕಾರ್ಮಿಕರಿಂದ ಕಡಿತ ಮಾಡುತ್ತಿದ್ದಾರೆ , ಆದರೆ ಕಾರ್ಮಿಕರ ಭವಿಶ್ಯ ನಿಧಿ ಖಾತೆಗೆ ನೇರವಾಗಿ ಪಾವತಿಸಿರುವ ಕುರಿತು ಸರಿಯಾದ ಮಾಹಿತಿ ಇಲ್ಲ . ಅದ್ದರಿಂದ ಈ ತಕ್ಷಣ ಎಲ್ಲಾ ಕಾರ್ಮಿಕರ ಖಾತೆಗಳಿಗೆ ನೇರವಾಗಿ ಜಮೆ ಮಾಡಬೇಕು . ಈ ಕುರಿತು ಸೂಕ್ತ ದಾಖಲಾತಿಗಳನ್ನು ಕಾರ್ಮಿಕರಿಗೆ ಒದಗಿಸಬೇಕು , 6. ಪೌರಕಾರ್ಮಿಕರು , ಮಸ್ತಿಗಳನ್ನು ಖಾಯಂ ನೇಮಕಾತಿ ಮಾಡಲು ರೂಪಿಸಿರುವ ವಯೋಮಿತಿ 45 ವರ್ಷಗಳು , ಈ ನಿಯಮದಿಂದ ಬಹುತೇಕ ಹಾಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಅನ್ಯಾಯವಾಗಲಿದೆ . ಅದ್ದರಿಂದ ಸದರಿ ಕಾರ್ಮಿಕರ ಖಾಯಂ ನೇಮಕಾತಿ ವಯಸ್ಸು ಕನಿಷ್ಠ 50 ವರ್ಷಗಳಿಗೆ ಹೆಚ್ಚಿಸಬೇಕು . 7. ಪೌರಕಾರ್ಮಿಕರು , ಮೇಸ್ತ್ರಿಗಳನ್ನು ಹಾಗೂ ಲೋಡರ್ ಮತ್ತು ಕಸದ ವಾಹನ ಚಾಲಕರು ಮತ್ತು ಯುಜಿಡಿ ಸ್ವಚ್ಚತಗಾರರು ಕೊರೋನಾ ಸೊಂಕು ವ್ಯಾಪಕವಾಗಿ ಹರಡುತ್ತಿದ್ದರು ತಮ್ಮ ಪ್ರಾಣಗಳನ್ನು ಲೆಕ್ಕಿಸದೆ ನಿರಂತರವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ . ಈ ಸಂದರ್ಭದಲ್ಲಿ ಅನೇಕರು ಕರೋನಾ ಸೋಂಕಿಗೆ ಬಲಿಯಾಗಿದ್ದಾರೆ . ಅಂತವರಿಗೆ ಇದೂವರೆವಿಗೂ ಪರಿಹಾರ ದೊರೆತಿಲ್ಲ . ಆದ್ದರಿಂದ ಈ ತಕ್ಷಣವೇ ಪಿ . ಎಂ ಕೇರ್ ಫಂಡ್ ಅಥಾವ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಿಂದ ತಲಾ ರೂ.30.ಲಕ್ಷ ಪರಿಹಾರ ನೀಡಬೇಕು ,

ಮುತ್ಯಾಲಪ್ಪ ,ಅದ್ಯಕ್ಷರು

ಬೆಂ . ನಗರಜಿಲ್ಲೆ

ಎನ್ ಪಿ ಶ್ರೀನಿವಾಸಲು , ಅಧ್ಯಕ್ಷರು , ಬೆಂ.ನಗರ ,

ಮುನಿರಾಜು, ರಾಜ್ಯ ಪ್ರಧಾನ ಕಾರ್ಯದರ್ಶಿ ,

ನಾರಾಯಣ ( ಮೈಸೂರು ) ರಾಜ್ಯಾದ್ಯಕ್ಷರು

City Today News

9341997936

ಮುರಾರ್ಜಿ ದೇಸಾಯಿ ಮತ್ತು ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗಳಿಗೆ ಚಿತ್ರಕಲಾ ಶಿಕ್ಷಕರು ( ಪದವೀಧರರಿಗೆ 230 ಹುದ್ದೆಗಳು ) ನೇರ ನೇಮಕಾತಿ ವಿಷಯಕ್ಕೆ ಸಂಬಂಧಿಸಿದಂತೆ ಬಿ.ಎಫ್.ಎ. / ಬಿ.ವಿ.ಎ . ಪದವಿಯ ಅಂಕಗಳ ಸ್ಪಷ್ಟಿಕರಣವನ್ನು ಹಾಗೂ ವಿಶ್ವವಿದ್ಯಾಲಯದ ಪಟ್ಟಿಯನ್ನು “ ಉನ್ನತ ಶಿಕ್ಷಣ ಇಲಾಖೆ ” ಯಿಂದ ತರಿಸಿಕೊಂಡು ಕರ್ನಾಟಕ ಲೋಕಸೇವಾ ಆಯೋಗ ಬೆಂಗಳೂರು ಇವರಿಗೆ ಅತಿ ತುರ್ತಾಗಿ ಕಳುಹಿಸಿಕೊಡುವ ಬಗ್ಗೆ ಮನವಿ

ಉಲ್ಲೇಖ : ಕರ್ನಾಟಕ ಲೋಕಸೇವಾ ಆಯೋಗ ಉದ್ಯೋಗಸೌಧ , ಬೆಂಗಳೂರು . ಇವರ ಅಧಿಸೂಚನೆ ಸಂಖ್ಯೆ : ಪಿ.ಎಸ್.ಸಿ .01 ಆರ್.ಟಿ. ( 4 ) ಬಿ -3 / 2016

ಮೇಲ್ಕಂಡ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ಬರುವ ಕರ್ನಾಟಕ ರಾಜ್ಯ ಸರ್ಕಾರದ ಒಂದು ಅಂಗಸಂಸ್ಥೆಯಾದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘವು ಮುರಾರ್ಜಿ ದೇಸಾಯಿ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಿಗೆ 2016 ರಲ್ಲಿ ಚಿತ್ರಕಲಾ ಶಿಕ್ಷಕರು ಪದವೀಧರರಿಗೆ 230 ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಜಿಗಳನ್ನು ಕರ್ನಾಟಕ ಲೋಕಸೇವಾ ಆಯೋಗದ ( ಕೆ.ಪಿ.ಎಸ್.ಸಿ. ) ಮೂಲಕ ಕರೆಯಲಾಗಿತ್ತು . ಆರ್ಜಿಗಳನ್ನು ಸ್ವೀಕರಿಸಿದ ನಂತರ ಅರ್ಹತಾ ಪಟ್ಟಿಯನ್ನು ಪ್ರಕಟಿಸಿ ಅರ್ಹ ಅಭ್ಯರ್ಥಿಗಳಿಗೆ ಮೂಲ ದಾಖಲೆಗಳ ಪರಿಶೀಲನೆ ಮಾಡಿದ್ದು ತದನಂತರ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಸಿದ್ದಪಡಿಸಲು ಬಿ.ಎಫ್.ಎ. / ಬಿ.ವಿ.ಎ . ಪದವಿಯ ಅಂಕಗಳ ಸ್ಪಷ್ಟಿಕರಣ ಮತ್ತು ವಿಶ್ವವಿದ್ಯಾಲಯದ ಪಟ್ಟಿಯು ಕರ್ನಾಟಕ ಲೋಕಸೇವಾ ಆಯೋಗ ( ಕೆ.ಪಿ.ಎಸ್.ಸಿ. ) ಬೆಂಗಳೂರು . ಇವರಿಗೆ ಅತಿ ತುರ್ತಾಗಿ ಅವಶ್ಯಕತೆ ಇರುವುದರಿಂದ ಪದವಿಯ ಅಂಕಗಳ ಸ್ಪಷ್ಟಿಕರಣವನ್ನು ಮತ್ತು ವಿಶ್ವವಿದ್ಯಾಲಯದ ಪಟ್ಟಿಯನ್ನು ಉನ್ನತ ಶಿಕ್ಷಣ ಇಲಾಖೆ ” ಯಿಂದ ತರಿಸಿಕೊಂಡು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಕಳುಹಿಸಿಕೊಡುವುದರ ಮೂಲಕ ಅರ್ಹ ಬಿ.ಎಫ್.ಎ. / ಬಿ.ವಿ.ಎ . ಪದವೀಧರರಿಗೆ ಉದ್ಯೋಗವಕಾಶಕ್ಕೆ ಅನುವು ಮಾಡಿಕೊಡಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇವೆ .

ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯ ಹಳೆಯ ವಿದ್ಯಾರ್ಥಿಗಳ ಸಂಘ, ತುಮಕೂರು

ASSOCIATION OF PROFESSIONAL STREAM STUDENTS IN VISUAL ART ( R ) , KARNATAKA

City Today News
9341997936