ದಿನಾಂಕ 18-03-2021 ರಿಂದ ಸಾರಿಗೆ ನೌಕರರ ಅನಿರ್ದಿಷ್ಟ ಅವಧಿಗೆ ಧರಣಿ ಸತ್ಯಾಗ್ರಹ – ಕರ್ನಾಟಕ ರಸ್ತೆ ಸಾರಿಗೆ ಮಜ್ದೂರ್ ಸಂಘ ಒಕ್ಕೂಟ

ದಿನಾಂಕ 18-03-2021 ರಿಂದ ಸಾರಿಗೆ ನೌಕರರು ಅನಿರ್ದಿಷ್ಟ ಅವಧಿಗೆ ಧರಣಿ ಸತ್ಯಾಗ್ರಹ ನಡೆಸುವ ಕುರಿತು .

1. 2011 ರಿಂದ 2019-20 ರವರೆಗೆ ರೂ . 3550 / – ಕೋಟಿ ಗಳನ್ನು ಸಾರಿಗೆ ಸಂಸ್ಥೆಗೆ ರಾಜ್ಯ ಸರ್ಕಾರ ನೀಡದೇ ಬಾಕಿ ಉಳಿಸಿಕೊಂಡಿದೆ . ಉಳಿಸಿಕೊಂಡಿರುವ ಮೊತ್ತವನ್ನು ಬಿಡುಗಡೆಗೊಳಿಸಬೇಕು . 2. 2021-22 ಕ ಆಯ – ವ್ಯಯದಲ್ಲಿ ಸಾರಿಗೆ ಕಾರ್ಮಿಕರಿಗೆ 6 ನೇ ವೇತನದ ಸರಿಸಮಾನ ವೇತನ ಪಾವತಿ ಮಾಡಲು ನಾಲ್ಲು ನಿಗಮಗಳ ಕಾರ್ಯಸಾಧ್ಯತೆ ( Viability Fund ) ವ್ಯತ್ಯಾಸದ ಹಣವನ್ನು ಪ್ರತಿ ವರ್ಷ ಆಯ – ವ್ಯಯದಲ್ಲಿಯೇ ಘೋಷಿಸುವಂತೆ ಕ್ರಮಕೈಗೊಂಡು , ಕಾರ್ಮಿಕರ ಮತ್ತು ಸಾರಿಗೆ ಸಂಸ್ಥೆಯನ್ನು ರಕ್ಷಿಸುವ ಹಿತಾಸಕ್ತಿಯಿಂದ ಬೇಡಿಕೆ ಸಲ್ಲಿಸಲಾಗಿತ್ತು . ಅದರೆ ಮಾನ್ಯ ಘನ ಸರ್ಕಾರ ಆಯ – ವ್ಯಯದಲ್ಲಿ ಹಣ ನಿಗಧಿಪಡಿಸದೇ ಕಳೆದ ಸಾಂಗಿಂತ ಕಡಿಮೆ ಹಣ ನೀಡಿ ನೌಕರರಿಗೆ ನಿರಾಶೆಯನ್ನು ಮತ್ತು ಅವಿಶ್ವಾಸ ಮುಡುವಂತೆ ಮಾಡಿರುತ್ತದೆ . 3 , ಸಾರಿಗೆ ಕಾರ್ಮಿಕರ ಬಹುದೊಡ್ಡ ಬೇಡಿಕೆಯಾದ ಕಾಷ್ ಬೇಸ್ ( ಹಣ ರಹಿತ ) ವೈದ್ಯಕೀಯ ಸೌಲಭ್ಯ ಜಾರಿಗೆ ತರಲು ಕೋರಲಾಗಿತ್ತು . ಅದರೆ ಹಳೆಯ ಸುತ್ತೋಲೆಗೆ ಅಲ್ಪಪ್ರಮಾಣದ ತಿದ್ದುಪಡಿ ತಂದಿರುವುದನ್ನು ವಿರೋಧಿಸಿ . 4. ನಾಲ್ಕು ನಿಗಮಗಳ ನಿವೃತ್ತ ಸಾರಿಗೆ ನೌಕರರ ಅಂತಿಮ ಪಾವತಿ ಬಾಕಿ ಹಣ ಪಾವತಿಗೆ ದಿನಾಂಕ : 11 12-2020 ರಂದು ಮುಷ್ಕರದ ಸಮಯದಲ್ಲಿ ಮಾನ್ಯ ಉಪಮುಖ್ಯ ಮಂತ್ರಿಯವರು ಹಾಗೂ ಸಾರಿಗೆ ಸಚಿವರು ವಿಕಾಸಸೌಧದಲ್ಲಿ ನಡೆದ ಸಂಸ್ಥೆಯ ನಾಲ್ಕು ನಿಗಮಗಳ ಕಾರ್ಮಿಕ ಸಂಘಟನೆಗಳಗೆ 15 ದಿನಗಳಲ್ಲಿ ಈಡೇರಿಸುವ ಭರವಸೆ ನೀಡಿದ್ದರು ಆದರೆ ಇಲ್ಲಿಯವರೆವಿಗೂ ಈಡೇರಿಸಿರುವುದಿಲ್ಲ . 5. ಆಡಳಿತ ವೆಚ್ಚ ಕಡಿಮೆ ಗೊಳಿಸಿ ಕಾರ್ಮಿಕರಿಗೆ ಸಲ್ಲಬೇಕಿರುವ ಕಾರ್ಯಗಳು ಘಟಕ ಮಟ್ಟದಲ್ಲಿಯೇ ಲಭಿಸಲು ನಾಲ್ಲು ನಿಗಮಗಳಲ್ಲಿ ಏಕರೂಪದ ಆಡಳಿತ ವ್ಯವಸ್ಥೆಯಾದ ಎರಡು ಹಂತದ ಆಡಳಿತ ಜಾರಿಗೆ ಕ್ರಮಕೈಗೊಳ್ಳು ಅಗ್ರಹಿಸಿ .

ದಿನಾಂಕ 18-03-2021 ರಿಂದ ಅನಿರ್ದಿಷ್ಟ ಅವಧಿಗೆ ಸ್ವಾತಂತ್ರ್ಯ ಉದ್ಯಾನ ಬೆಂಗಳೂರಿನಲ್ಲಿ ಸರಣಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ . ನೌಕರರ ಪ್ರಮಾಣಿಕ ಮತ್ತು ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಮತ್ತು ಆಡಳಿತ ಮಂಡಳಿ ವಿಫಲವಾಗಿರುವುದರಿಂದ ಅನಿವಾಯವಾಗಿ ನೌಕರರ ಹಿತಕಾಪಾಡುವ ದೃಷ್ಟಿಯಲ್ಲಿ ಸಂವಿಧಾನ್ಯಾಕವಾದ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ .

– ಕೆ ರಾಮಕೃಷ್ಣ ಪೂಂಜಾ -ಅಧ್ಯಕ್ಷರು

ಮಂಜುನಾಥ ಫ್ರಸನ್ನ-
ಕಾರ್ಯದರ್ಶಿ

City Today News
9341997936

ಬಿಎಂಟಿಸಿ ಕೇಂದ್ರ ಕಛೇರಿ ಬಳಿ ಪ್ರತಿಭಟನೆ

ಪತ್ರಿಕಾಗೋಷ್ಟಿಯ ಹೇಳಿಕೆ

ಸಾರಿಗೆ ಕಾರ್ಮಿಕರು ಇತ್ತೀಚೆಗೆ ನಡೆಸಿದ ಮುಷ್ಕರದ ನಂತರದಲ್ಲಿ ಸಮಸ್ಯೆಗಳು ತೀವ್ರವಾಗಿ ಹೆಚ್ಚಳವಾಗಿವೆ . ನಿಗದಿತ ಸಮಯಕ್ಕೆ ವೇತನಗಳು ಸಿಗುತ್ತಿಲ್ಲ . ಅರ್ಧ ಸಂಬಳಗಳನ್ನು ನೀಡಲಾಗಿದೆ . ಈಗಷ್ಟೇ ಶಾಲಾ ಕಾಲೇಜುಗಳು ಆರಂಭವಾಗಿದ್ದು , ತಮ್ಮ ಮಕ್ಕಳಿಗೆ ಶಿಕ್ಷಣ ಶುಲ್ಕವನ್ನು ಕಟ್ಟಲಾಗದ ಪರಿಸ್ಥಿತಿ ಉದ್ಭವವಾಗಿದೆ . ಕಾರ್ಮಿಕರ ಗಳಿಕೆ ರಜೆಗಳನ್ನು ಕಡಿತ ಮಾಡಲಾಗುತ್ತಿದೆ . ರಜೆಗಳನ್ನು ವಜಾ ಮಾಡಿಕೊಂಡು ಸಂಬಳವನ್ನು ನೀಡಲಾಗುತ್ತಿದೆ . ಬಲವಂತವಾಗಿ ರಜೆಗಳನ್ನು ಹಾಕುವಂತೆ ಮಾಡಲಾಗುತ್ತಿದೆ . ಕಾರ್ಮಿಕರ ಹಕ್ಕಿನ ವಾರದ ರಜೆಯನ್ನು ನೀಡದ ಕಿರುಕುಳ ನೀಡಲಾಗುತ್ತಿದೆ . ಪ್ರತಿದಿನದ ಕೆಲಸವನ್ನು ಪಡೆದುಕೊಳ್ಳಲು ನಾಲ್ಕಾರು ಗಂಟೆಗಳು ಕಾಯಬೇಕಾಗಿದೆ . ಗಂಟೆಗಟ್ಟಲೆ ಕಾಯಿಸಿ ನಂತರ ಕೆಲಸ ನೀಡದೆ ರಜೆ ಹಾಕುವಂತೆ ಬಲವಂತ ಮಾಡಲಾಗುತ್ತಿದೆ . ಕೆಲಸ ಪಡೆದುಕೊಳ್ಳಲು ಅಧಿಕಾರಿಗಳಿಗೆ ಲಂಚ ನೀಡಬೇಕಾದ ಪರಿಸ್ಥಿತಿಯಿದೆ . ಪೂರ್ಣಪ್ರಮಾಣದಲ್ಲಿ ಮಾರ್ಗಾಚರಣೆ ಮಾಡದಿರುವುದರಿಂದ 8 ಗಂಟೆ . ಬದಲಿಗೆ 12 ಗಂಟೆ ಕೆಲಸ ಮಾಡುವಂತಾಗಿದೆ . ಮಹಿಳಾ ಕಾರ್ಮಿಕರಿಗೆ ವಿಪರೀತ ಸಮಸ್ಯೆಗಳು ಉಂಟಾಗಿವೆ . ಮೊದಲ ಮತ್ತು ಸಾಮಾನ್ಯ ಪಾಳಿಗಳಲ್ಲಿ ಕೆಲಸ ನೀಡದಿರುವುದು ಮತ್ತು 12 ಗಂಟೆಗಳ ಕಾಲ ಕೆಲಸ ಮಾಡಬೇಕಿರುವುದರಿಂದ ನೈಸರ್ಗಿಕ ಕ್ರಿಯೆಗಳಿಗೂ ಅನಾನುಕೂಲ ಉಂಟಾಗಿದೆ ಮತ್ತು ಕೌಟುಂಬಿಕ ಜೀವನದ ಮೇಲೆ ನಕಾರಾತ್ಮಕ ಪರಿಣಾಮಗಳು ಉಂಟಾಗುತ್ತಿವೆ . ಕಾರ್ಮಿಕರ ಮೇಲೆ ಶಿಸ್ತಿನ ಕ್ರಮಗಳು ಕೆಲವೊಮ್ಮೆ ಸೇಡಿನ ಕ್ರಮಗಳಾಗಿ ಪರಿವರ್ತನೆಯಾಗುತ್ತಿವೆ . ಡಿಪೋ ಮಟ್ಟದಲ್ಲಿ ಕುಂದುಕೊರತೆ ನಿವಾರಣಾ ಸಮಿತಿಗಳು ಅಸ್ತಿತ್ವದಲ್ಲಿ ಇಲ್ಲದಿರುವುದರಿಂದ ಕಾರ್ಮಿಕರ ಮೇಲಿನ ಕಿರುಗಳಗಳಿಗೆ ಪರಿಹಾರವೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ . ಇದೇ ಸಂದರ್ಭದಲ್ಲಿ 300 ಎಲೆಕ್ಟಿಕ್‌ ಬಸ್‌ಗಳನ್ನು ಗುತ್ತಿಗೆ ಆಧಾರದ ಮೇಲೆ ತರುವುದಾಗಿ ಸಾರಿಗೆ ಸಚಿವರು ಹೇಳಿದ್ದಾರೆ . ಮುಂದಿನ ದಿನಗಳಲ್ಲಿ ಸಾರಿಗೆ ನಿಗಮಗಳನ್ನು ಖಾಸಗೀಕರಿಸುವ ಹುನ್ನಾರದ ಭಾಗವಾಗಿ ಇಂತಹ ಪ್ರಯತ್ನಗಳನ್ನು ಸರ್ಕಾರ ಮಾಡುತ್ತಿದೆ . ಸಾರಿಗೆ ಕಾರ್ಮಿಕರ ಭವಿಷ್ಯದ ಮೇಲೆ ಮತ್ತು ರಾಜ್ಯದ ಜನತೆಯ -2 ಸಾರ್ವಜನಿಕ ಸಾರಿಗೆಯ ಹಕ್ಕಿನ ಮೇಲೆ ಇದು ನಕಾರಾತ್ಮಕ ಪರಿಣಾಮವನ್ನು ಬೀರಲಿದೆ .

ಈ ಹಿನ್ನೆಲೆಯಲ್ಲಿ ಆಡಳಿತ ವರ್ಗದ ಮತ್ತು ಸರ್ಕಾರದ ಗಮನ ಸೆಳೆಯಲು 10-02-20 21 ರಂದು ಬುಧವಾರ ಮಧ್ಯಾಹ್ನ 1.00 ಗಂಟೆಗೆ ಬಿಎಂಟಿಸಿ ಕೇಂದ್ರ ಕಛೇರಿ ಬಳಿ ಪ್ರತಿಭಟನೆ ನಡೆಸಿ , ಮನವಿ ಸಲ್ಲಿಸಲು ಕ.ರಾ.ರ.ಸಾ.ನಿಗಳು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ತೀರ್ಮಾನಿಸಿದೆ .

ಬೇಡಿಕೆಗಳು 1. ನಿಗದಿತ ಸಮಯಕ್ಕೆ ವೇತನ ಪಾವತಿ ಮಾಡಬೇಕು . ಬಾಕಿ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು . 2 ವಾರದ ರಜೆಯನ್ನು ಕಡ್ಡಾಯವಾಗಿ ಷರತ್ತುಗಳಿಲ್ಲದೆ ನೀಡಬೇಕು . ಕಾರ್ಮಿಕರ ರಜೆ ಕಡಿತ ನಿಲ್ಲಿಸಬೇಕು . ಹಿಂದೆ ಕಡಿತ ಮಾಡಿರುವ ರಜೆಗಳನ್ನು ವಾಪಸ್ ನೀಡಬೇಕು . 3. ಪೂರ್ಣ ಪ್ರಮಾಣದಲ್ಲಿ ಮಾರ್ಗಾಚರಣೆ ಆರಂಭಿಸಿ , ನಾಲ್ಕು ಪಾಳಿಗಳಲ್ಲಿ ಕೆಲಸ ನೀಡಬೇಕು . ಕೆಲಸ ನೀಡಲು ಲಂಚ ಪಡೆಯುವ ಅಧಿಕಾರಿಗಳನ್ನು ಶಿಕ್ಷಿಸಬೇಕು . 4 , ಮಹಿಳಾ ಕಾರ್ಮಿಕರಿಗೆ ಮೊದಲ ಮತ್ತು ಸಾಮಾನ್ಯ ಪಾಳಿಯಲ್ಲಿ ಕೆಲಸಕ್ಕೆ ಆದ್ಯತೆ ನೀಡಬೇಕು . 5 , ಘಟಕ ಮಟ್ಟದಲ್ಲಿ ಕಾರ್ಮಿಕರ ಕುಂದು ಕೊರತೆ ನಿವಾರಣಾ ಸಮಿತಿಗಳನ್ನು ರಚಿಸಿ ಸಮಸ್ಯೆಗಳ ನಿವಾರಣೆಗೆ ಕ್ರಮ ವಹಿಸಬೇಕು . 6 , ಗುತ್ತಿಗೆ ಆಧಾರದಲ್ಲಿ 300 ಎಲೆಕ್ಟ್ರಿಕ್ ಬಸ್‌ಗಳ ಕಾರ್ಯಾಚರಣೆಯನ್ನು ನಿಲ್ಲಿಸಬೇಕು , ಸಾರಿಗೆ ನಿಗಮಗಳೇ ನೇರವಾಗಿ ತಮ್ಮ ಸಿಬ್ಬಂದಿಯ ಮೂಲಕವೇ ಕಾರ್ಯಾಚರಣೆ ಮಾಡಬೇಕು .

– ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ

City Today News
9341997936