ಬೆಂಗಳೂರಿನ  ಶಾಂತಿನಗರದಲ್ಲಿನ, ಅನಧಿಕೃತವಾಗಿ 8 ಮತ್ತು ಅದಕ್ಕಿಂತ ಹೆಚ್ಚಿನ ಅಂತಸ್ತುಗಳನ್ನು ನಿರ್ಮಾಣ ಮಾಡುತ್ತಿದ್ದು, ಬೈಲಾಗಳನ್ನು ಉಲ್ಲಂಘಿಸಿ, ಅನಧಿಕೃತವಾಗಿ ನಿರ್ಮಾಣ ಮಾಡುತ್ತಿರುವ ಕಟ್ಟಡವನ್ನು ಸ್ಥಗಿತಗೊಳಿಸಲು ಅಹ್ಮದ್ ಅಲಿ ಬಿನ್ ಅಬ್ಬಾಸ್ ಅಲಿ ರವರಿಂದ ಕೋರಿಕೆ

ಅಹ್ಮದ್ ಅಲಿ ಬಿನ್ ಅಬ್ಬಾಸ್ ಅಲಿ, ಮತ್ತು ಇತರರು, ನಮ್ಮ ವಕೀಲರಾದ ಶ್ರೀ ಅರ್ಜುನ್ ರಾಮಾ ಖೋತ್ ರವರು ಸ್ವಸ್ತಿಕ್ ಕ್ರಾಸ್ ರೋಡ್, ಶಾಂತಿನಗರ, ಬೆಂಗಳೂರಿನ ಖಾಯಂ ವಾಸಿಯಾಗಿದ್ದು ಈ ಮೂಲಕ ತಿಳಿಸುವುದೇನೆಂದರೆ, ದಿನಾಂಕ: 15.04.2024 ರಂದು ಮಾನ್ಯ ಮುಖ್ಯ ಮಂತ್ರಿ ಸಿದ್ದರಾಮಯ್ಯನವರಿಗೆ, ಉಪ ಮುಖ್ಯ ಮಂತ್ರಿ ಡಿ.ಕೆ ಶಿವಕುಮಾರ್, ಎಮ್.ಎಲ್.ಎ ಹ್ಯಾರೀಸ್ ರವರಿಗೆ, ಮಾನ್ಯ ಪಿ.ಸಿ ಮೋಹನ್ ರವರಿಗೆ, ಹಾಗೂ ಮಾನ್ಯ ಬಿಬಿಎಂಪಿ ಕಮೀಷನರ್, ಬೆಂಗಳೂರು, ಜಂಟಿ ಆಯುಕ್ತರವರಿಗೆ, ಜಂಟಿ ನಿರ್ದೇಶಕರು, ನಗರ ಯೋಜನೆ ಉತ್ತರ ರವರಿಗೆ, ಹಾಗೂ ಇತರರಿಗೆ ಮನವಿ ಸಲ್ಲಿಸಿ, ಶ್ರೀ ಅರುಣ್ ಎಂಬುವರು ಸ್ವತ್ತಿನ ಸಂಖ್ಯೆ: ನಂ. 120, ಸ್ವಸ್ತಿಕ್ ಕ್ರಾಸ್ ರೋಡ್, ಭೀಮಣ್ಣ ಗಾರ್ಡನ್, ಎ.ಟಿ ಹಳ್ಳಿ, ಶಾಂತಿನಗರ, ಬೆಂಗಳೂರು ಇಲ್ಲಿ ಅನಧಿಕೃತವಾಗಿ 8 ಮತ್ತು ಅದಕ್ಕಿಂತ ಹೆಚ್ಚಿನ ಅಂತಸ್ತುಗಳನ್ನು ನಿರ್ಮಾಣ ಮಾಡುತ್ತಿದ್ದು, ಬೈಲಾಗಳನ್ನು ಉಲ್ಲಂಘಿಸಿ, ಅನಧಿಕೃತವಾಗಿ ನಿರ್ಮಾಣ ಮಾಡುತ್ತಿರುವ ಕಟ್ಟಡವನ್ನು ಸ್ಥಗಿತಗೊಳಿಸಲು ಕೋರಿರುತ್ತೇವೆ.

ಅದರಂತೆ ಉಲ್ಲೇಖ (1) ರ ಪತ್ರದಲ್ಲಿ ತಿಳಿಸಿರುವ ಸ್ವತ್ತಿಗೆ ನಕ್ಷೆ ಮಂಜೂರಾತಿ ನೀಡಿರುವುದು ಕಂಡುಬಂದಿರುವುದಿಲ್ಲ. ಹಾಗಾಗಿ ನಾವು ತಿಳಿಸಿರುವ ಸ್ವತ್ತಿಗೆ ನಕ್ಷೆ ಮಂಜೂರಾತಿ ನೀಡಲಾಗಿದೆಯೇ ಎಂಬುದರ ಬಗ್ಗೆ ಪರಿಶೀಲಿಸಿಕೊಂಡು ಉಲ್ಲೇಖ (2), (3) & (4) ರ ಮಾನ್ಯ ಮುಖ್ಯ ಆಯುಕ್ತರವರ ಕಛೇರಿ ಆದೇಶಗಳನ್ವಯ ಮುಂದಿನ ಸೂಕ್ತ ಕ್ರಮ ಕೈಗೊಳ್ಳುವಂತೆ ಅರ್ಜಿಯನ್ನು ಸಲ್ಲಿಸಿರುತ್ತಾರೆ.

ಮುಂದುವರೆದು ನಗರ ಯೋಜನೆ (ಪೂರ್ವ), ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರವರು ಮಾನ್ಯ ಜಂಟಿ ನಿರ್ದೇಶಕರು, (ನಗರ ಯೋಜನೆ ಉತ್ತರ) ಬಿಬಿಎಂಪಿ, ಎನ್.ಆರ್ ವೃತ್ತ, ಬೆಂಗಳೂರು ಹಾಗು ಅಹಮದ್ ಆಲಿ ರವರಿಗೆ ಸದರಿ ವಿಷಯಕ್ಕೆ ಸಂಬಂಧಿಸಿದಂತೆ, ಈಗಾಗಲೇ ಕಟ್ಟಡದ ಮಾಲೀಕರಿಗೆ 2020ថ ម 248(1) 248(2) 2: 31.05.2024 ರಂದು ಮತ್ತು 248(3) ಅನ್ನು ದಿನಾಂಕ: 15.06.2024 ರಂದು ಜಾರಿ ಮಾಡಿ ಕಲಂ 356ರನ್ವಯ ಡೆಮಾಲಿಷನ್ ಆರ್ಡರ್ (Demolish Order) ಜಾರಿಗೊಳಿಸಲು ಕೋರಿ ದಿನಾಂಕ: 25.06.2024 ರಂದು ಮೂಲ ಕಡತವನ್ನು ಕಾರ್ಯಪಾಲಕ ಅಭಿಯಂತರರು, ಶಾಂತಿನರ ವಿಭಾಗ ರವರಿಗೆ ಸಲ್ಲಿಸಲಾಗಿದ್ದು. ಮುಂದಿನ ಕ್ರಮದ ಬಗ್ಗೆ ಮಾಹಿತಿಯನ್ನು ಕಾರ್ಯಪಾಲಕ ಅಭಿಯಂತರರು, ಶಾಂತಿನಗರ ವಿಭಾಗ ರವರ ಕಛೇರಿಯಲ್ಲಿ ಪಡೆಯಬಹುದಾಗಿರುತ್ತದೆ ಎಂದು ತಿಳಿಸ ಅರ್ಜಿಯನ್ನು ಸಲ್ಲಿಸಿದ್ದಾರೆ.

ಹೀಗಿರುವಾಗ ನಾನು ಸದರಿ ಮೇಲೆ ತಿಳಿಸಿರುವ ಸ್ವತ್ತಿನ ಅನಧಿಕೃತ ಕಟ್ಟಡವನ್ನು ನಿರ್ಮಾಣಮಾಡುವ ಕಾರ್ಯವನ್ನು ಸ್ಥಗಿತಗೊಳಿಸಲು ಕೋರಿಯೂ ಸಹ ಅದನ್ನು ನಿಲ್ಲಿಸದೆ ಕಟ್ಟಡದ ಕಾರ್ಯವನ್ನು ಸಂಪೂರ್ಣಗೊಳಿಸಿದ್ದಾರೆ. ಎ.ಇ.ಇ. ಬಿಬಿಎಂಪಿ ಸರಸ್ವತಿ, ಮುನಿರಾಜು ಗೌಡ, ಹಾಗೂ ರಾಥೋಡ್ ರವರಿಗೆ ಹಲವಾರು ಬಾರಿ ಫೋನ್ ಕರೆ ಹಾಗೂ ನೇರವಾಗಿ ಭೇಟಿಮಾಡಿದರೂ ಸಹ ಅನಧಿಕೃತ ಕಟ್ಟಡದ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಲು ನೆರವು ಮಾಡಿರುವುದಿಲ್ಲ. ಸದರಿ ವಿಚಾರವಾಗಿ ಆರ್.ಟಿ.ಐ ದಲ್ಲಿ ಸಂಬಂಧಪಟ್ಟ ವಿಚಾರದಲ್ಲಿ : 2.2.2. (5) 4.5/72/2024-25, 2: 04.07.2024 ರಂತೆ ಅರ್ಜಿ ಸಲ್ಲಿಸಲಾಗಿದೆ. ಹಾಗೂ  ಬಿಬಿಎಂಪಿ ಕಮೀಷನರ್, ಬೆಂಗಳೂರು, ಲಕ್ಷ್ಮಿದೇವಿ ಜಂಟಿ ಆಯುಕ್ತರು, ಬೆಂಗಳೂರು, ಹಾಗೂ ಇತರರಿಗೆ ದಿನಾಂಕ: 03.07.2024, 05.07.2024, 06.07.2024, 24.07.2024 0 – ಅನಧಿಕೃತ ಕಟ್ಟಡಗಳ ನಿರ್ಮಾಣ ಸ್ಥಗಿತ ಕಾರ್ಯದ ಬಗ್ಗೆ ಕೇಳಿದಾಗಿಯೂ ಸಹ ಯಾವುದೇ ಪ್ರಯೋಜನವಾಗಿರುವುದಿಲ್ಲ.

ಹಾಗೂ ಮಾನ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಶ್ರೀ ಸೂರಜ್ ಗೋವಿಂದರಾಜ್ ರವರು “ಬಿಬಿಎಂಪಿ ರವರು ಯೋಜನೆಯನ್ನು ಮಂಜೂರು ಮಾಡಿದ ನಂತರ, ಸಂಬಂಧಪಟ್ಟ ವಾರ್ಡ್ ಅಧಿಕಾರಿ / ಇಂಜಿನಿಯರ್ ಅವರು 30 ದಿನಗಳಿಗೊಮ್ಮೆ ನಿಯತಕಾಲಿಕವಾಗಿ ತಪಾಸಣೆ ನಡೆಸಬೇಕು ಮತ್ತು ನಡೆಸಿದ ತಪಾಸಣೆಯ ಸ್ವರೂಪ, ಮಂಜೂರಾತಿ ಯೋಜೆಗೆ ಅನುಸರಣೆ ಅಥವಾ ಯೋಜನೆಯ ಯಾವುದೇ ಉಲ್ಲಂಘನೆಯನ್ನು ವಿವರಿಸುವ ವರದಿಯನ್ನು ಸಲ್ಲಿಸಬೇಕು, ಎಂಬುದಾಗಿ ಪ್ರಕರಣಯನ್ನು ಹೊರಡಿಸಿದ್ದಾರೆ.

ಅನುಸರಣೆ ಅಥವಾ ಯೋಜನೆಯ ಯಾವುದೇ ಉಲ್ಲಂಘನೆಯನ್ನು ವಿವರಿಸುವ ವರದಿಯನ್ನು ಸಲ್ಲಿಸಬೇಕು, ಎಂಬುದಾಗಿ ಪ್ರಕರಣೆಯನ್ನು ಹೊರಡಿಸಿದ್ದಾರೆ. ಹಾಗೂ ಯಾವುದೇ ಉಲ್ಲಂಘನೆಯ ಸಂದರ್ಭದಲ್ಲಿ ಮಾಲೀಕರು/ ಬಿಲ್ಡರ್‌ಗಳು ಅಥವಾ ಯೋಜನೆ ಮಂಜೂರಾತಿಯನ್ನು ಪಡೆದ ವ್ಯಕ್ತಿಗೆ ತಕ್ಷಣವೇ ನೋಟಿಸ್ ಜಾರಿ ಮಾಡಬೇಕು. ವ್ಯತ್ಯಾಸಗಳನ್ನು ಸೂಚಿಸಿ ಮತ್ತು ಸದರಿ ವ್ಯತ್ಯಾಸಗಳನ್ನು ತೆಗೆದುಹಾಕಲು ಷರತ್ತುಗಳನ್ನು ವಿಧಿಸಬೇಕು ಎಂದು ನ್ಯಾಯಾಲವು ಆದೇಶಿಸಿದೆ.

ಆದರೆ ಇಂದಿನವರೆವಿಗೂ ಸದರಿ ಸ್ವತ್ತಿನ ನಂ. 120, ಸ್ವಸ್ತಿಕ್ ಕ್ರಾಸ್ ರೋಡ್, ಭೀಮಣ್ಣ ಗಾರ್ಡನ್, ಎ.ಟಿ ಹಳ್ಳಿ, ಶಾಂತಿನಗರ, ಬೆಂಗಳೂರು ಇಲ್ಲಿ ಅನಧಿಕೃತವಾಗಿ 8 ಮತ್ತು ಅದಕ್ಕಿಂತ ಹೆಚ್ಚಿನ ಅಂತಸ್ತುಗಳನ್ನು ನಿರ್ಮಾಣ ಮಾಡುತ್ತಿದ್ದು, ಬೈಲಾಗಳನ್ನು ಉಲ್ಲಂಘಿಸಿ, ಅನಧಿಕೃತವಾಗಿ ನಿರ್ಮಾಣ ಮಾಡುತ್ತಿರುವ ಕಟ್ಟಡವನ್ನು ಸ್ಥಗಿತಗೊಳಿಸಲು ಸಾಧ್ಯವಾಗಿರುವುದಿಲ್ಲ.

ಆದ್ದರಿಂದ ಮಾನ್ಯರು ಮೇಲೆ ವಿವರಿಸಿರುವ ಸದರಿ ಸ್ವತ್ತಿನ ಅನಧಕೃತ ಕಟ್ಟಡದ ನಿರ್ಮಾಣದ ಕಾರ್ಯವನ್ನು ಸ್ಥಗಿತಗೊಳಿಸಲು ನೆರವಾಗುವಲ್ಲಿ ಸಹಕರಿಸಬೇಕೆಂದು ಹಾಗೂ ಸದರಿ ಕಾರ್ಯದಲ್ಲಿ ಕಾನೂನು ಉಲ್ಲಂಘನೆ ಮಾಡಿರುವವರ ವಿರುದ್ದ ಸೂಕ್ತ ಕಾನೂನು ರೀತ್ಯ ಕ್ರಮವನ್ನು ತೆಗೆದುಕೊಳ್ಳಲು ನೆರವಾಗಲು ಸದರಿ ಪ್ರಕರಣೆಯನ್ನು ಹೊರಡಿಸಲಾಗಿದೆ ಎಂದು ಅಹ್ಮದ್ ಅಲಿ ಬಿನ್ ಅಬ್ಬಾಸ್ ಅಲಿ, ಹಾಗೂ ಇತರರು ಸ್ವಸ್ತಿಕ್ ಕ್ರಾಸ್ ರೋಡ್, ಶಾಂತಿನಗರ, ಬೆಂಗಳೂರು ರವರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.

City Today News 9341997936