ದಿನಾಂಕ : 08 / 03 / 2019 ರಂದು ಕು | | ಎ . ಎನ್ . ಪ್ರಿಯಾಂಕ ರವರು ದೂರುದಾರರಿಂದ ರೂ . 3 , 000 / – ಲಂಚದ ಹಣವನ್ನು ಪಡೆಯುತ್ತಿದ್ದಾಗ ಚಿಕ್ಕಬಳ್ಳಾಪುರ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ಸಿಕ್ಕಿಬಿದ್ದಿರುತ್ತಾರೆ .

ದಿನಾಂಕ 08 / 03 / 2019 , ಚಿಕ್ಕಬಳ್ಳಾಪುರ ಜಿಲ್ಲೆ , ಶಿಡ್ಲಘಟ್ಟ ತಾಲ್ಲೂಕು , ಶೆಟ್ಟಿಕೆರೆ ಗ್ರಾಮದ ನಿವಾಸಿಯೊಬ್ಬರು ತಮ್ಮ ಪಿತ್ರಾರ್ಜಿತವಾದ ಜಮೀನುಗಳನ್ನು ವಿಭಾಗ ಪತ್ರದಂತೆ ಹಂಚಿಕೆ ಮಾಡಿಕೊಂಡು ಶಿಡ್ಲಘಟ್ಟ ಉಪ ನೋಂದಣಾಧಿಕಾರಿಗಳ ಕಛೇರಿಯಲ್ಲಿ ರಿಜಿಸ್ಟರ್ ಮಾಡಿಕೊಂಡಿದ್ದು , ಜಮೀನಿನ ಖಾತೆ ಮಾಡಿಕೊಡಲು ಶಿಡ್ಲಘಟ್ಟ ತಾಲ್ಲೂಕು ಕಛೇರಿಯ ಮುಖಾಂತರ ಶೆಟ್ಟಿಗೆರೆ ಕಂದಾಯ ವೃತ್ತದ ಗ್ರಾಮಲೆಕ್ಕಿಗರಾದ ಕುಎ . ಎನ್ . ಪ್ರಿಯಾಂಕ ರವರ ಬಳಿಗೆ ಬಂದಿರುತ್ತದೆ . ಎ . ಎನ್ . ಪ್ರಿಯಾಂಕರವರು ಖಾತೆ ಬದಲಾವಣೆ ಮಾಡಿಕೊಡಲು ಶಿಫಾರಸ್ಸು ಮಾಡಲು ರೂ . 5 , 000 / – ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ . ದಿನಾಂಕ : 08 / 03 / 2019 ರಂದು ಕು | | ಎ . ಎನ್ . ಪ್ರಿಯಾಂಕ ರವರು ದೂರುದಾರರಿಂದ ರೂ . 3 , 000 / – ಲಂಚದ ಹಣವನ್ನು ಪಡೆಯುತ್ತಿದ್ದಾಗ ಚಿಕ್ಕಬಳ್ಳಾಪುರ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ಸಿಕ್ಕಿಬಿದ್ದಿರುತ್ತಾರೆ . ಆರೋಪಿತರನ್ನು ದಸ್ತಗಿರಿ ಮಾಡಿ , ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ . ತನಿಖೆ ಮುಂದುವರೆದಿದೆ .

City Today News

(citytoday.media)

9341997936

Leave a comment

This site uses Akismet to reduce spam. Learn how your comment data is processed.