ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘವು 7ನೇ ಅಂತರಾಷ್ಟ್ರೀಯ ವಸ್ತು ಪ್ರದರ್ಶನ “ ಡಿಜಿ – ಇಮೇಜ್ ” ಇದೇ ತಿಂಗಳು 13 , 14 ಮತ್ತು 15ರ ಮೂರು ದಿನಗಳ ಕಾಲ ” ನಂದಿ ಲಿಂಕ್ ಮೈದಾನ ” , ಮೈಸೂರು ರಸ್ತೆ ಮೆಟ್ರೋ ನಿಲ್ದಾಣದ ಹತ್ತಿರ , ನಾಯಂಡಹಳ್ಳಿ , ಬೆಂಗಳೂರು ಇಲ್ಲಿ ಆಯೋಜಿಸಿದ್ದು ಮೊದಲನೇ ದಿನ ಕಾರ್ಯಕ್ರಮನ್ನು ಮಾನ್ಯ ಉಪಮುಖ್ಯಮಂತ್ರಿಗಳಾದ ಸಿ . ಅಶ್ವಥ್ನಾರಯಣ ರವರು ಉದ್ಘಾಟನೆ ಮಾಡಲಿದ್ದಾರೆ ಹಾಗು ಮಾನ್ಯ ಲೋಕಸಭಾ ಸಂಸದರಾದ ಶೋಭಾ ಕರಂದ್ಲಾಜೆ ರವರು ವಿಶೇಷ ಅತಿಥಿಗಳಾಗಿ ಆಗಮಿಸುತ್ತಿದ್ದಾರೆ .

ಎರಡನೇ ದಿನದಂದು ರಾಜ್ಯದ ಪ್ರತಿ ಜಿಲ್ಲೆಯಿಂದ ಆಯ್ಕೆಗೊಂಡ ಪ್ರತಿಷ್ಠಿತ ಛಾಯಾಗ್ರಾಹಕರಿಗೆ “ ಛಾಯಾ ಸಾಧಕ ” ಪ್ರಶಸ್ತಿಯನ್ನು ನೀಡಲಾಗುವುದು ಹಾಗು ಮೂರನೇ ದಿನದಂದು ಸಾರ್ವಜನಿಕ ಜಾಗೃತಿ ಅಭಿಯಾನದ ” ನೀರನ್ನು ಉಳಿಸಿ ಕಾಡನ್ನು ಬೆಳಸಿ ” ಕಾರ್ಯಕ್ರಮವನ್ನು ಆಯೋಜಿಸಿದ್ದು ಸಾವಿರಾರು ಛಾಯಾಗ್ರಾಹಕರು ಏಕಕಾಲದಲ್ಲಿ ಕ್ಲಿಕ್ಕಿಸುವ ಮೂಲಕ ಈ ಅಭಿಯಾನದಲ್ಲಿ ಪಾಲ್ಗೊಳ್ಳುವರು . ಈ ಮೂರು ದಿನಗಳ ಕಾರ್ಯಕ್ರಮದಲ್ಲಿ ಸುಮಾರು 30 , 000 ರಾಜ್ಯದ ವೃತ್ತಿಬಾಂದವರು ಆಗಮಿಸಲಿದ್ದು ಅವರಿಗೆ ಉಚಿತ ವಿಶೇಷ ಕಾರ್ಯಗಾರ ಮತ್ತು ತಂತ್ರಜ್ಞಾನದ ಮಾಹಿತಿ ನೀಡಲಾಗುವುದು .
-ಯೋಗಿಶ್ ಆಚಾರ್
ಪಿ . ಆರ್ . ಓ , ಕೆ . ಪಿ . ಎ
City Today News
(citytoday.media)
9341997936
