ಕರ್ನಾಟಕ ಕ್ಷತ್ರಿಯ ಅಭಿವೃದ್ದಿ ನಿಗಮ ಸ್ಥಾಪನೆ ಮಾಡಬೇಕು ಎಂದು ಮನವಿ ಮಾಡಲಾಗಿತ್ತು, ಅಂದು ಬಿ.ಎಸ್.ಯಡಿಯೂರಪ್ಪರವರು ಭರವಸೆ ನೀಡಿದ್ದರು

ಕರ್ನಾಟಕ ಕ್ಷತ್ರಿಯ ಅಭಿವೃದ್ದಿ ನಿಗಮ ಸ್ಥಾಪನೆಗೆ ಒತ್ತಾಯ.

ಕರ್ನಾಟಕ ರಾಜು ಕ್ಷತ್ರಿಯ ಸಂಘದ ವತಿಯಿಂದ ಪ್ರಸ್ ಕ್ಲಬ್ ನಲ್ಲಿ ಮಾಧ್ಯಮ ಉದ್ದೇಶಿಸಿ ಕರ್ನಾಟಕ ಕ್ಷತ್ರಿಯ ಸಂಘದ ಅಧ್ಯಕ್ಷರಾದ ಎಲ್.ಕೆ. ರಾಜು , ಬಿ.ಬಿ.ಎಂ.ಪಿ.ಸದಸ್ಯರಾದ ಗೋಪಿನಾಥ್ ರಾಜು ,ಸಂಚಾಲಕರಾದ ವೆಂಕಟರಾಜು ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು.
ಎಲ್.ಕೆ.ರಾಜುರವರು ಮಾತನಾಡಿ 2016ಅರಮನೆ ಮೈದಾನದಲ್ಲಿ ಜರುಗಿದ ಕರ್ನಾಟಕ ರಾಜು ಕ್ಷತ್ರಿಯ ಸಂಘದ ವತಿಯಿಂದ ಸಮಾವೇಶದಲ್ಲಿ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ ರವರಿಗೆ ಇಂದಿನ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪರವರಿಗೆ ಕರ್ನಾಟಕ ಕ್ಷತ್ರಿಯ ಅಭಿವೃದ್ದಿ ನಿಗಮ ಸ್ಥಾಪನೆ ಮಾಡಬೇಕು ಎಂದು ಮನವಿ ಮಾಡಲಾಗಿತ್ತು .ಇದೀಗ ಬಿ.ಎಸ್.ಯಡಿಯೂರಪ್ಪರವರು ಮುಖ್ಯಮಂತ್ರಿಯಾಗಿ ಯಶ್ವಸಿಯಾಗಿ ಆಡಳಿತ ನಡೆಸುತ್ತಿದ್ದಾರೆ .ಕರ್ನಾಟಕ ಕ್ಷತ್ರಿಯ ಅಭಿವೃದ್ದಿ ನಿಗಮ ಸ್ಥಾಪನೆ 50ಕೋಟಿ ಮೀಸಲು ಇಡಬೇಕು ಎಂದು ಮನವಿ ಮಾಡಲಾಗುವುದು ಎಂದು ಹೇಳಿದರು.

ಗೋಪಿನಾಥ್ ರಾಜುರವರು ಮಾತನಾಡಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪರವರು ನುಡಿದಂತೆ ನಡೆಯುವವರು ಅಂದು ಭರವಸೆ ನೀಡಿದ್ದರು . ಮತ್ತೊಮ್ಮೆ ಅವರಿಗೆ ಮನವಿ ಮಾಡಲಾಗುವುದು.ಆರ್ಥಿಕವಾಗಿ ಹಿಂದುಳಿದ ಕ್ಷತ್ರಿಯ ಸಮಾಜಕ್ಕೆ ನಿಗಮ,ಮಂಡಳಿ ಅತ್ಯವಕತೆ ಇದೆ .ಕ್ಷತ್ರಿಯರು ಅವರು ಸಹ ಎಲ್ಲರಂತೆ ಸಂಘಟಿತರಾಗಿ ,,ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಹೇಳಿದರು.

City Today News

(citytoday.media)

9341997936

Leave a comment

This site uses Akismet to reduce spam. Learn how your comment data is processed.