
ಮಾಸ್ಕ್ ಮೊದಲು ಕೊಡಿ! ಊಟ ನಂತರ ಕೊಡಿ!! ಕಾರ್ಯಕ್ರಮದಲ್ಲಿ ಕೇಳಿ ಬಂದ ಕೂಗು.
ಕೋರಮಂಗಲದ ಸಮಾಜ ಸೇವಕ ಡಾ. ಪಿ. ಆನಂದ ಅವರು ದೇಣಿಗೆಯಾಗಿ ನೀಡುತ್ತಿರುವ ಉಚಿತ ಮಾಸ್ಕ್ ವಿತರಣೆ ಕಾರ್ಯಕ್ರಮದಲ್ಲಿ ಕೇಳಿ ಬಂದ ಕೂಗು. ಸ್ಥಳೀಯ ಶಾಸಕ ರಾಮಲಿಂಗ ರೆಡ್ಡಿ ಅವರು ಚಾಲನೆ ನೀಡಿ ಖುದ್ದಾಗಿ ಕೋರಮಂಗಲ ಗ್ರಾಮದ 3 ಪ್ರತ್ಯೇಕ ಸ್ಥಾನಗಳಲ್ಲಿ ಸ್ಥಳೀಯರಿಗೆ ಊಟದ ಪೊಟ್ಟಣದೊಂದಿಗೆ ಮಾಸ್ಕ್ ವಿತರಣೆ ಮಾಡಿದರು.

ಸ್ಥಳೀಯ ಕೌನ್ಸಿಲರ್ ಚಂದ್ರಪ್ಪ ಜೊತೆಗಿದ್ದರು. ಪ್ರಥಮ ಹಂತದಲ್ಲಿ 5000 ಮಾಸ್ಕ್ ಹಂಚುವ ಗುರಿಯಿದ್ದು ಅವಶ್ಯಕತೆಗೆ ಅನುಗುಣವಾಗಿ ಸೇವೆಯನ್ನು ವಿಸ್ತರಿಸಲಾಗುವುದು ಎಂದು ದಾನಿಗಳಾದ ಡಾ. ಪಿ. ಆನಂದ ತಿಳಿಸಿದರು.
City Today News
(citytoday.media)
9341997936
