ತಾಲ್ಲೂಕು ಆಡಳಿತ ವತಿಯಿಂದ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ.

ನಾಗಮಂಗಲ: ಕೋವಿಡ್ -19 ಸೋಂಕಿನ ಹಿನ್ನೆಲೆಯಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆಯನ್ನು ಸರಳ ಹಾಗೂ ಸಾಂಕೇತಿಕವಾಗಿ ಪಟ್ಟಣದ ಮಿನಿ ವಿಧಾನಸೌಧದ ಕಚೇರ ಸಭಾಂಗಣದಲ್ಲಿ ತಾಲೂಕು ಆಡಳಿತ ವತಿಯಿಂದ ತಹಶೀಲ್ದಾರ್ ಕುಂಞಿ ಅಹಮದ್ ರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಶೀಲ್ದಾರ್ ರವರು ನಮ್ಮ ನಾಡಿಗೆ ಸಿಲಿಕಾನ್ ಸಿಟಿಯನ್ನು ಕಟ್ಟಿಕೊಟ್ಟವರು ನಾಡಪ್ರಭು ಕೆಂಪೇಗೌಡ ರವರು. ಬೆಂಗಳೂರು ನಗರದಲ್ಲಿ ಇಂದು 1.25 ಕೋಟಿ ಜನತೆ ತಮ್ಮ ಜೀವನವನ್ನು ಕಟ್ಟಿಕೊಂಡಿದ್ದಾರೆ. ನಾಡಪ್ರಭು ಕೆಂಪೇಗೌಡ ರವರು ಒಂದು ಜಾತಿಗೆ ಸೀಮಿತವಾಗದೆ. ಪ್ರತಿಯೊಂದು ಜನಾಂಗಕ್ಕೂ ಅವರು ಮಾಡುವ ಕೆಲಸದ ಮೇರೆಗೆ ಒಂದೊಂದು ನಗರವನ್ನಾಗಿ ರೂಪಿಸಿದರೆ. ಇದರಿಂದಾಗಿ ಬೆಂಗಳೂರಲ್ಲಿ ಅತಿ ಹೆಚ್ಚು ಉದ್ಯೋಗ ಸೃಷ್ಟಿಯಾಗಿದೆ. ಈ ನಾಡಿಗೆ ಕೆಂಪೇಗೌಡರ ಕೊಡುಗೆ ಅಪಾರ ಎಂದು ತಿಳಿಸಿದರು.

ಇದೇ ವೇಳೆ ಮಾತನಾಡಿದ ತಾಲೂಕು ಆರೋಗ್ಯಾಧಿಕಾರಿ ಡಾ: ಧನಂಜಯ್, ನಾಡಪ್ರಭು ಕೆಂಪೇಗೌಡರ ರವರು ಯಾವುದೇ ಒಂದು ಸಮೂಹಕ್ಕೆ ಯಾವುದೋ ಒಂದು ಜಾತಿಗೆ ಸೀಮಿತವಾದ ವರಲ್ಲ. ಈ ನಾಡಿನಲ್ಲಿ ಎಷ್ಟು ರಾಜರುಗಳು ಆಳ್ವಿಕೆ ನಡೆಸಿದರು ಆದರೆ ಕೆಂಪೇಗೌಡರ ಹೆಸರು ಈಗಲೂ ಇಷ್ಟು ಗಟ್ಟಿಯಾಗಿ ನಿಲ್ಲಲು ಕಾರಣವೆಂದರೆ ಅವರು ಮಾಡಿರುವ ಸಮಾಜಮುಖಿ ಕೆಲಸ ಕಾರ್ಯಗಳು ಹಾಗೂ ಅವರು ಆಳ್ವಿಕೆ ನಡೆಸಿದ ಅಂತ ರೀತಿ ಇಂದ ಮಾತ್ರ ಎಂದು ತಿಳಿಸಿದರು.

ಜಯಂತಿಯಲ್ಲಿ ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷರಾದ ಮಂಜುನಾಥ್, ಕರ್ನಾಟಕ ರಾಜ್ಯ ಪಡಿತರ ವಿತರಕರ ಸಂಘದ ಅಧ್ಯಕ್ಷರಾದ ಕೃಷ್ಣಪ್ಪ, ಪುರಸಭೆ ಸದಸ್ಯರಾದ ತಿಮ್ಮಪ್ಪ, ಚನ್ನಪ್ಪ, ಪಿಎಸ್ಐ ರವಿಕಿರಣ್, ಪಟ್ಟಣದ ಒಕ್ಕಲಿಗರ ಮುಖಂಡರಾದ ಕೆಂಪೇಗೌಡರು, ಹಾಗೂ ತಾಲೂಕಿನ ಒಕ್ಕಲಿಗ ಮುಖಂಡರುಗಳು ಹಾಜರಿದ್ದರು.

City Today News

(citytoday.media)

9341997936

Leave a comment

This site uses Akismet to reduce spam. Learn how your comment data is processed.