ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಅಂಧ ಬರಹಗಾರರ ಪುಸ್ತಕಗಳಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ದತ್ತಿ ನಿಧಿ ಆರಂಬ

ಅಂಧ ಹಾಗೂ ಅಂಗವಿಕಲರಿಗಾಗಿ ಹುಟ್ಟಿಕೊಂಡಿರುವ ಅಸಂಖ್ಯಾತ ಸಂಘ ಸಂಸ್ಥೆಗಳ ನಡುವೆ ಹುಟ್ಟಿಕೊಂಡಿರುವ ಕರ್ನಾಟಕ ಅಂಧರ ವಿಮೋಚನಾ ವೇದಿಕೆಯು ಅನೇಕ ಕಾರಣಗಳಿಂದ ತನ್ನ ಭಿನ್ನತೆಯನ್ನು ಕಾಯ್ದುಕೊಂಡು ಬಂದಿರುತ್ತದೆ . 2010 ರಲ್ಲಿ ಪ್ರಾರಂಭಗೊಂಡ ನಮ್ಮ ಸಂಘಟನೆಯು ಶಿಕ್ಷಣ , ತರಬೇತಿ ಇವೇ ಮೊದಲಾದ ಎಲ್ಲಾ ಸಂಘ ಸಂಸ್ಥೆಗಳ ಸಾಮಾನ್ಯ ಕಾರ್ಯಕ್ರಮಗಳು ಪುನರಾವರ್ತನಯ ಗೋಜಿಗೆ ಕೈಹಾಕದೇ ಇವುಗಳನ್ನು ಮೀರಿದ ವೈಚಾರಿಕ ಜಾಗೃತಿ , ಸಮುದಾಯ ಪ್ರಜ್ಞೆ , ಸಾಹಿತ್ಯ ಮತ್ತು ಸಾಂಸ್ಕೃತಿಕ ಬೆಳವಣಿಗೆಗಳು , ಸಾಮಾಜಿಕ ಸಮಾನತ ಇವೇ ಮೊದಲಾದ ಅಂಶಗಳನ್ನು ಕೇಂದ್ರಿಕರಿಸಿದಂತೆ ಕಾರ್ಯನಿರ್ವಹಿಸುತ್ತಾ ಬಂದಿರುತ್ತದೆ . ರಾಜ್ಯ ಮಟ್ಟದ ಅಂಧರ ಚಿಂತನಾಗೋಷ್ಠಿಗಳು , ಅಂಧ ಬರಹಗಾರರ ವಿಚಾರ ಸಂಕೀರ್ಣಗಳು , ಸಮನ್ವಯ ಕವಿಗೋಷ್ಠಿಗಳು , ಅಂಗವಿಕಲರ ಪ್ರಾತಿನಿಧಿಕ ಮಾಸ ಪತ್ರಿಕೆ , ದೃಷ್ಟಿ ವಿಶೇಷ ಚೇತನ ಲೇಖಕರ ಪುಸ್ತಕಗಳ ಪ್ರಕಾಸನ ಇಂತಹ ಹಲ ಕೆಲವು ಅಪರೂಪದ ಕ್ರೀಯಾಶೀಲ ಚಟುವಟಿಕೆಗಳಿಗೆ ಸಂಸ್ಥೆಯು ಸದಾ ತನ್ನನ್ನು ತೊಡಗಿಸಿಕೊಂಡು ಬಂದಿರುತ್ತದೆ . ವೇಧಿಕೆಯು ಅಂತಯೇ ಕರ್ನಾಟಕ ಅಂಧರ ವಿಮೋಚನಾ ದಿನಾಂಕ : 13.08.2021 ರಂದು ಕರ್ನಾಟಕದ ಮಟ್ಟಿಗೆ ಒಂದು ಕಾರ್ಯವನ್ನು ಕೈಗೊಂಡಿರುತ್ತದೆ . ಐತಿಹಾಸಿಕ ರಾಜ್ಯದ ಬಹುಶಃ ಭಾರತದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಅಂಧ ಬರಹಗಾರರ ಪುಸ್ತಕಗಳಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ದತ್ತಿ ನಿಧಿಯನ್ನು ಆರಂಭಿಸಿದ್ದು , ಇದರ ಹೆಗ್ಗಳಿಕೆಯು ಸಂಪೂರ್ಣವಾಗಿ ಡಾ.ಹಚ್ . ವಿಶ್ವನಾಥ್ ಎಂಬ ಸಮಾಜ ಸೇವಕರಿಗೆ ಸಲ್ಲುತ್ತದೆ ಎಂದು ತಿಳಿಸಲು ಸಂಸ್ಥೆಯು ಹೆಮ್ಮಪಡುತ್ತದೆ .

ಪ್ರತಿಭಾವಂತ ಹಾಗೂ ಪುಭಾವಿಗಳ ನಡುವೆ ಸಿಕ್ಕಿ ಜರ್ಜರಿತಗೊಳ್ಳುತ್ತಿರುವ ಇಲ್ಲಿನ ಪ್ರಶಸ್ತಿಗಳು ಅಂಧ ಬರಹಗಾರರನ್ನು ತಲುಪುವುದು ಕಷ್ಟಸಾಧ್ಯವೆಂಬುದನ್ನು ಮನಗೊಂಡಿರುವ ಹಚ್ಕ . ವಿಶ್ವನಾಥ್‌ರವರು ಸಮುದಾಯದ ಬರಹಗಾರರನ್ನು ಗುರುತಿಸುವ ಮತ್ತು ಪ್ರೋತ್ಸಾಹಿಸುವ ಸದುದ್ದೇಶದಿಂದ ತಮ್ಮದೇ ಹೆಸರಿನಲ್ಲಿ ಈ ದತ್ತಿ ನಿಧಿಯನ್ನು ಆರಂಭಿಸಿರುತ್ತಾರೆ . ಡಾ . 2021 ರ ಜನವರಿ ಮಾಹೆಯಿಂದ ಪ್ರತಿವರ್ಷವು ಕೊಡಮಾಡುವ ಪ್ರಶಸ್ತಿಯು 10,000 / -ರೂ ಪ್ರಶಸ್ತಿ ಮೊತ್ತವನ್ನು ಹಾಗೂ ಸ್ಮರಣಿಕೆಯನ್ನು ಒಳಗೊಂಡಿರುತ್ತದ . ಪಿಹಚ್‌ಡಿ ಪ್ರಬಂಧಗಳನ್ನು ಒಳಗೊಂಡಂತೆ ಅಂಧ ಬರಹಗಾರರ ಯಾವುದೇ ಪ್ರಕಾರದ ಕನ್ನಡದ ಕೃತಿಗಳಿಗೆ ಸಂದಾಯಗೊಳ್ಳಬಹುದಾದ ಮೊಟ್ಟಮೊದಲ ಹಾಗೂ ಏಕೈಕ ಪ್ರಶಸ್ತಿಯು ಇದಾಗಿರುತ್ತದೆ . ಇಂತಹ ಸಾರ್ಥಕ ಕಾರ್ಯಕ್ಕೆ ನಾಂದಿ ಹಾಡಿರುವ ಕರ್ನಾಟಕ ಅಂಧರ ವಿಮೋಚನಾ ವೇದಿಕೆಯು ಡಾ . ಹೆಚ್ . ವಿಶ್ವನಾಥ್ ಅವರನ್ನು ಮತ್ತು ಕನ್ನಡ ಸಾಹಿತ್ಯ ಪರಿಷತ್ತನ್ನು ತುಂಬು ಹೃದಯಯಿಂದ ಅಭಿನಂದಿಸುತ್ತದೆ .

-ಶ್ರೀ ಲಕ್ಷ್ಮೀನಾರಾಯಣ ನಾಗವಾರ , ಅಧ್ಯಕ್ಷರು , ಕರ್ನಾಟಕ ಅಂಧರ ವಿಮೋಚನಾ ವೇದಿಕೆ .

ಶ್ರೀ ಮುದಿಗೆರೆ ರಮೇಶ್‌ಕುಮಾರ್ , ರಾಜ್ಯ ಸಂಚಾಲಕರು , ಕರ್ನಾಟಕ ಅಂಧರ ವಿಮೋಚನಾ ವೇದಿಕ .

ಶ್ರೀ ಡಾ.ಹೆಚ್ . ವಿಶ್ವನಾಥ್ ,

ಶ್ರೀ ಕದಂಬ ಶ್ರೀನಿವಾಸ , ಸಂಘಟನಾ ಸಂಚಾಲಕರು , ಕರ್ನಾಟಕ ಅಂಧರ ವಿಮೋಚನಾ ವೇದಿಕೆ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು

City Today News
9341997936

Leave a comment

This site uses Akismet to reduce spam. Learn how your comment data is processed.