ಸಮುದಾಯ ಭವನ ಕಟ್ಟುತ್ತಿರುವುದಾಗಿ ಹೇಳಿ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಅನುವಾನ ಮಂಜೂರಿ ಮಾಡಿಕೊಂಡು ದುರುಪಯೋಗ

ಹಳಿಯಾಳ ತಾಲೂಕಿನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಸಮಾಜದ ಹೆಸರಿನಲ್ಲಿ ವಿವಿಧ ಸಂಘಟನೆಗಳನ್ನು ಹುಟ್ಟು ಹಾಕಿ ಸಮುದಾಯ ಭವನ ಕಟ್ಟುತ್ತಿರುವುದಾಗಿ ಹೇಳಿ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಅನುವಾನ ಮಂಜೂರಿ ಮಾಡಿಕೊಂಡು ದುರುಪಯೋಗ ಆಗುತ್ತಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿ ನಾನು ಜಿಲ್ಲಾಧಿಕಾರಿಗಳಿಗೆ ದಿನಾಂಕ : 02-01-2019ರಂದು ದೂರು ಸಲ್ಲಿಸಿದ್ದೆ . ನನ್ನ ದೂರಿನ ಪ್ರಕಾರ ಮಾನ್ಯ ಜಿಲ್ಲಾಧಿಕಾರಿ , ಕಾರವಾರರವರು ತನಿಖಾಧಿಕಾರಿಗಳನ್ನಾಗಿ ಉಪವಿಭಾಗಾಧಿಕಾರಿ , ಕಾರವಾರವರು ನೇಮಿಸಿ ವರದಿಯನ್ನು ಪಡೆದುಕೊಂಡ ಪ್ರಕಾರ ನನ್ನ ದೂರಿನಲ್ಲಿ ನಿಜಾಂಶವಿರುವುದಾಗಿ ಹಾಗು ಅನುದಾನ ದುರ್ಬಳಕೆ ಆಗುತ್ತಿರುವುದಾಗಿ ವಿಸ್ತ್ರತ ವರದಿ ನೀಡಿರುತ್ತಾರೆ . ವರದಿ ಆಧಾರದಲ್ಲಿ ನಾನು ದಿನಾಂಕ : 14-03-2019 ರಂದು ಮಾನ್ಯ ಲೋಕಾಯುಕ್ತರು ಬೆಂಗಳೂರುರವರಿಗೆ ದೂರನ್ನು ಸಲ್ಲಿಸಿದ್ದೆ . ಸದರಿ ದೂರನ್ನು ಸೂಪರಿಂಟೆಂಡಟ್ ಆಫ್ ಪೋಲಿಸ್ ( ಎಸ್.ಪಿ. ) ಕಾರವಾರರವರು ಕೂಲಂಕೂಷ ತನಿಖೆ ಕೈಗೊಂಡು ಮಾನ್ಯ ಲೋಕಾಯುಕ್ತರಿಗೆ ತನಿಖಾ ವರದಿಯನ್ನು ಸಲ್ಲಿಸಿದ ಪ್ರಕಾರ ವಿಚಾರಣೆಗಾಗಿ ಮಾನ್ಯ ಲೋಕಾಯುಕ್ತರು ಎದುರುದಾರ ವಿಧಾನ ಪರಿಷತ್ ಸದಸ್ಯ ಎಸ್.ಎಲ್ . ಘೋಟೋಕರ ಹಾಗೂ ಶ್ರೀ ರಾಯಣ್ಣ ಅರಸಿನಗೇರಿ , ಅಧ್ಯಕ್ಷರು , ಶ್ರೀ ಶಿವಾಜಿ ಎಜ್ಯುಕೇಷನ್ ಹಾಗೂ ಸ ೦ ಬ ೦ ಧಪಟ್ಟ ಅಧಿಕಾರಿಗಳಿಗೆ ನೋಟಿಸ್ ವಿಚಾರಣೆಗೊಳಪಡಿಸಿ ವಾದ ವಿವಾದ ಆಲಿಸಿದ ನಂತರ ಸದರಿ ಪ್ರಕರಣದಲ್ಲಿ ವಿಧಾನ ಪರಿಷತ್‌ ಸದಸ್ಯ ಎಸ್.ಎಲ್ . ಘೋಟೇಕರ ಮತ್ತು ರಾಯಣ್ಣ ಅರಶಿಣಗೇರಿ , ಅಧ್ಯಕ್ಷರು ಶ್ರೀ ಶಿವಾಜಿ ಎಜುಕೇಷನ್ ಟ್ರಸ್ಟ ಹಾಗೂ ಈ ಪ್ರಕರಣದಲ್ಲಿ ಕೆಲವು ಅಧಿಕಾರಿಗಳು ತಪ್ಪಿತಸ್ಥರೆಂದು ತೀರ್ಮಾನಿಸಿ ಸರಕಾರಕ್ಕೆ ಮತ್ತು ಸಂಬಂಧಪಟ್ಟ ಇಲಾಖೆಯವರಿಗೆ ಲೋಕಾಯುಕ್ತ ಕಾಯ್ದೆಯ ಸೆಕ್ಷನ್ 12 ( 1 ) ಮತ್ತು 12 ( 3 ) ಪ್ರಕಾರ ವರದಿಯನ್ನು ನೀಡಿರುತ್ತಾರೆ . ಮಾನ್ಯ ಲೋಕಾಯುಕ್ತರ ವರದಿಯ ಪ್ರಕಾರ ( 1 ) , ವಿಧಾನ ಪರಿಷತ್ ಸದಸ್ಯ ಎಸ್.ಎಲ್ . ಘೋಟೇಕರ ಹಾಗೂ ಶ್ರೀ ರಾಯಣ್ಣ ಅರಸಿಣಗೇರಿ , ಅಧ್ಯಕ್ಷರು , ಶ್ರೀ ಶಿವಾಜಿ ಎಜುಕೇಷನ್ ಟ್ರಸ್ಟ್ , ರವರ ವಿರುದ್ಧ 5.00 ಲಕ್ಷ ಹಾಗೂ 36.25 ಲಕ್ಷ ರೂಪಾಯಿಗಳನ ಅವರು ಯಾವ ದಿನಾಂಕ ಪಡೆದಿದ್ದಾರೆ ಅಲ್ಲಿಂದ 10 % ಬಡ್ಡಿ ಸೇರಿಸಿ ವಸೂಲಿ ಮಾಡಲು ಕ್ರಮ ಕೈಗೊಳ್ಳಬೇಕು .

( 2 ) ವಿಧಾನ ಪರಿಷತ್ ಸದಸ್ಯ ಎಸ್.ಎಲ್ . ಘೋಟೇಕರ ಹಾಗೂ ಶ್ರೀ ರಾಯಣ್ಣ ಅರಸಿಣಗೇರಿ , ಅಧ್ಯಕ್ಷರು , ಶ್ರೀ ಶಿವಾಜಿ ಎಜುಕೇಷನ್ ಟ್ರಸ್ಟ್ , ರವರ ವಿರುದ್ಧ ಭಾರತ ದಂಡ ಸಂಹಿತೆ ಸೆಕ್ಷನ್ 120 ಬಿ , 403 406 ಹಾಗೂ ಭ್ರಷ್ಟಾಚಾರ ನಿಗ್ರಹ ಕಾಯ್ದೆ 1988 ರ ಸೆಕ್ಷನ್ 13 ( 1 ) ( ಎ ) ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆಯನ್ನು ಹೂಡಲು ಕ್ರಮಕೈಗೊಳ್ಳಬೇಕು . ( 3 ) ವಿಧಾನ ಪರಿಷತ್ ಸದಸ್ಯ ಎಸ್.ಎಲ್ . ಘಟೇಕರರವರು ಪ್ರತಿನಿಧಿಸುವ ಯಾವುದೇ ಸಂಘ ಹಾಗೂ ಶ್ರೀ ಶಿವಾಜಿ ಎಜ್ಯುಕೇಷನ್ ಟ್ರಸ್ಟಿಗೆ ಅವರು ದುರುಪಯೋಗ ಪಡಿಸಿಕೊಂಡ ಅನುದಾನ ವಾಪಸ ಭರಣಾ ಮಾಡಿದ ದಿನಾಂಕದಿಂದ 5 ವರ್ಷಗಳ ಅವಧಿಗೆ ಯಾವುದೇ ಸರಕಾರದ ಅನುದಾನ ನೀಡದಿರಲು ಕ್ರಮ ಕೈಗೊಳ್ಳಲು ತಿಳಿದ್ದಾರೆ , ಕಳೆದ 12 ವರ್ಷಗಳಿಂದ 2 ಅವಧಿಗೆ ವಿಧಾನ ಪರಿಷತ್ ಸದಸ್ಯರಾಗಿ ಸುದೀರ್ಘ ಅವಧಿಗೆ ಇದ್ದರೂ ಒಂದು ನೈಯಾಪೈಸೆ ಅವರು ಪ್ರತಿನಿಧಿಸುವ ಸಮಾಜಕ್ಕೆ ನೀಡದ ಇವರು ಸಮಾಜದ ಅಭಿವೃದ್ಧಿಗೆ ಸರಕಾರದಿಂದ ಬಂದಂತಹ ಹಣವನ್ನು ತಾವು ಹುಟ್ಟುಹಾಕಿರುವ ಶ್ರೀ ಶಿವಾಜಿ ಎಜುಕೇಷನ್ ಟ್ರಸ್ಟ್‌ನ ಎಸ್.ಎಲ್ . ಘೋಟೆಕರ್ , ಆಂಗ್ಲ ಮಾಧ್ಯಮಿಕ ಶಾಲೆ , ಬಳಸಿರುವುದು ಅಕ್ಷಮ್ಯ ಅಪರಾಧ ಇದನ್ನು ನಾವು ಖಂಡಿಸುತ್ತೇವೆ . ದಿನಾಂಕ : 02-01-2019ರಂದು ನಾನು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ ನಂತರ ಸದರಿ ಎಸ್.ಎಸ್ . ಫೋಟೆಕರ ತವರು ನಾನು ಯಾವುದೇ ಅನುದಾನವನ್ನು ದುರುಪಯೋಗಪಡಿಸಿಕೊಂಡಿಲ್ಲ . ಒಂದು ವೇಳೆ ಸಾಬೀತಾದರ ರಾಜಕೀಯ ನಿವೃತ್ತಿ ಪಡೆಯುತ್ತೇನೆಂದು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದ್ದರು . ಅದರಂತೆ ಅವರು ತಮ್ಮ ರಾಜಕೀಯ ನಿವೃತ್ತಿಯನ್ನು ಘೋಷಿಸಬೇಕೆಂದು ನನ್ನ ಸವಾಲು ,

ನಾಗೇಂದ್ರ ಜೀವೋಜಿ

ಉಪಾಧ್ಯಕ್ಷರು – ಕರ್ನಾಟಕ ಕೃತಿಯ ಮರಾಠ ಪರಿಷತ್

City Today News

9341997936

Leave a comment

This site uses Akismet to reduce spam. Learn how your comment data is processed.