ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನು ಮರುನೇಮಕ ಮಾಡಿ ಮುಂದುವರೆಸುವ ಬಗ್ಗೆ ಮನವಿ .

  1. ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಪ್ರತ್ಯೇಕವಾಗಿ , 46 ಜಾತಿಗಳನ್ನೊಳಗೊಂಡ ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ , ಇಡೀ ನೇಮಿಸಿದಕ್ಕೆ ಸನ್ಮಾನ್ಯ ಶ್ರೀ ಬಿ.ಎಸ್.ಯಡಿಯೂರಪ್ಪನವರಿಗೆ ಹತ್ತೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇವೆ . ಅಲೆಮಾರಿ ಜನಾಂಗದವರ ಸರ್ವತೋಮುಖ ಅಭಿವೃದ್ಧಿಗಾಗಿ ಕ್ರಿಯಾಶೀಲ ಅಧ್ಯಕ್ಷರನ್ನು ಮತ್ತು ಬಿ.ಜೆ.ಪಿ ನೇತೃತ್ವದ ಸರ್ಕಾರಕ್ಕೆ ಸಮಸ್ತ ಅಲೆಮಾರಿ ಜನಾಂಗದವರ ಪರವಾಗಿ 2.ಅಲೆಮಾರಿ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನಾಗಿ ನೇಮಿಸಲ್ಪಟ್ಟ ಶ್ರೀ ಕೆ.ರವೀಂದ್ರ ಶೆಟ್ಟಿಯವರು , 1 ವರ್ಷ 6 ತಿಂಗಳ ಅಲ್ಪ ಅವಧಿಯಲ್ಲಿ ಕರೋನಾ ಇದ್ದಂತಹ ಸಂದರ್ಭದಲ್ಲಿಯೂ ಸಹ ತಮ್ಮ ಜೀವವನ್ನು ಲೆಕ್ಕಿಸದೇ ಅಲೆಮಾರಿಗಳಿಗೆ ಆಹಾರ ಕಿಟ್‌ಗಳನ್ನು ಮತ್ತು ವೈದ್ಯಕೀಯ ಸೌಲಭ್ಯಗಳನ್ನು ನೀಡಿ ಹಾಗೂ ಅತ್ಯಂತ ಕ್ರಿಯಾಶೀಲರಾಗಿ ಅಲೆಮಾರಿ ಜನಾಂಗದವರ ಕಷ್ಟಗಳನ್ನು ಸರ್ಕಾರದ ಗಮನಕ್ಕೆ ತರಲು ಪ್ರಯತ್ನಿಸಿದ್ದಾರೆ . 3.ಈಗಾಗಲೇ 27 ಜಿಲ್ಲೆಗಳನ್ನು ಪ್ರವಾಸ ಮಾಡಿ 73 ತಾಲ್ಲೂಕುಗಲ್ಲಿ ಅಲೆಮಾರಿ ಜನಾಂಗದವರ ವಾಸ ಸ್ಥಾನ ಭೇಟಿ ನೀಡಿ ಅಲೆಮಾರಿ ಜನಾಂಗದವರ ಕುಂದು – ಕೊರತೆ , ಕಷ್ಟ – ಸುಖಗಳನ್ನು ಹಾಗೂ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದ ಸಂದರ್ಭದಲ್ಲಿ ಮಾನ್ಯ ಅಧ್ಯಕ್ಷರು ಸಂಬಂಧಪಟ್ಟ ಅಧಿಕಾರಿಗಳನ್ನು ಸ್ಥಳಕ್ಕೆ ಕರೆದುಕೊಂಡು ಹೋಗಿ ಪರಿಹಾರವನ್ನು ಒದಗಿಸಿಕೊಡಲು ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ . 4. ಈಗಲೂ ಸಹ ಆ ಭಾಗದ ಅಲೆಮಾರಿ ಬಂಧುಗಳು ನಮ್ಮನ್ನು ಯಾರು ಸಹ ಗುರುತಿಸಿರಲಿಲ್ಲ , ನಮ್ಮ ಗುಡಿಸಲು ಕೇರಿಗಳಿಗೆ ಭೇಟಿ ನೀಡಿರುವುದಿಲ್ಲ . ಮಾನ್ಯ ಅಧ್ಯಕ್ಷರು ಭೇಟಿ ನೀಡಿದಾಗ ಅವರ ಸಂಸ್ಕೃತಿಯ ರೀತಿಯಲ್ಲಿ ಉಡಾ : ಕಿನ್ನರಿ , ಡೋಲು , ಅಕ್ಷಯಪಾತ್ರೆ , ತಂಬೂರಿ ನುಡಿಸುವುದರ ಮೂಲಕ ಸ್ವಾಗತಿಸುತ್ತಿದ್ದರು . ಲಕ್ಷ ಜನಸಂಖ್ಯೆ ಇರುವುದು 5. 46 ಜಾತಿಗಳನ್ನೊಳಗೊಂಡ ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯದವರು ಸರ್ಕಾರದ ದಾಖಲಾತಿಯ ಮಟ್ಟಿಗೆ 20 ಹೊಂದಿದ್ದು , ನಾವು ಅಲೆಮಾರಿ ಮತ್ತು ಅರೆ ಒಕ್ಕೂಟದಿಂದ ಸಮೀಕ್ಷೆ ಮಾಡಿದಾಗ 46 ಜಾತಿಗಳ ಸುಮಾರು 90 ಲಕ್ಷ ಜನಸಂಖ್ಯೆ ಕಂಡುಬಂದಿರುತ್ತದೆ . ಈಗಾಗಲೇ ಒಕ್ಕೂಟದಿಂದ ಸರ್ಕಾರದ ಮುಖ್ಯಕಾರ್ಯದರ್ಶಿಯವರಿಗೆ ಜಾತಿವಾರು ಜನಗಣತಿ ಮಾಡಬೇಕೆಂದು ಮನವಿ ಮಾಡಿರುತ್ತೇವೆ . 6. ನಿಗಮದ ಮಾನ್ಯ ಅಧ್ಯಕ್ಷರು ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ನಾವು ಡೇರೆ ಮುಕ್ತ ಮಾಡುತ್ತೇನೆ ಎಂದು ಮಾತು ನೀಡಿದ್ದು , ಅಲೆಮಾರಿ ಸಮುದಾಯಗಳ ನಾಡಿಮೀಡಿತವನ್ನು ಮತ್ತು ಮುಖ್ಯವಾಹಿಣಿಗೆ ಬರದ ಎಷ್ಟು ಸಮುದಾಯಗಳನ್ನು ಗುರುತಿಸಿದ್ದಾರೆ . ಈ ರೀತಿಯಾಗಿ ಅಲೆಮಾರಿ ಜನರ ಸರ್ವಾಂಗೀಣ ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವ ಅಧ್ಯಕ್ಷರಾದ ಕೆ.ರವೀಂದ್ರಶೆಟ್ಟಿಯವರನ್ನು ರಾಜ್ಯ ಸರ್ಕಾರ ಏಕಾಏಕೀ ತೆಗೆದಿರುವುದರಿಂದ ರಾಜ್ಯದ ಇಡೀ ಅಲೆಮಾರಿ ಬಂಧುಗಳು ಬಹಳ ಬೇಸರಗೊಂಡಿದ್ದಾರೆ . 7. ಈಗಾಗಲೇ ರಾಜ್ಯದ ವಿವಿಧ ತಾಲ್ಲೂಕು ಹಾಗೂ ಜಿಲ್ಲೆಗಳ ಅಧಿಕಾರಿಗಳಿಂದ ನಮ್ಮ ಒಕ್ಕೂಟದವರು ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ . ಆದುದರಿಂದ ಘನವೆತ್ತ ಸರ್ಕಾರವು , ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ಶ್ರೀಯುತ ಕೆ.ರವೀಂದ್ರ ಶೆಟ್ಟಿಯವರನ್ನು ಮರುನೇಮಕ ಮಾಡಿ ಮುಂದುವರೆಸಬೇಕೆಂದು ಕರ್ನಾಟಕ ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ( ಹಿಂದುಳಿದ ವರ್ಗ ಪ್ರವರ್ಗ -1 ) ಜನಾಂಗಗಳ ಒಕ್ಕೂಟದ ವತಿಯಿಂದ ಮಾಧ್ಯಮದ ಮೂಲಕ ಮನವಿ ಸಲ್ಲಿಸುತ್ತಿದ್ದೇವೆ ಎಂದು ತಿಳಿಸಿದರು . ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮಂಜುನಾಥ ಎಲ್.ಎ. ತುಮಕೂರು , ಕಾರ್ಯದರ್ಶಿ ಪ್ರತಾಪ್ ಜೋಗಿ , ಓ ಚಿತ್ರದುರ್ಗ , ಮಹಿಳಾ ಘಟಕದ ರಾಜ್ಯ ಅಧ್ಯಕ್ಷರಾದ ಚೈತ್ರ ಬೆಂಗಳೂರು , ಸಂಘಟನಾ ಕಾರ್ಯದರ್ಶಿ ವಿಲಾಸ್‌ಕುಮಾರ್‌ ಶಿಂಧೆ ವಿಜಯಪುರ , ರಾಜು ಕೆ.ಜೆ , ಯುವ ಘಟಕದ ಪ್ರಶಾಂತ್ ಹೆಳವರ , ಹನುಮೇಶ್ ಯಾದವ್ ಉಪಸ್ಥಿತರಿದ್ದರು .

(City Today News – 9341997936)

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.