ಬಿ.ಪ್ಯಾಕ್‌ನಿಂದ ನಾಗರಿಕ ನಾಯಕತ್ವ ತರಬೇತಿಗೆ ಅರ್ಜಿ ಆಹ್ವಾನ

ಬೆಂಗಳೂರು: ರಾಜಕೀಯ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವವರಿಗಾಗಿ ಪೊಲಿಟಿಕಲ್ ಆಕ್ಷನ್ ಕಮಿಟಿ (ಬಿ.ಪ್ಯಾಕ್) ಸಂಸ್ಥೆಯು ಬಿ.ಪ್ಯಾಕ್ ನಾಗರಿಕ ನಾಯಕತ್ವ ತರಬೇತಿ (ಬಿ.ಕ್ಲಿಪ್) ಕಾರ್ಯಕ್ರಮದ 10ನೇ ಆವೃತ್ತಿಗೆ ಅರ್ಜಿ ಆಹ್ವಾನಿಸಿದೆ.

ಈ ತರಬೇತಿಯಲ್ಲಿ ರಾಜಕೀಯ, ನಗರ ಆಡಳಿತ, ನೀತಿ ನಿರೂಪಣೆ, ನಾಯಕತ್ವ, ಚುನಾವಣಾ ಕಾರ್ಯತಂತ್ರ, ಮಾಧ್ಯಮ ನಿರ್ವಹಣೆ ಸೇರಿದಂತೆ ನಾಗರಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಬೇಕಾದ ಎಲ್ಲಾ ರೀತಿಯ ಅರ್ಹತೆಗಳನ್ನು ನೀಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.

ಬಿ.ಕ್ಲಿಪ್ ಕಾರ್ಯಕ್ರಮದ ಮುಖ್ಯಸ್ಥ ರಾಘವೇಂದ್ರ ಪೂಜಾರಿ ಹೆಚ್.ಎಸ್ ಮಾತನಾಡಿ, “ಬೆಂಗಳೂರಿನ ತಳಮಟ್ಟದಲ್ಲಿ ನಾಗರಿಕರ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುವ ಮತ್ತು ದಕ್ಷ ಆಡಳಿತದ ಮೂಲಕ ಸಮಾಜದಲ್ಲಿ ಬದಲಾವಣೆ ತರುವ ನಾಯಕರನ್ನು ರೂಪಿಸುವುದು ಈ ತರಬೇತಿಯ ಮೂಲ ಉದ್ದೇಶವಾಗಿದೆ. ಕಳೆದ ಒಂಬತ್ತು ವರ್ಷಗಳಲ್ಲಿ 400ಕ್ಕೂ ಹೆಚ್ಚು ನಾಗರಿಕರಿಗೆ ತರಬೇತಿ ನೀಡಲಾಗಿದ್ದು, 10ನೇ ಆವೃತ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಏಪ್ರಿಲ್ 10ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಬಿಬಿಎಂಪಿ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ಚುನಾವಣೆಯಲ್ಲಿ ಸ್ಪರ್ಧಿಸುವವರು ಸಹ ತರಬೇತಿ ಪಡೆದು ಸೂಕ್ತ ರೀತಿಯಲ್ಲಿ ಆಡಳಿತ ನಡೆಸಲು ಅನುಭವ ಪಡೆಯಬಹುದು” ಎಂದು ಹೇಳಿದರು.

ಆಸಕ್ತ ಬೆಂಗಳೂರಿನ ನಾಗರಿಕರು http://www.bpac.in ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ +91-63648 56147, 080-41521797 ಸಂಖ್ಯೆಗಳಿಗೆ ಸಂಪರ್ಕಿಸಿ ಅಥವಾ bclip@bpac.in ಇ-ಮೇಲ್‌ಗೆ ಭೇಟಿ ನೀಡಬಹುದು ಎಂದು ಸಂಸ್ಥೆ ತಿಳಿಸಿದೆ.

City Today News 9341997936

8ನೇ ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನ – 2025


ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘ (ರಿ) ಬೆಂಗಳೂರಿನ ವತಿಯಿಂದ 8ನೇ ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನ ಮಾರ್ಚ್ 22 ಮತ್ತು 23, 2025 ರಂದು ನಡೆಯಲಿದೆ. ಕಾರ್ಯಕ್ರಮವು ಕೊಂಡಜ್ಜಿ ಬಸಪ್ಪ ಸಭಾಭವನ, ಭಾರತ್ ಸೈಟ್ಸ್ ಅಂಡ್ ಗೈಡ್ಸ್ ಆವರಣದಲ್ಲಿ ಬೆಳಗ್ಗೆ 10 ಗಂಟೆಗೆ ಆರಂಭವಾಗಲಿದೆ.

“ಅರಿವೆಂಬುದು ಬಿಡುಗಡೆ” ಸಮ್ಮೇಳನದ ಆಶಯವಾಗಿದೆ.

ಸಮ್ಮೇಳನಾಧ್ಯಕ್ಷೆ ಡಾ. ಎಚ್.ಎಸ್. ಶ್ರೀಮತಿ.

ಸಂಘದ ಪ್ರಮುಖರು:
▶ ಅಧ್ಯಕ್ಷೆ: ಡಾ. ಎಚ್.ಎಲ್. ಪುಷ್ಪ
▶ ಕಾರ್ಯದರ್ಶಿ: ಭಾರತಿ ಹೆಗಡೆ
▶ ಸಹಕಾರ್ಯದರ್ಶಿ: ಸುಮಾ ಸತೀಶ್
▶ ಖಜಾಂಚಿ: ಹಾ.ವಿ. ಮಂಜುಳಾ ಶಿವಾನಂದ

ಈ ಕಾರ್ಯಕ್ರಮವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅವರ ಸಹಯೋಗದಲ್ಲಿ ಆಯೋಜಿಸಲಾಗಿದೆ. ಸಾಹಿತ್ಯ ಮತ್ತು ಲೇಖಕಿಯರ ಅಭಿವೃದ್ದಿಗೆ ಇದು ಮಹತ್ವದ ವೇದಿಕೆಯಾಗಲಿದೆ.

City Today News 9341997936

ಕರ್ನಾಟಕ ಸರ್ಕಾರಿ ನಿವೃತ್ತ ನೌಕರರ ಬೃಹತ್ ಸಮಾವೇಶ: ಬೇಡಿಕೆಗಳ ಈಡೇರಿಕೆಗೆ ಆಗ್ರಹ

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘವು 2025ರ ಏಪ್ರಿಲ್ 4ರಂದು ಅರಮನೆ ಮೈದಾನದ ಪ್ರಿನ್ಸಸ್ ಪ್ರೈನ್ (ಗೇಟ್ ನಂ. 9) ನಲ್ಲಿ ರಾಜ್ಯ ಮಟ್ಟದ ಕಾರ್ಯಾಗಾರ ಹಾಗೂ ಬೃಹತ್ ಸಮಾವೇಶವನ್ನು ಆಯೋಜಿಸುತ್ತಿದೆ. ಈ ಸಮಾವೇಶದಲ್ಲಿ ಸುಮಾರು 30,000ಕ್ಕೂ ಹೆಚ್ಚು ನಿವೃತ್ತ ನೌಕರರು ಮತ್ತು ಕುಟುಂಬ ಪಿಂಚಣಿದಾರರು ಭಾಗವಹಿಸಲಿದ್ದಾರೆ ಎಂದು ಸಂಘದ ಅಧ್ಯಕ್ಷ ಡಾ. ಎಲ್. ಬೈರಪ್ಪ ತಿಳಿಸಿದ್ದಾರೆ.

ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಾ. ಬೈರಪ್ಪ, ನಿವೃತ್ತ ನೌಕರರ ದೀರ್ಘಕಾಲದ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲು ಈ ಸಮಾವೇಶವನ್ನು ಆಯೋಜಿಸಲಾಗಿದೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಮಾವೇಶವನ್ನು ಉದ್ಘಾಟಿಸಲಿದ್ದು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಮತ್ತು ಇತರ ಸಚಿವರು ಭಾಗವಹಿಸಲಿದ್ದಾರೆ.

ಪ್ರಮುಖ ಬೇಡಿಕೆಗಳು:
* 7ನೇ ವೇತನ ಆಯೋಗದ ಶಿಫಾರಸುಗಳನ್ನು ತಕ್ಷಣವೇ ಜಾರಿಗೊಳಿಸಬೇಕು.
* “ಸಂಧ್ಯಾ ಕಿರಣ” ಹೆಸರಿನ ನಗದು ರಹಿತ ಆರೋಗ್ಯ ಭಾಗ್ಯ ಯೋಜನೆ ಜಾರಿಗೊಳಿಸಬೇಕು.
* 70-80 ವರ್ಷ ವಯೋಮಿತಿಯ ನಿವೃತ್ತ ನೌಕರರು ಮತ್ತು ಪಿಂಚಣಿದಾರರಿಗೆ ಮೂಲ ಪಿಂಚಣಿಯ 10% ಆರ್ಥಿಕ ನೆರವು ನೀಡಬೇಕು.
* ಜುಲೈ 1, 2022 ರಿಂದ ಜುಲೈ 31, 2024 ರವರೆಗೆ ನಿವೃತ್ತರಾದವರಿಗೆ ಗಳಿಕೆ ರಜೆ ನಗದೀಕರಣ, DCRG ಮತ್ತು ಕಮ್ಯುಟೇಶನ್ ಸೌಲಭ್ಯಗಳನ್ನು ಮಂಜೂರು ಮಾಡಬೇಕು.
“ಸರ್ಕಾರವು ನಿವೃತ್ತ ನೌಕರರ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಿದೆ. ಎರಡು ವರ್ಷಗಳಿಂದ ನಗದು ರಹಿತ ಆರೋಗ್ಯ ಭಾಗ್ಯ ಯೋಜನೆಗೆ ಒತ್ತಾಯಿಸುತ್ತಿದ್ದರೂ ಪ್ರಯೋಜನವಾಗಿಲ್ಲ. 7ನೇ ವೇತನ ಆಯೋಗವು ‘ಸಂಧ್ಯಾ ಕಿರಣ’ ಎಂಬ ಹೊಸ ಯೋಜನೆಯನ್ನು ಶಿಫಾರಸು ಮಾಡಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು” ಎಂದು ಡಾ. ಬೈರಪ್ಪ ಆಗ್ರಹಿಸಿದರು.
ಈ ಸಮಾವೇಶವು ನಿವೃತ್ತ ನೌಕರರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಮತ್ತು ಸರ್ಕಾರಕ್ಕೆ ಮನವಿ ಸಲ್ಲಿಸಲು ಒಂದು ವೇದಿಕೆಯಾಗಲಿದೆ. ಈ ಮೂಲಕ ನಿವೃತ್ತ ನೌಕರರ ಹಕ್ಕುಗಳನ್ನು ರಕ್ಷಿಸಲು ಸಂಘವು ಬದ್ಧವಾಗಿದೆ ಎಂದು ಅವರು ಹೇಳಿದರು.

“ನಾಟ್ಯ ನಿವೇದನಂ” – ಕು. ಧೃತಿ ಪಿ. ಸಿಂಹ ಅವರ ಭರತನಾಟ್ಯ ರಂಗಪ್ರವೇಶ

ಬೆಂಗಳೂರು: ಅಂಜಲಿ ನೃತ್ಯ ಮತ್ತು ಸಂಗೀತ ಶಾಲೆ, ಶ್ರೀಮತಿ ಸುಕೃತ ರಾವ್ ಹಾಗೂ ಶ್ರೀ ಸಮೀರ ಸಿಂಹ ಅವರ ಆಶ್ರಯದಲ್ಲಿ, ಕು. ಧೃತಿ ಪಿ. ಸಿಂಹ ಅವರ ಭರತನಾಟ್ಯ ರಂಗಪ್ರವೇಶ “ನಾಟ್ಯ ನಿವೇದನಂ” ನಾಟ್ಯಾನುಭಾವಿಗಳಿಗೆ ವೈಭವೋಪೇತವಾಗಿ ಜರುಗಲಿದೆ.

ಈ ವಿಶೇಷ ಕಾರ್ಯಕ್ರಮ ಭಾನುವಾರ, ಮಾರ್ಚ್ 16, 2025, ಸಂಜೆ 5:30 ಕ್ಕೆ ಅ.ಡಿ.ಅ. ರಂಗಮಂದಿರ, ಜೆಸಿ ರಸ್ತೆ, ಬೆಂಗಳೂರು ಯಲ್ಲಿ ನಡೆಯಲಿದೆ. ಧೃತಿ ಅವರು ವಿದುಷಿ ಶ್ರೀಮತಿ ಅಂಜಲಿ ಅವರ ಶಿಷ್ಯೆಯಾಗಿದ್ದು, ಅವರ ಮಾರ್ಗದರ್ಶನದಲ್ಲಿ ಶಿಷ್ಟಸಂಪನ್ನ ನೃತ್ಯಪ್ರದರ್ಶನ ನೀಡಲಿದ್ದಾರೆ.

ಕಾರ್ಯಕ್ರಮಕ್ಕೆ ಗಣ್ಯ ವ್ಯಕ್ತಿಗಳು ಮುಖ್ಯ ಅತಿಥಿಗಳಾಗಿ ಹಾಜರಾಗಲಿದ್ದಾರೆ:

ಪ್ರಾಧ್ಯಾಪಕ ಲಿಂಗರಾಜ್ ಗಾಂಧಿ, ವೈಸ್ ಚಾನ್ಸಲರ್, ಬೆಂಗಳೂರು ನಗರ ವಿಶ್ವವಿದ್ಯಾಲಯ

ಶ್ರೀ ರಾಘವೇಂದ್ರ, ಮ್ಯಾನೇಜಿಂಗ್ ಟ್ರಸ್ಟೀ, ಅನನ್ಯ ಫೌಂಡೇಶನ್

ವಿದುಷಿ Dr. ಮಾಲಿನಿ ರವಿಶಂಕರ್, ಪ್ರಖ್ಯಾತ ಭರತನಾಟ್ಯ ಕಲಾವಿದೆ, ಆರ್ಟಿಸ್ಟಿಕ್ ಡೈರೆಕ್ಟರ್, ಲಾಸ್ಯ ವರ್ಧನ ಟ್ರಸ್ಟ್


ನೃತ್ಯಪ್ರಿಯರು ಹಾಗೂ ಕಲಾ ಅಭಿಮಾನಿಗಳು ಈ ಸಂಗೀತ-ನೃತ್ಯ ರಸದೌತಣಕ್ಕೆ ಸಾಕ್ಷಿಯಾಗಲು ಸ್ವಾಗತ.

City Today News 9341997936

Attack on Republic TV Journalists at Jadavpur University Sparks Outrage; Press Club of Bangalore Condemns Incident

Bangalore, March 14: The Press Club of Bangalore has strongly condemned the recent attack on journalists from Republic TV at Jadavpur University, Kolkata. The incident, where media personnel were reportedly heckled, locked inside the registrar’s office, and subjected to intimidation while performing their journalistic duties, has sparked widespread concern over press freedom in the country.

In a statement released by Sridhar R, President of the Press Club of Bangalore, the organization termed the attack a “blatant assault on democratic values” and called for immediate government intervention.

“Journalists play a crucial role in ensuring transparency and accountability in our society. Any attempt to intimidate or silence them is an attack on democracy itself. Such acts of violence against the press are unacceptable and must be dealt with swiftly,” the statement read.

The Press Club of Bangalore has urged the government to take the following actions:

1. Conduct a thorough and impartial investigation into the attack to identify and hold the perpetrators accountable.


2. Ensure the safety and security of journalists, especially in sensitive locations like university campuses.


3. Implement strong measures to prevent similar incidents and reaffirm its commitment to press freedom.



The attack at Jadavpur University is not an isolated event but reflects the increasing challenges faced by journalists in carrying out their duties without fear or interference. Media organizations and press bodies have called for stringent action to ensure that the fundamental right to freedom of the press is upheld.

This incident raises serious concerns about the security of journalists and the shrinking space for independent reporting in India. The Press Club of Bangalore has urged authorities to take a firm stand against such attacks to protect media professionals and uphold the democratic ethos of the nation.

City Today News 9341997936