ಪಶ್ಚಿಮ ಬಂಗಾಳದಲ್ಲಿ ಕರ್ತವ್ಯಕ್ಕೆಂದು ತೆರಳಿದ್ದ ಚಾನೆಲ್ವೊಂದರ ಪತ್ರಕರ್ತನನ್ನು ಪೊಲೀಸರು ಬಂಧಿಸಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಜಕ್ಕೂ ಖಂಡನೀಯ. ವಾಸ್ತವದ ಚಿತ್ರಣವನ್ನು ಸಮಾಜಕ್ಕೆ ತೋರಿಸಲು ಪತ್ರಕರ್ತರು ಕಾರ್ಯನಿರತರಾಗಿ ಕೆಲಸ ಮಾಡುವ ಭಯದ ಸನ್ನಿವೇಶ ಸೃಷ್ಟಿಯಾಗಿದೆ. ಈ ರೀತಿಯ ಘಟನೆಗಳು ಭಾರತದ ಪ್ರಜಾತಂತ್ರ ವ್ಯವಸ್ಥೆಯನನು ಬುಡಬೇಮಲು ಮಾಡುವ ಆತಂಕವಿದೆ.
ಈ ಕೂಡಲೇ ಪಶ್ಚಿಮ ಬಂಗಾಳ ಸರ್ಕಾರ ಬಂಧಿಸಿರುವ ಪತ್ರಕರ್ತರನ್ನು ಬಿಡುಗಡೆ ಮಾಡಬೇಕೆಂದು ಬೆಂಗಳೂರು ಪ್ರೆಸ್ಕ್ಲಬ್ ಆಗ್ರಹಿಸುತ್ತದೆ. ಜತೆಗೆ ಈ ರೀತಿಯ ಘಟನೆಗಳನ್ನು ಬೆಂಗಳೂರು ಪ್ರೆಸ್ಕ್ಲಬ್ ತೀವ್ರವಾಗಿ ವಿರೋಧಿಸುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನ ಅಧ್ಯಕ್ಷರಾದ ಆರ್. ಶ್ರೀಧರ ಮತ್ತು ಪ್ರಧಾನ ಕಾರ್ಯದರ್ಶಿಗಳಾದ ಬಿ.ಪಿ. ಮಲ್ಲಪ್ಪ ನವರು ತಿಳಿಸಿದರು.
(ಕೆ.ಬಿ.ಜೆ.ಎನ್.ಎಲ್) . ಕೃಷ್ಣಾ-ಕಾಡಾದ ಹಸನಾಪುರ ವಿಭಾಗ ಮತ್ತು ಉಪ ವಿಭಾಗದ ಕಛೇರಿಗಳನ್ನು ಕಿತ್ತೂರು ಕರ್ನಾಟಕಕ್ಕೆ ಸ್ಥಳಾಂತರಗೊಳಿಸುವ ಹೈದ್ರಾಬಾದ್ ಕರ್ನಾಟಕ ವಿರೋಧಿ ನಿತಿಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಹಾಗೂ ಈ ಕಛೇರಿ ಸ್ಥಳಾಂತರದಿಂದ ಲಕ್ಷಾಂತರ ಜನ ರೈತರಿಗೆ ತೊಂದರೆ ಉಂಟು ಆಗುತ್ತದೆ ಮತ್ತು 150ಕ್ಕೂ ಹೆಚ್ಚು ಹೈದ್ರಾಬಾದ್ ಕರ್ನಾಟಕದ ಸರ್ಕಾರಿ ನೌಕರರಿಗೆ ಅನ್ಯಾಯವಾಗುವುದು ವಿಷಾದನೀಯವಾಗಿದೆ.
ಹೈದ್ರಾಬಾದ್ ಕರ್ನಾಟಕವು ಕರ್ನಾಟಕ ರಾಜ್ಯದಲ್ಲಿ ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದು, ಈ ಭಾಗವು ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಅತ್ಯಂತ ಹಿಂದುಳಿದ ಪ್ರದೇಶವಾಗಿರುವುದರಿಂದ ಈ ಹಿಂದೆ 2013 ರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ 371(ಜೆ) ಕಲಂನ್ನು ಜಾರಿಗೆ ತಂದು ಈ ಭಾಗದ ಸರ್ವಾಂಗೀಣ ಅಭಿವೃದ್ದಿಗಾಗಿ ಶ್ರಮಿಸಿರುವುದು ಸ್ವಾಗತಾರ್ಹವಾಗಿದೆ. (ಕೆ.ಬಿ.ಜೆ.ಎನ್.ಎಲ್) ಹಸನಾಪೂರ ಕಾರ್ಯಪಾಲಕ ಇಂಜಿನಿಯರ್ ಹೊಲಗಾಲುವ ವಿಭಾಗ-2, ಕಛೇರಿಗಳನ್ನು ಈ ಭಾಗದಿಂದ ಸ್ಥಳಾಂತರ ಮಾಡುವುದರಿಂದ 150ಕ್ಕೂ ಅಧಿಕ ಸರ್ಕಾರಿ ಹುದ್ದೆಗಳು ಕಳೆದುಕೊಳ್ಳುತ್ತವೆ ಮತ್ತು ಇಲ್ಲಿಯ ಯುವಕರಿಗೆ ಮತ್ತು ಲಕ್ಷಾಂತರ ರೈತರಿಗೆ ಮಾಡುವ ಬಹುದೊಡ್ಡ ಮೋಸವಾಗಿದೆ. ಈಗಾಗಲೇ ಈ ಭಾಗದ ರೈತರು ಕೆಲವೊಮ್ಮ ಅತೀವೃಷ್ಟಿಯಿಂದ ಕೆಲವೊಮ್ಮ ಅನಾವೃಷ್ಟಿಯಿಂದ ಕಂಗಾಲಾಗಿ ನೇಣಿಗೆ ಶರಣಾಗಿರುವ ಹಲವಾರು ಪ್ರಕರಣಗಳು ಸರ್ಕಾರದ ಗಮನದಲ್ಲಿದ್ದು, ಆದರೂ ಕೂಡ ಕೆಲವೊಂದು ಪಟ್ಟಭದ್ರ ಹಿತಾಶಕ್ತಿಗಳ ಕುತಂತ್ರದಿಂದ ನಮ್ಮ ಭಾಗದಲ್ಲಿರುವ ಕಛೇರಿಗಳನ್ನು ಕಿತ್ತೂರು ಕರ್ನಾಟಕಕ್ಕೆ ಸ್ಥಳಾಂತರ ಮಾಡಲು ಸರ್ಕಾರ ಆದೇಶ ಹೊರಡಿಸಿರುವುದು ನೋವಿನ ಸಂಗತಿಯಾಗಿದೆ ಹಾಗೂ ಇದರಿಂದಾಗಿ ಈ ಭಾಗದಲ್ಲಿ ಉದ್ಯೋಗ ಸೃಷ್ಟಿಯಾಗದೇ ಮತ್ತು ಈ ಭಾಗದ ಸರ್ಕಾರಿ ನೌಕರರಿಗೆ 371(ಜೆ) ಕಲಂ ಅಡಿ ಮುಂಬಡ್ತಿ ಸಿಗದೆ ಎಲ್ಲಾ ರಂಗದಲ್ಲೂ ಈ ಭಾಗಕ್ಕೆ ಅನ್ಯಾಯವಾಗುವುದು ವಾಸ್ತವವಾಗಿದೆ.
ಅದಕ್ಕಾಗಿ ನಾವುಗಳು ದಿನಾಂಕ: 21-02-2024 ರಂಂದು ಪ್ರೀಡಂಪಾರ್ಕ ಬೆಂಗಳೂರು ಇಲ್ಲಿ ಹೈದ್ರಾಬಾದ್ ಕರ್ನಾಟಕ ವಿರೋಧಿ ನೀತಿಯನ್ನು ಖಂಡಿಸಿ ಉಗ್ರವಾದ ಪ್ರತಿಭಟನೆ ಮಾಡುತ್ತಿದ್ದು, ಹೈದ್ರಾಬಾದ್ ಕರ್ನಾಟಕದ ಒಳತಿಗಾಗಿ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಈ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕೆಂದು ಈ ಮೂಲಕ ಮನವಿ ಮಾಡಿಕೊಳ್ಳುತ್ತೇವೆ. ಗಂಭೀರವಾಗಿ ಇದನ್ನು ಪರಿಗಣಿಸಿ ಮಾನ್ಯ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಹಾಗೂ ಸದನದಲ್ಲಿ ಚರ್ಚಿಸಿ ಕಛೇರಿ ಸ್ಥಳಾಂತರದ ವಿಷಯವನ್ನು ಇಲ್ಲಿಗೆ ಕೈಬಿಟ್ಟು ಹೈದ್ರಾಬಾದ ಕರ್ನಾಟಕದ ರೈತರಿಗೆ ನ್ಯಾಯ ಒದಗಿಸಿಕೊಡಬೇಕೆಂದು ತಮ್ಮಲ್ಲಿ ಕಳಕಳಿಯ ಮನವಿಯನ್ನು ಮಾಡುತ್ತೇವೆ. ಹಾಗೂ ಹೈದ್ರಾಬಾದ್ ಕರ್ನಾಟಕದ ಕಛೇರಿಯನ್ನು ಬೇರೆ ವಿಭಾಗಕ್ಕೆ ಸ್ಥಳಾಂತರ ಮಾಡಲು ಸಚಿವ ಸಂಪುಟದಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಬೇಕಾಗಿತ್ತು. ಆದರೆ ಸಚಿವ ಸಂಪುಟದಲ್ಲಿ ಯಾವುದೇ ಚರ್ಚ ಮಾಡದೆ ಈ ರೀತಿಯ ಹೈದ್ರಾಬಾದ ಕರ್ನಾಟಕ ಜನ ವಿರೋಧಿ ನೀತಿ ಮಾಡಿರುವುದು ತುಂಬಾ ನೋವಿನ ವಿಷಯವಾಗಿದೆ ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.
ಪತ್ರಿಕಾ ಗೋಷ್ಠಿ ಯಲ್ಲಿ ಹೋರಾಟ ಸಮಿತಿಯ ಮುಕಾಂಡರಾದ ಸೈಬಣ್ಣಾ ಜಮಾದಾರ,ಚನ್ನವೀರ ತಂಗ, ಶಿವು ರಾಠೋಡ್,ಸಂಜು ಹೊಡಲ್ಕರ್ ಮತ್ತು ಡಿ.ಎಸ್. ಹಡಲಗಿ ಉಪಸ್ಥಿತರಿದ್ದರು.
ನೇರಪಾವತಿಯಡಿಯಲ್ಲಿ ಸ್ವಚ್ಛತಾ ಕೆಲಸ ನಿರ್ವಹಿಸುತ್ತಿರುವ 24005 ಜನ ಪೌರಕಾರ್ಮಿಕರನ್ನು ಖಾಯಂ ಮಾಡಲು ಅನುಮೋದನೆ ನೀಡಿ ಉಳಿದಿರುವ ಪೌರಕಾರ್ಮಿಕರನ್ನು ಹಂತ ಹಂತವಾಗಿ ಖಾಯಂಗೊಳಿಸುವುದಾಗಿ ಐತಿಹಾಸಿಕ ನಿರ್ಣಯ ಕೈಗೊಂಡ ರಾಜ್ಯ ಸರ್ಕಾರಕ್ಕೆ ಸಮಸ್ತ ಪೌರಕಾರ್ಮಿಕರ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ.
ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಮೇಲ್ಕಂಡ ಮಹಾಸಂಘದಿಂದ ಪೌರಕಾರ್ಮಿಕರ ಒಳಿತಿಗಾಗಿ, ಏಳಿಗೆಗಾಗಿ ಹಗಲಿರುಳು ರಾಜ್ಯಾಧ್ಯಕ್ಷರು ದುಡಿಯುತ್ತಿರುವುದು ಸರಿಯಷ್ಟೆ. ಹಾಗೆ ನಮ್ಮ ಪೌರಕಾರ್ಮಿಕರು ಗುತ್ತಿಗೆ ಪದ್ಧತಿಯಲ್ಲಿ ಜೀತದಾಳುಗಳಂತೆ ದುಡಿಯುತ್ತಿರುವುದನ್ನು ಕಂಡು ಮರುಗಿ ಜೀತಪದ್ಧತಿಯಿಂದ ಮುಕ್ತಿ ಕೊಡುವಂತೆ ಕೋರಿ ನ್ಯಾಯಾಲಯದಲ್ಲಿ ದಾವೆ ಹೂಡಿ ಕಾನೂನು ಹೋರಾಟದಲ್ಲಿ ಗೆದ್ದು, ರಾಜ್ಯಮಟ್ಟದಲ್ಲಿ ಕಾರ್ಮಿಕರನ್ನೆಲ್ಲಾ ಒಗ್ಗೂಡಿಸಿ ರಾಜ್ಯಾದ್ಯಂತ ಹೋರಾಟಗಳನ್ನು ಮಾಡಿದಾಗ ಅಂದಿನ ಮುಖ್ಯಮಂತ್ರಿಗಳಾಗಿದ್ದ ಸನ್ಮಾನ್ಯ ಶ್ರೀ.ಸಿದ್ದರಾಮಯ್ಯ ರವರು ಗುತ್ತಿಗೆ ಪದ್ಧತಿಯನ್ನು ರದ್ದುಮಾಡಿ ರಾಜ್ಯಾದ್ಯಂತ ನೇರವೇತನ ಪದ್ಧತಿಯನ್ನು ಜಾರಿ ಮಾಡಿ ಪೌರಕಾರ್ಮಿಕರ ಮೊಗದಲ್ಲಿ ಸಂತಸ ತಂದಿರುತ್ತಾರೆ.
ಇದರಿಂದ ಸುಮಾರು 35 ಸಾವಿರ ಪೌರಕಾರ್ಮಿಕರಿಗೆ ಸೇವಾಭದ್ರತೆಯಿಂದ ಅನುಕೂಲವಾಗಿರುತ್ತದೆ. ನಮ್ಮ ಭಾರತದೇಶದಲ್ಲಿ ಯಾವುದೇ ರಾಜ್ಯದಲ್ಲಿಯೂ ಸಹ ಗುತ್ತಿಗೆ ಪದ್ಧತಿ ರದ್ದಾಗಿರುವುದಿಲ್ಲ. ನಮ್ಮ ರಾಜ್ಯದಲ್ಲಿ ಮಾತ್ರ ಗುತ್ತಿಗೆ ಪದ್ಧತಿ ರದ್ದಾಗಿರುತ್ತದೆ.
ಕಳೆದ ಬಾರಿ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಸಮಾಜದಲ್ಲಿ ಕಟ್ಟಕಡೆಯ ಕೆಲಸ ಮಾಡುವ ಎಲ್ಲಾ ಸ್ವಚ್ಛತಾ ಕೆಲಸ ಮಾಡುವ ಎಲ್ಲಾ ಪೌರಕಾರ್ಮಿಕರನ್ನು ಖಾಯಂ ಮಾಡುವುದಾಗಿ ಆಶ್ವಾಸನೆ ನೀಡಿದ್ದು, ಅದರಂತೆ ನಮ್ಮ ಮಹಾಸಂಘದ ಹೋರಾಟದ ಸಂದರ್ಭದಲ್ಲಿ ಅಂದಿನ ವಿರೋಧ ಪಕ್ಷದ ನಾಯಕರಾಗಿದ್ದ ಶ್ರೀ ಸಿದ್ದರಾಮಯ್ಯ ರವರು ಖುದ್ದು ಬಂದು ನಮ್ಮ ಸರ್ಕಾರದ ಬಂದ ತಕ್ಷಣ ಎಲ್ಲಾ ಪೌರಕಾರ್ಮಿಕರನ್ನು ಖಾಯಂ ಮಾಡುವುದಾಗಿ ಹೇಳಿರುತ್ತಾರೆ.
ಅದರಂತೆ ಈಗ ಬಡ್ಡೆಟ್ನಲ್ಲಿ 24005 ಜನ ಪೌರಕಾರ್ಮಿಕರನ್ನು ಖಾಯಂಗೊಳಿಸಲು ಅನುಮೋದಿಸಲಾಗಿದೆ ಎಂದು ಉಳಿಕೆ ಪೌರಕಾರ್ಮಿಕರನ್ನು ಹಂತ ಹಂತವಾಗಿ ಖಾಯಂಗೊಳಿಸುವುದಾಗಿ ಘೋಷಿಸಿರುತ್ತಾರೆ. ಹಾಗೆ 592 ಒಳಚರಂಡಿ ಸಹಾಯಕ ಕಾರ್ಮಿಕರನ್ನು ಖಾಯಂ ಪ್ರಕ್ರಿಯೆಗೆ ಚಾಲನೆ ನೀಡಿರುತ್ತಾರೆ. ಕೊಟ್ಟ ಮಾತನ್ನು ಉಳಿಸಿಕೊಂಡಂತಹ ಸನ್ಮಾನ್ಯ ಶ್ರೀ.ಸಿದ್ದರಾಮಯ್ಯ ರವರಿಗೆ, ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ.ಶಿವಕುಮಾರ್ ರವರಿಗೆ ಹಾಗೂ ಸಚಿವ ಸಂಪುಟಕ್ಕೆ ಸಮಸ್ತ ಪೌರಕಾರ್ಮಿಕರ ಪರವಾಗಿ ಹೃತ್ತೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ.
ಹಾಗೆ ಹಿಂದಿನ ಸರ್ಕಾರದ ಆದೇಶದಂತೆ ಗುತ್ತಿಗೆ ಪದ್ಧತಿಯಲ್ಲಿ (ಜೀತಪದ್ಧತಿ) ಕೆಲಸ ನಿರ್ವಹಿಸುವ ಲಾರಿ, ಆಟೋ ವಾಹನ ಚಾಲಕರುಗಳು, ಹೆಲ್ಪರ್ಗಳು ಕೆ.ಎಂ.ಸಿ ಕಾಯ್ದೆಯ ಪ್ರಕಾರ ಪೌರಕಾರ್ಮಿಕರೆ ಆಗಿದ್ದು ಗುತ್ತಿಗೆ ಪದ್ಧತಿಯನ್ನು ರದ್ದು ಮಾಡಿ ನೇರವೇತನ ಪಾವತಿ ಮಾಡಿ ಎಂದು ಸರ್ಕಾರಕ್ಕೆ ಒತ್ತಾಯ ಮಾಡುತ್ತೇವೆ. ಈ ಕೂಡಲೇ ನೇರಪಾವತಿ ಅಡಿಯಲ್ಲಿ ಸೇರಿಸಲು ಈ ಮೂಲಕ ಸರ್ಕಾರವನ್ನು ಮತ್ತೊಮ್ಮೆ ಆಗ್ರಹಿಸುತ್ತಿದ್ದೇವೆ ಎಂದು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಮಹಾಸಂಘದ ವತಿಯಿಂದ ತಿಳಿಸಲಾಯಿತು.
ರಾಷ್ಟ್ರೀಯ ಸಂಗೀತ ಮತ್ತು ನೃತ್ಯ ಉತ್ಸವ – 23ರಿಂದ25ಫೇಬ್ರವರಿ2024 ಕಾಡು ಮಲ್ಲೇಶ್ವರ ಬಯಲು ರಂಗ ಮಂಟಪ, ಮಲ್ಲೇಶ್ವರ, ಬೆಂಗಳೂರು.
ಖ್ಯಾತ ಸಂಗೀತಗಾರ ಡಾ ಪುಸ್ತಕಂ ರಾಮ ನೇತೃತ್ವದ ಸಂಗೀತ ಸಂಭ್ರಮ ಟ್ರಸ್ಟ್ ಉದಯೋನ್ಮುಖ ಕಲಾವಿದರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯನ್ನು ಒದಗಿಸುತ್ತದೆ. ಸಾರ್ವಜನಿಕರು ಮತ್ತು ಯುವಕರಲ್ಲಿ ಭಾರತೀಯ ಸಂಸ್ಕೃತಿಯನ್ನು ಪ್ರೋತ್ಸಾಹಿಸಲು ಮತ್ತು ಉತ್ತೇಜಿಸಲು ಅಪ್ರತಿಮ ಸಂಗೀತಗಾರರು ಮತ್ತು ನೃತ್ಯಗಾರರ ಸಹಯೋಗದಲ್ಲಿ ಪ್ರದರ್ಶನಗಳನ್ನು ಆಯೋಜಿಸುತ್ತದೆ. ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಮತ್ತು ಸಂಪ್ರದಾಯಗಳನ್ನು ಸಂರಕ್ಷಿಸುವ ಗುರಿಯನ್ನು ಹೊಂದಿದೆ. ವಿವಿಧ ಶಾಲೆಗಳ ವಿಶೇಷ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳು ಸಂಗೀತ ಮತ್ತು ನೃತ್ಯದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅನುವು ಮಾಡಿಕೊಡುವ ಸರ್ವರನ್ನು ಒಳಗೊಳಂಡ ಉತ್ಸವ ಇದಾಗಿದೆ. ವಾರ್ಷಿಕ ಕಾರ್ಯಾಗಾರಗಳನ್ನು ಆಯೋಜಿಸುತ್ತಾ ಬಂದಿದ್ದು, ಬೆಂಗಳೂರಿನ ವಿದ್ಯಾರ್ಥಿಗಳನ್ನು ಸಾಂಪ್ರದಾಯಿಕ ಕಲಾ ಪ್ರಕಾರಗಳನ್ನು ಕಲಿಯಲು ಮತ್ತು ತೊಡಗಿಸಿಕೊಳ್ಳಲು ಆಕರ್ಷಿಸುತ್ತಿದೆ.
ವೀಣಾ ಮೂರ್ತಿ ವಿಜಯ್ ಅವರು ಕೂಚಿಪುಡಿ ನರ್ತಕಿ ಮತ್ತು ನೃತ್ಯ ಸಂಯೋಜಕರಾಗಿ ಜನಪ್ರಿಯರಾಗಿದ್ದಾರೆ. ಜಾಗತಿಕವಾಗಿ ಮೆಚ್ಚುಗೆ ಪಡೆದ ಇವರ ನೃತ್ಯ ಸಂಯೋಜನೆಗಳು ವಿವಿಧ ನೃತ್ಯ ಮತ್ತು ಸಂಗೀತ ಪ್ರಕಾರಗಳ ಸೊಗಸಾದ ಸಮ್ಮೇಳನಕ್ಕಾಗಿ ಗಮನಸೆಳೆದಿವೆ. ಸಾಮಾಜಿಕ ಪ್ರಸ್ತುತತೆಗೆ ಗಮನ ಸೆಳೆದಿರುವ ಇವರ ನಿರ್ಮಾಣಗಳು, ಕಲಾವಲಯದ ಮೇಲೆ ಮಹತ್ವದ ಪ್ರಭಾವ ಬೀರಿವೆ. ವೀಣಾ ಅವರ ನೃತ್ಯ ಸಂಯೋಜನೆಯ ಸಾಧನೆಗಳನ್ನು ವಿಶ್ವಾದ್ಯಂತ ಗುರುತಿಸಲಾಗಿದೆ ಮತ್ತು ಸಂಭ್ರಮಿಸಲಾಗಿದೆ.
ರೇವತಿ ಕಾಮತ್, ವಿಭಿನ್ನ ರೀತಿಯ ಅಭಿವ್ಯಕ್ತಿಗಳನ್ನು ಸಂಯೋಜಿಸುವುದು, ವ್ಯಕ್ತಿಗಳನ್ನು ಹೆಚ್ಚು ಪ್ರಬುದ್ಧ ಜೀವನ ವಿಧಾನದ ಕಡೆಗೆ ಕರೆದೊಯ್ಯುತ್ತದೆ ಎಂದು ನಂಬಿದವರು. ಹರಿದಾಸ ಸಾಹಿತ್ಯವನ್ನು ನಿರಂತರವಾಗಿ ಬಳಸಿಕೊಳ್ಳುವ ಮೂಲಕ ಈ ಉತ್ತುಂಗಕ್ಕೇರಿದ ಜಾಗೃತಿಯನ್ನು ಜಾಗತಿಕವಾಗಿ ಹಂಚಿಕೊಳ್ಳುವುದು ಇವರ ಗುರಿ. ಈ ಅನುಭವವು ಬಾಹ್ಯ ಸಂತೋಷ ಮತ್ತು ಆಂತರಿಕ ಸ್ವೀಕೃತಿಯ ನಡುವಿನ ಪರಸ್ಪರ ಕ್ರಿಯೆಯಿಂದ ಉಂಟಾಗುತ್ತದೆ. ಇದು ಗಾಢವಾದ ಸೂಕ್ಷ್ಮ ಕಲಾ ಪ್ರಕಾರಗಳ ಮೂಲಕ ಅರಿತುಕೊಂಡ ಕಾಲಾತೀತ ಸಂಪರ್ಕಕ್ಕೆ ಕಾರಣವಾಗುತ್ತದೆ.
ಕಾಡು ಮಲ್ಲೇಶ್ವರ ಗೆಳೆಯರ ಬಳಗವು ಪ್ರದರ್ಶನ ಜಗತ್ತಿನ ಹಳೆಯ ಪರಿಕಲ್ಪನೆಗಳಿಗೆ ಹೊಸ ಆಯಾಮವನ್ನು ನೀಡುತ್ತಿರುವ ಸಂಸ್ಥೆ.
ಈ ಬಳಗದ ಬಿ.ಕೆ.ಶಿವರಾಂ ಅವರು ಕಲೆ ಮಾನವೀಯತೆಗೆ ದೇವರು ನೀಡಿದ ಕೊಡುಗೆ ಎಂದು ಬಲವಾಗಿ ಪ್ರತಿಪಾದಿಸುತ್ತಾರೆ. ಕಲೆಯನ್ನು ಪ್ರಕೃತಿಯ ಆಭರಣಗಳಿಂದ ತುಂಬಿದ ಜಾಗದಲ್ಲಿ ಅಸ್ವಾದಿಸಬೇಕು – ತಾಜಾ ಗಾಳಿ, ಮರಗಳು, ಹೂವುಗಳು, ಗೋಡೆಗಳಿಲ್ಲ, ಅಡೆತಡೆಗಳಿಲ್ಲದ – ಸಂಸ್ಕೃತಿಯು ಪ್ರಕೃತಿಯೊಂದಿಗೆ ಹೋಗಬೇಕು! ಎನ್ನುತ್ತಾರೆ. ಕೇವಲ ವಿದ್ಯುತ್ ಮತ್ತು ಧ್ವನಿ ಮಾತ್ರ ಪ್ರದರ್ಶನ ಕಲೆಗಳ ಅವಶ್ಯಕತೆ ಎಂದು ಭಾವನೆಗೆ ಒಂದು ಅಪವಾದವಾಗಿದೆ.
ಡಾ.ರಮಾ, ಡಾ. ವೀಣಾ ಮತ್ತು ರೇವತಿ ಸವಾಲನ್ನು ಸ್ವೀಕರಿಸಿದ್ದು ಮತ್ತು ಇದು ಸ್ಮರಣೀಯ ಉತ್ಸವವಾಗಲಿದೆ. 30 ಗಾಯಕರು, 30 ವಾದ್ಯ ಕಲಾವಿದರು ಅವರನ್ನು ಬೆಂಬಲಿಸಲು ಮತ್ತು ಸುಮಾರು 50 ಕಲಾವಿದರ ನೃತ್ಯ ತಂಡಗಳು ಉತ್ಸವದ ರಂಗೇರಿಸಲಿದ್ದಾರೆ. ಅಲ್ಲದೆ ರಂಗದ ಹಿಂದಿನ ಜಾದೂಗಾರ ಕಪ್ಪಣ್ಣ ಕಾರ್ಯಕ್ರಮದ ನಿರ್ವಹಣೆಯ ಮೂಲಕ ಮೆರಗು ನೀಡಲಿದ್ದಾರೆ ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಉತ್ಸವ ಸಮಿತಿಯ ವತಿಯಿಂದ ತಿಳಿಸಲಾಯಿತು.
ಪತ್ರಿಕಾ ಗೋಷ್ಠಿ ಯಲ್ಲಿ ಬಿ.ಕೆ.ಶಿವರಾಂ ರಾಮ ಪುಸ್ತಕಮ್ ವೀಣಾ ಮೂರ್ತಿ ವಿಜಯ್ ರೇವತಿ ಕಾಮತ್ ಶ್ರೀನಿವಾಸ ಜಿ ಕಪ್ಪಣ್ಣ ರವರು ಉಪಸ್ಥಿತರಿದ್ದರು.
To extend its legacy of technical excellence to home builders -through its technical support team
Bangalore, 19th February 2024 : Taking the onus of guiding and assisting customers with right usage of cement in the most critical part of the house ie. Roof Column Foundation, Dalmia Cement is making a tectonic shift in its brand focus with its new campaign “RCF Strong toh Ghar Strong”. The new customer-centric messaging is aimed at creating awareness amongst the home builders and contractors in choosing the right cement, using it in the right way and following best construction practices to build their dream homes.
The campaign that would consolidate Dalmia Cement as the ‘RCF Expert’ will feature Superstar Ranveer Singh. It will be launched through a comprehensive multimedia approach with Superstar Ranveer adding much efficacy to the brand’s message of predominant technical knowledge, and peerless service, as amplified by the slogan, “RCF Strong toh Ghar Strong”.
Commenting on the initiative, Shri Puneet Dalmia, MD & CEO, Dalmia Bharat Limited, said, “During our illustrious journey over the last eight decades, Dalmia Cement has stood shoulder to shoulder to build our nation from its roots, contributing to create iconic national landmarks as well as happy homes for millions. As individuals, we cherish our homes which hold a profound value and place in our lives. Thus, constructing such a generational asset with the proper application of cement and technical expertise not only ensures structural integrity, but also represents an investment for life.”
“Our new brand campaign manifests not just an eminent legacy, but also a commitment to consumer centricity – it conveys a core message that building a home with due care means building it for generations to come,” he said.
Commenting on his collaboration Superstar Ranveer Singh shared, “I have always admired Dalmia Cement for contributing to the construction sector for over 80 years. I am happy to partner with the company & advocate for the vital importance of Roof Column and Foundation in home construction. Together, we aim to educate individuals to make informed choices, ensuring that every structure stands the test of time.”
Mr. Sameer Nagpal, COO, Dalmia Cement (Bharat) Ltd. shared, “We believe that the brand must play a vital role in consumer’s lives so that they can make informed choices. Dalmia Cement has over the years developed proprietary know-how of optimising cement recipe that makes it most suitable for Roof Column and Foundation. These are the most critical elements in the structure of the house and are responsible for its strength and longevity. In addition to providing the right cement for RCF, we also have a strong on-the-ground technical workforce which assists home builders and contractors in using the cement in the right way. The RCF campaign brings to fore this value proposition”.
You must be logged in to post a comment.