MEDALL TO EXPAND ACROSS SOUTH INDIAPlans to open 300-400 centres in 2022

Bangalore, January 18, 2022: In an effort to expand its basket of qualitative diagnostic services and preventive healthcare services, one of South India’s largest chain of medical diagnostic services provider, Medall today announced its plans to expand across South India. Apart from penetrating deeper into Tamilnadu into Tier 2 and 3 cities, Medall will also be expanding into other South Indian states, viz, Karnataka, Andhra Pradesh, Telangana and Kerala. Positioned as a franchisee model, the centres will be in multiple formats comprising of collection centres, mini wellness centres, full service centres, lab collection centres and Medall Care Centres. Medall plans to open about 300 – 400 centres across South India during the year.
Speaking about the expansion, Arjun Ananth, CEO, Medall says “The need for preventive healthcare is now felt more than ever before with rising cases of COVID-19. By expanding across South India, we aim to offer the best-in-class diagnostic and preventive healthcare services with a view to prevent the onset of the virus and other ailments and to enable people to stay in their best of health”.

“By opting to go in for the franchisee model, we are offering an entrepreneurial opportunity, especially women, to own and operate a world-class diagnostic services and offer medical aid with care and compassion. Medall’s franchisee model will enable entrepreneurs to enter the realm of healthcare, added Arjun.

Targeting Tier 2 and 3 cities where the need for diagnostic services is felt much more than metros and Tier 1 cities, Medall aims to bring superior diagnostic services within reach of the common man and make it affordable for more people to avail the services.

City Today News

9341997936

ಜಿಲ್ಲೆ ಮಾಗಡಿ ತಾಲೂಕಿನ ಸೀಗೇಕುಪ್ಪೆ ಗ್ರಾಮಪಂಚಾಯಿತಿಯ ಹಗರಣ ಪಟ್ಟಿ

2017 ಹಾಗೂ 2018 ರಲ್ಲಿ ಮುಖ್ಯ ಮಂತ್ರಿ ಗ್ರಾಮ ವಿಕಾಸ ಯೋಜನೆ ಅಡಿಯಲ್ಲಿ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಸೀಗೇಕುಪ್ಪೆ ಗ್ರಾಮಪಂಚಾಯಿತಿಗೆ ಎರಡು ಕೋಟಿ ರೂಪಾಯಿ ಅನುದಾನ ಮಂಜೂರಾಗಿರುತ್ತದೆ , ಕ್ರಿಯಾಯೋಜನೆ ತಯಾರಾಗಿ ಐದು ವರ್ಷ ಕಳೆದರೂ ಕೂಡ ಶೇಕಡ 50 ರಷ್ಟು ಕೆಲಸಗಳು ಪೂರ್ಣಗೊಂಡಿಲ್ಲ , ಕೆ ಆರ್ ಐ ಡಿ ಎಲ್ ಸಂಸ್ಥೆ ಈ ಕಾಮಗಾರಿ ಗುತ್ತಿಗೆ ಪಡೆದಿದ್ದು ಕೆಲ ಸ್ಥಳೀಯ ರಾಜಕೀಯ ಪುಡಾರಿಗಳನ್ನು ಬಳಸಿಕೊಂಡು ಯೋಜನೆ ಅನುಷ್ಠಾನಗೊಳಿಸುತ್ತಿದೆ ಇದರಲ್ಲಿ ಕೆಲವೊಂದು ಸಿಮೆಂಟ್ ಕಾಂಕ್ರೀಟ್ ಹಾಗೂ ಚರಂಡಿ ಕೆಲಸ ಹೊರತುಪಡಿಸಿದರೆ ಬೇರೆ ಯಾವುದೇ ಕಾಮಗಾರಿ ಆಗಿಲ್ಲ ಹಾಗೂ ನರೇಗಾ ಯೋಜನೆಯಲ್ಲಿ ಪೂರ್ಣಗೊಂಡಿರುವ ಕಾಮಗಾರಿಗೆ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆ ಅಡಿಯಲ್ಲಿಯು ಸೇರಿಸಿ ಅಕ್ರಮವಾಗಿ ನಕಲು ಬಿಲ್ ಮಾಡಲಾಗಿದೆ , ಕೆ ಆರ್ ಐ ಡಿ ಎಲ್ ಸಂಸ್ಥೆ ಮಾಹಿತಿ ಹಕ್ಕಿನಡಿ ಕೇಳಲಾದ ಪ್ರಶ್ನೆಗೆ ಹೇಳಿದೆ , ಇದಕ್ಕೆ ಉದಾಹರಣೆ

1. ಸೀಗೇಕುಪ್ಪೆ ಜನತಾ ಕಾಲೋನಿಯಲ್ಲಿನ ನಂಜುಂಡಯ್ಯನವರ ಮನೆಯಿಂದ ಕರಿಯಪ್ಪನವರ ಮನೆಯವರೆಗೂ ಚರಂಡಿ ಹಾಗೂ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿರುವುದಾಗಿ ಸುಳ್ಳು ಹೇಳಿ ಬಿಲ್ ಪಡೆಯಲಾಗಿದೆ ,

2. ಸೀಗೆಕುಪ್ಪೆಯಲ್ಲಿ ಕಾಂತರಾಜು ರವರ ಮನೆಯಿಂದ ಪಟೇಲ್ ನಾರಾಯಣಪ್ಪನವರ ಮನೆಯವರಿಗೂ ಚರಂಡಿ ನಿರ್ಮಾಣ ಪೂರ್ಣಗೊಳಿಸಿರುವುದಾಗಿ ಸುಳ್ಳು ಹೇಳಿ ಬಿಲ್ ಪಡೆಯಲಾಗಿದೆ , ಆದರೆ ಅಲ್ಲಿ ಕೆಲಸವೇ ಅಗಿಲ್ಲ .

3. ಸೀಗೆಕುಪ್ಪೆಯಲ್ಲಿ ಚಿಕ್ಕಕೆಂಪಯ್ಯನವರ ಮನೆಯತ್ತಿರ ಸಿಮೆಂಟ್ ರಸ್ತೆ ಪೂರ್ಣಗೊಂಡಿರುವುದಾಗಿ ಹೇಳಲಾಗಿದೆ ಅದು ಕೂಡ ನಕಲಿ ,

4. ಚಕ್ರಬಾವಿ ಗ್ರಾಮಕ್ಕೆ ಸೇರಿದ ಚಿಕ್ಕಯ್ಯಸ್ವಾಮಿ ದೇವಸ್ಥಾನದ ಅತ್ತಿರ ಸೌಚಾಲಯ ನಿರ್ಮಿಸಿದ್ದು , ಇದಕ್ಕೆ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ 5 ಲಕ್ಷ ಬಿಲ್ ಪಡೆಯಲಾಗಿದೆ , ಹಾಗೂ 14 ನೇ ಹಣಕಾಸಿನ ಯೋಜನೆ ಅಡಿಯಲ್ಲಿ 99,120 ರೂಗಳನ್ನು ಮತ್ತೆ ಬಿಲ್ ಮಾಡಲಾಗಿದೆ .

5. ಅರಳುಕುಪ್ಪೆ ಗ್ರಾಮದಲ್ಲಿ ರಂಗಸ್ವಾಮಯ್ಯರವರ ಮನೆಯಿಂದ ವೆಂಕಟರಾಮಯ್ಯನವರ ಮನೆಯವರಿಗೆ ಹಾಗೂ ನಂಜುಂಡಯ್ಯನವರು ಮನೆಯಿಂದ ಗುರುಬಸವಯ್ಯನವರು ಮನೆಯವರೆಗೂ ಕಾಂಕ್ರೀಟ್ ರಸ್ತೆ ಹಾಗೂ ಒಳಚರಂಡಿ ನಿರ್ಮಾಣ ಮಾಡಿರುವುದು ಕಳಪೆ ಕಾಮಗಾರಿಯಾಗಿದೆ .

6. ಅರಳುಕುಪ್ಪೆ ಗ್ರಾಮದಲ್ಲಿ ಗ್ರಂಥಾಲಯ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿ 6 ಲಕ್ಷ ರೂಪಾಯಿ ಹಣ ಬಿಡುಗಡೆ ಆಗಿದೆ ಆದರೆ ಕಾಮಗಾರಿ ಆರಂಭವೇ ಆಗಿಲ್ಲ .

7. ಅರಳುಕುಪ್ಪೆ ಗ್ರಾಮದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿ ಪ್ರಾರಂಭಿಸ ಬೇಕಿದೆ ಎಂದು ತಿಳಿಸಿ 4 ಲಕ್ಷ ರೂಪಾಯಿ ಹಣ ಬಿಡುಗಡೆ ಆಗಿದೆ ಆದರೆ ಕಾಮಗಾರಿ ಆರಂಭವೇ ಆಗಿಲ್ಲ

8. ಸೀಗೇಕುಪ್ಪೆ ಗ್ರಾಮಕ್ಕೆ ಸೇರಿದ ಶ್ರೀ ಬಸವಣ್ಣ ದೇವಸ್ಥಾನದ ಜೀರ್ಣೋದ್ಧಾರಕ್ಕೆ 6 ಲಕ್ಷ ಕಾಮಾಗಾರಿ ನಡೆಯದೇ ಹಣ ಬಿಡುಗಡೆಯಾಗಿದೆ .

9. ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಯಂತ್ರೋಪಕರಣಗಳನ್ನು ಬಳಸಿ ಕಾಂಕ್ರೀಟ್ ರಸ್ತೆ ನಿರ್ಮಾಣ ಹಾಗೂ ಒಳಚರಂಡಿ ಮತ್ತು ಕೆರೆಕಟ್ಟೆಗಳ ನಿರ್ಮಾಣ ಮಾಡಲಾಗಿದೆ .

10 , 14 ನೇ ಹಣಕಾಸು ಆಯೋಗದಲ್ಲಿ ದುರ್ಬಳಕೆಯಾಗಿದೆ .

11. ಸೀಗೇಕುಪ್ಪೆ ಗ್ರಾಮ ಪಂಚಾಯಿತಿಯ ರಾಮನಗರ ಜಿಲ್ಲೆಯ ಗಡಿಯಂಚಿನ ಭಾಗವಾಗಿರುವುದರಿಂದ ಯಾವುದೇ ಅಧಿಕಾರಿಗಳು ಭೇಟಿ ನೀಡುತ್ತಿಲ್ಲ ಎಂದು ಕರ್ನಾಟಕ ರೈತರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾದ ಗುಡ್ಡೇಗೌಡರು ಪತ್ರಿಕಾ ಗೋಷ್ಠಿಯಲ್ಲಿ ನುಡಿದರು.

City Today News

9341997936

ಭ್ರಷ್ಟರೇ , ಬಿಬಿಎಂಪಿ ಬಿಟ್ಟು ತೊಲಗಿ , ಬೆಂಗಳೂರು ಪ್ರೇಮಿಗಳೇ , ಪ್ರಾಮಾಣಿಕ ರಾಜಕಾರಣಕ್ಕೆ ಮುಂದಾಗಿ ; ಬಿಬಿಎಂಪಿ ಚುನಾವಣೆಗೆ ಅಭ್ಯರ್ಥಿಗಳಿಗೆ ಅಹ್ವಾನ -ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ

ಭ್ರಷ್ಟರೇ , ಬಿಬಿಎಂಪಿ ಬಿಟ್ಟು ತೊಲಗಿ , ಬೆಂಗಳೂರು ಪ್ರೇಮಿಗಳೇ , ಪ್ರಾಮಾಣಿಕ ರಾಜಕಾರಣಕ್ಕೆ ಮುಂದಾಗಿ ; ಬಿಬಿಎಂಪಿ ಚುನಾವಣೆಗೆ ಅಭ್ಯರ್ಥಿಗಳಿಗೆ ಅಹ್ವಾನ.

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಸ್ವಚ್ಛ , ಜನಪರ ಮತ್ತು ಪ್ರಾಮಾಣಿಕ ರಾಜಕಾರಣಕ್ಕಾಗಿ ಹೋರಾಡುತ್ತಿದ್ದು , ನಿರಂತರವಾಗಿ ಭ್ರಷ್ಟಾಚಾರ , ದುರಾಡಳಿತದ , ದೌರ್ಜನ್ಯ ಮತ್ತು ಅಕ್ರಮಗಳ ವಿರುದ್ಧ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದೆ . ಕೆ ಆರ್ ಎಸ್ ಪಕ್ಷದ ಹೋರಾಟಗಳನ್ನು ನೋಡಿ ಸಾಮಾನ್ಯ ಜನರು ನಮ್ಮ ಪಕ್ಷ ಸೇರುತ್ತಿದ್ದಾರೆ ಮತ್ತು ಪ್ರಾಮಾಣಿಕ ರಾಜಕಾರಣದಲ್ಲಿ ತೊಡಗಲು ಮುಂದಾಗಿದ್ದಾರೆ . ಕೆ ಆರ್ ಎಸ್ ಪಕ್ಷವು ರಾಜ್ಯಾದ್ಯಂತ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದ್ದು , ಸಾರ್ವಜನಿಕರಿಗೆ ಸರ್ಕಾರಿ ಕಛೇರಿಗಳಲ್ಲಿ ತಮ್ಮ ಕೆಲಸಗಳಿಗೆ ಅಲೆಯುವುದನ್ನು ಮತ್ತು ಲಂಚ ನೀಡುವುದನ್ನು ತಪ್ಪಿಸಲು ಜನಸ್ಪಂದನ ಅಭಿಯಾನದ ಮೂಲಕ ನೆರವಾಗುತ್ತಿದೆ . ಪಕ್ಷವು ಗ್ರಾಮೀಣ ಮತ್ತು ನಗರ ಪ್ರದೇಶಗಳ ಸಮತೋಲಿತ ಬೆಳವಣಿಗೆಗೆ ಒತ್ತು ಕೊಡಲಿದ್ದು , ದೇಶದ ಆರ್ಥಿಕತೆಗೆ ನಗರ ಪ್ರದೇಶದ ಸುಸ್ಥಿರ , ಯೋಜಿತ ಮತ್ತು ಸಮಗ್ರ ಅಭಿವೃದ್ಧಿಯ ಅವಶ್ಯಕತೆ ಇದೆ . ಈ ವಿಚಾರಗಳು ತಿಳಿಯದ ಅಥವಾ ತಿಳಿದೂ ಅನುಷ್ಠಾನಗೊಳಿಸಲಾಗದ ಪರಿಸ್ಥಿತಿಯಲ್ಲಿ ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳಿದ್ದು , ಇಂದು ನಗರ ಪ್ರದೇಶಗಳು ನಿತ್ಯ ನರಕವಾಗಿವೆ . ಯೋಜಿತ ಅಭಿವೃದ್ಧಿ ಏನೆಂಬುದೇ ತಿಳಿಯದೆ , ವರ್ಷ ವರ್ಷವೂ ತಮಗೆ ಇಚ್ಚೆಬಂದ ಯೋಜನೆಗಳನ್ನು ರೂಪಿಸಿ ಹತ್ತಾರು ಸಾವಿರ ಕೋಟಿ ಸಾರ್ವಜನಿಕರ ಹಣವನ್ನು ರಾಜ್ಯಾದ್ಯಂತ ಪೋಲು ಮಾಡಿ ಲೂಟಿ ಮಾಡುತ್ತಿದ್ದಾರೆ . ಇದಕ್ಕೆಲ್ಲ ಕಡಿವಾಣ ಹಾಕಿ , ಪಾರದರ್ಶಕ ಮತ್ತು ಜನಪರ ಆಡಳಿತ ನೀಡಲು ಕೆ ಆರ್ ಎಸ್ ಪಕ್ಷ ಕೆಲಸ ಮಾಡುತ್ತಿದ್ದೆ . ಕೆ ಆರ್ ಎಸ್ ಪಕ್ಷವು ಮುಂಬರುವ ಬಿಬಿಎಂಪಿ ಚುನಾವಣೆಗಳಲ್ಲಿ ಸ್ಪರ್ಶಿಸಲಿದ್ದು , ಅದಕ್ಕಾಗಿ ತಯಾರಿ ಮಾಡುತ್ತಿದೆ . ಆಡಳಿತದಲ್ಲಿರುವ ರಾಜ್ಯ ಸರ್ಕಾರಗಳು ಪ್ರತಿ ಬಾರಿಯೂ ಬಿಬಿಎಂಪಿ ಚುನಾವಣೆಯನ್ನು ಮುಂದೂಡಿ , ಸಂವಿಧಾನದ ಆಶಯಕ್ಕೆ ಧಕ್ಕೆ ಬರುವಂತೆ ನಡೆದುಕೊಳ್ಳುತ್ತಿವೆ . ಬಿಬಿಎಂಪಿ ಚುನಾವಣೆ ಹತ್ತಿರ ಬಂದಾಗ ಮಾತ್ರ ಇವರುಗಳಿಗೆ ಬಿಬಿಎಂಪಿಯನ್ನು ವಿಸ್ತರಿಸುವ , ಅದಕ್ಕೆ ಸಂಬಂಧಿಸಿದ ಕಾಯ್ದೆ ಕಾನೂನುಗಳಿಗೆ ಬದಲಾವಣೆ ತರಬೇಕೆಂದು ತಿಳಿಯುತ್ತದೆ . ಈ ಮೂರೂ ಪಕ್ಷಗಳ ದುರಾಡಳಿತ ಮತ್ತು ಭ್ರಷ್ಟಾಚಾರದಿಂದ ಇಂದು ಬೆಂಗಳೂರು ಭ್ರಷ್ಟರ ಕಾಮಧೇನು ಮತ್ತು ಜನರ ನರಕವಾಗಿ ಪರಿಣಮಿಸಿದೆ . ಬೆಂಗಳೂರು ನಗರದ ಪ್ರಸ್ತುತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ರಾಜ್ಯದ ಜೆಸಿಬಿ ಪಕ್ಷಗಳಿಂದ ಎಂದಿಗೂ ಸಾಧ್ಯವೇ ಇಲ್ಲ . ಅವರುಗಳಿಂದ ನಗರದ ಸಮಸ್ಯೆಗಳು ಮತ್ತಷ್ಟು ಉಲ್ಬಣವಾಗುತ್ತದೆಯೆ ಹೊರತು ಮತ್ತೇನು ಆಗುವುದಿಲ್ಲ . ಬಿಬಿಎಂಪಿ , ಬಿಡಿಎ ಮತ್ತು ಜಲ ಮಂಡಳಿಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು , ಬೇಡದ ಕಾಮಗಾರಿಗಳಿಗೆ ಹಣ ವ್ಯಯಿಸಿ ಸಾರ್ವಜನಿಕರ ಹಣ ದೋಚುತ್ತಿದ್ದಾರೆ . ನೂರಾರು ಭ್ರಷ್ಟಾಚಾರದ ಪ್ರಕರಣಗಳು ದಾಖಲಾದರೂ ಕೂಡ ಯಾರ ಮೇಲೂ ಕೂಡ ಕ್ರಮ ಕೈಗೊಂಡಿಲ್ಲ . ಇಂತಹ ಕ್ರಮ ಭ್ರಷ್ಟರಿಗೆ ಮತ್ತಷ್ಟು ಬಲ ನೀಡುತ್ತಿದ್ದು , ಜನರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಾಗಿದೆ . ಈ ನಿಟ್ಟಿನಲ್ಲಿ ಕೆ ಆರ್ ಎಸ್ ಪಕ್ಷವು ಜೆಸಿಬಿ ಪಕ್ಷಗಳಿಗೆ ಪರ್ಯಾಯವಾಗಿದ್ದು , ಜನರ ಸಹಭಾಗಿತ್ವದಲ್ಲಿ ಸ್ವಚ್ಛ , ಸುಂದರ , ಸದೃಢ , ಸಮೃದ್ಧ ಬೆಂಗಳೂರು ನಿರ್ಮಿಸಲು ನೀಲಿನಕ್ಷೆಯನ್ನು ಹೊಂದಿದೆ . ಪ್ರತಿನಿತ್ಯ ಪಕ್ಷದ ಕಾರ್ಯಕರ್ತರು ನೂರಾರು ಜನರ ಸಮಸ್ಯೆಗೆ ಪರಿಹಾರ ಒದಗಿಸುವ ಕೆಲಸದಲ್ಲಿ ನಿರತರಾಗಿದ್ದಾರೆ . ಮುಂಬರುವ ಬಿಬಿಎಂಪಿ ಚುನಾವಣೆಗಳಲ್ಲಿ ಈ ವಿಚಾರಗಳನ್ನು ಜನರ ಮುಂದಿಟ್ಟು ಜನರು ನೆಮ್ಮದಿಯಿಂದ ಬದುಕುವ ನಗರವನ್ನಾಗಿ ಮಾಡಲು ಪ್ರಯತ್ನಿಸುತ್ತೇವೆ . ಪ್ರಾಮಾಣಿಕರು ಮತ್ತು ಜನಪರ ಕಾಳಜಿ ಉಳ್ಳವರು , ಅದರಲ್ಲೂ ಸ್ವತಂತ್ರವಾಗಿ ಯೋಚಿಸುವ ಮಹಿಳೆಯರು ರಾಜಕಾರಣದಲ್ಲಿ ತೊಡಗಿಸಿಕೊಳ್ಳುವುದು ಹಾಗು ಚುನಾವಣೆಗಳಲ್ಲಿ ಸ್ಪರ್ಧಿಸುವುದು ಅವಶ್ಯಕವಾಗಿದ್ದು , ಇಂತಹವರಿಗೆ ಕೆ ಆರ್ ಎಸ್ ಪಕ್ಷವು ಉತ್ತಮ ವೇದಿಕೆಯಾಗಿದೆ . ಈ ಹಿನ್ನೆಲೆಯಲ್ಲಿ ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಕೆ.ಆರ್.ಎಸ್ . ಪಕ್ಷದ ವತಿಯಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಸಲುವಾಗಿ ಸ್ಪರ್ಧಿಸಲು ಬಯಸುವ ಪ್ರಾಮಾಣಿಕ , ಜನಪರ ಕಾಳಜಿ ಇರುವ ಆಕಾಂಕ್ಷಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗುತ್ತಿದೆ . ಬೆಂಗಳೂರಿನಂತಹ ಅಂತರಾಷ್ಟ್ರೀಯ ನಗರಕ್ಕೆ ಭ್ರಷ್ಟಾಚಾರಮುಕ್ತ ದಕ್ಷ ಆಡಳಿತ , ಉತ್ತಮ ಮೂಲಭೂತ ಸೌಕರ್ಯಗಳು , ನಾಗರಿಕ ಕೇಂದ್ರಿತ ಲಂಚಮುಕ್ತ ಸೇವೆಗಳು , ಸ್ವಚ್ಛ , ಸುಂದರ ಬೆಂಗಳೂರು ನಗರ , ಅತ್ಯುತ್ತಮ ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಇತ್ಯಾದಿಗಳನ್ನು ನೀಡುವ ಗುರಿ ಇಟ್ಟುಕೊಂಡು ಬಿಬಿಎಂಪಿಯ ಎಲ್ಲಾ ವಾರ್ಡ್ ಗಳಲ್ಲಿ ಸ್ಪರ್ಧಿಸಲು ಸೂಕ್ತ ಮತ್ತು ಅರ್ಹ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಈ ಮೂಲಕ ಚಾಲನೆ ನೀಡಲಾಗುತ್ತಿದೆ . ಆಸಕ್ತರಿರುವ ಅಕಾಂಕ್ಷಿಗಳು ಕೆಳಗೆ ನೀಡಿರುವ ವೆಬ್ ಲಿಂಕ್ ಮೂಲಕ ನೋಂದಾಯಿಸಿಕೊಳ್ಳಬಹುದು . ವೆಬ್ ಲಿಂಕ್ ಪಡೆಯಲು ಕೆಳಗೆ ನೀಡಿರುವ QR ಕೋಡ್ ನ್ನು ಯಾವುದೇ QR ಮಾಡಿ ಪಡೆದುಕೊಳ್ಳಬಹುದು . code app ಬಳಸಿ ಸ್ಕಾನ್ https://cybermatrix.in/bbmpelereg or 9611720802 ” BBMP “ಎಂದು ವಾಟ್ಸಾಪ್ ಮಾಡಬಹುದು

City Today News

9341997936

Facebook live in Kannada on PCOS

Bengaluru: A new series of Facebook live in Kannada titled “Nimma Aarogya, Nimma Savaalu” will be launched on 17 January 2022 at 3 p.m. to specifically address questions related to PCOS — Polycystic Ovarian Syndrome

An estimated one in five Indian women suffer from PCOS. The programme aims to raise awareness amidst the Kannada-speaking community all over the world about women’s healthcare, and break the language barrier in which health information is delivered, thereby reaching every girl and every woman. It is a mission undertaken by Federation of International Gynaecologists and Obstetricians (FIGO) Chair of Well Woman Healthcare, Dr. Hema Divakar. 

This series is part of Health For Her, a special initiative and app being launched by the organization Artist For Her, with support from Divakars Service Trust, in association with DocSpacePlus.

The six-episode series, which will go live every 15 days on Mondays at 3 p.m., will address several questions in a conversational style so that the prevailing myths and misconceptions in the space of women’s health are dispelled. In the coming weeks, various topics of interest spanning menstrual health, maternal health, mental health and menopausal health will be addressed.

This will go a long way in empowering girls and women to take measures for preventing illness and promoting wellness.

The program will have the best of national experts from the region, who will speak in Kannada on the issue of PCOS.

The series will soon be available in other Indian regional languages also. The talks will later be made available on YouTube as well.

After 17 January, questions can be asked on the HealthforHer app (Google Play Store & IOS) to reach more doctors.

Date of the Facebook Live launch: 17th January 2022 – 3 p.m.
Link to watch the live: facebook.com/DocSpacePlus

For more information, please contact:

Dr. Hema Divakar
Consultant ObGyn and Medical Director
Divakars Speciality Hospital, Bengaluru
PRESIDENT FOGSI 2013 Organising Chairman AICOG 2019
CEO – ARTIST for Her (Asian Research and Training Institute for Skill Transfer)
FOGSI Ambassador to FIGO (Federation of International Gynaecologists and Obstetricians)
M: 9844046724 | Email: drhemadivakar@gmail.com

City Today News

9341997936

ವಿಧಾನ ಸೌಧದ ಬಳಿಯ ಶಾಸಕರ ಭವನದಲ್ಲಿ ಸಂವಿಧಾನ ಸುರಕ್ಷಾ ಆಂದೋಲನ ಕರ್ನಾಟಕದ ವತಿಯಿಂದ ಪ್ರತಿರೋಧ ಸಮಾಲೋಚನಾ ಸಭೆ

ಸಂವಿಧಾನ ಸುರಕ್ಷಾ ಆಂದೋಲನ ಕರ್ನಾಟಕದ ವತಿಯಿಂದ ಪ್ರತಿರೋಧ ಸಮಾಲೋಚನಾ ಸಭೆಯು ಬೆಂಗಳೂರು ವಿಧಾನ ಸೌಧದ ಬಳಿಯ ಶಾಸಕರ ಭವನದಲ್ಲಿ ನಡೆಯಿತು.

ರಾಜ್ಯದಲ್ಲಿ ಹೆಚ್ಚುತ್ತಿರುವ ದಲಿತ, ಅಲ್ಪಸಂಖ್ಯಾತ ಹಾಗು ಹಿಂದುಳಿದ ವರ್ಗಗಳ ಮೇಲಿನ ನಿರಂತರ ದೌರ್ಜನ್ಯ, ದಬ್ಬಾಳಿಕೆಗಳು ಹಾಗು ಸಂವಿಧಾನ ವಿರೋಧಿ ಚಟುವಟಿಕೆಗಳ ವಿರುದ್ದ ಪ್ರತಿರೋಧ ಸಮಾಲೋಚನಾ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಮಾಲೋಚನಾ ಸಭೆಯಲ್ಲಿ ರಾಜ್ಯದ ಹಲವಾರು ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗದ ಸಂಘಟನೆಗಳ ರಾಜ್ಯ ಮುಖಂಡರುಗಳು, ಪ್ರಗತಿಪರ ಸ್ವಾಮೀಜಿಗಳು, ಧಾರ್ಮಿಕ ಗುರುಗಳು ಭಾಗವಹಿಸಿ ಮುಂದಿನ ಹೋರಾಟದ ಬಗ್ಗೆ ತಮ್ಮ ಅಭಿಪ್ರಾಯ ಅನಿಸಿಕೆಗಳನ್ನು ಹಂಚಿಕೊಂಡರು. ಮುಖ್ಯ ಅತಿಥಿಗಳಾಗಿ ಸಂವಿಧಾನ ಸುರಕ್ಷಾ ಆಂದೋಲನದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ಬಿ. ಆರ್ ಅಂಬೇಡ್ಕರ್ ರವರ ಮೊಮ್ಮಗ ರಾಜ ರತ್ನ ಅಂಬೇಡ್ಕರ್ ರವರು ಆಗಮಿಸಿದ್ದರು. ಆ ನಂತರ ಮುಂದಿನ ಹೊರಟದ ರೂಪು ರೇಷೆಯ ಕುರಿತು ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತಾಡಿದ ರಾಜ ರತ್ನ ಅಂಬೇಡ್ಕರ್ ದೇಶದಲ್ಲಿ ಸಂವಿಧಾನವನ್ನು ಬದಲಾಯಿಸುವ ಮತ್ತು ಸಂವಿಧಾನಕ್ಕೆ ವಿರುದ್ಧವಾದ ಕಾರ್ಯಗಳು ಹೆಚ್ಚಾಗಿ ನಡೆಯುತ್ತಿದೆ. ಇದರ ವಿರುದ್ಧ ಸಂವಿಧಾನ ರಕ್ಷಣೆಯ ಉದ್ದೇಶದಿಂದ ದೇಶಾದ್ಯಂತ ಸಂವಿಧಾನ ಸುರಕ್ಷಾ ಆಂದೋಲನ ನಡೆಯುತ್ತಿದೆ ಎಂದರು.

ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಚಿತ್ರದುರ್ಗ ಛಲವಾದಿ ಮಹಾಸಂಸ್ಥಾನದ ಶಿವಶರಣ ಬಸವ ನಾಗಿದೇವ ಸ್ವಾಮೀಜಿ, ಸಂವಿಧಾನದ ರಕ್ಷಣೆಗಾಗಿ ಮುಂದಿನ ಎಲ್ಲಾ ಹೋರಾಟದಲ್ಲಿ ಸಂವಿಧಾನ ಸುರಕ್ಷಾ ಆಂದೋಲನದೊಂದಿಗೆ ಒಟ್ಟು ಸೇರಿ ಕೆಲಸ ಮಾಡಲಿದ್ದೇವೆ ಎಂದರು. ನಂತರ ಮಾತನಾಡಿದ ಮೈಸೂರಿನ ಉರಿಲಿಂಗಿ ಪೆದ್ದಿ ಮಠದ ಜ್ಞಾನ ಪ್ರಕಾಶ್ ಸ್ವಾಮೀಜಿ ಇಲ್ಲಿ ರಾಜಕೀಯವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ಧಾರ್ಮಿಕವಾಗಿ ಸಂವಿಧಾನದ ಮೇಲೆ ದಾಳಿ ನಡೆಯುತ್ತಿದೆ ಇದೆಲ್ಲದರ ವಿರುದ್ಧ ಸಂವಿಧಾನಾತ್ಮಕ ಪ್ರತಿರೋಧ ನಡೆಸಲಿದ್ದೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಎಸ್. ಡಿ. ಪಿ. ಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಮಾತನಾಡಿ ಫ್ಯಾಷಿಸಂ ವಿರುದ್ಧ ಎಲ್ಲಾ ಸಂವಿಧಾನ ಪ್ರೀಯರು ಜೊತೆಯಾಗಿ ನಿಂತು ಸಂವಿಧಾನ ಸುರಕ್ಷಾ ಆಂದೋಲನದ ಮೂಲಕ ಪ್ರತಿರೋಧ ಹೋರಾಟ ನಡೆಸಲಿದ್ದೇವೆ ಎಂದರು. ಚಿಂತಕರಾದ ಧ್ವಾರಕ್ ನಾಥ್ ಸಂವಿಧಾನ ಸುರಕ್ಷಾ ಹೋರಾಟದಲ್ಲಿ ಜೊತೆ ಗೂಡಿ ಕೆಲಸದ ಅಗತ್ಯತೆ ಇದ್ದು, ಶಕ್ತವಾಗಿ ನಡೆಸಲಿದ್ದೇವೆ ಎಂದು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ದಲಿತ ಹೋರಾಟ ಗಾರ ಹಾ. ರಾ ಮಹೇಶ್, ಪಿಎಫ್ಐ ರಾಜ್ಯಾಧ್ಯಕ್ಷ ಯಾಸೀರ್ ಹಸನ್, ಕರ್ನಾಟಕ ಕ್ರೈಸ್ತ ಸಂಘದ ಅಧ್ಯಕ್ಷ ಸ್ಟ್ಯಾ ನಿ ಪಿಂಟೋ, ದಲಿತ ಸಂಘಟನೆಗಳ ಒಕ್ಕೂಟಟದ ಅಧ್ಯಕ್ಷ ಮತ್ತು ಎಸ್. ಡಿ. ಪಿ. ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಪ್ರಸಾದ್, ಹೋರಾಟಗಾರ್ತಿ ಭೀಮ ಪುತ್ರಿ, ರಾ ಚಿಂತನ್, ದೀಪು ಗೌಡ್ರು, ಅಲ್ಫಾನ್ಸೋ ಫ್ರಾಂಕೋ, ಅಪ್ಸರ್ ಕೊಡ್ಲಿಪೇಟೆ, ದಲಿತ್ ಮೈನಾರಿಟೀಸ್ ಸೇನೆಯ ಎ.ಜೆ ಖಾನ್, ಯಮನಪ್ಪ ಗುಣದಾಳ ಸೇರಿದಂತೆ ಇನ್ನಿತರ ಹಲವಾರು ದಲಿತಪರ, ಪ್ರಗತಿ ಪರ ಹೋರಾಟಗಾರರು ಉಪಸ್ಥಿತರಿದ್ದರು. ಮತ್ತು ಪತ್ರಿಕಾ ಗೋಷ್ಠಿಯಲ್ಲಿ ಮುಂದಿನ ಸಂವಿಧಾನ ಸುರಕ್ಷಾ ಆಂದೋಲನದ ಕರ್ನಾಟಕ ರಾಜ್ಯ ಸಂಚಾಲಕ ಸಮಿತಿಯನ್ನು ಘೋಷಿಸಲಾಯಿತು.

City Today News

9341997936