ಜೆ.ಸಿ.ಐ ಗೋಕಾಕ ಸಂಸ್ಥೆ ವತಿಯಿಂದ ಪ್ರತಿಭಾ ಪುರಸ್ಕಾರ ಸಮಾರಂಭ

ಪ್ರತಿ ವರ್ಷದಂತೆ ಈ ವರ್ಷವೂ ಸಹ ಜೆ.ಸಿ.ಐ ಗೋಕಾಕ ಸಂಸ್ಥೆ ವತಿಯಿಂದ ಪ್ರತಿಭಾ ಪುರಸ್ಕಾರ ಸಮಾರಂಭ ಆಯೋಜಿಸಲಾಗಿದೆ. ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿಯಲ್ಲಿ 90% ಮತ್ತು ಹೆಚ್ಚಿನ ಅಂಕ ಪಡೆದ ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಪುರಸ್ಕಾರ ಮತ್ತು ಪ್ರಮಾಣ ಪತ್ರ ನೀಡಿ, ನಾಡಿನ ಪೂಜ್ಯರು, ಗುರು ಹಿರಿಯರು ಹಾಗೂ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಗೌರವಿಸಿ ಸನ್ಮಾನಿಸಲಾಗುವುದು, ಕಾರಣ 90% ಮತ್ತು ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿ/ನಿಯರು ತಮ್ಮ ಝರಾಕ್ಸ್ ಅಂಕಪಟ್ಟಿಯೊಂದಿಗೆ ತಮ್ಮ ಭಾವಚಿತ್ರ (ಫೋಟೊ) ಅಂಟಿಸಿ ಸಂಪೂರ್ಣ ವಿಳಾಸದೊಂದಿಗೆ ಅರ್ಜಿಯನ್ನು ಈ ಕೆಳಗಿನ ವಿಳಾಸಕ್ಕೆ ಸಲ್ಲಿಸತಕ್ಕದ್ದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-05-2024, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸ್ಥಳ ಮತ್ತು ದಿನಾಂಕ ಮುಂದಿನ ಪ್ರಕಟಣೆಯಲ್ಲಿ ತಿಳಿಸಲಾಗುವುದು. ವಾಟ್ಸಪ್ ಅಪ್ಲಿಕೇಷನ್ ಪರಿಗಣಿಸಲಾಗುವದಿಲ್ಲ. ಕಾರಣ ನೇರವಾಗಿ ನಮ್ಮ ಕಛೇರಿಗೆ ಬಂದು ಖುದ್ದಾಗಿ ಅರ್ಜಿ ಸಲ್ಲಿಸಬೇಕು ಅಥವಾ ಅಂಚೆ ಮೂಲಕ ಅರ್ಜಿ ಕಳುಹಿಸಬಹುದು.

ಅರ್ಜಿ ಸಲ್ಲಿಸುವ ಸಮಯ ಬೆಳಗ್ಗೆ 10:00 ಘಂಟೆಯಿಂದ ಸಾಯಂಕಾಲ 05:00 ವರೆಗೆ

ಅರ್ಜಿ ಸಲ್ಲಿಸುವ ವಿಳಾಸ:

ಶ್ರೀ ರಾಮ್ ಫೌಂಡೆಷನ್, ಲಾತೂರ ಕಂಪ್ಯೂಟರ್ ಟೈಪಿಂಗ್ ಸೆಂಟರ್ ಕೋರ್ಟ ಸರ್ಕಲ್, ಕೆನರಾ ಬ್ಯಾಂಕ ಕೆಳಗೆ, ಗೋಕಾಕ, ಜಿ.ಬೆಳಗಾವಿ.

City Today News 9341997836

ಸಾಧಕ/ಸಾಧಕಿಯರಿಗೆ ಸಿಂಪೋನಿ ರಾಜ್ ರತ್ನ ಮತ್ತು ಸಿಂಪೋನಿ ಪುನೀತ್ ರತ್ನ ಪ್ರಶಸ್ತಿ ಪ್ರದಾನ.

ಸಾಧಕ/ಸಾಧಕಿಯರಿಗೆ ಸಿಂಪೋನಿ ರಾಜ್ ರತ್ನ ಮತ್ತು ಸಿಂಪೋನಿ ಪುನೀತ್ ರತ್ನ ಪ್ರಶಸ್ತಿ ಪ್ರದಾನ.

ಬೆಂಗಳೂರು ಪ್ರೆಸ್ ಕ್ಲಬ್: ಸಿಂಪೋನಿ ಸ್ವರ ಪ್ರತಿಷ್ಠಾನ ವತಿಯಿಂದ ಎರಡನೇ ವರ್ಷದ ರಾಜ ಪುನೀತೋತ್ಸವ ಸಮಾರಂಭ, ರಾಜ್ ನಮನ, ಪುನೀತ್ ನಮನ ಸಂಗೀತ ಸಂಜೆ ಮತ್ತು ಸಿಂಫೋನಿ ರಾಜ್ ರತ್ನ ಮತ್ತು ಸಿಂಪೋನಿ ಪುನೀತ್ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ದಿನಾಂಕ 28ರಂದು ಭಾನುವಾರ ಸಂಜೆ 6 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ, ಇದರ ಕುರಿತು ಸಿಂಪೋನಿ ಸ್ವರ ಪ್ರತಿಷ್ಠಾನ ಅಧ್ಯಕ್ಷರಾದ ಸಿಂಪೋನಿ ಶಿವುರವರು ಮಾಧ್ಯಮ ಗೋಷ್ಠಿ ಏರ್ಪಡಿಸಿದ್ದರು.

ಅಧ್ಯಕ್ಷರಾದ ಸಿಂಪೋನಿ ಶಿವು ರವರು ಮಾತನಾಡಿ ಕನ್ನಡ ನಾಡಿಗೆ ಎರಡು ಆಮೂಲ್ಯ ವಜ್ರಗಳು ಮೇರುನಟ ಡಾ|| ರಾಜ್ ಕುಮಾರ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ರವರು ಚಲನಚಿತ್ರ ಅಭಿನಯದಂತೆ ನಿಜ ಜೀವನದಲ್ಲಿಯೂ ಸಹ ಆದರ್ಶ ಪುರುಷರಂತೆ ಬದುಕಿ ಇಡೀ ಸಮಾಜಕ್ಕೆ ಮಾದರಿಯಾದರು.

ಡಾ|| ರಾಜ್ ಮತ್ತು ಪುನೀತ್ ರವರ ಸವಿನೆನಪಿನಲ್ಲಿ ಸಿಂಪೋನಿ ಸ್ವರ ಪ್ರತಿಷ್ಠಾನ ರವೀಂದ್ರ ಕಲಾಕ್ಷೇತ್ರದಲ್ಲಿ ಇದೇ ಏಪ್ರಿಲ್ 28ರಂದು ಸಂಜೆ 6 ಗಂಟೆಗೆ ರಾಜ ಪುನೀತೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ.

ರಾಜ ಪುನೀತೋತ್ಸವ ಕಾರ್ಯಕ್ರಮ ಉದ್ಘಾಟನೆಯನ್ನು ಚಲನಚಿತ್ರ ನಿರ್ಮಾಪಕರಾದ ಎಸ್.ಎ.ಚಿನ್ನೇಗೌಡ ಅವರು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ವಿಧಾನಪರಿಷತ್ ಸದಸ್ಯರಾದ ಡಿ.ಎಂ.ಸಾಲಿ, ಯುವ ನಾಯಕ ನಟ ಯುವ ರಾಜ್ ಕುಮಾರ್, ಐಪಿಎಸ್ ಪೊಲೀಸ್ ಅಧಿಕಾರಿ ಡಾ.ಬಿ.ಆರ್.ರವಿಕಾಂತೇಗೌಡ, ಲಹರಿ ಆಡಿಯೊ ಸಂಸ್ಥೆಯ ಲಹರಿ ವೇಲು, ಅಖಿಲ ಕರ್ನಾಟಕ ಡಾ॥ ರಾಜ್ ಕುಮಾರ್ ಅಭಿಮಾನಿಗಳ ಒಕ್ಕೂಟದ ಅಧ್ಯಕ್ಷರಾದ ಎನ್‌.ಆರ್.ರಮೇಶ್, ಸೌಂಡ್ ಆಫ್ ಮ್ಯೂಸಿಕ್ ಮಾಲೀಕರಾದ ಗುರುರಾಜ್, ದಕ್ಷಿಣ ಭಾರತ ಚಲನಚಿತ್ರ ಸಮನ್ವಯಕಾರರಾದ ಎಸ್.ಕೆ.ಅನಂತ ಮುಂತಾದವರು ಭಾಗವಹಿಸಲಿದ್ದಾರೆ ಹಾಗೂ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಸಮಾಜದ ಹಲವಾರು ಗಣ್ಯ ವ್ಯಕ್ತಿಗಳು ಮತ್ತು ಸಾಧಕರಿಗೆ ಸಿಂಫೋನಿ ರಾಜ್ ರತ್ನ ಹಾಗೂ ಸಿಂಫೋನಿ ಪುನೀತ್ ರತ್ನ ಪ್ರಶಸ್ತಿ ನೀಡಿ ಪುರಸ್ಕರಿಸಲಾಗುವುದು ಎಂದು ತಿಳಿಸಿದರು.

ಹೇಳುತೈತೆ” ಸಮೂಹ ಗೀತ ಗಾಯನ.

ಸಿಂಪೋನಿ ಸಂಸ್ಥೆಯ 100 ಗಾಯಕ, ಗಾಯಕಿಯರಿಂದ ಪುನೀತ್ ರವರ ಅಜರಾಮರ ಗೀತೆ “ಬೊಂಬೆ

ಡಾ| ರಾಜ್ ಮತ್ತು ಪುನೀತ್ ರಾಜ್ ಕುಮಾರ್ ರವರ ಚಿತ್ರಗಳ ಭಿತ್ತಿ ಚಿತ್ರ ಪ್ರದರ್ಶನ ಮತ್ತು ವಿಶೇಷ ನೃತ್ಯಗಳು. ಪ್ರತಿರೂಪಗಳು ಎಲ್ಲವನ್ನೂ ಏರ್ಪಡಿಸಲಾಗಿದೆ.

ಡಾ|| ರಾಜ್ ನಮನ ಮತ್ತು ಪುನೀಶ್ ನಮನ ಸಂಗೀತ ರಸ ಸಂಜೆಯಲ್ಲಿ ನಾಡಿನ ಪ್ರಖ್ಯಾತ ಗಾಯಕ, ಗಾಯಕಿಯರಿಂದ ಗೀತ ಗಾಯನ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

City Today News 9341997936

“ಇಂಡಿಯಾ ಕಾ ಸೆಲೆಬ್ರೇಶನ್”ಪ್ರಚಾರದ ವಿಜೇತರನ್ನು ಘೋಷಿಸಿದ LG ಎಲೆಕ್ಟ್ರಾನಿಕ್ಸ್


ಜನವರಿ 10, 2024 – ಭಾರತದ ಮುಂಚೂಣಿ ಕನ್ಸ್ಯೂಮರ್ ಡ್ಯೂರಬಲ್ಸ್ ಬ್ರ್ಯಾಂಡ್‌ಗಳ ಪೈಕಿ ಒಂದಾದ LG ಎಲೆಕ್ಟ್ರಾನಿಕ್ಸ್, ಪ್ರಸ್ತುತ ನಡೆಯುತ್ತಿರುವ ತನ್ನ “ಇಂಡಿಯಾ ಕಾ ಸೆಲಬ್ರೇಶನ್” ಪ್ರಚಾರದ ಅದೃಷ್ಟಶಾಲಿ ವಿಜೇತರನ್ನು ಘೋಷಿಸಲು ಹರ್ಷಿಸುತ್ತದೆ. ಲೂಬಾಂಡ್ ಟೆಕ್ನಾಲಜೀಸ್‌ನ ಸಿಇಒ ಶ್ರೀ ರಾಜೇಶ್ ಚಂದ್ರನ್ ಅಮೋಘ ಬಹುಮಾನ Audi Q3 Premium ಗೆದ್ದುಕೊಂಡ ಅದೃಷ್ಟಶಾಲಿ ವಿಜೇತರಾಗಿದ್ದಾರೆ. ಅಕ್ಟೋಬರ್ 13, 2023ರಂದು ಶ್ರೀ ರಾಜೇಶ್ ಚಂದ್ರನ್, ರಿಲಯನ್ಸ್ ರೀಟೇಲ್‌ನಿಂದ ಟಾಪ್ ಲೋಡ್ ವಾಶಿಂಗ್ ಮಶೀನ್ ಖರೀದಿಸಿದ್ದರು.

ಸೆಪ್ಟೆಂಬರ್ 16ರಿಂದ ನವಂಬರ್ 12, 2023ರವರೆಗಿನ ಪ್ರಚಾರ ಅವಧಿಯಲ್ಲಿ ಎಲ್‌ಜಿಯೊಂದಿಗೆ ದೀಪಾವಳಿಯನ್ನು ಆಚರಿಸಲು ಗ್ರಾಹಕರಿಗೆ ಒಂದು ಸುವರ್ಣಾವಕಾಶ ಇದ್ದು, ಅದ್ಭುತ ಆಫರ್‌ಗಳ ಪ್ರಯೋಜನ ಪಡೆದುಕೊಳ್ಳಬಹುದಾಗಿತ್ತು. ಜೀವನವನ್ನು ಇನ್ನಷ್ಟು ಅನುಕೂಲಕರವಾಗಿ ಮತ್ತು ನಿಜವಾಗಿಯೂ ಅವಿಸ್ಮರಣೀಯವಾಗಿ ಮಾಡಲು LG ಬದ್ಧವಾಗಿದ್ದು, ಸಂಸ್ಥೆಯು ಸಂತೋಷವನ್ನು ಹರಡಿ ಹಬ್ಬದ ಚೈತನ್ಯವನ್ನು ಹೆಚ್ಚಿಸಿದೆ.
ಇದರ ಬಗ್ಗೆ ಮಾತನಾಡುತ್ತಾ, LG ಇಂಡಿಯಾದ ಎಮ್‌ಡಿ ಶ್ರೀ ಹಾಂಗ್ ಜು ಜಿಯೋನ್, “ನಮ್ಮ ’ಇಂಡಿಯಾ ಕಾ ಸೆಲಬ್ರೇಶನ್”ಪ್ರಚಾರವು, ಸಂತೋಷವನ್ನು ಹರಡಿ, ಹಬ್ಬದ ಋತು ಹಾಗೂ ಹೊಸ ವರ್ಷವನ್ನು ನಿಜವಾಗಿಯೂ ವಿಶೇಷಗೊಳಿಸುವ ಪ್ರಯತ್ನವಾಗಿತ್ತು. LG ಬ್ರ್ಯಾಂಡ್‌ನ ಸಿದ್ಧಾಂತವು Life’s Good ಆಗಿದ್ದು, ಇದು ಆವಿಷ್ಕಾರದ ಮೂಲಕ ಜನರ ಜೀವನವನ್ನು ಉತ್ತಮಗೊಳಿಸುವ ನಮ್ಮ ಅಚಲ ಬದ್ಧತೆಯನ್ನು ಪ್ರತಿನಿಧಿಸುತ್ತದೆ. ನಮ್ಮ ಇತ್ತೀಚಿನ ಬ್ರ್ಯಾಂಡ್ ಮರುಶೋಧದ ಮೂಲಕ, ವಿವಿಧ ಗ್ರಾಹಕ ಅನುಭವದಾದ್ಯಂತ ಇರುವ ಪ್ರತಿಯೊಂದು ಟಚ್ ಪಾಯಿಂಟ್‌ನಲ್ಲಿ Life’s Goodನ ಮೌಲ್ಯಗಳು ಹಾಗೂ ಸಿದ್ಧಾಂತವನ್ನು ಒದಗಿಸುವ ಪ್ರಯತ್ನ ನಮ್ಮದು. ನಮ್ಮ ಅದೃಷ್ಟಶಾಲಿ ವಿಜೇತರಾದ ಶ್ರೀ ರಾಜೇಶ್ ಚಂದ್ರನ್ ಅವರಿಗೆ ನಮ್ಮ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಎಲ್ಲಾ ಭಾಗೀದಾರರಿಗೂ ಒಂದು ದೊಡ್ಡ ಧನ್ಯವಾದ ಹೇಳಬಯಸುತ್ತೇನೆ. ಶ್ರೀ ರಾಜೇಶ್ ಮತ್ತು ಅವರ ಕುಟುಂಬದವರಿಗೆ ಇದು ನಿಜವಾಗಿಯೂ Life’s Good ಕ್ಷಣವಾಗಿದೆ.”ಎಂದು ಹೇಳಿದರು.
“LG’ ಅವರ “ಇಂಡಿಯಾ ಕಾ ಸೆಲಬ್ರೇಶನ್” ಪ್ರಚಾರವು ನಿಜವಾಗಿಯೂ ನನ್ನ ರಜಾದಿನಗಳ ಚೈತನ್ಯವನ್ನು ಬೆಳಗಿಸಿದೆ! ಅಮೋಘ ಬಹುಮಾನ Audi Q3 Premium ಗೆದ್ದುಕೊಂಡಿರುವುದು ನನಗೆ ಕನಸು ನಿಜವಾದ ಹಾಗಿದೆ ಮತ್ತು ಈ ಅದ್ಭುತ ಅಚ್ಚರಿಗಾಗಿ ನಾನು ಎಷ್ಟು ಆಭಾರಿಯಾಗಿದ್ದರೂ ಸಾಲದು.”ಎಂದು ಹೇಳಿದರು, ಶ್ರೀ ರಾಜೇಶ್ ಚಂದ್ರನ್.
ಈ ದೀಪಾವಳಿಯಂದು, LG, ಪ್ರತಿಷ್ಠಿತ LG ಕನಸಿನ ಮನೆ ಪ್ಯಾಕೇಜ್ ಗೆದ್ದುಕೊಳ್ಳಲು ಪ್ರತಿದಿನದ ಗ್ರಾಹಕರಿಗೆ ಅದ್ಭುತ ಅವಕಾಶವನ್ನು ಪರಿಚಯಿಸುವ ಮೂಲಕ ಸಂತೋಷ ಮತ್ತು ಆನಂದವನ್ನು ಹರಡುವಲ್ಲಿ ಸರ್ವ ಪ್ರಯತ್ನ ನಡೆಸಿತ್ತು.

ದಿನನಿತ್ಯದ ಕನಸಿನ ಮನೆ ಪ್ಯಾಕೇಜ್ ಅಡಿ ಒಟ್ಟೂ 50 ಅದೃಷ್ಟಶಾಲಿ ವಿಜೇತರನ್ನು ಘೋಷಿಸಲಾಗಿದ್ದು, ಐದು ಅದ್ವಿತೀಯ ಉತ್ಪನ್ನಗಳ ಇಡೀ ಶ್ರೇಣಿಯನ್ನು ಪ್ರತಿದಿನ ಒಬ್ಬ ಅದೃಷ್ಟಶಾಲಿ ಗ್ರಾಹಕರು ಗೆದ್ದು ಪ್ರಚಾರಕ್ಕೆ ಕೌತುಕತೆ ತಂದರು. ಕನಸಿನ ಮನೆ ಪ್ಯಾಕೇಜ್, ಸೈಡ್-ಬೈ-ಸೈಡ್ ರೆಫ್ರಿಜಿರೇಟರ್, ಫ್ರಂಟ್ ಲೋಡ್ ವಾಶಿಂಗ್ ಮಶೀನ್, ವಾಟರ್ ಪ್ಯೂರಿಫೈಯರ್, ಮೈಕ್ರೋವೇವ್ ಓವನ್ ಮತ್ತು OLED ಟಿವಿಯನ್ನು ಒಳಗೊಂಡಿತ್ತು, ಗ್ರಾಹಕರಿಗೆ ಅತ್ಯಂತ ಅನುಕೂಲ ಹಾಗೂ ಐಶಾರಾಮ ಒದಗಿಸುವುದಕ್ಕಾಗಿಯೇ ವಿನ್ಯಾಸಗೊಳಿಸಲಾಗಿದ್ದ ಈ ಉತ್ಪನ್ನಗಳು, ಅವರ ಆಚರಣೆಗಳನ್ನು ಇನ್ನಷ್ಟು ವಿಶೇಷಗೊಳಿಸಿತ್ತು.
ಈ ಆಲೋಚನಾಪೂರ್ಣ ಉಪಕ್ರಮವು, ಅವರ ದೀಪಾವಳಿ ಆಚರಣೆಗಳಿಗೆ ವಿಶೇಷ ಸ್ಪರ್ಶ ನೀಡಿದುದು ಮಾತ್ರವಲ್ಲದೆ, LG ಇಂಡಿಯಾದ ಉದಾರ ಕೊಡುಗೆಗಳಿಂದ ಸಂತುಷ್ಟರಾದ ಗ್ರಾಹಕರಿಂದ ಹೃತ್ಪೂರ್ವಕ ಮೆಚ್ಚುಗೆಯನ್ನೂ ಪಡೆದುಕೊಂಡಿತ್ತು.

City Today News 9341997936

Person of the year award to D.K.Sivakumar

Person of the year award to D.K.Sivakumar

Chief Minister Siddaramaiah inaugurated Press Club of Bangalore’s “Person of the Year-Special Person” and annual awards ceremony and released the Press Club Diary 2024.

Deputy Chief Minister DK Shivakumar who received Person of the Year Award, former Minister Shamanur Sivashankarappa who received Special Award, Labor Minister Santosh S Lad, Chief Minister’s Political Secretary K. Govindaraju were felicitated with awards.

Shivraj Patil, retired Supreme Court Justice, presented the award.

Chief Minister’s Media Adviser KV Prabhakar, Deputy Chief Minister’s Media Coordinator Thyagaraj and many other dignitaries were present on the stage.

City Today News 9341997936

ಡಿ.ಕೆ.ಶಿವಕುಮಾರ್  ಅವರಿಗೆ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ

ಡಿ.ಕೆ.ಶಿವಕುಮಾರ್  ಅವರಿಗೆ ವರ್ಷದ ವ್ಯಕ್ತಿ  ಪ್ರಶಸ್ತಿ ಪ್ರದಾನ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಕೊಡ ಮಾಡುವ “ವರ್ಷದ ವ್ಯಕ್ತಿ-ವಿಶೇಷ ವ್ಯಕ್ತಿ” ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ, 2024ರ ಪ್ರೆಸ್ ಕ್ಲಬ್ ಡೈರಿಯನ್ನು ಬಿಡುಗಡೆ ಗೊಳಿಸಿದರು.

ವರ್ಷದ ವ್ಯಕ್ತಿ ಪ್ರಶಸ್ತಿ ಪಡೆದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ವಿಶೇಷ ಪ್ರಶಸ್ತಿ ಪುರಸ್ಕೃತರಾದ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ, ಕಾರ್ಮಿಕ ಸಚಿವರಾದ ಸಂತೋಷ್ ಎಸ್ ಲಾಡ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜು ಅವರಿಗೆ  ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಲಾಯಿತು.

ಸರ್ವೋಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳಾದ ಶಿವರಾಜ್ ಪಾಟೀಲ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್, ಉಪ ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕರಾದ ತ್ಯಾಗರಾಜ್ ಸೇರಿ ಹಲವು ಪ್ರಮುಖರು ವೇದಿಕೆಯಲ್ಲಿದ್ದರು.

City Today News 9341997936