ನೇರಪಾವತಿಯಡಿಯಲ್ಲಿ ಸ್ವಚ್ಛತಾ ಕೆಲಸ ನಿರ್ವಹಿಸುತ್ತಿರುವ 24005 ಜನ ಪೌರಕಾರ್ಮಿಕರನ್ನು ಖಾಯಂ ಮಾಡಲು ಅನುಮೋದನೆ ನೀಡಿ ಉಳಿದಿರುವ ಪೌರಕಾರ್ಮಿಕರನ್ನು ಹಂತ ಹಂತವಾಗಿ ಖಾಯಂಗೊಳಿಸುವುದಾಗಿ ಐತಿಹಾಸಿಕ ನಿರ್ಣಯ ಕೈಗೊಂಡ ರಾಜ್ಯ ಸರ್ಕಾರಕ್ಕೆ ಸಮಸ್ತ ಪೌರಕಾರ್ಮಿಕರ ಪರವಾಗಿ ತುಂಬು ಹೃದಯದ ಧನ್ಯವಾದಗಳು.

ನೇರಪಾವತಿಯಡಿಯಲ್ಲಿ ಸ್ವಚ್ಛತಾ ಕೆಲಸ ನಿರ್ವಹಿಸುತ್ತಿರುವ 24005 ಜನ ಪೌರಕಾರ್ಮಿಕರನ್ನು ಖಾಯಂ ಮಾಡಲು ಅನುಮೋದನೆ ನೀಡಿ ಉಳಿದಿರುವ ಪೌರಕಾರ್ಮಿಕರನ್ನು ಹಂತ ಹಂತವಾಗಿ ಖಾಯಂಗೊಳಿಸುವುದಾಗಿ ಐತಿಹಾಸಿಕ ನಿರ್ಣಯ ಕೈಗೊಂಡ ರಾಜ್ಯ ಸರ್ಕಾರಕ್ಕೆ ಸಮಸ್ತ ಪೌರಕಾರ್ಮಿಕರ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ.



ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಮೇಲ್ಕಂಡ ಮಹಾಸಂಘದಿಂದ ಪೌರಕಾರ್ಮಿಕರ ಒಳಿತಿಗಾಗಿ, ಏಳಿಗೆಗಾಗಿ ಹಗಲಿರುಳು ರಾಜ್ಯಾಧ್ಯಕ್ಷರು ದುಡಿಯುತ್ತಿರುವುದು ಸರಿಯಷ್ಟೆ. ಹಾಗೆ ನಮ್ಮ ಪೌರಕಾರ್ಮಿಕರು ಗುತ್ತಿಗೆ ಪದ್ಧತಿಯಲ್ಲಿ ಜೀತದಾಳುಗಳಂತೆ ದುಡಿಯುತ್ತಿರುವುದನ್ನು ಕಂಡು ಮರುಗಿ ಜೀತಪದ್ಧತಿಯಿಂದ ಮುಕ್ತಿ ಕೊಡುವಂತೆ ಕೋರಿ ನ್ಯಾಯಾಲಯದಲ್ಲಿ ದಾವೆ ಹೂಡಿ ಕಾನೂನು ಹೋರಾಟದಲ್ಲಿ ಗೆದ್ದು, ರಾಜ್ಯಮಟ್ಟದಲ್ಲಿ ಕಾರ್ಮಿಕರನ್ನೆಲ್ಲಾ ಒಗ್ಗೂಡಿಸಿ ರಾಜ್ಯಾದ್ಯಂತ ಹೋರಾಟಗಳನ್ನು ಮಾಡಿದಾಗ ಅಂದಿನ ಮುಖ್ಯಮಂತ್ರಿಗಳಾಗಿದ್ದ ಸನ್ಮಾನ್ಯ ಶ್ರೀ.ಸಿದ್ದರಾಮಯ್ಯ ರವರು ಗುತ್ತಿಗೆ ಪದ್ಧತಿಯನ್ನು ರದ್ದುಮಾಡಿ ರಾಜ್ಯಾದ್ಯಂತ ನೇರವೇತನ ಪದ್ಧತಿಯನ್ನು ಜಾರಿ ಮಾಡಿ ಪೌರಕಾರ್ಮಿಕರ ಮೊಗದಲ್ಲಿ ಸಂತಸ ತಂದಿರುತ್ತಾರೆ.

ಇದರಿಂದ ಸುಮಾರು 35 ಸಾವಿರ ಪೌರಕಾರ್ಮಿಕರಿಗೆ ಸೇವಾಭದ್ರತೆಯಿಂದ ಅನುಕೂಲವಾಗಿರುತ್ತದೆ. ನಮ್ಮ ಭಾರತದೇಶದಲ್ಲಿ ಯಾವುದೇ ರಾಜ್ಯದಲ್ಲಿಯೂ ಸಹ ಗುತ್ತಿಗೆ ಪದ್ಧತಿ ರದ್ದಾಗಿರುವುದಿಲ್ಲ. ನಮ್ಮ ರಾಜ್ಯದಲ್ಲಿ ಮಾತ್ರ ಗುತ್ತಿಗೆ ಪದ್ಧತಿ ರದ್ದಾಗಿರುತ್ತದೆ.

ಕಳೆದ ಬಾರಿ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಸಮಾಜದಲ್ಲಿ ಕಟ್ಟಕಡೆಯ ಕೆಲಸ ಮಾಡುವ ಎಲ್ಲಾ ಸ್ವಚ್ಛತಾ ಕೆಲಸ ಮಾಡುವ ಎಲ್ಲಾ ಪೌರಕಾರ್ಮಿಕರನ್ನು ಖಾಯಂ ಮಾಡುವುದಾಗಿ ಆಶ್ವಾಸನೆ ನೀಡಿದ್ದು, ಅದರಂತೆ ನಮ್ಮ ಮಹಾಸಂಘದ ಹೋರಾಟದ ಸಂದರ್ಭದಲ್ಲಿ ಅಂದಿನ ವಿರೋಧ ಪಕ್ಷದ ನಾಯಕರಾಗಿದ್ದ ಶ್ರೀ ಸಿದ್ದರಾಮಯ್ಯ ರವರು ಖುದ್ದು ಬಂದು ನಮ್ಮ ಸರ್ಕಾರದ ಬಂದ ತಕ್ಷಣ ಎಲ್ಲಾ ಪೌರಕಾರ್ಮಿಕರನ್ನು ಖಾಯಂ ಮಾಡುವುದಾಗಿ ಹೇಳಿರುತ್ತಾರೆ.

ಅದರಂತೆ ಈಗ ಬಡ್ಡೆಟ್‌ನಲ್ಲಿ 24005 ಜನ ಪೌರಕಾರ್ಮಿಕರನ್ನು ಖಾಯಂಗೊಳಿಸಲು ಅನುಮೋದಿಸಲಾಗಿದೆ ಎಂದು ಉಳಿಕೆ ಪೌರಕಾರ್ಮಿಕರನ್ನು ಹಂತ ಹಂತವಾಗಿ ಖಾಯಂಗೊಳಿಸುವುದಾಗಿ ಘೋಷಿಸಿರುತ್ತಾರೆ. ಹಾಗೆ 592 ಒಳಚರಂಡಿ ಸಹಾಯಕ ಕಾರ್ಮಿಕರನ್ನು ಖಾಯಂ ಪ್ರಕ್ರಿಯೆಗೆ ಚಾಲನೆ ನೀಡಿರುತ್ತಾರೆ. ಕೊಟ್ಟ ಮಾತನ್ನು ಉಳಿಸಿಕೊಂಡಂತಹ ಸನ್ಮಾನ್ಯ ಶ್ರೀ.ಸಿದ್ದರಾಮಯ್ಯ ರವರಿಗೆ, ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ.ಶಿವಕುಮಾರ್ ರವರಿಗೆ ಹಾಗೂ ಸಚಿವ ಸಂಪುಟಕ್ಕೆ ಸಮಸ್ತ ಪೌರಕಾರ್ಮಿಕರ ಪರವಾಗಿ ಹೃತ್ತೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ.

ಹಾಗೆ ಹಿಂದಿನ ಸರ್ಕಾರದ ಆದೇಶದಂತೆ ಗುತ್ತಿಗೆ ಪದ್ಧತಿಯಲ್ಲಿ (ಜೀತಪದ್ಧತಿ) ಕೆಲಸ ನಿರ್ವಹಿಸುವ ಲಾರಿ, ಆಟೋ ವಾಹನ ಚಾಲಕರುಗಳು, ಹೆಲ್ಪರ್‌ಗಳು ಕೆ.ಎಂ.ಸಿ ಕಾಯ್ದೆಯ ಪ್ರಕಾರ ಪೌರಕಾರ್ಮಿಕರೆ ಆಗಿದ್ದು ಗುತ್ತಿಗೆ ಪದ್ಧತಿಯನ್ನು ರದ್ದು ಮಾಡಿ ನೇರವೇತನ ಪಾವತಿ ಮಾಡಿ ಎಂದು ಸರ್ಕಾರಕ್ಕೆ ಒತ್ತಾಯ ಮಾಡುತ್ತೇವೆ. ಈ ಕೂಡಲೇ ನೇರಪಾವತಿ ಅಡಿಯಲ್ಲಿ ಸೇರಿಸಲು ಈ ಮೂಲಕ ಸರ್ಕಾರವನ್ನು ಮತ್ತೊಮ್ಮೆ ಆಗ್ರಹಿಸುತ್ತಿದ್ದೇವೆ ಎಂದು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಮಹಾಸಂಘದ ವತಿಯಿಂದ ತಿಳಿಸಲಾಯಿತು.

City Today News 9341997936

‘ಪೌರಕಾರ್ಮಿಕರ ಸಮಾವೇಶ’

‘ಪೌರಕಾರ್ಮಿಕರ ಸಮಾವೇಶ’ ಕುರಿತು ಪತ್ರಿಕಾ ಪ್ರಕಟಣೆ

03.11.2022, ಬೆಂಗಳೂರು ರಾಜ್ಯದ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳಲ್ಲಿ ಕಳೆದ ಹಲವಾರು ವರ್ಷಗಳಿಂದ ಸಾವಿರಾರು ಸ್ವಚ್ಛತಾ ಕಾರ್ಮಿಕರು ದಲಿತ ಸಮುದಾಯಕ್ಕೆ ಸೇರಿದವರಾಗಿದ್ದು, ಅವರು ಕಸ ಸಂಗ್ರಹಿಸುವ ಮತ್ತು ಮಲ ಬಾಚುವ ಕೆಲಸದಲ್ಲಿ ತೊಡಗಿದ್ದಾರೆ. ಆ ಮೂಲಕ ನಗರ, ಪಟ್ಟಣ ಸ್ವಚ್ಛತೆಯಲ್ಲಿ ಮಹತ್ವಪೂರ್ಣ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ ಸೇವಾನಿರತ ಸಾವಿರಾರು ಕಾರ್ಮಿಕರಿಗೆ ಕನಿಷ್ಠ ಕೂಲಿಯಾಗಲಿ, ನ್ಯಾಯೋಚಿತ ಸಂವಿಧಾನಬದ್ಧ ಕನಿಷ್ಠ ಸೌಕರ್ಯಗಳಾಗಲಿ ದೊರತಿಲ್ಲ, ಕೆಲಸದಿಂದ ದೊರೆಯುವ ಆದಾಯವನ್ನೇ ನಂಬಿ ಬದುಕುತ್ತಿರುವ ಕಾರ್ಮಿಕರು ಬೆಲೆ ಏರಿಕೆಯಿಂದಾಗಿ ದೈನಂದಿನ ಅವಶ್ಯಕತೆಗಳನ್ನು ಕೊಂಡುಕೊಳ್ಳಲು ಆಗದೇ ಪಡಿಪಾಟಲು ಅನುಭವಿಸುತ್ತಿದ್ದಾರೆ.

ಸಮಾಜದ, ಸರ್ಕಾರದ ಉದಾಸೀನತೆಯನ್ನು ವಿರೋಧಿಸುವ ಸಲುವಾಗಿ ರಾಜ್ಯದ ಎಲ್ಲಾ ನೇರ ಪಾವತಿ ಪೌರಕಾರ್ಮಿಕರು ಮತ್ತು ನೆಪಮಾತ್ರ ಗುತ್ತಿಗೆ ಪದ್ಧತಿಯಲ್ಲಿ ಶೋಷಣೆ ಅನುಭವಿಸುತ್ತಿರುವ ಘನತ್ಯಾಜ್ಯ ನಿರ್ವಹಣೆಯಲ್ಲಿ ತೊಡಗಿರುವ ವಾಹನ ಚಾಲಕರು ಮತ್ತು ಸಹಾಯಕರು, ಒಳಚರಂಡಿ ಸ್ವಚ್ಛತಾ ಕಾರ್ಮಿಕರನ್ನು ಒಂದೇ ಬಾರಿಗೆ ಖಾಯಂಗೊಳಿಸಲು ಒತ್ತಾಯಿಸಿ ಜುಲೈ 1 – 4, 2022 ರಿಂದ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಸ್ವಚ್ಛತಾ ಕೆಲಸ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರವನ್ನು ಹಮ್ಮಿಕೊಳ್ಳಲಾಗಿದ್ದು, ರಾಜ್ಯ ಸರ್ಕಾರವು ಪೌರಕಾರ್ಮಿಕರನ್ನು ಖಾಯಂಗೊಳಿಸುವಂತೆ ಆಶ್ವಾಸನೆಯನ್ನು ನೀಡಿದ್ದರು. ಈ ನಿಟ್ಟಿನಲ್ಲಿ ಪೌರಕಾರ್ಮಿಕರನ್ನು ಯಾವ ರೀತಿಯಲ್ಲಿ ಖಾಯಂಗೊಳಿಸಬೇಕೆಂದು ವರದಿ ನೀಡುವಂತೆ ಸಮಿತಿಯೊಂದನ್ನು ಅಚಿಸಲಾಗಿದ್ದು, ಹಲವಾರು ಸಂಘಟನೆಗಳನ್ನು ಒಳಗೊಂಡಂತೆ ನಮ್ಮ ಸಂಘಟನೆಯ ಪ್ರತಿನಿಧಿ ಸಹ ಈ ಸಮಿತಿಯಲ್ಲಿ ಒಬ್ಬರಾಗಿದ್ದಾರೆ. ಹೀಗಿರುವಾಗ್ಯೂ, ಸರ್ಕಾರವು ತಮ್ಮ ಆಶ್ವಾಸನೆಯನ್ನು ಮುರಿದು ರಾಜ್ಯಾದ್ಯಂತ ಕೇವಲ 11,133 ಪೌರಕಾರ್ಮಿಕರನ್ನು ಖಾಯಂ ಮಾಡಲು ಮುಂದಾಗಿದ್ದರು. ಇದನ್ನು ತೀವ್ರವಾಗಿ ಖಂಡಿಸಿದ ನಮ್ಮ ಸಂಘಟನೆಯು, ಎಲ್ಲಾ ಪೌರಕಾರ್ಮಿಕರನ್ನು ಖಾಯಂಗೊಳಿಸಬೇಕು ಮತ್ತು ವಾಹನ ಚಾಲಕರು/ ಸಹಾಯಕರನ್ನು ನೇರ ಪಾವತಿ ಸಂಭಾವನೆ ವ್ಯವಸ್ಥೆಯಡಿಯಲ್ಲಿ ತಂದು ಅವರನ್ನೂ ಸಹ ಮುಂದಿನ ದಿನಗಳಲ್ಲಿ ಖಾಯಂ ಮಾಡಬೇಕು ಎಂದು ಒತ್ತಾಯವನ್ನು ಮಾಡಿದೆ.

ಒಟ್ಟಾರೆಯಾಗಿ ನೋಡಿದಾಗ ಇದು, ಸಚಿವ ಸಂಪುಟದ ನಿರ್ಣಯವನ್ನು ಉಲ್ಲಂಘಿಸಿ ನಾಡಿನ ಸ್ವಚ್ಛತಾ ಕಾರ್ಮಿಕರಿಗೆ ಮೋಸ ಮಾಡಿದಂತೆ ಕಂಡು ಬರುತ್ತದೆ. ಪೌರಕಾರ್ಮಿಕರ ಧೈಯೋದ್ದೇಶವು ಖಾಯಮಾತಿ ಎಡೆಗೆ ಇದ್ದರೂ, ಖಾಯಮಾತಿಯು ಕಾರ್ಮಿಕರ ಬದುಕಿಗೆ ಘನತೆಯನ್ನು ತರುತ್ತದೆ ಎಂಬುದು ಮೂಲ ಉದ್ದೇಶವಾಗಿರುತ್ತದೆ. ಖಾಯಮಾತಿ, ವಸತಿ, ಮಕ್ಕಳ ಶಿಕ್ಷಣ, ಉತ್ತಮ ಆರೋಗ್ಯ ಸೌಲಭ್ಯತೆ, ಮುಂತಾದವುಗಳೊಂದಿಗೆ, ಪೌರಕಾರ್ಮಿಕರ ಹೋರಾಟವು ಘನತೆಯುತ್ತ ಜೀವನ ಮತ್ತು ಉತ್ತಮ ಜೀವನದೆಡೆಗೆ ‘ಪೌರಕಾರ್ಮಿಕರ ಸಮಾವೇಶ’ ವನ್ನು ಆಯೋಜಿಸಲಾಗಿದೆ.

ನಮ್ಮ ಮುಖ್ಯವಾದ ಹಕ್ಕೊತ್ತಾಯಗಳು :

  1. ಕಸ ಗುಡಿಸುವ ಪೌರಕಾರ್ಮಿಕರು, ವಾಹನ ಚಾಲಕರು, ಲೋಡರ್‌, ಸಹಾಯಕರು, ಸ್ವಚ್ಛತಾ ಕಾರ್ಮಿಕರು, ಯುಜಿಡಿ ಕಾರ್ಮಿಕರನ್ನು ಒಳಗೊಂಡಂತೆ, ಎಲ್ಲಾ ಪೌರಕಾರ್ಮಿಕರನ್ನು ಸರ್ಕಾರವು ಖಾಯಂಗೊಳಿಸಬೇಕು.

2, ಎಲ್ಲಾ ಪೌರಕಾರ್ಮಿಕರಿಗೆ ಉಚಿತ ವಸತಿ ಒದಗಿಸಬೇಕು

  1. ಪೌರಕಾರ್ಮಿಕರಿಗೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಈ ಕೂಡಲೇ ಒದಗಿಸಬೇಕು
  2. ಎಲ್ಲಾ ಸ್ವಚ್ಛತಾ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ ಹಣಕಾಸಿನ ನೆರವು ನೀಡಬೇಕು
  3. ನಿವೃತ್ತಿ ಹೊಂದುವ ಎಲ್ಲಾ ಕಾರ್ಮಿಕರಿಗೆ ತಲಾ ರು. 10 ಲಕ್ಷ ಮತ್ತು ಮಾಸಿಕ್ ರು. 10,000 ಪಿಂಚಣಿ ನೀಡಬೇಕು
  4. ಮೃತಪಟ್ಟ ಕಾರ್ಮಿಕರ ಕುಟುಂಬಕ್ಕೆ ರು. 10 ಲಕ್ಷ ಪರಿಹಾರ ಧನ ಮತ್ತು ಕುಟುಂಬದ ಸದಸ್ಯರಿಗೆ ಅನುಕಂಪ ಉದ್ಯೋಗ ಒದಗಿಸಬೇಕು

ಬಿಬಿಎಂಪಿ ಪೌರ ಕಾರ್ಮಿಕರ ಸಂಘ, ಕರ್ನಾಟಕ ಪ್ರಗತಿಪರ ಪೌರ ಕಾರ್ಮಿಕರ ಸಂಘ ಕರ್ನಾಟಕ ಪ್ರಗತಿಪರ ತ್ಯಾಜ್ಯ ಸಾಗಿಸುವ ವಾಹನ ಚಾಲಕರ ಮತ್ತು ಸಹಾಯಕರ ಸಂಘ (ಎಐಸಿಸಿಟಿಯು)

‘ಪೌರಕಾರ್ಮಿಕರ ಸಮಾವೇಶ’ | ದಿನಾಂಕ: 06-11-2022, ಸ್ಥಳ: ಅಂಬೇಡ್ಕರ್ ಭವನ, ವಸಂತನಗರ, ಬೆಂಗಳೂರು

– AICCTU

City Today News – 9341997936

ಬಿಬಿಎಂಪಿ ಕೇಂದ್ರ ಕಛೇರಿಯ ಆವರಣದಲ್ಲಿ ಬೃಹತ್‌ ಧರಣಿ

10.03.2022 ರ ಗುರುವಾರ ಬೆಳಗ್ಗೆ 10.00 ಗಂಟೆಗೆ ಬಿಬಿಎಂಪಿ ಕೇಂದ್ರ ಕಛೇರಿಯ ಆವರಣದಲ್ಲಿ ಬೃಹತ್‌ ಧರಣಿ .

ನೇರವೇತನ ಪೌರಕಾರ್ಮಿಕರು , ಬಿಬಿಎಂಪಿ ಕೇಂದ್ರ ಕಛೇರಿ ಆವರಣದಲ್ಲಿ ಈ ಮೇಲ್ಕಂಡ ದಿನಾಂಕದಂದು ಬೃಹತ್ ಧರಣಿಯನ್ನು ಶ್ರೀ ನಾರಾಯಣ ( ಮೈಸೂರು ) , ರಾಜ್ಯಾಧ್ಯಕ್ಷರು , ಮಾಜಿ ಅಧ್ಯಕ್ಷರು , ಸಫಾಯಿ ಕರ್ಮಚಾರಿ ಆಯೋಗ ಮಾಜಿ ಮಹಾಪೌರರು , ಮೈಸೂರು ಮಹಾನಗರ ಪಾಲಿಕೆ ರವರ ನೇತ್ರುತ್ವದಲ್ಲಿ ಹಮ್ಮಿಕೊಳ್ಳಲಾಗಿರುತ್ತದೆ . ನೇರವೇತನ ಪೌರಕಾರ್ಮಿಕರ ಹಲವಾರು ಬೇಡಿಕೆಗಳನ್ನು ಈಡೇರಿಸದೇ ಇರುವ ಕಾರಣದಿಂದಾಗಿ ಈ ಬೃಹತ್ ಧರಣಿಯಲ್ಲಿ ಸುಮಾರು ಪೌರಕಾರ್ಮಿಕರು ಸಾವಿರಾರು ಸಹಸ್ರಾರು ಜನರು ಪಾಲ್ಗೊಳ್ಳಲಿದ್ದಾರೆ . ಈ ನೇರವೇತನ ಪೌರಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವವರೆಗೂ ಈ ಹೋರಾಟವು ಮುಂದುವರೆಯುತ್ತದೆ .

ಇವರುಗಳು ಕೋವಿಡ್ -19 , ವೈರಾಣು ಸಾಂಕ್ರಾಮಿಕ ರೋಗ ಬಂದಾಗಿನಿಂದ ಪೊಲೀಸ್ ಸಿಬ್ಬಂದಿಗಳು ಹಾಗೂ ಡಾಕ್ಟರ್‌ಗಳು ತಮ್ಮ ಪ್ರಾಣವನ್ನು ಹೊತ್ತೆ ಇಟ್ಟು ಕೆಲಸ ನಿರ್ವಹಿಸಿರುತ್ತೀರಿ . ಅದೇ ರೀತಿಯಾಗಿ ನಮ್ಮ ಪೌರಕಾರ್ಮಿಕರು ಸಹ ತಮ್ಮ ತಮ್ಮ ಪ್ರಾಣಗಳನ್ನು ಹೊತ್ತೆ ಇಟ್ಟು ಕೋವಿಡ್ -19 ರ 3 ಹಂತದಲ್ಲಿ ಕೆಲಸ ಮಾಡಿರುತ್ತಾರೆ . ಆದರೆ ಬಿಬಿಎಂಪಿ ಅಧಿಕಾರಿಗಳಿಂದ ಮತ್ತು ನಮ್ಮ ಸರ್ಕಾರದಿಂದ ಯಾವುದೇ ನಮ್ಮ ಬೇಡಿಕೆಗಳು ಈಡೇರಿಸಿರುವುದಿಲ್ಲ . ಆದ್ದುದರಿಂದ ಈ ಮೇಲ್ಕಂಡ ದಿನಾಂಕದಂದು ಅಧಿಕಾರಿಗಳಿಗೆ ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಈ ಬೃಹತ್ ಧರಣಿಯಲ್ಲಿ ಸುಮಾರು ಪೌರಕಾರ್ಮಿಕರು ಸಾವಿರಾರು ಸಹಸ್ರಾರು ಜನರು ಸೇರುವ ಅವಕಾಶವಿರುತ್ತದೆ ಎಂದು ಮುನಿರಾಜು, ಅಧ್ಯಕ್ಷರು , ಬೆಂಗಳೂರು ನಗರ ಮಾಧ್ಯಮ ಗೋಷ್ಥಿಯಲ್ಲಿ ತಿಳಿಸಿದರು.

ಮಾಧ್ಯಮ ಗೋಷ್ಥಿಯಲ್ಲಿ ಬಿ.ಎಂ.ಸುರೇಶ್ ಬಾಬು ರಾಜ್ಯ ಉಪಾಧ್ಯಕ್ಷರು, ಎಂ.ಜಿ.ಶ್ರೀನಿವಾಸ್ ಉಪಾಧ್ಯಕ್ಷರು , ಬೆಂ.ನಗರ, ಎಂ.ನಾಗರಾಜು ( ಹೆಬ್ಬಾಳ ) ರಾಜ್ಯ ಕಾರ್ಯಾಧ್ಯಕ್ಷರು, ಎಂ.ನರಸಿಂಹ ನಾಯ್ಡು ಮಹಾ ಸಂ . ಕಾರ್ಯದರ್ಶಿ , ಬೆಂ.ನಗರ & ಗ್ರಾಮಾಂತರ ಮತ್ತು ಎನ್.ಅಂಜನೇಯಲು ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಪತ್ರಕರ್ತ ಸಂಯೋಜಕರು ಹಾಜರಿದ್ದರು.

City Today News

9341997936

ಬೆಂಗಳೂರು ಮಹಾನಗರ ಪಾಲಿಕೆ ಸ್ವತ್ತನ್ನು ಪಾಲಿಕೆಯು ವಶಕ್ಕೆ ಪಡೆಯುವ ವಿಷಯಕ್ಕೆ ಸಂಬಂಧಿಸಿದಂತೆ ಪತ್ರದ ಮೂಲಕ ಬೆದರಿಕೆ ಹಾಕಿರುವ ಶಾಸಕ ಜ಼ಮೀರ್ ಅಹಮದ್ – N. R. ರಮೇಶ್.

• ಸುಮಾರು 300 ಕೋಟಿ ಮೌಲ್ಯದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸ್ವತ್ತನ್ನು ಪಾಲಿಕೆಯ ವಶಕ್ಕೆ ಪಡೆಯದ ಭ್ರಷ್ಟ ಅಧಿಕಾರಿಗಳ ಮತ್ತೊಂದು ಬೃಹತ್ ಹಗರಣ ಬಯಲು.
• ಪಾಲಿಕೆ ಸ್ವತ್ತನ್ನು ಪಾಲಿಕೆಯ ವಶಕ್ಕೆ ಪಡೆಯುವ ವಿಷಯಕ್ಕೆ ಸಂಬಂಧಿಸಿದಂತೆ, ಬಿಬಿಎಂಪಿಯ ಹಿಂದಿನ ಆಡಳಿತಾಧಿಕಾರಿಗಳಿಗೆ ಪರೋಕ್ಷವಾಗಿ ಪತ್ರದ ಮೂಲಕ ಬೆದರಿಕೆ ಹಾಕಿರುವ ಶಾಸಕ ಜ಼ಮೀರ್ ಅಹಮದ್.
• ಬೆಂಗಳೂರು ಮಹಾನಗರದ ಹೃದಯಭಾಗದಲ್ಲಿರುವ ಕಾಟನ್ ಪೇಟೆ ಮುಖ್ಯರಸ್ತೆಯಲ್ಲಿ ಸೂಪರ್ ಚಿತ್ರಮಂದಿರದ ಪಕ್ಕದಲ್ಲಿಯೇ ಇರುವ ಸುಮಾರು 1,19,894 ಚ. ಅಡಿ ವಿಸ್ತೀರ್ಣದ ಸ್ವತು.
• PID ಸಂಖ್ಯೆ 139-27-139 ರ ಸುಮಾರು 1,19,894 ಚ. ಅಡಿ ವಿಸ್ತೀರ್ಣದ ಸ್ವತ್ತು ಪಾಲಿಕೆಯ ಸ್ವತ್ತು ಎಂದು ರಾಜ್ಯ ಉಚ್ಛ ನ್ಯಾಯಾಲಯವು 06 ವರ್ಷಗಳ ಹಿಂದಯೇ ತೀರ್ಪನ್ನು ನೀಡಿದೆ.
• ಈ ಕೂಡಲೇ ಸದರಿ ಸ್ವತ್ತನ್ನು ಪಾಲಿಕೆಯು ತನ್ನ ವಶಕ್ಕೆ ತೆಗೆದುಕೊಂಡು ಸ್ವತ್ತಿಗೆ ಕಾಂಪೌಂಡ್ ನಿರ್ಮಿಸಬೇಕೆಂದು ಉಚ್ಛ ನ್ಯಾಯಾಲಯವು ಆದೇಶಿಸಿದೆ.
• ಪೀರ್ ಗ್ರೌಂಡ್ ಎಂದೇ ಕರೆಯಲ್ಪಡುವ ಈ ಸ್ವತ್ತಿನ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಪೀರ್ ಸೂಫಿ ಸೈಯದ್ ಶಾ ಶಮ್ ಶುಲ್ ಹಕ್ ಎಂಬುವವರು ಸಿಟಿ ಸಿವಿಲ್ ನ್ಯಾಯಾಲಯದಲ್ಲಿ, ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣಗಳನ್ನು ದಾಖಲಿಸಿದ್ದರು.
• ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಉಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಾಗಿತ್ತು.
• ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ದಾಖಲಿಸಿದ್ದ ಮೂಲದಾವೆ ಸಂಖ್ಯೆ OS # 814 /1982
• ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ದಾಖಲಿಸಿದ್ದ ಪ್ರಕರಣ ಸಂಖ್ಯೆ – RFA # 1192/2002
• ಸದರಿ ಸ್ವತ್ತಿಗೆ ಸಂಬಂಧಿಸಿದಂತೆ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ (WP # 14893/2014) PIL ದಾಖಲಾಗಿತ್ತು.
• ಈ ಸಂಬಂಧ ಸಮಗ್ರ ವಿಚಾರಣೆ ನಡೆಸಿದ್ದ ರಾಜ್ಯ ಉಚ್ಛ ನ್ಯಾಯಾಲಯವು ಸದರಿ ಸ್ವತ್ತು “ಪಾಲಿಕೆಯ ಸ್ವತ್ತು”ಎಂದು ಸ್ಪಷ್ಟವಾಗಿ ತೀರ್ಪನ್ನು ನೀಡಿತ್ತಲ್ಲದೇ, ತಕ್ಷಣವೇ ಸದರಿ ಸ್ವತ್ತನ್ನು “ಪಾಲಿಕೆಯ ಸುಪರ್ದಿ”ಗೆ ತೆಗೆದುಕೊಳ್ಳುವಂತೆ ಬಿಬಿಎಂಪಿ ಗೆ ಆದೇಶಿಸಿತ್ತು.
• ರಾಜ್ಯ ಉಚ್ಛ ನ್ಯಾಯಾಲಯವು ಸುಮಾರು 1,19,894 ಚ. ಅಡಿ ವಿಸ್ತೀರ್ಣದ ಈ ಸ್ವತ್ತಿನ ಈಶಾನ್ಯ ಭಾಗದಲ್ಲಿದ್ದ ಸುಮಾರು 18,900 ಚ. ಅಡಿ ವಿಸ್ತೀರ್ಣದ ಮುಸ್ಲಿಂ ಸ್ಮಶಾನದ ಜಾಗವನ್ನು “ಲಡಾಕ್ ಶಾ ವಾಲಿ ಮಸೀದಿ” ಗೆ ಒಪ್ಪಿಸುವಂತೆ ಆದೇಶಿಸಿತ್ತು.
• ಇನ್ನುಳಿದ 1,00,994 ಚ. ಅಡಿ ವಿಸ್ತೀರ್ಣದ ಸ್ವತ್ತು “ಪಾಲಿಕೆಯ ಆಸ್ತಿ”ಯಾಗಿದ್ದು, ಕೂಡಲೇ ಆ ಸ್ವತ್ತಿಗೆ ಕಾಂಪೌಂಡ್ ನಿರ್ಮಿಸಿ ಪಾಲಿಕೆಯ ಸುಪರ್ದಿಗೆ ತೆಗೆದುಕೊಳ್ಳಬೇಕೆಂದು ಆದೇಶ ನೀಡಿತ್ತು.
• ಪಾಲಿಕೆಯ 300 ಕೋಟಿ ರೂಪಾಯಿಗಳಿಗೂ ಹೆಚ್ಚು ಮಾರುಕಟ್ಟೆ ಮೌಲ್ಯವನ್ನು ಹೊಂದಿರುವ ಈ ಸ್ವತ್ತಿನ ರಕ್ಷಣೆ ಬಗ್ಗೆ 2015 ರ ವಿಧಾನಸಭಾ ಅಧಿವೇಶನದಲ್ಲಿ ಸಾಕಷ್ಟು ಚರ್ಚೆಗಳು ನಡೆದಿದ್ದವು.
• ಸ್ವತಃ ಅಂದಿನ ಮುಖ್ಯಮತ್ರಿಗಳೇ ಈ ಸ್ವತ್ತು ಸರ್ಕಾರದ ಅಮೂಲ್ಯ ಆಸ್ತಿಯಾಗಿದ್ದು, ಕೂಡಲೇ ಸದರಿ ಸ್ವತ್ತಿಗೆ ಕಾಂಪೌಂಡ್ ನಿರ್ಮಿಸಿ, ಭದ್ರತಾ ವ್ಯವಸ್ಥೆಗೆ ಸಿಬ್ಬಂದಿಗಳನ್ನು ನೇಮಿಸುವಂತೆ ಪಾಲಿಕೆಗೆ ಆದೇಶಿಸಿರುತ್ತಾರೆ ಹಾಗೂ ಸರ್ಕಾರಿ ಅಧಿಸೂಚನೆಯೂ ಪ್ರಕಟವಾಗಿರುತ್ತದೆ.
• ಈ ಸ್ವತ್ತಿಗೆ ಸಂಬಂಧಿಸಿದಂತೆ ಪ್ರಕಟಿಸಲಾದ ಅಧಿಸೂಚನೆಯ ಸರ್ಕಾರಿ ಆದೇಶ ಸಂಖ್ಯೆ: ನಅಇ/44/ MNG /2015 – dt: 05/02/2015
• ಉಚ್ಛ ನ್ಯಾಯಾಲಯದ ಆದೇಶದಂತೆ ಮತ್ತು ಸರ್ಕಾರಿ ಆದೇಶದಂತೆ ಸದರಿ ಸ್ವತ್ತಿಗೆ Chain link Fencing ಹಾಕಲು ತೀರ್ಮಾನ ತೆಗೆದುಕೊಂಡ ಪಾಲಿಕೆಯು ಈ ಸಂಬಂಧ ಟೆಂಡರ್ ಆಹ್ವಾನಿಸಿತ್ತು.
• ಅಂತಿಮವಾಗಿ C. S. ಜಗದೀಶ್ ಎಂಬ ಗುತ್ತಿಗೆದಾರನಿಗೆ 49 ಲಕ್ಷ ರೂಪಾಯಿಗಳ ವೆಚ್ಛದಲ್ಲಿ ಈ ಸ್ವತ್ತಿಗೆ ಕಾಂಪೌಂಡ್ ನಿರ್ಮಿಸಲು ದಿನಾಂಕ 19/05/2015 ರಂದು “ಕಾರ್ಯಾದೇಶ ಪತ್ರ”ವನ್ನು ನೀಡಿತ್ತು.
• ಆದರೆ, ಕಳೆದ ಐದಾರು ವರ್ಷಗಳಿಂದಲೂ ಪಾಲಿಕೆಯ ಈ ಸ್ವತ್ತಿಗೆ ಕಾಂಪೌಂಡ್ ಅನ್ನು ನಿರ್ಮಾಣ ಮಾಡಿಯೇ ಇಲ್ಲ.
• ಉಚ್ಛ ನ್ಯಾಯಾಲಯದ ಆದೇಶದನ್ವಯ ಸದರಿ ಸ್ವತ್ತನ್ನು ತನ್ನ ಸುಪರ್ದಿಗೆ ಪಡೆಯಲು ಮತ್ತು ಕಾಂಪೌಂಡ್ ಅನ್ನು ನಿರ್ಮಾಣ ಮಾಡಲು ಪಾಲಿಕೆಯ ಅಧಿಕಾರಿಗಳು ಕಾಟಾಚಾರಕ್ಕೆ ಟೆಂಡರ್ ಕರೆದು C. S. ಜಗದೀಶ್ ಎಂಬ ಗುತ್ತಿಗೆದಾರನಿಗೆ ಕಾರ್ಯಾದೇಶ ಪತ್ರ ನೀಡಿದ್ದು, ಕಳೆದ ಐದೂವರೆ ವರ್ಷಗಳಿಂದಲೂ ಕೇವಲ ಹಲವು ಸಬೂಬುಗಳನ್ನು ಹೇಳಿ ಪತ್ರ ವ್ಯವಹಾರಗಳಲ್ಲೇ ಕಾಲಹರಣ ಮಾಡುತ್ತಿದ್ದಾರೆ.
• ಈ ಸಂಬಂಧ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದಿರುವ ಭ್ರಷ್ಟ ಅಧಿಕಾರಿಗಳು.
• ಉಚ್ಛ ನ್ಯಾಯಾಲಯದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತನ್ನೂ ಕೊಡದೇ ಇರುವ ಪಾಲಿಕೆಯ ಚಾಮರಾಜಪೇಟೆ ವಿಭಾಗದ ಕಾರ್ಯಪಾಲಕ ಅಭಿಯಂತರ ತನ್ವೀರ್ ಅಹಮದ್.

• ಜ಼ಮೀರ್ ಅಹಮದ್ ಅವರ ಆಪ್ತವಲಯದಲ್ಲಿದ್ದ ಭ್ರಷ್ಟ ತನ್ವೀರ್ ಅಹಮದ್ ಕಳೆದ ಐದಾರು ವರ್ಷಗಳಿಂದಲೂ ಚಾಮರಾಜಪೇಟೆ ವಿಭಾಗದಲ್ಲಿಯೇ ಮುಂದುವರೆದಿದ್ದರು.
• ಪ್ರಸ್ತುತ ಕಳೆದ ಎರಡು ತಿಂಗಳ ಹಿಂದಷ್ಟೇ ನಿವೃತ್ತರಾಗಿರುವ ತನ್ವೀರ್ ಅಹಮದ್ ಹಲವರು ಗುರುತರ ಆರೋಪಗಳನ್ನು ಎದುರಿಸುತ್ತಿದ್ದು, ಅಮಾನತಿಗೊಳಗಾಗಿದ್ದರು.
• ಈ ಅಮೂಲ್ಯ ಸರ್ಕಾರಿ ಸ್ವತ್ತಿನ ರಕ್ಷಣೆಯ ಬಗ್ಗೆ ಧ್ವನಿ ಎತ್ತಿದ್ದ ಭಕ್ಷಿ ಗಾರ್ಡನ್ ನಿವಾಸಿ ಮತ್ತು ಅಖಿಲ ಕರ್ನಾಟಕ ಭೋವಿ ಸಂಘದ ಕಾರ್ಯದರ್ಶಿ R. V. ಶ್ರೀನಿವಾಸ್ ಎಂಬುವವರು ಈ ಸಂಬಂಧ ತನ್ವೀರ್ ಅಹಮದ್ ಸೇರಿದಂತೆ ಚಾಮರಾಜಪೇಟೆ ಉಪವಿಭಾಗದ ಸಹಾಯಕ ಕಂದಾಯ ಅಧಿಕಾರಿಗಳ ವಿರುದ್ಧ ಪಾಲಿಕೆಯ ಆಯುಕ್ತರಿಗೆ ಹಲವಾರು ಭಾರಿ ದೂರುಗಳನ್ನು ನೀಡಿದ್ದರಲ್ಲದೇ, BMTF ನಲ್ಲಿಯೂ ದೂರುಗಳನ್ನು ದಾಖಲಿಸಿದ್ದಾರೆ.
• R. V. ಶ್ರೀನಿವಾಸ್ ಅವರ ದೂರುಗಳನ್ನು ಆಧರಿಸಿ BMTF ಪೋಲೀಸರು ಹಲವು ಬಾರಿ ತನ್ವೀರ್ ಅಹಮದ್ ಸೇರಿದಂತೆ ಸಂಬಂಧಪಟ್ಟ ಎಂಜಿನಿಯರ್ ಗಳು ಮತ್ತು ಕಂದಾಯ ಇಲಾಖೆಯ ಅಧಿಕಾರಿ / ನೌಕರರಿಗೆ ವಿಚಾರಣಾ ನೋಟೀಸ್ ಗಳನ್ನು ಜಾರಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
• ಪಶ್ಚಿಮ ವಲಯದ ಜಂಟಿ ಆಯುಕ್ತರು ಈ ಸ್ವತ್ತಿನ ರಕ್ಷಣೆಯ ಬಗ್ಗೆ ಕ್ರಮವಹಿಸದ ಚಾಮರಾಜಪೇಟೆ ಉಪವಿಭಾಗದ ARO ಅಶೋಕ್ ಮತ್ತು ಕಂದಾಯ ಪರಿವೀಕ್ಷಕ ತಿಮ್ಮಯ್ಯನವರನ್ನು ಸೇವೆಯಿಂದ ವಜಾಗೊಳಿಸುವಂತೆ ಶಿಫಾರಸ್ಸನ್ನೂ ಸಹ ಮಾಡಿದ್ದಾರೆ.
• ಪ್ರಸ್ತುತ ಸದರಿ ಸ್ವತ್ತಿನಲ್ಲಿ ಹಲವಾರು ಅಕ್ರಮ ಕಟ್ಟಡಗಳು ತಲೆ ಎತ್ತಿವೆ.
• ಈ ಸಂಬಂಧ ವಾರ್ಡ್ 139 ರ ಸಹಾಯಕ ಎಂಜಿನಿಯರ್ ಒಬ್ಬರು 2017 ರಲ್ಲಿ ಕಾಟನ್ ಪೇಟೆ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೋಲೀಸರು 1) ಸೈಯದ್ ಖಲೀಲ್ 2) ತಾಹಿರಾ ಖಲೀಲ್ ಮತ್ತು 3) ಸೈಯದ್ ರಹೀಸ್ ಖಲೀಲ್ ಎಂಬುವವರ ವಿರುದ್ಧ FIR (0211/2017) ದಾಖಲಿಸಿದ್ದಾರೆ.
• ಶಾಸಕ ಜ಼ಮೀರ್ ಅಹಮದ್ ಪ್ರಭಾವಗಳಿಗೆ ಮಣಿದಿರುವ ಮತ್ತು ಬೆದರಿಕೆ ತಂತ್ರಗಳಿಗೆ ಹೆದರಿರುವ ಪಾಲಿಕೆಯ ಅಧಿಕಾರಿಗಳು ಈ ಅಮೂಲ್ಯ ಸ್ವತ್ತನ್ನು ಕಾಂಪೌಂಡ್ ನಿರ್ಮಿಸಿ ಪಾಲಿಕೆಯ ವಶಕ್ಕೆ ಪಡೆಯುವ ನಿಟ್ಟಿನಲ್ಲಿ ಒಂದೇ ಒಂದು ಹೆಜ್ಜೆಯನ್ನೂ ಮುಂದಿಟ್ಟಿಲ್ಲವೆಂಬುದು ಜಗಜ್ಜಾಹಿರವಾಗಿದೆ.
• ಸದಾ ಒಂದಿಲ್ಲೊಂದು ಸಮಾಜ ವಿರೋಧೀ ಕಾರ್ಯಗಳಿಂದ ಕುಖ್ಯಾತಿ ಪಡೆಯುತ್ತಿರುವ ವಿವಾದಾತ್ಮಕ ರಾಜಕಾರಣಿ ಶಾಸಕ ಜ಼ಮೀರ್ ಅಹಮದ್.
• ಶಾಸಕ ಜ಼ಮೀರ್ ಅಹಮದ್ 06/06/2015 ರಂದು ಅಂದಿನ ಪಾಲಿಕೆಯ ಆಡಳಿತಾಧಿಕಾರಿಗಳಿಗೆ ಪರೋಕ್ಷ ಬೆದರಿಕೆ ಪತ್ರವನ್ನು ಬರೆದು, ಸದರಿ ಸ್ವತ್ತನ್ನು ಪಾಲಿಕೆಯ ವಶಕ್ಕೆ ಪಡೆದುಕೊಳ್ಳಲು ಮುಂದಾದಲ್ಲಿ ಮತ್ತು ಸದರಿ ಸ್ವತ್ತಿಗೆ ಕಾಂಪೌಂಡ್ ನಿರ್ಮಾಣ ಮಾಡಲು ಮುಂದಾದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗುವುದೆಂದೂ ಮತ್ತು ಕೋಮು ಗಲಭೆ ನಡೆಯುವ ಅವಕಾಶವಿದೆಯೆಂದು ಎಚ್ಚರಿಕೆ ನೀಡಿರುವ ವಿಷಯ ತಡವಾಗಿ ಈಗಷ್ಟೇ ಬೆಳಕಿಗೆ ಬಂದಿದೆ.
• ಶಾಸಕ ಜ಼ಮೀರ್ ಅಹಮದ್ ಅವರು ತಮ್ಮ ಎಂದಿನ ಬೆದರಿಕೆ ತಂತ್ರಗಳಿಂದ ಈ ಅಮೂಲ್ಯ ಸರ್ಕಾರಿ ಸ್ವತ್ತನ್ನು ಪಾಲಿಕೆಯ ವಶಕ್ಕೆ ಪಡೆದುಕೊಳ್ಳಲು ತಮ್ಮ ವಿರೋಧವಿದೆ ಎಂಬುದನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ.
• ಈ ನೆಲದ ಕಾನೂನಿಗೆ, ನ್ಯಾಯಾಲಯದ ಆದೇಶಗಳಿಗೆ ತಾವು ಬೆಲೆಯನ್ನೇ ಕೊಡುವುದಿಲ್ಲವೆಂಬುದನ್ನು ಮತ್ತೊಮ್ಮೆ ರುಜುವಾತುಪಡಿಸಿರುವ ಶಾಸಕ ಜ಼ಮೀರ್ ಅಹಮದ್.
• ಉಚ್ಛ ನ್ಯಾಯಾಲಯದ ಆದೇಶದನ್ವಯ 300 ಕೋಟಿ ರೂಪಾಯಿಗಳಿಗೂ ಹೆಚ್ಚು ಮೌಲ್ಯದ ಪಾಲಿಕೆಯ ಅಮೂಲ್ಯ ಸ್ವತ್ತನ್ನು ಕೂಡಲೇ ಪಾಲಿಕೆಯ ವಶಕ್ಕೆ ತೆಗೆದುಕೊಂಡು ಕಾಂಪೌಂಡ್ ನಿರ್ಮಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿರುವ N. R. ರಮೇಶ್.
• ಚಾಮರಾಜಪೇಟೆ ವಿಭಾಗದ ಕಾರ್ಯಪಾಲಕ ಅಭಿಯಂತರರು, ಚಾಮರಾಜಪೇಟೆ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು, ವಾರ್ಡ್ – 139 ರ ಸಹಾಯಕ ಅಭಿಯಂತರರು, ಪಶ್ಚಿಮ ವಲಯದ ಜಂಟಿ ಆಯುಕ್ತರು ಮತ್ತು ಮುಖ್ಯ ಅಭಿಯಂತರರು ಹಾಗೂ ಚಾಮರಾಜಪೇಟೆ ಉಪವಿಭಾಗದ ಸಹಾಯಕ ಕಂದಾಯ ಅಧಿಕಾರಿಗಳು, 2015 ರಿಂದ 2020 ರವರೆಗೆ ಕಾರ್ಯ ನಿರ್ವಹಿಸಿರುವ ಪಾಲಿಕೆಯ ಆಸ್ತಿಗಳ ವಿಭಾಗದ ಜಂಟಿ ಆಯುಕ್ತರು / ಉಪ ಆಯುಕ್ತರು ಹಾಗೂ ಕಳೆದ ಐದು ವರ್ಷಗಳಿಂದಲೂ ಸದರಿ ಸ್ವತ್ತಿಗೆ ಕಾಂಪೌಂಡ್ ನಿರ್ಮಿಸದ ಗುತ್ತಿಗೆದಾರ C. S. ಜಗದೀಶ್ ಅವರುಗಳ ವಿರುದ್ಧ ACB, BMTF ಗಳಲ್ಲಿ ದೂರುಗಳು ದಾಖಲು.
• ನ್ಯಾಯಾಲಯದ ಆದೇಶದ ಉಲ್ಲಂಘನೆ, ಭ್ರಷ್ಟಾಚಾರ, ಸರ್ಕಾರಿ ಸ್ವತ್ತು ಕಬಳಿಕೆಗೆ ಸಹಕಾರ, ಸರ್ಕಾರಿ ನೆಲಗಳ್ಳರಿಗೆ ಸಹಕಾರ ನೀಡಿರುವ ಪ್ರಕರಣಗಳು ದಾಖಲು.
• ಹಿಂದಿನ ಆಡಳಿತಾಧಿಕಾರಿಗಳಿಗೆ ಪತ್ರ ಮುಖೇನ ಪರೋಕ್ಷ ಬೆದರಿಕೆ ಹಾಕಿರುವ ಮತ್ತು ಉಚ್ಛ ನ್ಯಾಯಾಲಯದ ಆದೇಶದಂತೆ ಸದರಿ ಸ್ವತ್ತನ್ನು ಪಾಲಿಕೆಯ ವಶಕ್ಕೆ ಪಡೆಯಲು ಅವಕಾಶ ನೀಡದೆ ತಮ್ಮ ರಾಜಕೀಯ ಪ್ರಭಾವಗಳಿಂದ ಅಧಿಕಾರಿಗಳ ವಿರುದ್ಧ ಬೆದರಿಕೆ ತಂತ್ರ ಅನುಸರಿಸುತ್ತಿರುವ ಶಾಸಕ ಜ಼ಮೀರ್ ಅಹಮದ್ ಅವರ ವಿರುದ್ಧವೂ ಪ್ರಕರಣಗಳು ದಾಖಲು
• 300 ಕೋಟಿ ಮೌಲ್ಯದ ಅಮೂಲ್ಯ ಪಾಲಿಕೆ ಸ್ವತ್ತನ್ನು ಕೂಡಲೇ ಪಾಲಿಕೆಯ ವಶಕ್ಕೆ ತೆಗೆದುಕೊಳ್ಳುವ ಸಂಬಂಧ ಕಾನೂನು ರೀತ್ಯಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಪಾಲಿಕೆಯ ಮಾನ್ಯ ಆಯುಕ್ತರನ್ನು ಮತ್ತು ಆಡಳಿತಾಧಿಕಾರಿಗಳನ್ನು ಆಗ್ರಹಿಸಿರುವ N. R. ರಮೇಶ್.
• ಅಮೂಲ್ಯ ಪಾಲಿಕೆಯ ಸ್ವತ್ತನ್ನು ಪಾಲಿಕೆಯ ವಶಕ್ಕೆ ತೆಗೆದುಕೊಳ್ಳದೆಯೇ ವೃಥಾ ಕಾಲಹರಣ ಮಾಡುತ್ತಿರುವ ಚಾಮರಾಜಪೇಟೆ ವಿಭಾಗದ ಕಾರ್ಯಪಾಲಕ ಅಭಿಯಂತರರು, ಚಾಮರಾಜಪೇಟೆ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು, ವಾರ್ಡ್ – 139 ರ ಸಹಾಯಕ ಅಭಿಯಂತರರು, ಪಶ್ಚಿಮ ವಲಯದ ಜಂಟಿ ಆಯುಕ್ತರು ಮತ್ತು ಮುಖ್ಯ ಅಭಿಯಂತರರು ಹಾಗೂ ಚಾಮರಾಜಪೇಟೆ ಉಪವಿಭಾಗದ ಸಹಾಯಕ ಕಂದಾಯ ಅಧಿಕಾರಿಗಳು, 2015 ರಿಂದ 2020 ರವರೆಗೆ ಕಾರ್ಯ ನಿರ್ವಹಿಸಿರುವ ಪಾಲಿಕೆಯ ಆಸ್ತಿಗಳ ವಿಭಾಗದ ಜಂಟಿ ಆಯುಕ್ತರು / ಉಪ ಆಯುಕ್ತರು ಅವರುಗಳ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಪಾಲಿಕೆಯ ಮಾನ್ಯ ಆಯುಕ್ತರನ್ನು ಆಗ್ರಹಿಸಿರುವ N. R. ರಮೇಶ್.
• ಈ ಹಗರಣಗಳಿಗೆ ಸಂಬಂಧಿಸಿದ 430 ಪುಟಗಳ ದಾಖಲೆಗಳನ್ನು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದ N. R. ರಮೇಶ್.

City Today News

(citytoday.media)

9341997936

Government’s aim is to hold the BBMP election as per its term: Revenue Minister R Ashok

Bengaluru, September 07, 2020 : It is the intention of the Government to hold BBMP election in time and therefore a committee has been formed for the purpose, Revenue Minister R Ashok has said.

Speaking to the media after inaugurating the Bommanahalli – BTM Layout link road and bridge he said one stage of the road has been completed and works in certain parts have to be completed.

“Bangalore is growing fast beyond expectation. A lot has been done to provide facilities under the leadership of Chief Minister B S Yeddyurappa. There is the problem of traffic density in the City. Even I have been trapped in the traffic gridlock at the Silk Board junction. The link road will contribute to the easing or traffic”, he said.

The Bommanahalli – BTM Layout Link Road is being laid at a cost of Rs 15 crore for which area legislator Satish Reddy, Bommanahalli BBMP member and Deputy Mayor Ram Mohan Raj have been instrumental.

The Minister said that it is the responsibility of the Government to provide infrastructure to the city as it grows.

He said the elections to BBMP will be held at the end of its term. Delimitation of wards and other preliminaries is left to the officials, he added.

“The link road will set right the negative reputation in has earned due to tolls and viral videos circulated worldwide. The link road will benefit 50,000 commuters”, BBMP member of Bommanahalli ward C R Ram Mohan Raj said.

Bangalore South Lok Sabha member Tejasvi Surya, Bommnahalli legislator Satish Reddy, BTM Layout legislator Ramalinga Reddy and Mayor Gautam Kumar participated in the inaugural.

City Today News

(citytoday.media)

9341997936