ಡಿಸೆಂಬರ್ 31: ಜನವರಿ 1ರ ಭೀಮ-ಕೊರೇಗಾಂವ್ ವಿಜಯೋತ್ಸವಕ್ಕೆ ಚಾಲನೆ

ಪ್ರತಿವರ್ಷವೂ ಆಚರಿಸಿತ್ತಿರುವಂತೆ ಮುಂದಿನ ಜನವರಿ 01ರಂದು ಭೀಮ- ಕೊರೇಗಾಂವ್ ವಿಜಯೋತ್ಸವವನ್ನು ಬಾಬಾಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಅಭಿಮಾನಿ ಬಳಗದಿಂದ ದೇಶದಾದ್ಯಂತ ಆಚರಿಸಲಾಗುತ್ತಿದೆ. ಕರ್ನಾಟಕದಲ್ಲೂ ಸಹ ಎಲ್ಲಾ ಜಿಲ್ಲೆಗಳಲ್ಲೂ ಈ ವಿಜಯೋತ್ಸವವನ್ನು ಸಮತಾ ಸೈನಿಕ ದಳವು ಆಚರಿಸುತ್ತಿದೆ. ಅಸ್ಪೃಶ್ಯ ಜನಾಂಗಗಳು ಕೇವಲ ಗುಲಾಮರೆಂದು ಬಿಂಬಿಸುತ್ತಿದ್ದ ಜಾತಿವಾದಿ ಶಕ್ತಿಗಳಿಗೆ ಪಾಠಕಲಿಸುವ ಭೀಮ-ಕೊರೇಗಾಂವ್ ಯುದ್ಧದ 2 1-1-1818 ನಡೆದು ಈ ದೇಶದ ಹೊಸ ಚರಿತ್ರೆ ಬರೆಯಲ್ಪಟ್ಟಿತು. ಮಹರ್ ಜನಾಂಗದ 500 ಸೈನಿಕರ ಪಡೆಯು ಪೂನಾದ ಪೇಳ್ವೆ ಸಂಸ್ಥಾನದ 28000 ಸೈನಿಕರನ್ನು ಕೇವಲ 24 ಗಂಟೆಗಳಲ್ಲಿ ಸದೆಬಡೆದು 2ನೇ ಬಾಜಿರಾಯನನ್ನು ಯುದ್ಧ ಭೂಮಿಯಿಂದ ಓಡಿಸಿದ ಇತಿಹಾಸ ಗರ್ಭದಲ್ಲಿ ಹುದುಗಿದ್ದ ವಿಷಯವು ಬಾಬಾಸಾಹೇಬ ಅಂಬೇಡ್ಕರ್ ಅಧ್ಯಯನದಿಂದ ಗೊತ್ತಾಗಿ ಇಂದಿನ ದೇಶದ ಅಸ್ಪೃಶ್ಯ ಜನಾಂಗಗಳಲ್ಲಿ ಹೊಸ ಚಿಂತನೆಯೊಂದರ ಸಂಚಲನ ಉಂಟುಮಾಡಿದೆ. ಪ್ರತಿ ವರ್ಷವೂ ಜನವರಿ 01ರಂದು ದೇಶದ ಎಲ್ಲಾ ಭಾಗಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭೀಮಾಕೊರೇಗಾಂವ್‌ಗೆ ಹೋಗಿ ವೀರಯೋಧರ ವಿಜಯ ಸ್ಥಂಭದ ಸ್ಮಾರಕಕ್ಕೆ ನಮನ ಸಲ್ಲಿಸಿ ಬರುತ್ತಿರುವ ಕೋಟ್ಯಾಂತರ ಜನತೆಯ ಭೆಟ್ಟಿಯು ಇತ್ತೀಚಿನ ದಿನಗಳಲ್ಲಿ ಮಹತ್ವ ಪಡೆದಿದೆ. ಸಮತಾ ಸೈನಿಕ ದಳವು ಕಳೆದ 30ವರ್ಷಗಳಿಂದ ಈ ವಿಜಯೋತ್ಸವದ ಪ್ರವಾಸದಲ್ಲಿ ಭಾಗಿಯಾಗಿ ಕಾರ್ಯ ಕರ್ತರಿಗೆ ಭೀಮಾಸ್ಫೂರ್ತಿಯನ್ನು ನೀಡುತ್ತಾ ಬಂದಿದೆ. 2017ರಲ್ಲಿ ಭೀಮ- ಕೊರೇಗಾಂವ್‌ನಲ್ಲಿ ನಡೆದ ಜಾತಿ ಗಲಭೆಯಿಂದ ರೋಚಕ ತಿರುವು ಪಡೆದುಕೊಂಡು ದಲಿತ ಜನಾಂಗಗಳ ಇತಿಹಾಸದ ಹೊಸ ಚರ್ಚೆಗಳನ್ನು ಹುಟ್ಟುಹಾಕಿದೆ. ಅಂದಿನಿಂದ ಸಮತಾ ಸೈನಿಕ ದಳವು ಪ್ರತಿ ಡಿಸೆಂಬರ 31ರ ರಾತ್ರಿ ದಲಿತ ಜನಾಂಗಗಳ ವಿರೋಚಿತ ಹೋರಾಟಗಳ ಮೆಲುಕುಹಾಕುವ ಸಿಂಹಾವಲೋಕನದ ಸಂವಾದದ ಸಭೆಯನ್ನು ನಡೆಸಿ ರಾತ್ರಿ 12 ಗಂಟೆಗೆ ವಿಜಯೋತ್ಸವಗಳಿಗೆಗೆ ಚಾಲನೆ ನೀಡುವ ಸಂಭ್ರಮಾಚರಣೆಯನ್ನು ಆಯೋಜಿಸುತ್ತಾ ಬಂದಿದೆ. ಇದೇ ಡಿಸೆಂಬರ್ 31ರ ಸಂಜೆ 6 ಗಂಟೆಯಿಂದ ರಾತ್ರಿ 11.30ರವರೆಗೆ ಈ ಪೂರಕವಾಗಿ ಚರಿತ್ರೆಯ ಸಿಂಹಾವಲೋಕನದ ಚರ್ಚೆ ಸಂವಾದಗಳನ್ನು ನಡೆಸಿ ಮದ್ಯರಾತ್ರಿ 12ಗಂಟೆಗೆ ವೀರಯೋಧ ಸಿದ್ಧನಾಕನ ವೇಷಧಾರಿಗಳಿಂದ ಹೊನಲುಬೆಳಕಿನ ಯುದ್ಧ ಪ್ರದರ್ಶನದ ಸಾಮೂಹಿಕ ನೃತ್ಯದ ಹಾಡಿನೊಂದಿಗೆ ಜನವರಿ 1ರ ಭೀಮಾಕೋರೇಗಾಂವ್ ವಿಜಯೋತ್ಸವಕ್ಕೆ ಚಾಲನೆ ನೀಡಲಾಗುವುದು.

ಈ ಕಾರ್ಯಕ್ರಮವು ಎಸ್.ಎಸ್.ಡಿ.ಯ ರಾಷ್ಟ್ರೀಯ ಅಧ್ಯಕ್ಷರಾದ ಡಾ.ಎಂ.ವೆಂಕಟಸ್ವಾಮಿ ಅವರ ನೇತೃತ್ವದಲ್ಲಿ ನಡೆಯಲಿದೆ. ಸಂವಾದದ ವಿವಿಧ ಗೋಷ್ಠಿಗಳನ್ನು ಇತಿಹಾಸ ತಜ್ಞರಿಂದ, ಹಿರಿಯ ಹೋರಾಟಗಾರರಿಂದ ಮತ್ತು ಹಿರಿಯ ಅಧಿಕಾರಿ ವರ್ಗದಿಂದ ನಡೆಸಲಾಗುವುದು. ಪ್ರತಿ ಅಂಬೇಡ್ಕರ್ ಅಭಿಮಾನಿಯು ಡಿಸೆಂಬರ್ 13ರ ಸಂಜೆ 6ಗಂಟೆಗೆ ಬೆಂಗಳೂರಿನ ನಾಗಸೇನ ಬುದ್ಧ ವಿಹಾರದ ಮೈದಾನದಲ್ಲಿ ನಡೆಯುವ ರಾಜ್ಯಮಟ್ಟದ ಸಂವಾದ ಮತ್ತು ರಾತ್ರಿ ನಡೆಯುವ ವಿಜಯೋತ್ಸವದ ಸಂಭ್ರಮದಲ್ಲಿ ಭಾಗವಹಿಸಬೇಕೆಂದು ಕೋರುತ್ತೇವೆ ಎಂದು ಸಮತಾ ಸೈನಿಕ ದಳ ವತಿಯಿಂದ ತಿಳಿಸಲಾಯಿತು.

ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ  ಪತ್ರಿಕಾ ಗೋಷ್ಠಿಯಲ್ಲಿ ರಾಜ್ಯ ಸಂಚಾಲಕರಾದ ಅಂಬರೀಷ್. ದಿ. ಎಂ.,ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಲಯನ್ ಮಂಜುನಾಥ್, ಯುವ ಘಟಕದ ರಾಜ್ಯಾಧ್ಯಕ್ಷರಾದ ಪ್ರಶಾಂತ್. ಜಿ.ಪಿ ಹಾಗೂ ಸಮತಾ ಸೈನಿಕ ದಳದ ಮುಖಂಡರುಗಳು ಉಪಸ್ಥಿತರಿದ್ದರು.

City Today News 9341997936

ವಿಷ್ಣುವರ್ಧನ್ ರವರ 15ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ

1. ದಿನಾಂಕ : 30-12-2024 ರಂದು ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣುವರ್ಧನ್ ರವರ 15ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವನ್ನು 10 ಗುಂಟೆ ಜಾಗದಲ್ಲಿ ಪೂಜಾ ಕಾರ್ಯಕ್ರಮ ಮಂದಿರಕ್ಕೆ ಹಾಗೂ ಅನ್ನದಾನ ಮತ್ತು ರಕ್ತದಾನ ಶಿಭಿರ ಆಯೋಜಿಸಿದ್ದೇವೆ;

2. ಅಭಿಮಾನಿ ಸ್ಫೂಡಿಯೋ ಮಾಲೀಕರು ಅಕ್ರಮ ಭೂ ಕಬಳಿಕೆಯ ಚಟುವಟಿಕೆಗಳಿಂದ ಮತ್ತು ಜೀವ ಬೆದರಿಕೆಯಿಂದ ರಕ್ಷಣೆ ಕೋರಿ ಹಲವು ಸಂಘಟನೆಗಳ ಮೇಲೆ ಕೆಂಗೇರಿ ಪೋಲೀಸ್ ಠಾಣೆಯಲ್ಲಿ ದಿನಾಂಕ: 28-08- 2024ರಂದು ದೂರು ಕೊಟ್ಟಿರುತ್ತಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಿನಾಂಕ: 17-09-2024(ಸಿಸಿಹೆಚ್ 12) ಓ.ಎಸ್ ನಂ.6544/2024ರ ಕೋರ್ಟ್‌ನಿಂದ ಡಾ|| ವಿಷ್ಣು ವರ್ಧನ್ ರವರ ಸಮಾಧಿ ಜಾಗ ಪುಣ್ಯ ಭೂಮಿಗೆ ಪ್ರವೇಶ ನಿರ್ಬಂಧ ತಡೆಯಾಜ್ಞೆಯನ್ನು ತಂದಿರುತ್ತಾರೆ. ದಿನಾಂಕ:18-09-2024ರಂದು ಡಾ|| ವಿಷ್ಣು ವರ್ಧನ್ ರವರ 74ನೇ ಜನ್ಮದಿನೋತ್ಸವ ಕಾರ್ಯಕ್ರಮ ಇರುತ್ತದೆ ಈ ಮೇಲ್ಕಂಡ ಟ್ರಸ್ಟ್ ವತಿಯಿಂದ ಆಯೋಜಿಸಿದ್ದೆವು.

3. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಟಿ ಸಿವಿಲ್ ಅಂಟ್ ಸೆಷನ್ ಜಡ್ಜ್ ដ ( 12) 4.2 0.6544/20245 всей ಡಾ| ವಿಷ್ಣುವರ್ಧನ್ ಪುಣ್ಯಭೂಮಿ ಟ್ರಸ್ಟ್ ಡಾ|| ವಿಷ್ಣು ವರ್ಧನ್ ರವರ ಸಮಾಧಿ ಜಾಗ 0.10ಗುಂಟೆ ಜಾಗದ ಬಗ್ಗೆ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು 2017ರಿಂದ 2024ರ ವರೆಗೆ ಕೋರ್ಟ್ಗೆ ಸಲ್ಲಿಸಿರುತ್ತೇವೆ. ಮತ್ತು ಡಾ| ವಿಷ್ಣುವರ್ಧನ್ ರವರ ಹುಟ್ಟು ಹಬ್ಬ ಹಾಗೂ ಪುಣ್ಯಸ್ಮರಣೆ ಕಾರ್ಯಕ್ರಮದ ಆಯೋಜಿಸಿದ ದಾಖಲೆಗಳನ್ನು ಸಲ್ಲಿಸಿರುತ್ತೇವೆ ಹಾಗೂ ಡಿಸೆಂಬರ್ 30 2024 15ನೇ ಪುಣ್ಯ ಸ್ಮರಣೆಯ ಕಾರ್ಯಕ್ರಮದ ಜಿಲ್ಲಾಧಿಕಾರಿಗಳ ಆದೇಶ ಪ್ರತಿ ಹಾಗೂ ಬಿ.ಬಿ.ಎಂ.ಪಿ ಅನುಮತಿ ಪತ್ರವನ್ನು ಸಲ್ಲಿಸಿರುತ್ತೇವೆ. ಘನ ನ್ಯಾಯಾಲಯದಲ್ಲಿ ವಾದ ಪ್ರತಿವಾದಗಳು ಆಲಿಸಿದ ನ್ಯಾಯಾಧೀಶರು ಮೇಲ್ಕಂಡ ಪ್ರಕರಣದ ನಿರ್ಬಂಧ ತಡೆಯಾಜ್ಞೆಯನ್ನು ವಜಾಮಾಡಿರುತ್ತಾರೆ. ಸಿಟಿ ಸಿವಿಲ್ ಅಂಟ್ ಸೆಷನ್ ಜಡ್ಜ್ ಬೆಂಗಳೂರು (ಸಿಸಿಹೆಚ್ 12) ಓ.ಎಸ್ ನಂ.6544/2024ರ ದಿನಾಂಕ: 19- 12-2024ರ ತೀರ್ಪಿ ಹೊರಡಿಸಿ ಆದೇಶ ಮಾಡಿದ್ದು ಈ ಪ್ರಕರಣದ ಮುಂದುವರೆದ ಭಾಗವಾಗಿ ವಿಚಾರಣೆಯನ್ನು ದಿನಾಂಕ: 04-02-2025ಕ್ಕೆ ಮುಂದೂಡಿರುತ್ತಾರೆ ಎಂದು ಸಂಸ್ಥಾಪಕ ಅಧ್ಯಕ್ಷರಾದ ರಾಜು ಗೌಡ, ಗೌರಾಧ್ಯಕ್ಷರಾದ ಬಿ. ವೈ. ರಮೇಶ್,ಕಾನೂನು ಸಲಹೆಗಾರರಾದ ಅರುಣ್ ಕೆ.ಎಸ್ (ಹೈಕೊರ್ಟ್ ವಕೀಲರು) ರವರು ಟ್ರಸ್ಟ್‌ನ ಪದಾಧಿಕಾರಿಗಳ ಸಮ್ಮುಖದಲ್ಲಿ ತಿಳಿಸಿದರು.

City Today News 9341997936

ಅಯ್ಯಪ್ಪ ಧರ್ಮಾಚಾರ ಸೇವಾಶ್ರಮದ ವತಿಯಿಂದ ಗಣಪತಿ, ಸುಬ್ರಹ್ಮಣ್ಯ ಮತ್ತು ಅಯ್ಯಪ್ಪನಿಗೆ ಅಷ್ಟಾಭಿಷೇಕ, ಅಯ್ಯಪ್ಪ ಲಕ್ಷಾರ್ಚನೆ ,ಪಡಿಪೂಜೆ ಮಹಾ ಮಂಗಳಾರತಿ

ಶ್ರೀ ಅಯ್ಯಪ್ಪ ಸ್ವಾಮಿ ಮಂಡಲೋತ್ಸವ
ಬೆಂಗಳೂರಿನ  ಚಾಮರಾಜಪೇಟೆಯಲ್ಲಿ  ಮಂಡಲೋತ್ಸವದ  ಶುಭ ದಿನದಂದು ಶ್ರೀ ಅಯ್ಯಪ್ಪ ಧರ್ಮಾಚಾರ ಸೇವಾಶ್ರಮದ ವತಿಯಿಂದ ಗಣಪತಿ, ಸುಬ್ರಹ್ಮಣ್ಯ ಮತ್ತು ಅಯ್ಯಪ್ಪನಿಗೆ ಅಷ್ಟಾಭಿಷೇಕ, ಅಯ್ಯಪ್ಪ ಲಕ್ಷಾರ್ಚನೆ ,ಪಡಿಪೂಜೆ ಮಹಾ ಮಂಗಳಾರತಿ ನೆರವೇರಿತು ನಂತರ ಎಲ್ಲಾ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.  ಈ ಸಂದರ್ಭದಲ್ಲಿ  ಹಲವಾರು ಅಯ್ಯಪ್ಪ ಭಕ್ತರು ಪೂಜೆಯಲ್ಲಿ ಪಾಲ್ಗೊಂಡು ಶ್ರೀ ಧರ್ಮ ಶಾಸ್ತರ ಆಶೀರ್ವಾದ ಪಡೆದರು ಎಂದು  ವ್ಯವಸ್ಥಾಪಕರಾದ ಶ್ರೀ ಚೇತನ್ ಗುರುಸ್ವಾಮಿ ತಿಳಿಸಿದರು (ಸದಾಸ್ – ಸದಾ ಧರ್ಮಶಾಸ್ತಾನ ಸೇವೆಯಲ್ಲಿ).

City Today News 9341997936

ಜಯನಗರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ‘ಧನುರ್ಮಾಸ” ದ್ವಾದಶಿ ಪ್ರಾತಃಕಾಲದ ವಿಶೇಷ ಪೂಜೆ

“ಮಂತ್ರಾಲಯ ಶ್ರೀಗಳಿಂದ ಧನುರ್ಮಾಸ ಪೂಜೆ” ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ  ಶ್ರೀಮನ್ ಮೂಲರಾಮಚಂದ್ರದೇವರ ಸಂಸ್ಥಾನ ಪೂಜೆ ಜಯನಗರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ
‘ಧನುರ್ಮಾಸ” ದ್ವಾದಶಿ ಪ್ರಾತಃಕಾಲದ ವಿಶೇಷ ಪೂಜೆ, ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಅಮೃತ ಹಸ್ತದಿಂದ ನೆರವೇರಿತು ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಶ್ರೀಗಳು ತಮ್ಮ ಅಮೃತ ಹಸ್ತದಿಂದ ಮಹಾಮಂಗಳಾರತಿಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ  ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರಾಚಾರ್  ಹಾಗೂ ಭಕ್ತರು ಶಿಷ್ಯರು ಪೂಜೆಯಲ್ಲಿ ಭಕ್ತಿಯಿಂದ ಭಾಗವಹಿಸಿದ್ದರು ಎಂದು ಪುರೋಹಿತರಾದ ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದರು, ಇದೇ ಸಂದರ್ಭದಲ್ಲಿ  ನೂರಾರು ಭಕ್ತರು ಶ್ರೀಗಳಿಂದ ತೀರ್ಥ ಫಲ ಮಂತ್ರಾಕ್ಷತೆ ಪ್ರಸಾದ ಸ್ವೀಕರಿಸಿ ಶ್ರೀಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು.

City Today News 9341997936

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ‘ಶ್ರೀ ವಾಸವಿ ಕಾಂಡಿಮೆಂಟ್ಸ್’ ನ ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.

ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಡಿಸೆಂಬರ್ 27, 2024 ರಿಂದ ಜನವರಿ 5, 2025ರವರೆಗೆ ‘ಶ್ರೀ ವಾಸವಿ ಅವರೆಬೇಳೆ ಮೇಳ’ ನಡೆಯಲಿದೆ ಎಂದು ತಿಳಿಸಿದರು.

ಬೆಂಗಳೂರಿನ ಮಂದಿಗೆ ‘ಶ್ರೀ ವಾಸವಿ’ ಕಾಂಡಿಮೆಂಟ್ಸ್ ನ ಪರಿಚಯ ಇದ್ದೇ ಇರುತ್ತದೆ. ರುಚಿಕಟ್ಟು, ಅತ್ಯುತ್ತಮ ಗುಣಮಟ್ಟ ಮತ್ತು ತಾಜಾ ತಿಂಡಿ ತಿನಿಸುಗಳಿಗೇ ಹೆಸರು ವಾಸಿಯಾದ ವಾಸವಿ ಕಾಂಡಿಮೆಂಟ್ಸ್ ಕಳೆದ ಇಪ್ಪತ್ತನಾಲ್ಕು ವರ್ಷಗಳಿಂದ ವಿನೂತನವಾದ ಸಾಹಸ- ಪ್ರಯೋಗವನ್ನು ಮಾಡುತ್ತಾ ಅದರಲ್ಲಿ ಅಮೋಘ ಯಶಸ್ಸು ಕಂಡಿದೆ.

ಅದೇನೆಂದರೆ ಕಳೆದ ಇಪ್ಪತ್ತನಾಲ್ಕು ವರ್ಷಗಳಿಂದ ಬೆಂಗಳೂರಿನ ಸಜ್ಜನ್ ರಾವ್ ಸರ್ಕಲ್‌ನಲ್ಲಿ ಶ್ರೀ ವಾಸವಿ ಕಾಂಡಿಮೆಂಟ್ಸ್ನ ವತಿಯಿಂದ ಅವರೇಕಾಯಿ ಮೇಳವನ್ನು ಆಯೋಜಿಸಲಾಗುತ್ತಿದೆ. ಇಲ್ಲಿ ಅವರೇಕಾಯಿಯಿಂದ ತಯಾರಾದ ಇಡ್ಲಿ, ದೋಸೆ, ಪಾಯಸ, ಚಕ್ಕುಲಿ, ನಿಪ್ಪಟ್ಟು, ಸಿಹಿ, ಖಾರ ಪದಾರ್ಥಗಳು ಸೇರಿದಂತೆ ಸುಮಾರು ನೂರು ಬಗೆಯ ತಿಂಡಿ, ತಿನಿಸುಗಳು, ರುಚಿಕಟ್ಟಾದ ಖಾದ್ಯಗಳು ಗ್ರಾಹಕರಿಗೆ ಲಭ್ಯವಾಗುತ್ತಿದೆ. ಹೀಗಾಗಿ ಬೆಂಗಳೂರಿನ ಬಹಗಳಷ್ಟು ಜನ ಈ ವಾರ್ಷಿಕ ಅವರೇಕಾಯಿ ಮೇಳಕ್ಕಾಗಿ ಕಾತರಿಸುವಂತಾಗಿದೆ. ಬಸವನಗುಡಿ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಡಿಸೆಂಬರ್ 27, 2024 ರಿಂದ ಜನವರಿ 5, 2025ರ ತನಕ ಈ ಅದ್ದೂರಿ ಮೇಳ ನಡೆಯಲಿದ್ದು, ಎಂದಿನಂತೆ ಬೆಳಿಗ್ಗೆ 10ರಿಂದ 10ರ ತನಕ ಅಂಗಡಿ ತೆರೆದಿರುತ್ತದೆ. ಸಂಜೆ ತರಿಂದ ರಾತ್ರಿ 10ರ ತನಕ ಮಾತ್ರ ಕವಿಶೇಷ ಖಾದ್ಯಗಳಾದ ದೋಸೆ, ವಡೆ ಇತ್ಯಾದಿಗಳು ದೊರೆಯಲಿವ

ಮಾಗಡಿ ತಾಲೂಕಿನಲ್ಲಿ ರೈತರು ಬೆಳೆದ ಅವರೇಕಾಯಿಯನ್ನು ‘ವಾಸವಿ ಕಾಂಡಿಮೆಂಟ್ಸ್’ ನೇರವಾಗಿ ಖರೀದಿಸುತ್ತದೆ. ಇಲ್ಲಿ ಯಾವುದೇ ಮಧ್ಯವರ್ತಿಗಳ ಪ್ರವೇಶವಿಲ್ಲದೇ, ನೇರವಾಗಿ ಬೆಳೆಗಾರರ ಮನೆಬಾಗಿಲಿಗೇ ಹೋಗಿ ಅವರೇಕಾಯಿ ಖರೀದಿಸುವುದರಿಂದ ರೈತರಿಗೆ ಮಾರುಕಟ್ಟೆಯಲ್ಲಿ ಸಿಗುವ ಲಾಭಕ್ಕಿಂತ ಹೆಚ್ಚು. ಮೊತ್ತ ಕೈಸೇರುತ್ತದೆ. ಇದರಿಂದ ಕಷ್ಟಪಟ್ಟು ಅವರೇಕಾಯಿ ಬೆಳೆದ ರೈತಬಾಂದವರು ತಮ್ಮ ಶ್ರಮಕ್ಕೆ ತಕ್ಕ ಪ್ರತಿಫಲವನು, ಹೊಂದಿ ಸಂತೃಪ್ತರಾಗುತ್ತಿದ್ದಾರೆ.

City Today News 9341997936