EID MILAD EVENT WAS HELD AT TANRARY ROAD, PULIKESHI NAGAR, BANGALORE

AN EID MILAD EVENT WAS HELD AT TANRARY ROAD, PULIKESHI NAGAR, BANGALORE, WITH DR. YOONAS JONES AS THE CHIEF GUEST, ACCOMPANIED BY OTHER ESTEEMED DIGNITARIES. THE EVENT WAS JOINTLY ORGANIZED BY THE, -TIPPU SULTAN UNITED FRONT, -AL-MUQEET DONOR CENTER BANGALORE,
-KARNATAKA MINORITIES UNITED FRONT, FEATURING A BLOOD DONATION DRIVE, HEALTH AND EYE CAMP, AND FOOD DISTRIBUTION TO THE GENERAL PUBLIC.THE PRIME ORGANISERES WERE DR.DAWOOD EQBAL, MR.KHALLEL, MR.RAHEEM MASTER, MR SYED AKBAR.

City Today News 9341997936

ಜಯನಗರ ರಾಯರ ಮಠದಲ್ಲಿ 108 ದಂಪತಿಗಳಿಂದ “ಸಾಮೂಹಿಕ ಶ್ರೀ ಅನಂತಪದ್ಮನಾಭ ವ್ರತ ಪೂಜೆ”

ಬೆಂಗಳೂರಿನ ಜಯನಗರದ 5ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 108 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್. ಕೆ. ವಾದಿಂದ್ರಾಚಾರ್ಯರ  ನೇತೃತ್ವದಲ್ಲಿ “ಶ್ರೀ ಅನಂತಪದ್ಮನಾಭ ವ್ರತ  ಪೂಜೆ”ಯನ್ನು ಸ್ವರ್ಣ ಸಿಂಹಾಸನದಲ್ಲಿ ಕಳಶವನ್ನು ಕೂರಿಸಿ, ಅರ್ಚನೆಯೊಂದಿಗೆ ಅರ್ಚಕರಾದ ರಾಮಚಂದ್ರಾಚಾರ್ ಮತ್ತು ಕೃಷ್ಣಾಚಾರ್ ಇವರಿಂದ ಪೂಜೆಯನ್ನು ನೆರವೇರಿಸಲಾಯಿತು ಎಂದು ನಂದಕಿಶೋರ್ ಆಚಾರ್ಯರು ತಿಳಿಸಿದರು, ಈ ಸಂದರ್ಭದಲ್ಲಿ ವಿಶೇಷ ಉತ್ಸವಗಳೊಂದಿಗೆ 108 ದಂಪತಿಗಳಿಂದ ಸಾಮೂಹಿಕವಾಗಿ ಶ್ರೀ ಅನಂತಪದ್ಮನಾಭ ವ್ರತ ಪೂಜೆಯನ್ನು ಪ್ರತ್ಯೇಕ ಪ್ರತ್ಯೇಕ ಕಲಶವನ್ನು ಇರಿಸಿ  108 ದಂಪತಿಗಳು ಭಕ್ತಿಯಿಂದ ವ್ರತ ಪೂಜೆಯಲ್ಲಿ ಪಾಲ್ಗೊಂಡು ತೀರ್ಥಪ್ರಸಾದವನ್ನು ಸ್ವೀಕರಿಸಿ ಶ್ರೀ ಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು .

City Today News 9341997936

ಮೈಸೂರು ಸಂಸ್ಥಾನದ ದಿವಾನರಾಗಿ , ತಾಂತ್ರಿಕ ವಿದ್ಯಾಭ್ಯಾಸ, ಕೈಗಾರಿಕಾ ವಿಕಾಸಕ್ಕೆ ಭದ್ರ ಬುನಾದಿ ಹಾಕಿದ, ಕರ್ಮಯೋಗಿ, ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ನವರ ಜನ್ಮದಿನ

ಸರ್ ಎಂ.ವಿಶ್ವೇಶ್ವರಯ್ಯ ಇಂಜನಿಯರಿಂಗ್ ಪ್ರತಿಷ್ಠಾನದ ವತಿಯಿಂದ ರವೀಂದ್ರ ಕಲಾಕ್ಷೇತ್ರದ ಆವರಣ ನಯನ ಸಭಾಂಗಣದಲ್ಲಿ
ಮೈಸೂರು ಸಂಸ್ಥಾನದ ದಿವಾನರಾಗಿ , ತಾಂತ್ರಿಕ ವಿದ್ಯಾಭ್ಯಾಸ, ಕೈಗಾರಿಕಾ ವಿಕಾಸಕ್ಕೆ ಭದ್ರ ಬುನಾದಿ ಹಾಕಿದ, ಕರ್ಮಯೋಗಿ, ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ನವರ ಜನ್ಮದಿನದ ಅಂಗವಾಗಿ ಕನ್ನಡ ನಾಡು ವಿಜ್ಞಾನ, ತಂತ್ರಜ್ಞಾನಗಳ ನೆಲೆಯಾಗಿಸಲು ಶ್ರಮಿಸುತ್ತಿರುವ  ದೂರದರ್ಶಿತ್ವದ ಎಂಜಿನಿಯರ್ ಗಳಿಗೆ, ಉಪಾಧ್ಯಾಯರುಗಳಿಗೆ, ಸಮಾಜ ಸೇವಕರು ಗಳಿಗೆ ಅವರ ಜನ್ಮದಿನದ ನಿಮಿತ್ತ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಬೆಂಗಳೂರು ರತ್ನ ಡಾ.ಅಂಬರೀಷ್ ರವರನ್ನು ಸನ್ಮಾನಿಸಲಾಯಿತು. ವೇದಿಕೆಯ ಮೇಲೆ ಬಸವ ರಮಾನಂದ ಮಹಾಸ್ವಾಮಿಗಳು, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಮುಕುಂದರಾಜು  ರವರು, ರಾಜಶೇಖರ ಮಠಪತಿಯವರು. ಪ್ರತಿಷ್ಠಾನದ ಅಧ್ಯಕ್ಷರಾದ ರಮೇಶ ಸುರ್ವೆಯವರು, ಚಿತ್ರ ಕಲಾವಿದರಾದ  ಮೀನ, ಶಂಕರಭಟ್ಟ್,
ಉಪಸ್ಥಿತರಿದ್ದರು.

City Today News 9341997936

ಶ್ರೀ ವಿಜಯಮಹಾಗಣಪತಿ ದೇವಸ್ಥಾನದಲ್ಲಿ ಶ್ರೀ ಜೈಗಣೇಶ ಸೇವಾ ಸಮಿತಿ (ರಿ) ಇವರ ವತಿಯಿಂದ ಸಮಸ್ತ ಭಕ್ತಾದಿಗಳ ಸಹಯೋಗದೊಂದಿಗೆ ೪೧ನೇ ವರ್ಷದ ಗಣೇಶೋತ್ಸವ

ಜಯನಗರ ೧&೩ನೇ ಬಡಾವಣೆಯ ಸ್ವಿಮ್ಮಿಂಗ್ ಪೂಲ್ ಹತ್ತಿರದ ಶ್ರೀ ವಿಜಯಮಹಾಗಣಪತಿ ದೇವಸ್ಥಾನದಲ್ಲಿ ಶ್ರೀ ಜೈಗಣೇಶ ಸೇವಾ ಸಮಿತಿ (ರಿ) ಇವರ ವತಿಯಿಂದ ಸಮಸ್ತ ಭಕ್ತಾದಿಗಳ ಸಹಯೋಗದೊಂದಿಗೆ ೪೧ನೇ ವರ್ಷದ ಗಣೇಶೋತ್ಸವ (ದಿನಾಂಕ ೦೬-೦೯-೨೦೨೪ ರಿಂದ ೧೦-೦೯-೨೦ ೨೪ ವರೆಗೆ) ಸಕಲ ಧಾರ್ಮಿಕ ಕೈಂಕರ್ಯಗಳೊಂದಿಗೆ ಸುಸಂಪನ್ನಗೊಂಡಿತು. ಆದಿಯಲ್ಲಿ ಸ್ವರ್ಣಗೌರಿ ಅಮ್ಮನ ತನ್ನಂತರ ವರಸಿದ್ಧಿವಿನಾಯಕ ಸ್ವಾಮಿಯ ಪ್ರತಿಷ್ಠಾಪನೆಯಿಂದ ಮೊದಲುಗೊಂಡು ಚತುರ್ದಿನಗಳ ಪರ್ಯಂತ ಶ್ರೀದೇವರಿಗೆ ಸುಪ್ರಭಾತ, ಪಂಚಾಮೃತ, ಅಷ್ಟಗಂಧೋದಕ ಇತ್ಯಾದಿ ಸರ್ವಾಭಿಷೇಕ, ಸರ್ವಾಲಂಕಾರ ಹಾಗೂ ನೈವೇದ್ಯಾದಿ ಮಹಾಪೂಜೆಗಳು ನಡೆದವು. ನವಗ್ರಹ ಹೋಮ, ಮಹಾಗಣಪತಿ ಹೋಮ, ರುದ್ರ ಹೋಮ, ಸುಬ್ರಹ್ಮಣ್ಯ ಹೋಮ, ಸತ್ಯನಾರಾಯಣ ಪೂಜೆಗಳಲ್ಲಿ ಭಕ್ತಾದಿಗಳು ಪಾಲ್ಗೊಂಡುರು ಮಂಗಳವಾರ ೧೦ ರಂದು ಮಹಾಪ್ರಸಾದ ವಿತರಣೆಯ ನಿಮಿತ್ತ “ಅನ್ನಸಂತರ್ಪಣೆ” ವಿಜೃಂಭಣೆಯಿಂದ ನೆರವೇರಲಿದೆ.

City Today News 9341997936

ಕಲ್ಚರ್  ಎಜುಕೇಶನಲ್  ಎನ್‌ಲೈಟ್  ಫೌಂಡೇಶನ್  (ರಿ) ಸಂಸ್ಥೆಯಿಂದ ಶಿಕ್ಷಕರ ದಿನಾಚರಣೆ

ದಿನಾಂಕ 05   ಸಪ್ಟೆಂಬರ್ 2024 ರಂದು
  ” ಶಿಕ್ಷಕರ ದಿನ”ದ ಅಂಗವಾಗಿ (ACE) ಆರ್ಟ್ ಕಲ್ಚರ್  ಎಜುಕೇಶನಲ್  ಎನ್‌ಲೈಟ್  ಫೌಂಡೇಶನ್  (ರಿ) ಸಂಸ್ಥೆಯ  ಮುಖ್ಯ   ಸಂಸ್ಥಾಪಕರಾದಂತಹ
  ಡಾ  ಅಂಬಿಕಾ ಸಿ ಅವರು   ಬೆಂಗಳೂರಿನ ಜಯನಗರದ
”  ಹೋಲಿ ಸೆಂಟ್ ಹೈಸ್ಕೂಲ್ ”  ಶಿಕ್ಷಕರೊಂದಿಗೆ  “ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್” ರವರ  ಉಲ್ಲೇಖನವನ್ನು ಓದುವುದರ ಮೂಲಕ  ಶಿಕ್ಷಕರ ದಿನಾಚರಣೆಯನ್ನು ಶಾಲಾ ಮಕ್ಕಳೊಡನೆ ಆಚರಿಸಿದರು. ಈ  ಸಂದರ್ಭದಲ್ಲಿ ಮುಖ್ಯ  ಅತಿಥಿಗಳಾಗಿ ಬಿಬಿಎಂಪಿ ಸದಸ್ಯರಾದಂತಹ ಶ್ರೀಯುತ ಲಕ್ಷ್ಮಿಕಾಂತ್  ರವರ  ಉಪಸ್ಥಿತರಿದ್ದು  ಶಾಲೆಯ  ಮುಖ್ಯಸ್ಥರು, ಪ್ರಾಂಶುಪಾಲರು , ಶಿಕ್ಷಕ ಮತ್ತು  ಶಿಕ್ಷಕರಿಗೆ  ಗೌರವಿಸಿ  ಶುಭಾಶಯ ಕೋರಿ  ಕಾರ್ಯಕ್ರಮ ಯಶಸ್ವಿಯಾಗಲು ಪ್ರಮುಖ ಪಾತ್ರ ವಹಿಸಿದರು.

City Today News 9341997936