ಪರಂಪರಾ ಕಲ್ಚರಲ್ ಫೌಂಡೇಶನ್ ವತಿಯಿಂದ ಮಾರ್ಚ್ 27, 2023ರಂದು ಸೋಮವಾರ ಸಂಜೆ ನಗರದ ನಯನ ಸಭಾಂಗಣದಲ್ಲಿ ವಿಶ್ವ ರಂಗಭೂಮಿ ದಿನಾಚರಣೆಯನ್ನು ಅಯೋಜಿಸಿತ್ತು.
ವಿಧಾನಪರಿಷತ್ ಸದಸ್ಯ ಎಸ್.ರುದ್ರೇಗೌಡ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಾಜಿ ಬಿಬಿಎಂಪಿ ಸದಸ್ಯ ಎಂ.ಮುನಿರಾಜು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಂಗ ಪರಿಚಾರಕರಾದ ಟಿ.ಎನ್.ಸಾಯಿಕುಮಾರ್ ಮತ್ತು ಹೆಚ್.ಪರಮೇಶ್ವರ ಅವರಿಗೆ 2023ನೇ ಸಾಲಿನ ಪರಂಪರಾ ರಂಗ ಪುರಸ್ಕಾರ ನೀಡಿ ಸತ್ಕರಿಸಲಾಯಿತು.
ಲೇಖಕ ಕೆ.ಎನ್.ಭಗವಾನ್, ಕಲಾಕುಟೀರ ವೇದಿಕೆಯ ಸೋ.ಫಾಲನೇತ್ರ ಹಾಗೂ ಕನ್ನಡ ಪರಿಚಾರಕ ಟಿ.ಪ್ರಕಾಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಪರಂಪರಾ ಆಧ್ಯಕ್ಷರಾದ ಜಿ.ಪಿ.ರಾಮಣ್ಣ, ಕಲಾಪೋಷಕರಾದ ಜಿ ಎಸ್ ನಂಜುಂಡಸ್ವಾಮಿ, ಮಂ.ಅ.ವೆಂಕಟೇಶ್, ಎ.ಎಸ್.ಶ್ರೀನಾಥ್ ಮತ್ತು ಆರ್.ರಾಘವೇಂದ್ರ ಅವರಿಗೆ ಪರಂಪರಾ ಸ್ನೇಹಾಭಿನಂದನೆ ಸಲ್ಲಿಸಿದರು.
ಸಮಾರಂಭದ ನಂತರ ಕೆ.ಪರಮಶಿವಂ ಅವರ ನಿರ್ದೇಶನದ, ಎನ್.ಎಸ್.ರಾವ್ ವಿರಚಿತ ವಿಷಜ್ವಾಲೆ ನಾಟಕ ಪ್ರದರ್ಶನವಿತ್ತು. ನಾಟ್ಯಮಯೂರಿ ಪಿ.ಚಂದನ ಅವರಿಂದ ನೃತ್ಯ ಕಾರ್ಯಕ್ರಮವಿತ್ತು.
ಮಂತ್ರಿ ಲಿಥೋಸ್ ಕಲ್ಚರಲ್ ಕಮಿಟಿ ಆಯೋಜಿಸಿದ ಹೋಲಿ- ವಸಂತಕಾಲದ ಆಗಮನವನ್ನು ಗುರುತಿಸುವ ಬಣ್ಣಗಳ ಹಬ್ಬ ಮತ್ತು ಸಂತೋಷ ಮತ್ತು ಹಬ್ಬಗಳ ಮುನ್ನುಡಿ ಮತ್ತು ಹೃದಯಗಳ ಏಕೀಕರಣವನ್ನು ಆನ್ಲೈನ್ನಲ್ಲಿ ಆಚರಿಸಲಾಯಿತು, ಇದು ಚಂದ್ರನ ಕ್ಯಾಲೆಂಡರ್ ಪ್ರಕಾರ ಮಾರ್ಚ್ 8, 2023 ರಂದು ಬರುತ್ತದೆ. ಈ ಜನಪ್ರಿಯ ವಸಂತ ಹಬ್ಬವು ಸಂತೋಷ, ಪ್ರೀತಿ, ಬಣ್ಣ ಮತ್ತು ಕೆಟ್ಟದ್ದರ ಮೇಲೆ ಒಳ್ಳೆಯದ ವಿಜಯದ ಆಚರಣೆಯಾಗಿದೆ. ಹೋಳಿಯ ರೋಮಾಂಚಕ ಬಣ್ಣಗಳು ಚಳಿಗಾಲದ ನಂತರ ವಸಂತಕಾಲದ ಆಗಮನದ ಸಂತೋಷವನ್ನು ಸೂಚಿಸುತ್ತದೆ ಮತ್ತು ಎಲ್ಲಾ ಹೊಸ ಬಣ್ಣಗಳು ಪ್ರಕೃತಿಯಲ್ಲಿ ಅರಳುತ್ತವೆ. ಉತ್ತಮ ಸುಗ್ಗಿಯ ಧನ್ಯವಾದ ಎಂದು ಸಹ ಇದನ್ನು ಆಚರಿಸಲಾಗುತ್ತದೆ. ಪ್ರೀತಿಪಾತ್ರರ ಜೊತೆ ಬಣ್ಣಗಳ ಆಟವಾಡುತ್ತಾ, ರುಚಿಕರವಾದ ಹಬ್ಬದ ಊಟವನ್ನು ಸವಿಯುವ ಸಂತೋಷವು ಹೃದಯವನ್ನು ಉತ್ಸಾಹದಿಂದ ತುಂಬುತ್ತದೆ.
ಈ ಸಂದರ್ಭದಲ್ಲಿ ಶೋಭಾ ಹುಲ್ಲೂರಯ್ಯ– ಲಿಥೋಸ್ ಸಾಂಸ್ಕೃತಿಕ ಸಮಿತಿಯ ಮುಖ್ಯಸ್ಥರು, ಸಾಂಪ್ರದಾಯಿಕ ಹೋಳಿ ಆಚರಣೆಯಲ್ಲಿ ರೋಮಾಂಚಕ ಬಣ್ಣಗಳು ಸಮುದಾಯಗಳನ್ನು ಒಟ್ಟಿಗೆ ತರುತ್ತವೆ, ಅಲ್ಲಿ ವ್ಯಕ್ತಿಗಳು, ಜಾತಿ, ವರ್ಣ, ಮತ, ಭಾಷೆ ಮತ್ತು ಪ್ರದೇಶಗಳ ನಡುವಿನ ವ್ಯತ್ಯಾಸಗಳು ಕಣ್ಮರೆಯಾಗುತ್ತವೆ. ಈಗ, ಹೋಳಿ ವಾರದಲ್ಲಿ ಎಲ್ಲಾ ಬಣ್ಣಗಳು, ಜನಾಂಗಗಳು, ರಾಷ್ಟ್ರೀಯತೆಗಳು ಮತ್ತು ಜನಾಂಗೀಯ ಸಮುದಾಯಗಳನ್ನು ಒಟ್ಟಿಗೆ ತರಲು ನಾವು ಹೊಸ ಅಮೇರಿಕನ್ ಸಂಪ್ರದಾಯವನ್ನು ರಚಿಸುತ್ತಿದ್ದೇವೆ, “ಯುನೈಟೆಡ್ ಕಲರ್ಸ್ ಆಫ್ ಹೋಳಿ” ಎಂದು ಹೇಳಿದರು.
“ಯುನೈಟೆಡ್ ಕಲರ್ಸ್ ಆಫ್ ಹೋಳಿ ಒಂದು ಸುಂದರವಾದ ಕಾರ್ಯವಾಗಿದೆ ಮತ್ತು ಈ ಪವಿತ್ರ ಮತ್ತು ಸಂತೋಷದಾಯಕ ಹಿಂದೂ ಹಬ್ಬದ ನಿಜವಾದ ಸ್ವರೂಪವನ್ನು ಉದಾಹರಿಸುತ್ತದೆ – ಹಿಂದೂ ಧರ್ಮದೊಳಗಿನ ಬಹುತ್ವ ಮತ್ತು ವೈವಿಧ್ಯಮಯ ಸಂಪ್ರದಾಯಗಳಲ್ಲಿ ಆಧಾರವಾಗಿರುವ ಏಕತೆ. ಸಾಮಾಜಿಕ, ಆರ್ಥಿಕ, ಧಾರ್ಮಿಕ ಅಥವಾ ರಾಜಕೀಯ ಹಿನ್ನೆಲೆಯನ್ನು ಲೆಕ್ಕಿಸದೆ ಆಚರಿಸಲು ಮತ್ತು ನಕಾರಾತ್ಮಕತೆ ಮತ್ತು ದ್ವೇಷವನ್ನು ಬದಿಗಿಡಲು ಇದು ಎಲ್ಲರನ್ನು ಸ್ವಾಗತಿಸುತ್ತದೆ. ಹೋಳಿ ಹಬ್ಬದ ಮೂಲಕ ನಮ್ಮ ಸುತ್ತಮುತ್ತಲಿನ ಎಲ್ಲದರಲ್ಲೂ ಇರುವ ದೈವತ್ವವನ್ನು ನಾವು ಗೌರವಿಸುತ್ತೇವೆ. ಈ ಚೈತನ್ಯ ಇಂದು ಎಲ್ಲಕ್ಕಿಂತ ಹೆಚ್ಚು ಅಗತ್ಯವಿದೆ ಎಂದು ಈ ಸಂದರ್ಭದಲ್ಲಿ ಶೋಭಾ ಹುಲ್ಲೂರಯ್ಯ ಹೇಳಿದರು.
ಲಿಥೋಸ್ ಬಣ್ಣಗಳು, ವಿವಿಧ ತುಟಿಗಳನ್ನು ಹೊಡೆಯುವ ಭಕ್ಷ್ಯಗಳು, ಮಳೆ ನೃತ್ಯ, ಸಂಗೀತದ ನಡುವೆ ಜಾತಿ ಮತ್ತು ಧರ್ಮದ ವ್ಯತ್ಯಾಸವನ್ನು ತಳ್ಳಿಹಾಕುವ ಭವ್ಯವಾದ ಹೋಳಿ ಆಚರಣೆಗಳಿಗೆ ಸಾಕ್ಷಿಯಾಯಿತು.
Mantri Lithos Cultural Committee Organised HOLI– the Festival of colours which marks the arrival of Spring and harbinger of joy and festivities and unifier of hearts was celebrated Online which according to Lunar Calendar falls on 8th March 2023. This popular spring festival, is a celebration about happiness, love, colour, and the triumph of good over evil. The vibrant colors of Holi signify the joy of the arrival of spring after winter and all the new colours blooming in nature. It is also celebrated as thanksgiving for good harvest. The joy of playing with colours with the loved ones, and feasting on delicious festive food fills the heart with excitement.
On this occasion Shobha Hulluraiah – Lithos Cultural Committee head. Said, Vibrant colors bring the communities together in the traditional celebration of Holi, where differences between individuals, jati, varna, creed, languages and regions disappear. Now, we are creating a new American tradition, United Colors of Holi, to bring the communities of all colors, races, nationalities and ethnicities together during the week of Holi.
“United Colors of Holi is a beautiful undertaking and exemplifies the true nature of this sacred and joyous Hindu festival – the underlying unity in the pluralist and diverse traditions within Hinduism. It welcomes all regardless of social, economic, religious or political backgrounds to celebrate and put aside negativities and animosity. We respect the divinity that exists in all and everything around us through the festival of Holi. This spirit is much needed more than anything today.” said, Shobha Hulluraiah – Lithos Cultural Committee head.
Lithos witnessed a grand Holi celebrations ruling out difference in caste & creed amidst colours,variety of lip smacking delicacies,rain dance ,music.
ಪ್ರೆಸ್ಕ್ಲಬ್ ಆಫ್ ಬೆಂಗಳೂರು 2022ನೇ ಸಾಲಿನ ಪ್ರೆಸ್ಕ್ಲಬ್ ‘ವರ್ಷದ ವ್ಯಕ್ತಿ’ ಹಾಗೂ ‘ವಿಶೇಷ ಪ್ರಶಸ್ತಿ’ ಮತ್ತು ‘ವಾರ್ಷಿಕ ಪ್ರಶಸ್ತಿ’ ಪ್ರದಾನ ಸಮಾರಂಭ ನಡೆಯಿತು.
ಸುಪ್ರೀಂ ಕೋರ್ಟಿನ ವಿಶ್ರಾಂತ ನ್ಯಾಯಮೂರ್ತಿ ಸನ್ಮಾನ್ಯ ಶ್ರೀ ಡಾ. ವಿ. ಗೋಪಾಲಗೌಡ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ‘ವರ್ಷದ ವ್ಯಕ್ತಿ’ ಪ್ರಶಸ್ತಿ ಹಾಗೂ ಬೃಹತ್ ಕೈಗಾರಿಕಾ ಸಚಿವ ಶ್ರೀ ಮುರುಗೇಶ ನಿರಾಣಿ ಹಾಗೂ ಸಹಕಾರ ಸಚಿವ ಶ್ರೀ ಎಸ್.ಟಿ. ಸೋಮಶೇಖರ್ ರವರಿಗೆ ‘ವಿಶೇಷ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಲಾಯಿತು.
ಅದೇ ರೀತಿ 32 ಮಂದಿ ಹಿರಿಯ ಪತ್ರಕರ್ತರಿಗೆ ಪ್ರೆಸ್ಕ್ಲಬ್ ‘ವಾರ್ಷಿಕ ಪ್ರಶಸ್ತಿ’ ನೀಡಲಾಯಿತು.
ಹೆಚ್.ಎಸ್. ಬಲರಾಂ ಅಗ್ರಹಾರ ಕೃಷ್ಣಮೂರ್ತಿ ಗಂಗಾಧರ ಮೊದಲಿಯಾರ್ ಚೆನ್ನ ನಾಗರಾಜ್ ಎಂ. ಶ್ರೀಧರ ಬಿ.ಎನ್ ಕಿರಣ್ ಹೆಚ್.ವಿ. ಗೌತಮ್ ಮಾಚಯ್ಯ .ಎಂ ರಾಜಶೇಖರ್ .ಎಸ್ ಹೆಚ್. ಮೂರ್ತಿ ಸಂಗಮ್ ದೇವ್ ಐ.ಹೆಚ್ ಮುನೀರ್ ಅಹಮದ್ ಅಜದ್ ಕೆ.ವಿ. ಪರಮೇಶ್ ಸಿ.ಎಸ್. ಬೋಪಯ್ಯ ಶ್ಯಾಂ ಬೋಜಕ್ ಭಾಗ್ಯ ಪ್ರಕಾಶ್ .ಕೆ ಅನಿಲ್ ವಿ. ಗೆಜ್ಜೆ ಶ್ರೀಮತಿ ಗಾಯಿತ್ರಿ ನಿವಾಸ್ ಬಸವರಾಜು ಹನುಮೇಶ್ ಯಾವಗಲ್ ಶಿವಣ್ಣ ಶ್ರೀಮತಿ ಶೋಭಾ ಎಂ.ಸಿ ದಿವಾಕರ್ .ಸಿ ನಾಗಭೂಷಣ್ ವೈ.ಎಂ ವಿಲಾಸ್ ನಂದೂಕರ್ ಇ ನಾಗರಾಜು ಪಿ. ರಾಜೇಂದ್ರ ಶಿವಾನಂದ ತಗಡೂರು ಟಿ.ವಿ. ಶಿವಪ್ರಕಾಶ್ .ಎಸ್ ಓಂಕಾರ ಕಾಕಡೆ ಜಯ ಪ್ರಕಾಶ್ .ಆರ್ ನರಸಿಂಹ ರಾವ್ ರಾಘವೇಂದ್ರ ಕೆ. (ತೋಗರ್ಸಿ) ಗಿರಿಪ್ರಕಾಶ್ .ಕೆ
– ಆರ್. ಶ್ರೀಧರ್ – ಅಧ್ಯಕ್ಷರು ಬಿ.ಪಿ. ಮಲ್ಲಪ್ಪ – ಪ್ರಧಾನ ಕಾರ್ಯದರ್ಶಿ
‘ಮಧ್ಯಮ ವ್ಯಾಯೋಗ’ ನಾಟಕ ಪ್ರದರ್ಶನ ಮತ್ತು ಕವನ ಸಂಕಲನ ಬಿಡುಗಡೆ ಸಮಾರಂಭ 3.12.22 ಶನಿವಾರ ಸಂಜೆ 4 ಗಂಟೆಗೆ ನಯನ ಸಭಾಂಗಣದಲ್ಲಿ
ಪರಂಪರಾ ಕಲ್ಬರಲ್ ಫೌಂಡೇಶನ್ ವತಿಯಿಂದ ಇದೇ ಶನಿವಾರ 3.12.22ರಂದು ಸಂಜೆ 4 ಗಂಟೆಗೆ ಕನ್ನಡ ಭವನದ ನಯನ ಸಭಾಂಗಣದಲ್ಲಿ ಮಹಿಳೆಯರೇ ಅಭಿನಯಿಸಿರುವ ‘ಮಧ್ಯಮ ವ್ಯಾಯೋಗ’ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.
ನಂತರ ನಡೆಯುವ ಸಮಾರಂಭದಲ್ಲಿ ಸದ್ಗುರು ಬಾಬು ಅವರ ‘ಗಗನಕೊಂದು ಕಾವ್ಯಗುಚ್ಚ’ ಕವನ ಸಂಕಲನ ಬಿಡುಗಡೆಯಾಗಲಿದೆ.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಿರಿಯ ಕವಿ, 81ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷರಾದ ಡಾ. ದೊಡ್ಡರಂಗೇಗೌಡ ಕೃತಿ ಬಿಡುಗಡೆ ಮಾಡುವರು. ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಭೈರಮಂಗಲ ರಾಮೇಗೌಡ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಸಾಹಿತಿ ಡಾ. ಕಾ.ವೆಂ. ಶ್ರೀನಿವಾಸಮೂರ್ತಿ ಕೃತಿ ಪರಿಚಯ ಮಾಡುವರು. ಪರಂಪರಾ ಸಂಸ್ಥೆಯ ಅಧ್ಯಕ್ಷ ಜಿ.ಪಿ.ರಾಮಣ್ಣ ಪ್ರಾಸ್ತಾವಿಕ ನುಡಿಗಳಾಡುವರು. ಪ್ರಕಾಶಕ ಡಾ.ಎಂ.ಬೈರೇಗೌಡ ಮತ್ತು ಕೃತಿಕಾರ ಸದ್ಗುರು ಬಾಬು ಉಪಸ್ಥಿತರಿರುವರು ಎಂದು ಪರಂಪರಾ ಕಲ್ಬರಲ್ ಫೌಂಡೇಶನ್ (ರಿ.) ಪರವಾಗಿ ಜಿ.ಪಿ.ರಾಮಣ್ಣ ಅಧ್ಯಕ್ಷರು ತಿಳಿಸಿದರು.
You must be logged in to post a comment.