ರೂ.9,85,09,228/- ಗಳನ್ನು ಮಾನ್ಯ ಮುಖ್ಯಮಂತ್ರಿಗಳ ‘ಕೊವಿಡ್ ಪರಿಹಾರ ನಿಧಿ’ಗೆ ಚೆಕ್ ಮೂಲಕ ಸನ್ಮಾನ್ಯ ಮುಖ್ಯಮಂತ್ರಿಯವರಿಗೆ, ಮಾನ್ಯ ಉಪಮುಖ್ಯ ಮಂತ್ರಿಗಳು, ಸಾರಿಗೆ ಇಲಾಖೆ ಶ್ರೀ.ಲಕ್ಷ್ಮಣ ಸಂ.ಸವದಿ ರವರು ನೀಡಿರುತ್ತಾರೆ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕುಸಂಸ್ಥೆಗಳ ಸಮಸ್ತ ಅಧಿಕಾರಿ ಮತ್ತು ಸಿಬ್ಬಂದಿಗಳ ಒಂದು ದಿನದ ವೇತನದ ಮೊತ್ತ ರೂ.9,85,09,228/- ಗಳನ್ನು ಮಾನ್ಯ ಮುಖ್ಯಮಂತ್ರಿಗಳ ‘ಕೊವಿಡ್ ಪರಿಹಾರ ನಿಧಿ’ಗೆ ಚೆಕ್ ಮೂಲಕ ದಿನಾಂಕ:13/05/2020ರಂದು ಸನ್ಮಾನ್ಯ ಮುಖ್ಯಮಂತ್ರಿಯವರಿಗೆ, ಮಾನ್ಯ ಉಪಮುಖ್ಯಮಂತ್ರಿಗಳು, ಸಾರಿಗೆ ಇಲಾಖೆ ಶ್ರೀ.ಲಕ್ಷ್ಮಣ ಸಂ.ಸವದಿ ರವರು ನೀಡಿರುತ್ತಾರೆ.

ಈ ಸಂದರ್ಭದಲ್ಲಿ, ಶ್ರೀ.ನಂದೀಶ್ ರೆಡ್ಡಿ, ಅಧ್ಯಕ್ಷರು, ಬಿಎಂಟಿಸಿ,ಶ್ರೀ.ಗೌರವ ಗುಪ್ತ ಭಾಆಸೇ, ಪ್ರಧಾನ‌ ಕಾರ್ಯದರ್ಶಿಗಳು, ಸಾರಿಗೆ ಇಲಾಖೆ, ಶ್ರೀ.ಶಿವಯೋಗಿ ಸಿ.ಕಳಸದ, ಭಾಆಸೇ, ವ್ಯವಸ್ಥಾಪಕ ನಿರ್ದೇಶಕರು,
ಕೆ ಎಸ್‌ ಆರ್ ಟಿ ಸಿ, ಡಾ.ರಾಮ್ ನಿವಾಸ್ ಸಪೆಟ್, ಭಾಪೊಸೇ, ನಿರ್ದೇಶಕರು ( ಭ&ಜಾ) , ಶ್ರೀಮತಿ ಕವಿತಾ ಎಸ್ ಮನ್ನಿಕೇರಿ,ಭಾ.ಆ.ಸೇ, ನಿರ್ದೇಶಕರು (ಸಿಬ್ಬಂದಿ &ಪರಿಸರ) ಕೆ ಎಸ್‌ ಆರ್ ಟಿ ಸಿ ರವರುಗಳು ಮತ್ತು ಶ್ರೀಮತಿ ಹೆಚ್.ಕೆ.ರಮಾಮಣಿ ಮುಖ್ಯ ಲೆಕ್ಕಾಧಿಕಾರಿ /ಆ.ಸ, ಕೆ ಎಸ್ ಆರ್ ಟಿ ಸಿ, ರವರುಗಳು ಉಪಸ್ಥಿತರಿದ್ದರು.

ಕಳೆದ ಎರಡು ತಿಂಗಳುಗಳಿಂದ ಸಾರಿಗೆ ನಿಗಮಗಳಲ್ಲಿ ಯಾವುದೇ ಬಸ್ ಕಾರ್ಯಚರಣೆ ಆಗದೆ , ನಿಗಮಗಳ ಆದಾಯ ಸಂಪೂರ್ಣ ನಿಂತಿರುತ್ತದೆ.
ವೇತನ ನೀಡಲೂ ಹಣವಿಲ್ಲದಂತಹ ಸ್ಥಿತಿಯಲ್ಲಿದ್ದ ಸಾರಿಗೆ ನಿಗಮಗಳಿಗೆ, ಇದೇ‌ ಮೊದಲ ಬಾರಿಗೆ ಸಾರಿಗೆ ನಿಗಮಗಳ ಇತಿಹಾಸದಲ್ಲಿ, ಸರ್ಕಾರವು ಸಾರಿಗೆ ನಿಗಮಗಳ ಸಿಬ್ಬಂದಿಗಳ ವೇತನಕ್ಕೆ ಹಣ ಬಿಡುಗಡೆ ಮಾಡಿ ಸಾರಿಗೆ ಸಂಸ್ಥೆಗಳ ಬೆನ್ನಿಗೆ ನಿಂತು, ಸಿಬ್ಬಂದಿಗಳಲ್ಲಿ ಆತ್ಮಸ್ಥೆರ್ಯ ತುಂಬಿದ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ,
ಮಾನ್ಯ ಉಪಮುಖ್ಯಮಂತ್ರಿಗಳು , ಸಾರಿಗೆ ಇಲಾಖೆ ರವರು ಧನ್ಯವಾದ ಪತ್ರದೊಂದಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.

City Today News

(citytoday.media)

9341997936

ತಬ್ಲೀಘ್ ಸಮಾವೇಶಕ್ಕೆ ಅನುಮತಿ ಕೊಟ್ಟವರು ಯಾರು ?ಪೂರ್ವಸಿದ್ಧತೆ, ಮುಂಗಾಗ್ರತೆ ಕೊರತೆ ಸೋಂಕು ಹೆಚ್ಚಲು ಕಾರಣ : ಸಿದ್ದರಾಮಯ್ಯ

ಬೆಂಗಳೂರು : ಕೊರೋನಾ ಸೋಂಕನ್ನು ವ್ಯವಸ್ಥಿತವಾಗಿ ತಡೆಯುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಮಪೂರ್ಣವಾಗಿ ವಿಫಲವಾಗಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಆರೋಪಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪೂರ್ವಸಿದ್ಧತೆ ಹಾಗೂ ಮುಂಜಾಗ್ರತಾ ಕ್ರಮಗಳ ಕೊರತೆಯಿಂದಾಗಿ ನಾನಾ ಸಮಸ್ಯೆಗಳು ಉದ್ಭವವಾಗಿದೆ ಎಂದು ದೂರಿದರು.
ಸಿದ್ದರಾಮಯ್ಯ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದು :
ಸೋಂಕು ಕಾಣಿಸಿಕೊಂಡ ತಕ್ಷಣ ವಿಮಾನಗಳ ಹಾರಾಟವನ್ನು ಸಂಪೂರ್ಣವಾಗಿ ಬಂದ್ ಮಾಡಿದ್ದರೆ ದೇಶದಲ್ಲಿ ಸೋಂಕು ಈ ಪ್ರಮಾಣದಲ್ಲಿ ಹರಡಲು ಸಾಧ್ಯವಾಗುತ್ತಿರಲಿಲ್ಲ. ಈ ಕೆಲಸವನ್ನು ಪ್ರಧಾನಿ ಮೋದಿಯವರಾಗಲಿ, ಅವರ ಮೇಲೆ ಒತ್ತಡ ಹೇರುವುದನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರಾಗಲಿ ಮಾಡಲಿಲ್ಲ.
ತಬ್ಲೀಘ್‍ಗಳಿಂದ ಸೋಂಕು ಹೆಚ್ಚಾಯಿತು ಎನ್ನುತ್ತಾರೆ. ಹಾಗಾದರೆ ಇಟಲಿ, ಅಮೆರಿಕ, ಸ್ಪೇನ್ ನಲ್ಲಿ ಯಾವ ತಬ್ಲೀಘ್‍ಗಳಿದ್ದರು. ರಾಜಕೀಯ ಕಾರಣಕ್ಕಾಗಿ ಆರ್‍ಎಸ್‍ಎಸ್ ನವರು ಈ ರೀತಿಯ ಮಾತುಗಳನ್ನಾಡುತ್ತಿದ್ದಾರೆ. ಇದು ಕೋಮುವಾದಿಗಳ ಹುನ್ನಾರ.
ದೆಹಲಿಯಲ್ಲಿ ತಬ್ಲೀಘ್ ಸಮಾವೇಶಕ್ಕೆ ಪರವಾನಗಿ ಕೊಟ್ಟವರು ಯಾರು ? ಕೇಂದ್ರ ಸರ್ಕಾರವೇ ಪರವಾನಗಿ ಕೊಟ್ಟಿದ್ದು. ಇದು ಮೊದಲನೆಯ ತಪ್ಪು. ಸೋಂಕು ತಡೆಗಟ್ಟದೇ ಹೋಗಿದ್ದು ಎರಡನೇ ತಪ್ಪು. ಯಾರ ಪ್ರಮಾದ ಇದು ? ಕೇಂದ್ರವೇ ಇದಕ್ಕೆ ಹೊಣೆ. ತಬ್ಲೀಘ್‍ಗಳ ವಿಷಯದಲ್ಲಿ ಕೋಮುವಾದಿಗಳು ನೀಡುತ್ತಿರುವ ಹೇಳಿಕೆ ರಾಜಕೀಯ ಹುನ್ನಾರ ಎಂಬುದು ಸ್ಪಷ್ಟವಾಗುತ್ತದೆ.
ಮಾರ್ಚ್ 24ರಂದು ಲಾಕ್‍ಡೌನ್ ಮಾಡುವ ಮುನ್ನೆ ಅದಕ್ಕೂ ಮುನ್ನ ಸಿದ್ಧತೆಗಳೇ ಇರಲಿಲ್ಲ. ಜನರಿಗೂ ಮೊದಲೇ ತಿಳಿಸಲಿಲ್ಲ. ಒಂದು ವಾರದ ಮೊದಲೇ ಹೇಳಿದ್ದರೆ ವಲಸೆ ಕಾರ್ಮಿಕರು ಈ ರೀತಿ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಪೂರ್ವ ಸಿದ್ಧತೆ, ಮುಂಗಾಗ್ರತೆ ಇಲ್ಲದ ಕಾರಣ ಈ ಎಲ್ಲ ಸಮಸ್ಯೆಗಳು ಉದ್ಭವ ಆಗಿವೆ.
ಕರ್ನಾಟಕದಲ್ಲಿರುವ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಉಚಿತವಾಗಿ ಕಳುಹಿಸಬೇಕು. ಅದೇ ರೀತಿ ಹೊರ ರಾಜ್ಯಗಳಲ್ಲಿರುವ ಕನ್ನಡಿಗರನ್ನು ಇಲ್ಲಿಗೆ ಕರೆತರಬೇಕು. ಆರ್ಥಿಕ ವಲಯಕ್ಕೆ ಕಾರ್ಮಿಕರೇ ಬೆನ್ನೆಲುಬು. ಅವರ ವಿಚಾರದಲ್ಲಿಯೇ ಈ ರೀತಿ ಮೀನಮೇಷ ಎಣಿಸಿದರೆ ಕಾರ್ಮಿಕರ ಬಗ್ಗೆ ಸರ್ಕಾರಕ್ಕೆ ಇರುವ ಕಾಳಜಿ ಏನು ಎಂಬುದು ಅರ್ಥವಾಗುತ್ತದೆ.
ನಾವು ಇದುವರೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಕಠಿಣ ಶಬ್ದಗಳಿಂದ ಟೀಕೆ ಮಾಡಿರಲಿಲ್ಲ. ಮೊದಲಿನಿಂದಲೂ ನಾವು ಸರ್ಕಾರಕ್ಕೆ ಸಹಕಾರ ನೀಡುತ್ತಾ ಬಂದಿದ್ದೇವೆ. ಆದರೆ, ನಮ್ಮ ಸಲಹೆ ಸೂಚನೆಗಳಿಗೆ ಗಳಿಗೆ ಕಿಮ್ಮತ್ತು ನೀಡುತ್ತಿಲ್ಲ. ಶ್ರಮಿಕ ವರ್ಗದವರು, ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ವಿವರಿಸಿ ಅವರ ಪರವಾಗಿ ಬೇಡಿಕೆಗಳನ್ನು ಮಂಡಿಸಿದರೂ ರಾಜ್ಯ ಸರ್ಕಾರ ಕ್ರಮ ಕೈಗೊಂಡಿಲ್ಲ. ಹೀಗಾಗಿ ಸರ್ಕಾರದ ವಿರುದ್ಧ ಹೋರಾಟಕ್ಕಿಳಿಯಲು ತೀರ್ಮಾನ ಮಾಡಿದ್ದೇವೆ.
ಚಪ್ಪಾಳೆ ತಟ್ಟುವುದರಿಂದ, ದೀಪ ಬೆಳಗಿಸುವುದರಿಂದ ಏನೂ ಆಗುವುದಿಲ್ಲ. ಅದರ ಬದಲಿಗೆ ಬಡವರು, ಕಾರ್ಮಿಕರನ್ನು ರಕ್ಷಣೆ ಮಾಡಲಿ. ಇಡೀ ಜಗತ್ತಿನಲ್ಲಿ ಮೋದಿಯವರು ಒಬ್ಬರೇ ಪರಿಸ್ಥಿತಿಯನ್ನು ಬಹಳ ಚೆನ್ನಾಗಿ ನಿಭಾಯಿಸಿದ್ದಾರೆ ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವ ಬದಲು ಸೃಷ್ಟಿಯಾಗಿರುವ ಸಮಸ್ಯೆಗಳ ನಿವಾರಣೆಯಾತ್ತ ಗಮನ ಹರಿಸುವುದು ಒಳ್ಳೆಯದು ಎಂದು ಸಿದ್ದರಾಮಯ್ಯ ಅವರು ಹೇಳಿದರು.

City Today News

(citytoday.media)

9341997936

ಟಿಸಿಐ ಎಕ್ಸ್ ಪ್ರೆಸ್ ಲಿಮಿಟೆಡ್ 89 ಕೋಟಿ ರೂ ಲಾಭ

ಬೆಂಗಳೂರು: ಎಕ್ಸ್ ಪ್ರೆಸ್ ಡಿಸ್ಟ್ರಿಬ್ಯುಷನ್ ಕ್ಷೇತ್ರದಲ್ಲಿ ಮಾರುಕಟ್ಟೆ ನಾಯಕ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಟಿಸಿಐ ಎಕ್ಸ್ ಪ್ರೆಸ್ ಲಿಮಿಟೆಡ್ ಸಂಸ್ಥೆಯು ನಾಲ್ಕನೇ ತ್ರೈಮಾಸಿಕ ಹಣಕಾಸು ವರ್ಷ 2020 ರಲ್ಲಿ 89 ಕೋಟಿ ರೂ ನಿವ್ವಳ ಲಾಭ ಗಳಿಸಿದೆ. ಇದೇ ಅವಧಿಯಲ್ಲಿ ಹಿಂದಿನ ವರ್ಷ ಸಂಸ್ಥೆಯು 73 ಕೋಟಿ ರೂ ಲಾಭ ಗಳಿಸಿದೆ. ಕಳೆದ ಇದೇ ಅವಧಿಗೆ ಹೋಲಿಸಿದರೆ ಸಂಸ್ಥೆಯು ಶೇಕಡ 22.3 ರಷ್ಟು ಪ್ರಗತಿ ಸಾಧಿಸಿದೆ.

ಇದೇ ಅವಧಿಯಲ್ಲಿ ಸಂಸ್ಥೆಯು 1032 ಕೋಟಿ ರೂಪಾಯಿಯನ್ನು ಕಾರ್ಯಚರಣೆ ವರಮಾನದ ರೂಪದಲ್ಲಿ ಗಳಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 1024 ಕೋಟಿ ರೂ ಕಾರ್ಯಚರಣೆ ವರಮಾನ ದಾಖಲಿಸಿತ್ತು. ಈಗ ಶೇಕಡ 0.8 ರಷ್ಟು ಏರಿಕೆ ಕಂಡಿದೆ. 

“ಆರ್ಥಿಕ ಮತ್ತು ವ್ಯವಹಾರದ ವಾತಾವರಣದ ಸವಾಲಿನ ಹೊರತಾಗಿಯೂ 2020 ಹಣಕಾಸು ಅವಧಿಯಲ್ಲಿ ಪ್ರೋತ್ಸಾಹದಾಯಕ ಕಾರ್ಯಕ್ಷಮತೆಯನ್ನು ವರದಿ ಮಾಡಲು ನನಗೆ ಸಂತೋಷವಾಗಿದೆ. ಕಾರ್ಯಾಚರಣೆಗಳಿಂದ ಬರುವ ಆದಾಯವು ಸ್ವಲ್ಪಮಟ್ಟಿಗೆ ರೂ. 1,032 ಕೋಟಿ ರೂ ಕೋವಿಡ್-19 ನಮ್ಮ ವ್ಯವಹಾರವು ಮಾರ್ಚ್ 2020 ರಲ್ಲಿ ಪರಿಣಾಮ ಬೀರಿತು” ಎಂದು ಟಿಸಿಐ ಎಕ್ಸ್ ಪ್ರೆಸ್ ಲಿಮಿಟೆಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಚಂದರ್ ಅಗರ್ವಾಲ್ ಹೇಳಿದರು.

ಈ ಸಾಂಕ್ರಾಮಿಕದ ಮಧ್ಯೆ ನಾವು ನಮ್ಮ ನೌಕರರು, ಗ್ರಾಹಕರು, ಮಾರಾಟಗಾರರು ಮತ್ತು ಇತರ ಎಲ್ಲ ಪಾಲುದಾರರ ಯೋಗಕ್ಷೇಮವನ್ನು ನಮ್ಮ ಮೊದಲ ಆದ್ಯತೆಯಾಗಿ ಇರಿಸಿದ್ದೇವೆ. ಸರ್ಕಾರ ಹೊರಡಿಸಿರುವ ಆರೋಗ್ಯ ಮತ್ತು ಸುರಕ್ಷತಾ ಮಾರ್ಗಸೂಚಿಗಳನ್ನು ನಾವು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದೇವೆ. ಮನೆಯಿಂದ ಕೆಲಸ, ಡಿಜಿಟಲ್ ಸಂವಹನ ಮಾಧ್ಯಮಗಳ ಪ್ರಚಾರ, ಕೆಲಸದ ಸ್ಥಳದಲ್ಲಿ ನೈರ್ಮಲ್ಯೀಕರಣ ಮತ್ತು ಸಾಮಾಜಿಕ ದೂರವಿರುವುದು, ನಿಯಮಿತವಾಗಿ ನೌಕರರನ್ನು ತಪಾಸಣೆ ಮಾಡುವುದು ಮತ್ತು ಮಾರಾಟಗಾರರ ಪಾಲುದಾರರಿಗೆ ಸಂಪೂರ್ಣ ಬೆಂಬಲವನ್ನು ನೀಡುವುದು ಮುಂತಾದ ವಿವಿಧ ತಡೆಗಟ್ಟುವ ಕ್ರಮಗಳನ್ನು ನಾವು ಜಾರಿಗೆ ತಂದಿದ್ದೇವೆ.

City Today News

(citytoday.media)

9341997936

ಐಸಿಎಂಆರ್ ನವದೆಹಲಿ ನೀಡಿದ ಕೆಲವು ಪ್ರಮುಖ ಮುನ್ನೆಚ್ಚರಿಕೆಗಳ ಅಂಶಗಳು

1. 2 ವರ್ಷಗಳ ಕಾಲ ವಿದೇಶ ಪ್ರವಾಸವನ್ನು ಮುಂದೂಡಿ.
2. 1 ವರ್ಷ ಹೊರಗಿನ ಆಹಾರವನ್ನು ಸೇವಿಸಬೇಡಿ.
3. ಅನಗತ್ಯ ಮದುವೆ ಅಥವಾ ಇತರ ರೀತಿಯ ಸಮಾರಂಭಕ್ಕೆ ಹೋಗಬೇಡಿ.
4. ಅನಗತ್ಯ ಪ್ರಯಾಣ ಪ್ರವಾಸಗಳನ್ನು ಮಾಡಬೇಡಿ.
5. ಕನಿಷ್ಠ 1 ವರ್ಷ ಜನದಟ್ಟಣೆಯ ಸ್ಥಳಕ್ಕೆ ಹೋಗಬೇಡಿ.
6. ಸಾಮಾಜಿಕ ಅಂತರದ ನಿಯಮಗಳನ್ನು ಸಂಪೂರ್ಣವಾಗಿ ಅನುಸರಿಸಿ.
7. ಕೆಮ್ಮು ಇರುವ ವ್ಯಕ್ತಿಯಿಂದ ದೂರವಿರಿ.
8. ಮುಖವಾಡವನ್ನು ಕಡ್ಡಾಯವಾಗಿ ಧರಿಸಿ..ಅದು ನಿಮ್ಮ ಮುಖದ ಮೇಲೆ ಇರಲಿ. ನೀವು ಇದ್ದರೆ ನಿಮ್ಮ ಮುಖ ಅಂದವಾಗಿಯೇ ಇರುತ್ತೆ.
9. ಪ್ರಸ್ತುತ ಒಂದು ವಾರದಲ್ಲಿ ಬಹಳ ಜಾಗರೂಕರಾಗಿರಿ.
10. ನಿಮ್ಮ ಸುತ್ತಲಿನ ಯಾವುದೇ ಅವ್ಯವಸ್ಥೆಯನ್ನು ಶುದ್ದವಾಗಿಡಿ.
11. ಸಸ್ಯಾಹಾರಿ ಆಹಾರವನ್ನು ಆದ್ಯತೆಯಾಗಿ ಸೇವಿಸಿ.
12. ಈಗ 6 ತಿಂಗಳು ಸಿನಿಮಾ, ಮಾಲ್, ಕಿಕ್ಕಿರಿದ ಮಾರುಕಟ್ಟೆಗೆ ಹೋಗಬೇಡಿ. ಸಾಧ್ಯವಾದರೆ ಪಾರ್ಕ್, ಪಾರ್ಟಿ ಇತ್ಯಾದಿಗಳನ್ನು ಸಹ ತಪ್ಪಿಸಬೇಕು.
13. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ
14. ಬಾರ್ಬರ್ ಅಂಗಡಿಯಲ್ಲಿ ಅಥವಾ ಬ್ಯೂಟಿ ಸಲೂನ್ ಪಾರ್ಲರ್‌ನಲ್ಲಿರುವಾಗ ಬಹಳ ಜಾಗರೂಕರಾಗಿರಿ.
15. ಅನಗತ್ಯ ಸಭೆಗಳನ್ನು ತಪ್ಪಿಸಿ, ಯಾವಾಗಲೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ.
16. ಕೊರೊನಾ ಬೆದರಿಕೆ ಶೀಘ್ರದಲ್ಲೇ ಕೊನೆಗೊಳ್ಳುವುದಿಲ್ಲ.ಹಾಗಾಗಿ ಎಚ್ಚರವಾಗಿರಿ

17. ನೀವು ಹೊರಗೆ ಹೋಗುವಾಗ ಬೆಲ್ಟ್, ಉಂಗುರಗಳು, ಮಣಿಕಟ್ಟಿನ ಗಡಿಯಾರವನ್ನು ಧರಿಸಬೇಡಿ. ವಾಚ್ ಅಗತ್ಯವಿಲ್ಲ. ನಿಮ್ಮ ಮೊಬೈಲ್‌ಗೆ ಸಮಯ ಸಿಕ್ಕಿದೆ. ಆದಷ್ಟು ಅದರಿಂದ ಆರೋಗ್ಯ ಕಾಪಾಡಿಕೊಳ್ಳಿ.
18. ಕೈ ಕೆರ್ಚೀಫ್ ಇಲ್ಲ. ಅಗತ್ಯವಿದ್ದರೆ ಸ್ಯಾನಿಟೈಸರ್ ಮತ್ತು ಟಿಶ್ಯೂ ತೆಗೆದುಕೊಳ್ಳಿ.
19. ನಿಮ್ಮ ಮನೆಗೆ ಬೂಟುಗಳನ್ನು ತರಬೇಡಿ. ಅವುಗಳನ್ನು ಹೊರಗೆ ಬಿಡಿ.
20. ನೀವು ಹೊರಗಿನಿಂದ ಮನೆಗೆ ಬಂದಾಗ ನಿಮ್ಮ ಕೈ ಕಾಲುಗಳನ್ನು ಸ್ವಚ್ ಗೊಳಿಸಿಕೊಳ್ಳಿ.

  1. ನೀವು ಅನುಮಾನಾಸ್ಪದ ರೋಗಿಯ ಹತ್ತಿರ ಬಂದಿದ್ದೀರಿ ಎಂದು ಭಾವಿಸಿದಾಗ ಸಂಪೂರ್ಣ ಸ್ನಾನ ಮಾಡಿ.

ಮುನ್ನೆಚ್ಚರಿಕೆಗಳನ್ನು ಅನುಸರಿಸಿ.

ನಿಮ್ಮ ಎಲ್ಲ ಕುಟುಂಬ ಮತ್ತು ಸ್ನೇಹಿತರೊಂದಿಗೆ ಇದನ್ನು ಹಂಚಿಕೊಳ್ಳಿ.
ಧನ್ಯವಾದಗಳು..
😷😷😷😷😷😷

City Today News

(citytoday.media)

9341997936

Founders Dr.Amjad & Dr.Ambanna Gowda of Citizen Hospital inKalasipalya, Bengaluru along with Local Leader Mr.SyedAsif Ali, Distributing 750 Food Packets from past 45 days

Times of crisis, it is said, brings out the best in us. As India goes
through the world’s biggest lock down, every day people are turning into real life heroes. Heroes who are ensuring that hundreds and thousands of poor, migrant labourers who were struck with pandemic effects as crowded KR Market hotels and Road side eateries shut down
and no where to go?

Founders Dr Amjad , Dr Ambanna gowda of Citizen hospital in Kalasipalya, Bengaluru with the help of locally active leader mr Syed
Asif Ali got the idea of helping out by arranging up a team and they have been feeding and distributing the food packets to the people during the past 45 days nearly about 750 food packets distributed every day.

Daily expenses was around 2000 per day, From hiring a cook and
procuring food essentials items to cook which has been arranged with the help of local community people, who helped a major role also in distributing of food packets by Scouting the surrounding area people
who were starving and helplessness. We also started educating them about social distancing and hand hygiene methods to follow in day
today activities of life Dr Gowda said.

City Today News

(citytoday.media)

9341997936