ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ಕತ್ತರಿಸಿದ ಪ್ರಕರಣಕ್ಕೆ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದಿಂದ ತೀವ್ರ ಖಂಡನೆ

ಬೆಂಗಳೂರು: ಧಾರವಾಡ, ಶಿವಮೊಗ್ಗ, ಬೀದರ್ ಹಾಗೂ ಸಾಗರ್ ನಗರದಲ್ಲಿನ ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳು ಧರಿಸಿದ್ದ ಜನಿವಾರ ಹಾಗೂ ಕಾಶೀದಾರವನ್ನು ಸಿಇಟಿ ಸಿಬ್ಬಂದಿ ಬಲವಂತವಾಗಿ ತೆಗೆದುಹಾಕಿದ ಘಟನೆ ತೀವ್ರ ವಿವಾದಕ್ಕೆ ಕಾರಣವಾಗಿದೆ. ಗಾಯತ್ರೀ ಮಂತ್ರ ದೀಕ್ಷೆ ಪಡೆದು ಆತ್ಮ ಸಾಕ್ಷಾತ್ಕಾರದ ಪರಮಸಂಕಲ್ಪ ಮಾಡಿದ್ದ ವಿದ್ಯಾರ್ಥಿಗಳ ಧಾರ್ಮಿಕ ನಂಬಿಕೆಯನ್ನು ಅವಹೇಳನೆ ಮಾಡುವ ರೀತಿಯಲ್ಲಿ ನಡೆದ ಈ ಘಟನೆ ಕುರಿತು ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಈ ಸಂಬಂಧ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾ ಗೋಷ್ಠಿ ನಡೆಸಿದ ಮಹಾಸಂಘದ ರಾಜ್ಯಾಧ್ಯಕ್ಷ ಜಿ.ಆರ್. ಪ್ರದೀಪ, ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಜೋಶಿ, ಉಪಾಧ್ಯಕ್ಷ ರಾಘವೇಂದ್ರ ಅಲಗೂರ ಅವರು ಮಾತನಾಡುತ್ತಾ, “ಮುಗಳರು ಮತ್ತು ಬ್ರಿಟಿಷರು ಮಾಡಿದ ಹೀನ ಕೃತ್ಯಗಳನ್ನು ಈಗಲೂ ಮುಂದುವರಿಸುತ್ತಿರುವುದು ದುರ್ದೈವಕರ. ವಿದ್ಯಾರ್ಥಿಗಳು ಮಾನಸಿಕವಾಗಿ ಕಂಗೆಟ್ಟು ಹೋಗಿದ್ದಾರೆ. ಇಂಥ ಘಟನೆಗಳು ಇಡೀ ಬ್ರಾಹ್ಮಣ ಸಮಾಜಕ್ಕೆ ಅವಮಾನಕಾರಿಯಾಗಿದ್ದು, ಧರ್ಮ ರಕ್ಷಣೆಗಾಗಿ ಬ್ರಾಹ್ಮಣ ಸಮಾಜ ಪ್ರಾಣ ಪಣಕ್ಕಿಡಲು ಸಿದ್ಧವಾಗಿದೆ” ಎಂದರು.

ಅಧಿಕಾರಿಗಳ ಅಮಾನತು ಹಾಗೂ ಶಿಕ್ಷೆಗೆ ಆಗ್ರಹ
ಘಟನೆಗೆ ಕಾರಣರಾದ ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡಿ, ಕಾನೂನು ಕ್ರಮ ಜರುಗಿಸಬೇಕು ಎಂಬುದು ಮಹಾಸಂಘದ ಬೇಡಿಕೆಯಾಗಿದೆ. ಅಲ್ಲದೆ, ಘಟನೆಗೆ ಒಳಪಟ್ಟ ವಿದ್ಯಾರ್ಥಿಗೆ ಉತ್ತಮ ಇಂಜಿನಿಯರಿಂಗ್ ಅಥವಾ ವೈದ್ಯಕೀಯ ಕಾಲೇಜಿನಲ್ಲಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಲಾಗಿದೆ. ಸರ್ಕಾರ ಈ ಬಗ್ಗೆ ತಕ್ಷಣ ಸ್ಪಂದಿಸದೆ ಇದ್ದರೆ, ರಾಜ್ಯವ್ಯಾಪಿ ಉಗ್ರ ಹೋರಾಟ ನಡೆಯಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.

ಕಾಂತರಾಜು ಸಮೀಕ್ಷೆಯ ವಿರುದ್ಧ ಆಕ್ಷೇಪ
ಹತ್ತು ವರ್ಷಗಳ ಹಿಂದೆ ನಡೆದ ಕಾಂತರಾಜು ಸಮೀಕ್ಷೆ ವೈಜ್ಞಾನಿಕವಲ್ಲ ಎಂದು ಮಹಾಸಂಘ ಅಭಿಪ್ರಾಯಪಟ್ಟಿದ್ದು, ಬ್ರಾಹ್ಮಣರಲ್ಲಿ ಇರುವ 44 ಉಪಪಂಗಡಗಳನ್ನು ಒಂದೇ ಶ್ರೇಣಿಗೆ ಸೇರಿಸಿ ‘ಹಿಂದೂ ಬ್ರಾಹ್ಮಣ’ ಎಂದು ಪರಿಗಣಿಸುವುದು ಅನ್ಯಾಯkar. ಈ ಹಿನ್ನೆಲೆಯಲ್ಲಿ, ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಹೊಸ ಸರ್ವೆ ನಡೆಸಬೇಕೆಂದು ಆಗ್ರಹಿಸಲಾಗಿದೆ.

City Today News 9341997936

ನಾಮದೇವ ಸಿಂಪಿ ಸಮಾಜಕ್ಕೆ ಮೀಸಲಾತಿಯಲ್ಲಿ ಅನ್ಯಾಯ: ಸರ್ಕಾರದತ್ತ ಹಕ್ಕೊತ್ತಾಯ

ಬೆಂಗಳೂರು, ಎಪ್ರಿಲ್ 21:
ಕರ್ನಾಟಕ ರಾಜ್ಯ ನಾಮದೇವ ಸಿಂಪಿ ಸಮಾಜದ ಅಧ್ಯಕ್ಷ ನಾರಾಯಣರಾವ್ ವಿ. ಕೋರ್ಪಡೆ ಅವರು ರಾಜ್ಯ ಸರ್ಕಾರದ ಮೀಸಲಾತಿ ನೀತಿಯಲ್ಲಿನ ಅನ್ಯಾಯ ಹಾಗೂ ಪ್ರಾತಿನಿಧ್ಯದ ಕೊರತೆಯನ್ನು ತೀವ್ರವಾಗಿ ಪ್ರಶ್ನಿಸಿದರು. ನಗರದ ಪ್ರೆಸ್ ಕ್ಲಬ್‌ನಲ್ಲಿ ಸೋಮವಾರ ಆಯೋಜಿಸಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದ ವಾಸ್ತವಿಕ ಹಿನ್ನಲೆಯಲ್ಲಿ ತಕ್ಷಣದ ಸಹಾಯ ಹಾಗೂ ಸವಲತ್ತು ಅಗತ್ಯವಿದೆ ಎಂದು ಸರ್ಕಾರದ ಗಮನ ಸೆಳೆದರು.

2ಎ ವರ್ಗದೊಳಗೆ ಸ್ಥಾನ ಪಡೆದಿರುವ ನಾಮದೇವ ಸಿಂಪಿ ಸಮುದಾಯವು, ದರ್ಜಿ ಕೆಲಸ, ಬಟ್ಟೆ ಹೊಲಿಯುವುದು ಹಾಗೂ ನೇಕಾರಿಕೆ ವೃತ್ತಿಯನ್ನು ಅವಲಂಬಿಸಿರುವ ಬಹುಪಾಲು ಜನಸಂಖ್ಯೆಯನ್ನು ಹೊಂದಿದ್ದು, ರಾಜ್ಯಾದ್ಯಂತ ಸುಮಾರು ಎಂಟು ಲಕ್ಷಕ್ಕೂ ಅಧಿಕ ಜನ ಇದರಲ್ಲಿ ಸೇರಿದ್ದಾರೆ. ಇಂತಹ ಹಿಂದುಳಿದ ಸಮುದಾಯಕ್ಕೆ ಇಂದಿನವರೆಗೆ ಯಾವುದೇ ರಾಜಕೀಯ ಪ್ರಾತಿನಿಧ್ಯ ಸಿಗದಿರುವುದು ದುರಂತವಾಗಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.

ಸಮಾಜದ ಪ್ರಮುಖ ಬೇಡಿಕೆಗಳು ಹೀಗಿವೆ:

ನೇರ ಚುನಾವಣೆಯಲ್ಲಿ ಗೆಲ್ಲುವುದು ಕಷ್ಟಕರವಾಗಿರುವುದರಿಂದ ಸಮಾಜದ ಒಬ್ಬ ವ್ಯಕ್ತಿಯನ್ನು ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡಬೇಕು.

ಸಮಾಜದ ಸಮಗ್ರ ಅಭಿವೃದ್ಧಿಗಾಗಿ ನಾಮದೇವ ಸಿಂಪಿ ಅಭಿವೃದ್ಧಿ ಮಂಡಳಿ ರಚಿಸಿ, ಕನಿಷ್ಠ 50 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಬೇಕು.

ರಾಜ್ಯದ ವಿವಿಧ ತಾಲ್ಲೂಕುಗಳಲ್ಲಿ ಸಮುದಾಯ ಭವನ ಹಾಗೂ ವಿದ್ಯಾರ್ಥಿ ನಿಲಯಗಳ ನಿರ್ಮಾಣಕ್ಕಾಗಿ ಜಮೀನು ಹಾಗೂ ಹಣವನ್ನು ಮಂಜೂರು ಮಾಡಬೇಕು.

ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಹಾಗೂ ವೈದಿಕ, ಇಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಕಾಲೇಜುಗಳ ಅಭಿವೃದ್ಧಿಗೆ ಸರ್ಕಾರದಿಂದ ನೆರವು ಒದಗಿಸಬೇಕು.

ನೇಕಾರಿಕೆ ಮತ್ತು ಬಟ್ಟೆ ಹೊಲಿಯುವ ವೃತ್ತಿಯವರಿಗೆ ಕೌಶಲ್ಯಾಭಿವೃದ್ಧಿ ತರಬೇತಿಯು ಕೊಡಲ್ಪಟ್ಟು, ಸ್ವಾವಲಂಬನೆಯ ಉದ್ಯಮ ಸ್ಥಾಪನೆಗೆ ಹಣಕಾಸು ಸಹಾಯ ನೀಡಬೇಕು.

ಮೀಸಲಾತಿಯಲ್ಲಿ ನಡೆಯುತ್ತಿರುವ ಅಸಮಾನತೆಯನ್ನು ತಿದ್ದುಪಡಿ ಮಾಡಿ ಸಮಾನ ಅವಕಾಶ ಕಲ್ಪಿಸಬೇಕು.


ಶ್ರೀ ನಾಮದೇವ ಭವನ ಉದ್ಘಾಟನೆ – ಏಪ್ರಿಲ್ 25, 2025

ವಿಲ್ಸನ್ ಗಾರ್ಡನ್‌ನ ಹೊಂಬೇಗೌಡ ನಗರದಲ್ಲಿ ನಾಮದೇವ ಸಿಂಪಿ ಸಮಾಜದ ಸಹಕಾರದಿಂದ ನಿರ್ಮಿಸಲಾದ “ಶ್ರೀ ನಾಮದೇವ ಭವನ” ಹಾಗೂ ವಿದ್ಯಾರ್ಥಿ ನಿಲಯದ ಉದ್ಘಾಟನಾ ಸಮಾರಂಭವನ್ನು ಏಪ್ರಿಲ್ 25 ರಂದು ಶುಕ್ರವಾರ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಗಣ್ಯರು:

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಎಚ್.ಕೆ. ಪಾಟೀಲ್

ಸಾರಿಗೆ ಹಾಗೂ ಮುಜರಾಯಿ ಸಚಿವ ಶ್ರೀ ರಾಮಲಿಂಗಾರೆಡ್ಡಿ

ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶ್ರೀ ಶಿವರಾಜ್ ತಂಗಡಗಿ

ಮಾಜಿ ಮುಖ್ಯಮಂತ್ರಿ ಶ್ರೀ ಜಗದೀಶ್ ಶೆಟ್ಟರ್

ಶಾಸಕರು: ಶ್ರೀ ಸಿ.ಸಿ. ಪಾಟೀಲ್, ಶ್ರೀ ಉದಯ ಗರುಡಾಚಾರ್, ಶ್ರೀ ಪ್ರಕಾಶ ಕೋಳಿವಾಡ

ಮಾಜಿ ಸಚಿವ ಶ್ರೀಮತಿ ಜಯಮಾಲಾ

ವಿಧಾನ ಪರಿಷತ್ ಸದಸ್ಯ ಶ್ರೀ ನಾಗರಾಜ್ ಯಾದವ


ಆದರ್ಶನ ಕಾರ್ಯಕ್ರಮಗಳು:

ಏಪ್ರಿಲ್ 23: ಬೆಳಿಗ್ಗೆ 10 ಗಂಟೆಗೆ ವಿಠ್ಠಲ-ರುಕ್ಮಾಯಿ ಮೂರ್ತಿಗಳ ಸಾಂಪ್ರದಾಯಿಕ ಮೆರವಣಿಗೆ

ಏಪ್ರಿಲ್ 24: ಪಂಢರಪುರದ ಶ್ರೀ ಜ್ಞಾನೇಶ್ವರ ತುಳಸಿದಾಸ್ ನಾಮದಾಸ್ ಮಹಾರಾಜರ ನೇತೃತ್ವದಲ್ಲಿ ದೇವರ ಮೂರ್ತಿಗಳ ಪ್ರಾಣ ಪ್ರತಿಷ್ಠೆ ಹಾಗೂ ಧಾರ್ಮಿಕ ಕ್ರಿಯೆಗಳು


ಮಾಧ್ಯಮಗೋಷ್ಠಿಯಲ್ಲಿ ಉಪಸ್ಥಿತರಿದ್ದವರು:
ಸಂಘದ ಉಪಾಧ್ಯಕ್ಷ ಶಂಕರ್ ಖಟಾವಕರ್, ಸಂಘಟನಾ ಕಾರ್ಯದರ್ಶಿ ಮೈಪು ರಾಜೇಶ್, ಸಹಕಾರ್ಯದರ್ಶಿಗಳಾದ ನಾಗರಾಜ್ ಕೆ. ಪತಂಗೆ, ಪಾಂಡುರಂಗ ಪಿ.ಸೆ., ಕಾರ್ಯಕಾರಿ ಸದಸ್ಯ ಲಕ್ಷ್ಮಣರಾವ್ ಮಹೇಂದ್ರಕರ್ ಹಾಗೂ ಮುಖಂಡ ರಮೇಶ್.ವಿ. ಚಿಕ್ಕಕಳ್ಕರ್.

City Today News 9341997936

ಶ್ರೀ ಗುರು ರಾಯರ ಸನ್ನಿಧಿಯಲ್ಲಿ ಚಿಕ್ಕ ಮಕ್ಕಳಿಂದ ಶ್ರೀ ಹರಿ ಭಜನೆ  ಮತ್ತು “ನರ್ತನ ಸೇವೆ” “ಮುಂದಿನ ಮಕ್ಕಳ ಭವಿಷ್ಯಕ್ಕಾಗಿ ಸಂಸ್ಕಾರವೇ ಮುಖ್ಯ”

ಬೆಂಗಳೂರು : ಪರಮಪೂಜ್ಯ ಶ್ರೀ ಶ್ರೀ 1008 ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಆದೇಶದಂತೆ ಜಯನಗರ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್ ಕೆ ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ಪ್ರತಿ ಶುಕ್ರವಾರ ಶನಿವಾರ ಭಾನುವಾರ ಶ್ರೀಹರಿ ಭಜನೆ ಕಾರ್ಯಕ್ರಮವು ನೆರವೇರುತ್ತಿದೆ,ಈ ಭಾನುವಾರ ದಂದು ನಡೆದ ಶ್ರೀಹರಿ ಭಜನೆ ಕಾರ್ಯಕ್ರಮದಲ್ಲಿ ಚಿಕ್ಕ ಮಕ್ಕಳಾದ ಕುಮಾರಿ- ಧೃತಿ ಆತ್ರೇಯಸ್, ಕುಮಾರಿ- ಧನ್ವಿ ಆತ್ರೇಯಸ್ ಎಂಬ ಮಕ್ಕಳು ವಿಶೇಷವಾಗಿ ಶ್ರೀ ಗುರು ರಾಯರ ಸನ್ನಿಧಿಯಲ್ಲಿ “ನರ್ತನ ಸೇವೆ”ಯನ್ನು ಸಲ್ಲಿಸಿ ಶ್ರೀ ಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು, ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದರು, ಇದೇ ಸಂದರ್ಭದಲ್ಲಿ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್,  ಕೆ ವಾದಿಂದ್ರಾಚಾರ್ಯರು ಮಾತನಾಡುತ್ತಾ ಇಂದಿನ ಮಕ್ಕಳಿಗೆ ಸಂಸ್ಕಾರವೇ ಮುಖ್ಯ ಆ ಸಂಸ್ಕಾರ ದಿಂದಲೇ ಮಕ್ಕಳಿಗೆ ಶ್ರೇಯೋಭಿ ವೃದ್ಧಿ  ಆಗಲಿದೇ ಎಂದು ತಿಳಿಸಿ ಆಶೀರ್ವದಿಸುತ್ತ ಫಲ ಮಂತ್ರಾಕ್ಷತೆ ಕೊಟ್ಟು ಅನುಗ್ರಹಿಸಿದರು ಹಾಗೂ ಭಕ್ತರು ಸಹ ಮಕ್ಕಳ ನರ್ತನ ಸೇವೆಯನ್ನು ವೀಕ್ಷಿಸಿ ಸಂತೋಷವನ್ನು ವ್ಯಕ್ತ ಪಡಿಸುತ್ತಾ ಮಕ್ಕಳನ್ನು ಪ್ರೋತ್ಸಾಹಿಸಿ ಹಾರೈಸಿದರು,

City Today News 9341997936

Easter Greetings from Gs. Gopal Raaj, Editor, City Today News

Bengaluru, April 20, 2025:
On the joyous occasion of Easter, Gs. Gopal Raaj, the Editor of City Today News, extended his warm wishes to all readers, well-wishers, and citizens across the city.

In his Easter message, he said:
“Easter is a celebration of hope, renewal, and faith. It reminds us that light always triumphs over darkness. May this Easter bring joy, peace, and new beginnings to all. Let us embrace the spirit of compassion, unity, and service in our communities.”

He further added that City Today News remains dedicated to bringing truthful, impactful, and people-centered journalism that uplifts society and encourages positive change.

City Today News 9341997936

Karnataka Students Shine in JEE Mains 2025: Aakashians Gururaj S. Sajjan Secures AIR 92, Aakash Deep Bags AIR 125

Bengaluru, April 19, 2025 — Students from Aakash Educational Services Limited (AESL), a leading national institution in test preparatory services, have achieved remarkable success in the Joint Entrance Examination (JEE) Mains 2025 (Session 2), with two students from Karnataka securing top All India Ranks.

Gururaj S. Sajjan from Gulbarga secured an impressive All India Rank (AIR) of 92, while Aakash Deep from Bengaluru achieved AIR 125. In addition, three other students from AESL’s Bengaluru branch—Aneesh Shastri (AIR 563), Aniket Jain (AIR 1165), Keerthi Vasan (AIR 1573), and Aryaman Mishra (AIR 1913)—also featured among the top scorers in the country.

The results, announced today by the National Testing Agency (NTA), mark the conclusion of the second and final session of the JEE Mains 2025. These achievements underscore the academic dedication of the students and the effectiveness of Aakash’s structured coaching programs.

Most of the successful students were enrolled in Aakash’s classroom program, which is specifically designed to prepare aspirants for engineering entrance examinations, including the prestigious IIT JEE.

Congratulating the achievers, Mr. Dheeraj Kumar Misra, Chief Academic and Business Head, AESL, said:
“We are extremely proud of our students’ exceptional performance in JEE Main 2025. Their success is the result of consistent hard work, determination, and the quality coaching they received at Aakash. We remain committed to providing the best academic environment to help our students reach their highest potential. Congratulations to all our achievers, and we wish them continued success in the next phase of their academic journey.”

JEE Mains is conducted in two sessions annually, offering students multiple chances to improve their scores. While JEE Advanced is the qualifying exam for admission into the Indian Institutes of Technology (IITs), JEE Mains is the gateway to National Institutes of Technology (NITs) and other centrally-funded technical institutions. Qualifying JEE Mains is a prerequisite to appear for JEE Advanced.

AESL continues to be a frontrunner in delivering high-quality coaching for competitive exams such as NEET, JEE, NTSE, and Olympiads. The institute’s commitment to academic excellence and student success remains unwavering.

City Today News 9341997936