“ಭಾರತ ಹುಣ್ಣಿಮೆ-ವ್ಯಾಸ ಪೌರ್ಣಮಿ” ರಾಯರ ಸನ್ನಿಧಿಯಲ್ಲಿ ವಿಶೇಷ ಶ್ರೀ ಸತ್ಯನಾರಾಯಣ ವ್ರತ ಪೂಜೆ

ಬೆಂಗಳೂರಿನ ಜಯನಗರ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿಗಳವರ ಮಠದಲ್ಲಿ ಪರಮಪೂಜ್ಯ  ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ  ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್‌. ಕೆ. ವಾದೀಂದ್ರಾಚಾರ್ಯರ ನೇತೃತ್ವದಲ್ಲಿ “ಭಾರತ ಹುಣ್ಣಿಮೆ-ವ್ಯಾಸ ಪೌರ್ಣಮಿ” ಪ್ರಯುಕ್ತ ಸಾಮೂಹಿಕ ಶ್ರೀ ಸತ್ಯನಾರಾಯಣ ವ್ರತ ಪೂಜೆಯನ್ನು ಪುರೋಹಿತರಾದ ಶ್ರೀ ನಂದಕಿಶೋರಾಚಾರ್ಯರು ಮತ್ತು ರಾಘವೇಂದ್ರ ಕಟ್ಟಿ ಆಚಾರ್ಯರು ನೆರವೇರಿಸಿದರು. ಈ ಸಂದರ್ಭದಲ್ಲಿ ನೂರಾರು ಭಕ್ತರು ಮತ್ತು ಸೇವಾ ಕರ್ತೃಗಳು ಶ್ರೀ ಸತ್ಯನಾರಾಯಣ ವ್ರತ ಪೂಜೆಯಲ್ಲಿ ಪಾಲ್ಗೊಂಡು ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದು ತೀರ್ಥ ಪ್ರಸಾದವನ್ನು ಸ್ವೀಕರಿಸಿ ಶ್ರೀ ಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು.

City Today News 9341997936

“ಬೆಂಗಳೂರಿನಲ್ಲಿ ಅಖಿಲ ಭಾರತ ಸಿಂಡಿಕೇಟ್ ಬ್ಯಾಂಕ್ ನಿವೃತ್ತರ ಒಕ್ಕೂಟದ 22ನೇ ರಾಷ್ಟ್ರೀಯ ಸಮ್ಮೇಳನ “

ಬೆಂಗಳೂರು, ಫೆಬ್ರವರಿ 12: ಅಖಿಲ ಭಾರತ ಸಿಂಡಿಕೇಟ್ ಬ್ಯಾಂಕ್ ನಿವೃತ್ತರ ಒಕ್ಕೂಟದ 22ನೇ ರಾಷ್ಟ್ರೀಯ ಸಮ್ಮೇಳನವು ದಿನಾಂಕ 19-02-2025, ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ, ಬೆಂಗಳೂರಿನ ಆನಂದ ರಾವ್ ವೃತ್ತದ ಹತ್ತಿರ ಇರುವ ಕೆ.ಇ.ಬಿ. ನೌಕರರ ಸಮುದಾಯ ಭವನದಲ್ಲಿ ನಡೆಯಲಿದೆ.

ಈ ಮಹತ್ವದ ಸಮ್ಮೇಳನವು ಒಕ್ಕೂಟದ ಅಧ್ಯಕ್ಷ ಕಾಂ. ಕೆ. ಉಮೇಶ್ ನಾಯಕ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ನಿವೃತ್ತ ಬ್ಯಾಂಕ್ ಸಿಬ್ಬಂದಿಗಳಿಗೆ ಸಂಬಂಧಿಸಿದ ವಿವಿಧ ಪ್ರಮುಖ ವಿಚಾರಗಳು ಚರ್ಚೆಗೆ ಬರಲಿವೆ. ಕರ್ನಾಟಕದ ಎಲ್ಲಾ ನಿವೃತ್ತ ಸದಸ್ಯರು ಮತ್ತು ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಸಂಘಟಕರು ಮನವಿ ಮಾಡಿದ್ದಾರೆ.

ವ್ಯವಸ್ಥಾ ವಿವರ:

ದಿನಾಂಕ 18-02-2025 ರಂದು ಪ್ರತಿನಿಧಿಗಳಿಗೆ ಹೋಟೆಲ್ ಮೋತಿಮಹಲ್ ಅಥವಾ ಸಂಘಟನೆಯು ನಿಗದಿಪಡಿಸಿದ ಹೋಟೆಲ್‌ನಲ್ಲಿ ವಾಸ್ತವ್ಯ ವ್ಯವಸ್ಥೆ ಇರಲಿದೆ.

ಸಮ್ಮೇಳನದ ದಿನ (19-02-2025) ಉಪಹಾರ, ಮಧ್ಯಾಹ್ನ ಭೋಜನ, ಲಘು ಉಪಹಾರ, ಕಾಫಿ, ಟೀ ಮುಂತಾದ ವ್ಯವಸ್ಥೆಗಳಿರುತ್ತವೆ.

ಪ್ರಯಾಣ ವೆಚ್ಚ ಯಾವುದೇ ರೀತಿಯೂ ನೀಡಲಾಗುವುದಿಲ್ಲ; ಪ್ರತಿನಿಧಿಗಳು ಸ್ವಂತ ಖರ್ಚಿನಲ್ಲಿ ಆಗಮಿಸಬೇಕು.

ಸಮ್ಮೇಳನದಲ್ಲಿ ಭಾಗವಹಿಸುವ ಪ್ರತಿನಿಧಿಗಳು ದಿನಾಂಕ 10-02-2025ರ ಒಳಗಾಗಿ ಹಿಗ್ಗೆ ಸೂಚಿಸಲಾದ ಮೊಬೈಲ್ ಸಂಖ್ಯೆಗೆ ಫೋನ್ ಮಾಡಿ ಭಾಗವಹಿಸುವುದಾಗಿ ತಿಳಿಸಬೇಕು.


ಸಂಪರ್ಕಕ್ಕಾಗಿ:

ಕಾಂ. ಜಿ. ಅಜಯ್ ಕುಮಾರ್ – 9886731532

ಕಾಂ. ಕೆ. ಶ್ರೀನಿವಾಸ್ – 9620197026

ಕಾಂ. ಮಣಿ – 9742178107

ಕಾಂ. ಸಿ.ಎಸ್.ಎಸ್. ಮೂರ್ತಿ – 9980555533


ಈ ಕುರಿತು ಪ್ರಚಾರ ಸಮಿತಿಯ ಅಧ್ಯಕ್ಷ ಜಿ. ರಂಗಸ್ವಾಮಿ ಪತ್ರಿಕಾ ಪ್ರಕಟಣೆಯ ಮೂಲಕ ಮಾಹಿತಿ ನೀಡಿದ್ದಾರೆ.

City Today News 9341997936

ಎಚ್.ಡಿ.ಎಫ್.ಸಿ. ಬ್ಯಾಂಕ್ ಮತ್ತು ಸೆರ್ಸೈನಿಂದ ಸೆಂಟ್ರಲ್ ಕೆ.ವೈ.ಸಿ. ರೆಕಾರ್ಡ್ ರಿಜಿಸ್ಟ್ರಿ ಅರಿವಿನ ಕಾರ್ಯಕ್ರಮ ಆಯೋಜನೆ

• ಖಾಸಗಿ, ಸಾರ್ವಜನಿಕ ಮತ್ತು ಸಹಕಾರ ಬ್ಯಾಂಕ್ ಗಳು ಮತ್ತು ಭಾರತದಾದ್ಯಂತ ಎನ್.ಬಿ.ಎಫ್.ಸಿ.ಗಳ 100ಕ್ಕೂ ಹೆಚ್ಚು ಹಿರಿಯ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮೊಹಾಲಿ, ಫೆಬ್ರವರಿ ೦೩, ೨೦೨೫: ಭಾರತದ ಮುಂಚೂಣಿಯ ಖಾಸಗಿ ವಲಯದ ಬ್ಯಾಂಕ್ ಎಚ್.ಡಿ.ಎಫ್.ಸಿ. ಬ್ಯಾಂಕ್ ಹಾಗೂ ಭಾರತ ಸರ್ಕಾರದ ಸೆಂಟ್ರಲ್ ರಿಜಿಸ್ಟ್ರಿ ಆಫ್ ಸೆಕ್ಯುರಿಟೈಸೇಷನ್ ಅಸೆಟ್ ರೀಕನ್ಸ್ಟ್ರಕ್ಷನ್ ಅಂಡ್ ಸೆಕ್ಯುರಿಟಿ ಇಂಟ್ರೆಸ್ಟ್ (CERSAI) ಒಂದು ದಿನದ ಸೆಂಟ್ರಲ್ ಕೆ.ವೈ.ಸಿ. ರೆಕಾರ್ಡ್ ರಿಜಿಸ್ಟ್ರಿ (CKYCRR) ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಿದ್ದವು.

ಈ ಕಾರ್ಯಕ್ರಮದ ಉದ್ದೇಶವು ನೋ ಯುವರ್ ಕ್ಲೈಂಟ್ (ಕೆ.ವೈ.ಸಿ.), ಆಂಟಿ ಮನಿ ಲಾಂಡರಿಂಗ್(ಎ.ಎಂ.ಎಲ್) ಮತ್ತು ಸಿ.ಕೆ.ವೈ.ಸಿ.ಆರ್.ಆರ್.ನಲ್ಲಿ ಲಭ್ಯವಿರುವ ಕೆ.ವೈ.ಸಿ. ಡೇಟಾದ ಬಳಕೆ ಕುರಿತಾದ ಸಮಗ್ರ ಒಳನೋಟಗಳನ್ನು ನೀಡುವುದು ಮತ್ತು ಸಿ.ಕೆ.ವೈ.ಸಿ.ಆರ್. ದತ್ತಾಂಶ ಬಳಸುವಲ್ಲಿ ಅನುಸರಿಸಬೇಕಾದ ಪ್ರಕ್ರಿಯೆಯ ಮೂಲಕ ಸುರಕ್ಷಿತ ಮತ್ತು ಪಾರದರ್ಶಕ ಹಣಕಾಸು ವ್ಯವಸ್ಥೆ ಸೃಷ್ಟಿಸುವುದು ಮತ್ತು ವಂಚನೆ ಮತ್ತು ಸಂಪತ್ತಿನ ನಕಲೀಕರಣದ ತೊಂದರೆಗಳಿಂದ ಹಣಕಾಸು ಸಂಸ್ಥೆಗಳನ್ನು ರಕ್ಷಿಸುವ ಕುರಿತಾಗಿತ್ತು.

ಈ ಕಾರ್ಯಕ್ರಮದಲ್ಲಿ ಖಾಸಗಿ, ಸಾರ್ವಜನಿಕ ಮತ್ತು ಸಹಕಾರ ಬ್ಯಾಂಕ್ ಗಳು ಮತ್ತು ಅಖಿಲ ಭಾರತದ ಎನ್.ಬಿ.ಎಫ್.ಸಿ.ಗಳು ಒಳಗೊಂಡು ಭಾರತ ಸರ್ಕಾರ, ಹಣಕಾಸು ಸಚಿವಾಲಯ, ಭಾರತೀಯ ರಿಜರ್ವ್ ಬ್ಯಾಂಕ್ (ಆರ್.ಬಿ.ಐ.), ಫೈನಾನ್ಷಿಯಲ್ ಇಂಟೆಲಿಜೆನ್ಸ್ ಯೂನಿಟ್, ಸೆರ್ಸೈ(CERSAI) ಮತ್ತು ಎಚ್.ಡಿ.ಎಫ್.ಸಿ. ಬ್ಯಾಂಕ್ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಎಚ್.ಡಿ.ಎಫ್.ಸಿ. ಬ್ಯಾಂಕ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶ್ರೀ ಭವೇಶ್ ಝವೇರಿ ಹಲವು ವರ್ಷಗಳಿಂದ ಸೆರ್ಸೈ ಡೇಟಾ ಮತ್ತು ಗ್ರಾಹಕರ ಕೆ.ವೈ.ಸಿ. ದಾಖಲೆಗಳ ಸಂಗ್ರಹಾಲಯವಾಗಿದೆ. ಈ ಸಂಸ್ಥೆಯು ಪ್ರಸ್ತುತ 7,000 ವರದಿ ಮಾಡುವ ಸಂಸ್ಥೆಗಳನ್ನು ಹೊಂದಿದ್ದು ಅವರೊಂದಿಗೆ ನೋಂದಣಿಯಾಗಿದ್ದು ಬಹುತೇಕ 100 ಕೋಟಿ ಗ್ರಾಹಕರನ್ನು ಹೊಂದಿದ್ದು ಅವುಗಳನ್ನು ಎಲ್ಲ ವರದಿ ಮಾಡುವ ಸಂಸ್ಥೆಗಳು ಅಳವಡಿಸಿಕೊಳ್ಳಬಹುದಾಗಿದೆ ಎಂದರು. ಅವರು ಸೆಂಟ್ರಲ್ ನೋ ಯುವರ್ ಕಸ್ಟಮರ್ (ಸಿ.ಕೆ.ವೈ.ಸಿ.) ಬಳಕೆಯಲ್ಲಿ ಬೆಂಬಲ ವಿಸ್ತರಿಸಿರುವುದಕ್ಕೆ ಆರ್.ಬಿ.ಐ.ಗೆ ಕೃತಜ್ಞತೆ ಸಲ್ಲಿಸಿದರು.

ಸೆರ್ಸೈ(CERSAI) ಎಂ.ಡಿ. ಮತ್ತು ಸಿಇಒ ಶ್ರೀ ಉಮೇಶ್ ಕುಮಾರ್ ಸಿಂಗ್ ಈ ಸಂದರ್ಭದಲ್ಲಿ ಮಾತನಾಡಿದರು ಮತ್ತು ಸಿ.ಕೆ.ವೈ.ಸಿ. ಅಡಿಯಲ್ಲಿ ಸೆರ್ಸೈಗೆ ದಾಖಲೆಗಳನ್ನು ಸಲ್ಲಿಸುವ ಪ್ರಕ್ರಿಯೆಯನ್ನು ಮತ್ತು ಗ್ರಾಹಕರ ಗುರುತಿಸುವಿಕೆಗೆ ಅದರ ಬಳಕೆಯನ್ನು ವಿವರಿಸಿದರು. ಅವರು ಗ್ರಾಹಕರು ಸ್ವತಃ ಅವರ ಮಿಸ್ಡ್ ಕಾಲ್ ಅಥವಾ ಕ್ರೆಸೈ ವೆಬ್ಸೈಟ್ ಮೂಲಕ ನಮೂದಿಸಲಾದ ಹಂತಗಳ ಮೂಲಕ ಸಿ.ಕೆ.ವೈ.ಸಿ. ಸಂಖ್ಯೆಯನ್ನು ಪಡೆಯುವ ವಿಧಾನವನ್ನು ಹಂಚಿಕೊಂಡರು. ಶ್ರೀ ಸಿಂಗ್ ಅವರು ಮೊಹಾಲಿಯ ಬ್ಯಾಂಕ್ ಹೌಸ್ ನಲ್ಲಿ ಈ ಕಾರ್ಯಕ್ರಮ ಆಯೋಜಿಸಿದ್ದಕ್ಕೆ ಎಚ್.ಡಿ.ಎಫ್.ಸಿ. ಬ್ಯಾಂಕ್ ಕೃತಜ್ಞತೆ ಸಲ್ಲಿಸಿದರು.

ಸೆರ್ಸೈಗೆ ದಾಖಲೆಗಳನ್ನು ಸಲ್ಲಿಸುವುದು ಒಳಗೊಂಡು ಇತರೆ ಕಾರ್ಯಾಚರಣೆಯ ಸಮಸ್ಯೆಗಳು ಕೆ.ವೈ.ಸಿ. ಎ.ಎಂ.ಎಲ್. ಕುರಿತು ಆರ್.ಬಿ.ಐ.ನಿಂದ ಹೊಚ್ಚಹೊಸ ಮಾಸ್ಟರ್ ಡೈರೆಕ್ಷನ್ ಕುರಿತಂತೆಯೂ ಚರ್ಚೆ ನಡೆಸಲಾಯಿತು ಮತ್ತು ಸ್ಪಷ್ಟೀಕರಣ ನೀಡಲಾಯಿತು.

City Today News 9341997936

School Infrastructure Crucial for Holistic Learning, Experts Say

Bengaluru: Experts in the education sector emphasize that school amenities and infrastructure play a vital role in shaping students’ holistic learning experience. While curriculum and teaching methods remain focal points, the physical environment of schools significantly impacts student engagement, academic performance, and overall well-being.

According to Steve Hardgrave, CEO & Co-Founder of Varthana, well-equipped classrooms, sports facilities, inclusive infrastructure for specially-abled students, proper sanitation, and technology integration are essential for fostering a conducive learning atmosphere.

Key Areas of Concern

1. Classroom Infrastructure & Learning Outcomes
Studies indicate that well-lit classrooms with proper seating and modern teaching aids improve student focus and behavior, directly influencing academic performance.


2. Sports & Recreation for Mental and Physical Well-being
Beyond academics, participation in sports helps develop teamwork, leadership, and resilience, while recreational spaces contribute to students’ mental health by reducing stress.


3. Lack of Facilities for Specially-Abled Students
The UNESCO State Education Report 2019 revealed that 27% of disabled children in India lack access to education due to inadequate infrastructure. Many schools still lack ramps, handrails, and adapted toilets, making education inaccessible to students with disabilities.


4. Sanitation & Hygiene: A Basic Right
Clean drinking water, hygienic toilets, and proper handwashing facilities are fundamental for students’ health and concentration. Poor sanitation in schools leads to health hazards, impacting attendance and learning outcomes.


5. Empowering Teachers for Effective Learning
Infrastructure alone is not enough—investing in teacher training is crucial to ensure effective pedagogy. Regular professional development enables teachers to adopt new teaching methodologies and better cater to students’ needs.


6. Technology as a Game-Changer
With the rise of digital learning, access to technology such as smart classrooms and e-learning platforms is now essential for modern education. Digital tools enhance learning experiences and bridge gaps in accessibility.



Need for Immediate Action

Education experts stress the urgent need for government bodies, school management, and policymakers to prioritize investment in infrastructure. “Holistic learning is not just about what happens inside classrooms—it’s about creating an enabling environment that supports every aspect of a child’s development,” Hardgrave said.

With increasing concerns over school safety and regulatory lapses in Karnataka, stakeholders urge authorities to enforce stringent measures to ensure schools meet basic infrastructure requirements. Parents, educators, and policymakers must collaborate to create an enriching and inclusive learning space for all children.

City Today News 9341997936

ಪ್ರೊ. ಎಲ್.ಎಸ್. ಶೇಷಗಿರಿರಾವ್ ಜನ್ಮ ಶತಮಾನೋತ್ಸವ ಸಮಾರೋಪ – ಫೆಬ್ರವರಿ 17ರಂದು ಸಮಾರಂಭ

ಬೆಂಗಳೂರು: ಕನ್ನಡ ಸಾಹಿತ್ಯ ಲೋಕದ ಪ್ರಮುಖ ಚೇತನ, ಪ್ರಸಿದ್ಧ ವಿಮರ್ಶಕ, ಅನುವಾದಕ ಮತ್ತು ಬಹುಮುಖ ಪ್ರತಿಭೆ ಪ್ರೊ. ಎಲ್.ಎಸ್. ಶೇಷಗಿರಿರಾವ್ ಅವರ ಜನ್ಮ ಶತಮಾನೋತ್ಸವ ಸಮಾರೋಪ ಸಮಾರಂಭವು ಫೆಬ್ರವರಿ 17, 2025ರಂದು ಬೆಂಗಳೂರಿನ ಕನ್ನಡ ಭವನದ ನಯನ ಸಭಾಂಗಣದಲ್ಲಿ ನಡೆಯಲಿದೆ.

ಈ ಅದ್ದೂರಿ ಸಮಾರಂಭದಲ್ಲಿ ‘ಎಲ್.ಎಸ್.ಎಸ್. ಜಾಲತಾಣ’ ಮತ್ತು ಶತಮಾನೋತ್ಸವ ‘ನೆನಪಿನ ಸಂಪುಟ’ ಲೋಕಾರ್ಪಣೆಗೊಳ್ಳಲಿವೆ. ಕನ್ನಡ ಸಾಹಿತ್ಯದ ವಿಶಿಷ್ಟ ವೈಶಿಷ್ಟ್ಯಗಳನ್ನು ಪರಿಚಯಿಸುವ ‘ಕನ್ನಡ ವಿಶೇಷ ಸಾಹಿತ್ಯ ಗಿರಿ’ ಸಂಪುಟವನ್ನು ಹಿರಿಯ ವಿಮರ್ಶಕ ಡಾ. ಸಿ.ಎನ್. ರಾಮಚಂದ್ರನ್ ಬಿಡುಗಡೆ ಮಾಡಲಿದ್ದಾರೆ.

ಪ್ರಮುಖ ಅತಿಥಿಗಳು:
ಈ ಸಮಾರಂಭವನ್ನು ಮಾಜಿ ಮುಖ್ಯಮಂತ್ರಿ ಹಾಗೂ ‘ಸರಸ್ವತಿ ಸಮ್ಮಾನ್’ ಪುರಸ್ಕೃತ ಸಾಹಿತಿ ಡಾ. ವೀರಪ್ಪ ಮೊಯ್ಲಿ ಉದ್ಘಾಟಿಸಲಿದ್ದು, ಹಿರಿಯ ಸಾಹಿತಿ ನಾಡೋಜ ಡಾ. ಗೊ.ರು. ಚನ್ನಬಸಪಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ವೆಂಕಟೇಶ ಸಮಾರೋಪ ಭಾಷಣ ನೀಡಲಿದ್ದಾರೆ.

ಗೌರವ ಸನ್ಮಾನ:
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ, ಪತ್ರಿಕೋದ್ಯಮ, ಶಿಕ್ಷಣ, ಪ್ರಕಾಶನ ಮತ್ತು ಕನ್ನಡ ಹೋರಾಟಕ್ಕೆ ಅಮೂಲ್ಯ ಸೇವೆ ಸಲ್ಲಿಸಿದ ಹತ್ತು ಮಂದಿ ಗಣ್ಯರಿಗೆ ‘ಜನ್ಮ ಶತಮಾನೋತ್ಸವ ಗೌರವ’ ನೀಡಿ ಸನ್ಮಾನಿಸಲಾಗುವುದು. ಪ್ರಶಸ್ತಿ ಸ್ವೀಕರಿಸುವವರು:

ಡಾ. ವೀರಪ್ಪ ಮೊಯ್ಲಿ – ಹಿರಿಯ ಸಾಹಿತಿ

ಡಾ. ಸಿ.ಎನ್. ರಾಮಚಂದ್ರನ್ – ಹಿರಿಯ ವಿಮರ್ಶಕ

ಡಾ. ದೊಡ್ಡರಂಗೇಗೌಡ – ಹಿರಿಯ ಕವಿ

ನಾಗಮಣಿ ಎಸ್. ರಾವ್ – ಹಿರಿಯ ಲೇಖಕಿ, ಪತ್ರಕರ್ತೆ

ಡಾ. ಬಾಬು ಕೃಷ್ಣಮೂರ್ತಿ – ಹಿರಿಯ ಪತ್ರಕರ್ತ

ಡಾ. ಪ್ರಧಾನ ಗುರುದತ್ – ವಿದ್ವಾಂಸ, ಅನುವಾದಕ

ಡಾ. ವೂಡೇ ಪಿ. ಕೃಷ್ಣ – ಶಿಕ್ಷಣ ತಜ್ಞ, ಗಾಂಧಿವಾದಿ

ನಿತಿನ್ ಷಾ – ಸಪ್ನ ಬುಕ್ ಹೌಸ್ ಸಂಸ್ಥಾಪಕರು

ವ.ಚ. ಚನ್ನೇಗೌಡ – ಕನ್ನಡ ಹೋರಾಟಗಾರ

ಆರ್. ರಾಮಕೃಷ್ಣ – ಪಾಠ್ಯಪುಸ್ತಕ ವಿನ್ಯಾಸಕಾರ


ಎಲ್.ಎಸ್. ಶೇಷಗಿರಿರಾವ್ ಅವರ ದೀರ್ಘಸೇವೆ:
ಎಲ್.ಎಸ್. ಶೇಷಗಿರಿರಾವ್ (1925–2019) ಅವರು ಕನ್ನಡ ಸಾಹಿತ್ಯ ವಿಮರ್ಶೆಗೆ ಭದ್ರ ಬುನಾದಿ ಹಾಕಿದವರು. ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದರೂ, ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಸೇವೆ ಸಲ್ಲಿಸಿದರು. ‘ಇಂಗ್ಲಿಷ್ ಸಾಹಿತ್ಯ ಚರಿತ್ರೆ’, ‘ಹೊಸಗನ್ನಡ ಸಾಹಿತ್ಯ ಚರಿತ್ರೆ’, ‘ಗ್ರೀಕ್ ರಂಗಭೂಮಿ ಮತ್ತು ನಾಟಕ’, ‘ಮಹಾಕಾವ್ಯ ಪ್ರವೇಶ’ ಸೇರಿದಂತೆ ಹಲವಾರು ವಿಶಿಷ್ಟ ಕೃತಿಗಳನ್ನು ರಚಿಸಿದರು. ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಭಾಗವಹಿಸಿದ್ದ ಅವರು, ಕನ್ನಡ ಹೋರಾಟ, ಸಾಹಿತ್ಯ ಸಂಪಾದನೆ, ಅನುವಾದ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದರು.

ಸಂಯೋಜನೆ:
ಈ ಮಹತ್ವದ ಸಮಾರಂಭವನ್ನು ಕನ್ನಡ ಗೆಳೆಯರ ಬಳಗ ಮತ್ತು ಶತಮಾನೋತ್ಸವ ಸಮಿತಿಯ ಸಂಚಾಲಕ ರಾ.ನಂ. ಚಂದ್ರಶೇಖರ ನೇತೃತ್ವದಲ್ಲಿ ಆಯೋಜಿಸಲಾಗಿದೆ. ಸಮಾರಂಭಕ್ಕೆ ಪ್ರೊ. ಎಲ್.ಎಸ್.ಎಸ್. ಅವರ ಪತ್ನಿ ಭಾರತಿ ಶೇಷಗಿರಿರಾವ್, ‘ಕನ್ನಡ ವಿಶೇಷ ಸಾಹಿತ್ಯ ಗಿರಿ’ ಸಂಪಾದಕ ಡಾ. ಟಿ.ಎನ್. ವಾಸುದೇವಮೂರ್ತಿ, ಹಿರಿಯ ವಿದ್ವಾಂಸ ಡಾ. ಆರ್. ಶೇಷಶಾಸ್ತ್ರಿ ಸೇರಿದಂತೆ ಅನೇಕ ಗಣ್ಯರು ಹಾಜರಾಗಲಿದ್ದಾರೆ.

ಸ್ಥಳ ಮತ್ತು ದಿನಾಂಕ:
📍 ನಯನ ಸಭಾಂಗಣ, ಕನ್ನಡ ಭವನ, ಬೆಂಗಳೂರು
📅 ಫೆಬ್ರವರಿ 17, 2025

ಕನ್ನಡ ಪ್ರೇಮಿಗಳೆ, ಈ ಸ್ಮರಣೀಯ ಕಾರ್ಯಕ್ರಮದಲ್ಲಿ ಭಾಗವಹಿಸಿ!

City Today News 9341997936