ಸ್ಪ್ಯಾಮ್ ವರದಿ ಬಿಡುಗಡೆಗೊಳಿಸಿದ ಏರ್‌ಟೆಲ್ – ಸ್ಪ್ಯಾಮ್ ಪರಿಹಾರವಾಗಿ ಆರಂಭಿಸಿದ ತನ್ನ ನೆಟ್ವರ್ಕ್ ನಲ್ಲಿನ ಪ್ರವೃತ್ತಿಗಳ ವಿಶ್ಲೇಷಣೆ

ಕರ್ನಾಟಕ , ಡಿಸೆಂಬರ್ 09, 2024:  ಭಾರತಿ ಏರ್‌ಟೆಲ್, ಭಾರತದ ಮೊದಲ ಸ್ಪ್ಯಾಮ್ ವಿರೋಧಿ ನೆಟ್ವರ್ಕ್, ತನ್ನ ಎಐ-ಚಾಲಿತ, ಸ್ಪ್ಯಾಮ್ ವಿರೋಧಿ ಪರಿಹಾರವನ್ನು ಪರಿಚಯಿಸಿದ ಎರಡೂವರೆ ತಿಂಗಳುಗಳಲ್ಲಿಯೇ 8 ಬಿಲಿಯನ್ ಸ್ಪ್ಯಾಮ್ ಕರೆಗಳು ಮತ್ತು 0.8 ಬಿಲಿಯನ್ ಸ್ಪ್ಯಾಮ್ smsಗಳನ್ನು ವರದಿ ಮಾಡಿದೆ. ಈ ಸುಧಾರಿತ ಅಲ್ಗಾರಿದಮ್ ಅನ್ನು ಬಳಸಿಕೊಂಡು ಎಐ-ಚಾಲಿತ ನೆಟ್ವರ್ಕ್ ಯಶಸ್ವಿಯಾಗಿ ಪ್ರತಿ ದಿನ ಅಂದಾಜು 1 ಮಿಲಿಯನ್ ಸ್ಪ್ಯಾಮರ್ ಗಳನ್ನು ಗುರುತಿಸಿದೆ.
ಸಂಸ್ಥೆಯು, ಕಳೆದ 2.5 ತಿಂಗಳುಗಳಲ್ಲಿ, ತನ್ನ 252 ಮಿಲಿಯನ್ ವಿಶಿಷ್ಟ ಗ್ರಾಹಕರಿಗೆ ಈ ಅನುಮಾನಾಸ್ಪದ ಕರೆಗಳ ಬಗ್ಗೆ ಎಚ್ಚರಿಕೆ ನೀಡಿದೆ, ಜೊತೆಗೆ ಇಂತಹ ಕರೆಗಳನ್ನು ಸ್ವೀಕರಿಸುವ ಗ್ರಾಹಕರ ಪ್ರಮಾಣದಲ್ಲಿ 12%ರಷ್ಟು ಕುಸಿತವನ್ನು ಸಹ ಗಮನಿಸಿದೆ. ಏರ್‌ಟೆಲ್ ನೆಟ್ವರ್ಕ್ ನ ಎಲ್ಲಾ ಕರೆಗಳಲ್ಲಿ ಶೇಖಡಾ 6% ಸ್ಪ್ಯಾಮ್ ಕರೆಗಳಾಗಿವೆ ಮತ್ತು ಎಲ್ಲಾ smsಗಳ ಶೇಖಡಾ 2% ರಷ್ಟು ಸಂದೇಶಗಳು ಸ್ಪ್ಯಾಮ್ ಸಂದೇಶಗಳು ಎಂದು ಗುರುತಿಸಲಾಗಿದೆ. ಆಸಕ್ತಿದಾಯಕವಾಗಿ, ಶೇಖಡಾ 35%ರಷ್ಟು ಸ್ಪ್ಯಾಮರ್ ಗಳು ಸ್ಥಿರ ದೂರವಾಣಿಗಳನ್ನು ಬಳಸುತ್ತಾರೆ.  
ಹೆಚ್ಚುವರಿಯಾಗಿ, ದೆಹಲಿಯಲ್ಲಿರುವ ಗ್ರಾಹಕರು ಅತ್ಯಧಿಕ ಸ್ಪ್ಯಾಮ್ ಕರೆಗಳನ್ನು ಸ್ವೀಕರಿಸಿದರೆ, ಆಂಧ್ರಪ್ರದೇಶ ಮತ್ತು ಪಶ್ಚಿಮ ಉತ್ತರ ಪ್ರದೇಶ ಸ್ಪ್ಯಾಮ್ ಕರೆಗಳನ್ನು ಸ್ವೀಕರಿಸುವ ನಂತರದ ರಾಜ್ಯಗಳಾಗಿವೆ. ಗರಿಷ್ಠ ಸ್ಪ್ಯಾಮ್ ಕರೆಗಳ ಮೂಲವು ಮೊದಲು ದೆಹಲಿ, ನಂತರ ಮುಂಬೈ ಮತ್ತು ಕರ್ನಾಟಕದ್ದಾಗಿದೆ ಎಂದೂ ಸಹ ಗಮನಿಸಲಾಗಿದೆ. SMSಗಳಿಗೆ ಸಂಬಂಧಿತ ವಿಷಯದಲ್ಲಿ, ಮೊದಲು ಗುಜರಾತ್, ನಂತರ ಕೊಲ್ಕತ್ತಾ ಮತ್ತು ಉತ್ತರ ಪ್ರದೇಶದಿಂದ ಹೆಚ್ಚಿನ ಸ್ಪ್ಯಾಮ್ ಸಂದೇಶಗಳನ್ನು ಕಳುಹಿಸಲಾಗಿದೆ ಮತ್ತು ಮುಂಬೈ, ಚೆನ್ನೈ ಹಾಗೂ ಗುಜರಾತ್ ನಗರಗಳಲ್ಲಿನ ಗ್ರಾಹಕರು ಸ್ಪ್ಯಾಮ್ ಕರೆಗಳಿಗೆ ಗುರಿಯಾಗಿದ್ದಾರೆ.
ಇತ್ತೀಚಿನ ಪ್ರವೃತ್ತಿಗಳ ಪ್ರಕಾರ, ಎಲ್ಲಾ ಸ್ಪ್ಯಾಮ್ ಕರೆಗಳ ಶೇಖಡಾ 76%ರಷ್ಟು ಸ್ಪ್ಯಾಮ್ ಕರೆಗಳು ಪುರುಷ ಗ್ರಾಹಕರನ್ನು ಗುರಿಪಡಿಸುತ್ತದೆ. ಜೊತೆಗೆ, ವಯಸ್ಸಿನ ಅಂಕಿಅಂಶಗಳಾದ್ಯಂತ ಸ್ಪ್ಯಾಮ್ ಕರೆಗಳ ಆವರ್ತನದಲ್ಲಿಯೂ ಸಹ ಗಮನಾರ್ಹ ವ್ಯತ್ಯಾಸಗಳನ್ನು ಕಾಣಬಹುದಾಗಿದೆ. 36-60 ವಯಸ್ಸಿನ ಗ್ರಾಹಕರು ಶೇಖಡಾ 48%ರಷ್ಟು ಸ್ಪ್ಯಾಮ್ ಕರೆಗಳನ್ನು ಸ್ವೀಕರಿಸುತ್ತಾರೆ, ಇನ್ನು 26-35 ವಯೋಮಿತಿಯವರು ಎಲ್ಲಾ ಕರೆಗಳ ಶೇಖಡಾ 26%ರಷ್ಟು ಸ್ಪ್ಯಾಮ್ ಕರೆಗಳನ್ನು ಸ್ವೀಕರಿಸುತ್ತಾರೆ, ಈ ವಯೋಮಿತಿಯವರು ಎರಡನೆಯ ಅತ್ಯಂತ ಹೆಚ್ಚಿನ ಸ್ಪ್ಯಾಮ್ ಕರೆಗಳನ್ನು ಸ್ವೀಕರಿಸುವವರಾಗಿದ್ದಾರೆ. ಇನ್ನು ಅಂದಾಜು, ಎಲ್ಲಾ ಸ್ಪ್ಯಾಮ್ ಕರೆಗಳ ಕೇವಲ 8%ರಷ್ಟು ಮಾತ್ರ ಹಿರಿಯ ನಾಗರಿಕರಿಗೆ ಮಾಡಲಾಗಿದೆ.   
ಸಂಸ್ಥೆಯ ತನಿಖೆಯು ಸ್ಪ್ಯಾಮ್ ಚಟುವಟಿಕೆಯ ಗಂಟೆಯ ವಿತರಣೆಯ ಮೇಲೆಯೂ ಸಹ ಬೆಳಕು ಚೆಲ್ಲುತ್ತದೆ. ಸ್ಪ್ಯಾಮ್ ಕರೆಗಳು ಬೆಳಗ್ಗೆ 9ರ ನಂತರ ಶುರುವಾಗುತ್ತಾ, ದಿನದ ಸಮಯ ಹೆಚ್ಚಾಗುತ್ತಿದ್ದಂತೆ ಸ್ಪ್ಯಾಮ್ ಕರೆಗಳ ಸಂಖ್ಯೆಯೂ ಸಹ ಹೆಚ್ಚುತ್ತದೆ. ಸ್ಪ್ಯಾಮ್ ಕರೆಗಳನ್ನು ಸಾಮಾನ್ಯವಾಗಿ ಮಧ್ಯಾಹ್ನ 12 ಗಂಟೆಯಿಂದ 3ರವರೆಗೆ ಬಹಳ ಹೆಚ್ಚಾಗಿ ಕಾಣಬಹುದು. ಇದಲ್ಲದೆ, ವಾರದ ದಿನಗಳು ಮತ್ತು ವಾರಾಂತ್ಯಗಳಲ್ಲಿನ ಕರೆಗಳಲ್ಲಿಯೂ ಸಹ ಸ್ಪ್ಯಾಮ್ ಕರೆಗಳ ಆವರ್ತನಗಳಲ್ಲಿ ಬಹಳ ವ್ಯತ್ಯಾಸವನ್ನು ಕಾಣಬಹುದು. ಭಾನುವಾರದ ದಿನದಂದು ಈ ಕರೆಗಳು ಶೇಖಡಾ 40%ರಷ್ಟು ಕಡಿಮೆಯಾಗುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ, ರೂ. 15,000 ದಿಂದ ರೂ.20,000ಗಳವರೆಗಿನ ಸಾಧನಗಳನ್ನು ಬಳಸುವವರು ಎಲ್ಲ ಸ್ಪ್ಯಾಮ್ ಕರೆಗಳ ಶೇಖಡಾ 22%ರಷ್ಟು ಕರೆಗಳನ್ನು ಸ್ವೀಕರಿಸುತ್ತಾರೆ.    
ಈ ಬಹು ಆಯಾಮವುಳ್ಳ ನಿಯತಾಂಕಗಳನ್ನು ಬಹಳ ಸೂಕ್ಷ್ಮವಾಗಿ ಗಮನಿಸುವ ಮೂಲಕ, ಎಐ-ಚಾಲಿತ ವ್ಯವಸ್ಥೆಯು ಗಮನಾರ್ಹ ನಿಖರತೆಯೊಂದಿಗೆ ನೈಜ-ಸಮಯದಲ್ಲಿ ಈ ಬೇಡದ ಒಳಬರುವ ಕರೆಗಳನ್ನು ಗುರುತಿಸಲು ಸಾಧ್ಯವಾಗುತ್ತದೆ. ಈ ಅದ್ಭುತ ಉಪಕ್ರಮವು ಸ್ಪ್ಯಾಮ್‌ನ ಬೆಳೆಯುತ್ತಿರುವ ಭಯಾನಕ ದೈತ್ಯಕ್ಕೆ ಸಮಗ್ರ ಪರಿಹಾರವನ್ನು ನೀಡುವ ಭಾರತದ ಮೊದಲ ಸೇವಾ ಪೂರೈಕೆದಾರರಾಗಿ ಏರ್‌ಟೆಲ್ ಅನ್ನು ದೃಢವಾಗಿ ಸ್ಥಾಪಿಸಿದೆ. ಜೊತೆಗೆ ಇದು ತನ್ನ ವಿಶಾಲವಾದ ಗ್ರಾಹಕರ ನೆಲೆಯ ಗೌಪ್ಯತೆ ಮತ್ತು ಅನುಕೂಲಕ್ಕಾಗಿ ಆದ್ಯತೆ ನೀಡುವ ಅಂತರ್ಗತ ಭದ್ರತಾ ಕ್ರಮಗಳಿಗಾಗಿ ಹೊಸ ಉದ್ಯಮ ಮಾನದಂಡಗಳನ್ನು ಸಹ ಹೊಂದಿಸುತ್ತದೆ.
ಸಂಪಾದಕರಿಗೆ ಟಿಪ್ಪಣಿ
ಭಾರತ ಸರ್ಕಾರವು(GoI) ಸೇವೆ ಮತ್ತು ವಹಿವಾಟು ಕರೆಗಳಿಗಾಗಿ 160 ಉಪಸರ್ಗದೊಂದಿಗೆ 10-ಅಂಕಿಯ ಸಂಖ್ಯೆಗಳನ್ನು ನಿಯೋಜಿಸಿದೆ. ಬ್ಯಾಂಕುಗಳು, ಮ್ಯೂಚುಯಲ್ ಫಂಡ್ಸ್, ವಿಮೆ ಸಂಸ್ಥೆಗಳು, ಸ್ಟಾಕ್ ಬ್ರೋಕರ್ ಗಳು, ಇತರ ಹಣಕಾಸು ಸಂಸ್ಥೆಗಳು, ಕಾರ್ಪೊರೇಟ್ ಗಳು, ಎಂಟರ್ಪ್ರೈಸಸ್ ಗಳು, SME ಗಳು, ದೊಡ್ಡ ಮತ್ತು ಸಣ್ಣ ಉದ್ಯಮಗಳು ತಮ್ಮ ಸೇವೆ ಹಾಗೂ ವಹಿವಾಟು ಕರೆಗಳನ್ನು ಮಾಡಲು ಈ 160-ಉಪಸರ್ಗ ಸರಣಿಯನ್ನು ಪಡೆದಿರುತ್ತದೆ, ಗ್ರಾಹಕರು ಇದನ್ನು ನೋಡಿ ತಮ್ಮ ಕರೆಗಳನ್ನು ನಿರೀಕ್ಷಿಸಬಹುದು.  
ಜೊತೆಗೆ, ಡು-ನಾಟ್-ಡಿಸ್ಟರ್ಬ್ (DND)ಗಾಗಿ ಆಯ್ಕೆ ಮಾಡದ ಗ್ರಾಹಕರು ಮತ್ತು ಪ್ರಚಾರ ಕರೆಗಳನ್ನು ಸ್ವೀಕರಿಸಲು ಬಯಸುವ ಗ್ರಾಹಕರು 140 ಉಪಸರ್ಗವಿರುವ 10-ಅಂಕಿಯ ಸಂಖ್ಯೆಯಿಂದ ಕರೆಯನ್ನು ಸ್ವೀಕರಿಸುತ್ತಾರೆ.

City Today News 9341997936

BINDZ Projects Rapid Growth, Showcases Unique Financial Consulting Model at Press Conference

Bengaluru, 6th December 2024: BINDZ, a new entrant disrupting financial consulting and offshoring, marked a significant milestone during its press conference on 5th December held at BINDZ Office in Bengaluru, where it discussed its journey, growth achievements, and plans for the future. BINDZ is a fully owned subsidiary of Staffing Accountants LLC, DBA – SAPRO, headquartered in New York, U.S. BINDZ is also forging alliances with Tier 1 institutes and universities to build a strong talent pipeline. This initiative supports the future of U.S. taxation, audits, risk advisory, valuation services, client accounting, managed services, and technology services, with the broader vision of positioning India as a global training hub for these essential domains.

The company’s Build-Operate-Transfer (BOT) model has introduced a fresh perspective to India’s Global Capability Centre (GCC) ecosystem, driving consistent growth and establishing a strong market presence. In just five months, BINDZ has grown its workforce to over 100 employees in India and a dedicated offshore business for its client CBIZ, Inc. with year-on-year projections of rapidly growing the talent pool at the offshore locations. CBIZ, Inc. (NYSE: CBZ) is a leading national professional services advisor in the U.S.

Mr. Greg Maslov, CEO of SAPRO, remarked, “The cultural heritage celebration reflected our values of unity and shared growth. Events like these reinforce the bonds within our team and highlight the rich diversity that fuels our success.”

“Collaboration with BINDZ is an important element of our broader global strategy to augment our recruiting efforts by establishing alternative talent pipelines,” said Arianna Ehmer, CBIZ Chief Operating Officer, Accounting & Tax. “Through our relationship with BINDZ, we will be able to further leverage our breadth of services and depth of expertise to offer our clients exceptional service, and our people will have the opportunity to learn from each other as we grow.”

“We are pleased to be celebrating our collaboration with BINDZ on the heels of CBIZ’s acquisition of Marcum, the largest such transaction in our company’s history,” said Ronald Storch, CBIZ Chief Business Officer. “BINDZ is an ideal partner for CBIZ as they share similar values around integrity and excellence in client service. We look forward to working even more with the seasoned management team at BINDZ and continue to be excited about our future together.”

“India’s unmatched talent and its growing stature as a financial services hub are integral to our success. With our Build-Operate-Transfer model, we are not just meeting the industry’s demands—we’re setting new benchmarks for scalability and sustainability.BINDZ’s association with CBIZ positions the company to expand its service offerings and create unique opportunities for our communities,” said Mr. Sirish Korada, Managing Director and CEO of BINDZ.

During the event, Mr. Ajay Patil, Head of Human Resources at BINDZ, highlighted the company’s people-centric approach. “At BINDZ, our people-first policies set us apart. From capped work hours during peak tax season to family insurance and transportation allowances, we are building an environment that ensures employee well-being, their growth and development and promotes retention. BINDZ’s investments in employee training, particularly in U.S. tax law and consulting practices, further solidify its commitment to addressing global talent shortages in the accounting sector.”

“ We are focused on delivering effective and sustainable solutions for our stakeholders and the wider industry-every step of the way as we journey into parts unknown-new beyond what has been possible before “, Said Maninder Singh Hira, Chief Corporate Officer at BINDZ
“At BINDZ, our focus on delivery and quality drives everything we do. By combining precision, innovation, and a commitment to excellence, we ensure that our solutions not only meet but exceed expectations, fostering trust and long-term partnerships with our clients and stakeholders.” Shared by Yogesh Pondicherry, Head of Delivery & Quality, BINDZ
On 4th December, BINDZ hosted a cultural heritage event at the Ritz Carlton, Bengaluru, bringing together employees, guests, and members of its U.S. team. The celebration underscored the company’s commitment to fostering a diverse and inclusive workplace.

Looking ahead, BINDZ plans to expand its service offerings and geographic reach. Following CBIZ’s recent acquisition of Marcum LLP, BINDZ anticipates increased demand for its services due to its access to diverse talent and its strong leadership, vision, technology and innovation.
BINDZ is redefining financial consulting and offshoring through its Build-Operate-Transfer (BOT) model, offering specialized solutions in accounting, tax, audit and advisory services. Leveraging India’s robust talent pool and corporate ecosystem, the company prioritizes quality-driven delivery and employee well-being, setting new benchmarks for success in the global financial consulting sector.

City Today News 9341997936

Entrepreneurial leaders from different parts of the country come together for building a road map for an “Everyone A Changemaker” Societal Framework

  • Magsaysay Awardee, Bezwada Wilson and Phanindra Sama, Founder Redbus amongst others

Bangalore, 7 Dec 2024: Ashoka Innovators for the Public, which supports the largest network of social entrepreneurs, has organised a 2 day convening to bring key senior leaders from different parts of the country. Ashoka is bringing some of the key leaders already part of its network along with few leaders beyond its current network on this week

Senior Leaders Building a Collective Road Map

Leaders at all levels are at the heart of building every societal framework. To answer that challenge, Ashoka brought some key senior leaders together. The event had a roundtable, a few small groups and peer to peer conversations.

Dr. Shruti Nair, Regional Leader, Ashoka Innovators for the Public, mentioned that “through this small group of entrepreneurs we are jointly imagining a Peer to Peer network for discussing how India can unleash the changemaker ability across society.”

The 2 day event brought together entrepreneurs from various organizations and experience for two-day meetings over the weekend to learn together, share challenges and discuss best practices.

The meetings focused on the key agenda of how can we all create systems for an “Everyone A Changemaker” society. It also helped participants share ideas, questions and perspectives in a setting with peers who understand the overall entrepreneurial journey. Members learnt to leverage their time, expertise and knowledge to a high degree of impact.

Speaking at the event Senior Ashoka Fellow and Magsaysay awardee, Bezwada Wilson shared how growing up he stood for an injustice he witnessed which started his changemaker journey at a very young age.

Phanindra Sama the founder of Redbus highlights the importance of starting at a very young age to develop the mindset and abilities of being a changemaker.

The outcome of the event is expected to start building a team of like-minded individuals who are committed to create a society where Everyone could be a changemaker.

Some of the Leaders who participated are:

Leaders who have entrepreneured to bring change:
Ashoka fellows – Senior Social Entrepreneurs such as Bezwada Wilson (Magsasay Awardee), Gopi Gopal Krishnan, President, World Health Partners
Prominent Business or Social Change Leaders such as Phanindra Sama, Founder Redbus, Smarinita Shetty, Founder, Indian Development Review
Ashoka Young Changemakers such as Garvita Gulhati (Water Girl of India) and Akarsh Shroff (Forbes Asia 30 U 30).
The event culminated with a framework for building a blueprint and mapping different partners for this new societal framework.

City Today News 9341997936

ಇಂದು ಕರ್ನಾಟಕ  ಸೌತ್ ಜೋನ್ ಯೋಗ ಅಸೋಸಿಯೇಷನ್ (ರಿ)  ರವರು  ”ರಾಷ್ಟ್ರಮಟ್ಟದ ಮುಕ್ತ ಯೋಗ ಚಾಂಪಿಯನ್ಶಿಪ್ ”

ಕರ್ನಾಟಕ  ಸೌತ್ ಜೋನ್ ಯೋಗ ಅಸೋಸಿಯೇಷನ್ (ರಿ)  ರವರು  ”ರಾಷ್ಟ್ರಮಟ್ಟದ ಮುಕ್ತ ಯೋಗ ಚಾಂಪಿಯನ್ಶಿಪ್ ” ಅನ್ನು ದಿನಾಂಕ 7.12.2024 ರಂದು  ಎಂ ಜಿ ಪಾರ್ಟಿ ಹಾಲ್ ಕಲ್ಯಾಣ್ ನಗರ ಬೆಂಗಳೂರಿನಲ್ಲಿ  ಯೋಗ ಆಚಾರ್ಯ ಕಲಂದರ್ ಭಾಷಾ ರವರು ಆಯೋಜಿಸಿದ್ದರು,  ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ   ಸೆಂಟ್ ಫಿಲೋಮಿನ ಸಂಸ್ಥೆಯ ಸಂಸ್ಥಾಪಕರಾದಂತಹ 
ಜಿ ಎನ್ ಸುರೇಶ್,  ನ್ಯಾಯವಾದಿ ಕಿರಣ್ ಕುಮಾರ್, ಲಾಸ್ಯ ಶ್ರೀನಾಥ್,
ACE ಫೌಂಡೇಶನ್ ಸಂಸ್ಥಾಪಕಿ ಡಾ|| ಅಂಬಿಕಾ ಸಿ,  ಯೋಗ ಶಿಕ್ಷಕ ವರ್ಧಮಾನ ಕಳಸೂರು ಮತ್ತು ಯೋಗ ಸಾಧಕ ಶಿಕ್ಷಕರುಗಳು  ಉಪಸ್ಥಿತರಿದ್ದು ಕಾರ್ಯಕ್ರಮದಲ್ಲಿ   ಅನೇಕ ಗಣ್ಯರಿಗೆ ಮತ್ತು ಯೋಗ ಕ್ಷೇತ್ರದಲ್ಲಿ  ಮಹತ್ವದ ಸಾಧನೆಗೈದ ವರೆಗೆ ಸನ್ಮಾನವನ್ನು ಮಾಡಲಾಗುತ್ತು, ಪೋಷಕರು, ಯೋಗ ಸಾಧಕರು ಮತ್ತು ಪಟುಗಳು  ಭಾಗವಹಿಸಿ ಮತ್ತು  ಪರಸ್ಪರ ಪ್ರೋತ್ಸಾಹಿಸಿ  ಕಾರ್ಯಕ್ರಮ ಯಶಸ್ವಿಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

City Today News 9341997936

ಸರ್ಕಾರವು ನಿಗಧಿಪಡಿಸಿರುವ ಕಾಲಾವಕಾಶದಂತೆ ಒಳಮೀಸಲಾತಿ ವರ್ಗೀಕರಣವನ್ನು ಜಾರಿಗೊಳಿಸದೆ ಇದ್ದರೆ ಜನವರಿ ತಿಂಗಳಲ್ಲಿ ರಾಜ್ಯಾದ್ಯಂತ ಜಾಗೃತಿ ಸಭೆಗಳನ್ನು ನಡೆಸಿ, ಜನಾಂದೋಲದ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ

ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಗಾಗಿ ದಲಿತ ಮತ್ತು ಮಾದಿಗ ಸಂಘಟನೆಗಳು ಕಳೆದ 30 ವರ್ಷಗಳಿಂದ ಬೀದಿಗಿಳಿದು ಹೋರಾಡಿದ ಪರಿಣಾಮದಿಂದಲೇ ಸಾಮಾಜಿಕ ನ್ಯಾಯವಾದ ಒಳ ಮೀಸಲಾತಿ ವರ್ಗೀಕರಣವು ದಿಲ್ಲಿಯಿಂದ ರಾಜ್ಯ ರಾಜ್ಯಧಾನಿಯವರೆಗೆ ಗೆಲುವು ಕಂಡಿದೆ. 2022ರ ಫ್ರೀಡಂ ಪಾರ್ಕ್ ಐತಿಹಾಸಿಕ ಹೋರಾಟದಿಂದ ಹಂತ ಹಂತವಾಗಿ ಒಳಮೀಸಲಾತಿ ಹೋರಾಟವು ಯಶಸ್ವಿಯಾಗಿ ಮುಂದೆ ಸಾಗಿದೆ.

ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗವು ಪರಿಶಿಷ್ಟ ಜಾತಿಗಳ ಸಂವಿಧಾನಿಕ ಸೌಲಭ್ಯಗಳ ಹಂಚಿಕೆಯಲ್ಲಿ ಉಂಟಾದ ತಾರತಮ್ಯಗಳ ನಿವಾರಣಾ ಸಮಿತಿಯು ಭಾರತದಲ್ಲಿ ಮೊದಲ ಬಾರಿಗೆ ಮನೆಮನೆಯ ಸಮೀಕ್ಷೆಯನ್ನು ನಡೆಸಿ ಅಂಕಿ ಅಂಶಗಳನ್ನು ವೈಜ್ಞಾನಿಕವಾಗಿ ಕ್ರೋಢೀಕರಿಸಿ ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಜಾರಿಗೊಳಿಸಲು ದಿನಾಂಕ, 06.06.2012 ರಂದು ಕರ್ನಾಟಕ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಇಲ್ಲಿಯವರೆಗೂ ಆಡಳಿತ ನಡೆಸಿದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಲ್ಲಾ ಪಕ್ಷಗಳೂ ಒಳಮೀಸಲಾತಿ ಸಮಸ್ಯೆಯನ್ನು ಒಂದು ಸಾಮಾಜಿಕ ನ್ಯಾಯವೆಂದು ಪರಿಗಣಿಸದೆ ರಾಜಕೀಯ ದಾಳವಾಗಿ ಉಪಯೋಗಿಸಿರುವುದು ದುರಂತದ ವಿಷಯ. ಇದು ಖಂಡನೀಯ.

ಮಾನ್ಯ ಸುಪ್ರೀಂ ಕೋರ್ಟ್ ದಿನಾಂಕ 1.8.2024ರಂದು ಒಳ ಮೀಸಲಾತಿ ನೀಡುವ ಅಧಿಕಾರವು ರಾಜ್ಯ ಸರಕಾರಕ್ಕೆ ಇದೆ ಎಂದು ತೀರ್ಪು ನೀಡಿ ಮೂರು ತಿಂಗಳು ಕಳೆದಿದೆ. ಕರ್ನಾಟಕ ರಾಜ್ಯ ಸರಕಾರದಲ್ಲಿ ಸಾಕಷ್ಟು ದತ್ತಾಂಶಗಳು ಲಭ್ಯವಿದ್ದರೂ ಶೀಘ್ರವೇ ಕ್ರಮ ಜರುಗಿಸದೆ ಅನಾವಶ್ಯಕವಾಗಿ ಏಕಸದಸ್ಯ ಆಯೋಗದ ಮೊರೆಹೋಗಿರುವುದು ನಿಧಾನ ದ್ರೋಹವಾಗಿದೆ ದಿನಾಂಕ 28.10.2024 ರಂದು ರಾಜ್ಯ ಸರ್ಕಾರವು ನಚಿವ ಸಂಪುಟದಲ್ಲಿ ಒಳ ಮೀಸಲಾತಿ ವರ್ಗೀಕರಣವನ್ನು ಒಪ್ಪಿಕೊಂಡು ಜಾರಿಗಾಗಿ ಎರಡು ತಿಂಗಳ ಗಡುವು ವಿಧಿಸಿದೆ. ನ್ಯಾಯಮೂರ್ತಿ ನಾಗಮೂಹನದಾಸ್ ಅವರನ್ನು ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದು, ಅದರ ಅವಧಿಯು ಡಿಸೆಂಬರ್ 28 12:2024ಕ್ಕೆ ಎರಡು ತಿಂಗಳು ಕಳೆಯುತ್ತದೆ, ಇದುವರೆಗೂ ಆಯೋಗಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸದೆ ಸರ್ಕಾರವು ನಿರ್ಲಕ್ಷ್ಯದಿಂದ ವಿಳಂಬ ಧೋರಣೆಯನ್ನು ಮುಂದುವರಿಸಿರುವುದರಿಂದ ಆಯೋಗದ ಅಧ್ಯಕ್ಷರು ಕಾರ್ಯಪ್ರೌವೃತ್ತರಾಗಲು ಸಾಧ್ಯವಾಗುತ್ತಿಲ್ಲ. ಇದು ಖಂಡನೀಯ.

ಒಂದು ರೀತಿಯಲ್ಲಿ ಎಕಸದಸ್ಯ ಆಯೋಗದ ನೇಮಕವು ಅನಾವಶ್ಯಕವಾಗಿತ್ತು. ಈಗಾಗಲೇ ಕಾನೂನು ಸಚಿವರಾದ ಜೆ.ಸಿ.ಮಾಧುಸ್ವಾಮಿಯವರು ನ್ಯಾಯಮೂರ್ತಿ ಸದಾಶಿವರವರ ಆಯೋಗದ ವರದಿಯ ಸಮೀಕ್ಷೆಯ ಅಂಶಗಳನ್ನು ಪರಿಗಣಿಸಿ ಆಯೋಗದ ಶಿಫಾರಸ್ಸುಗಳನ್ನು ಮಾತ್ರ ರದ್ದುಪಡಿಸಿ ಶೇ. 17 ರ ಹೆಚ್ಚುವರಿ ಅನುವಾತದಲ್ಲಿ ಒಳಮೀಸಲಾತಿ ವರ್ಗೀಕರಣವನ್ನು ಮಾದಿಗ ಸಂಬಂಧಿತ ಉಪಜಾತಿಗಳಿಗೆ ಶೇ 6 ರಂತೆ, ಹೊಲೆಯ ಸಂಬಂಧಿತ ಉಪಜಾತಿಗಳಿಗೆ ಶೇ.5.5, ಬೋವಿ ಲಂಬಾಣಿ ಕೊರಮ ಕೊರಚ ಸಮುದಾಯಗಳಿಗೆ ಶೇ.4.5 ರಂತೆ, ಅಲೆಮಾರಿ ಸಮುದಾಯಗಳಿಗೆ ಶೇ 1 ರಂತೆ ಶಿಫಾರಸ್ಸು ಮಾಡಿತು. ಬಿಜೆಪಿ ಸಚಿವ ಸಂಪುಟವು, ಅನುಮೋದಿಸಿ ಅದನ್ನು ಕಾಂಗ್ರೇಸ್ ಮತ್ತು ಜೆಡಿಎಸ್ ಪಕ್ಷಗಳೂ ಸಹ ಒಪ್ಪಿ ಒಳಮೀಸಲಾತಿ ವರ್ಗೀಕರಿಸಲು ಶಿಫಾರಸ್ಸನ್ನು ಕೇಂದ್ರಕ್ಕೆ ಕಳುಹಿಸಲಾಗಿತ್ತು ಒಳಮೀಸಲಾತಿ ವರ್ಗೀಕರಣಕ್ಕೆ ಬೇಕಾದಂತಹ 2011ರ ಜನಸಂಖ್ಯಾ ಜನಗಣತ, ಸದಾಶಿವರ ಆಯೋಗದ ವರದಿ, ಕಾಂತರಾಜ್ ಆಯೋಗದ ವರದಿ, ನಾಗಮೋಹನ್ ದಾಸ್ ಆಯೋಗದ ವರದಿ ಸೇರಿದಂತೆ ಲಭ್ಯವಿರುವ ಎಲ್ಲಾ ದತ್ತಾಂಶಗಳ ಅಂಶಗಳನ್ನು ಒಪ್ಪಿಕೊಂಡಿದ್ದರೆ ಸಾಕಾಗಿತ್ತು. ಆದರೆ ಸಾಮಾಜಿಕ ನ್ಯಾಯವನ್ನು ಕೊಡಲು ರಾಜಕೀಯ ಇಚ್ಛಾಶಕ್ತಿ ಇಲ್ಲದ ಕಾರಣ ಉದ್ದೇಶಪೂರ್ವಕವಾಗಿ ನಾಗಮೋಹನ್ ದಾಸ್ ರವರ ಆಯೋಗವನ್ನು ರಚಿಸಲಾಗಿದೆ.

ಕರ್ನಾಟಕ ರಾಜ್ಯ ಸಂಪುಟವು 26-10-2024 ರಂದು ಸರ್ವೋಚ್ಚನ್ಯಾಯಾಲಯದ ತೀರ್ಪಿಗೆ ಅನುಗುಣವಾಗಿ ಎಸ್ಸಿ.ಎಸ್ಪಿ ಸಮುದಾಯಗಳಿಗೆ ಒಳಮೀಸಲಾತಿ (Internal Reservation) ಕೊಡಲು ತಾತ್ವಿಕವಾಗಿ ಒಪ್ಪಿಗೆ ನೀಡಿದ್ದು, ಜೊತೆಯಲ್ಲಿಯೇ ಸರ್ಕಾರವು ಒಳಮೀಸಲು ವರ್ಗೀಕರಣ ಜಾರಿಯಾಗುವವರೆಗೂ ಹೊಸ: ನೇಮಕಾತಿಯನ್ನು ತಡೆಯುವಂತೆಯೂ ಕೂಡ ಆದೇಶಿಸಿದೆ. ಆದರೂ ನೇಮಕಾತಿಗಳೂ ನಡೆಯುತ್ತಲೇ ಇದೆ. ಒಂದು ಕಡೆ ಈ ಹಿಂದೆ ಹೊರಡಿಸಿರುವ ನೇಮಕಾತಿ ಅಧಿಸೂಚನೆಗಳಲ್ಲಿರುವ ನೇಮಕಾತಿ ಸಂಖ್ಯೆಗಳನ್ನು ಹೆಚ್ಚಳ ಮಾಡಲು ಪ್ರಯತ್ನಿಸುತ್ತಿರುವುದು, ಇನ್ನೂ ಕೆಲವು ನೇಮಕಾತಿಯ ಅಧಿಸೂಚನೆಗಳಿಗೆ ಹಿಂದಿನ ದಿನಾಂಕಗಳನ್ನು ಹಾಕಿ ಪ್ರಕಟಿಸುತ್ತಿರುವುದು ಹಾಗೂ ಡಾ/ ಜಿ ಪರಮೇಶ್ವರ್ ರವರ ಗೃಹ ಮತ್ತು ಆರೋಗ್ಯ ಇಲಾಖೆಯಲ್ಲಿ ನೇಮಕಾತಿ ಮಾಡಿಕೊಳ್ಳಲು ವಿಶೇಷ ಅನುಮತಿ ನೀಡಬೇಕೆಂದು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತಯಾರಿ ಮಾಡಿರುವುದು ಎಷ್ಟು ಸರಿ?

ಸಚಿವ ಸಂಪುಟದ ನಿರ್ಣಯವನ್ನು ಸಮಾಜ ಕಲ್ಯಾಣ ಇಲಾಖೆಯು 15 ದಿನಗಳ ನಂತರ ಸಿಬ್ಬಂದಿ ಮತ್ತು ಆಡಳಿತಾತ್ಮಕ ಸುಧಾರಣಾ (DPAR) ಇಲಾಖೆಗೆ ರವಾನಿಸಿ ನಂತರ ಇಲಾಖೆಯು ಮೂರು ವಾರಗಳ ತಡಮಾಡಿ ದಿನಾಂಕ 25.11.2024 ರಂದು ಎಲ್ಲಾ ಇಲಾಖೆಗಳಿಗೆ ಸೂಚಿಸಿದೆ. ಈ ರೀತಿ ಪರೋಕ್ಷವಾಗಿ ನೇಮಕಾತಿ ಪ್ರಕ್ರಿಯೆಗಳನ್ನು ಪೂರೈಸಿಕೊಳ್ಳಲು ಕುತಂತ್ರ ಮಾಡುತ್ತಿರುವುದನ್ನು ಖಂಡಿಸುತ್ತೇವೆ.

ಆಯೋಗಕ್ಕೆ ಸರ್ಕಾರವೇ ನಿಗಧಿಪಡಿಸಿದಂತೆ ಎರಡು ತಿಂಗಳ ಕಾಲಾವಕಾಶವು ಡಿಸೆಂಬರ್ 28.12.2024 ರಂದು ಪೂರ್ಣಗೊಳ್ಳಲಿದೆ. ನ್ಯಾಯಮೂರ್ತಿ ನಾಗಮೋಹನ್ ದಾಸ್ ರವರ ಅಯೋಗಕ್ಕೆ ಕಛೇರಿ ಮತ್ತು ಅಗತ್ಯ ಸೌಲಭ್ಯಗಳನ್ನೂ ಕೂಡ ಇಲ್ಲಿಯವರೆಗೂ ಒದಗಿಸಿಲ್ಲ. ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಒಳ ಮೀಸಲಾತಿ ವಿರೋಧಿಗಳ ಒತ್ತಡಕ್ಕೆ ಮಣಿದು ವಿಳಂಬ ನೀತಿಯನ್ನು ಅನುಸರಿಸುತ್ತಿದೆ. ಇದನ್ನು ಒಕ್ಕೂಟವು ಖಂಡಿಸುತ್ತಾ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡುತ್ತಿದ್ದೇವೆ.

ಸರ್ಕಾರವು ನಿಗಧಿಪಡಿಸಿರುವ ಕಾಲಾವಕಾಶದಂತೆ ಒಳಮೀಸಲಾತಿ ವರ್ಗೀಕರಣವನ್ನು ಜಾರಿಗೊಳಿಸದೆ ಇದ್ದರೆ ಜನವರಿ ತಿಂಗಳಲ್ಲಿ ರಾಜ್ಯಾದ್ಯಂತ ಜಾಗೃತಿ ಸಭೆಗಳನ್ನು ನಡೆಸಿ, ಜನಾಂದೋಲದ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಸುತ್ತೇವೆ ಎಂದು ಮಾರಸಂದ್ರ ಮುನಿಯಪ್ಪ, ರಾಜ್ಯಾಧ್ಯಕ್ಷರು, ಅಖಿಲ ಭಾರತ ಬಹುಜನ ಸಮಾಜ ಪಕ್ಷ. ಡಾ.ಎನ್.ಮೂರ್ತಿ, ರಾಜ್ಯಾಧ್ಯಕ್ಷರು, ಡಿಎಸ್ಎಸ್.ಗುರುಮೂರ್ತಿ,ರಾಜ್ಯಾಧ್ಯಕ್ಷರು, ಡಿಎಸ್ಎಸ್ (ಪ್ರೊ. ಬಿ. ಕೃಷ್ಣಪ್ಪ).ಕೇಶವ ಮೂರ್ತಿ,ರಾಜ್ಯ ಕಾರ್ಯಾಧ್ಯಕ್ಷರು. ಹಾಗೂ ಡಾ.ಭೀಮರಾಜು,ರಾಜ್ಯಾಧ್ಯಕ್ಷರು, ವಿಶ್ವ ಆದಿ ಜಾಂಬವ ಮಹಾಸಭಾ ರವರ ವತಿಯಿಂದ ಜಂಟಿಯಾಗಿ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಎಚ್ಚರಿಕೆ ನೀಡಿದರು.

City Today News 9341997936