ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ “ಅವಕಾಶ ವಂಚಿತ ಸಮುದಾಯಗಳ ಧ್ವನಿ”

ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯಲ್ಲಿ ಅವಕಾಶ ವಂಚಿತ ಸಮುದಾಯಗಳ ಧ್ವನಿಯಾಗಿ ಇಡೀ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಶೈಕ್ಷಣಿಕ, ಔದ್ಯೋಗಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಹಿಂದುಳಿದ ವರ್ಗಗಳಲ್ಲಿಯೇ ಅತಿ ಹಿಂದುಳಿದ ಸಮುದಾಯಗಳ ಧ್ವನಿಯಾಗಿ ಅವಕಾಶ ವಂಚಿತರ ಪರವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ.

ಪ್ರಮುಖವಾಗಿ ಈ ವೇದಿಕೆಯು 2018ರ ರಾಜ್ಯವು ಅತೀ ಖಾತುರದಿಂದ ನಿರೀಕ್ಷಿಸುತ್ತಿದ್ದ ಹೆಚ್.ಕಾಂತರಾಜುರವರ ಜಾತಿವಾರು ಸಮೀಕ್ಷೆಯ ವರದಿಯ ಬಿಡುಗಡೆಗಾಗಿ ಉಗ್ರಹೋರಾಟ ನಡೆಸುವ ಮೂಲಕ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ದಾವೆಯನ್ನು ಸಹ ಹೂಡಿದ್ದೆವು. ಹಾಗೆಯೇ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ-3ಬಿ ಯಿಂದ ಪ್ರವರ್ಗ-2ಎಗೆ ವರ್ಗಾಯಿಸದಂತೆ ಒತ್ತಾಯ ಮತ್ತು ಹೋರಾಟ ನಡೆಸಿದ್ದು, ಹಾಗೇಯೇ ಉನ್ನತ ಮಟ್ಟದ ಸುಭಾಷ್ ಆಡಿ ಸಮಿತಿಯನ್ನು ರದ್ದುಗೊಳಿಸಲು ಸಹ ಕೋರಿದ್ದೆವು. ರಾಜ್ಯದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿದ್ದು, ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಕೈಬಿಟ್ಟಿರುವ ಸುಮಾರು 73 ಜಾತಿಗಳನ್ನು ಕೇಂದ್ರ ಹಿಂದುಳಿದ ಪಟ್ಟಿಗೆ ಸೇರಿಸುವ ವಿಚಾರವಾಗಿ ಹೋರಾಟ ಮಾಡಿದ್ದೇವೆ. ಹಾಗೆಯೇ ಸ್ಥಳೀಯ ಸಂಸ್ಥೆಗಳ ಚುನಾವಣೆಯ ವಿಚಾರವಾಗಿ ಹಿಂದುಳಿದ ವರ್ಗಗಳ ಮೀಸಲಾತಿಯ ವಿಚಾರದಲ್ಲಿ ಸರ್ವೋಚ್ಛ ನ್ಯಾಯಾಲಯದ ನಿರ್ದೇಶನ ಹಾಗೂ ರಾಜ್ಯ ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ಹೋರಾಟ ಹಾಗೂ ವಿಧಾನ ಪರಿಷತ್ತಿನಲ್ಲಿ ಅತೀ ಹಿಂದುಳಿದ ವರ್ಗಗಳ ಸಮುದಾಯಗಳಿಗೆ ಮುಂದಿನ ದಿನಗಳಲ್ಲಿ ಅವಕಾಶ ಕಲ್ಪಿಸಿಕೊಡುವ ಬಗ್ಗೆ ಮತ್ತು ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ಅವಕಾಶವನ್ನು ಮಾಡಿಕೊಡಬೇಕೆಂದು ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ .

ಈಗ ಪ್ರಸ್ತುತ ಜೂನ್ ತಿಂಗಳಿನಲ್ಲಿ 11 ಜನರ ವಿಧಾನ ಪರಿಷತ್ ಸದಸ್ಯರ ನಿವೃತ್ತಿಯಾಗುತ್ತಿದ್ದು, ಕಾಂಗ್ರೆಸ್ ಪಕ್ಷಕ್ಕೆ 7 ಸ್ಥಾನ ಖಚಿತವಾಗಿದ್ದು, ಅದರಲ್ಲಿ ಪ್ರಮುಖವಾಗಿ ಮುಂದುವರಿದ ಸಮುದಾಯಗಳೇ ಹೆಚ್ಚಿನ ಸಂಖ್ಯೆಯಲ್ಲಿ ಹಿಂದುಳಿದ ವರ್ಗದಲ್ಲಿ ಮುಂದುವರೆದ ಈಡಿಗ, ತಿಗಳ,ಉಪ್ಪಾರ, ಬಲಿಜ, ರೆಡ್ಡಿ, ಕ್ಷತ್ರಿಯ ಹೀಗೆ ಹಿಂದುಳಿದ ವರ್ಗಗಳ ಅತಿ ಹಿಂದುಳಿದ ವರ್ಗಗಳಲ್ಲಿ ಈಗಾಗಲೇ ಅವಕಾಶ ಪಡೆದವರು ಮತ್ತು ಮುಂದುವರಿದವರೇ ಹೆಚ್ಚಿನ ಸಂಖ್ಯೆಯಲ್ಲಿ ವಿಧಾನ ಪರಿಷತ್ ಸ್ಥಾನ ಪಡೆಯಲು ಯತ್ನಿಸುತ್ತಿದ್ದಾರೆ.

ಸಂವಿಧಾನದ ಆಶಯವೇ ಬುಡಮೇಲಾದಂತೆ ಯಾವ ಸಮುದಾಯಗಳು ಸಾರ್ವಜನಿಕ ಚುನಾವಣೆಗಳ ಮೂಲಕ ರಾಜಕೀಯವಾಗಿ ಸ್ಪರ್ಧಿಸಲು ಸಾಧ್ಯವಿಲ್ಲವೋ ಅಂತಹ ಸಮುದಾಯಗಳ ಮುಖಂಡರನ್ನು ವಿಧಾನಪರಿಷತ್ ಗೆ ನಾಮನಿರ್ದೇಶನ ಮಾಡುವ ಮೂಲಕ ಅಂತಹ ಸಮುದಾಯಗಳಿಗೆ ಸಂವಿಧಾನದ ಆಶಯದಂತೆ ಸಮಾಜದ ಮುಖ್ಯ ವಾಹಿನಿಗೆ ಬರಲು ಸಹಾಯವಾಗುತ್ತದೆ ಎಂಬ ಧೋರಣೆಯನ್ನು ಈಗ ಅರ್ಥವಿಲ್ಲದಂತೆ ಮಾಡಿದ್ದಾರೆ.

ಈಗಾಗಲೇ ಗೊಲ್ಲ, ಯಾದವ, ತಿಗಳ, ಈಡಿಗ, ಕುರುಬ, ಉಪ್ಪಾರ ಹೀಗೆ ಹಲವಾರು ಸಮುದಾಯಗಳು ಅವಕಾಶ ಪಡೆದಿದ್ದು ಈಗಲೂ ಅವರೇ ಪ್ರಯತ್ನ ನಡೆಸುತ್ತಿದ್ದಾರೆ.

ಆದರೆ ಮಾನ್ಯ ಮುಖ್ಯಮಂತ್ರಿಗಳ ಪುತ್ರರಾದ ಶ್ರೀ ಯತೀಂದ್ರ ಸಿದ್ದರಾಮಯ್ಯ ರವರು ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಗಳಾದಂತಹ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರಿಗೆ ಕ್ಷೇತ್ರ ಬಿಟ್ಟುಕೊಟ್ಟ ಕಾರಣ ಎಐಸಿಸಿ ವರಿಷ್ಠರು ನೀಡಿದ ವಾಗ್ದಾನದಂತೆ ಅವರನ್ನ ವಿಧಾನಪರಿಷತ್ತಿಗೆ ನಾಮನಿರ್ದೇಶನ ಮಾಡಲು ವೇದಿಕೆಯು ಒಕ್ಕೊರಲಿನಿಂದ ಒತ್ತಾಯಿಸುತ್ತದೆ.

ಮುಂದುವರೆದು ಹೆಳವ, ಶಿಳ್ಳೆಖ್ಯಾತ, ದೊಂಬಿದಾಸ, ಮಡಿವಾಳ, ಸವಿತಾ ಸಮಾಜ ,ಅಕ್ಕಿಪಿಕ್ಕಿ, ಗೋದಳಿ, ಕಾಡುಸಿದ್ದ ಇನ್ನೂ ಅನೇಕ ಅತಿ ಹಿಂದುಳಿದ ಹಾಗೂ ಅವಕಾಶ ವಂಚಿತ ಮತ್ತು ಸ್ವಾತಂತ್ರ್ಯ ಬಂದ 75 ವರ್ಷಗಳ ನಂತರವೂ ಇಂತಹ ಸಮುದಾಯಗಳು ಒಂದು ಗ್ರಾಮ ಪಂಚಾಯಿತಿಯ ಸದಸ್ಯರಾಗಿಯು ಆಯ್ಕೆಯಾಗಿರುವುದಿಲ್ಲ. ಹಿಂದುಳಿದ ವರ್ಗಗಳಲ್ಲಿ ಅತಿ ಹಿಂದುಳಿದ ಮತ್ತು ಅವಕಾಶ ವಂಚಿತ ಸಮುದಾಯಗಳಿಗೆ ಈ ಬಾರಿ ಜೂನ್ ತಿಂಗಳಲ್ಲಿ ವಿಧಾನಪರಿಷತ್ತಿಗೆ ನಡೆಯುವ ಆಯ್ಕೆ ಸಂದರ್ಭದಲ್ಲಿ ಹೆಳವ, ಸವಿತಾಸಮಾಜ, ಮಡಿವಾಳ ಇಂತಹ ಅವಕಾಶ ವಂಚಿತ ಸಮುದಾಯಗಳನ್ನು ಪರಿಗಣಿಸಿ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿರುವ ಶೇಕಡ 60ಕ್ಕೂ ಹೆಚ್ಚು ಜನಸಂಖ್ಯೆ ಇರುವಂತಹ ಹಿಂದುಳಿದ ವರ್ಗಗಳ ಕಡಿಮೆ ಅವಕಾಶ ಇರುವ ಸಮುದಾಯವನ್ನು ಪರಿಗಣಿಸಿ ಉದಾಹರಣೆಗೆ ಸವಿತಾ ಸಮಾಜಕ್ಕೆ ಅತಿ ಕಡಿಮೆ ಅವಕಾಶ ಸಿಕ್ಕಂತಹ ಎಂ.ಸಿ.ವೇಣುಗೋಪಾಲ್ ರಂತವರನ್ನು ವಿಧಾನ ಪರಿಷತಿಗೆ ನಾಮನಿರ್ದೇಶನ ಮಾಡಲು ಈ ಮೂಲಕ ಸರ್ಕಾರವನ್ನು ಒತ್ತಾಯಿಸುತ್ತಿದ್ದೇವೆ. ಹಿಂದುಳಿದ ವರ್ಗಗಳಲ್ಲಿ ಅತಿ ಹಿಂದುಳಿದ ವರ್ಗಗಳನ್ನು ಪರಿಗಣನೆಗೆ ತೆಗೆದುಕೊಳ್ಳಲು ಮತ್ತು ಇಂತಹ ತಳ ಸಮುದಾಯಗಳನ್ನು ಗುರುತಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಸೂಕ್ತ ಸ್ಥಾನಮಾನ ನೀಡಿ ಪಕ್ಷಕ್ಕೆ ಸೆಳೆಯುವಂತೆ ಸನ್ಮಾನ್ಯ ಶ್ರೀ ರಾಹುಲ್ ಗಾಂಧಿಯವರು ತಮ್ಮ ಭಾಷಣಗಳಲ್ಲಿ ಹೇಳುತ್ತಿದ್ದಾರೆ. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ಆಶಯದಂತೆ “ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು” ಎಂಬ ಸಾಮಾಜಿಕ ನ್ಯಾಯದಡಿಯಲ್ಲಿ ಈ ಮೂಲಕ ಸರ್ಕಾರವನ್ನು ಒತ್ತಾಯಿಸುತ್ತೇವೆ. ಮುಂದುವರಿದು ಸರ್ಕಾರದ ಮಹತ್ವಕಾಂಕ್ಷೆಯ ಪರಿಸ್ಕೃತ ಕಾಂತರಾಜು ವರದಿ ಪುನರ್ಪರಿಶೀಲಿಸಿ ಜಯಪ್ರಕಾಶ್ ಹೆಗಡೆಯರವರು ನೀಡಿರುವಂತಹ ವರದಿಯನ್ನ ಆದಷ್ಟು ಬೇಗ ಸಾರ್ವಜನಿಕವಾಗಿ ಅನುಷ್ಠಾನಗೊಳಿಸಬೇಕೆಂದು ಈ ಮೂಲಕ ಕೋರುತ್ತೇವೆ.

ರಾಜಕೀಯ ಪ್ರತಿನಿಧ್ಯವನ್ನು ಅತಿ ಹಿಂದುಳಿದವರ್ಗಗಳಿಗೆ ಅವಕಾಶ ಕಲ್ಪಿಸಬೇಕೆಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ, ಭಾರತೀಯ ಜನತಾ ಪಕ್ಷ ಮತ್ತು ಜಾತ್ಯತೀತ ಜನತಾ ದಳ ಮೂರು ಪಕ್ಷಗಳ ಅಧ್ಯಕ್ಷರು ಮತ್ತು ಮುಖಂಡರುಗಳು ಪರಿಗಣಿಸಬೇಕೆಂದು ಈ ಮೂಲಕ ಒತ್ತಾಯಿಸುತ್ತೇವೆ ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ವೇದಿಕೆಯ ಪ್ರಧಾನ ಕಾರ್ಯದರ್ಶಿ ಎಂ.ನಾಗರಾಜು, ಖಜಾಂಚಿಗಳಾದ ಎಲ್.ಎ.ಮಂಜುನಾಥ್ ಹಾಗೂ ಸದಸ್ಯರಾದ ಮಂಜುನಾಥ್, ಶಿವಶಂಕರ್, ಚಂದ್ರಶೇಕರ್ ರಾಜು ಹಾಗೂ ಇತರ ಸದಸ್ಯರು ಭಾಗವಹಿಸಿದ್ದರು.

City Today News 9341997936

ಮಡಿವಾಳ ಸಮಾಜದ ಅರ್ಹ ವ್ಯಕ್ತಿಗೆ / ಸಾಧಕರಿಗೆ /ಪರಿಣಿತರನ್ನು ವಿಧಾನ ಪರಿಷತ್ತಿಗೆ ನಾಮ ನಿರ್ದೇಶನ ಮಾಡಲು ಒತ್ತಾಯ

ಮಡಿವಾಳ ಸಮಾಜದ ಅರ್ಹ ವ್ಯಕ್ತಿಗೆ / ಸಾಧಕರಿಗೆ /ಪರಿಣಿತರನ್ನು ವಿಧಾನ ಪರಿಷತ್ತಿಗೆ ನಾಮ ನಿರ್ದೇಶನ ಮಾಡುವ ಬಗ್ಗೆ.

ಕರ್ನಾಟಕ ರಾಜ್ಯದಲ್ಲಿ ಮಡಿವಾಳ ಸಮುದಾಯವು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಅತ್ಯಂತ ಹಿಂದುಳಿದ ಹಾಗೂ ನಿರ್ಲಕ್ಷಿತ ಸಮುದಾಯವಾಗಿದೆ. ಸಾಮಾಜಿಕ ಅಸಮಾನತೆ, ಶೈಕ್ಷಣಿಕ ಹಿಂದುಳಿದಿರುವಿಕೆ, ಆರ್ಥಿಕ ದುರ್ಬಲತೆ, ಕಡಿಮೆ ಪ್ರಮಾಣದ ಜನಸಂಖ್ಯೆ ಹಾಗೂ ರಾಜಕೀಯ ಪ್ರಾತಿನಿಧ್ಯ ಮತ್ತು ಸ್ಥಾನಮಾನ ಇಲ್ಲದಿರುವುದು ಈ ಸಮುದಾಯ ಹಿಂದುಳಿಯಲು ಪ್ರಮುಖ ಕಾರಣಗಳಾಗಿವೆ.

ಸ್ವಾತಂತ್ರ್ಯಾ ನಂತರದ 77 ವರ್ಷಗಳ ಬಳಿಕವೂ ಸಹ ಕರ್ನಾಟಕ ರಾಜ್ಯದಲ್ಲಿ ಮಡಿವಾಳ ಸಮುದಾಯಕ್ಕೆ ಯಾವುದೇ ರೀತಿಯ ರಾಜಕೀಯ ಪ್ರಾತೀನಿಧ್ಯ ಹಾಗೂ ಸ್ಥಾನಮಾನ ಲಭೀಸದಿರುವುದು ಅತ್ಯಂತ ವಿಷಾದಕರ ಸಂಗತಿಯಾಗಿದೆ. ವರ್ತಮಾನದಲ್ಲಿನ ಚುನಾವಣೆ ವ್ಯವಸ್ಥೆಯಲ್ಲಿ ದೊಡ್ಡ ದೊಡ್ಡ ಹಾಗೂ ಬಲಾಡ್ಯ ಸಮುದಾಯಗಳ ನಡುವೆ ಸಣಸಾಡಿ ರಾಜಕೀಯ ಪ್ರಾತೀನಿಧ್ಯ ಪಡೆಯುವುದು ಅತ್ಯಂತ ಸಣ್ಣ ಸಮುದಾಯವಾದ ಮಡಿವಾಳ ಸಮಾಜಕ್ಕೆ ಸಾಧ್ಯವಿಲ್ಲದ ಸಂಗತಿಯಾಗಿದೆ.

ಪ್ರಜಾಪ್ರಭುತ್ವ ವ್ಯವಸ್ಥೆ ಸ್ಥಾಪನೆಯಾದ ನಂತರ ಮಡಿವಾಳ ಸಮುದಾಯಕ್ಕೆ ರಾಜಕೀಯ ಪ್ರಾತೀನಿಧ್ಯ ದೊರೆತದ್ದು ಅತೀ ವಿರಳ ಹಾಗೂ ಅಲ್ಪ ಮಾತ್ರ 1980 ರಲ್ಲಿ ಜನತಾ ಪಕ್ಷದಿಂದ ಮಡಿವಾಳ ಸಮುದಾಯದ ವಿದ್ಯಾಧಾರ ಗುರುಜಿಯವರನ್ನು ಎಂ.ಎಲ್.ಸಿ. ಮಾಡಲಾಗಿತ್ತು. ತದನಂತರ 2008 ರಲ್ಲಿ ಶ್ರೀ ಎನ್. ಶಂಕರಪ್ಪ ರವರನ್ನು ಬಿಜೆಪಿ ಪಕ್ಷವು ಎಂ.ಎಲ್.ಸಿ. ಯಾಗಿ ಮಾಡಿತ್ತಾದರೂ ಕೇವಲ 2 ವರ್ಷಗಳಲ್ಲಿ ಅವರ ಸ್ಥಾನಪಲ್ಲಟ್ಟ ಮಾಡುವ ಮೂಲಕ ಮಡಿವಾಳ ಜನಾಂಗದ ರಾಜಕೀಯ ಪ್ರಾತೀನಿಧ್ಯವನ್ನು ಕಸಿದುಕೊಂಡಿತ್ತು. ತದನಂತರ ಮಡಿವಾಳ ಸಮುದಾಯಕ್ಕೆ ಯಾವುದೇ ರಾಜಕೀಯ ಸ್ಥಾನಮಾನ ಲಭ್ಯವಾಗಿರುವುದಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದಿಂದ ಇದುವರೆವಿಗೂ ಮಡಿವಾಳ ಸಮುದಾಯಕ್ಕೆ ರಾಜಕೀಯ ಪ್ರಾತೀನಿಧ್ಯ ದೊರೆತಿರುವುದಿಲ್ಲ. ಈ ಜನಾಂಗದ ಸಂಕಷ್ಟಗಳನ್ನು ಸರ್ಕಾರದ ಗಮನಕ್ಕೆ ತರಲು ಪ್ರಾತೀನಿಧ್ಯದ ಅವಶ್ಯಕತೆ ಇರುತ್ತದೆ. ಆದ್ದರಿಂದ, ಪ್ರಸ್ತುತ ನಡೆಯುತ್ತಿರುವ ಎಂ.ಎಲ್.ಸಿ. ನಾಮ ನಿರ್ದೇಶನದಲ್ಲಿ ಮಡಿವಾಳ ಜನಾಂಗ ಅರ್ಹ ವ್ಯಕ್ತಿಯೊಬ್ಬರಿಗೆ ಪ್ರಾತೀನಿಧ್ಯ ನೀಡಬೇಕೆಂದು ಸಮಸ್ತ ಮಡಿವಾಳ ಜನಾಂಗದ ಪರವಾಗಿ ನಿವೇದಿಸಿಕೊಳ್ಳುತ್ತೇವೆ ಎಂದು ಸಿ. ನಂಜಪ್ಪ-ಅಧ್ಯಕ್ಷರು, ಬಿ.ಆರ್. ಪ್ರಕಾಶ್ – ಪ್ರಧಾನ ಕಾರ್ಯದರ್ಶಿಗಳು ಮತ್ತು ಸಂಘದ ಪ್ರಮುಖರುಗಳು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.

City Today News 9341997936

DKMS-BMST Gets Grooving to Raise Awareness for Blood Cancer

The NGO hosted a flash mob ahead of World Blood Cancer Day encouraged people to register as blood stem cell donors

BENGALURU, May 27, 2024: To raise awareness about blood cancer, DKMS BMST Foundation India, a non-profit organisation committed to battling blood cancer and blood disorders, teamed up with “Good Move Wellness & Studio” to host a flash mob ahead of World Blood Cancer Day (May 28).

The flash mob comprising 50 participants stormed up a buzz in Koramangala’s Nexus Mall over the weekend. This increased the curiosity amongst the patrons and enhanced their knowledge about the burden of blood cancer in India and how we can help these patients. The two-day campaign also engaged members of the community with a quiz on blood cancer which doubled up as an educative tool on the subject. To further encourage people to join hands in the battle against blood cancer, a registration drive for potential blood stem cell donors was held at the venue by DKMS-BMST.

Patrick Paul, CEO, DKMS BMST Foundation India stressed the urgency of addressing the lack of awareness about blood cancer in India. He said, “In India, over 1 lakh people are diagnosed with blood cancer or a blood disorder each year, yet only 0.09% of the population is registered as potential stem cell donors. This severe shortage is particularly challenging because patients of Indian origin have unique HLA (Human Leukocyte Antigen) characteristics that are under-represented globally. With the help of initiatives like the flash mob and registration drives, we aim to educate and encourage more individuals to register as donors, thus enhancing our efforts in the battle against blood cancer.”

Janhvi Sharma, Founder, Good Move Wellness & Studio said, “When DKMS-BMST approached me about participating in the flash mob to raise awareness for blood cancer and commemorate World Blood Cancer Day, I felt truly honored. As the saying goes, ‘To watch us dance is to hear our hearts speak,’ – this sentiment echoed in my mind, thinking about the patients battling blood cancer and blood disorders, as well as those who have bravely faced this illness. I hope our small act in the form of dance showcases our support for this noble cause and more people will come forward to register as potential lifesavers. My group and I will also register as stem cell donors by providing cheek swab samples. It’s incredible to think that a few moments of our time can give someone a second chance at life! I appreciate the efforts of organisations like DKMS-BMST who are doing their best to help those in need.”

Every 5 minutes, someone in India is diagnosed with blood cancer or a blood disorder like Thalassemia or Aplastic Anemia. Many such patients are children and young people whose only chance of recovery is a stem cell transplant. For a successful stem cell transplant, the patient needs to find an HLA (Human Leukocyte Antigen) matched donor. Most often, the majority of the patients are unable to receive a transplant due to the unavailability of a matching blood stem cell donor. With very few individuals signing up as potential blood stem cell donors, finding a matching donor is difficult. This increases the need for more people of Indian ethnicity to register themselves.

To register as a potential stem cell donor, you must be a healthy Indian adult between 18 and 55 years of age. When you are ready to register, all you need to do is complete a consent form and swab the inside of your cheeks to collect your tissue cells. Your tissue sample is then sent to the lab to be analysed and listed anonymously on the international search platform for matching stem cell donors. If you’re eligible, take the first step to register as a blood stem cell donor by ordering your home swab kit at http://www.dkms-bmst.org/register

So far, DKMS-BMST India has registered over 1,00,000 stem cell donors in the country and facilitated 110 transplants since its inception in 2019, significantly impacting the fight against blood cancer. The organisation aims to register more donors in India to give a second chance at life to as many patients as possible.

City Today News 9341997936

ಶ್ರೀ ಗುರುರಾಯರ ಸನ್ನಿಧಿಯಲ್ಲಿ “ಗರಳಪುರಿ ವನಿತೋತ್ಸವ” ಮತ್ತು “ದೇವ ದರ್ಶನ” ನಾಟಕ

ಶ್ರೀ ಗುರುರಾಯರ ಸನ್ನಿಧಿಯಲ್ಲಿ “ಗರಳಪುರಿ ವನಿತೋತ್ಸವ” ಮತ್ತು “ದೇವ ದರ್ಶನ” ನಾಟಕ ರಾಯರ ಪೂರ್ವಾಶ್ರಮದ ವಂಶಿಕರಿಂದ ಜಯನಗರ 5ನೇ ಬಡಾವಣೆಯ ನಂಜನಗೂಡುಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ  ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆಶೀರ್ವಾದದೊಂದಿಗೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದಿಂದ್ರಾಚಾರ್ಯರ ನೇತೃತ್ವದಲ್ಲಿ “ಗರಳಪುರಿ ವನಿತೋತ್ಸವ” ಎಂಬ ವಿಶೇಷವಾದ ಶೀರ್ಷಿಕೆಯ ಅಡಿಯಲ್ಲಿ ಶ್ರೀ ಶ್ರೀ ಸುಶಮೀಂದ್ರ ಸೇವಾ ಪ್ರತಿಷ್ಠಾನದ ವಾರ್ಷಿಕೋತ್ಸವದ ಅಂಗವಾಗಿ ಶ್ರೀ ರಾಘವೇಂದ್ರ ಸ್ವಾಮಿಗಳ ಪೂರ್ವಾಶ್ರಮದ ವಂಶಿಕರಾದ ಔರಸ, ದೌಹಿತ್ರ ಸಂತತಿಯ 150ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಹಿರಿಯರು ಮತ್ತು ಕಿರಿಯರು ಸೇರಿ “ಆಧ್ಯಾತ್ಮಿಕ- ಸಾಂಸ್ಕೃತಿಕ-ಕಾರ್ಯಕ್ರಮವಾದ, ಕೋಲಾಟ ನೃತ್ಯ “ದಾಸವಾಣಿ”, “ರಂಗೋಲಿ ಸ್ಪರ್ಧೆ” ಆಶುಭಾಷಣ ಸ್ಪರ್ಧೆ””ದೇವ ದರ್ಶನ” ಎಂಬ ಭಾರತದ 6 ಪುಣ್ಯಕ್ಷೇತ್ರಗಳ ಮಹಿಮೆಯನ್ನು ಅತ್ಯಂತ ಸುಂದರವಾಗಿ ಚಿಕ್ಕ ಮಕ್ಕಳಿಂದಲೂ ರೂಪಕದ ಮೂಲಕ ಹೊಸ ಪ್ರಯತ್ನದೊಂದಿಗೆ ಕಾರ್ಯಕ್ರಮಗಳು ವಿಶೇಷವಾಗಿ ನೆರವೇರಿತು ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದರು. ಈ ಸಂದರ್ಭದಲ್ಲಿ ರಾಜಾ ಶ್ರೀ ಬಂಡಿಆಚಾರ್ಯರು, ವಿದ್ಯಾವಾಚಸ್ಪತಿ ಡಾ||ಅರಳುಮಲ್ಲಿಗೆ ಪಾರ್ಥಸಾರಥಿ, ಶ್ರೀಮಠದಹಿರಿಯ ವ್ಯವಸ್ಥಾಪಕ  ರಾಜಾ ಕೆ. ವಾದಿಂದ್ರಾಚಾರ್ , ಶ್ರೀ ಕೃಷ್ಣ ಗುಂಡಾಚಾರ್ಯರು ಮತ್ತು ಶ್ರೀ ಶ್ರೀ ಸುಶಮಿಂದ್ರ ಸೇವಾ ಪ್ರತಿಷ್ಠಾನ ಸದಸ್ಯರು, ಹಲವಾರು ಗಣ್ಯರು, ಶ್ರೀಮಠದ ಸಿಬ್ಬಂದಿಗಳು ಉಪಸ್ಥಿತರಿದ್ದು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

City Today News 9341997936

ಕನ್ನಡ ಜನ್ಮ ಭೂಮಿ ಯುವಸೇನೆ ಸಂಘಟನೆ ಲಾಂಛನ ಬಿಡುಗಡೆ ಹಾಗೂ ಕಲ್ಯಾಣ ಕರ್ನಾಟಕದ ಮೂಲಭೂತ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಒತ್ತಾಯಿಸಿ ಹೋರಾಟ

ಕನ್ನಡ ಜನ್ಮ ಭೂಮಿ ಯುವಸೇನೆ ಸಂಘಟನೆ ಲಾಂಛನ ಬಿಡುಗಡೆ ಹಾಗೂ ಕಲ್ಯಾಣ ಕರ್ನಾಟಕದ ಮೂಲಭೂತ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಒತ್ತಾಯಿಸಿ ಹೋರಾಟದ ಕುರಿತು ಪತ್ರಿಕಾ ಗೋಷ್ಠಿ

ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಈ ಮೂಲಕ ತಮಗೆ ತಿಳಿಯಪಡಿಸುವುದೇನೆಂದರೆ, ಕನ್ನಡ ಜನ್ಮ ಭೂಮಿ ಯುವಸೇನೆ ಸಂಘಟನೆ ಕಲ್ಯಾಣ ಕರ್ನಾಟಕದ ಅಧ್ಯಕ್ಷರಾದ ಚಾಂದಪಾಶಾ ಮುಲ್ಲಾ ಹಾಗೂ ಪದಾಧಿಕಾರಿಗಳಿಂದ ಸುದ್ದಿಘೋಷ್ಠಿ ಹಮ್ಮಿಕೊಂಡಿದ್ದು ಇರುತ್ತದೆ.

ಈ ಸಂಘಟನೆಯು ಅಸ್ತಿತ್ವಕ್ಕೆ ಬರುತ್ತಿದ್ದು. ಸಂಘಟನೆಯು ಕರ್ನಾಟಕ ಹಾಗೂ ವಿಶೇಷವಾಗಿ ಕಲ್ಯಾಣ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಕನ್ನಡ ಪರ ಸಂಘಟನೆಗಳೊಂದಿಗೆ ರಾಜ್ಯಾದ್ಯಾಂತ ನಾಡು- ನುಡಿ, ನೆಲ-ಜಲ, ಬಾಷೆ, ಉದ್ಯೋಗ, ಸಮಗ್ರ ಸಮಸ್ಯೆಗಳಿಗಾಗಿ ಹೋರಾಟಕ್ಕೆ ಸಿದ್ಧವಾಗಿದೆ. ಮತ್ತು ಶೀಘ್ರವೇ ಕಲ್ಯಾಣ ಕರ್ನಾಟಕದ ಎಲ್ಲಾ ಜಿಲ್ಲಾ, ತಾಲೂಕು, ಹೋಬಳಿ, ಗ್ರಾಮ ಘಟಕಗಳನ್ನು ರಚನೆ ಮಾಡುವುದರ ಮೂಲಕ ಸಾಮಾಜಿಕ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಲು ತಯಾರಾಗಿರುತ್ತೇವೆ, ಮತ್ತು ಕನ್ನಡಕ್ಕಾಗಿ ಶ್ರಮಿಸುವ ಸಾಹಿತಿಗಳು, ಲೇಖಕರು, ಕವಿಗಳು ಮತ್ತು ಶಾಲೆಗಳು ಹಾಗೂ ಕನ್ನಡದ ರಾಜ ಮನೆತನಗಳ ಬಗ್ಗೆ ವಿಶೇಷವಾಗಿ ಜನರಿಗೆ ಅರಿವು ಮೂಡಿಸುವ ಕೆಲಸ ನಮ್ಮದಾಗಿರುತ್ತದೆ.

ಕಲ್ಯಾಣ ಕರ್ನಾಟಕದ ಮೂಲಭೂತ ಸಮಸ್ಯೆಗಳಾದ, ಬಡತನದಿಂದ, ಶೈಕ್ಷಣಿಕವಾಗಿ ಹಿಂದುಳಿದಿದ್ದು. ಹಾಗೂ ಕೈಗಾರಿಕಾ ಕ್ಷೇತ್ರಗಳಲ್ಲಿಯೂ ಸಹ ಹಿಂದೆ ಉಳಿದಿದ್ದು ಇರುತ್ತದೆ. ವಿಶೇಷವಾಗಿ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಅನೇಕ ರಾಜ ಮನೆತನಗಳು ಆಳಿದ ಇತಿಹಾಸವಿದೆ. ಸರ್ಕಾರವು ಇಂತಹ ವಿಷಯಗಳನ್ನು ಪಠ್ಯ ಪುಸ್ತಕಗಳಲ್ಲಿ ಸೇರಿಸಬೇಕು.

ಹಾಗೂ ಕಲ್ಯಾಣ ಕರ್ನಾಟಕದ ಭಾಗದ ಯಾದಗಿರಿ ಜಿಲ್ಲೆಯ, ಸುರಪುರ ಸಂಸ್ಥಾನದ ಸಮಗ್ರ ಅಧ್ಯಯನಕ್ಕಾಗಿ ನಾಲ್ವಡಿ ರಾಜಾ ವೆಂಕಟಪ್ಪ ನಾಯಕರ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪಿಸಬೇಕು, ಹಾಗೂ ರಾಷ್ಟ್ರೀಯ ಹಬ್ಬಗಳ ಪ್ರಯುಕ್ತ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಅನೇಕ ರಾಜ ಮನೆತನಗಳು ಸ್ಥಬ್ದ ಚಿತ್ರಗಳನ್ನು ಮೆರವಣಿಗೆ ಮಾಡಿಸುವಂತೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು.

ಅದಲ್ಲದೇ, ಕಲಬುರಗಿ ವಿಮಾನ ನಿಲ್ದಾಣಕ್ಕೆ ಕನ್ನಡಿಗರ ಶ್ರೇಷ್ಠ ರಾಜ ಮನೆತನವಾದ ರಾಷ್ಟ್ರಕೂಟರ ಮಹಾನ ಪರಾಕ್ರಮಿ ರಾಜ ಅಮೋಘವರ್ಷ ನೃಪತುಂಗರವರ ಹೆಸರಿಡುವಂತೆ ಒತ್ತಾಯಿಸಿ ಸಂಘಟನೆ ಹೋರಾಟ ಮಾಡುತ್ತಿದೆ ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ  ನಡೆದ ಪತ್ರಿಕಾ ಗೋಷ್ಠಿಯಲ್ಲಿ ಚಾಂದಪಾಶಾ ಮುಲ್ಲಾ
ಅಧ್ಯಕ್ಷರು: ಕನ್ನಡ ಜನ್ಮ ಭೂಮಿ ಯುವಸೇನೆ, ಕಲ್ಯಾಣ ಕರ್ನಾಟಕ ಯಾದಗಿರಿ ತಿಳಿಸಿದರು.

City Today News 9341997936