GRAND LAUNCH OF THE MOST PREMIUM EXHIBITION OF ENCHANTING MASTERPIECE JEWELLERY HILIFE JEWELS

Hilife Jewels showcases over 100 top jewellery brands, and famous jewellery designers all under one roof Many jewellery lovers, celebrities, and jewellery lovers grace the grand launch of “hilife jewels exhibition” in Bengaluru one of the most premium jewellery exhibitions in the nation.

Over 100 renowned jewellery brands & jewellery designers are part of the 3-day (26t,27th,28th July) hilife jewels exhibition.

26th July 2024, Bengaluru: Hilife Jewels, the nation’s most premium jewellery exhibition, is currently captivating jewellery enthusiasts in Bengaluru with an unparalleled showcase of exquisite craftsmanship and dazzling gemstones. The event, which commenced on July 26th, is set to continue its splendour until July 28th at the prestigious Hotel Taj West End. Graced by the luminous presence of celebrity Nandita Shweta at its launch, Hilife Jewels has been a beacon of luxury, bringing together a curated collection of India’s top jewellery brands under one roof.

From resplendent gold and diamond ensembles to rare gemstones and silver masterpieces, the exhibition offers an immersive experience for discerning connoisseurs and jewellery lovers alike.

“Hilife Exhibitions has established itself as a leading platform for fashion, lifestyle, and luxury experiences across India and internationally,” said Mr Aby P Dominic, MD & CEO of Hilife Exhibitions. “HILIFE JEWELS is a testament to our commitment to bringing the finest in jewellery to our patrons. We are thrilled to present this extraordinary collection to the discerning audience Bengaluru.” With over 100 renowned jewellery brands and designers participating, the exhibition presents unique opportunity to explore a diverse range of styles, trends, and traditional artistry. Hilife Jewels is not just an exhibition; it’s a celebration of opulence and elegance. About Hilife Exhibitions:

Hilife Exhibitions is India’s largest and most premium exhibition brand specializing in fashion, lifestyle, and luxury. With a global footprint spanning countries like Sri Lanka, Thailand, Dubai, South Africa, Singapore, the UK, and the USA, Hilife has consistently delivered world-class events that cater to the discerning tastes of its clientele.

City Today News 9341997936

“ಜಯನಗರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ಜಯತೀರ್ಥರ ಆರಾಧನಾ ಮಹೋತ್ಸವ ವಿಶೇಷ  ಪೂಜೆ” ಹಾಗೂ ನರ್ತನ ಸೇವೆ

ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಜುಲೈ 25, ಗುರುವಾರ ಬೆಳಗ್ಗೆ ರಾಯರಿಗೆ ಪಂಚಾಮೃತ ಅಭಿಷೇಕ, ಕನಕಾಭಿಷೇಕ, ವಿಶೇಷ ಅಲಂಕಾರ, ಮಹಾಮಂಗಳಾರತಿ ಹಾಗೂ ಅನ್ನದಾನ ಸೇವೆ ಕಾರ್ಯಕ್ರಮಗಳು ನಡೆದವು. ಸಂಜೆಯ ಕಾರ್ಯಕ್ರಮದಲ್ಲಿ ರಥೋತ್ಸವ, ಗಜವಾಹನೋತ್ಸವ, ಅಷ್ಟಾವಧಾನ, ತೊಟ್ಟಿಲು ಪೂಜೆ ಹಾಗೂ ಶ್ರೀ ಜಯತೀರ್ಥರ ಮಧ್ಯಾರಾಧನೆ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ವಾನ್ ಶ್ರೀ ಮಾಲತೇಶ್ ಅವರ ನಿರ್ದೇಶನದಲ್ಲಿ  ನಾಟ್ಯ ಶಂಕರ ನೃತ್ಯ ಶಾಲೆಯ ವಿದ್ಯಾರ್ಥಿಗಳಿಂದ  ನರ್ತನ ಸೇವೆ ಜರುಗಿದವು ಎಂದು ಶ್ರೀ ನಂದಕಿಶೋರ್ ಆಚಾರ್ ಅವರು ತಿಳಿಸಿದ್ದಾರೆ.

City Today News 9341997936

ಕೆ ಎಸ್ ಆರ್ ಟಿ ಸಿಗೆ ಶೀಘ್ರ 2 ಸಾವಿರ ಚಾಲಕ ಕಂ ನಿರ್ವಾಹಕರ ನೇರ ನೇಮಕಾತಿ ಮತ್ತು ವಿವಿಧ ಮಾದರಿಯ ಹೊಸ ಬಸ್‌ಗಳ ಸೇರ್ಪಡೆ

ಬೆಂಗಳೂರು: ಕೆ ಎಸ್ ಆರ್ ಟಿ ಸಿಗೆ ಶೀಘ್ರ 2 ಸಾವಿರ ಚಾಲಕ ಕಂ ನಿರ್ವಾಹಕರ ನೇರ ನೇಮಕಾತಿಯ ಜತೆಗೆ ವಿವಿಧ ಮಾದರಿಯ ಹೊಸ ಬಸ್‌ಗಳ ಸೇರ್ಪಡೆಯಾಗಲಿದ್ದು ಬಳಿಕ ಆವಶ್ಯಕತೆಗೆ ಅನುಗುಣವಾಗಿ ಹಂತ ಹಂತವಾಗಿ ಸಾರಿಗೆ ಸೌಲಭ್ಯ ಕಲ್ಪಿಸಲಾಗುವುದು ಎಂದು ರಾಜ್ಯ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.

City Today News 9341997936

ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ NHM ಒಳ ಗುತ್ತಿಗೆ ನೌಕರರ ಸಂಘವು ಮಣಿಪುರ ರಾಜ್ಯದಲ್ಲಿ NHM ಒಳ ಗುತ್ತಿಗೆ ನೌಕರರು ಖಾಯಂ ಆಗಿರುವಂತೆ ಕರ್ನಾಟಕದಲ್ಲಿಯೂ ಸಹ ಖಾಯಂ ಮಾಡುವಂತೆ ಆಗ್ರಹ.

ಫೆಬ್ರವರಿ -2023 ರಲ್ಲಿ 40 ದಿನಗಳ ಕಾಲ 28000 NHM ಒಳ ಗುತ್ತಿಗೆ ನೌಕರರನ್ನು ಖಾಯಂ ಮಾಡುವಂತೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಮುಷ್ಕರ ನಡೆಸಿರುತ್ತೇವೆ ಅಂದಿನ ಸರ್ಕಾರ ಕೊನೆ ಘಳಿಗೆಯಲ್ಲಿ ನಮ್ಮ ಬೇಡಿಕೆಯನ್ನು ಈಡೇರಿಸದೆ ಕಾಲ ಹರಣ ಮಾಡಿ ಇಂದು ವಿರೋಧ ಪಕ್ಷದಲ್ಲಿ ಕೂರುವಂತಾಗಿದೆ. ಅಂದು ಮುಷ್ಕರದ ವೇದಿಕೆಗೆ KPCC ಅಧ್ಯಕ್ಷರಾದ ಶ್ರೀ ಡಿ ಕೆ ಶಿವಕುಮಾರ್ ಹಾಗೂ ದಿನೇಶ್ ಗುಂಡೂರಾವ್ ರವರು ಆಗಮಿಸಿ ಕೊರೋನ-19 ಮಹಾಮಾರಿ ಕಾಯಿಲೆ ವಿಶ್ವದಾದ್ಯಂತ ಅಪ್ಪಳಿಸಿದ ಸಮಯದಲ್ಲಿ ಆರೋಗ್ಯ ಇಲಾಖೆಯ ಸೇವೆಯನ್ನು ಪರಿಗಣಿಸಿ ನಮ್ಮ NHM ನೌಕರರನ್ನು ಖಾಯಂ ಮಾಡುವುದಾಗಿ ಭರವಸೆ నిడి ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಕಟಿಸಿರುತ್ತಾರೆ.ಇದರಂತೆ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಪ್ರಚಂಡ ಬಹುಮತದೊಂದಿಗೆ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ನವರ ಹಾಗೂ ಉಪ ಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ರವರ ನೇತೃತ್ವದಲ್ಲಿ ಅಧಿಕಾರ ನಡೆಸುತ್ತಿದೆ.ಚುನಾವಣಾ ಪೂರ್ವದಲ್ಲಿ ಪ್ರಣಾಳಿಕೆಯಲ್ಲಿ ಪ್ರಕಟಿಸಿದ 5 ಪ್ರಮುಖ ಭರವಸೆಗಳನ್ನು ಈಗಾಗಲೇ ಯಶಸ್ವಿಯಾಗಿ ಈಡೇರಿಸಿದ್ದು ಇನ್ನು ಅನೇಕ ಬೇಡಿಕೆಗಳನ್ನು ಈಡೇರಿಸಿರುತ್ತಾರೆ. ಇದರಂತೆ NHM ಒಳ ಗುತ್ತಿಗೆ ನೌಕರನ್ನು ಖಾಯಂ ಮಾಡುವಂತೆ ಈಗಾಗಲೇ ಮಾನ್ಯ ಮುಖ್ಯಮಂತ್ರಿಗಳು ಉಪ ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರನ್ನು NHM ಒಳ ಗುತ್ತಿಗೆ ನೌಕರರ ಸಂಘದ ಪದಾಧಿಕಾರಿಗಳು ಭೇಟಿ ಮಾಡಿರುತ್ತೇವೆ.

ಇದರಂತೆ ದಿನಾಂಕ 16-03-2024 ರಲ್ಲಿ ಮಾನ್ಯ ಮುಖ್ಯಮಂತ್ರಿಗಳು ಸೂಕ್ತ ಕ್ರಮ ವಹಿಸಲು ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚಿಸಿರುತ್ತಾರೆ.ಮುಖ್ಯಮಂತ್ರಿಗಳ ನಿರ್ದೇಶನದಂತೆ NHM ಒಳ ಗುತ್ತಿಗೆ ನೌಕರರ ಖಾಯಂ ಕಡತವು ತಯಾರಾಗಿದ್ದು ಸಚಿವ ಸಂಪುಟದಲ್ಲಿ ಅನುಮೋದನೆ ನೀಡುವಲ್ಲಿ ವಿಳಂಬವಾಗುತ್ತಿದೆ. ಇದರಿಂದ ನಮ್ಮ ನೌಕರರು ವಿಚಾಲಿತರಾಗಿರುತ್ತಾರೆ. ಪ್ರಮುಖ ಭರವಸೆಗಳನ್ನು ಈಡೇರಿಸುವ ಜೊತೆಗೆ ಇನ್ನು ಅನೇಕ ಬೇಡಿಕೆಗಳನ್ನು ಈಡೇರಿಸಿರುತ್ತಾರೆ


1) ಅಂಗನವಾಡಿ ಕಾರ್ಯಕರ್ತೆಯರಿಗೆ ನಿವೃತ್ತಿ ಸಮಯದಲ್ಲಿ ಇಡಿಘಂಟು ಯೋಜನ ಜಾರಿ ಮಾಡಿರುತ್ತಾರೆ.

2) ಆಶಾ ಕಾರ್ಯಕರ್ತೆಯರಿಗೆ ಗೌರವ ಧನ ಹೆಚ್ಚಿಸಿರುತ್ತಾರೆ.

3) ಇತ್ತೀಚೆಗೆ ರಾಜ್ಯ ಸರ್ಕಾರಿ ನೌಕರರ ಏಳನೇ ವೇತನ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿ ಮಾಡಿರುತ್ತಾರೆ.

ಇದರಂತೆ ಎಲ್ಲಾ ಬೇಡಿಕೆಗಳಿಗೆ ಸ್ಪಂದಿಸಿ ಜನಮನ್ನಣೆ ಪಡೆದಿರುವ ಸರ್ಕಾರವು ನುಡಿದಂತೆ ನಡೆಯುತ್ತಿದೆ.

ಸರ್ಕಾರಿ ನೌಕರರಿಗೆ ಸಮನಾಗಿ ಯಾವುದೇ ಸೌಲಭ್ಯಗಳನ್ನು NHM ನೌಕರರು ಪಡೆಯದೇ ಅತ್ಯಂತ ಕಡಿಮೆ ಸಂಚಿತ ವೇತನ ಪಡೆದು ಸಾರ್ವಜನಿಕ ಆರೋಗ್ಯ ಸೇವೆಯಲ್ಲಿ ಅನೇಕ ವರ್ಷಗಳಳಿಂದ ಸೇವೆ ನೀಡುತ್ತಾ ಬಂದಿರುತ್ತೇವೆ. ಸಾಮಾಜಿಕ ನ್ಯಾಯದ ಬಗ್ಗೆ ಅಪಾರ ಕಾಳಜಿ ಹಾಗೂ ಅದನ್ನು ಜಾರಿ ಮಾಡುವಲ್ಲಿ ಯಶಸ್ವಿಯಾಗಿರುವ ನುಡಿದಂತೆ ನಡೆಯುತ್ತಿರುವ ಮುಖ್ಯಮಂತ್ರಿಗಳು ಉಪಮುಖ್ಯಮಂತ್ರಿಗಳು ನಮ್ಮ ನ್ಯಾಯಯುತವಾದ ಖಾಯಂ ಬೇಡಿಕೆಯನ್ನು 15-08- 2024 ರ ಒಳಗೆ ಈಡೇರಿಸಬೇಕೆಂದು 28258 NHM ಒಳ ಗುತ್ತಿಗೆ ನೌಕರರು ಆಗ್ರಹಿಸುತ್ತೇವೆ ಎಂದು
ಅಶ್ವತ್ ಹೆಚ್. ಕೆ  ರಾಜ್ಯ ಅಧ್ಯಕ್ಷರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

City Today News 9341997936

ಬೆಂಗಳೂರಿನ  ಶಾಂತಿನಗರದಲ್ಲಿನ, ಅನಧಿಕೃತವಾಗಿ 8 ಮತ್ತು ಅದಕ್ಕಿಂತ ಹೆಚ್ಚಿನ ಅಂತಸ್ತುಗಳನ್ನು ನಿರ್ಮಾಣ ಮಾಡುತ್ತಿದ್ದು, ಬೈಲಾಗಳನ್ನು ಉಲ್ಲಂಘಿಸಿ, ಅನಧಿಕೃತವಾಗಿ ನಿರ್ಮಾಣ ಮಾಡುತ್ತಿರುವ ಕಟ್ಟಡವನ್ನು ಸ್ಥಗಿತಗೊಳಿಸಲು ಅಹ್ಮದ್ ಅಲಿ ಬಿನ್ ಅಬ್ಬಾಸ್ ಅಲಿ ರವರಿಂದ ಕೋರಿಕೆ

ಅಹ್ಮದ್ ಅಲಿ ಬಿನ್ ಅಬ್ಬಾಸ್ ಅಲಿ, ಮತ್ತು ಇತರರು, ನಮ್ಮ ವಕೀಲರಾದ ಶ್ರೀ ಅರ್ಜುನ್ ರಾಮಾ ಖೋತ್ ರವರು ಸ್ವಸ್ತಿಕ್ ಕ್ರಾಸ್ ರೋಡ್, ಶಾಂತಿನಗರ, ಬೆಂಗಳೂರಿನ ಖಾಯಂ ವಾಸಿಯಾಗಿದ್ದು ಈ ಮೂಲಕ ತಿಳಿಸುವುದೇನೆಂದರೆ, ದಿನಾಂಕ: 15.04.2024 ರಂದು ಮಾನ್ಯ ಮುಖ್ಯ ಮಂತ್ರಿ ಸಿದ್ದರಾಮಯ್ಯನವರಿಗೆ, ಉಪ ಮುಖ್ಯ ಮಂತ್ರಿ ಡಿ.ಕೆ ಶಿವಕುಮಾರ್, ಎಮ್.ಎಲ್.ಎ ಹ್ಯಾರೀಸ್ ರವರಿಗೆ, ಮಾನ್ಯ ಪಿ.ಸಿ ಮೋಹನ್ ರವರಿಗೆ, ಹಾಗೂ ಮಾನ್ಯ ಬಿಬಿಎಂಪಿ ಕಮೀಷನರ್, ಬೆಂಗಳೂರು, ಜಂಟಿ ಆಯುಕ್ತರವರಿಗೆ, ಜಂಟಿ ನಿರ್ದೇಶಕರು, ನಗರ ಯೋಜನೆ ಉತ್ತರ ರವರಿಗೆ, ಹಾಗೂ ಇತರರಿಗೆ ಮನವಿ ಸಲ್ಲಿಸಿ, ಶ್ರೀ ಅರುಣ್ ಎಂಬುವರು ಸ್ವತ್ತಿನ ಸಂಖ್ಯೆ: ನಂ. 120, ಸ್ವಸ್ತಿಕ್ ಕ್ರಾಸ್ ರೋಡ್, ಭೀಮಣ್ಣ ಗಾರ್ಡನ್, ಎ.ಟಿ ಹಳ್ಳಿ, ಶಾಂತಿನಗರ, ಬೆಂಗಳೂರು ಇಲ್ಲಿ ಅನಧಿಕೃತವಾಗಿ 8 ಮತ್ತು ಅದಕ್ಕಿಂತ ಹೆಚ್ಚಿನ ಅಂತಸ್ತುಗಳನ್ನು ನಿರ್ಮಾಣ ಮಾಡುತ್ತಿದ್ದು, ಬೈಲಾಗಳನ್ನು ಉಲ್ಲಂಘಿಸಿ, ಅನಧಿಕೃತವಾಗಿ ನಿರ್ಮಾಣ ಮಾಡುತ್ತಿರುವ ಕಟ್ಟಡವನ್ನು ಸ್ಥಗಿತಗೊಳಿಸಲು ಕೋರಿರುತ್ತೇವೆ.

ಅದರಂತೆ ಉಲ್ಲೇಖ (1) ರ ಪತ್ರದಲ್ಲಿ ತಿಳಿಸಿರುವ ಸ್ವತ್ತಿಗೆ ನಕ್ಷೆ ಮಂಜೂರಾತಿ ನೀಡಿರುವುದು ಕಂಡುಬಂದಿರುವುದಿಲ್ಲ. ಹಾಗಾಗಿ ನಾವು ತಿಳಿಸಿರುವ ಸ್ವತ್ತಿಗೆ ನಕ್ಷೆ ಮಂಜೂರಾತಿ ನೀಡಲಾಗಿದೆಯೇ ಎಂಬುದರ ಬಗ್ಗೆ ಪರಿಶೀಲಿಸಿಕೊಂಡು ಉಲ್ಲೇಖ (2), (3) & (4) ರ ಮಾನ್ಯ ಮುಖ್ಯ ಆಯುಕ್ತರವರ ಕಛೇರಿ ಆದೇಶಗಳನ್ವಯ ಮುಂದಿನ ಸೂಕ್ತ ಕ್ರಮ ಕೈಗೊಳ್ಳುವಂತೆ ಅರ್ಜಿಯನ್ನು ಸಲ್ಲಿಸಿರುತ್ತಾರೆ.

ಮುಂದುವರೆದು ನಗರ ಯೋಜನೆ (ಪೂರ್ವ), ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರವರು ಮಾನ್ಯ ಜಂಟಿ ನಿರ್ದೇಶಕರು, (ನಗರ ಯೋಜನೆ ಉತ್ತರ) ಬಿಬಿಎಂಪಿ, ಎನ್.ಆರ್ ವೃತ್ತ, ಬೆಂಗಳೂರು ಹಾಗು ಅಹಮದ್ ಆಲಿ ರವರಿಗೆ ಸದರಿ ವಿಷಯಕ್ಕೆ ಸಂಬಂಧಿಸಿದಂತೆ, ಈಗಾಗಲೇ ಕಟ್ಟಡದ ಮಾಲೀಕರಿಗೆ 2020ថ ម 248(1) 248(2) 2: 31.05.2024 ರಂದು ಮತ್ತು 248(3) ಅನ್ನು ದಿನಾಂಕ: 15.06.2024 ರಂದು ಜಾರಿ ಮಾಡಿ ಕಲಂ 356ರನ್ವಯ ಡೆಮಾಲಿಷನ್ ಆರ್ಡರ್ (Demolish Order) ಜಾರಿಗೊಳಿಸಲು ಕೋರಿ ದಿನಾಂಕ: 25.06.2024 ರಂದು ಮೂಲ ಕಡತವನ್ನು ಕಾರ್ಯಪಾಲಕ ಅಭಿಯಂತರರು, ಶಾಂತಿನರ ವಿಭಾಗ ರವರಿಗೆ ಸಲ್ಲಿಸಲಾಗಿದ್ದು. ಮುಂದಿನ ಕ್ರಮದ ಬಗ್ಗೆ ಮಾಹಿತಿಯನ್ನು ಕಾರ್ಯಪಾಲಕ ಅಭಿಯಂತರರು, ಶಾಂತಿನಗರ ವಿಭಾಗ ರವರ ಕಛೇರಿಯಲ್ಲಿ ಪಡೆಯಬಹುದಾಗಿರುತ್ತದೆ ಎಂದು ತಿಳಿಸ ಅರ್ಜಿಯನ್ನು ಸಲ್ಲಿಸಿದ್ದಾರೆ.

ಹೀಗಿರುವಾಗ ನಾನು ಸದರಿ ಮೇಲೆ ತಿಳಿಸಿರುವ ಸ್ವತ್ತಿನ ಅನಧಿಕೃತ ಕಟ್ಟಡವನ್ನು ನಿರ್ಮಾಣಮಾಡುವ ಕಾರ್ಯವನ್ನು ಸ್ಥಗಿತಗೊಳಿಸಲು ಕೋರಿಯೂ ಸಹ ಅದನ್ನು ನಿಲ್ಲಿಸದೆ ಕಟ್ಟಡದ ಕಾರ್ಯವನ್ನು ಸಂಪೂರ್ಣಗೊಳಿಸಿದ್ದಾರೆ. ಎ.ಇ.ಇ. ಬಿಬಿಎಂಪಿ ಸರಸ್ವತಿ, ಮುನಿರಾಜು ಗೌಡ, ಹಾಗೂ ರಾಥೋಡ್ ರವರಿಗೆ ಹಲವಾರು ಬಾರಿ ಫೋನ್ ಕರೆ ಹಾಗೂ ನೇರವಾಗಿ ಭೇಟಿಮಾಡಿದರೂ ಸಹ ಅನಧಿಕೃತ ಕಟ್ಟಡದ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಲು ನೆರವು ಮಾಡಿರುವುದಿಲ್ಲ. ಸದರಿ ವಿಚಾರವಾಗಿ ಆರ್.ಟಿ.ಐ ದಲ್ಲಿ ಸಂಬಂಧಪಟ್ಟ ವಿಚಾರದಲ್ಲಿ : 2.2.2. (5) 4.5/72/2024-25, 2: 04.07.2024 ರಂತೆ ಅರ್ಜಿ ಸಲ್ಲಿಸಲಾಗಿದೆ. ಹಾಗೂ  ಬಿಬಿಎಂಪಿ ಕಮೀಷನರ್, ಬೆಂಗಳೂರು, ಲಕ್ಷ್ಮಿದೇವಿ ಜಂಟಿ ಆಯುಕ್ತರು, ಬೆಂಗಳೂರು, ಹಾಗೂ ಇತರರಿಗೆ ದಿನಾಂಕ: 03.07.2024, 05.07.2024, 06.07.2024, 24.07.2024 0 – ಅನಧಿಕೃತ ಕಟ್ಟಡಗಳ ನಿರ್ಮಾಣ ಸ್ಥಗಿತ ಕಾರ್ಯದ ಬಗ್ಗೆ ಕೇಳಿದಾಗಿಯೂ ಸಹ ಯಾವುದೇ ಪ್ರಯೋಜನವಾಗಿರುವುದಿಲ್ಲ.

ಹಾಗೂ ಮಾನ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಶ್ರೀ ಸೂರಜ್ ಗೋವಿಂದರಾಜ್ ರವರು “ಬಿಬಿಎಂಪಿ ರವರು ಯೋಜನೆಯನ್ನು ಮಂಜೂರು ಮಾಡಿದ ನಂತರ, ಸಂಬಂಧಪಟ್ಟ ವಾರ್ಡ್ ಅಧಿಕಾರಿ / ಇಂಜಿನಿಯರ್ ಅವರು 30 ದಿನಗಳಿಗೊಮ್ಮೆ ನಿಯತಕಾಲಿಕವಾಗಿ ತಪಾಸಣೆ ನಡೆಸಬೇಕು ಮತ್ತು ನಡೆಸಿದ ತಪಾಸಣೆಯ ಸ್ವರೂಪ, ಮಂಜೂರಾತಿ ಯೋಜೆಗೆ ಅನುಸರಣೆ ಅಥವಾ ಯೋಜನೆಯ ಯಾವುದೇ ಉಲ್ಲಂಘನೆಯನ್ನು ವಿವರಿಸುವ ವರದಿಯನ್ನು ಸಲ್ಲಿಸಬೇಕು, ಎಂಬುದಾಗಿ ಪ್ರಕರಣಯನ್ನು ಹೊರಡಿಸಿದ್ದಾರೆ.

ಅನುಸರಣೆ ಅಥವಾ ಯೋಜನೆಯ ಯಾವುದೇ ಉಲ್ಲಂಘನೆಯನ್ನು ವಿವರಿಸುವ ವರದಿಯನ್ನು ಸಲ್ಲಿಸಬೇಕು, ಎಂಬುದಾಗಿ ಪ್ರಕರಣೆಯನ್ನು ಹೊರಡಿಸಿದ್ದಾರೆ. ಹಾಗೂ ಯಾವುದೇ ಉಲ್ಲಂಘನೆಯ ಸಂದರ್ಭದಲ್ಲಿ ಮಾಲೀಕರು/ ಬಿಲ್ಡರ್‌ಗಳು ಅಥವಾ ಯೋಜನೆ ಮಂಜೂರಾತಿಯನ್ನು ಪಡೆದ ವ್ಯಕ್ತಿಗೆ ತಕ್ಷಣವೇ ನೋಟಿಸ್ ಜಾರಿ ಮಾಡಬೇಕು. ವ್ಯತ್ಯಾಸಗಳನ್ನು ಸೂಚಿಸಿ ಮತ್ತು ಸದರಿ ವ್ಯತ್ಯಾಸಗಳನ್ನು ತೆಗೆದುಹಾಕಲು ಷರತ್ತುಗಳನ್ನು ವಿಧಿಸಬೇಕು ಎಂದು ನ್ಯಾಯಾಲವು ಆದೇಶಿಸಿದೆ.

ಆದರೆ ಇಂದಿನವರೆವಿಗೂ ಸದರಿ ಸ್ವತ್ತಿನ ನಂ. 120, ಸ್ವಸ್ತಿಕ್ ಕ್ರಾಸ್ ರೋಡ್, ಭೀಮಣ್ಣ ಗಾರ್ಡನ್, ಎ.ಟಿ ಹಳ್ಳಿ, ಶಾಂತಿನಗರ, ಬೆಂಗಳೂರು ಇಲ್ಲಿ ಅನಧಿಕೃತವಾಗಿ 8 ಮತ್ತು ಅದಕ್ಕಿಂತ ಹೆಚ್ಚಿನ ಅಂತಸ್ತುಗಳನ್ನು ನಿರ್ಮಾಣ ಮಾಡುತ್ತಿದ್ದು, ಬೈಲಾಗಳನ್ನು ಉಲ್ಲಂಘಿಸಿ, ಅನಧಿಕೃತವಾಗಿ ನಿರ್ಮಾಣ ಮಾಡುತ್ತಿರುವ ಕಟ್ಟಡವನ್ನು ಸ್ಥಗಿತಗೊಳಿಸಲು ಸಾಧ್ಯವಾಗಿರುವುದಿಲ್ಲ.

ಆದ್ದರಿಂದ ಮಾನ್ಯರು ಮೇಲೆ ವಿವರಿಸಿರುವ ಸದರಿ ಸ್ವತ್ತಿನ ಅನಧಕೃತ ಕಟ್ಟಡದ ನಿರ್ಮಾಣದ ಕಾರ್ಯವನ್ನು ಸ್ಥಗಿತಗೊಳಿಸಲು ನೆರವಾಗುವಲ್ಲಿ ಸಹಕರಿಸಬೇಕೆಂದು ಹಾಗೂ ಸದರಿ ಕಾರ್ಯದಲ್ಲಿ ಕಾನೂನು ಉಲ್ಲಂಘನೆ ಮಾಡಿರುವವರ ವಿರುದ್ದ ಸೂಕ್ತ ಕಾನೂನು ರೀತ್ಯ ಕ್ರಮವನ್ನು ತೆಗೆದುಕೊಳ್ಳಲು ನೆರವಾಗಲು ಸದರಿ ಪ್ರಕರಣೆಯನ್ನು ಹೊರಡಿಸಲಾಗಿದೆ ಎಂದು ಅಹ್ಮದ್ ಅಲಿ ಬಿನ್ ಅಬ್ಬಾಸ್ ಅಲಿ, ಹಾಗೂ ಇತರರು ಸ್ವಸ್ತಿಕ್ ಕ್ರಾಸ್ ರೋಡ್, ಶಾಂತಿನಗರ, ಬೆಂಗಳೂರು ರವರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.

City Today News 9341997936