ಕರ್ನಾಟಕ ಸರ್ಕಾರದ ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಉಲ್ಲೇಖ 1 ರಿಂದ 3 ರಲ್ಲಿ ತಿಳಿಸಿರುವಂತೆ ಸುಮಾರು 120 ಕೋಟಿ ಅನುದಾನವನ್ನು ಕರ್ನಾಟಕ ರಾಜ್ಯದಲ್ಲಿ ಹಿಂದುಳಿದ ವರ್ಗಗಳಿಗೆ ಸೇರಿದ ವಗ್ನಿಕುಲ ಕ್ಷತ್ರಿಯ ಮತ್ತು ತಿಗಳ ಜಾತಿಗೆ ಸೇರಿದ ಸಮುದಾಯಗಳು ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಅಂದರೆ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣಕ್ಕಾಗಿ ಬಡ್ಡಿ ರಹಿತ ಸಾಲ ಯೋಜನೆ, ಅರಿವು ಶೈಕ್ಷಣಿಕ ಸಾಲ ಯೋಜನೆ, ಗಂಗಾ ಕಲ್ಯಾಣ ನಿರಾವರಿ ಯೋಜನೆ, ಕಿರು ಸಾಲ ಯೋಜನೆ, ಸ್ವಯಂ ಉದ್ಯೋಗ ವಯಕ್ತಿಕ ಸಾಲ ಯೋಜನೆ, ಚೈತನ್ಯ ಸಹಾಯಧನ ಯೋಜನೆಗಳ ಅಡಿಯಲ್ಲಿ ಬಿಡುಗಡೆಗೊಂಡಂತಹ ಸುಮಾರು 120 ಕೋಟಿಗೂ ಅಧಿಕ ಹಣವನ್ನು ಮಾಜಿ ಕಾಂಗ್ರೆಸ್ ಎಂ.ಎಲ್.ಸಿ ಪಿ.ಆರ್. ರಮೇಶ್ ರವರು ವಗ್ನಿಕುಲ ಕ್ಷತ್ರಿಯ ಸಮುದಾಯಕ್ಕೆ ಯಾವುದೇ ಒಂದು ಶಾಲಾ ಕಾಲೇಜುಗಳಾಗಲಿ, ಸಮುದಾಯಭವನಗಳಾನ್ನಾಗಲೀ ನಿರ್ಮಿಸದೆ ತನ್ನದೇ ಆದ ಕಾಂಗ್ರೆಸ್ ಕಾರ್ಯಕರ್ತರ ಪಟ್ಟಾಲಂ ಕಟ್ಟಿಕೊಂಡು ಹಲವಾರು ವಗ್ನಿಕುಲ ಕ್ಷತ್ರಿಯ ಜಾತಿ ಹಾಗೂ ತಿಗಳ ಜಾತಿಯ ನಕಲಿ ಸಂಘ-ಸಂಸ್ಥೆಗಳ ಹಾಗೂ ನಕಲಿ ಖಾತೆಗಳನ್ನು ಹಾಗೂ ನಕಲಿ ಫಲಾನುಭವಿಗಳನ್ನು ಬಳಸಿಕೊಂಡು ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಹಾಗೂ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಪ್ರಮುಖವಾಗಿ ಕಾಂಗ್ರೆಸ್ ಮುಖಂಡರುಗಳ ಖಾತೆಗಳಿಗೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುವ ನಾಯಕರ ಖಾತೆಗಳಿಗೆ ಕೋಟ್ಯಾಂತರ ಹಣವನ್ನು ವರ್ಗಾಯಿಸಿಕೊಂಡು ಭ್ರಷ್ಟಚಾರವೆಸಗಿರುತ್ತಾರೆ.
ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರ 2013 -14 ರ ಅವಧಿಯಲ್ಲಿ ಸುಮಾರು 85,00,00,000/- ಗಳ ಅನುದಾನವನ್ನು ಸರ್ಕಾರದಿಂದ ಬಿಡುಗಡೆಗೊಳಿಸಿರುತ್ತಾರೆ. ಈ ಕುರಿತು ಈಗಾಗಲೇ ದಿನಾಂಕ:16-09-2022 ರಂದು ಲೋಕಾಯುಕ್ತದಲ್ಲಿ ಕೇಸ್ ಸಂಖ್ಯೆ COMPT/LOK/BCD/3553/2022 ರಂತೆ ಪ್ರಕರಣ ದಾಖಲಾಗಿರುತ್ತದೆ. ಸದರಿ ಭ್ರಷ್ಟಚಾರದಲ್ಲಿ ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯಲ್ಲಿ ವಾಸಿಸುತ್ತಿರುವ ಸುಮಾರು 2 ರಿಂದ 3 ಲಕ್ಷ ಜನಸಂಖ್ಯೆ ಹೊಂದಿರುವ ತಿಗಳ ಜನಾಂಗದವರು ತಿಗಳ ಜಾತಿಯ ನಾಯಕರಾದ ಮಾಜಿ ಎಂ.ಎಲ್.ಎ ನೆ.ಲ. ನರೇಂದ್ರಬಾಬುರವರ ನಾಯಕತ್ವದಲ್ಲಿ ತುಮಕೂರು, ಬೆಂಗಳೂರು ನಗರ ಮತ್ತು ಗ್ರಾಮಾಂತರದಲ್ಲಿ ಕೆಲವು ಶಾಲಾ ಕಾಲೇಜು ಮತ್ತು ಸಮುದಾಯ ಭವನಗಳನ್ನು ನಿರ್ಮಾಣ ಮಾಡಿಕೊಂಡಿರುತ್ತಾರೆ.
ಆದರೆ, ಕರ್ನಾಟಕ ರಾಜ್ಯದಲ್ಲಿ 12 ಜಿಲ್ಲೆಗಳಲ್ಲಿ ವಾಸಿಸುತ್ತಿರುವ 30 ಲಕ್ಷಕ್ಕೂ ಅಧಿಕ ಜನಸಂಖ್ಯೆವುಳ್ಳ ವಗ್ನಿಕುಲ ಕ್ಷತ್ರಿಯ ಜಾತಿಗೆ ಯಾವುದೇ ರೀತಿಯ ಶಾಲಾ-ಕಾಲೇಜುಗಳಾಗಲಿ, ಸಮುದಾಯ ಭವನಗಳನ್ನಾಗಲೀ ನಿರ್ಮಾಣ ಮಾಡದೇ ವಗ್ನಿಕುಲ ಕ್ಷತ್ರಿಯ ನಾಯಕ ಎಂದು ಬಿಂಬಿಸಿಕೊಂಡಂತಹ ಮಾಜಿ ಕಾಂಗ್ರೆಸ್ ಎಂ.ಎಲ್.ಸಿ ಪಿ.ಆರ್.ರಮೇಶ್ ರವರು ಭ್ರಷ್ಟಚಾರದಲ್ಲಿ ತೊಡಗಿದ್ದು ವಗ್ನಿಕುಲ ಕ್ಷತ್ರಿಯ ಸಮಾಜ ಇಂದು ಶೋಷಣೆಗೆ ಒಳಗಾಗಿದೆ.
ಆದ್ದರಿಂದ, ಮಾನ್ಯ ಜಾರಿ ನಿರ್ದೇಶನಾಲಯ ಮೇಲ್ಕಂಡ ಮಾಜಿ ಎಂ.ಎಲ್.ಸಿ ಪಿ.ಆರ್. ರಮೇಶ್, ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಇವರ ಪಟ್ಟಾಲಂ ಮೇಲೆ ಕಾನೂನು ರೀತ್ಯಾ ತನಿಖೆ ನಡೆಸಿ / ಕ್ರಮ ಜರುಗಿಸಿ ಸರ್ಕಾರದ ಹಣವನ್ನು ಸಮುದಾಯದ ಬಳಕೆಗೆ ಉಪಯೋಗವಾಗುವಂತೆ ಮಾಡಿ ಅನ್ಯಾಯಕ್ಕೆ, ವಂಚನೆಗೆ, ಶೋಷಣೆಗೆ ಒಳಗಾಗಿರುವ ವಕ್ನಿಕುಲ ಕ್ಷತ್ರಿಯ ಸಮುದಾಯಕ್ಕೆ ನ್ಯಾಯ ನೀಡಬೇಕು ಎಂದು ಸಂಘದ ಮುಖಂಡರುಗಳ ಉಪಸ್ಥಿತಿಯಲ್ಲಿ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಅಧ್ಯಕ್ಷರಾದ ವರ್ತೂರು ಜೆ.ಕೆ. ಗಿರೀಶ್ ರವರು ಕೋರಿದರು.
ಕಳೆದ 2020- ಹಾಗೂ 2021ರಲ್ಲಿ ಕೋವಿಡ್ ವೇಳೆ ಜನಜೀವನ ಅಸ್ತವ್ಯಸ್ತವಾಗಿದ್ದು ಎಲ್ಲರಿಗೂ ತಿಳಿದಿರುವ ವಿಚಾರವೆ. ಈ ವೇಳೆ ಸಮಾಜ ಸೇವೆ ನೆಪದಲ್ಲಿ ಅಗ್ರವಾಲ್ ಸಮಾಜ (ಕರ್ನಾಟಕ (ರಿ))ದ ಮುಖಂಡರು ಸಾರ್ವಜನಿಕರಿಂದ ಕೋಟ್ಯಾಂತರ ರೂಪಾಯಿ ಹಣ ಪಡೆದಿದ್ದು ಸರ್ಕಾರಕ್ಕೆ ಸುಳ್ಳು ಲೆಕ್ಕ ತೋರಿಸಿ ಮೋಸ ಮಾಡಿದ್ದಾರೆ. ಅಂದಿನ ಅಗ್ರವಾಲ್ ಸಮಾಜದ ಅಧ್ಯಕ್ಷರಾಗಿದ್ದ ಸಂಜಯ್ ಗರ್ಗ್ ಅವರೇ ಮಾಧ್ಯಮಗಳಲ್ಲಿ ಹೇಳುವಂತೆ 9,15000 ಫುಡ್ ಪ್ಯಾಕೆಟ್ಗಳನ್ನು ಜನರಿಗೆ ಉಚಿತವಾಗಿ ನೀಡಿದ್ದಾರೆ. 11,950 ರೇಷನ್ ಕಿಟ್ ಗಳನ್ನು ನೀಡಿದ್ದಾರೆ. 2 ಲಕ್ಷಕ್ಕೂ ಹೆಚ್ಚು ಮಾಸ್ಕ್ಗಳನ್ನು ಉಚಿತವಾಗಿ ಹಂಚಿದ್ದಾರೆ. 1200 ಲೀಟರ್ ಸ್ಯಾನಿಟೈಸರ್, 35 ಸಾವಿರ ಸೋಪ್ಗಳು, ೨೫ ಇನ್ನಾ ಥರ್ಮೋಮೀಟರ್, 3000 ಪಿಪಿ ಕಿಟ್ಗಳನ್ನು ಉಚಿತವಾಗಿ ಸಾರ್ವಜನಿಕರಿಗೆ ನೀಡಿದ್ದಾರೆ. ಅಲ್ಲದೆ ಸುಮಾರು 500 ಟನ್ನಷ್ಟು ತರಕಾರಿಗಳನ್ನು ರೈತರಿಂದ ಖರೀದಿಸಿ ಜನರಿಗೆ ಹಂಚಲಾಗಿದೆ. ಇದಕ್ಕಾಗಿ ಸುಮಾರು 78 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಎಂದು ತಮ್ಮ ವಾರ್ಷಿಕ ಲೆಕ್ಕಪತ್ರದಲ್ಲಿ ತೋರಿಸಿದ್ದಾರೆ.
ಆದರೆ ವಾಸ್ತವವಾಗಿ ನಡೆದಿರುವುದೆ ಬೇರೆಯಾಗಿದೆ. ಕೋವಿಡ್ ವೇಳೆ ಆರ್ಥಿಕವಾಗಿ ಕಷ್ಟದಲ್ಲಿರುವವರಿಗೆ ನೆರವಾಗುವ ಸಲುವಾಗಿ ಅಗ್ರವಾಲ್ ಸಮಾಜದಿಂದ ನೆರವಿನ ಅಭಿಯಾನ ನಡೆಸಲಾಗಿದೆ. ಆದರೆ ಇದನ್ನೇ ನೆಪ ಮಾಡಿಕೊಂಡು ಸಾರ್ವಜನಿಕರಿಂದ ಕೋಟ್ಯಾಂತರ ರೂಪಾಯಿಯನ್ನು ಚಂದಾದ ರೂಪದಲ್ಲಿ ಅಂದಿನ ಅಧ್ಯಕ್ಷ ಸಂಜಯ್ ಗರ್ಗ್, ಅಂದಿನ ಖಜಾಂಚಿ ಸತೀಶ್ ಗೋಯೆಲ್ ಹಾಗೂ ಅಂದಿನ ಕಾರ್ಯದರ್ಶಿ ವಿಜಯ್ ಶರಾಫ್ ಪಡೆದು ಲೂಟಿ ಹೊಡೆದಿದ್ದಾರೆ.
ಹಣವನ್ನು ನೆರವಾಗಿ ಕೆಲವರು ಸಮಾಜದ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದಾರೆ. ಇನ್ನು ಸಾಕಷ್ಟು ಮಂದಿ ನಗದಿನ ರೂಪದಲ್ಲಿ ನೀಡಿದ್ದಾರೆ ಎಂಬುದು ಮೇಲ್ನೋಟಕ್ಕೆ ತಿಳಿಯುತ್ತದೆ. ಇವರೇ ಮಾಧ್ಯಮಗಳಲ್ಲಿ ಹೇಳಿರುವಂತೆ ಇವರು ಜನರಿಗೆ ಉಚಿತವಾಗಿ ನೀಡಿರುವ ಈ ಮೇಲಿನ ವಸ್ತುಗಳಿಗೆ ಕನಿಷ್ಠಾತಿ ಕನಿಷ್ಟ ಬೆಲೆ ನಿಗದಿ ಪಡಿಸಿದರೂ ಸುಮಾರು 10 ಕೋಟಿ ರೂಪಾಯಿಗೂ ಹೆಚ್ಚು ಖರ್ಚಾಗುತ್ತದೆ.
ಆದರೆ ಸಮಾಜದವರು ತಮ್ಮ ವಾರ್ಷಿಕ ಲೆಕ್ಕಪತ್ರದಲ್ಲಿ ಕೇವಲ 78 ಲಕ್ಷ ಖರ್ಚು ಮಾಡಿರುವುದಾಗಿ. ತೋರಿಸಿಕೊಂಡಿದ್ದಾರೆ. ಹಾಗಾದರೆ ಇವರ ಬ್ಯಾಂಕ್ ಖಾತೆಗೆ ಬಂದಿದ್ದ ಹಣವೆಷ್ಟು? ಈ ಮೇಲ್ಕಂಡ ವಸ್ತುಗಳನ್ನು ಯಾವ ವ್ಯಕ್ತಿಯಿಂದ ಅಥವಾ ಸಂಸ್ಥೆಯಿಂದ ಪಡೆದುಕೊಂಡರು? ಅದರ ಬಿಲ್ಗಳು ಎಲ್ಲಿವೆ? ಅದನ್ನು ಯಾಕೆ ಲೆಕ್ಕಪತ್ರದಲ್ಲಿ ತೋರಿಸಿಲ್ಲ? ಇವರು ಸುಳ್ಳು ಲೆಕ್ಕ ತೋರಿಸಿರುವುದು ಯಾಕೆ? ಪ್ರಶ್ನೆಯಾಗಿಯೇ ಉಳಿದುಕೊಂಡಿವೆ.
ನಂತರದ ದಿನಗಳಲ್ಲಿ ಸಂಜಯ್ ಗರ್ಗ್ನಿಂದ ಅಧಿಕಾರ ವಹಿಸಿಕೊಂಡ ಮಹಾವೀರ್ ಗುಪ್ತಾರವರು ಸಹ . ಇದರ ಬಗ್ಗೆ ಗಮನಹರಿಸದೆ ಹಳೆ ಲೆಕ್ಕವನ್ನೇ ಮುಂದುವರೆಸಿಕೊಂಡು ಹೋಗಿದ್ದಾರೆ. ಆ ಮೂಲಕ ಕೋಟ್ಯಾಂತರ ರೂಪಾಯಿ ವಂಚನೆಗೆ ಸಹಕಾರ ನೀಡಿದ್ದಾರೆ ಎಂದು ಆತ್ಮಾರಾಮ್ ಮತ್ತು ಪ್ರಶಾಂತ್ ಗೋಯೆಂಕಾ ರವರು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಘೋಷ್ಠಿಯಲ್ಲಿ ತಿಳಿಸಿದರು.
ಲೇಬರ್ ಆಕ್ಟ್ ಮತ್ತು ಇಂಡಸ್ಟ್ರಿಯಲ್ ಆಕ್ಟ್ ನಲ್ಲಿರುವ ಹಾಗೆ ಇ.ಸಿ.ಐ., ಪಿ.ಎಫ್ ಬೇಸಿಕ್, ಡಿ.ಎ, ವೀಕ್ಲಿ ಆಫ್, ಜಿ.ಎಸ್.ಟಿ., ಸಿ.ಎಸ್.ಟಿ. ಇಷ್ಟೂ ಸಹ ನಮ್ಮ ಕಾನೂನಿನ ಅಡಿಯಲ್ಲಿರುವ ರೀತಿ ಅಲ್ಲದೆ ಬೇರೆ ಕಾನೂನಿನ ಚೌಕಟ್ಟನ್ನು ಮೀರಿ ಹಲವು ದೊಡ್ಡ ಕಂಪನಿಗಳು ವ್ಯವಹರಿಸುತ್ತಿರುವ ಬಗ್ಗೆ ಪತ್ರಿಕಾ ಗೋಷ್ಥಿ.
ಪಿ.ಎಫ್. 25%, ಇ.ಎಸ್.ಐ.4%, ಜಿ.ಎಸ್.ಟಿ. 9ಮ ಸಿ.ಎಸ್.ಟಿ. 9% ಇವೆಲ್ಲವೂ ಸಹ ಮೇಲೆ ತಿಳಿಸಿದ ಕಾನೂನಿನ ಚೌಕಟ್ಟಿನಲ್ಲಿರುತ್ತದೆ. ಆದರೆ ಈ ಮೇಲೆ ತಿಳಿಸಿದ ಹಾಗೆ ಯಾವುದೇ ರೀತಿಯಲ್ಲಿ ವ್ಯವಹರಿಸದೆ ಅವ್ಯವಹಾರಿಕ ಅಂದರೆ ಕಾನೂನಿನ ವಿರುದ್ಧವಾಗಿ ಈಗ ನಾವು ಲೇಬರ್ ಆಕ್ಟ್ ಪ್ರಕಾರ ವ್ಯವಹರಿಸಬೇಕೆ ಅಥವಾ ದೊಡ್ಡ ಕಂಪನಿಗಳ ಪ್ರಕಾರ ವ್ಯವಹರಿಸಬೇಕೆ ಎಂದು ತೀರ್ಮಾನಿಸಲು ನನಗೆ ಗೊಂದಲಮಯವಾಗಿರುತ್ತದೆ.
ದೊಡ್ಡ ಕಂಪನಿಗಳ ಸನಿಹದಲ್ಲಿ ಸಿಲುಕಿರುವ ನಮ್ಮಂತಹ ಸಣ್ಣಪುಟ್ಟ ಸೆಕ್ಯೂರಿಟಿ ಕಂಪನಿಗಳು ಕಾನೂನಿನ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಲು ಆಗದೆ ದೊಡ್ಡ ಕಂಪನಿಗಳ ಹಿಡಿತದಲ್ಲಿ ಸಿಲುಕಿ ಒದ್ದಾಡುವಂತಾಗಿದೆ. ದೊಡ್ಡ ಕಂಪನಿಗಳ ಪ್ರಕಾರ ಕಾರ್ಯನಿರ್ವಹಿಸಲು ಪ್ರಾರಂಭಿಸಿದರೆ ನಮ್ಮಂತಹ ಸಣ್ಣ ಕಂಪನಿಗಳಿಗೆ ಹಾನಿಕರವಾಗಿರುತ್ತದೆ. ಆದ್ದರಿಂದ ಕೂಲಿ ಕಾರ್ಮಿಕರಿಗೆ ಮತ್ತು ಸೆಕ್ಯೂರಿಟಿ ಗಾರ್ಡ್ಗಳಿಗೆ ಯಾವುದೇ ರೀತಿಯ ಸರ್ಕಾರಿ ಸೌಲಭ್ಯಗಳು ಕಾನೂನು ರೀತಿಯಾಗಿ ಸಿಗದೆ ಅನ್ಯಾಯಗೊಳ್ಳಗಾಗುತ್ತಿದ್ದಾರೆ. ಅಂದರೆ ಓವರ್ ಟೈಂ ಡ್ಯೂಟಿ, (8 ಗಂಟೆಗಳ ಬದಲು 12 ಗಂಟೆ) ಕೆಲಸ ಮಾಡಿಸುತ್ತಿದ್ದಾರೆ.
ಇ.ಸಿ.ಐ., ಪಿ.ಎಫ್., ಸಿಗದೆ ಇರುವುದು. ಈಗ ಸದ್ಯದ ಪರಿಸ್ಥಿತಿಯಲ್ಲಿ ನಾವು ನೀಡುತ್ತಿರುವ ಟ್ಯಾಕ್ಸ್, ಜಿ.ಎಸ್.ಟಿ., ಸಿ.ಎಸ್.ಟಿ. ಅತೀ ದುಬಾರಿಯಾಗಿದ್ದು, ಜಿ.ಎಸ್.ಟಿ ಅಥವಾ ಸಿ.ಎಸ್.ಟಿಯನ್ನು ಕಡಿತಗೊಳಿಸಬೇಕೆಂದು ಅಹವಾಲು ಕೋರುತ್ತಾ ಏಕೆಂದರೆ ಕೂಲಿ ಕಾರ್ಮಿಕರು ಆಯಾ ಆಯಾ ಲೋಕಲ್ ನಲ್ಲಿರುವವರೆಂದು ಕೇಂದ್ರಕ್ಕೆ ಸಂಬಂದಿಸುವುದಿಲ್ಲವೆಂದು ತಿಳಿಸುತ್ತೇನೆ. ಅದೇ ರೀತಿ 25% ಪಿ.ಎಫ್. ಬದಲು 12% ಪಿ.ಎಫ್. ಕಟ್ಟಲು ಬದಲಾಯಿಸಿ ತರಲು ಒತ್ತಾಯಿಸುತ್ತೇವೆ.
ಹಲವು ದೊಡ್ಡ ಕಂಪನಿಗಳು ಸೆಕ್ಯೂರಿಟಿ ಒಪ್ಪಂದಗಳನ್ನು ಮಾಡಿಕೊಂಡು ಅಧೀನ ಕಂಪನಿಗಳಿಗೆ ತಿಂಗಳ ತಿಂಗಳ ಸೆಕ್ಯೂರಿಟಿ ಗಾರ್ಡ್, ಸೂಪರ್ ವೈಸರ್, ಗಾರ್ಡ್ಸ್ಗಳ ಸಂಬಳವನ್ನು ನೀಡಲು ನಿರಾಕರಿಸುತ್ತಾರೆ. ಹಾಗೆಯೇ ಸುಮಾರು ತಿಂಗಳುಗಳ ಬಾಕಿಯನ್ನು ಕೊಡದೆ ಸತಾಯಿಸುತ್ತಿರುತ್ತಾರೆ.ಲೇಬರ್ ಅಧಿಕಾರಿಗಳು ಇಂತಹ ದೊಡ್ಡ ಕಂಪನಿಗಳ ಮೇಲೆ ಯಾವುದೇ ರೀತಿಯ ಕ್ರಮ ತೆಗೆದುಕೊಳ್ಳಲು ನಿರಾಕರಿಸುತ್ತಾರೆ. ಅಂದರೆ ಪರೋಕ್ಷವಾಗಿ ಅವರು ಈ ದೊಡ್ಡ ಕಂಪನಿಗಳ ಪರವಾಗಿರುತ್ತಾರೆಂದು ತಿಳಿಯಪಡಿಸುತ್ತಿದ್ದೇನೆ.
ಯಾವುದೇ ದೊಡ್ಡ ಕಂಪನಿಗಳು ಈ ರೀತಿಯಾದಂತಹ ನಿರಂಕುಶ (ಡಿಕ್ಟೇಟರ್) ಆಡಳಿತಕ್ಕೆ ಕಡಿವಾಣ ಹಾಕುವಂತೆ ಸಂಬಂಧಿಸಿದ ಪ್ರಾಧಿಕಾರಕ್ಕೆ ನಮ್ಮ ಮನವಿಯನ್ನು ಮುಟ್ಟುವಂತೆ ಮಾಡಲು ನಮ್ಮ ಈ ಪತ್ರಿಕೋದ್ಯಮಗಳ ಸಮ್ಮುಖದಲ್ಲಿ ವಿನಂತಿಸುತ್ತೇವೆ ಎಂದು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಥಿಯಲ್ಲಿ ಭೀಮ್ಸ್ ಸೆಕ್ಯೂರಿಟಿ ಸರ್ವಿಸ್ ನ ಮ್ಯಾನೇಜಿಂಗ್ ಪಾರ್ಟ್ನರ್ ಆದ ಸಿ. ಆರ್. ಶೆಟ್ಟ್ ಯವರು ತಿಳಿಸಿದರು
ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯ ವಿವರ :
ದೇಶ ಸೇವೆ ಮಾಡಿದ ದಿವಂಗತ ಮಾಜಿ ಸೈನಿಕ ಕ, ಲಕ್ಷ್ಮಣ್ ರಾವ್, ಧರ್ಮಪತ್ನಿ 92 ವರ್ಷದ ಶ್ರೀಮತಿ. ಕೆ. ನಿರ್ಮಲ ಬಾಯಿ ವಾಸ : ನಂ.4/586, ಕೆಂಪಯ್ಯ ಬ್ಲಾಕ್, ವೆಂಕಟರಂಗಪುರ, ಪ್ಯಾಲೇಸ್ ಗುಹಳ್ಳಿ, ಬೆಂಗಳೂರು – 560 003, (ಸೆಲ್ ನಂ.9900580761 / 9980875997) ಆದ ನನಗೆ ಬಿ.ಜೆ.ಪಿ. ಪಕ್ಷದ ಎ.ಎಚ್. ಆನಂದ್ ಎಂಬಾತನು ನನ್ನ ಸ್ವಯಾರ್ಜಿತ ಮನೆಯನ್ನು ರೂ.70 ಲಕ್ಷಗಳಿಗೆ ಖರೀದಿಸಿ, ರೂ.28 ಲಕ್ಷ ಹಣ ನೀಡಿ ಬಾಕಿ ರೂ.42 ಲಕ್ಷ ಕೊಡುವುದಾಗಿ ನಂಬಿಸಿ, ಆತನ ಹೆಸರಿಗೆ ನೋಂದಣಿಸಿ, ಲಿಟಿಗೇಶನ್ ಮುಚ್ಚಿ ಹಾಕಿ, ಎಸ್.ಬಿ.ಐ. ಬ್ಯಾಂಕಿನಲ್ಲಿ ಅಡಮಾನ ರೂ.50 ಲಕ್ಷ ಪಡೆದು, ಮನೆಯನ್ನು ಲಪಟಾಯಿಸಲು ನನಗೆ ಮೋಸ, ವಂಚನೆ, ಜೀವ ಬೆದರಿಕೆ, ಇತ್ಯಾದಿಗಳ ಬಗ್ಗೆ ಈ ಮೂಲಕ ಮನವಿ ಮಾಡಿರುವುದನ್ನು ತಾವುಗಳು ಗಮನಿಸಿ, ತಮ್ಮ ದಿನಪತ್ರಿಕೆ, ಮಾಧ್ಯಮ ಇತ್ಯಾದಿಗಳ ಮೂಲಕ ಸೂಕ್ತವಾಗಿ ಪ್ರಕಟಿಸಿ ನೊಂದ ನನಗೆ ನ್ಯಾಯ, ರಕ್ಷಣೆ ದೊರಕಿಸಿಕೊಡಬೇಕೆಂದು ತಮ್ಮಲ್ಲಿ ವಿಶ್ವಾಸವಿಟ್ಟು ಕೈಮುಗಿದು ವಿನಂತಿಸಿಕೊಳ್ಳುತ್ತೇನೆ.
ಇದೇ ಬೆಂಗಳೂರು ಉತ್ತರ, ಯಲಹಂಕ ಘಟಕದ ಬಿ.ಜೆ.ಪಿ. ಪಕ್ಷದ ಸಂಚಾಲಕ, ರಾಜಾನುಕುಂಟೆ ಪೆಟ್ರೋಲ್ ಬಂಕ್ ಮಾಲೀಕ, ಎ.ಎಚ್, ಆನಂದ್, ಸನ್.ಆಫ್. ಹನುಮಂತೇಗೌಡ, ಆತನ ಬ್ರೋಕರ್ ಪ್ಯಾಲೇಸ್ ಗುಟ್ಟಹಳ್ಳಿಯ ಶಿವಕುಮಾರ್ ಮತ್ತು ಜಯಬಾಲ ಇವರುಗಳು ನಾನು ವಾಸ ಮಾಡುತ್ತಿರುವ ಈ ಮೇಲೆ ತಿಳಿಸಿರುವ ಸ್ವಯಾರ್ಜಿತವಾದ ನನ್ನ ಮನೆಯನ್ನು ದಿನಾಂಕ :05-04-2014 ರಂದು ರೂ.70 ಲಕ್ಷಕ್ಕೆ ವ್ಯವಹಾರ ಮಾಡಿ ರೂ.15 ಲಕ್ಷ ಹಣವನ್ನು ಮುಂಗಡವಾಗಿ ನೀಡಿ ಬಾಕಿ ಉಳಿಕೆ ಹಣ ರೂ.55 ಲಕ್ಷ್ಮಿ ನೊಂದಣಿಯ ಸಮಯದಲ್ಲಿ ಕೊಡುವುದಾಗಿ ಭರವಸೆ ನೀಡಿ, ನಂಬಿಸಿ, ನಾನಾ ಕಷ್ಟಗಳಿಗೆ ಸಿಲುಕಿಸಿ ನನ್ನ ಅನಾರೋಗ್ಯಕ್ಕೆ ಕಾರಣರಾಗಿರುತ್ತಾರ.
ದಿನಾಂಕ : 01-08-2014 ಆಸ್ಪತ್ರೆಯಲ್ಲಿರುವಾಗ ನನಗೆ ಬಾಕಿ ರೂ.55 ಲಕ್ಷ ಹಣ ಕೊಡುವುದಾಗಿ ನಂಬಿಸಿ, ಮೊದಲೆ ತಯಾರು ಮಾಡಿದ ಕ್ರಯಪತ್ರಕ್ಕೆ ಓದಲು ಅವಕಾಶ ನೀಡದ ತುರ್ತು ನೆಪ ಹೇಳಿ ನನ್ನ ಸಹಿ ಪಡೆದು, ನೋಂದಣಿ ಶುಲ್ಕ, ಕ್ರಯಪತ್ರಗಳ ಶುಲ್ಕ, ಅದಾಯ ತೆರಿಗೆ ಇತ್ಯಾದಿ ಉಳಿಸುವ ಸಂಚು ಮಾಡಿ ನನ್ನ ಮನೆಯನ್ನು ಕೇವಲ ರೂ.28.70 ಲಕ್ಷಕ್ಕೆ ಆತನ ಹೆಸರಿಗೆ ನೋಂದಣಿ ಮಾಡಿಸಿ, ನಾನಾ ಸಬೂತು ಹೇಳಿ, ಕ್ಷಮೆಯಾಚಿಸಿ ಕೇವಲ ರೂ.13 ಲಕ್ಷ ಹಣ ನೀಡಿ ಬಾಕಿ ರೂ.42 ಲಕ್ಷ ಹಣ ಮಾರನೆಯ ದಿನ ಕೊಡುವುದಾಗಿ ಭರವಸೆ ನೀಡಿ ತಲೆ ತಪ್ಪಿಸಿಕೊಂಡಿರುತ್ತಾರೆ.
ನೊಂದ ನಾನು ಪೊಲೀಸರಿಗೆ ದೂರು ಕೊಡುವುದಾಗಿ ಸೀರಿಯಸ್ ಆಗಿ ಎಚ್ಚರಿಕೆ ನೀಡಿದ ಕಾರಣ ದಿನಾಂಕ 11-09-2014 ರಂದು ಬಾಕಿ ರೂ.42 ಲಕ್ಷ ಹಣ ನನ್ನ ಸ್ವಾಧೀನಾನುಭವದಲ್ಲಿರುವ ಮನೆಯನ್ನು ಆತನ ಸ್ವಾಧೀನಕ್ಕೆ ಪಡೆಯುವಾಗ ಕೊಡುವುದಾಗಿ ಎ.ಎಚ್. ಆನಂದ್ ಮತ್ತು ಆತನ ಬೋಕರ್ಗಳು ಸಹಿ ಮಾಡಿರುವ ಕರಾರು ಪತ್ರಕ್ಕೆ, ಅನಾರೋಗ್ಯದಿಂದ ಹಾಸಿಗೆ ಹಿಡಿದ ನನ್ನ ಮನೆಯಲ್ಲಿ ನನ್ನ ಸಹಿಯನ್ನು ಪಡೆದು ಅದರಲ್ಲಿರುವ ಟೈಪಿಂಗ್ ತಪ್ಪುಗಳನ್ನು ತೋರಿಸಿ ಆನಂದ್ ಸಹಿ ಮಾಡಿಸಿ ತಂದುಕೊಡುವುದಾಗಿ ಬೋಕರ್ಗಳ ಮೂಲಕ ಪಡೆದುಕೊಂಡ ಹಿಂದಿರುಗಿಸದೆ ಕೇವಲ ನೋಟರಿ ಕಾಪಿ ನೀಡಿ ಮೋಸ ಮಾಡಿರುತ್ತಾರೆ. ಕರಾರು ಪತ್ರ ಇಲ್ಲಿಯತನಕ
ಇದರ ಬಗ್ಗೆ ಅನೇಕ ಬಾರಿ ಮನವಿ ಮಾಡಿ ಲೀಗಲ್ ನೋಟೀಸ್ ನೀಡಿದ ಕಾರಣ ನನ್ನ ಮೇಲೆ ದ್ವೇಷ, ಅಸೂಯೆ ಬೆಳೆಸಿ ನನ್ನ ಮನೆಯನ್ನು ಆತನಿಗೆ ಮೊದಲು ಒಪ್ಪಿಸಿ ನಂತರ ಬಾಕಿ ರೂ.42 ಲಕ್ಷ ಹಣ ಕೇಳಬೇಕೆಂದು ನನಗೆ ಧಮ್ಮಿ, ಜೀವ ಬೆದರಿಕೆ ಹಾಕಿರುತ್ತಾರೆ. ಈ ವಿಷಯದಲ್ಲಿ ನಾನು ಹಲವಾರು ಗಣ್ಯ ವ್ಯಕ್ತಿಗಳಿಗೆ ರಾಜಕೀಯ ಮುಖಂಡರುಗಳಿಗೆ ಇತರರಿಗೆ ದೂರು ನೀಡಿದಾಗ ನನ್ನ ಮನೆಯ ಬಾಗಿಲು
ಹೊಡೆದು ಅತಿಕ್ರಮ ಪ್ರವೇಶ ಮಾಡುವುದಾಗಿ ಹೆದರಿಸಿದಾಗ, ನನಗೆ ಪೋಲೀಸರ ರಕ್ಷಣೆ ಸಿಗಿದ ಕಾರಣ ಮಾನ್ಯ ನ್ಯಾಯಾಲಯಕ್ಕೆ ಮೊರೆ ಹೋದಾಗ ಅದರ ಆದೇಶದ ಪ್ರಕಾರ ಎ.ಎಚ್. ಆನಂದ್ ಮತ್ತು ಬ್ರೋಕರ್ ಗಳ ವಿರುದ್ಧ ವೈಯಾಲಿಕಾವಲ್ ಪೊಲೀಸರು ಕೂಲಂಕುಶ ವಿಚಾರಣೆ ನಡೆಸಿ, ಕ್ರಿಮಿನಲ್ ಕೇ 127/16, ಸಿ.ಸಿ. ನಂ.2915/19: ದಿನಾಂಕ: 08-08-2016 ಹಾಗೂ ದಿನಾಂಕ : 19-09-2022 ರಲ್ಲಿ ಕ್ರೈ ಕೇಸ್ ಎಫ್.ಐ.ಆರ್, ನಂ.114/22 ದಾಖಲಾಗಿರುತ್ತದೆ.
ಇದರಿಂದ ನನ್ನ ಮೇಲೆ ಸೇಡು ತೀರಿಸಿಕೊಳ್ಳಲು, ನನ್ನ ಮನೆಯನ್ನು ಲಪಟಾಯಿಸಲು ಪ್ರಭಾವಿತ ರಾಜಕೀಯ ವ್ಯಕ್ತಿಗಳ ಮೂಲಕ, ರಾಜಾನುಕುಂಟೆ ಎಸ್.ಬಿ.ಐ. ಬ್ಯಾಂಕ್, ಬ್ರಷ್ಟ ಅಧಿಕಾರಿಗಳ ಜೊತೆ ಶಾಮೀಲಾಗಿ ಅವರಿಗೆ ಹಣದಾಸೆ ನೀಡಿ ಲಿಟಿಗೇಷನ್ ಇದ್ದರೂ ಮುಚ್ಚಿ ಹಾಕಿ ಕಾನೂನು ವಿರುದ್ಧವಾಗಿ ನನ್ನ ಸ್ವಾಧೀನ ಅನುಭವದಲ್ಲಿರುವ ನನ್ನಮನೆಯನ್ನು ನನ್ನ ಅನುಮತಿ ಇಲ್ಲದ ಅಡವಿಟ್ಟು, ರೂ.50 ಲಕ್ಷ ಹಣಪಡೆದರೂ ನನಗೆ ಕೊಡಬೇಕಾದ ಬಾಕಿ ರೂ.42 ಲಕ್ಷ ಹಣ ನೀಡದೆ ಮನೆಯನ್ನು ಆತನ ವಶಕ್ಕೆ ಪಡೆಯದ ಮೋಸ ವಂಚನೆ, ಜೀವ ಬೆದರಿಕೆ ಇತ್ಯಾದಿ ಮುಂದುವರೆಸುತ್ತಿದ್ದಾನೆ.
ನನ್ನ ಸ್ವಾಧೀನದಲ್ಲಿರುವ ಮನೆ ವಿವಾದಾತ್ಮಕವಾಗಿರುವುದು ಗೊತ್ತಿದ್ದರೂ ವಿಚಾರಿಸದೆ ನನ್ನ ಮನೆಯನ್ನು ಅಡವಿಟ್ಟು, ಕಾನೂನು ಬಾಹಿರವಾಗಿ ಭೋಗ್ಯ ಸಾಲ ಕೊಟ್ಟಿರುವ ಬಗ್ಗೆ ರಾಜಾನುಕುಂಟೆ, ಬ್ಯಾಂಕ್ ಅಧಿಕಾರಿಗಳ ವಿರುದ್ಧ ಉನ್ನತ ಅಧಿಕಾರಿಗಳಿಗೆ ಓಂಬಡ್ಸ್ ಮನ್, ರಾಜ್ಯಪಾಲಕರಿಗೆ ಇತರರಿಗೆ ದೂರು ನೀಡಿದ್ದರೂ ಯಾರೂ ಯಾವುದೇ ರೀತಿಯ ಕಾನೂನು ಕ್ರಮ ಜರುಗಿಸಿದೆ ನನಗೆ ಮಾನಸಿಕವಾಗಿ, ದೈಹಿಕವಾಗಿ ಕಿರುಕುಳ ನೀಡಿ ನನ್ನ ಆರೋಗ್ಯ ಹದಗೆಟ್ಟಿರುವುದಕ್ಕೆ ಮುಖ್ಯ ಕಾರಣ ಸದರಿ ಎ.ಎಚ್.
ಸದರಿ ಎ.ಎಚ್. ಆನಂದ್ ಆತನ ಸ್ವಾರ್ಥಕ್ಕೆ ಹಣದಾಸೆಗೆ ಬಿ.ಜೆ.ಪಿ. ರಾಜಕೀಯ ದುರುಪಯೋಗ, ದರ್ಪ, ದೌರ್ಜನ್ಯ, ಗೂಂಡಾಗಿರಿ, ಪ್ರದರ್ಶಿಸಿದ ನ್ಯಾಯದ ದಾರಿ ತಪ್ಪಿಸಲು ಪೊಲೀಸರಿಗೆ ಸುಳ್ಳು, ತಪ್ಪು ಮಾಹಿತಿ, ತಿಳುವಳಿಕೆ ನೀಡಿ ನನ್ನನ್ನು ಬಲಿಪಶು ಮಾಡಿ, ಮನೆಯನ್ನು ಲಪಟಾಯಿಸಲು ಮಾಡುತ್ತಿರುವ ಕಪಟ, ಕುತಂತ್ರಗಳ ಬಗ್ಗೆ ಸದರಿ ಎ.ಎಚ್. ಅನಂದ್ನನ್ನು ಪಕ್ಷದಿಂದ ಉಚ್ಚಾಟನೆ ಶಿಸ್ತು ಕ್ರಮ ಜರುಗಿಸಿ ನೊಂದ ನನಗೆ ನ್ಯಾಯ, ರಕ್ಷಣೆ ದೊರಕಿಸಿ ಕೊಡಲು ಸಹಾಯ ಮಾಡುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಧಿಕಾರಿಗಳಿಗೆ, ಬಿ.ಜೆ.ಪಿ. ಪಕ್ಷದ ಹಿರಿಯ ಮುಖಂಡರುಗಳಿಗೆ, ನಾಯಕರಿಗೆ ಅನೇಕ ಬಾರಿ ಮನವಿ ಮಾಡಿ ವಿನಂತಿಸಿದ್ದರೂ ಯಾವುದೇ ಪ್ರಯೋಜನವಾಗದೆ ಕಳೆದ 8 ವರ್ಷಗಳಿಂದ ಸುಮಾರು 1 ಕೋಟಿ ಹಣ ನಷ್ಟ ಮಾಡಿ ನನಗೆ ಮಾನಸಿಕ ಕಿರುಕುಳ, ಆರ್ಥಿಕ ಸಂಕಷ್ಟಗಳಿಂದ ನೊಂದ ನನಗೆ ತೀವ್ರ ಹೃದಯ, ಶ್ವಾಸಕೋಷ, ಅಘಾತವಾಗಿ ಜಯದೇವ ಆಸ್ಪತ್ರೆಯಲ್ಲಿ ದಿ : 09-12-2022 ರಿಂದ 14-12-2022 ವರೆಗೆ ಚಿಕಿತ್ಸೆ ಪಡೆದು ಈಗ ಬಂದಿರುತ್ತೇನೆ. ಈ ಅನಾಹುತಗಳಿಗೆ ಸದರಿ ಎ.ಎಚ್. ಆನಂದ್ ಮೂಲ ಕಾರಣ,
ಸದರಿ ಎ.ಎಚ್. ಆನಂದ್ ಆತನ ರಾಜಕೀಯ ದುರುಪಯೋಗ, ಮೋಸ, ಗೂಂಡಾಗಿರಿ ಇತ್ಯಾದಿ ಮುಚ್ಚಿ ಹಾಕಲು ನನಗೆ ಜೀವ ಬೆದರಿಕೆ ಹಾಕುತ್ತಿರುವ, ಅಮಾಯಕಳಾಗಿರುವ, ಈ ಮೇಲೆ ತಿಳಿಸಿರುವ ನನ್ನ ಗಂಭೀರ ಪರಿಸ್ಥಿತಿಯನ್ನು ತಾವುಗಳು ಬಹಿರಂಗಪಡಿಸಿ ಸಂಬಂಧಪಟ್ಟ ರಾಜಕೀಯ ವ್ಯಕ್ತಿಗಳ, ಗಣ್ಯವ್ಯಕ್ತಿಗಳ, ವಿರೋಧಪಕ್ಷದವರ ಸಾಮಾಜಿಕ ಹೋರಾಟಗಾರರ ಇತರರ ಮನದಟ್ಟಾಗುವಂತೆ ಗಮನ ಸೆಳೆದು ಅಮಾಯಕಳಾಗಿ ನೊಂದ ಮಾಜಿ ಸೈನಿಕರ ಪತ್ನಿ ಅನಾರೋಗ್ಯದಿಂದ ನರಳುತ್ತಿರುವ ನನಗೆ ನ್ಯಾಯ, ರಕ್ಷಣೆ, ತಾವುಗಳು ದೊರಕಿಸಿಕೊಡುವಿರೆಂದು ನಂಬಿರುತ್ತೇನೆ. ಈ ನನ್ನ ಮನವಿಗೆ ಸಂಬಂಧಪಟ್ಟ ದಾಖಲೆಗಳನ್ನು ಲಗತ್ತಿಸಿರುತ್ತೇವೆ ಎಂದು ಶ್ರೀಮತಿ. ಕೆ. ನಿರ್ಮಲಬಾಯಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಆನೇಕಲ್ ಕಲ್ಲು ಬಾಳು ಗ್ರಾಮದ ನಿಸರ್ಗ,ನಂದನವನ, ಸೇರಿದಂತೆ ಬಡಾವಣೆಗಳಲ್ಲಿ ಅಕ್ರಮವಾಗಿ ಪಾರ್ಕ್, ಸಿಎ ನಿವೇಶನಗಳ ಮಾರಾಟ: ನೂರಾರು ಕೋಟಿ ರೂ ಅವ್ಯವಹಾರ ಸಮಗ್ರ ತನಿಖೆಗೆ ಒತ್ತಾಯ ನಿರ್ಮಲ ನಗದ
ಬೆಂಗಳೂರು,ನ,3, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಕಲ್ಲು ಬಾಳು ಗ್ರಾಮಪಂಚಾಯತ್ ನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಉದ್ಯಾನವನ ಮತ್ತು ಸಾರ್ವಜನಿಕ ಉದ್ದೇಶಕ್ಕೆ ಮೀಸಲಾದ ನಿವೇಶಗಳನ್ನು (10.5ಎಕರೆ) ನಿರ್ಮಾಣ್ ಶೆಲ್ಕರ್ ರಿಯಲ್ ಎಸ್ಟೇಟ್ ಸಂಸ್ಥೆ ಭಾರೀ ಪ್ರಮಾಣದಲ್ಲಿ ಮಾರಾಟ ಮಾಡಿದೆ. ನಿವೇಶನ ಖರೀದಿಸಿದವರಿಗೆ 150 ಕೋಟಿ ರೂಪಾಯಿಗೂ ಹೆಚ್ಚಿನ ನಷ್ಟವಾಗಿದೆ ಎಂದು ವಂಚನೆಗೊಳಗಾದವರು ಆರೋಪಿಸಿದ್ದಾರೆ.
“ನೂರಾರು ಕೋಟಿ ರೂಪಾಯಿ ಅಕ್ರಮ ನಡೆದಿರುವ ಪ್ರಕರಣದ ಬಗ್ಗೆ ತಕ್ಷಣವೇ ಬಿ.ಎಂ.ಆರ್.ಡಿ.ಎ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕೂಡಲೇ ಎಫ್.ಐ.ಆರ್. ದಾಖಲಿಸಿ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಲ್ಲುಬಾಳು ಗ್ರಾಮ ಪಂಚಾಯತ್ ಸದಸ್ಯ, ಸದಾನಂದ ಮತ್ತು ವಂಚನೆಗೊಳಗಾದ ನಿವೇಶನ ಮಾಲೀಕರು, ಸರ್ಕಾರದ ಉನ್ನತ ಅಧಿಕಾರಿಗಳು, ಇಡೀ ಆಡಳಿತ ವ್ಯವಸ್ಥೆ ಬಿಲ್ಕರ್ಸ್ ಗಳ ಜೊತೆ ಶಾಮೀಲಾಗಿದೆ. ಇದರಿಂದ ಜೀವನ ಪರ್ಯಂತ ಗಳಿಸಿದ ಸಾಮಾನ್ಯ ಜನತೆ ಇವರಿಂದ ಮೋಸ ಹೋಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ದೂರಿದರು.
ನಿಸರ್ಗ, ನಂದನವನ, ನಿರ್ಮಲ ನಗರ ಸೇರಿದಂತೆ ಐದು ಬಡಾವಣೆಗಳಲ್ಲಿ ಇಂತಹ ಭಾರೀ ವಂಚನೆ ನಡೆದಿದ್ದು, ಪ್ರತಿಯೊಂದು ಬಡಾವಣೆಗಳಲ್ಲಿ ಕನಿಷ್ಠ 25 ರಿಂದ 50 ಕೋಟಿ ರೂಪಾಯಿಯಷ್ಟು ವಂಚನೆಯಾಗಿದೆ. ಸರ್ವಮಾಡಿದ್ದು, ಒತ್ತುವರಿಯಾಗಿ, ಬಿಎಂಆರ್.ಡಿಎ ಪಂಚಾಯತ್ ಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಖಾತೆಗಳನ್ನು ಮಾಡಲಾಗಿದೆ. ಈ ಬಗ್ಗೆ ಗ್ರಾಮೀಣಾಭಿವೃದಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಉನ್ನತ ಅಧಿಕಾರಿಗಳಿಗೆ ದೂರು ನೀಡಲಾಗಿದ್ದು, ಉಮಾ ಮಹದೇವ್ ಮತ್ತು ಅತೀಕ್ ಅವರು ತನಿಖೆಗೆ ಆದೇಶ ನೀಡಿದ್ದು, ಇದರಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ ಎಂದು ಹೇಳಿದರು.
ಬಡಾವಣೆಗಳ ಉದ್ಯಾನವನ ಮತ್ತು ಸಾರ್ವಜನಿಕ ಉದ್ದೇಶದ ಸ್ಥಳಗಳನ್ನು ನಿವೇಶನಗಳನ್ನಾಗಿ ಮಾಡಿ ಮಾರಾಟ ಮಾಡಲಾಗಿದೆ. ಇಂತಹ ಸುಮಾರು 10.5 ಎಕರೆ ಪ್ರದೇಶವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಆನೇಕಲ್ ಕಾರ್ಯನಿರ್ವಾಹಕ ಅಧಿಕಾರಿ ಅವರಿಗೆ ಇಂತಹ ನಿವೇಶನಗಳ ಖಾತೆ ವಜಾಗೊಳಿಸುವಂತೆ ಮನವಿ, ಇಂತಹ ನಿವೇಶನಗಳನ್ನು ಖರೀದಿಸಿರುವವರು ಬಹುತೇಕ ಮಂದಿ ಅಮಾಯಕರಾಗಿದ್ದು, ಇನ್ನೂ ಕೆಲವರು ವಿದೇಶದಲ್ಲಿದ್ದಾರೆ. ಸಿಎ ನಿವೇಶನ ಮಾರಾಟ ಮಾಡಿದ್ದಾರೆ. ಆದರೆ ಈ ಅಕ್ರಮದ ಬಗ್ಗೆ ತಾಲ್ಲೂಕು ಪಂಚಾಯತ್ ಇಒ ಅವರು ತಡೆಯಾಜ್ಞೆ ನೀಡಿ ಪ್ರಕರಣವನ್ನು ಪದೇ ಪದೇ ಮುಂದೂಡುತ್ತಿದ್ದರು. ಆದರೆ ಇದೀಗ ತಡೆಯಾಜ್ಞೆ ತೆರವುಗೊಂಡಿದೆ. ಇಂತಹ ಅಕ್ರಮದಿಂದ ಸರ್ಕಾರದ ಬೊಕ್ಕಸಕ್ಕೂ ಸಹ ಭಾರೀ ನಷ್ಟವಾಗಿದೆ. ನಿಜವಾಗಿ ಶೋಷಣೆಗೆ ಒಳಗಾದವರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಸದಾನಂದ – ಎಂದು ಸಧಸ್ಯರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು .
You must be logged in to post a comment.