ಜಯನಗರದ ರಾಯರ ಮಠದಲ್ಲಿ ವಿಶೇಷ ಸಹಸ್ರ “ಕಾರ್ತೀಕ-ದೀಪೋತ್ಸವ”  ಪ್ರತಿನಿತ್ಯ ಸಂಜೆ 6:30ಕ್ಕೆ

ಬೆಂಗಳೂರು : ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್.ಕೆ. ವಾದೀಂದ್ರಾಚಾರ್ಯರ  ನೇತೃತ್ವದಲ್ಲಿ ದಿನಾಂಕ 2-11-2024 ರಿಂದ 1-12-2024ರ ವರೆಗೆ ವಿಶೇಷ  ಕಾರ್ತೀಕ ಮಾಸದ ಅಂಗವಾಗಿ  ಪ್ರತಿನಿತ್ಯ  ಒಂದು ತಿಂಗಳು ಪರ್ಯಂತ  ಸಹಸ್ರ ದೀಪೋತ್ಸವದ ಕಾರ್ಯಕ್ರಮ ಹಮ್ಮಿಕೊಂಡಿದೆ ಸಹಸ್ರಾರು ಭಕ್ತರಿಂದ ಸಾಮೂಹಿಕ ಲಕ್ಷ ದೀಪೋತ್ಸವವು 15-11-24 ಮತ್ತು 1-12-24 ರಂದು ವಿಶೇಷವಾದ  ದೀಪೋತ್ಸವವು ನೆರವೇರುವುದು, 20 -11-2024 ರಂದು ಧಾತ್ರೀ ಹೋಮ ಹವನ,  ಅನ್ನದಾನ ಸೇವೆ, ಹೂವಿನ ಅಲಂಕಾರ ಸೇವೆ, ಪ್ರತಿನಿತ್ಯ ಕಾರ್ತೀಕ ದೀಪೋತ್ಸವ ಸೇವೆ, ನೂತನ ವಸ್ತ್ರ ಸೇವೆ, ಪಲ್ಲಕ್ಕಿ  ಉತ್ಸವ, ಉದಯಾಸ್ತಮಾನ ಸೇವೆ, ಸಂಪೂರ್ಣ ರತ್ನ ಕವಚ ಸೇವೆ ಮತ್ತು ಸಂಪೂರ್ಣ ಲಕ್ಷ ದೀಪೋತ್ಸವದ ಸೇವೆಗಳಿಗೆ ಅವಕಾಶವಿದ್ದು ಭಕ್ತಾದಿಗಳು ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ ಸಹಸ್ರಾರು ದೀಪಗಳನ್ನು ಬೆಳಗಿಸುವ ಮೂಲಕ  ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಹರಿ-ವಾಯು- ಗುರುಗಳ ಅನುಗ್ರಹಕ್ಕೆ  ಪಾತ್ರರಾಗಬೇಕೆಂದು ಶ್ರೀ ನಂದಕಿಶೋರ್ ಆಚಾರ್ ತಿಳಿಸಿದ್ದಾರೆ.

ಈ ಸೇವೆಗಳನ್ನು ಶ್ರೀ ಮಠದ ವಾಟ್ಸಾಪ್ ಈ ನಂಬರ್ 9449133929 ಆನ್ಲೈನ್ ಮುಖಾಂತರ  ಸೇವೆಗಳನ್ನು ಸಲ್ಲಿಸಬಹುದು  ಹೆಚ್ಚಿನ ಮಾಹಿತಿಗಾಗಿ-ದೂರವಾಣಿ : 080-22443962, ಮೊಬೈಲ್ : 9945429129 -8660349906 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.

City Today News 9341997936

GITAM University Bengaluru Celebrates Karnataka Rajyotsava 2024, Honoring Karnataka’s Rich Cultural Legacy

Bengaluru, 2 November 2024: GITAM (Deemed to be University) Bengaluru celebrated Karnataka Rajyotsava 2024 with Namma Kannada Utsava, a vibrant showcase of Karnataka’s rich history, heritage, traditions and culture. Traditional performances like Dollu Kunitha, Veeragase, and Gombe Kunitha highlighted GITAM’s close connection with Karnataka’s people and values, creating a campus that feels local and familiar to students and families alike.

Prof. K.N.S. Acharya, Pro Vice-Chancellor, shared, “Karnataka Rajyotsava at GITAM is our way of celebrating the unity and spirit of Karnataka. This day honours the rich history, language, and traditions that define our state. By celebrating Rajyotsava, we connect our students with Karnataka’s legacy, instilling pride and a sense of belonging that resonates across our campus.”

GITAM Bengaluru is a hub of cultural activity throughout the year, with students coming together to celebrate festivals and days of national and regional importance. While the campus offers a variety of global cuisines, on Karnataka Rajyotsava, students were treated to traditional Karnataka dishes, connecting them more deeply to the local culture.

The event was further elevated by the presence of Padma Shri Manjamma Jogathi and IPS Officer Ravi D Chananna, whose insights and stories resonated with students and families. Manjamma’s journey as a cultural icon embodies the strength and resilience of Karnataka, adding a memorable dimension to the celebration.

City Today News 9341997936

ಜಯನಗರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿವಿಶೇಷ ಪೂಜೆ, ಅನ್ನದಾನ ಸೇವೆ ಹಾಗೂ ವೀಣಾ ವಾದನ

ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಅಕ್ಟೋಬರ್ 31, ಗುರುವಾರ ಬೆಳಗ್ಗೆ ರಾಯರಿಗೆ ಪಂಚಾಮೃತ ಅಭಿಷೇಕ, ಕನಕಾಭಿಷೇಕ, ವಿಶೇಷ ಅಲಂಕಾರ, ಮಹಾಮಂಗಳಾರತಿ ಹಾಗೂ ಅನ್ನದಾನ ಸೇವೆ ಕಾರ್ಯಕ್ರಮಗಳು ನಡೆದವು. ಸಂಜೆಯ ಕಾರ್ಯಕ್ರಮದಲ್ಲಿ ರಥೋತ್ಸವ, ಗಜವಾಹನೋತ್ಸವ, ಅಷ್ಟಾವಧಾನ, ತೊಟ್ಟಿಲು ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕು|| ಅಹಿಕಾ ನಾಗದೀಪ್ ಮತ್ತು ಸಂಗಡಿಗರಿಂದ ರಾಯರಿಗೆ ಪ್ರಿಯವಾದ “ವೀಣಾ ವಾದನ” ಸೇವೆಗಳು ಜರುಗಿದವು ಎಂದು ಶ್ರೀ ನಂದಕಿಶೋರ್ ಆಚಾರ್ ಅವರು ತಿಳಿಸಿದ್ದಾರೆ.

City Today News 9341997936

“ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಈ ರಾಘವೇಂದ್ರ ಸ್ವಾಮಿಗಳ  ಬೃಂದಾವನಕ್ಕೆ ತೈಲಾಭ್ಯಂಜನ ಪಂಚಾಮೃತ ಅಭಿಷೇಕ ಮತ್ತು ವಿಶೇಷ ಅಲಂಕಾರ”

“ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಈ ರಾಘವೇಂದ್ರ ಸ್ವಾಮಿಗಳ  ಬೃಂದಾವನಕ್ಕೆ ತೈಲಾಭ್ಯಂಜನ ಪಂಚಾಮೃತ ಅಭಿಷೇಕ ಮತ್ತು ವಿಶೇಷ ಅಲಂಕಾರ”
ಪರಮಪೂಜ್ಯ ಶ್ರೀ1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ  ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್.ಕೆ. ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ಬೆಳಗ್ಗೆ ವಿಶೇಷ ಪೂಜಾ ವೈಭವ ನೆರವೇರಿತು  ಎಂದು ಶ್ರೀ ನಂದಕಿಶೋರ್ ಆಚಾರ್ ತಿಳಿಸಿದರು, ಈ ಸಂದರ್ಭದಲ್ಲಿ ನೂರಾರು ಭಕ್ತರು ರಾಯರ ದರ್ಶನ ಪಡೆದು ಮಂಗಳಾರತಿಯನ್ನು ಸ್ವೀಕರಿಸಿ ಶ್ರೀ ಗುರು ರಾಯರ ಅನುಗ್ರಹಕ್ಕೆ ಪಾತ್ರರಾದರು.

City Today News 9341997936

ಚಿಕ್ಕಮಗಳೂರು ದತ್ತ ಪೀಠದಲ್ಲಿಯ ಇಸ್ಲಾಮಿಕ್ ಅತಿಕ್ರಮಣ ಮುಕ್ತಿಗಾಗಿ, ಸಂಪೂರ್ಣ ಹಿಂದೂ ಪೀಠಕ್ಕಾಗಿ ನಡೆಯುವ ದತ್ತ ಮಾಲಾ ಅಭಿಯಾನ.

ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಸಾಲಿನಲ್ಲಿ ಅತ್ಯಂತ ಸುಂದರ ರಮಣೀಯ ದತ್ತ ಪೀಠ ಇಸ್ಲಾಮಿಕ್ ಅತಿಕ್ರಮಣ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆ ತರುವ ಪ್ರಯತ್ನ ನಡೆದಿತ್ತು. ಇದರ ವಿರುದ್ಧ ನಿರಂತರ 20 ವರ್ಷಗಳಿಂದ ಶ್ರೀರಾಮ ಸೇನಾ ಸಂಘರ್ಷ, ಹೋರಾಟ.ರಥಯಾತ್ರೆ, ಶೋಭಾಯಾತ್ರೆ, ಕಾನೂನು ಹೋರಾಟ, ಧರ್ಮ ಸಭೆ, ಸಾಮೂಹಿಕ ದತ್ತ ಜಪ ಮುಂತಾದವುಗಳ ಮೂಲಕ ನಮ್ಮ ಹಕ್ಕನ್ನು ಪಡೆಯಲು ಪ್ರಯತ್ನ ನಡೆಯುತ್ತಲೇ ಇದೆ.

ಪ್ರತಿವರ್ಷದಂತೆ ಈ ವರ್ಷವೂ ದತ್ತ ಮಾಲಾ ಅಭಿಯಾನ -2024 ನವೆಂಬರ್ 4 ರಿಂದ ನವೆಂಬರ್ 10 ರ ವರೆಗೆ ಜರುಗಲಿದೆ.

ನವೆಂಬರ್ 4- ಮಾಲಾ ಧಾರಣೆ

ನವೆಂಬರ್ 7- ದತ್ತ ದಿಪೋತ್ಸವ

ನವೆಂಬರ್ 9-ಪಡಿ ಸಂಗ್ರಹ ( ಭೀಕ್ಷಾಟನೆ )

ನವೆಂಬರ್ 10- ಚಿಕ್ಕಮಗಳೂರಲ್ಲಿ ಧರ್ಮ ಸಭೆ, ಶೋಭಯಾತ್ರೆ, ದತ್ತ ಪೀಠದಲ್ಲಿ ಹೋಮ, ಹವನ, ಪ್ರಸಾದ ವಿತರಣೆ.

ಈ ರೀತಿ ಕಾರ್ಯಕ್ರಮ ಆಯೋಜನೆಯಾಗಿದ್ದು ನವೆಂಬರ್ 10 ಕ್ಕೆ ಜರುಗುವ ಧರ್ಮ ಸಭೆಗೆ ಮುಖ್ಯ ಅತಿಥಿಯಾಗಿ ಹಿಂದೂ ಸಿಂಹಿಣಿ, ಪ್ರಖರ ಹಿಂದೂವಾದಿ, ಹೈದ್ರಾಬಾದ್ ನಲ್ಲಿ ಲೋಕಸಭೆ ಚುನಾವಣೆಯಲ್ಲಿ ಓವೈಸಿ ವಿರುದ್ಧ ತೊಡೆ ತಟ್ಟಿದ್ದ ಶ್ರೀಮತಿ ಮಾಧವಿ ಲತಾ, ವಿಧಾನ ಪರಿಷತ್ ಸದಸ್ಯ, ಹಿಂದೂವಾದಿ ಶ್ರೀ ಸಿ.ಟಿ. ರವಿ, ಮಾಜಿ ಸಂಸದ, ಲೇಖಕ ಅಪ್ಪಟ ಹಿಂದುವಾದಿ ಪ್ರತಾಪ್ ಸಿಂಹ ಧರ್ಮ ಸಭೆಯಲ್ಲಿ ಭಾಗವಹಿಸಲಿದ್ದು ಹಿಂದೂ ಹೃದಯ ಸಾಮ್ರಾಟ್ ಶ್ರೀ ಪ್ರಮೋದಜಿ ಮುತಾಲಿಕರ ನೇತೃತ್ವದಲ್ಲಿ ಎಲ್ಲ ಕಾರ್ಯಕ್ರಮಗಳು ಜರುಗಲಿವೆ.

ಸರ್ಕಾರಕ್ಕೆ ನಮ್ಮ ಪ್ರಮುಖ ಬೇಡಿಕೆಗಳು:

*ದತ್ತ ಪೀಠದಲ್ಲಿರುವ ಅನಧಿಕೃತ ಇಸ್ಲಾಮಿಕ್ ಕುರುಹುಗಳನ್ನು ಮೂಲ ದರ್ಗಾ ನಾಗೇನಹಳ್ಳಿಗೆ ಸ್ಥಳಾಂತರ.

*ಕೇವಲ ಹಿಂದೂ ಅರ್ಚಕರು ಇರಬೇಕು. ಮೌಲ್ವಿ ತಗೆದು ನಾಗೇನಹಳ್ಳಿಗೆ ಕಳುಹಿಸಬೇಕು.

*ದತ್ತ ಭಕ್ತರಿಗೆ ಮಹಾ ಪ್ರಸಾದ ವ್ಯವಸ್ಥೆ ಆಗಲೇಬೇಕು.ವಸತಿ ವ್ಯವಸ್ಥೆ ಸಹ ಆಶ್ವೇಕು.

*ಪೀಠದಲ್ಲಿ ಕಳುವಾದ ಎಲ್ಲವೂ ಪೀಠಕ್ಕೆ ತಿರುಗಿಸಬೇಕು.

*ನಿತ್ಯ ಗಾಣಗಪುರದಿಂದ ದತ್ತ ಪೀಠಕ್ಕೆ ಬಸ್ ಸೇವೆ ಪ್ರಾರಂಭ ಆಗೋಕು

‘ಇಷ್ಟು ವರ್ಷದ ಹೋರಾಟದ ಫಲ::

*ಗೋರಿಗಳಿಗೆ ಹಸಿರು ಚಾದರ್ ಬಂದ್.

*ನಮಾಜ್ ಬಂದ್

*ಮಾಂಸಹಾರ ಬಂದ್

*ಅರ್ಚಕರ ನೇಮಕ.

*ದತ್ತ ಪೀಠದ ಆಸ್ತಿ ಕಬಳಿಸಿದವರಿಗೆ ನೋಟೀಸ್, ಅಧ್ಯಕ್ಷರು, ಶ್ರೀ ರಾಮ ಸೇನೆ ಯವರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನDeda

ಹೀಗೆ ಹಂತಹಂತವಾಗಿ ಯಶಸ್ವಿಯತ್ತ ಮುನ್ನುಗ್ಗುತ್ತಿದ್ದು ಈ ಸಾರಿ ನಮ್ಮ ಜಿಲ್ಲೆಯಿಂದ ಮಾಲಾಧಾರಿ 350 ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಹೊರಡುವವರಿದ್ದಾರೆ ಎಂದು ಎಸ್. ಬಾಸ್ಕರಣ್,ಅಧ್ಯಕ್ಷರು, ಶ್ರೀ ರಾಮ ಸೇನೆ ಯವರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.

City Today News 9341997936