ಬೆಂಗಳೂರಿನ  ಶಾಲಾ  ಮಕ್ಕಳು  ಮತ್ತು ಶಿಕ್ಷಕಿಯರು ಶ್ರೀ ಕೃಷ್ಣ ನೃತ್ಯ ರಾಸಲೀಲೆ ,  ಶ್ರೀ ಕೃಷ್ಣ, ರಾಧೆ, ಯಶೋದೆ, ವೇಷ ಭೂಷಣಧಾರಿಗಳೊಂದಿಗೆ   ಕಾರ್ಯಕ್ರಮ

ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ದಿನಾಂಕ 26 ಆಗಸ್ಟ್ 2024  ರಂದು ಆರ್ಟ್ ಕಲ್ಚರ್  ಎಜುಕೇಶನಲ್  ಎನ್‌ಲೈಟ್   ಫೌಂಡೇಶನ್  (ರಿ)
  ಡಾ  ಅಂಬಿಕಾ ಸಿ ಅವರ ಸಹಯೋಗದೊಂದಿಗೆ
ನ್ಯೂ ಪ್ರಥಮ್ ಪಬ್ಲಿಕ್  ಶಾಲೆ ಪೈ ಲೇಔಟ್, ಟೀನ್ ಫ್ಯಾಕ್ಟರಿ  ಬೆಂಗಳೂರಿನ  ಶಾಲಾ  ಮಕ್ಕಳು  ಮತ್ತು ಶಿಕ್ಷಕಿಯರು
ಶ್ರೀ ಕೃಷ್ಣ ನೃತ್ಯ ರಾಸಲೀಲೆ ,  ಶ್ರೀ ಕೃಷ್ಣ, ರಾಧೆ, ಯಶೋದೆ,
ವೇಷ ಭೂಷಣಧಾರಿಗಳೊಂದಿಗೆ   ಕಾರ್ಯಕ್ರಮದಲ್ಲಿ  ಭಾಗವಹಿಸಿ ಸಂತೋಷದಿಂದ  ಮಕ್ಕಳು ಮತ್ತು ಶಿಕ್ಷಕರೊಂದಿಗೆ ಸಂಭ್ರಮಿಸಿದರು.

City Today News 9341997936

ಶ್ರೀ ಗುರು ರಾಯರ 353 ನೇ ಆರಾಧನಾ ಸಪ್ತರಾತ್ರೋತ್ಸವ “ಸಮಾರೋಪ ಸಮಾರಂಭ” ಜಯನಗರದ ಶ್ರೀ ರಾಘವೇಂದ್ರ ಮಠದಲ್ಲಿ

ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್ ಕೆ ವಾದೀಂದ್ರಾಚಾರ್ಯರ ಮತ್ತು ಕೃಷ್ಣ ಗುಂಡಾಚಾರ್ಯರ ನೇತೃತ್ವದಲ್ಲಿ  ಆಗಸ್ಟ್ 18 ಕಾಣಿಯೂರು ಮಠಾಧೀಶರ ಅಮೃತ ಹಸ್ತದಿಂದ ಉದ್ಘಾಟನೆ ಗೊಂಡ ಶ್ರೀ ರಾಘವೇಂದ್ರ ಗುರುಸಾರ್ವಭೌಮರ 353ನೇ ಆರಾಧನಾ ಸಪ್ತರಾತ್ರೋತ್ಸವವು ಆರಂಭಗೊಂಡಿತು.ಈ
ಆರಾಧನೆಯ ಎಲ್ಲಾ ದಿನಗಳಲ್ಲೂ ಬೆಳಗ್ಗೆ ಶ್ರೀ ಗುರುರಾಯರ ಬೃಂದಾವನಕ್ಕೆ ಮಹಾಭಿಷೇಕ  ದಿನಕ್ಕೊಂದು ಅಲಂಕಾರ ವಿಶೇಷ ಪೂಜಾ ಉತ್ಸವ,ರಾಯರ ಪಾದಪೂಜಾ, ಪ್ರವಚನ ಕೈಂಕರ್ಯಗಳು, ಮತ್ತು ಶ್ರೀಮಠಕ್ಕೆ ಆಗಮಿಸಿದ ಪ್ರತಿಯೊಬ್ಬ ಸಹಸ್ರಾರು ಭಕ್ತರಿಗೆ ಅನ್ನದಾನಸೇವೆ, ಸಂಜೆಯ ಪೂಜಾ ಕಾರ್ಯಕ್ರಮಗಳು, ದಾಸವಾಣಿ, ಸ್ಯಾಕ್ಸೋಫೋನ್ ವಾದನ.ಆಗಸ್ಟ್ 24 ವಿದುಷಿ ಶ್ರೀಮತಿ ದರ್ಶಿನಿ ಮಂಜುನಾಥ್ ಅವರ ನೃತ್ಯ ದಿಶಾ ಟ್ರಸ್ಟ್ ನ ಸುಮಾರು 60ಮಕ್ಕಳವಿದ್ಯಾರ್ಥಿ ಗಳಿಂದ”ಭರತನಾಟ್ಯ”ಪ್ರದರ್ಶನ ಜರುಗಿತು. ಎಂದು ಶ್ರೀ ನಂದಕಿಶೋರಾಚಾರ್ಯರು ತಿಳಿಸಿದರು. ಈ ಆರಾಧನೆಯ  ಸಂದರ್ಭದಲ್ಲಿ ಸೇವೆ ಸಲ್ಲಿಸಿದ ಸೇವಾ ಕರ್ತೃಗಳಿಗೆ, ಸ್ವಯಂ ಸೇವಕರಿಗೆ ಹಾಗೂ ಶ್ರೀಮಠದ ಸಿಬ್ಬಂದಿಗಳಿಗೆ ಅನುಗ್ರಹ ಫಲ ಮಂತ್ರಾಕ್ಷತೆಯನ್ನು ಅನುಗ್ರಹಿಸಿ ಮಂತ್ರಾಲಯ ಶ್ರೀಪಾದರನ್ನು ಅಭಿಮಾನ ಪೂರ್ವಕವಾಗಿ ಅಭಿನಂದಿಸಿ ಶ್ರೀ ಮಠದ ವ್ಯವಸ್ಥಾಪಕರಾದ ಆರ್, ಕೆ ವಾದಿಂದ್ರ ಆಚಾರ್ಯರ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಕೊಂಡಾಡಿ ಸಂತೋಷವನ್ನು ವ್ಯಕ್ತಪಡಿಸಿದರು. ಈ ಸಪ್ತ ರಾತ್ರೋತ್ಸವದ ಸಂದರ್ಭದಲ್ಲಿ 62,000ಕ್ಕೂ ಮಿಗಿಲಾಗಿ ಭಕ್ತ ಜನರಿಗೆ ಅನ್ನಸಂಪರ್ಪಣೆಯೂ ಬೆಳಗ್ಗೆ 11-30 ರಿಂದ ರಾತ್ರಿ 10-30 ವರೆಗೂ ನಿರಂತರವಾಗಿ ನೆರವೇರಿತು. ಸಹಸ್ರಾರು ಭಕ್ತರು ಶ್ರೀ ಗುರು ರಾಯರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಗುರುರಾಯರ ಅನುಗ್ರಹಕ್ಕೆ ಪಾತ್ರರಾದರು.

City Today News 9341997936

ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ದಿನಾಂಕ 25 ಆಗಸ್ಟ್ 2024  ರಂದು ಆರ್ಟ್ ಕಲ್ಚರ್  ಎಜುಕೇಶನಲ್  ಎನ್‌ಲೈಟ್   ಫೌಂಡೇಶನ್  (ರಿ)   ಡಾ  ಅಂಬಿಕಾ ಸಿ ರವರಿಂದ     ರಂಗಸ್ಥಳ, ಎಂಜಿ ರಸ್ತೆ  ,ಮೆಟ್ರೋ ನಿಲ್ದಾಣದ   ಬಳಿ,   ಶ್ರೀ ಕೃಷ್ಣ ರಾಸಲೀಲೆ  ನೃತ್ಯ, ನಾಟಕ  ಮತ್ತು ಚಿತ್ರಕಲೆ   ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮವನ್ನು  ಆಯೋಜಿಸಲಾಗಿತ್ತು,

ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ದಿನಾಂಕ 25 ಆಗಸ್ಟ್ 2024  ರಂದು ಆರ್ಟ್ ಕಲ್ಚರ್  ಎಜುಕೇಶನಲ್  ಎನ್‌ಲೈಟ್   ಫೌಂಡೇಶನ್  (ರಿ)
  ಡಾ  ಅಂಬಿಕಾ ಸಿ ರವರಿಂದ      ರಂಗಸ್ಥಳ, ಎಂಜಿ ರಸ್ತೆ  ,ಮೆಟ್ರೋ ನಿಲ್ದಾಣದ   ಬಳಿ,   ಶ್ರೀ ಕೃಷ್ಣ ರಾಸಲೀಲೆ  ನೃತ್ಯ, ನಾಟಕ  ಮತ್ತು ಚಿತ್ರಕಲೆ   ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮವನ್ನು  ಆಯೋಜಿಸಲಾಗಿತ್ತು, ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಧರ್ ಸಮಾಜ ಸೇವಕರು,  ರವಿ  ಎನ್   ಎಸ್  ಸಮಾಜ ಸೇವಕರು ಕಾಕ್ಸ್ ಟೌನ್,    ಸತೀಶ್ ಎಸ್   ಹಿರಿಯ ಪತ್ರಕರ್ತರು ಲಂಕೇಶ್ ಪತ್ರಿಕೆ,   ಯೋಗಚಾರ್ಯ ಕಲಂದರ್ ಭಾಷಾ,  ಶ್ರೀಮತಿ ಮಂಜುಳ ಚಂದ್ರು ಹಾಗೂ    ಶ್ರೀ ಕೃಷ್ಣ, ರಾಧೆ, ಯಶೋದೆ, ವೇಶಭೂಷಣಧಾರಿಗಳು , ನೃತ್ಯ ಶಿಕ್ಷಕರುಗಳು   ಕಾರ್ಯಕ್ರಮದಲ್ಲಿ  ಭಾಗವಹಿಸಿ ಸಂತೋಷದಿಂದ  ಸಂಭ್ರಮಿಸಿದರು.

City Today News 9341997936

ಜಯನಗರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿವಿಶೇಷ ಪೂಜೆ,  ಹಾಗೂ ತಂದೆ-ಮಗನ ಜುಗಲ್ ಬಂದಿ ಸ್ಯಾಕ್ಸೋಫೋನ್ ವಾದನ

ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಆಗಸ್ಟ್ 23, ಶುಕ್ರವಾರ ಬೆಳಗ್ಗೆ ಶ್ರೀ  ಸುಜ್ಞಾನೇಂದ್ರತೀರ್ಥ ಆರಾಧನೆ ಪ್ರಯುಕ್ತ ರಾಯರಿಗೆ ಪಂಚಾಮೃತ ಅಭಿಷೇಕ, ಕನಕಾಭಿಷೇಕ, ವಿಶೇಷ ಅಲಂಕಾರ, ಮಹಾಮಂಗಳಾರತಿ ಹಾಗೂ  ಕಾರ್ಯಕ್ರಮ ನಡೆದವು. ಸಂಜೆಯ ಕಾರ್ಯಕ್ರಮದಲ್ಲಿ ರಥೋತ್ಸವ, ಗಜವಾಹನೋತ್ಸವ, ಅಷ್ಟಾವಧಾನ, ತೊಟ್ಟಿಲು ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿದ್ವಾನ್ ಜನಾರ್ಧನ್ ಮತ್ತು ಅವರ ಮಗ ಮಾಸ್ಟರ್ ಎಲ್.ಎನ್. ದತ್ತಾ (ತಂದೆ -ಮಗ) ಇವರಿಂದ ಸ್ಯಾಕ್ಸೋಫೋನ್ ವಾದನ ಜುಗಲ್ ಬಂದಿ ಜರುಗಿದವು ಎಂದು ಶ್ರೀ ನಂದಕಿಶೋರ್ ಆಚಾರ್ ಅವರು ತಿಳಿಸಿದ್ದಾರೆ.

City Today News 9341997936

“ರಾಯರ ಮಹಾರಥೋತ್ಸವ ಜಯನಗರದರಾಜಭೀದಿಯಲ್ಲಿ” ಶ್ರೀ ರಾಘವೇಂದ್ರ ಸ್ವಾಮಿಗಳ ಉತ್ತರಾರಾಧನಾ ಪ್ರಯುಕ್ತ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಬೆಳಗ್ಗೆ 4:30 ರಿಂದ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನ ದರ್ಶನ

“ರಾಯರ ಮಹಾರಥೋತ್ಸವ ಜಯನಗರದರಾಜಭೀದಿಯಲ್ಲಿ” ಶ್ರೀ ರಾಘವೇಂದ್ರ ಸ್ವಾಮಿಗಳ ಉತ್ತರಾರಾಧನಾ ಪ್ರಯುಕ್ತ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಬೆಳಗ್ಗೆ 4:30 ರಿಂದ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನವನ್ನು ದರ್ಶಿಸಲು ಸಹಸ್ರಾರು ಭಕ್ತಾದಿಗಳು ಸೇರಿ ಸರದಿ ಸಾಲಿನಲ್ಲಿ ಚಿಕ್ಕ ಮಕ್ಕಳು ಯುವಕರು ಯುವತಿಯರು ಪುರುಷರು ಮಹಿಳೆಯರು ಹಿರಿಯರು ವಯೋ ವೃದ್ಧರು ಪ್ರತಿಯೊಬ್ಬ ಭಕ್ತರು ರಾಯರ ದರ್ಶನ ಪಡೆದರು ದರ್ಶನಕ್ಕಾಗಿ ಪ್ರತ್ಯೇಕ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗಿತ್ತು ಬೆಳಗ್ಗೆ 11 ಗಂಟೆಯಿಂದ ರಾತ್ರಿ 10.45 ರವರೆಗೆ ಪ್ರತಿಯೊಬ್ಬ ಭಕ್ತರಿಗೂ ಅನ್ನ ಸಂತರ್ಪಣೆಯ ಪ್ರಸಾದ ಕಾರ್ಯಕ್ರಮ ವಿಶೇಷವಾಗಿ ನೆರವೇರಿತು ಬೆಳಗ್ಗೆ 9:00 ಗಂಟೆಯಿಂದ ಮಧ್ಯಾಹ್ನ 1:45 ರ ವರೆಗೂ ಶ್ರೀಮಠದಿಂದ ಬಿಎಸ್ಏನ್ಎಲ್ ಆಫೀಸ್ ಪೋಸ್ಟ್ ಆಫೀಸ್ ಮುಖಾಂತರ ಅದ್ದೂರಿಯಾಗಿ ಒಂದು ಪ್ರದಕ್ಷಿಣ ಆಕೃತಿಯಾಗಿ ಜಯನಗರದ ರಾಜಭೀದಿಯಲ್ಲಿ ಮಹಾ ರಥೋತ್ಸವವೂ ನೆರವೇರಿತು.

ಈ ರಥೋತ್ಸವದಲ್ಲಿ, ನಾದಸ್ವರ ಶ್ರೀಹರಿ ಭಜನೆ, ಮಹಿಳೆಯರಿಂದ ಕೋಲಾಟ, ಡೊಳ್ಳು ಕುಣಿತ, ನರ್ತನ ಸೇವೆ , ಸಿಡಿಮದ್ದು ಪಟಾಕಿಗಳಿಂದ ವಿಶೇಷವಾಗಿ ನೆರವೇರಿತು ಅಪಾರವಾದ ಸಂಖ್ಯೆಯಲ್ಲಿ ಭಕ್ತ ಜನಸಾಗರವೇ ಈ ಉತ್ಸವದಲ್ಲಿ ಭಾಗಿಯಾಗಿ ಗುರು ರಾಯರ ದರ್ಶನ ಪಡೆದು ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾದರು ಆರ್ ಕೆ ವಾದೀಂದ್ರ ಆಚಾರ್ಯ, ಜಿ, ಕೆ ಆಚಾರ್ಯ ನಂದಕಿಶೋರ್ ಆಚಾರ್ಯರ ನೇತೃತ್ವದಲ್ಲಿ ಅಚ್ಚುಕಟ್ಟಾಗ ವ್ಯವಸ್ಥೆಯೊಂದಿಗೆ ನೆರವೇರಿತು ಶ್ರೀಮಠಕ್ಕೆ ಆಗಮಿಸಿದ ಪ್ರತಿಯೊಬ್ಬ ಭಕ್ತರಿಗೂ ಜಾತಿ ಮತ ಭೇದ ಇಲ್ಲದೆ ಸೇವಾಕರ್ತರಿಗೂ ಸಾರ್ವಜನಿಕ ಭಕ್ತರಿಗೂ ಸುಮಾರು 32 ಸಾವಿರಕ್ಕೂ ಮಿಗಿಲಾಗಿ ಭಕ್ತರಿಗೆ “ಅನ್ನ ಸಂತರ್ಪಣೆ” ಕಾರ್ಯಕ್ರಮವು ನೆರವೇರಿತು.

City Today News 9341997936