“ವಿಶ್ವಛಾಯಾಗ್ರಾಹಕ ದಿನಾಚರಣೆ”ಫೋಟೋ ಜರ್ನಲಿಸ್ಟ್ ಅಸೋಸಿಯೇಷನ್  25ನೇ ವರ್ಷದ ವಾರ್ಷಿಕ ಪ್ರೊಜನ್ ಮೆಮೊರಿಸ್ 2024 ಛಾಯಾಚಿತ್ರ ಪ್ರದರ್ಶನ  ಸಮಾರೋಪ

ವಿಶ್ವಛಾಯಾಗ್ರಾಹಕ ದಿನಾಚರಣೆ ಅಂಗವಾಗಿ ಫೋಟೋ ಜರ್ನಲಿಸ್ಟ್ ಅಸೋಸಿಯೇಷನ್ ಆಫ್ ಬೆಂಗಳೂರು ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ  ಆಯೋಜಿಸಿದ್ದ  ಫೋಟೋ ಜರ್ನಲಿಸ್ಟ್ ಅಸೋಸಿಯೇಷನ್  25ನೇ ವರ್ಷದ ವಾರ್ಷಿಕ ಪ್ರೊಜನ್ ಮೆಮೊರಿಸ್ 2024 ಛಾಯಾಚಿತ್ರ ಪ್ರದರ್ಶನ  ಸಮಾರೋಪ ಸಮಾಂಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಹೆಚ್.ಸಿ ಮಹದೇವಪ್ಪ ಛಾಯಾಚಿತ್ರಗಳನ್ನು ವೀಕ್ಷಿಸಿದರು.



ಫೋಟೋ ಜರ್ನಲಿಸ್ಟ್ ಅಸೋಸಿಯೇಷನ್  ಅಧ್ಯಕ್ಷ ಮೋಹನ್ ಕುಮಾರ್ ಬಿ.ಎನ್, ಉಪಾಧ್ಯಕ್ಷ ಶೈಲೇಂದ್ರ ಭೋಜಕ್,  ಪ್ರಧಾನ ಕಾರ್ಯದರ್ಶಿ ಗಣೇಶ್ ಕೆ.ಎಸ್,  ಖಜಾಂಚಿ ರವೀಂದ್ರ ನಾಯಕ್ ಸಿ.ಹೆಚ್, ಸಮಿತಿಯ ಸದಸ್ಯರುಗಳಾದ  ಚೇತನ್ ಶಿವಕುಮಾರ್ ಕೆ,  ಸುರೇಶ್ ಪಿ, ಕೌಶಿಕ್ ಜೆ.ಎನ್,  ಮುನಿರಾಮೇಗೌಡ (ರವಿ), ಮುರಳಿಕುಮಾರ್ ಕೆ, ಪಾರ್ಥಸಾರಥಿ ಎಂ. ಭಾಗವಹಿಸಿದ್ದರು.

City Today News 9341997936

‘ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 353ನೇ “ಮಧ್ಯಾರಾಧನೆ” ರಾಯರ ಮಠದಲ್ಲಿ ಹಬ್ಬದ ಸಂಭ್ರಮ”

ಬೆಂಗಳೂರು ಆಗಸ್ಟ್ 21-ಈ ದಿನ ಶ್ರೀ ರಾಘವೇಂದ್ರ ಸ್ವಾಮಿಗಳು ಬೃಂದಾವನದ ಒಳಗಡೆ ಜೀವಂತವಾಗಿ ಪ್ರವೇಶಿಸಿದ ದಿನ.  ಈ ಮಧ್ಯಾರಾಧನೆಯ ಅಂಗವಾಗಿ ರಾಯರ ಬೃಂದಾವನಕ್ಕೆ ಶ್ರೀ ರಾಘವೇಂದ್ರ ಸ್ವಾಮಿಗಳ ಅಷ್ಟೋತ್ತರದೊಂದಿಗೆ  ಮಹಾ ಅಭಿಷೇಕವು ಜಯನಗರದ 5ನೇ ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನೆರವೇರಿತು. ನಂತರ ರಾಯರ ಬೃಂದಾವನಕ್ಕೆ ವಿಶೇಷ ರತ್ನ ಕವಚದ ಅಲಂಕಾರ, ಬೆಳಗ್ಗೆ 7:00 ರಿಂದ 11 ಗಂಟೆಯವರೆಗೆ ಸ್ವರ್ಣ ಸಿಂಹಾಸನದಲ್ಲಿ ರಾಯರ ಪ್ರತೀಕವನ್ನು ಇರಿಸಿ ರಾಯರ ಪಾದಪೂಜೆ, ಫಲ ಪುಷ್ಪ ಸಮರ್ಪಣೆ, 11ಕ್ಕೆ ಸುವರ್ಣ ಕನಕಾಭಿಷೇಕ, ಮಹಾಮಂಗಳಾರತಿ ನಡೆಯಲಿದ್ದು ಸಹಸ್ರಾರು ಭಕ್ತರಿಗೆ “ಅನ್ನ ಸಂತರ್ಪಣೆ” ನೆರವೇರಲಿದೆ. ಶ್ರೀ ಮಠಕ್ಕೆ ಆಗಮಿಸುವ ಸಹಸ್ರಾರು ಭಕ್ತ ಜನರು ರಾಯರ ದರ್ಶನ, ತೀರ್ಥ, ಫಲ ಮಂತ್ರಾಕ್ಷತೆ ಸ್ವೀಕರಿಸಿ ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾಗಿ ಶ್ರೀಮಠದ  ಅಚ್ಚುಕಟ್ಟಾದ ವ್ಯವಸ್ಥೆಯನ್ನು ಕಂಡು ಭಕ್ತರು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.

ಈ ದಿನ ಸಂಜೆ 5 ರಿಂದ ರಾಯರ ಬಗ್ಗೆ ಪ್ರವಚನ,  6ಕ್ಕೆ  ರಥೋತ್ಸವ ಜರಗಲಿದ್ದು ನಂತರ 7 ಗಂಟೆಗೆ  ಬೆಂಗಳೂರು ಸಹೋದರರಾದ ವಿದ್ವಾನ್ ಹರಿಹರನ್ ಎಂ ಬಿ, ವಿದ್ವಾನ್  ಅಶೋಕ್ ಎಸ್  ಮತ್ತು ವೃಂದದವರಿಂದ “ದಾಸ ತರಂಗಿಣಿ” ಕಾರ್ಯಕ್ರಮ  ನಡೆಯಲಿದೆ ಎಂದು ಈ ಮಠದ ವ್ಯವಸ್ಥಾಪಕರಾದ ಆರ್ ಕೆ ವಾದಿಂದ್ರ ಆಚಾರ್ಯರು ತಿಳಿಸಿದರು. ವಿಶೇಷವಾಗಿ ಗುರುವಾರ 22ನೇ ತಾರೀಕು ಬೆಳಗ್ಗೆ 8:30ಕ್ಕೆ ಜಯನಗರದ  ರಾಜಬೀದಿಗಳಲ್ಲಿ ಮಹಾರಥೋತ್ಸವದ  ಮೆರವಣಿಗೆಯು ಹೊರಡಲಿದೆ ಭಕ್ತಾದಿಗಳು ಭಕ್ತಿಯಿಂದ ಭಾಗವಹಿಸಿ ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾಗಬಹುದು.

City Today News 9341997936

ರಕ್ಷಾ ಬಂಧನ 2024: ಬಾದಾಮಿಯ ಆರೋಗ್ಯಕರ ಖಾದ್ಯ ಮತ್ತು ಒಳ್ಳೆಯತನದೊಂದಿಗೆ ಒಡಹುಟ್ಟಿದವರ ಬಂಧವನ್ನು ಸಂಭ್ರಮಿಸಿ

ಭಾರತ, ಆಗಸ್ಟ್ 20, 2024: ರಕ್ಷಾ ಬಂಧನವು ಹಬ್ಬದ ಋತುವಿಗೆ ನಾಂದಿ ಹಾಡುವುದರೊಂದಿಗೆ ಒಡಹುಟ್ಟಿದವರ ನಡುವಿನ ವಿಶೇಷ ಬಾಂಧವ್ಯದ ಸಂಭ್ರಮವನ್ನು ಆಚರಿಸುತ್ತದೆ, ಈ ಹಬ್ಬದಲ್ಲಿ ಸಹೋದರಿಯರು ತಮ್ಮ ಸಹೋದರರ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಿದರೆ ಸಹೋದರರು ತಮ್ಮ ಸಹೋದರಿಯರನ್ನು ಬೆಂಬಲಿಸುವುದಾಗಿ ಮತ್ತು ರಕ್ಷಿಸುವುದಾಗಿ ಪ್ರತಿಜ್ಞೆ ಮಾಡುತ್ತಾರೆ, ಅವರ ಆರೋಗ್ಯ ಮತ್ತು ಸಂತೋಷವನ್ನು ಕಾಪಾಡುವುದಾಗಿ ಭರವಸೆ ನೀಡುತ್ತಾರೆ. ಈ ಹೃತ್ಪೂರ್ವಕ ಬದ್ಧತೆಯನ್ನು ಗೌರವಿಸಲು, ನಿಮ್ಮ ದೈನಂದಿನ ಆಹಾರದಲ್ಲಿ ಬಾದಾಮಿಯಂತಹ ಪೌಷ್ಟಿಕ ಆಹಾರಗಳನ್ನು ಭಾಗವಾಗಿಸಿಕೊಳ್ಳುವ ಮೂಲಕ ಈ ರಕ್ಷಾ ಬಂಧನವನ್ನು ಇನ್ನಷ್ಟು ಅರ್ಥವಾಗಿಸಿ.
ಹಬ್ಬಗಳು ಮತ್ತು ಆಚರಣೆಗಳ ಮಧ್ಯೆ, ನಿಮ್ಮ ಆರೋಗ್ಯದ ಮೇಲೆ ಸಿಹಿ ತಿನಿಸುಗಳು ಮತ್ತು ಅನಾರೋಗ್ಯಕರ ಖಾದ್ಯಗಳು ಬೀರುವ ಪ್ರಭಾವವನ್ನು ಪರಿಗಣಿಸದೆಯೇ ಅವುಗಳನ್ನು ಅತಿಯಾಗಿ ಸೇವಿಸುವುದು ಸಾಮಾನ್ಯವಾಗಿದೆ. ಸಕ್ಕರೆ ಮತ್ತು ಎಣ್ಣೆಯುಕ್ತ ಆಹಾರಗಳ ಅತಿಯಾದ ಸೇವನೆಯು ಮಧುಮೇಹ, ಸ್ಥೂಲಕಾಯತೆ ಮತ್ತು ಹೃದಯದ ಸಮಸ್ಯೆಗಳಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವುದರಿಂದ ಸೂಕ್ತವಾದ ಆಹಾರದ ಆಯ್ಕೆಗಳನ್ನು ಮಾಡುವುದು ಮಹತ್ವದ್ದಾಗಿದೆ.
ಆದ್ದರಿಂದ, ನಿಮ್ಮ ಕುಟುಂಬಕ್ಕಾಗಿ ನೀವು ಹಬ್ಬದ ಸಂತೋಷಕರ ಮತ್ತು ವಿಶೇಷ ಖಾದ್ಯಗಳನ್ನು ತಯಾರಿಸುವಾಗ, ಬಾದಾಮಿಯಂತಹ ಆರೋಗ್ಯಕರ ಆಯ್ಕೆಗಳನ್ನು ಪರಿಗಣಿಸಲು ಮರೆಯದಿರಿ. ಬಾದಾಮಿಯು ಅತ್ಯಂತ ಪೌಷ್ಟಿಕವಾಗಿದೆ ಮತ್ತು ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಎಲ್‌ಡಿಎಲ್ ಮತ್ತು ಒಟ್ಟು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ, ಹೃದಯದ ಅತ್ಯುತ್ತಮ ಆರೋಗ್ಯ ಮತ್ತು ಒಟ್ಟಾರೆ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ಕೊಡುಗೆ ನೀಡುತ್ತದೆ. ಅಷ್ಟೇ ಅಲ್ಲದೇ, ಸಂಸ್ಕರಿಸಿದ ಸಕ್ಕರೆಯ ಬದಲಿಗೆ ನೈಸರ್ಗಿಕ ಸಿಹಿಕಾರಕಗಳನ್ನು ಬಳಸುವುದನ್ನು ಪರಿಗಣಿಸಿ ಮತ್ತು ಎಣ್ಣೆಯಲ್ಲಿ ಕರಿದ ಖಾದ್ಯಗಳ ಬದಲಿಗೆ ಬೇಯಿಸಿದ ಖಾದ್ಯ ನಿಮ್ಮ ಆಯ್ಕೆಯಾಗಿರಲಿ. ಚಿಂತನಶೀಲ ಆಯ್ಕೆಗಳ ಮೂಲಕ, ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಜೊತೆಗೆ ನಿಮ್ಮ ಪ್ರೀತಿಪಾತ್ರರೊಂದಿಗೆ ಆಚರಣೆಗಳನ್ನು ಆನಂದಿಸಬಹುದು.
ಬಾಲಿವುಡ್ ನಟಿ ಸೋಹಾ ಅಲಿ ಖಾನ್ ರಕ್ಷಾ ಬಂಧನವನ್ನು ಹೇಗೆ ಆಚರಿಸುತ್ತೇನೆ ಎಂದು ಬಹಿರಂಗಪಡಿಸುತ್ತಾ, “ನನಗೆ ಮತ್ತು ನನ್ನ ಕುಟುಂಬಕ್ಕೆ ರಕ್ಷಾ ಬಂಧನವು ವಿಶೇಷ ದಿನವಾಗಿದೆ. ಪ್ರತಿ ವರ್ಷ, ನಾವು ರಕ್ಷಾಬಂಧನವನ್ನು ಆಚರಿಸಲು ಒಟ್ಟಿಗೆ ಸೇರುತ್ತೇವೆ ಮತ್ತು ಆಚರಣೆಯ ನಂತರ, ನಾವು ಒಟ್ಟಿಗೆ ಊಟವನ್ನು ಆನಂದಿಸುತ್ತೇವೆ. ನನ್ನ ಕುಟುಂಬ ಮತ್ತು ನಾನು ಏನನ್ನು ಸೇವಿಸುತ್ತೇವೆ ಎಂಬುದರ ಬಗ್ಗೆ ಗಮನಹರಿಸುತ್ತಾ, ನಾನು ಪ್ರತಿ ವರ್ಷ ಗ್ರಿಲ್ ಮಾಡಿದ ಬಾದಾಮಿಯ ಬರ್ಫಿಯನ್ನು ತಯಾರಿಸುತ್ತೇನೆ – ಇದು ರುಚಿಕರ ಮಾತ್ರವಲ್ಲದೆ ಆರೋಗ್ಯಕರವೂ ಆಗಿದೆ. ಹಾಗೆಯೇ, ಬಾದಾಮಿಯಂತಹ ಪದಾರ್ಥಗಳನ್ನು ಇತರ ಖಾದ್ಯಗಳಲ್ಲಿಯೂ ಕೂಡ ನಾನು ಬಳಸುತ್ತೇನೆ ಏಕೆಂದರೆ ಅವುಗಳು ವಿಶೇಷ ರುಚಿಯನ್ನು ನೀಡುವುದು ಮಾತ್ರವಲ್ಲ ಆರೋಗ್ಯಕ್ಕೆ ಕೂಡ ಪ್ರಯೋಜನಕಾರಿಯಾಗಿವೆ” ಎಂದು ಹೇಳಿದರು.
ಪೋಷಣೆ ಮತ್ತು ಸ್ವಾಸ್ಥ್ಯ ಸಲಹೆಗಾರ್ತಿ ಶೀಲಾ ಕೃಷ್ಣಸ್ವಾಮಿ ಮಾತನಾಡುತ್ತಾ, “ರಕ್ಷಾ ಬಂಧನದ ಸಂದರ್ಭದಲ್ಲಿ ಸಿಹಿಖಾದ್ಯಗಳು ಅಗ್ರಗಣ್ಯವಾಗಿವೆ. ಆದರೆ, ಅನೇಕರು ರಕ್ತದ ಸಕ್ಕರೆ ಮಟ್ಟಗಳು ಮತ್ತು ಒಟ್ಟಾರೆ ಆರೋಗ್ಯದ ಮೇಲೆ ಅವುಗಳಿಂದ ಉಂಟಾಗುವ ಪರಿಣಾಮವನ್ನು ನಿರ್ಲಕ್ಷಿಸುತ್ತಾರೆ. ಸಕ್ಕರೆಯುಕ್ತ ಪದಾರ್ಥಗಳ ಅತಿಯಾದ ಸೇವನೆಯು ಗ್ಲೂಕೋಸ್ ಮಟ್ಟದ ಹೆಚ್ಚಳಕ್ಕೆ ಕಾರಣವಾಗುತ್ತದೆ, ವಿಶೇಷವಾಗಿ ಮಧುಮೇಹ ಅಥವಾ ಪೂರ್ವ-ಮಧುಮೇಹ ಸ್ಥಿತಿಯನ್ನು ಹೊಂದಿರುವವರ ಮೇಲೆ ಪರಿಣಾಮ ಬೀರುತ್ತದೆ. ಅನುಭವಿ ಪೌಷ್ಟಿಕತಜ್ಞೆಯಾಗಿ, ಬಾದಾಮಿ, ತಾಜಾ ಹಣ್ಣುಗಳು, ಇತ್ಯಾದಿ ನೈಸರ್ಗಿಕ, ಆರೋಗ್ಯಕರ ಆಹಾರಗಳನ್ನು ಆಯ್ಕೆ ಮಾಡುವ ಮೂಲಕ ವಿವೇಚನಾಯುಕ್ತ ಆಹಾರ ಸೇವನೆಯ ಅಭ್ಯಾಸವನ್ನು ಬೆಳಸಿಕೊಳ್ಳಲು ನಾನು ಶಿಫಾರಸು ಮಾಡುತ್ತೇನೆ. ಬಾದಾಮಿಯು ಪ್ರೋಟೀನ್ ಮತ್ತು ಆಹಾರದ ನಾರಿನಂಶವನ್ನು ಸಮೃದ್ಧವಾಗಿ ಹೊಂದಿದೆ, ಇದು ಆರೋಗ್ಯಕರ ರಕ್ತದ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೇ, ಬಾದಾಮಿಯನ್ನು ಆರೋಗ್ಯಕರ ಆಹಾರದ ಭಾಗವಾಗಿಸಿಕೊಳ್ಳುವುದರಿಂದ ಗ್ಲೈಸೆಮಿಕ್ ಮತ್ತು ಹೃದಯದ ಕ್ರಿಯೆಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ, ಇದು ಟೈಪ್ II ಮಧುಮೇಹ ಮತ್ತು ಪೂರ್ವ-ಮಧುಮೇಹ ಹೊಂದಿರುವ ಭಾರತೀಯರ ಆರೋಗ್ಯವನ್ನು ಉತ್ತಮಗೊಳಿಸಲು ನೆರವಾಗುತ್ತದೆ” ಎಂದು ಹೇಳಿದರು.
ಆದ್ದರಿಂದ, ಈ ರಕ್ಷಾ ಬಂಧನದಂದು ಆಚರಣೆಯು ಹಿಂದೆಂದಿಗಿಂತಲೂ ಆನಂದದಾಯಕ ಮತ್ತು ಆರೋಗ್ಯಕರವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಚಿಂತನಶೀಲ ಮತ್ತು ಸ್ಮಾರ್ಟ್ ಆಹಾರ ಆಯ್ಕೆಗಳನ್ನು ಮಾಡೋಣ.

City Today News 9341997936

ಶ್ರೀ ರಾಘವೇಂದ್ರ ಸ್ವಾಮಿಗಳ “ಪೂರ್ವಾರಾಧನೆ -ವೈಭವ “

ಈ ದಿನ ಶ್ರೀ ರಾಘವೇಂದ್ರ ಸ್ವಾಮಿಗಳ “ಪೂರ್ವಾರಾಧನೆ” ಪ್ರಯುಕ್ತ ಬೆಂಗಳೂರಿನ ಜಯನಗರದ ಐದನೇ ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಬೆಳಗಿನ ಜಾವಾ ಸುಪ್ರಭಾತ  ನಾದಸ್ವರ ವಾದ್ಯದೊಂದಿಗೆ ಪ್ರಾರಂಭವಾಗಿ ಶ್ರೀರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಅರ್ಚಕರಿಂದ  ವಿಶೇಷವಾಗಿ ಹಾಲು (ಮೊಸರು) ಮಜ್ಜಿಗೆ, ತುಪ್ಪ ,ಜೇನುತುಪ್ಪ, ಸಕ್ಕರೆ ಎಳೆನೀರು, ಇತ್ಯಾದಿ ನಾನಾ ಬಗೆಯ ಫಲಗಳಿಂದ ಫಲ ಪಂಚಾಮೃತ ಅಭಿಷೇಕ ವನ್ನು ಶ್ರೀ ರಾಘವೇಂದ್ರ ಸ್ವಾಮಿಗಳ ಅಷ್ಟೋತ್ತರ ಪಾರಾಯಣದೊಂದಿಗೆ  ನೆರವೇರಿಸಿ ಆ  ಪ್ರಸಾದವನ್ನು ಭಕ್ತರಿಗೆ ವಿತರಿಸಲಾಯಿತು, ನಂತರ ಶ್ರೀ ಮಠದ ವತಿಯಿಂದ ಆರ್,ಕೆ ವಾದಿಂದ್ರಾಚಾರ್ಯರು, ಜಿ , ಕೆ ಆಚಾರ್ಯರು ಮತ್ತು ಶ್ರೀ  ನಂದಕಿಶೋರಾಚಾರ್ಯರು “ಲೋಕ-ಕಲ್ಯಾಣಕ್ಕಾಗಿ” ಗುರು ರಾಯರಲ್ಲಿ  ಪ್ರಾರ್ಥನೆಯನ್ನು ಸಲ್ಲಿಸಿ  ಸ್ವರ್ಣ ಸಿಂಹಾಸನದಲ್ಲಿ ಶ್ರೀ ರಾಯರಿಗೆ ಪಾದಪೂಜೆ  ನೆರವೇರಿಸಿದರು, ಭಕ್ತರು ಕೂಡ ಸಾಮೂಹಿಕವಾಗಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಪಾದಕ್ಕೆ ಪಾದಪೂಜೆ ಫಲ ಸಮರ್ಪಣೆ ಸಮರ್ಪಿಸಿದರು,  ಈ ಸಂದರ್ಭದಲ್ಲಿ  ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಸುಗಂಧ ದ್ರವ್ಯ ನಾನಾ ವಿಧವಾದ ಪುಷ್ಪಗಳಿಂದ ಅಲಂಕರಿಸಲಾಯಿತು, ಶ್ರೀ ಮಠಕ್ಕೆ ಆಗಮಿಸುವ ಸಹಸ್ರಾರು ಭಕ್ತರಿಗೆ ಅನ್ನಸಂತರ್ಪಣೆಯು   ನೆರವೇರಿತು, ಗುರು ರಾಯರ ದರ್ಶನಕ್ಕೆ ಆಗಮಿಸುವ ಭಕ್ತರಿಗಾಗಿ ಅಚ್ಚುಕಟ್ಟಾದ ಕ್ಯೂ ವ್ಯವಸ್ಥೆ, ಪ್ರಸಾದಕ್ಕೂ ಕ್ಯೂ ವ್ಯವಸ್ಥೆ, ಹಿರಿಯ ನಾಗರಿಕ ವಯೋವೃದ್ಧರಿಗೂ  ಪ್ರತ್ಯೇಕ ಕ್ಯೂ ವ್ಯವಸ್ಥೆಯನ್ನು ಮಾಡಲಾಗಿದೆ,  ಈ ದಿನ ಸಂಜೆ “ಪ್ರವಚನ” ವಿಶೇಷವಾಗಿ ‘ರಜತ – ಸ್ವರ್ಣ -ಲೇಪಿತ ಗಜವಾಹನ ಉತ್ಸವದೊಂದಿಗೆ ಸಂಜೆ 7 ಕ್ಕೆ “ದಾಸ-ಲಹರಿ” ವಿದ್ವಾನ್- ಶ್ರೀ ಪ್ರಾದೇಶಾಚಾರ್ಯ ವೃಂದ  ದಿಂದಗಾಯನ ಕಾರ್ಯಕ್ರಮವು ಜರುಗಲಿದೆ. ಈ ಎಲ್ಲಾ ಕಾರ್ಯಕ್ರಮಗಳು ರಾಯರ ಅನುಗ್ರಹ  ಮತ್ತು ಭಕ್ತರ, ಸ್ವಯಂ ಸೇವಕರ ಸಿಬ್ಬಂದಿಗಳ, ಸಹಕಾರ ಹಾಗೂ ಮಂತ್ರಾಲಯ ಶ್ರೀಗಳ ಆಶೀರ್ವಾದದಿಂದ, ಆರ್ ಕೆ ವಾದಿಂದ್ರಾಚಾರ್ಯರ ನೇತೃತ್ವದಲ್ಲಿ ನೆರವೇರುತ್ತಿದೆ.

City Today News 9341997936

ಜಯನಗರ ರಾಯರ ಮಠದಲ್ಲಿ ಗುರುಗಳ ಆರಾಧನಾ ಸಪ್ತರಾತ್ರೋತ್ಸವ

ಬೆಂಗಳೂರು : ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 108 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್ ಕೆ ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ಆಗಸ್ಟ್ 18 ರಿಂದ 24ರ ವರೆಗೆ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರ 353ನೇ ಆರಾಧನಾ ಸಪ್ತರಾತ್ರೋತ್ಸವ ಸಮಾರಂಭವನ್ನು ಏರ್ಪಡಿಸಲಾಗಿದೆ. ಆರಾಧನೆಯ ಎಲ್ಲಾ ದಿನಗಳಲ್ಲೂ ಪ್ರತಿದಿನ ಬೆಳಗ್ಗೆ ಗುರುಗಳ ಬೃಂದಾವನಕ್ಕೆ ಅಷ್ಟೋತ್ತರ ಪಾರಾಯಣ ಸಹಿತ ಪಂಚಾಮೃತ ಅಭಿಷೇಕ, ರಾಯರ ಪಾದಪೂಜೆ, ಕನಕಾಭಿಷೇಕ, ಮಹಾಮಂಗಳಾರತಿ, ಪ್ರಸಾದ ವಿತರಣೆಯಿರುತ್ತದೆ.

ಕಾರ್ಯಕ್ರಮಗಳು :
 ಆಗಸ್ಟ್ 18 , ಭಾನುವಾರ : ಸಂಜೆ 6-30ಕ್ಕೆ ಕಾಣಿಯೂರು ಮಠಾಧೀಶರಾದ ಪರಮಪೂಜ್ಯ ಶ್ರೀ 108 ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದಂಗಳವರಿಂದ ಸಪ್ತರಾತ್ರೋತ್ಸವದ ಉದ್ಘಾಟನೆ, ಗೋಪೂಜೆ, ಧನ-ಧಾನ್ಯ ಪೂಜೆ.
 ಆಗಸ್ಟ್ 19 , ಸೋಮವಾರ : ಬೆಳಗ್ಗೆ ಋಗ್ವೇದ, ಯಜುರ್ವೇದ ಮತ್ತು ನಿತ್ಯ ನೂತನ ಉಪಾಕರ್ಮ ನಂತರ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ. ಸಂಜೆ 7-00ಕ್ಕೆ ವಿದುಷಿ ಶ್ರೀಮತಿ ಮೇಘಾ ಶಿವಕುಮಾರ್ ಮತ್ತು ವೃಂದದವರಿಂದ  “ದಾಸವಾಣಿ”.
 ಆಗಸ್ಟ್ 20 , ಮಂಗಳವಾರ : ಸಂಜೆ 7-00ಕ್ಕೆ ವಿದ್ವಾನ್ ಪ್ರಾದೇಶಾಚಾರ್ ಮತ್ತು ಸಂಗಡಿಗರಿಂದ  “ದಾಸಲಹರಿ”.
 ಆಗಸ್ಟ್ 21 , ಬುಧವಾರ : ಸಂಜೆ 7-00ಕ್ಕೆ ಬೆಂಗಳೂರು ಸಹೋದರರಾದ ವಿದ್ವಾನ್  ಹರಿಹರನ್ ಎಂ.ಬಿ., ವಿದ್ವಾನ್ ಎಸ್. ಅಶೋಕ್ ಮತ್ತು ಸಂಗಡಿಗರು “ದಾಸತರಂಗಿಣಿ”.
 ಆಗಸ್ಟ್ 22 , ಗುರುವಾರ ; ಬೆಳಗ್ಗೆ 8-00ಕ್ಕೆ ಜಯನಗರದ ರಾಜಬೀದಿಯಲ್ಲಿ ಶ್ರೀ ಗುರುರಾಜರ ಮಹಾ ರಥೋತ್ಸವ, ಸಂಜೆ 6-30ಕ್ಕೆ ವಿದ್ವಾನ್ ಜಯತೀರ್ಥ ಮೇವುಂಡಿ ಮತ್ತು ಸಂಗಡಿಗರಿಂದ “ದಾಸ ಝೇಂಕಾರ”.
 ಆಗಸ್ಟ್ 23 , ಶುಕ್ರವಾರ : ಸಂಜೆ 7-00ಕ್ಕೆ ವಿದ್ವಾನ್ ಜನಾರ್ಧನ್ ಮತ್ತು ಸಂಗಡಿಗರಿಂದ  “ಸ್ಯಾಕ್ಸೋಫೋನ್ ವಾದನ”.
 ಆಗಸ್ಟ್ 24 , ಶನಿವಾರ : ವಿದುಷಿ ಶ್ರೀಮತಿ ದರ್ಶಿನಿ ಮಂಜುನಾಥ್ ಅವರ ನಿರ್ದೇಶನದಲ್ಲಿ ನೃತ್ಯ ದಿಶಾ ಟ್ರಸ್ಟ್ ನ ವಿದ್ಯಾರ್ಥಿಗಳಿಂದ  “ಭರತನಾಟ್ಯ ಪ್ರದರ್ಶನ “.

ಆರಾಧನೆಯ ಎಲ್ಲಾ ದಿನಗಳಲ್ಲೂ ಪ್ರತಿದಿನ ಸಂಜೆ 5-30ಕ್ಕೆ ವಿದ್ವಾನ್ ಜಗನ್ನಾಥಾಚಾರ್ಯ ರಾಯಚೂರು ಇವರಿಂದ “ಶ್ರೀ ಗುರುಗುಣಸ್ತವನ” ವಿಷಯವಾಗಿ ಧಾರ್ಮಿಕ ಪ್ರವಚನ ಜರುಗುತ್ತದೆ. ಈ ಆರಾಧನಾ ಮಹೋತ್ಸವದಲ್ಲಿ ಅಂದಾಜು 50,000ಕ್ಕೂ ಮಿಗಿಲಾಗಿ ಭಕ್ತ ಜನರಿಗೆ “ಅನ್ನ ಸಂತರ್ಪಣೆ” ಕಾರ್ಯಕ್ರಮವು ನೆರವೇರಲಿದೆ. ಈ ಸುಸಂದರ್ಭದಲ್ಲಿ ಶ್ರೀ ಗುರುರಾಯರಿಗೆ  ಸೇವೆಯನ್ನು ಮಾಡಿಸುವಂತಹ ಭಕ್ತರು  ವಾಟ್ಸಪ್ ಈ ನಂಬರ್ 9449133929  ಆನ್ಲೈನ್ ಮುಖಾಂತರ ಸೇವೆ ಸಲ್ಲಿಸಿ ಗುರುರಾಯರ ಅನುಗ್ರಹಕ್ಕೆ ಪಾತ್ರರಾಗಬಹುದು.  ಸೇವೆಯನ್ನು ಸಲ್ಲಿಸಿದ  ಭಕ್ತರಿಗೆ ಶೇಷವಸ್ತ್ರ, ಫಲ ಮಂತ್ರಾಕ್ಷತೆ, ಪರಿಮಳ ಮಹಾಪ್ರಸಾದ, ಕೊಡಲಾಗುವುದು ಎಂದು ಶ್ರೀ ನಂದಕಿಶೋರ್ ಆಚಾರ್ ತಿಳಿಸಿದ್ದಾರೆ.  ಹೆಚ್ಚಿನ ಮಾಹಿತಿಗಾಗಿ 08022443962-9945429129-9449133929-8660349906

City Today News 9341997936