
ದಿನಾಂಕ : 7 – 2 – 2019 ಸಾವಿರಾರು ವರ್ಷಗಳ ಇತಿಹಾಸ ಹಾಗೂ ಪರಂಪರೆಯನ್ನು ಹೊಂದಿರುವ ಬಲಿಜ ಜನಾಂಗದ ಕಾಲಜ್ಞಾನಿ ಕೈವಾರ ತಾತಯ್ಯನವರಂತ ಪುಣ್ಯ ಪುರುಷರನ್ನು ಹೊಂದಿರುವಂತಹ ಸಮುದಾಯ ಹಿಂದುಳಿದ ವರ್ಗಗಳ ನೇತಾರರು ಅಂದಿನ ಮಾನ್ಯ ಮಂತ್ರಿಗಳ ದೇವರಾಜ ಅರಸು ರವರು ಬಲಿಜ ಜನಾಂಗವನ್ನು 2ಎ ಪ್ರವರ್ಗಕ್ಕೆ ಸೇರಿದ್ದರು . ಆದರೆ ಮುಂದಿನ ದಿನಗಳಲ್ಲಿ ವೀರಪ್ಪ ಮೊಯ್ಲಿಯವರ ಅವಧಿಯಲ್ಲಿ ಪುನ : ನಮ್ಮ ಸಮುದಾಯವನ್ನು 3ಎ ಗೆ ಬದಲಾವಣೆ ಮಾಡಿದ್ದರಿಂದ ನಮ್ಮ ಜನಾಂಗಕ್ಕೆ ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಉದ್ಯೋಗದಲ್ಲಿ ಅನ್ಯಾಯವಾಗಿದೆ . ರಾಜಕೀಯವಾಗಿ ನಿರ್ಣಯಕ ಪಾತ್ರ ವಹಿಸುತ್ತಿರುವ ಬಲಿಜ ಜನಾಂಗವನ್ನು ಪುನ : 2ಎ ಗೆ ಸೇರಿಸುವ ನಿಟ್ಟಿನಲ್ಲಿ ನಮ್ಮ ಹೋರಾಟ ನಡೆಯಲಿದೆ . ಆ ನಿಟ್ಟಿನಲ್ಲಿ ರಾಜರಾಜೇಶ್ವರಿ ನಗರದಲ್ಲಿ ಶ್ರೀ ಯೋಗ ನಾರಾಯಣ ತಾತಯ್ಯನವರ ಬಲಿಜ ಸಂಘ ಕಳೆದ 8 ವರ್ಷಗಳಿಂದ ಸಂಘಟನೆಯಲ್ಲಿ ತೊಡಗಿದ್ದು ಫೆಬ್ರವರಿ 10 2019 ರಂದು ರಾಜರಾಜೇಶ್ವರಿ ನಗರದ ಸುಭಾಷ ಭವನದಲ್ಲಿ ಸಮಾವೇಶ ಅಧ್ಯಕ್ಷರಾದ ಕೆ . ಮಂಜುನಾಥ ರವರು ಏರ್ಪಡಿಸಲಾಗಿದೆ . ಇಲ್ಲಿ ಕುಟುಂಬ ಸದಸ್ಯರುಗಳೆಲ್ಲ ಜಾಗೃತಿ ಮೂಡಿಸಿ ಸರ್ಕಾರದ ಮೇಲೆ ಹಕ್ಕೊತ್ತಾಯ ತರಲು ಯೋಜನೆ ರೂಪಿಸಿಕೊಳ್ಳಲಾಗುವುದು ಎಂದು. ತಿಳಿಸಿದರು ಶ್ರೀಕೈವಾರ ತಾತಯ್ಯನವರ ಬಲಿಜ ಸಂಘ ವತಿಯಿಂದ ತಿಳಿಸಿದರು.
City Today News
(citytoday.media)
9341997936







You must be logged in to post a comment.