“ಟಿಕೇಟು ನೀಡದಿದ್ದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಶಾಮಸುಂದರ್ ಗಾಯಕ್ ವಾಡ್”

“ಟಿಕೇಟು ನೀಡದಿದ್ದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಶಾಮಸುಂದರ್ ಗಾಯಕ್ ವಾಡ್’

ಬೆಂಗಳೂರು ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ರಾಷ್ಟ್ರೀಯ ಮರಾಠ ಪಾರ್ಟಿ ವತಿಯಿಂದ ಬಿಜೆಪಿ ಮುಖಂಡ, ಮರಾಠ ಸಮುದಾಯದ ನಾಯಕರಾದ ಶಾಮಸುಂದರ್ ಗಾಯಕ್ ವಾಡ್ ಬೆಂಬಲಿಸಿ ಮಾಧ್ಯಮಗೋಷ್ಠಿ ಏರ್ಪಡಿಸಿದ್ದರು.

ಕರ್ನಾಟಕ ಕ್ಷತ್ರಿಯ ಮಹಾ ಒಕ್ಕೂಟ ರಾಜ್ಯಾಧ್ಯಕ್ಷರು, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಆಕಾಂಕ್ಷಿ ಶಾಮಸುಂದರ್ ಗಾಯಕವಾಡ್ ರವರು, ರಾಷ್ಟ್ರೀಯ ಮರಾಠ ಪಾರ್ಟಿ ಅಧ್ಯಕ್ಷರಾದ ಮನೋಹರ್ ರಾವ್ ಜಾಧವ್, ಉಪಾಧ್ಯಕ್ಷರುಳಾದ ಚಂದ್ರಶೇಖರ್ ಭೋಜಗಡ್, ಈಶ್ವರ್ ರಾವ್ ಸಿಂಧೆ, ಪ್ರಧಾನ ಕಾರ್ಯದರ್ಶಿ ಕುನಾಲ್ ಗೋವಿಂದ್, ಸಹ ಕಾರ್ಯದರ್ಶಿ ವೆಂಕಟೇಶ್ವರ ರಾವ್, ಕಾರ್ಯದರ್ಶಿ ತಿಲಕ್ ಚಂದನ್ ರವರು ಮಾಧ್ಯಮಗೋಷ್ಟಿಯಲ್ಲಿ ಭಾಗವಹಿಸಿದ್ದರು.

ಶಾಮಸುಂದ‌ರ್ ಗಾಯಕ್ ವಾಡ್ ರವರು ಮಾತನಾಡಿ ಕರ್ನಾಟಕದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯುಡಿಯೂರಪ್ಪ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ ರವರು ನಮ್ಮ ಮರಾಠ ಸಮುದಾಯ 50ಲಕ್ಷ ಜನರು ಇದ್ದಾರೆ ಮತ್ತು ಹಿಂದುಳಿದ ವರ್ಗದ ಕುರುಬರು, ನೇಕಾರರು, ಗೊಲ್ಲರು, ಮೀನುಗಾರರು, ತಿಗಳರು, ಗಾಣಿಗರು, ಕುಂಬಾರರು, ಮಡಿವಾಳ, ದೇವಾಡಿಗ ಶೇಕಡ 52%ರಷ್ಟು ರಾಜ್ಯದಲ್ಲಿ ಜನಸಂಖ್ಯೆ ಇದೆ ಈ ಸಮುದಾಯದವರಿಗೆ ಟಿಕೇಟು ನೀಡದೇ ನಂಬಿಕೆ ದ್ರೋಹ ಮಾಡಿದ್ದಾರೆ. ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ನಿರಂತರ ಜನಸಂಪರ್ಕ ಮಾಡಿಕೊಂಡು ಪಕ್ಷದ ಟಿಕೇಟು ನೀಡಿ ಎಂದು ವರಿಷ್ಮರಿಗೆ ಮನವಿ ಮಾಡಿದ್ದೇ ಈ ಕ್ಷೇತ್ರದಲ್ಲಿ ನಾಲ್ಕು ಲಕ್ಷ ಮರಾಠ ಮತಾದಾರರು ಇದ್ದಾರೆ. ಬಿಜೆಪಿ ಪಕ್ಷ ಮರಾಠ ಸಮುದಾಯಕ್ಕೆ ಮೋಸ ಮಾಡಿರುವ ಕಾರಣದಿಂದ ಬಿಜೆಪಿ ಪಕ್ಷ ತೊರೆದು ರಾಷ್ಟ್ರೀಯ ಮರಾಠ ಪಾರ್ಟಿ ವತಿಯಿಂದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಅಭ್ಯರ್ಥಿಯಾಗಿದ್ದೇನೆ. ಮರಾಠ ಸಮುದಾಯ 3ಬಿ 2ಎ ಸೇರ್ಪಡೆ ಮಾಡುತ್ತೇವೆ ಎಂದು ಬಿಜೆಪಿ ಭರವಸೆ ನೀಡಿ ವಂಚನೆ ಮಾಡಿದೆ.

8 ಲೋಕಸಭಾ ಕ್ಷೇತ್ರಗಳಲ್ಲಿ ಮರಾಠ ಸಮುದಾಯದವರ 2ರಿಂದ 4ಲಕ್ಷದವರೆಗೆ ಮತದಾರರು ಇದ್ದಾರೆ. ಅದ ಕಾರಣದಿಂದ 10ಲೋಕಸಭಾ ಕ್ಷೇತ್ರದಲ್ಲಿ ಮರಾಠ ಪಾರ್ಟಿಯಿಂದ ಬೆಂಬಲ ಘೋಷಣೆ ಮಾಡಿದ್ದಾರೆ ಇದರಿಂದ ಇಡೀ ಮರಾಠ ಸಮಾಜ ಹಿಂದುಳಿದ ಸಮಾಜ ನೊಂದು ಬೇಸತ್ತು ಮುಂಬರುವ ದಿನಗಳಲ್ಲಿ ಬಿ.ಜೆ.ಪಿಗೆ ಪಕ್ಷಕ್ಕೆ ಮತ ನೀಡಬಾರದೆಂದು ರಾಷ್ಟ್ರೀಯ ಮರಾಠ ಪಾರ್ಟಿಯ ಪಕ್ಷವು ಕರ್ನಾಟಕದಲ್ಲಿ ಹತ್ತು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದ್ದು ಮರಾಠ ಮತ್ತು ಹಿಂದುಳಿದ ವರ್ಗದ ಸಮಾಜ ಹಾಗೂ ದಲಿತರು ಅಲ್ಪಸಂಖ್ಯಾತರಗಳನೊಳಗೊಂಡ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದೆ. ಇದರಿಂದ ಬೇಸತ್ತ ನಾನು 25 ವರ್ಷಗಳಿಂದ ಪಕ್ಷಕ್ಕೆ ದುಡಿದು ಬಿ.ಜೆ.ಪಿ ಸರ್ಕಾರ ಅಧಿಕಾರಕ್ಕೆ ಬರಲು ಶ್ರಮಿಸಿದ ನನ್ನಂತ ರಾಜ್ಯ ಮರಾಠ ಮುಖಂಡರಿಗೆ ಅನ್ಯಾಯ ಮಾಡಿರುತ್ತಾರೆ. ಕರ್ನಾಟಕದ ಬಿಜೆ.ಪಿ ಮುಖಂಡರು ಮಾಡಿದ ಅನ್ಯಾಯ ಇದರಿಂದ ನಾನು ಇದು ಬಿ.ಜೆ.ಪಿ ಬಂಢಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದೇನೆ ಗೆದ್ದು ನರೇಂದ್ರಮೋದಿಯವರಿಗೆ ಕೈಬಲಪಡಿಸುತ್ತೇನೆ ಎಂದು ಹೇಳಿದರು.

ಈ ಕೆಳಕಂಡ ಲೋಕಸಭಾ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಮರಾಠ ಪಾರ್ಟಿವತಿಯಿಂದ ಈ ಕೆಳಕಂಡ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. 1)ಉತ್ತರ ಕನ್ನಡ-ಶಾಮಸುಂದರ್ ಗಾಯಕ್ ವಾಡ್ 2)ಧಾರವಾಡ -ಜಿ.ಡಿ.ಘೋರ್ಪಡೆ 3)ಹಾವೇರಿ-ನಾರಾಯಣ್ ರಾವ್ ಗಾಯಕ್ ವಾಡ್ 4)ಬೆಳಗಾಂ-ಈಶ್ವರ್ ರುದ್ಧಪ್ಪ ಗಾಡಿ, 5)ಚಿಕ್ಕೋಡಿ- ವಿನೋದ್ ಸಾಳುಂಕೆ 6) ಬೀದರ್-ವಿಜಯಕುಮಾರ್ ಪಾಟೀಲ್ 7) 8) ಬಾಗಲಕೋಟೆ- ಶ್ರೀಕಾಂತ್ ಮುಧೋಳ, 9)ಶಿವಮೊಗ್ಗ- ಎಂ.ಡಿ.ದೇವರಾಜ್ ಸಿಂಧೆ 10) ಬಿಜಾಪುರ ಮತ್ತು ಗುಲ್ಬರ್ಗಕ್ಕೆ ಎಸ್.ಸಿ.ಅಭ್ಯರ್ಥಿಗಳನ್ನು ನಿಲ್ಲಿಸಲಾಗುವುದು ಎಂದು ಮನೋಹರ್ ರಾವ್ ಜಾದವ್,ಅಧ್ಯಕ್ಷರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.

City Today News 9341997936

ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕು ಭಾನುವಳ್ಳಿ ಗ್ರಾಮದಲ್ಲಿ ಸರ್ಕಾರದಿಂದ ಅಧಿಕೃತವಾಗಿ 1999ರಲ್ಲಿ ರಾಜವೀರ ಮದಕರಿ ಮಹಾದ್ವಾರ ಮತ್ತು ವಾಲ್ಮೀಕಿ ವೃತ್ತವನ್ನು ನಿರ್ಮಿಸಿದ್ದರು ಸಹ ಆ ಮಹಾದ್ವಾರವನ್ನು ಜಿಲ್ಲಾಡಳಿತದವರು ತೆರವುಗೊಳಿಸಿರುತ್ತಾರೆ.

ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕು ಭಾನುವಳ್ಳಿ ಗ್ರಾಮದಲ್ಲಿ ಸರ್ಕಾರದಿಂದ ಅಧಿಕೃತವಾಗಿ 1999ರಲ್ಲಿ ರಾಜವೀರ ಮದಕರಿ ಮಹಾದ್ವಾರ ಮತ್ತು ವಾಲ್ಮೀಕಿ ವೃತ್ತವನ್ನು ನಿರ್ಮಿಸಿದ್ದರು ಸಹ ಆ ಮಹಾದ್ವಾರವನ್ನು ಜಿಲ್ಲಾಡಳಿತದವರು ತೆರವುಗೊಳಿಸಿರುತ್ತಾರೆ.

ದಿನಾಂಕಃ 11-03-2024 ರಂದು ಹರಿಹರ ತಾಲ್ಲೂಕು ಭಾನುವಳ್ಳಿ ಗ್ರಾಮದಲ್ಲಿ ರಾಜವೀರ ಮದಕರಿ ಮಹಾದ್ವಾರ ಮತ್ತು ವಾಲ್ಮೀಕಿವೃತದ ನಾಮಫಲಕವನ್ನು ಜಿಲ್ಲಾಡಳಿತದವರು ತೆರವುಗೊಳಿಸಿದ್ದು ತುಂಬಾ ಖಂಡನೀಯ ಹಾಗೂ ವಿಷಾದವನ್ನು ವ್ಯಕ್ತಪಡಿಸುತ್ತಿದ್ದೇವೆ.

ಈ ಹಿಂದೆ 1999ರಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಯ ಅನುದಾನದಡಿಯಲ್ಲಿ ನಿರ್ಮಾಣಗೊಂಡು ಲಿಂಗೈಕ್ಯ ಶ್ರೀ ಶ್ರೀ ಶ್ರೀ ಜಗದ್ಗುರು ಪುಣ್ಯನಂದಪುರಿ ಇವರ ದಿವ್ಯಸಾನಿದ್ಯದಲ್ಲಿ ಹಾಗೂ ಅಂದಿನ ಸಚಿವರಾದ ಹೆಚ್.ಶಿವಪ್ಪನವರು ರಾಜವೀರ ಮದಕರಿ ಮಹಾದ್ವಾರವನ್ನು ಉದ್ಘಾಟನೆ ಮಾಡಿ ವಾಲ್ಮೀಕಿ ಸಮುದಾಯದವರಿಗೆ ಕೊಡುಗೆಯನ್ನು ಕೊಟ್ಟಿರುತ್ತಾರೆ. ಇಂತಹ ಮಹನೀಯರು ಉದ್ಘಾಟನೆ ಮಾಡಿರುತ್ತಾರೆ. ಅನ್ಯಕೋಮಿನ ಜನಾಂಗದವರು ಈ ಸಮಾಜದ ಏಳಿಗೆ ಬಯಸದೆ ಇಂತಹ ಹೀನ ಕೃತ್ಯವನ್ನು ಜಿಲ್ಲಾಧಿಕಾರಿಗಳ ಮೇಲೆ ಒತ್ತಡ ಹೇರಿ ಮಾಡಿರುತ್ತಾರೆ. ಇದನ್ನು ಅವಲೋಕಿಸದೇ ಸರ್ಕಾರದಿಂದ ಮಂಜೂರಾದ ಅನುದಾನದಿಂದ ರಾಜವೀರ ಮದಕರಿ ಮಹಾದ್ವಾರದ ದ್ವಾರಬಾಗಿಲು ನಿರ್ಮಾಣಗೊಂಡು ಇಲ್ಲಿಗೆ ಸರಿಸುಮಾರು 25 ವರ್ಷಗಳು ಆಗಿದ್ದು, ಇತ್ತೀಚೆಗೆ ಭಾನುವಳ್ಳಿ ಗ್ರಾಮಪಂಚಾಯ್ತಿಯ ಪಿ.ಡಿ.ಒ. ಮತ್ತು ಕಾರ್ಯದರ್ಶಿಯವರ ಕುಮ್ಮಕ್ಕಿನಿಂದ ಜಾತಿ ಸಂಘರ್ಷಣೆ ತಂದಿರುವ ಇಂತಹ ಅಧಿಕಾರಿಗಳನ್ನು ಕೂಡಲೇ ಅಮಾನತ್ತು ಮಾಡಬೇಕು. ಸದರಿ ಅಧಿಕಾರಿಗಳು ನಾಮಫಲಕವನ್ನು ತೆರವುಗೊಳಿಸಿ ನಷ್ಟಮಾಡಿರುವುದಲ್ಲದೆ ನಾಡಿನ ಇತಿಹಾಸ ಪುರಷ ಮದಕರಿ ನಾಯಕರಿಗೆ ಅಪಮಾನಗೊಳಿಸಿದಂತೆ ಆಗಿರುತ್ತದೆ. ಅದಕ್ಕಾಗಿ ಸರ್ಕಾರವು ರಾಜವೀರ ಮದಕರಿ ಮಹಾದ್ವಾರವನ್ನು ಪುನ‌ರ್ ಪ್ರತಿಷ್ಠಾಪನೆ ಮಾಡಲು ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಸೂಕ್ತ ಆದೇಶ ನೀಡಬೇಕು ಇಲ್ಲವಾದಲ್ಲಿ ರಾಜ್ಯಾದ್ಯಂತ ಸರ್ಕಾರದ ವಿರುದ್ದ ಉಪ್ಪ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಈ ಮೂಲಕವಾಗಿ ತಮ್ಮ ಗಮನಕ್ಕೆ ತಂದು ಮನವಿಯ ಮೂಲಕ ಕೇಳಿಕೊಳ್ಳುತ್ತಿದ್ದೇವೆ ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಡಾ.ಟಿ. ಆರ್. ತುಳಸಿರಾಮ್ ತಿಳಿಸಿದರು.

ಪತ್ರಿಕಾ ಗೋಷ್ಠಿ ಯಲ್ಲಿ ಜನಾರ್ಧನ ರಾಜ್ಯ ಪ್ರಧಾನ ಕಾರ್ಯದರ್ಶಿ, ಪ್ರಕಾಶ್. ಪಿ, ಅಧ್ಯಕ್ಷರು,ಬೆಂಗಳೂರು ನಗರ ಜಿಲ್ಲೆ,- ಅಖಿಲ ಕರ್ನಾಟಕ ವಾಲ್ಮೀಕಿ ಮಹಾ ಸಭಾ ಯುವ ಘಟಕ,ಕೆ.ಸಿ, ನಾಗರಾಜು, ಅಧ್ಯಕ್ಷರು -ಕಾರ್ಮಿಕ ಘಟಕ,ರಂಗನಾಥ ನಾಯಕ ಮತ್ತು ರಾಜ್ಯ ನಿರ್ದೇಶಕರು ಉಪಸ್ಥಿತರಿದ್ದರು.

City Today News 9341997936

ಶ್ರೀ ರಾಘವೇಂದ್ರ ಸ್ವಾಮಿಗಳ ಜನ್ಮದಿನೋತ್ಸವ ಶ್ರೀ ಗುರು  ರಾಯರ ಬೃಂದಾವನಕ್ಕೆ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಗಳಿಂದ “ಲಕ್ಷ ಪುಷ್ಪಾರ್ಚನೆ”

ಶ್ರೀ ರಾಘವೇಂದ್ರ ಸ್ವಾಮಿಗಳ ಜನ್ಮದಿನೋತ್ಸವ ಶ್ರೀ ಗುರು  ರಾಯರ ಬೃಂದಾವನಕ್ಕೆ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಗಳಿಂದ “ಲಕ್ಷ ಪುಷ್ಪಾರ್ಚನೆ”
ಬೆಂಗಳೂರಿನ ಜಯನಗರದ 5 ನೇಬಡಾವಣೆಯನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮ ಪೂಜ್ಯ ಶ್ರೀ ಶ್ರೀ 10೦8 ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್, ಕೆ ವಾಧೀಂದ್ರಾಚಾರ್ಯರ ಮತ್ತು ಶ್ರೀ ಗುಂಡಾಚಾರ್ಯರ ನೇತೃತ್ವದಲ್ಲಿ ಶ್ರೀ ಗುರು ರಾಯರ ಬೃಂದಾವನಕ್ಕೆ ವಿಶೇಷ ಫಲ  ಪಂಚಾಮೃತ ಅಭಿಷೇಕಗಳು ಹಾಗೂ ಅಲಂಕಾರವು ನಡೆಯಿತು ನಂತರ  ಪರಮ ಪರಮ ಪೂಜ್ಯ ಶ್ರೀ108 ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರಿಗೆ ಅತ್ಯಂತ ಆತ್ಮೀಯರಾದ ಪರಮ ಪೂಜ್ಯ ಶ್ರೀ 108 ಶ್ರೀ ಪೇಜಾವರ ಮಠದ   ಶ್ರೀ ವಿಶ್ವ ಪ್ರಸನ್ನತೀರ್ಥ ಶ್ರೀ ಪಾದಂಗಳವರು ಶ್ರೀ ಮಠದ ವ್ಯವಸ್ಥಾಪಕರಾದ ಆರ್ ಕೆ ವಾದಿಂದ್ರ ಆಚಾರ್ಯರ ಆಹ್ವಾನದ ಮೇರೆಗೆ ರಾಯರ ಬೃಂದಾವನಕ್ಕೆ “ಲಕ್ಷ ಪುಷ್ಪ” ಅರ್ಚನೆ ಸೇವೆಯನ್ನು ಸಲ್ಲಿಸಲು ಆಗಮಿಸಿದ ಶ್ರೀಗಳನ್ನು ಪೂರ್ಣ ಕುಂಭದೊಂದಿಗೆ ಸ್ವಾಗತಿಸಿ ಬರಮಾಡಿಕೊಂಡರು ನಂತರ ಗುರುಗಳು ತಮ್ಮ ಸಂಸ್ಥಾನ ಪೂಜೆ ನೆರವೇರಿಸಿ ರಾಯರ ಬೃಂದಾವನಕ್ಕೆ ಲಕ್ಷ ಪುಷ್ಪಾರ್ಚನೆ ಯನ್ನು ನೆರವೇರಿಸಿದರು ನಂತರ ವಿದ್ವಾಂಸರಾದ ಬಂಡಿ ಶಾಮಾ ಚಾರ್ಯರ ಸಂಪಾದಕತ್ವದಲ್ಲಿ ತಯಾರಾದ”ಪ್ರಸನ್ನ ವಚನಂ”ಧ್ಯಾಯೇತ್ ಎಂಬ ಪುಸ್ತಕವನ್ನು ಶ್ರೀ ಗುರುರಾಯರ ಸನ್ನಿಧಿಯಲ್ಲಿ ಬಿಡುಗಡೆಗೊಳಿಸಿ “ಲೋಕಾರ್ಪಣೆ” ಮಾಡಿದರು ನಂತರದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ  ಮಹಿಮೆಯನ್ನು ವಿಶೇಷವಾಗಿ ಪ್ರವಚನ ಮಾಡುವ ಮೂಲಕ ಶ್ರೀ ರಾಘವೇಂದ್ರ ಸ್ವಾಮಿಗಳ ಹಿರಿಮೆಯನ್ನು ತಿಳಿಸಿ ಭಕ್ತರನ್ನು ಅನುಗ್ರಹಿಸಿದರು, ತದನಂತರ  ಶ್ರೀಸುಬುಧೇಂದ್ರ ತೀರ್ಥ ಶ್ರೀಗಳ  ಅಭಿಮಾನವನ್ನು ಕೊಂಡಾಡಿ ತಮ್ಮ ಸಂತೋಷವನ್ನು ವ್ಯಕ್ತ  ಪಡಿಸಿದರು, ನಂತರದಲ್ಲಿ  ಶ್ರೀಮಠದಿಂದ ಶ್ರೀಗಳಿಗೆ ಮಠದ ಪರವಾಗಿ ಆರ್ ಕೆ ವಾದಿಂದ್ರ ಆಚಾರ್ಯರು ಗೌರವಗಳನ್ನು ಸಲ್ಲಿಸಿ ಫಲ ಕಾಣಿಕೆಗಳನ್ನು ಸಮರ್ಪಿಸಿದರು ಎಂದು ಶ್ರೀ ನಂದಕಿಶೋರ್ ಆಚಾರ್ಯರು  ತಿಳಿಸಿದರು, ಶ್ರೀ ಮಠಕ್ಕೆ ಆಗಮಿಸಿದ ಸಾವಿರಾರು ಭಕ್ತ ಜನರಿಗೆ ಅನ್ನ ಸಂತರ್ಪಣೆಯ ಕಾರ್ಯಕ್ರಮವು ನೆರವೇರಿತು. ಈ ಪೂಜಾ ವೈಭವದಲ್ಲಿ ಪಾಲ್ಗೊಂಡ ಭಕ್ತರು ರಾಯರಿಗೆ ಸಮರ್ಪಿಸಿದ ಲಕ್ಷ ಪುಷ್ಪಾರ್ಚನೆ ಯಲ್ಲಿ  ಕಂಗೊಳಿಸಿದ ರಾಯರ ಬೃಂದಾವನದ ದರ್ಶನವನ್ನು ಕಣ್ಣು ತುಂಬಿಕೊಂಡು ಸಂತೋಷದಲ್ಲಿ ಜೈ ಶ್ರೀ ರಾಮ್ , ಜೈ ಶ್ರೀ ಗುರೋ ರಾಘವೇಂದ್ರ ಎಂಬ ಘೋಷ ದೊಂದಿಗೆ ಭಕ್ತಿಯ ಪರಾಕಾಷ್ಟೆಯಲ್ಲಿ ಮಿಂದೆದ್ದ ಭಕ್ತ ಜನರು ನಂತರದಲ್ಲಿ ತೀರ್ಥ ಪ್ರಸಾದ ವನ್ನು ಸ್ವೀಕರಿಸಿ ಶ್ರೀ ಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು, ಶ್ರೀ ಮಠಕ್ಕೆ ಆಗಮಿಸಿದ ಸಹಸ್ರಾರು ಭಕ್ತ ಜನರಿಗೆ ಅಚ್ಚುಕಟ್ಟಾದ ವ್ಯವಸ್ಥೆ ಯನ್ನು ಮಾಡಲಾಗಿತ್ತು, ಈ ಸಂದರ್ಭದಲ್ಲಿ, ವಿದ್ವಾನ್ ಬಂಡಿ ಶಾಮಾಚಾರ್ಯ, ವಿದ್ವಾನ್ ಅಗ್ನಿಹೋತ್ರೀ ವೇಣುಗೋಪಾ ಲಾಚಾರ್ಯ, ಶಾಸಕರಾದ ಸಿ ಕೆ ರಾಮಮೂರ್ತಿ ಅವರು ಚಿತ್ರನಟಿ ಪ್ರೇಮಾರವರು ಇನ್ನು ಹಲವಾರು ಗಣ್ಯಾತಿ ಗಣ್ಯರು ಭಕ್ತರು  ಭಾಗವಹಿಸಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾದರು.

City Today News 9341997936

100 ವರ್ಷಗಳು, 123 ಅಡಿ ಉದ್ದದ ದೋಸೆ: ವಿಶ್ವದ ಅತೀ ಉದ್ದದ ದೋಸೆ ನಿರ್ಮಿಸಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್™ ದಾಖಲೆಯೊಂದಿಗೆ ನೂರನೇ ವರ್ಷವನ್ನು ಆಚರಿಸುತ್ತಿರುವ ಎಂಟಿಆರ್

100 ವರ್ಷಗಳು, 123 ಅಡಿ ಉದ್ದದ ದೋಸೆ: ವಿಶ್ವದ ಅತೀ ಉದ್ದದ ದೋಸೆ ನಿರ್ಮಿಸಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್™ ದಾಖಲೆಯೊಂದಿಗೆ ನೂರನೇ ವರ್ಷವನ್ನು ಆಚರಿಸುತ್ತಿರುವ ಎಂಟಿಆರ್

ರಾಷ್ಟ್ರೀಯ, ಮಾರ್ಚ್ 16, 2024: ದೇಶದ ಖ್ಯಾತ ಸಂಸ್ಕರಿತ ಆಹಾರ ಪದಾರ್ಥಗಳ ತಯಾರಿಕಾ ಕಂಪೆನಿ ಎಂಟಿಆರ್ ಫುಡ್ಸ್ ತನ್ನ ನೂರನೇ ವರ್ಷದ ಯಶಸ್ಸನ್ನು ಆಚರಿಸಿಕೊಳ್ಳುವ ಈ ಶುಭ ಸಂದರ್ಭದಲ್ಲಿ ಲೋರ್ಮನ್ ಕಿಚನ್ ಸಲಕರಣೆಗಳ ಸಹಭಾಗಿತ್ವದಲ್ಲಿ ವಿಶ್ವದ ಅತೀ ಉದ್ದದ ದೋಸೆ ತಯಾರಿಕೆಗಾಗಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದಿದೆ. ತನ್ನ ಬೆಂಗಳೂರಿನ ಬೊಮ್ಮಸಂದ್ರ ಫ್ಯಾಕ್ಟರಿಯಲ್ಲಿ ಈ ಅಪರೂಪದ ದೋಸೆಯನ್ನು ತಯಾರಿಸಲು ಎಂಟಿಆರ್ ತನ್ನದೇ ಉತ್ಪನ್ನವಾದ ಸಿಗ್ನೇಷರ್ ರೆಡ್ ಬ್ಯಾಟರ್ ಅನ್ನು ಬಳಸಿದೆ.

ಎಂಟಿಆರ್ ನ ಕ್ಯುಸಿನ್ ಸೆಂಟರ್ ಆಫ್ ಎಕ್ಸಲೆನ್ಸ್ ನ ಮಾರ್ಗದರ್ಶನದಲ್ಲಿ ಅನುಭವಿ ತಜ್ಞರು ಮತ್ತು ಉದಯೋನ್ಮುಖ ಪಾಕಶಾಲೆಯ ಪ್ರತಿಭೆಗಳನ್ನು ಒಳಗೊಂಡಿರುವ 75 ಬಾಣಸಿಗರ ತಂಡವು ಈ ದಾಖಲೆಯನ್ನು ನಿರ್ಮಿಸಿದೆ. ಈ ಹಿಂದಿನ ದಾಖಲೆಯನ್ನು ಮುರಿಯುವ ಪ್ರಯತ್ನವು ಬ್ರ್ಯಾಂಡ್ನ ಪಾಕಶಾಲೆಯ ಕುಶಲತೆಯ ಪಾಂಡಿತ್ಯವನ್ನು ಎತ್ತಿ ತೋರಿಸಿದೆ ಮತ್ತು ದಕ್ಷಿಣ ಭಾರತದ ಆಹಾರದಲ್ಲಿ ಅದರ ಪರಿಣತಿಯನ್ನು ಪ್ರದರ್ಶಿಸುತ್ತದೆ.

ಈ ಐತಿಹಾಸಿಕ ಸಂದರ್ಭದಲ್ಲಿ ದೋಸೆಯು ಭಾರತದಾದ್ಯಂತದ ಜನರ ಹೃದಯ ಮತ್ತು ಅಂಗುಳಗಳಲ್ಲಿ ಇರಲೇಬೇಕಾದ ಸ್ಥಾನವನ್ನು ಹೊಂದಿದೆ. ಈ ಕುರಿತು ಮಾತನಾಡಿದ ಎಂಟಿಆರ್ ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಶ್ರೀ ಸುನಯ್ ಭಾಸಿನ್ ಅವರು “ಇದು ನಮಗೆ ಅಪಾರ ಹೆಮ್ಮೆಯ ಕ್ಷಣವಾಗಿದೆ. ನಾವು 100 ಅಡಿ ದೋಸೆಗಾಗಿ ಪ್ರಯತ್ನಿಸುತ್ತಿದ್ದೆವು, ಆದರೆ, ಅದನ್ನು ಮೀರಿ 123 ಅಡಿ ದೋಸೆಯನ್ನು ನಾವು ರಚಿಸಿದ್ದೇವೆ. ಈ ಅಪರೂಪದ ದೋಸೆ ನಮ್ಮ ಪರಂಪರೆ ಮತ್ತು ನಾವು ಅನೇಕ ತಲೆಮಾರುಗಳಿಂದ ಸ್ವೀಕರಿಸುತ್ತಿರುವ ಪ್ರೀತಿಯ ಆಚರಣೆಯಾಗಿದೆ. ದೋಸೆ ಮೊದಲಿನಿಂದಲೂ ಎಂಟಿಆರ್ ಪರಂಪರೆಯ ಭಾಗವಾಗಿದೆ ಮತ್ತು ಇಂದಿಗೂ ಇದು ಎಂಟಿಆರ್ ನ ಅತ್ಯಂತ ಪ್ರೀತಿಯ ಉತ್ಪನ್ನಗಳಲ್ಲಿ ಒಂದಾಗಿದೆ. ವಿನಮ್ರ ದಕ್ಷಿಣ ಭಾರತೀಯ ಖಾದ್ಯವಾಗಿರುವುದರಿಂದ, ಇದು ಈಗ ಪ್ರಪಂಚದಾದ್ಯಂತ ಗುರುತಿಸಲ್ಪಟ್ಟಿದೆ ಮತ್ತು ಪ್ರೀತಿಸಲ್ಪಟ್ಟಿದೆ. ನಮ್ಮ ಗ್ರಾಹಕರು ಮತ್ತು ಅವರ ನೆಚ್ಚಿನ ಖಾದ್ಯದೊಂದಿಗಿನ ನಮ್ಮ ಬಾಂಧವ್ಯದ ಆಚರಣೆಯೇ ಅತಿ ಉದ್ದದ ದೋಸೆ ವಿಶ್ವ ದಾಖಲೆಯಾಗಿದೆ ಎಂದರು.

ಲೋರ್ಮನ್ ಕಿಚನ್ ಎಕ್ವಿಪ್ಮೆಂಟ್ ಪ್ರೈ. ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಶ್ರೀ ಚಂದ್ರ ಮೌಳಿ ಅವರು ಮಾತನಾಡಿ “ವಿಶ್ವದ ಅತೀ ಉದ್ದವಾದ ದೋಸೆಯನ್ನು ವಿಶೇಷವಾಗಿ ನಿರ್ಮಿಸಿದ ಇಂಡಕ್ಷನ್ ಸ್ಟೌವ್ನಲ್ಲಿ ಬೇಯಿಸಲಾಗುತ್ತಿದೆ, ಇದು ಲೋರ್ಮನ್ ನಿರ್ಮಿಸಿದ ಅತೀ ಉದ್ದದ ಸ್ಟೌವ್ ಆಗಿದೆ. ಇಂಡಕ್ಷನ್ ಅಡುಗೆ ಉಪಕರಣಗಳು ಹೆಚ್ಚು ಪರಿಣಾಮಕಾರಿ, ಸಮರ್ಥನೀಯ ಮತ್ತು ಪರಿಸರ ಸ್ನೇಹಿಯಾಗಿದ್ದು, ಬಾಣಸಿಗರಿಗೆ ಸುರಕ್ಷಿತ ಪರಿಸರ ವ್ಯವಸ್ಥೆಯನ್ನು ನಿರ್ಮಿಸುತ್ತದೆ. ಈ ಐತಿಹಾಸಿಕ ಕ್ಷಣದಲ್ಲಿ ಎಂಟಿಆರ್ ನೊಂದಿಗೆ ಪಾಲುದಾರರಾಗಲು ನಾವು ಹೆಮ್ಮೆಪಡುತ್ತೇವೆ ಎಂದರು.

ಈ ದೋಸೆಯ ನಿರ್ಮಾಣ ಸಮುದಾಯದ ಮನೋಭಾವದ ಸಂಕೇತವಾಗಿಯೂ ಕಾರ್ಯನಿರ್ವಹಿಸುತ್ತದೆ, ಆಹಾರ ಉತ್ಸಾಹಿಗಳನ್ನು ಒಟ್ಟುಗೂಡಿಸುತ್ತದೆ. ಈ ಪಾಕಶಾಸ್ತ್ರದ ಅದ್ಭುತವನ್ನು ಎಂಟಿಆರ್ ನ ಉದ್ಯೋಗಿಗಳೊಂದಿಗೆ ಮಾತ್ರವಲ್ಲದೆ ಸ್ಥಳೀಯ ಶಾಲೆಗಳ ಮಕ್ಕಳು ಮತ್ತು ಸುತ್ತಮುತ್ತಲಿನ ಸಮುದಾಯಗಳ ಸದಸ್ಯರೊಂದಿಗೆ ಹಂಚಿಕೊಳ್ಳಲಾಗಿದೆ. ಇದರೊಂದಿಗೆ ಎಂಟಿಆರ್ ಈ ಹಿಂದಿನ ವಿಶ್ವದ ಅತೀ ಉದ್ದದ ದೋಸೆಯ 16.68 ಮೀ (54 ಅಡಿ 8.69 ಇಂಚು) ದಾಖಲೆಯನ್ನು ಮುರಿದಿದೆ.

City Today News 9341997936

ಅತಿಥಿ ಶಿಕ್ಷಕರ ವಾರ್ಷಿಕ ರಾಜ್ಯ ಸಮ್ಮೇಳನ

ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘ ಕರ್ನಾಟಕ ವು ದಿನಾಂಕ 17-03-2024 ರವಿವಾರ ದಂದು ಬೆಂಗಳೂರಿನ ಶಿಕ್ಷಕರ ಸದನ, ಕೆ ಜೆ ರೋಡ, ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ “ಅತಿಥಿ ಶಿಕ್ಷಕರ ವಾರ್ಷಿಕ ರಾಜ್ಯ ಸಮ್ಮೇಳನ” ಹಮ್ಮಿಕೊಂಡಿದ್ದು ಈ ಸಮ್ಮೇಳನವನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಶ್ರೀ ಮಧು ಬಂಗಾರಪ್ಪನವರು ಇನ್ನು ಹಲವು ನಾಯಕರ ಉಪಸ್ಥಿತಿಯಲ್ಲಿ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ,

ಹಾಗಾಗಿ ರಾಜ್ಯದ ಸಮಸ್ತ ಅತಿಥಿ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಸಮ್ಮೇಳನದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ರಾಜ್ಯ ಸಂಘದ ಗೌರವ ಅಧ್ಯಕ್ಷರಾದ ಶ್ರೀ ಅನಂತ್‌ ನಾಯ್ಕರವರು, ಅಧ್ಯಕ್ಷರಾದ ಶ್ರೀ ಹನುಮಂತ್ ಹೆಚ್ ಎಸ್ ರವರು,ಉಪಾಧ್ಯಕ್ಷರಾದ ಶ್ರೀಮತಿ. ಚಿತ್ರಲೇಖ, ಪ್ರದಾನ ಕಾರ್ಯದರ್ಶಿಯಾದ ಶ್ರೀ ಬಸವರಾಜ ಕರಡಿಗುಡ್ಡ, ನಿರ್ದೇಕ್ಷಕರಾದ ಶ್ರೀ ತಿಪ್ಪಣ್ಣ ಹತ್ತಿಗೂಡೂರು ಮತ್ತುಶ್ರೀ ಗಂಗಧರ ಹರಿಜನ್ ಹಾಗೂ ರಾಜ್ಯದ ಜಿಲ್ಲಾ/ತಾಲೂಕು ಸಮಿತಿಗಳ ಪದಾಧಿಕಾರಿಗಳು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.

City Today News 9341997936