ರಾಜ್ಯದಲ್ಲಿ ಖಾಲಿ ಇದ್ದ 88 ದಂತ ಆರೋಗ್ಯಾಧಿಕಾರಿಗಳ ಹುದ್ದೆಗಳ ಭರ್ತಿಯ ಆಯ್ಕೆ ಪಟ್ಟಿಯಲ್ಲಿ ಆಯ್ಕೆಗೊಂಡಿರುವ ಅಭ್ಯರ್ಥಿಗಳ ಹಣ ಕೊಟ್ಟು ರೋಸ್ಟರ್ ಕಂ ಮೆರಿಟ್ ಪದ್ಧತಿಯನ್ನು ಪಾಲಿಸದೇ ಅಕ್ರಮವಾಗಿ ಆಯ್ಕೆ

ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ

ದಿನಾಂಕ: 17-12-2021 ರಂದು ರಾಜ್ಯದಲ್ಲಿ ಖಾಲಿ ಇದ್ದ 88 ದಂತ ಆರೋಗ್ಯಾಧಿಕಾರಿಗಳ ಹುದ್ದೆಗಳ ಭರ್ತಿಯ ಆಯ್ಕೆ ಪಟ್ಟಿಯಲ್ಲಿ ಆಯ್ಕೆಗೊಂಡಿರುವ ಅಭ್ಯರ್ಥಿಗಳ ಹಣ ಕೊಟ್ಟು ರೋಸ್ಟರ್ ಕಂ ಮೆರಿಟ್ ಪದ್ಧತಿಯನ್ನು ಪಾಲಿಸದೇ ಅಕ್ರಮವಾಗಿ ಆಯ್ಕೆಗೊಂಡಿದ್ದು, ಅಕ್ರಮದಲ್ಲಿ ಭಾಗಿಯಾಗಿರುವವರಲ್ಲಿ ಮಾಜಿ ಆರೋಗ್ಯ ಸಚಿವರಾದ ಡಾ.ಕೆ.ಸುಧಾಕರ್ ಮತ್ತು ಸದಸ್ಯ ಕಾರ್ಯದರ್ಶಿ, ವಿಶೇಷ ನೇಮಕಾತಿ ಸಮಿತಿಯ ಮುಖ್ಯ ಆಡಳಿತಾಧಿಕಾರಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಆದ ಜಿ.ಎನ್.ಮಂಜುನಾಥಸ್ವಾಮಿ ಹಾಗೂ ವಿಶೇಷ ನೇಮಕಾತಿ ಸಮಿತಿಯ ಎಲ್ಲಾ ಸಿಬಬಂದಿಗಳು ಮತ್ತು ಇವರಿಗೆ ಹಣ ಕೊಟ್ಟು ಆಯ್ಕೆಯಾಗಿ ಪ್ರಸ್ತುತ ರಾಜ್ಯದ ವಿವಿದೆಡೆ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ದಂತ ವೈದ್ಯಾಧಿಕಾರಿಗಳ ವಿರುದ್ದ ಕಾನೂನು ಕ್ರಮ ಕೈಗೊಂಡು ನಿಜವಾದ ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಲು ಕೋರುತ್ತೇವೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಖಾಲಿ ಇದ್ದ 88 ದಂತ ವೈದ್ಯಾಧಿಕಾರಿಗಳ ನೇಮಕಾತಿ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಸರ್ಕಾರದ ಅಧಿಸೂಚನೆ ಸಂಖ್ಯೆ 65.9f.d/71/ 63.2.65/2019, 값: 16-06-2020 鳥 ঘন্ট: 25-08- 2020 ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಂತಿಮ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಇವರಲ್ಲಿ ಸಾಕಷ್ಟು ಅಭ್ಯರ್ಥಿಗಳು ಮೇಲೆ ಉಲ್ಲೇಖಿಸಿರುವ ವ್ಯಕ್ತಿಗಳೊಂದಿಗೆ ಶಾಮೀಲಾಗಿ ರೋಸ್ಟರ್ ಕಂ ಮೆರಿಟ್ ಪಾಲಿಸದೇ ಅಕ್ರಮವಾಗಿ ಆಯ್ಕೆಯಾಗಿ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಅಕ್ರಮವಾಗಿ ಆಯ್ಕೆಯಾಗಿ ಮೆರಿಟ್ ಇದ್ದು ಅನ್ಯಾಯಗೊಂಡ ಇನ್ನು ಹಲವಾರು ಅಭ್ಯರ್ಥಿಗಳು ಈ ಹುದ್ದೆಯಿಂದ ವಂಚಿತರಾಗಿದ್ದಾರೆ. ಅವರಿಗೆ ಅನ್ಯಾಯವಾಗಿದೆ ಈ ಅನ್ಯಾಯವನ್ನು ಸರಿಪಡಿಸಲು ಮಾನ್ಯ ಮುಖ್ಯಮಂತ್ರಿಗಳಿಗೆ, ಉಪ ಮುಖ್ಯಮಂತ್ರಿಯವರಿಗೆ ಹಾಗೂ ಆರೋಗ್ಯ ಸಚಿವರಿಗೆ ಹಾಗೂ ಕಾನೂನು ಸಚಿವರಿಗೆ ಹಾಗೂ ಮುಖ್ಯಕಾರ್ಯದರ್ಶಿಗಳಿಗೆ ಗಮನಕ್ಕೆ ತಂದರೂ ಕೂಡಾ ಇನ್ನು ಯಾವುದೇ ಕ್ರಮ ಜರುಗಿಸಿರುವುದಿಲ್ಲ. ಹಾಗೂ ಈ ಪ್ರಕರಣವನ್ನು ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಆರೋಗ್ಯ ಸಚಿವರಿಗೆ ಮನವಿ ಮಾಡುವುದೇನೆಂದರೆ ಸಿ.ಐ.ಡಿ ತನಿಖೆಯನ್ನು ಮುಕ್ತವಾಗಿ ಮಾಡಿಸಬೇಕೆಂದು ತಮ್ಮಲ್ಲಿ ಅನ್ಯಾಯಕ್ಕೆ ಒಳಗಾದ ದಂತ ವೈದ್ಯಾದಿಕಾರಿಗಳ ಪರವಾಗಿ ಆಗ್ರಹ ಮಾಡುತ್ತೇನೆ. ಅದಕ್ಕಾಗಿ ಅನ್ಯಾಯವಾಗಿರುವ ಅಭ್ಯರ್ಥಿಗಳಿಗೆ ನ್ಯಾಯ ಸಿಗಬೇಕೆಂದು ತಮ್ಮಲ್ಲಿ ವಿನಯಪೂರ್ವಕವಾಗಿ ವಿನಂತಿಸಿಕೊಳ್ಳುತ್ತೇವೆ ಎಂದು ಆರ್.ಆರ್.ಹೀರೆಮಠ,ಹೈಕೋರ್ಟ್ ವಕೀಲರು ಮತ್ತು ಕಾರ್ಯಾಧ್ಯಕ್ಷರು ಕರ್ನಾಟಕ ರಾಜ್ಯ ಶರಣ ವಕೀಲರ ವೇದಿಕೆ, ಬೆಂಗಳೂರು ಮತ್ತು ಡಾ||ನರಸಿಂಹಮೂರ್ತಿ,ದಂತ ವೈದ್ಯಾಧಿಕಾರಿಗಳು, ಕಡೂರು ರವರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು..

City Today News 9341997936

Changing mindsets is essential to making ear and hearing care accessible

At the press meet held at Press club of Bangalore, Director of NAYAK’S SPEECH &HEARING CLUNIC Dr. M. S. L. Nayak said,March 3 is World Hearing Day, an important observance by the World Health Organization (WHO). This is an opportunity to raise awareness about how to prevent deafness and hearing loss; and promote ear and hearing care around the world.

The world hearing day 2024 will focus on overcoming challenges posed by societal misperceptions and stigmatizing mindsets through awareness-raising and information-sharing targeted at the public and health care providers.

The theme for 2024 is Changing Mindsets -“let’s make Ear and Hearing care: a reality for all!”

WHO recognizes that over 80% of people globally who require hearing care is not receiving it. Social misperceptions and stigmatizing mindsets are the factors that hinder efforts to prevent and address hearing loss.

The main objectives of the campaign will be to dispel misconceptions, provide evidence-based information to reshape public perceptions of hearing loss and facilitate access to ear and hearing care services to all who need it, as an essential health service.

Hearing loss adversely affects acquisition of speech-language, learning, academic, psychological, social, economic aspects of an individual and in turn national productivity. While children with hearing loss fall behind in academics, most adults face prospect of unemployment. Those who are lucky to be employed earn low wages. More ever, it can lead to all sorts of health problems, including depression and anxiety, and is linked with dementia.

HIGHLIGHTS

Worldwide hearing loss is on the rise and currently it affects 1.5 billion people and may increase 1.5-fold to 2.5 billion by 2050. While 1 in 4 will have some degree of hearing impairment, 1 in 10 people – will have disabling hearing loss by then.

430 million people – require rehabilitation (including 34 million children).

Among those older than 60 years; over 25% are affected by disabling hearing loss.

1 billion young people are at risk of avoidable hearing loss, and around 200 million suffering with preventable or treatable chronic ear infections.

63 million people in India, suffer from hearing loss. As per NSSO 2001 survey 291 persons (including large percentage of children in the 0 to 14 age group) per one lakh population have severe to profound hearing loss.

In Karnataka, we have 4 million people (including 20,839 children in 0-6 years) with it.

While half of the cases are preventable, unaddressed hearing loss poses an annual cost of nearly US$I trillion globally towards educational, social support and lost productivity

The sustainable development goals for 2030 requires that all people, including those with hearing loss and ear diseases, have access to high quality services without experiencing financial hardship

Scaling up services in the next 10 years, through the H.E.A.R interventions will require only an additional annual per capita investment of US $ 1.33. This is equivalent to an annual additional investment cost of over Rs.7000 crore for India alone.

. The resulting health gain will avert nearly 130 million DALYS (disability adjusted life years). Investment in car and hearing care is cost-effective; we can expect a return of nearly 16 international dollars for every 1 dollar invested.

National Programme for Prevention and Control of Deafness (NPPCD) was launched in 2007 and is being implemented in 558 of 797 (2023) districts throughout India. It is high time we strengthen and expand it for the entire country.

On this occasion, Nayak’s Speech and Hearing Clinic in collaboration with ENRICH (Regd.) Rehabilitation trust will launch a “Free Hearing Screening programme” for infants. The program is intended to make services more accessible to the public to assess and monitor the baby’s hearing health in its first three years of life.

Shri B. Dayananda,I.P.S. Commissioner of Police Bangalore City will inaugurate the Free Infant Hearing Screening Programme at 250, Swamy complex 24th Main 2nd Phase J.P.Nagar, Bangalore

Free Hearing Screening Programme will help infants with hearing loss to acquire speech language skills naturally just like normally hearing infants. Families of babies detected to have hearing loss will be provided with professional guidance and support. Parents who suspect their child to have hearing problem or experiencing delayed hearing milestone may contact 080 42075691.

City Today News 9341997936

.

ಪಾಲಿಕೆಯಲ್ಲಿ 11 ಮಂದಿ ವೈದ್ಯರು ನಕಲಿ ಪದವಿ ಪ್ರಮಾಣ ಪತ್ರ ಸಲ್ಲಿಸಿ ಆರೋಗ್ಯ ವೈದ್ಯಾದಿಕಾರಿಯಾಗಿ ಮುಂಬಡ್ತಿ ಪಡೆದು ಸೇವೆ ಸಲ್ಲಿಸುತ್ತಿತರುವ ರವರನ್ನು ಸೇವೆಯಿಂದ ವಜಾ ಗೊಳಿಸಬೇಕೆಂದು ಅಗ್ರಹ

ಪಾಲಿಕೆಯಲ್ಲಿ 11 ಮಂದಿ ವೈದ್ಯರು ನಕಲಿ ಪದವಿ ಪ್ರಮಾಣ ಪತ್ರ ಸಲ್ಲಿಸಿ ಆರೋಗ್ಯ ವೈದ್ಯಾದಿಕಾರಿಯಾಗಿ ಮುಂಬಡ್ತಿ ಪಡೆದು ಸೇವೆ ಸಲ್ಲಿಸುತ್ತಿತರುವ ರವರನ್ನು ಸೇವೆಯಿಂದ ವಜಾ ಗೊಳಿಸಬೇಕೆಂದು ಅಗ್ರಹಿಸಿ ಪತ್ರಿಕಾಗೋಷ್ಠಿ ಮಾಡುವ ಬಗ್ಗೆ.

ಪಾಲಿಕೆಯಲ್ಲಿ 11 ಮಂದಿ ವೈದ್ಯರು ನಕಲಿ ಪದವಿ ಪ್ರಮಾಣ ಪತ್ರ ಸಲ್ಲಿಸಿ ಆರೋಗ್ಯ ವೈದ್ಯಾದಿಕಾರಿಯಾಗಿ ಮುಂಬಡ್ತಿ ಪಡೆದು ಸೇವೆ ಸಲ್ಲಿಸುತ್ತಿತರುವ ರವರನ್ನು ಸೇವೆಯಿಂದ ವಜಾ ಗೊಳಿಸಬೇಕೆಂದು ಅಗ್ರಹಿಸಿ ಪತ್ರಿಕಾಗೋಷ್ಠಿ ಮಾಡುವ ಬಗ್ಗೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಹಾಯಕ ಶಸ್ತ್ರಚಿಕಿತ್ಸಕರಾಗಿ ಕಾರ್ಯ ನಿರ್ವಹಿಸಿಕೊಂಡು ಬಂದಿರುವ (1) ಡಾ|| ವೇದವತಿ ಬಿ.ಜೆ., (2) ಡಾ|| ಸುನಿತ, (3) ಡಾ।। ಕಲಾವತಿದೇವಿ (4) ಡಾ॥ ಸಂದ್ಯ (5) ಡಾ॥ ಸುಜಾತ ಎಸ್, (6) ಡಾ|| ಅನಂತಶ್ರಿಲಕ್ಷ್ಮಿ ಟಿ., (7) ಡಾ|| ಲಕ್ಷ್ಮೀ ಪಿ.ಎಸ್., (8) ಡಾ॥ ಮಂಜುಳಾ ಎಸ್., (9) ಡಾ।।ನಯನತರಾರ ಪಾಟೀಲ್, (10) ಡಾ|| ರಾಮು ಜಿ., (11) ಡಾ|| ಸಯ್ಯದ್ ಉಮರ್ ಫಾರೂಕ್ ವೈದ್ಯರುಗಳಿಗೆ ವೇತನ ಶ್ರೇಣಿ ಆರೋಗ್ಯ ವೈದ್ಯಾಧಿಕಾರಿ ಹುದ್ದೆಗೆ ಸ್ಥಾನವನ್ನು ತುಂಬಲು ಮುಂಬಡ್ತಿಯನ್ನು ನೀಡಿರುತ್ತಾರೆ.

ಸದರಿ ಇವರುಗಳು ನೊಂದಾಣಿಯಾಗಿರುವ (KMC) ಕರ್ನಾಟಕ ವೈದ್ಯಕೀಯ ಮಂಡಳಿ ವತಿಯಿಂದ ಪಡೆದಿರುವ ಶಿಕ್ಷಣದ MPH / DPH ಪದವಿಯು ಮಾನ್ಯತೆ ಇಲ್ಲದೆ ರಾಜೀವ್ ಗಾಂಧಿ ಹೆಲ್ತ್ ಸೈನ್ಸ್ ವಿಶ್ವವಿದ್ಯಾಲಯದಿಂದ ಪಡೆದಿರುವಂತಹ ಶಿಕ್ಷಣಕ್ಕೆ ಪ್ರಮಾಣ ಪತ್ರವನ್ನು ನೀಡಿರುತ್ತಾರೆ. ಅಲ್ಲಿ ಪದ್ಮಶ್ರೀ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಎಂದು ನಮೂದಿಸಿರುತ್ತದೆ. ಇದು ವೈದ್ಯಕೀಯ ಕಾಲೇಜ್ ಇರುವುದಿಲ್ಲ.

ಈ ಮೇಲೆ ಸೂಚಿಸಿರುವ 11 ಮಂದಿ ವೈದ್ಯರು MPH / DPH ನಕಲಿ ದಾಖಲೆಗಳನ್ನು ನೀಡಿ ಆರೋಗ್ಯ ವೈದ್ಯಾಧಿಕಾರಿಗಳ ಹುದ್ದೆಗೆ C&R ನಿಯಮಗಳನ್ನು ಉಲ್ಲಂಘನೆ ಮಾಡಿ ನಿಯಮಗಳ ವಿರುದ್ಧ ಹಾಗೂ ಕಾನೂನು ಬಾಹಿರವಾಗಿ ಮುಂಬಡ್ತಿಯನ್ನು ಪಡೆದುಕೊಂಡಿರುತ್ತಾರೆ. ಈ 11 ಮಂದಿ ವೈದ್ಯರು ಮಾಡಿರುವಂತಹ ತರಬೇತಿ ಶಿಕ್ಷಣವು ಅಧಿಕೃತ ‘ಪದವಿ’ ಎಂದು ಪಾಲಿಕೆಯ ಆಡಳಿತ ಇಲಾಖೆಯು ತಪ್ಪಾಗಿ ಗ್ರಹಿಸಿಕೊಂಡು ಅವರಿಗೆ ಮುಂಬಡ್ತಿಯನ್ನು ನೀಡಲು ಶಿಫಾರಸ್ಸು ಮಾಡಿರುತ್ತಾರೆ.

MPH / DPH ಪದವಿಯು ಮಾನ್ಯತೆ ಇದೆಯೋ/ಇಲ್ಲವೋ ಎಂದು ಖಾತರಿ ಪಡೆಸಿಕೊಳ್ಳಬೇಕದ ದಾಖಲೆಗಳನ್ನು ಸಹ ಪರಿಶೀಲಿಸಿಕೊಳ್ಳದೆ ರಾಜೀವ್ ಗಾಂಧಿ ಹೆಲ್ತ್ ಸೈನ್ಸ್ ವಿಶ್ವವಿದ್ಯಾಲಯದಿಂದ ಪಡೆದುಕೊಂಡಿರುವಂತಹ ಶಿಕ್ಷಣಕ್ಕೆ ಪ್ರಮಾಣ ಪತ್ರವನ್ನು ನೀಡಿರುತ್ತಾರೆ.

ವೈದ್ಯರುಗಳಿಗೆ ವೇತನ ಶ್ರೇಣಿ ಆರೋಗ್ಯ ವೈದ್ಯಾಧಿಕಾರಿ ಹುದ್ದೆಗೆ ಮುಂಬಡ್ತಿಯ ನೀಡಿರುವ ವಿಚಾರದಲ್ಲಿ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಯೋಗೇಶ್ ಪಾಲಿಕೆಯ ಆಡಳಿತ ಅಧಿಕಾರಿ ಮಂಜುನಾಥ ಸ್ವಾಮಿ, ಮ್ಯಾನೇಜರ್ ನಾಗರಾಜ, ಕೇಸ್ ವರ್ಕರ್ ಮಧನ್, ನಗರಾಭಿವೃದ್ಧಿ ಇಲಾಖೆ ಶಿವಕುಮಾರ್ ಮತ್ತು ತುಕರಾಂ ಹಾಗೂ ಮಧುಚಂದ್ರ ತೇಜಸ್ವಿನಿ ರವರುಗಳು ವೈದ್ಯರುಗಳೊಂದಿಗೆ ಶಾಮಿಲಾಗಿ C&R ನಿಯಮಗಳನ್ನು ಉಲ್ಲಂಘನೆ ಮಾಡಿ ಸರ್ಕಾರವನ್ನು ಮತ್ತು ಪಾಲಿಕೆಯನ್ನು ದಿಕ್ಕು ತಪ್ಪಿಸಿದವರ ವಿರುದ್ಧ ಕ್ರಮ ಜರುಗಿಸಿ ಮುಂಬಡ್ತಿ ಪಡೆದಿರುವ ವೈದ್ಯರುಗಳನ್ನು ನಿಯಮ ಅನುಸಾರ ಸೇವೆಯಿಂದ ವಜಾಗೊಳಿಸಿ ಸರ್ಕಾರ ಇವರಿಗೆ ನೀಡಿರುವ ಸೌಲಭ್ಯಗಳನ್ನು ಹಿಂಪಡೆದು ಇವರ ಆಸ್ತಿಯನ್ನು ಮುಟ್ಟುಗೋಲು ಹಾಕಿ ಲೋಕಾಯುಕ್ತರಿಂದ ಸೂಕ್ತ ತನಿಖೆಗೆ ಒಳಪಡಿಸಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದೇವೆ. ಒಂದು ವೇಳೆ ನಿರ್ಲಕ್ಷೆವಹಿಸಿದ್ದಲ್ಲಿ ಇವರ ವಿರುದ್ಧ ಬೃಹತ್ ಪ್ರತಿಭಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಮಾದಿಗ ದಂಡೋರ MRPS ಮಾದಿಗ ಮೀಸಲಾತಿ ಹೋರಾಟ ಸಮಿತಿ, ಕರ್ನಾಟಕ ರಾಜ್ಯ ದಲಿತ ಸಂಗರ್ಷ ಸಮಿತಿ (ಸಂಯೋಜಕ) ವತಿಯಿಂದ ತ್ರಿಲೋಕ್‌ ಚಂದರ್ – ಅಧ್ಯಕ್ಷರು, ಬೆಂಗಳೂರು ನಗರ, ಸಿ. ಜಗದೀಶ್ – ವಿಭಾಗಿಯ ಸಂಘಟನ ಸಂಚಾಲಕರು ಮತ್ತು ಮಂಟೇಶ್ ಕತ್ತಿ- ರಾಜ್ಯ ವಕ್ತಾರರು ಮಾದಿಗ ದಂಡೋರ ರವರುಗಳು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.

City Today News 9341997936

ಚಲನಚಿತ್ರ ನಟ ದರ್ಶನ್‌ರವರು ಹೆಣ್ಣು ಮಕ್ಕಳ ಬಗ್ಗೆ ನೀಡಿರುವ ವಿವಾದಾತ್ಮಕ ಹೇಳಿಕೆ ಬಗ್ಗೆ ಖಂಡನೆ

ಚಲನಚಿತ್ರ ನಟ ದರ್ಶನ್‌ರವರು ಹೆಣ್ಣು ಮಕ್ಕಳ ಬಗ್ಗೆ ನೀಡಿರುವ ವಿವಾದಾತ್ಮಕ ಹೇಳಿಕೆ ಬಗ್ಗೆ ಖಂಡಿಸುವ ಪತ್ರಿಕೆ ಪ್ರಕಟಣೆ.

ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಚಲನಚಿತ್ರ ನಟ ದರ್ಶನ್ ಶ್ರೀರಂಗಪಟ್ಟಣದಲ್ಲಿ 25ನೇ ವರ್ಷದ ವಾರ್ಷಿಕೋತ್ಸವ ಸಂದರ್ಭದಲ್ಲಿ ಸಾರ್ವಜನಿಕ ಸಭೆಯಲ್ಲಿ ನಮ್ಮ ನಾಡಿನ ಹೆಣ್ಣು ಮಕ್ಕಳ ಬಗ್ಗೆ ಕೀಳು ಭಾವನೆಯಿಂದ ಒಬ್ಬಳು ಹೋಗುತ್ತಾಳೆ, ಒಬ್ಬಳು ಬರುತ್ತಾಳೆ. ಅವಳ ಅಜ್ಜಿನ ಬಡಿಯ ಎಂದು ಕೀಳಾಗಿ ಮಾತನಾಡಿರುತ್ತಾರೆ. ಈ ಸಭೆಯಲ್ಲಿ ಆದಿಚುಂಚನಗಿರಿ ಗುರುಗಳು ಹಾಗೂ ಸಂಸದೆ ಸುಮಲತಾ ಅಂಬರೀಷ್‌ರವರು ಹಾಗೂ ಹಲವಾರು ಗಣ್ಯಾತಿಗಣ್ಯರು ಸಾವಿರಾರು ಅಭಿಮಾನಿಗಳು ಉಪಸ್ಥಿತರಿದ್ದರು. ಕನ್ನಡ ನಾಡಿಗೆ ಮಾದರಿ ಆಗಬೇಕಿದ್ದ ಒಬ್ಬ ನಾಯಕ ನಟ ಸಾರ್ವಜನಿಕವಾಗಿ ಮಾತನಾಡುವುದು ತಪ್ಪು ಹಾಗೂ ಅಪರಾಧವಾಗಿದ್ದು, ವಿಚಾರಣೆ ನಡೆಸಿ ಆತ ಉಪಯೋಗಿಸಿರುವ ಪದಗಳನ್ನು ಯಾವ ಭಾವನೆಯಿಂದ ಹೇಳಿದ್ದಾರೆಂದು ಅವರಿಗೆ ಜನ್ಮ ನೀಡಿರುವುದು ಒಂದು ಹೆಣ್ಣು ಅದನ್ನು ಮರೆಯಬಾರದು ಹಾಗೂ ವಿವರಣೆ ಕೇಳಬೇಕಾಗಿ ವಿನಂತಿ ಹಾಗೂ ದರ್ಶನ್‌ರವರು 6 ಕೋಟಿ ಕನ್ನಡಿಗರ ಬೆಂಬಲದಿಂದ ಈ ಸ್ಥಾನಕ್ಕೆ ಬರಲು ಕಾರಣವಾಗಿರುತ್ತಾರೆ. ಕರ್ನಾಟಕದಲ್ಲಿ ನಮಗೆ ನಮ್ಮ ಹೆಣ್ಣು ಮಕ್ಕಳ ಬಗ್ಗೆ ಜವಾಬ್ದಾರಿ ಇರುತ್ತದೆ. ಕನ್ನಡಾಂಬೆಯು ಒಂದು ಹೆಣ್ಣು, ಭಾರತ ಮಾತೆಯೂ ಒಂದು ಹೆಣ್ಣು. ಆದರೆ ಇವರು ತೆರೆಯ ಮೇಲೆ ಹೆಣ್ಣು ಮಕ್ಕಳಿಗೆ ಗೌರವಿಸಿದಂತೆ ತೆರೆಯ ಹಿಂದೆಯು ಗೌರವಿಸಬೇಕು. ಈ ವಿಚಾರಗಳು ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದ್ದು, ನಮ್ಮ ಹೆಣ್ಣು ಮಕ್ಕಳ ಮೇಲೆ ಯಾವ ರೀತಿ ಕೆಟ್ಟ ಪರಿಣಾಮವು ಬೀಳಬಾರದು. ಹೆಣ್ಣು ಮಕ್ಕಳ ಬಗೆಗಿನ ಅವರ ದೃಷ್ಟಿ ಕೋನ ಬದಲಾಯಿಸಬೇಕು. 6 ಕೋಟಿ ಕನ್ನಡಿಗರ ಮುಂದೆ ದರ್ಶನ್‌ರವರು ಕೂಡಲೇ ಕ್ಷಮೆಯಾಚಿಸಬೇಕು ಎಂದು . ರಂಗಸ್ವಾಮಿ ಸಂಸ್ಥಾಪಕ ಅಧ್ಯಕ್ಷರು ಆಗ್ರಹಿಸಿದರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ನವೀನ್ ಕುಮಾರ್ ಸಿ.ಎನ್ ರಾಜ್ಯ ಸಂಘಟನಾ ಕಾರ್ಯದರ್ಶಿ,ಕೆ. ಧರ್ಮೇಂದ್ರ ರಾಜ್ಯಾ ಉಪಾಧ್ಯಕ್ಷರು,ಮತ್ತು ಆಂಜನಪ್ಪ .ಕ,ರಾಜ್ಯ ಪ್ರಧಾನ ಕಾರ್ಯದರ್ಶಿ ಉಪಸ್ಥಿತರಿದ್ದರು.

City Today News 9341997936

ಯುವ ಮುಸ್ತದಿ ನಾಯಕನಾದ ಶ್ರೀ ನಟರಾಜ್ ಡಿ.ಎನ್ ರವರಿಗೆ ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು ಮತ್ತು ಮಾನ್ಯ ಉಪಮುಖ್ಯಮಂತ್ರಿಗಳು ಮತ್ತು ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಡಿ.ಕೆ ಶಿವಕುಮಾರ್ ರವರು ಚಾಮರಾಜನಗರದ ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ನೀಡುವ ಕುರಿತು.

ಚಾಮರಾಜನಗರದ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿಯಾದ ಕಾಂಗ್ರೆಸ್ ಪಕ್ಷದ ಯುವ ಮುಸ್ತದಿ ನಾಯಕನಾದ ಶ್ರೀ ನಟರಾಜ್ ಡಿ.ಎನ್ ರವರಿಗೆ ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು ಮತ್ತು ಮಾನ್ಯ ಉಪಮುಖ್ಯಮಂತ್ರಿಗಳು ಮತ್ತು ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಡಿ.ಕೆ ಶಿವಕುಮಾರ್ ರವರು ಚಾಮರಾಜನಗರದ ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ನೀಡುವ ಕುರಿತು.

ಶ್ರೀ ನಟರಾಜ್ ಡಿ.ಎನ್ ರವರು ಚಾಮರಾಜನಗರ ಜಿಲ್ಲೆಯ ಸಂತೆಮಾರನಹಳ್ಳಿ ಹೋಬಳಿ, ದೇಶವಳ್ಳಿ ಗ್ರಾಮದ ಸಾಮಾನ್ಯ ಕುಟುಂಬದಲ್ಲಿ 1974ರಲ್ಲಿ ಜನಿಸಿದ ಇವರು ಯಾವುದೇ ರಾಜಕೀಯ ಹಿನ್ನೆಲೆಯನ್ನು ಹೊಂದಿದವರಲ್ಲ. ಇವರು ಮೈಸೂರು ಮತ್ತು ಬೆಂಗಳೂರು ವಿಶ್ವವಿದ್ಯಾಲಯಗಳಲ್ಲಿ M.Sc,.M.Ed, M.Phil,. ಉನ್ನತ ಪದವಿಗಳನ್ನು ಪಡೆದಿದ್ದು, ವಿದ್ಯಾರ್ಥಿ ಜೀವನದಿಂದಲೇ ಶಿಸ್ತು ಬದ್ಧ ಜೀವನವನ್ನು ಮೈಗೂಡಿಸಿಕೊಂಡು ಪ್ರಗತಿಪರ, ರೈತರ, ದಮನಿತರ ವಿದ್ಯಾರ್ಥಿಪರ ಹೋರಾಟಗಳನ್ನು ಮಾಡಿಕೊಂಡು ವಿದ್ಯಾರ್ಥಿ ನಾಯಕನಾಗಿ ಮೈಸೂರು ಮತ್ತು ಬೆಂಗಳೂರು ವಿಶ್ವವಿದ್ಯಾಲಯಗಳಲ್ಲಿ ತನ್ನದೇ ಆದ ಚಾಪನ್ನು ಮೂಡಿಸಿಕೊಂಡು ಬಂದಿರುತ್ತಾರೆ.

2004-05ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಬಿ.ಎಡ್ ಪದವೀಧರ ವೇದಿಕೆಯನ್ನು ಹುಟ್ಟು ಹಾಕುವ ಮೂಲಕ ವೇದಿಕೆಯ ರಾಜ್ಯಾಧ್ಯಕ್ಷರಾಗಿ ಹಲವಾರು ವಿದ್ಯಾರ್ಥಿ ಹೋರಾಟಗಳ ಮೂಲಕ ಸರ್ಕಾರದ ಗಮನವನ್ನು ಸೆಳೆಯುತ್ತಾ ಬಿ.ಎಡ್ ಪದವೀಧರ ಅಶೋತ್ತರಗಳಿಗೆ ಮತ್ತು ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಾ, ಸರ್ಕಾರದ ಹಂತಗಳಲ್ಲಿ ಹಲವಾರು ನೇಮಕಾತಿ ವಿಷಯ ಕುರಿತಂತೆ ಬೆಂಗಳೂರು ಮತ್ತು ವಿವಿಧ ಜಿಲ್ಲೆಗಳಲ್ಲಿ ತನ್ನದೇ ಆದ ವೇದಿಕೆಯ ಹೋರಾಟಗಳನ್ನು ರೂಪಿಸುವ ಮೂಲಕ ಸರ್ಕಾರ ಮತ್ತು ಶಿಕ್ಷಣ ಇಲಾಖೆಯ ಗಮನವನ್ನು ಸೆಳೆದು ಹಲವಾರು ನಿರುದ್ಯೋಗಿ ಬಿ.ಎಡ್ ಪದವೀಧರರಿಗೆ ಅನುಕೂಲವಾಗುವಂತೆ ವಿವಿಧ ಶಿಕ್ಷಣ ಇಲಾಖೆಗಳ ನೇಮಕಾತಿ ಅಧಿಸೂಚನೆಯನ್ನು ಹೊರ ಬೀಳುವಂತೆ ಮಾಡಿ ಉದ್ಯೋಗಗಳನ್ನು ಕಲ್ಪಿಸಿಕೊಳ್ಳುವ ನಿಟ್ಟಿನಲ್ಲಿ ತನ್ನದೇ ಆದ ವಿಶಿಷ್ಟ ಕೊಡುಗಳನ್ನು ನೀಡಿದ್ದಾರೆ.

ಈ ರೀತಿ ವಿದ್ಯಾರ್ಥಿ ದೆಸೆಯಿಂದಲೂ ನಾಯಕನಾಗಿ ಮತ್ತು ಕರ್ನಾಟಕ ರಾಜ್ಯ ಬಿ.ಎಡ್ ಪದವೀಧರ ವೇದಿಕೆಯ ಅಧ್ಯಕ್ಷರಾಗಿದ್ದ ಇವರನ್ನು ಗುರುತಿಸಿದ ರಾಜ್ಯ ಮತ್ತು ರಾಷ್ಟ್ರದ ಗಮನ ಸೆಳೆದಿರುವ ನಾಡಿನ ದೊರೆ ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು 2006ರಲ್ಲಿ ಶ್ರೀ ನಟರಾಜ್ ಡಿ.ಎನ್ ರವರಿಗೆ ಬೆಂಗಳೂರು ಪದವೀಧರ ಕ್ಷೇತ್ರದ ಟಿಕೆಟ್ ನೀಡಿ ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಇಳಿಸುವ ಮೂಲಕ ಇವರ ರಾಜಕೀಯ ಪ್ರವೇಶಕ್ಕೆ ಮುನ್ನುಡಿ ಬರೆದಿದ್ದಾರೆ. ಹೀಗೆ ಶ್ರೀ ನಟರಾಜ್ ಡಿ.ಎನ್ ರವರು ರಾಜಕೀಯ ಪ್ರವೇಶ ಪಡೆದ ದಿನದಿಂದಲೂ ಇಲ್ಲಿಯವರೆಗೂ ಬೆಂಬಲ ಮತ್ತು ಮಾರ್ಗದರ್ಶನವನ್ನು ಮಾಡುತ್ತಾ ಬಂದಿರುವ ಸನ್ಮಾನ್ಯ ಶ್ರೀ ಸತೀಶ್ ಜಾರಕಿಹೊಳಿಯವರು ಮತ್ತು ಅಂಬೇಡ್ಕರ್ ವಾದಿಗಳಾದ ಶ್ರೀ ಎಚ್. ಸಿ ಮಾದೇವಪ್ಪನವರು. ಚಾಮರಾಜನಗರದ ಅಭಿವೃದ್ಧಿಯ ಹರಿಕಾರರಾದ ದಿವಂಗತ ಶ್ರೀ ಎಚ್ ಸಿ ಮಹದೇವ ಪ್ರಸಾದ್ ಮತ್ತು ದಿವಂಗತ ಶ್ರೀ ಧ್ರುವನಾರಾಯಣ್ ರವರ ಮಾರ್ಗದರ್ಶನದಲ್ಲಿ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಸಕ್ರಿಯ ರಾಜಕಾರಣದಲ್ಲಿ ಸುಮಾರು ಎರಡು ದಶಕಗಳ ಸುಧೀರ್ಘ ಅನುಭವವುಳ್ಳ ವ್ಯಕ್ತಿಯಾಗಿದ್ದಾರೆ. ಹಾಗೆಯೇ ಯಾವುದೇ ರಾಜಕೀಯ ಸ್ಥಾನಮಾನವಿಲ್ಲದಿದ್ದರೂ ಕಾಂಗ್ರೆಸ್ ಪಕ್ಷದ ಶಿಸ್ತು ಬದ್ಧ ಕಾರ್ಯಕರ್ತನಾಗಿ ರಾಜ್ಯಮಟ್ಟದಲ್ಲಿ ತನ್ನನ್ನು ತಾನು ಗುರುತಿಸಿಕೊಂಡಿರುತ್ತಾರೆ.

2009ರ ಬೈ ಎಲೆಕ್ಷನ್ 2013 ಮತ್ತು 2018ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಗಳಲ್ಲಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರಕ್ಕೆ ಪ್ರಬಲ ಟಿಕೆಟ್ ಅಕಾಂಕ್ಷಿಯಾಗಿ ಹೋರಾಟ ನಡೆಸಿರುತ್ತಾರೆ. ಪಕ್ಷ ಟಿಕೆಟ್ ನೀಡದಿದ್ದಾಗ ಪಕ್ಷ ಟಿಕೆಟ್ ನೀಡಿದ ಅಭ್ಯರ್ಥಿಗಳ ಪರ ಅವರ ಗೆಲುವಿಗಾಗಿ ದುಡಿದಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೊಳ್ಳೇಗಾಲ ಕ್ಷೇತ್ರದ ಪ್ರಸ್ತುತ ಮಾನ್ಯ ಶಾಸಕರಾದ ಎಚ್.ಆರ್ ಕೃಷ್ಣಮೂರ್ತಿ ಅವರ ಗೆಲುವಿಗಾಗಿ ಮುಂಚೂಣಿಯಲ್ಲಿ ನಿಂತು ಗೆಲುವನ್ನು ತಂದು ಕೊಡುವುದರಲ್ಲಿ ಇವರ ಪಾತ್ರ ಪ್ರಮುಖವಾಗಿರುತ್ತದೆ.

ಈ ರೀತಿ ಸುಮಾರು 20 ವರ್ಷಗಳ ಸುದೀರ್ಘ ರಾಜಕೀಯ ಅನುಭವವುಳ್ಳ, ಒಬ್ಬ ನಿಷ್ಠಾವಂತ ಯುವ ಕಾಂಗ್ರೆಸ್ ನಾಯಕರಾದ ಶ್ರೀ ನಟರಾಜ್ ಡಿ.ಎನ್ ರವರಿಗೆ ಚಾಮರಾಜನಗರದ ಲೋಕಸಭಾ ಮೀಸಲು ಕ್ಷೇತ್ರಕ್ಕೆ ಟಿಕೆಟ್ ನೀಡುವ ಮೂಲಕ ಒಬ್ಬ ಯುವ ದಲಿತ ಮುಖಂಡನನ್ನು ಕಾಂಗ್ರೆಸ್ ಲೋಕಸಭೆಗೆ ಕಳಿಸುವ ಮೂಲಕ ಮತ್ತೊಂದು ಇತಿಹಾಸಕ್ಕೆ ನಾಂದಿಯಾಗುವಂತೆ ಮಾಡಬೇಕೆಂದು ಕರ್ನಾಟಕ ರಾಜ್ಯ ಶಿಕ್ಷಣ ವೇದಿಕೆ ಇವರ ಶಿಕ್ಷಣ ಕ್ಷೇತ್ರ ಕಾಳಜಿ, ರೈತರ ಬಗ್ಗೆ ಹೊಂದಿರುವ ಕಾಳಜಿ, ಸಮಾಜದ ದೀನದಲಿತರ ಬಗ್ಗೆ ಇರುವ ಅಪಾರ ಕಾಳಜಿಯನ್ನು ಗುರುತಿಸಿ ಇಂತಹ ಯುವ ಶಕ್ತಿಯ ಬೆಳವಣಿಗೆಗೆ ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಮತ್ತು ಮಾನ್ಯ ಮುಖ್ಯಮಂತ್ರಿಗಳು ಅನುವು ಮಾಡಿಕೊಡಬೇಕೆಂದು ಶಿಕ್ಷಣ ವೇದಿಕೆಯು ಈ ಪತ್ರಿಕಾ ಹೇಳಿಕೆಯ ಮೂಲಕ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ.

ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿಗೆ ಇವರ ಆದ್ಯತೆಗಳು:

ಶ್ರೀ ನಟರಾಜ್ ಡಿ. ಎನ್ ರವರು ಸ್ವತಹ ಚಾಮರಾಜನಗರ ಜಿಲ್ಲೆಯಾವರಾಗಿರುವುದರಿಂದ ಜಿಲ್ಲೆಯ ವಾಸ್ತವ ಚಿತ್ರಣವನ್ನು ಮತ್ತು ಜನರ ನಾಡಿಮಿಡಿತವನ್ನು ಅರಿತವರಾಗಿದ್ದು, ಈ ಜಿಲ್ಲೆ ಗಡಿನಾಡು ಜಿಲ್ಲೆಯಾಗಿರುವುದರಿಂದ ಇಲ್ಲಿನ ಭಾಷೆ ಮತ್ತು ಸಾಂಸ್ಕೃತಿಗೆ ಧಕ್ಕೆಯಾಗದ ರೀತಿ ಮತ್ತು ಗೂಳೆ ಹೋಗದ ರೀತಿ ಕ್ರಮವಹಿಸಿ. ಜಿಲ್ಲೆಯ ಎ.ಪಿ.ಎಂ.ಸಿ ಮಾರುಕಟ್ಟೆ ಅಭಿವೃದ್ಧಿಗೊಳಿಸುವುದು ಇವರ ಪ್ರಮುಖ ಆದ್ಯತೆಯಾಗಿದೆ. ಜೊತೆಗೆ ವ್ಯಾಪಾರ ವಹಿವಾಟಿನಲ್ಲಿ ಚಾಮರಾಜನಗರ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾಗಿದ್ದು ಅಂತರ್ ರಾಜ್ಯಗಳ ಪ್ರಭಾವಕ್ಕೆ ಒಳಗಾಗಿ ವಲಸೆ ಹೋಗುವುದನ್ನು ತಪ್ಪಿಸಿ ಅವರ ಬದುಕಿಗಾಗಿ ಪರ್ಯಾಯ ಜೀವನ ಮಾರ್ಗೋಪಾಯಗಳನ್ನು ಕೊಂಡುಕೊಳ್ಳುವುದರ ಜೊತೆಗೆ ಈ ಜಿಲ್ಲೆಗೆ ಹೈದರಾಬಾದ್ ಕರ್ನಾಟಕಕ್ಕೆ ಕೊಟ್ಟಂತಹ 371J ವಿಧಿಯನ್ನು ನಮ್ಮ ಜಿಲ್ಲೆಗೆ ನೀಡುವಂತೆ ಮಾಡುವುದು ಇವರ ಮತ್ತೊಂದು ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ.

ಹಾಗೆಯೇ ಶಿಕ್ಷಣ, ಉದ್ಯೋಗ, ರೈತರ ಪರ ಯೋಜನೆಗಳನ್ನು ಅನುಷ್ಠಾನ, ಮೂಲಭೂತ ಸೌಕರ್ಯಗಳು, ರಾಜ್ಯ ಮತ್ತು ರಾಷ್ಟ್ರದ ಹೆದ್ದಾರಿಗಳ ಉನ್ನತೀಕರಣ, ಜಾನಪದ ಕಲೆ, ಸಾಹಿತ್ಯ, ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವುದು. ಕೈಗಾರಿಕಾ ವಲಯಕ್ಕೆ ಉತ್ತೇಜನ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಕೃಷಿ ಆದ್ಯತೆ ಕಾವೇರಿ ನೀರಿನ ಸದ್ಬಳಕ ಹಾಗೂ ಪರಿಸರ ಸಂರಕ್ಷಣೆ ಮೂಲಕ ಚಾಮರಾಜನಗರ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ದುಡಿಯುವುದು ಇವರ ಪ್ರಮುಖ ಕನಸುಗಳಲ್ಲಿ ಒಂದಾಗಿದೆ ಎಂದು ವೇದಿಕೆಯ ವತಿಯಿಂದ ತಿಳಿಸಲಾಯಿತು.

ಪತ್ರಿಕಾ ಗೋಷ್ಠಿ ಯಲ್ಲಿ,ವೇದಿಕೆಯ ನಾಯಕರುಗಳಾದ ಗಂಗಧಾರಾಮೂರ್ತಿ, ನವರತ್ನ ಕುಮಾರ್, ಚಂದ್ರು, ಪ್ರಸಾದ್, ನಾಗರಾಜು ಮತ್ತು ದರ್ಶನ್ ಉಪಸ್ಥಿತರಿದ್ದರು.

City Today News 9341997936