ಇನ್ಫೋಸಿಸ್ ಫೌಂಡೇಷನ್’ನ ಒಂದು ಯೋಜನೆ ಈವರೆಗೆ ಸರಿಸುಮಾರು 32000 ನೇತ್ರ ಶಸ್ತ್ರ ಚಿಕಿತ್ಸೆಗಳನ್ನು ನೆರವೇರಿಸಲಾಗಿದೆ

ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ಮತ್ತು ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದ ಯೋಜನೆಗಳು ಅದರಲ್ಲಿಯೂ ಮುಖ್ಯವಾಗಿ ಕುಷ್ಠರೋಗ ನಿರ್ಮೂಲನೆ , ಕ್ಷಯರೋಗ ನಿಯಂತ್ರಣ , ಹೆಚ್.ಐ.ವಿ. / ಏಡ್ಸ್ ನಿಯಂತ್ರಣ , ಅಂಧತ್ವ ನಿಯಂತ್ರಣ ಯೋಜನೆಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಅನುಮೋದಿಸಲ್ಪಟ್ಟಿದ್ದು ಕಳೆದ 30 ವರ್ಷಗಳಿಂದ ನಿರಂತರವಾಗಿ ಅತ್ಯಂತ ಹಿಂದುಳಿದ , ಬರಪೀಡಿತ ಹಾಗೂ ಉತ್ತಮ ಆರೋಗ್ಯ ಸೌಲಭ್ಯಗಳಿಂದ ವಂಚಿತವಾಗಿರುವ ಪಾವಗಡದಲ್ಲಿ ಸುವರ್ಣಾಕ್ಷರದಿಂದ ಬರೆದಿಡುವಂತಹ ಒಂದು ಅದ್ಭುತ ಕಾರ್ಯಕ್ರಮ ಇದೇ ಸೆಪ್ಟೆಂಬರ್ 4 , ಶನಿವಾರದಂದು ನೆರವೇರಆದೆ . ಸಂಸ್ಥೆಯ ರಜತ ಮಹೋತ್ಸವದ ಅಂಗವಾಗಿ ಇನ್ಫೋಸಿಸ್ ಫೌಂಡೇಷನ್ ಪ್ರಾಯೋಜಕತ್ವದಲ್ಲಿ ನಿರ್ಮಿಸಿರುವ ನೂತನ ಕಣ್ಣಿನ ಆಸ್ಪತ್ರೆಯ ಸಂಕೀರ್ಣದ ಉದ್ಘಾಟನೆ ವರ್ಚುವಲ್ ಮೂಲಕ ನೆರವೇರಲಿದೆ . ಘನತೆವೆತ್ತ ಉಪರಾಷ್ಟ್ರಪತಿಗಳಾದ ಶ್ರೀ ಎಂ.ವೆಂಕಯ್ಯನಾಯ್ಡು ರವರು ಈ ಕಾರ್ಯಕ್ರಮವನ್ನು ವೆಬನಾರ್ ಮೂಲಕ ನೆರವೇರಿಸಿಕೊಡಲಿದ್ದಾರೆ . ಕಾರ್ಯಕ್ರಮಕ್ಕೆ ದಿವ್ಯಸಾನ್ನಿಧ್ಯವನ್ನು ಶ್ರೀ ಶ್ರೀ ನಿರಂಜನ ಪ್ರಣವ ಸ್ವರೂಪಿ ಶ್ರೀ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ಅಧ್ಯಕ್ಷರು , ಶ್ರೀ ಸಿದ್ದಗಂಗ ಸಂಸ್ಥಾನ , ತುಮಕೂರು ರವರು ವಹಿಸಿಕೊಳ್ಳಲಿದ್ದಾರೆ . ಇದೇ ಸಂದರ್ಭದಲ್ಲಿ ಮಾನ್ಯ ಕೇಂದ್ರ ಸರ್ಕಾರದ ರಾಜ್ಯ ಸಚಿವರಾದ ಶ್ರೀ ಎ.ನಾರಾಯಣ ಸ್ವಾಮಿ , ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರವರು ಹಾಗೂ ಕರ್ನಾಟಕ ರಾಜ್ಯ ಸಚಿವರುಗಳಾದ ಶ್ರೀ ಜೆ.ಸಿ.ಮಾಧುಸ್ವಾಮಿ , ಸಣ್ಣ ನೀರಾವರಿ ಮತ್ತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆ , ಶ್ರೀ ಕೆ.ಸುಧಾಕರ್ , ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ , ಶ್ರೀ ಬಿ.ಸಿ.ನಾಗೇಶ್ , ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮತ್ತು ಸಕಾಲ ಇಲಾಖೆ , ಶ್ರೀ ಎಸ್.ಸುರೇಶ್ ಕುಮಾರ್ , ಮಾಜಿ ಸಚಿವರು ಹಾಗೂ ಹಾಲಿ ಶಾಸಕರು , ರಾಜಾಜಿನಗರ , ಬೆಂಗಳೂರು ಮತ್ತು ಶ್ರೀ ವೆಂಕಟರಮಣಪ್ಪ , ಮಾಜಿ ಸಚಿವರು ಹಾಗೂ ಹಾಲಿ ಶಾಸಕರು , ಪಾವಗಡ ರವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ . ಈ ಕಾರ್ಯಕ್ರಮ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದ ಆವರಣದಲ್ಲಿರುವ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ನೆರವೇರಲಿದೆ .

ಗ್ರಾಮಾಂತರ ಪ್ರದೇಶದಲ್ಲಿ ಬಹುಶಃ ದಕ್ಷಿಣ ಭಾರತದಲ್ಲಿಯೇ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಹಾಗೂ ಉಪಕರಣಗಳುಳ್ಳ ಕಣ್ಣಿನ ಆಸ್ಪತ್ರೆ ಎಂದಲ್ಲಿ ತಪ್ಪಾಗಲಾರದು . ಈಗಾಗಲೇ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಗಡಿ ಭಾಗವಾದ ಪಾವಗಡದಲ್ಲಿ ಕಳೆದ ಮೂರು ದಶಕಗಳಿಂದ ನಿರಂತರವಾಗಿ ಸೇವೆಯನ್ನು ನಡೆಸಿಕೊಂಡು ಬರುತ್ತಿರುವ ಈ ಸಂಸ್ಥೆಗೆ ಶ್ರೀಮತಿ ಸುಧಾಮೂರ್ತಿ , ಅಧ್ಯಕ್ಷರು . ಇನ್ಫೋಸಿಸ್ ಫೌಂಡೇಷನ್ ರವರು ಅಪಾರವಾದ ಸಹಕಾರ ನೀಡುತ್ತಾ ಈ ಗ್ರಾಮಾಂತರ ಭಾಗದ ಜನರಿಗೆ ಅತ್ಯಂತ ಉತ್ಕೃಷ್ಟ ಮಟ್ಟದ ಸೇವೆಯನ್ನು ಸಲ್ಲಿಸುವಂತೆ ಮಾಡಲು ಈ ನೂತನ ಸಂಕೀರ್ಣ ಇನ್ಫೋಸಿಸ್ ಪ್ರಾಯೋಜಕತ್ವದಲ್ಲಿ ತಲೆ ಎತ್ತಿ ನಿಂತಿದೆ . ಈ ಮಹತ್ಕಾರ್ಯಕ್ಕೆ ಅನೇಕ ಸಂಸ್ಥೆಗಳಾದ ಬಗಾರಿಯಾ ದತ್ತಿ ಸಂಸ್ಥೆ , ಭ್ರಂಡ್ ಫೌಂಡೇಷನ್ ಫಾರ್ ಇಂಡಿಯಾ , ಸರ್ ದೊರಾಜಿ ಟಾಟಾ ಟ್ರಸ್ಟ್ , ಕನ್ನಡ ಬಳಗ , ಯು.ಕೆ. , ತುಮಕೂರು ಮರ್ಚೆಂಟ್ಸ್ ಕ್ರೆಡಿಟ್ ಕೋಆಪರೇಟಿವ್ ಅಮಿಟೆಡ್ , ತುಮಕೂರು ಮುಂತಾದ ಸಂಘ ಸಂಸ್ಥೆಗಳು ಸಹಾಯ ಹಸ್ತವನ್ನು ನೀಡಿವೆ . ಒಟ್ಟಿನಲ್ಲಿ ಸ್ವಾಮಿ ವಿವೇಕಾನಂದರ ಧೈಯ ವಾಕ್ಯವಾದ ಜೀವನಲ್ಲಿ ಶಿವನನ್ನು ಕಂಡು ಸೇವೆ ಸಲ್ಲಿಸುವ ಅನುಷ್ಠಾನ ರೂಪವೇ ಈ ಸಂಸ್ಥೆಯಾಗಿದೆ ಎಂದಲ್ಲಿ ತಪ್ಪಾಗಲಾರದು . ಈ ಸಂಸ್ಥೆಗೆ ದಿವಂಗತ ಶ್ರೀ ಅನಂತಕುಮಾರ್ ( ಕೇಂದ್ರ ಸಚಿವರು ) ಅತ್ಯಂತ ರೀತಿಯಲ್ಲಿ ಸಹಕಾರ ನೀಡುತ್ತಿದುದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ . ಇದೇ ರೀತಿ ಈ ಸಂಸ್ಥೆಗೆ ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ರವರು , ಅಧ್ಯಕ್ಷರು , ರಜತ ಮಹೋತ್ಸವದ ಸ್ವಾಗತ ಸಮಿತಿ ರವರು ಸರ್ವ ರೀತಿಯಲ್ಲಿ ಪ್ರೋತ್ಸಾಹ ಹಾಗೂ ಸಹಾಯ ಹಸ್ತವನ್ನು ನೀಡುತ್ತಿದ್ದಾರೆ .

ಸಂಸ್ಥೆಯು ಹಿರಿಯರಾದ ಮಹಾ ಪೋಷಕರುಗಳಾದ ನ್ಯಾಯಮೂರ್ತಿ ಶ್ರೀ ಎಂ.ಎನ್.ವೆಂಕಟಾಚಲಯ್ಯ ‘ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳು , ಸರ್ವೋಚ್ಛ ನ್ಯಾಯಾಲಯ , ಭಾರತ ಸರ್ಕಾರ ಮತ್ತು ಶ್ರೀ ಶ್ರೀ ಧರ್ಮಾಧಿಕಾರಿಗಳು , ಶ್ರೀ ವೀರೇಂದ್ರ ಹೆಗ್ಗಡೆ , ಶ್ರೀ ಕ್ಷೇತ್ರ ಧರ್ಮಸ್ಥಳ , ನ್ಯಾಯಮೂರ್ತಿ ಶ್ರೀ ಎನ್.ಸಂತೋಷ್ ಹೆಗ್ಡೆ . ಮಾಜಿ ಲೋಕಾಯುಕ್ತರು , ಕರ್ನಾಟಕ ಸರ್ಕಾರ , ಶ್ರೀ ವಿ.ವಿ.ಭಾಸ್ಕರ್ , ನಿವೃತ್ತ ಡಿಜಿ – ಐಜಿಪಿ , ಕರ್ನಾಟಕ ಸರ್ಕಾರ ಮತ್ತು ಶ್ರೀ ವಿವೇಕ ರೆಡ್ಡಿ , ಪ್ರಸಿದ್ಧ ವಕೀಲರು , ಡಾ.ಕೆ.ಭುಜಂಗ ಶೆಟ್ಟಿ , ಅಧ್ಯಕ್ಷರು , ನಾರಾಯಣ ನೇತ್ರಾಲಯ , ಡಾ.ದೇವಿ ಪ್ರಸಾದ ಶೆಟ್ಟಿ , ಅಧ್ಯಕ್ಷರು , ನಾರಾಯಣ ಹೃದಯಾಲಯ , ಡಾ.ಮಹಾಬಲೇಶ್ವರ ಮಯ್ಯ , ಪ್ರಸಿದ್ಧ ತಜ್ಞರು , ಇವರುಗಳ ಸಹಕಾರ ಹಾಗೂ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಸೇವಾ ಯೋಜನೆಗಳನ್ನು ನಡೆಸುತ್ತಾ ಬರುತ್ತಿರುವ ಸಂಸ್ಥೆ ಇದಾಗಿದೆ .

ನೂತನ ಸಂಕೀರ್ಣದ ವಿವರ : ‘ ಶ್ರೀಶಾರದಾದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು 16-6-2002ರಂದು ಮಹಾಮಾತೆ ಶ್ರೀ ಶಾರದಾದೇವಿಯವರ 150 ನೇ ಜನ್ಮದಿನೋತ್ಸವದ ಶುಭಸಂದರ್ಭದಲ್ಲಿ ಶ್ರೀರಾಮಕೃಷ್ಣ ಮಠ ಮತ್ತು ಮಿಷನ್ನಿನ ಉಪಾಧ್ಯಕ್ಷರಾದ ಶ್ರೀಮತ್ ಸ್ವಾಮಿ ಗೌತಮಾನಂದಜೀ ಮಹಾರಾಜ್‌ರವರ ಅಮೃತಹಸ್ತದಿಂದ ಆರಂಭವಾಯಿತು . ಅಂದಿನಿಂದ ನಿರಂತರವಾಗಿ ಅಂಧತ್ವ ನಿವಾರಣಾ ಯೋಜನೆಯಡಿಯಲ್ಲಿ ಈವರೆಗೆ ಸುಮಾರು 3200 ಕ್ಕೂ ಮಿಗಿಲಾದ ನೇತ್ರ ಶಸ್ತ್ರಚಿಕಿತ್ಸೆಗಳನ್ನು ನೆರವೇರಿಸಲಾಗಿದೆ . ಇದೇ ಸಂದರ್ಭದಲ್ಲಿ ಪ್ರಖ್ಯಾತ ನಾರಾಯಣ ನೇತ್ರಾಲಯದ ಸಹಕಾರದಿಂದ ಮಕ್ಕಳ ನೇತ್ರ ಶಸ್ತ್ರಚಿಕಿತ್ಸೆಯನ್ನೂ ಆರಂಭಿಸಲಾಯಿತು . ಅನಂತರ , ತಜ್ಞರ ಸಹಕಾರದೊಂದಿಗೆ ಆರು . ತಿಂಗಳ ಮಗುವಿನಿಂದ ಹಿಡಿದು ಹದಿನೈದು ವರ್ಷದ ಮಕ್ಕಳವರೆಗೆ ಅತ್ಯಂತ ಸೂಕ್ಷ್ಮವಾದ ಸುಮಾರು 146 ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿದೆ . ಇದೇ ಸಂದರ್ಭದಲ್ಲಿ , ನಮ್ಮ ಸಂಸ್ಥೆಯ ಆಶ್ರಯದಲ್ಲಿ , ಅನೇಕಾನೇಕ ವೈಜ್ಞಾನಿಕ ಸಂಶೋಧನಾ ಅಧ್ಯಯನಗಳನ್ನು ನಡೆಸಲಾಗಿದೆ . ಪ್ರಖ್ಯಾತ ನೇತ್ರತಜ್ಞರಾದ ಡಾ . ಭುಜಂಗ ಶೆಟ್ಟಿ , ಡಾ . ವಸುಧಾ , ಡಾ . ನರೇಶ್ , ಡಾ . ನರೇಂದ್ರ , ಡಾ . ಕೌಶಿಕ್ ಹೆಗಡೆ , ಡಾ . ಸುಭಾಶ್ ಚಂದ್ರ , ಡಾ . ಅಶ್ವಿನ್ ಮುಂತಾದವರ ಸಹಕಾರದಿಂದ ಅಂತರರಾಷ್ಟ್ರೀಯ ಮಟ್ಟದ ನೇತ್ರಕ್ಕೆ ಸಂಬಂಧಪಟ್ಟ ಸಂಶೋಧನಾ ಅಧ್ಯಯನಗಳನ್ನು ನಡೆಸಿರುವ ಕೀರ್ತಿ ಈ ಸಂಸ್ಥೆಗೆ ಸೇರಿದೆ . ಇದೇ ಸಂದರ್ಭದಲ್ಲಿ , ವಾಟಾ ಟ್ರಸ್ಟ್ ಮತ್ತು ಇನ್ಫೋಸಿಸ್ ಫೌಂಡೇಷನ್ ರವರ ಅಮೂಲ್ಯ ಸಹಕಾರದಿಂದ , 32148 ಮಕ್ಕಳನ್ನು ಒಳಗೊಂಡಂತೆ ( ಎರಡು ಹಂತಗಳಲ್ಲಿ ) ಅಂತರರಾಷ್ಟ್ರೀಯ ಮಟ್ಟದ ಅಧ್ಯಯನ ಒಂದನ್ನು ಕೈಗೆತ್ತಿಕೊಂಡು 2008 ರಿಂದ 2016 ವರೆಗೆ ನಿರಂತರವಾಗಿ ನಡೆಸಲಾಯಿತು . ಅಂತರರಾಷ್ಟ್ರೀಯ ಖ್ಯಾತಿಯ ಡಾ . ದೇವಿಪ್ರಸಾದ ಶೆಟ್ಟರವರ ಸಹಕಾರದಿಂದ ಜೆನೆಟಿಕ್ , ಮೆಟಾಬಾಲಿಕ್ ಮತ್ತು ಅತಿ ಸೂಕ್ಷ್ಮ ಪರೀಕ್ಷೆಗಳನ್ನು ಮತ್ತು ಪ್ರಯೋಗಗಳನ್ನು ನಾರಾಯಣ ಹೃದಯಾಲಯದ ಪ್ರಯೋಗಾಲಯದಲ್ಲಿ ನಡೆಸಲಾಯಿತು , ರಾಷ್ಟ್ರೀಯ ಅಂಕಿಅಂಶಗಳ ಸಂಶೋಧನಾ ಕೇಂದ್ರ , ನಾಗರಭಾವಿ , ಬೆಂಗಳೂರು ಇವರ ಅಮೂಲ್ಯ ಮಾರ್ಗದರ್ಶನದಲ್ಲಿ ಈ ಪ್ರತಿಷ್ಠಿತ ಅಧ್ಯಯನ ನಡೆದು , ಜಾಗತಿಕ ನೇತ್ರ ಸಂಶೋಧನಾ ನಿಯತಕಾಲಿಕದಲ್ಲಿ ಇದರ ಸಂಶೋಧನಾ ವರದಿ ಪ್ರಕಟಗೊಂಡಿತು , ನಮ್ಮ ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರ ಹಾಗೂ ಸಂಶೋಧನಾ ಕೇಂದ್ರವು ರಾಜ್ಯ , ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟಗಳಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ .

‘ ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ‘ ಮತ್ತು ‘ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರ’ದ ರಜತ ಮಹೋತ್ಸವದ ಸವಿನೆನಪಿಗಾಗಿ ಇನ್ಫೋಸಿಸ್ ಫೌಂಡೇಷನ್‌ನ ನೆರವಿನಿಂದ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಒಳಗೊಂಡ ಒಂದು ಸುಸಜ್ಜಿತ ಆಸ್ಪತ್ರೆಯ ಸಂಕೀರ್ಣವನ್ನು ಇದೀಗ ಉದ್ಘಾಟನೆಗೆ ಅಣಿಪಡಿಸಲಾಗಿದೆ . ಇಡೀ ದಕ್ಷಿಣ ಭಾರತದಲ್ಲಿಯೇ ಬಹುಶಃ ಇದು ಅತ್ಯಂತ ಸುಸಜ್ಜಿತವಾದ ಹಾಗೂ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವ ಏಕೈಕ ಗ್ರಾಮಾಂತರ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ . ಇದಕ್ಕೆ ಪೂರಕವಾಗುವಂತೆ ಭಾರತದಲ್ಲಿಯೇ ವಿಖ್ಯಾತವಾದ ಮಿಂಟೋ ಕಣ್ಣಾಸ್ಪತ್ರ ಹಾಗೂ ಪ್ರಾದೇಶಿಕ ನೇತ್ರ ಚಿಕಿತ್ಸಾ ಸಂಸ್ಥೆ ತನ್ನ 125 ನೇ ಸಂಸ್ಥಾಪನಾ ದಿನದ ಸಂದರ್ಭದಲ್ಲಿ ಈ ಕೇಂದ್ರವನ್ನು ತನ್ನ ಗ್ರಾಮೀಣ ನೇತ್ರ ಚಿಕಿತ್ಸಾ ಯೋಜನೆಯಡಿಯಲ್ಲಿ ಒಡಂಬಡಿಕೆ ಮಾಡಿಕೊಂಡಿರುವುದು ಹೆಮ್ಮೆಯ ವಿಚಾರವೇ ಸರಿ , ಆ ಪ್ರಕಾರ ನೇತ್ರತಜ್ಞರು ಹಾಗೂ ದೃಷ್ಟಿಮಾಪಕರು ಈ ಸಂಸ್ಥೆಗೆ ನಿಯೋಜಿಸಲ್ಪಟ್ಟಿರುತ್ತಾರೆ , ಹಾಗಾಗಿ ಇನ್ನೂ ಶ್ರೇಷ್ಠ ಮಟ್ಟದ ಸೇವೆಯನ್ನು ಸಲ್ಲಿಸುವ ವ್ಯವಸ್ಥೆ ಈ ಸಂಸ್ಥೆಗೆ ಒದಗಿ ಬಂದಿದೆ , ನೂತನ ಆಸ್ಪತ್ರ ಸಂಕೀರ್ಣ ಮತ್ತು ಹೊರ ರೋಗಿ ಕೇಂದ್ರದಲ್ಲಿ ಸುಮಾರು ಮೂರು ಕೋಟು ರೂ . ವೆಚ್ಚದಲ್ಲಿ ನಾನಾ ರೀತಿಯ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಸ್ಥಾಪಿಸಲಾಗಿದೆ . ಈ ಸಂಸ್ಥೆಯ ವತಿಯಿಂದ ರೋಗಿಗಳಿಗೂ ಅವರ ಸಹಾಯಕರಿಗೂ ಉಚಿತವಾಗಿ ಊಟೋಪಚಾರ , ಔಷಧಿ , ಶಸ್ತ್ರಚಿಕಿತ್ಸೆ ಹಾಗೂ ಸಾರಿಗೆ ಸೌಲಭ್ಯಗಳನ್ನು ಒದಗಿಸುತ್ತಿರುವುದೂ ಹೆಮ್ಮೆಯ ಸಂಗತಿಯಾಗಿದೆ .

ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಈ ಕೆಳಕಂಡ ಶಸ್ತ್ರಚಿಕಿತ್ಸೆಗಳನ್ನು ಉತ್ತಡ ಮಟ್ಟದಲ್ಲಿ ತಜ್ಞರುಗಳಿಂದ ನೆರವೇರಿಸಲಾಗುತ್ತದೆ . ಮಹಾನಗರಗಳಲ್ಲಿ ಮಾತ್ರ ದೊರೆಯುವ ಸೌಲಭ್ಯ ಇದೀಗ ಗ್ರಾಮಾಂತರ ಭಾಗವಾದ ಪಾವಗಡದಲ್ಲಿ ಲಭ್ಯ . ಉತ್ಕೃಷ್ಟವಾದ ಮತ್ತು ಅತ್ಯಂತ ಸೂಕ್ಷ್ಮಾತಿ ಸೂಕ್ಷ್ಮ ಶಸ್ತ್ರ ಚಿಕಿತ್ಸೆಗಳನ್ನು ರಿಯಾಯಿತಿ ದರದಲ್ಲಿ ನೆರವೇರಿಸಲಾಗುತ್ತದೆ .

1 ) ಫೇಕೋ ಎಮಲ್ಟಿಫಿಕೇಶನ್ ಸರ್ಜರಿ ( Phacoemulsification Surgery [ Laser No – Stitch Cataract Surgery with foldable IOL ) 2 ) ಸಣ್ಣ ಸೀಳುವಿಕೆಯ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆ ( Manual Smal Incision cataract surgery ) 3 ) ಕಾಂಟ್ಯಾಕ್ಟ್ ಲೆನ್ಸ್ ಕ್ಲಿನಿಕ್ 4 ) ಕಂಪ್ಯೂಟರೀಕೃತ ನೇತ್ರ ಪರೀಕ್ಷೆ 5 ) ಕಾರ್ನಿಯಲ್ ಸರ್ಜರಿ ( ಕೆರಾಟೋಪ್ಪಾಜಿ ) 6 ) ಗೊಕೋಮಾ ಕ್ಲಿನಿಕ್ : ಪೆರಿಮೆ ( Zelss HFA3 Visual field analyzer ) ಯಾಗ್ ಲೇಸರ್ 7 ) ಎ – ಚಿ ಸ್ವಾ ನ್ ಯು.ಎಫ್.ಜಿ. ( A – B – Scan USG ) 8 ) doiset gen dedo ( For Diabetic Retinopathy treatment ) 9 ) ಮಕ್ಕಳ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ ( Paediatric Ophthalmology Clinic ) 10 ) ದೂರಸಂಪರ್ಕ ನೇತ್ರ ತಪಾಸಣಾ ಹಾಗೂ ಚಿಕಿತ್ಸಾ ಸೌಲಭ್ಯ ( Tele Ophthalmology ) . 10 rigesede Baarted with NCT , GAT , Gonioscopy . HFA 12 ) OCT for Retina & Glaucoma Evaluation 13 ) ಲೆನ್ಲೋಮೀಟರಿನಿಂದ ದೃಷ್ಟಿದೋಷಗಳ ತಪಾಸಣೆ ಮತ್ತು ನಿಖರವಾದ ಕನ್ನಡಕಗಳ ನೀಡುವಿಕೆ ( Lensometer to Calculate Spectacle power ) 14 ) ಕಣ್ಣಿನ ಬಳಿ ಬರುವ ದುರ್ಮಾಂಸದ ಶಸ್ತ್ರ ಚಿಕಿತ್ಸೆ ( Pterygiurn Surgery ) ಕುಣಿಕೆ ಚೀಲದ ಶಸ್ತ್ರಚಿಕಿತ್ಸೆ – DCR & DCT Surgery 16 ) To start Cornea Clinic with availability of Pentacam and Specular Microscope for CR and Keratoplasty .

ಈ ಎಲ್ಲಾ ಸೇವೆಗಳನ್ನು ಅತ್ಯುತ್ತಮ ರೀತಿಯಲ್ಲಿ ರಿಯಾಯಿತಿ ದರದಲ್ಲಿ ಮಾಡಲಾಗುತ್ತದೆ . ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ( ಕ್ಯಾಟರಾಕ್ಸ್ ) ಸಂಪೂರ್ಣ ಉಚಿತವಾಗಿದ್ದು ಇದರ ಜೊತೆಯಲ್ಲಿ ಬೆಳಗಿನ ಉಪಹಾರ , ಮಧ್ಯಾಹ್ನ ಮತ್ತು ರಾತ್ರಿಯ ಭೋಜನ ಹಾಗೂ ಒಳರೋಗಿ ಸೇವೆಗಳು ಹಾಗೂ ಔಷಧಿ ಮತ್ತು ಕಪ್ಪು ಕನ್ನಡಕಗಳು ಸಂಪೂರ್ಣ ಉಚಿತವಾಗಿ ದೊರೆಯುತ್ತದೆ . ಉತೃಷ್ಟ ಮಟ್ಟದ ಲೆನ್ಸ್ ಬೇಕಿದ್ದಲ್ಲಿ ಆಸ್ಪತ್ರೆಯ ಕಛೇರಿಯಲ್ಲಿ ರಿಯಾಯಿತಿ ದರದಲ್ಲಿ ನೀಡಲು ಏರ್ಪಾಡು ಮಾಡಲಾಗುತ್ತದೆ . ಒಟ್ಟಿನಲ್ಲಿ ಅತ್ಯದ್ಭುತವಾದ ಹಾಗೂ ಸೂಕ್ಷ್ಮಾತಿಸೂಕ್ಷ್ಮವಾದ ಶಸ್ತ್ರಚಿಕಿತ್ಸೆಗಳನ್ನು ಬೆಂಗಳೂರಿನಂತಹ ಮಹಾನಗರಗಳಲ್ಲಿ ಮಾಡುವಂತಹ ಉತೃಷ್ಟ ಮಟ್ಟದ ಸೇವೆಯನ್ನು ಅತ್ಯಂತ ಮೇಧಾವಿ , ಅನುಭವಿ ಹಾಗೂ ಸ್ವರ್ಣಪದಕ ಪುರಸ್ಕೃತರಾದ ಮತ್ತು ಉನ್ನತ ಶ್ರೇಣಿಯಲ್ಲಿ ವ್ಯಾಸಂಗ ಮಾಡಿದ ವೈದ್ಯರುಗಳ ತಂಡವೇ ಸೇವೆ ಸಲ್ಲಿಸುತ್ತಿದ್ದಾರೆ . ಬಹುಶಃ ತುಮಕೂರು ಜಿಲ್ಲೆಯಲ್ಲಿಯೇ ದೊರೆಯದಂತಹ ಉತೃಷ್ಟ ಮಟ್ಟದ ಉಪಕರಣಗಳು , ಶಸ್ತ್ರಚಿಕಿತ್ಸಾ ಕೊಠಡಿಗಳು ಮತ್ತೆಲ್ಲದಕ್ಕಿಂತ ಮಿಗಿಲಾಗಿ ಉತ್ತಮ ರೀತಿಯ ದಾಖಲೆಪತ್ರಗಳ ವ್ಯವಸ್ಥೆ ಮಾಡಲಾಗಿದೆ . ಸಾರ್ವಜನಿಕರು ‘ ಆಯುಷ್ಮಾನ್ ಭಾರತ ‘ ‘ ಆರೋಗ್ಯ ಕರ್ನಾಟಕ ‘ ಸೌಲಭ್ಯವನ್ನು ಹೊಂದಿರುವವರು ಈ ಸೇವೆಗಳ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ .

ಸ್ವಾಮಿ ಜಪಾನಂದ

ಆಧ್ಯಕ್ಷರು

City’Today News

9341997936

ರಾಜ್ಯ ಸರ್ಕಾರ ಈ ನಮ್ಮ ಹಕ್ಕೊತ್ತಾಯಗಳನ್ನು ಒಂದು ತಿಂಗಗೋಳಗೆ ಈಡೇರಿಸಲಿಲ್ಲ ವಾದಲ್ಲಿ ರಾಜ್ಯದಾದ್ಯಂದ ಸ್ವಚ್ಚತಾ ಕೆಲಸ ಸ್ಥಗಿತಗೊಳಿಸಿ ಅನಿರ್ಧಿಷ್ಟಾ ಮುಷ್ಕರ ನಡೆಸಲು ತೀರ್ಮಾನಿಸಲಾಗುವುದು

ಬೆಂಗಳೂರು ಮಹಾನಗರಪಾಲಿಕೆ ಸೇರಿದಂತೆ ರಾಜ್ಯದ ವಿವಿಧ ನಗರಸ್ಥಳೀಯ ಸಂಸ್ಥೆಗಳಲ್ಲಿ ಅನೇಕ ವರ್ಷಗಳಿಂದ ಸ್ವಚ್ಛತೆ ಕೆಲಸ ಮಾಡುತ್ತಿರುವ ನೇರ ಪಾವತಿ ಪೌರಕಾರ್ಮಿಕರು , ಗುತ್ತಿಗೆ ಪೌರಕಾರ್ಮಿಕರು , ಕಸಾಗಿಸುವ ಲೋಡರ್ , ಕ್ಲೀನರ್ , ಕಸದ ವಾಹನ ಚಾಲಕರು ಮತ್ತು ಒಳಚರಂಡಿ ಸ್ವಚ್ಚತಗಾರರನ್ನು ಈತಕ್ಷಣ ಖಾಯಂ ನೇಮಕಾತಿ ಮಾಡಲು ರಾಜ್ಯ ಸರ್ಕಾರವನ್ನು ಒತ್ತಾಯಿಸಲು ದಿನಾಂಕ : 31.08.2021 ರಂದು ಮಹಾಸಂಘದ ವತಿಯಿಂದ ಪತ್ರಿಕಾಗೋಷ್ಟಿ ಮೂಲಕ ಈ ಕೆಲಗಿನ ಹಕ್ಕೊತ್ತಾಯಗಳನ್ನು ಸಲ್ಲಿಸಲಾಗುವುದು . ಹಾಗೂ ರಾಜ್ಯ ಸರ್ಕಾರ ಈ ನಮ್ಮ ಹಕ್ಕೊತ್ತಾಯಗಳನ್ನು ಒಂದು ತಿಂಗಗೋಳಗೆ ಈಡೇರಿಸಲಿಲ್ಲ ಅಂದರೆ ರಾಜ್ಯದಾದ್ಯಂದ ಸ್ವಚ್ಚತಾ ಕೆಲಸ ಸ್ಥಗಿತಗೊಳಿಸಿ ಅನಿರ್ಧಿಷ್ಟಾ ಮುಷ್ಕರ ನಡೆಸಲು ತೀರ್ಮಾನಿಸಲಾಗುವುದು ಎಂದು ಮಾಧ್ಯಮಗಳ ಮೂಲಕ ತಿಳಿಸುತ್ತಿದ್ದೇವೆ .

ಹಕ್ಕೊತ್ತಾಯಗಳು : 1. ಎಲ್ಲಾ ನೇರ ಪಾವತಿ ಪೌರಕಾರ್ಮಿಕರು ಮತ್ತು ಮೇಸ್ತ್ರಿಗಳು ಹಾಗೂ ಗುತ್ತಿಗೆ ಲೋಡರ್ , ಕ್ಲಿನರ್ , ಮತ್ತು ಕಸ ಸಾಗಿಸುವ ವಾಹನಗಳಾದ ಅಟೊ , ಮತ್ತು ಟಿಪ್ಪರ್ ಚಾಲಕರು , ಸಹಾಯಕರನ್ನು ಮತ್ತು ಒಳಚರಂಡಿ ( ಯುಜಿಡಿ ) ಸ್ವಚ್ಚತಾ ಕಾರ್ಮಿಕರನ್ನು ಕೂಡಲೆ ಖಾಯಂಗೊಳಿಸಬೇಕು 2 , ಬೃಹತ್ ಬೆಂಗಳೂರು ಮಹನಗರ ಪಾಲಿಕೆ ಯು ಘನತ್ಯಾಜ್ಯ ನಿರ್ವಹಣೆಗಾಗಿ ಪ್ರತ್ಯೇಕವಾದ ಖಾಸಗಿ ಕಂಪನಿ ರಚಿಸಿರುವುದು ಮತ್ತು ಘನತ್ಯಾಜ್ಯ ನಿರ್ವಹಣೆಯಲ್ಲಿ ಕಾರ್ಮಿಕರಾದ ಲೋಡರ್ , ಕ್ಲಿನರ್ , ಮತ್ತು ಕಸ ಸಾಗಿಸುವ ವಾಹನಗಳಾದ ಅಟೊ , ಮತ್ತು ಟಿಪ್ಪರ್ ಚಾಲಕರು , ಸಹಾಯಕರು ಇವರನ್ನು ಖಾಸಗಿ ಕಂಪನಿಯ ವ್ಯಾಪ್ತಿಗೆ ಸೇರಿಸಲು ಯೋಜನೆ ಸಿದ್ದಪಡಿಸಲಾಗಿದೆ , ಇದು ಕಾರ್ಮಿಕರ ವಿರೋಧಿ ದೋರಣೆಯಾಗಿದೆ , ಅದ್ದರಿಂದ ಪ್ರಸ್ತುತ ಘನ ತ್ಯಾಜ್ಯ ನಿರ್ವಹಣೆಯಲ್ಲಿ ತೊಡಗಿರುವ ಕಾರ್ಮಿಕರನ್ನು ಬಿ ಬಿ ಎಂ ಪಿ ಯಲ್ಲಿಯೇ ಖಾಯಂ ಕಾರ್ಮಿಕರಾಗಿ ನೇಮಿಸಿಕೊಳ್ಳಬೇಕು ಮತ್ತು ಈ ಎಲ್ಲಾ ಕಾರ್ಮಿಕರಿಗೆ ಉದ್ಯೋಗ ಭದ್ರತೆ ನೀಡಬೇಕು . 3. ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ನೇರ ಪಾವತಿ ಪೌರಕಾರ್ಮಿಕರಲ್ಲಿ ಅನೇಕರು 60 ವರ್ಷ ಪೂರೈಸುತ್ತಿದ್ದಾರೆ , ಅವರನ್ನು ಯಾವುದೇ ಪರಿಹಾರ ನೀಡದೆ ಅನ್ಯಾಯವಾಗಿ ನಿವೃತ್ತಿಗೊಳಿಸುತ್ತಿದ್ದಾರೆ , ಅದ್ದರಿಂದ 60 ವರ್ಷ ಪೂರೈಸುತ್ತಿರುವ ಪೌರಕಾರ್ಮಿಕರು ಮತ್ತು ಮೇಸ್ತ್ರಿಗಳು ವಯಸ್ಸಾದ ಮೇಲೆ ಬೀದಿಪಾಲಾಗುತ್ತಿದ್ದಾರೆ , ಅದ್ದರಿಂದ ಅವರ ಅವಲಂಬಿತರಿಗೆ ಉದ್ಯೋಗ ನೀಡಬೇಕು . ಮತ್ತು ನಿವೃತ್ತಿ ಪರಿಹಾರವಾಗಿ ಪರಿಹಾರವಾಗಿ ತಲಾ ರೂ.10.ಲಕ್ಷ ಹಣ ನೀಡಿ ಗೌರವದಿಂದ ನಿವೃತ್ತಿಗೊಳಿಸಬೇಕು . 4 , ವಿಶ್ರಾಂತಿ ಗೃಹ , ಶೌಚ್ಚಾಲಯ , ಬೀಸಿನೀರು ಮತ್ತು ಸುರಕ್ಷಿತ ಸಲಕರಣೆ : ಬೆಂಗಳೂರು ಮಹಾನಗರ ಪಾಲಿಕೆ ಮತ್ತು ರಾಜ್ಯದ ನಗರಸ್ಥಳೀಯ ಸಂಸ್ಥೆಗಳಲ್ಲಿ 54,000 ಸಾವಿರಕ್ಕೂ ಹೆಚ್ಚು ಪೌರಕಾರ್ಮಿಕರು ದುಡಿಯುತ್ತಿದ್ದಾರೆ , ಅವರಲ್ಲಿ ಶೇ .90 ಮಹಿಳೆಯಾರಿದ್ದಾರೆ . ಬೆಳಿಗ್ಗೆ 5.30 ಗಂಟೆಗೆ ತಮ್ಮ ಕೆಲಸ ಪ್ರಾರಂಬಿಸುತ್ತಾರೆ . ಈ ಕಾರ್ಮಿಕರು ಅತ್ಯವಶ್ಯಕವಾಗಿ ಬೇಕಾಗಿರುವ ಶೌಚಾಲಯ , ವಿಶ್ರಾಂತಿ ಕೊಠಡಿ , ಕುಡಿಯುವ ನೀರು , ಕೈಕಾಲು ಸ್ವಚ್ಛಮಾಡಿಕೊಳ್ಳಲು ಬಿಸಿನೀರಿನ ವ್ಯವಸ್ಥೆ ಮಾಡುವಂತೆ ಅನೇಕ ವರ್ಷಗಳಿಂದ ಒತ್ತಾಯಿಸುತ್ತಿದ್ದೇವೆ , ಅದರೆ ಇದೂವರೆವಿಗೂ ಈ ಕುರಿತು ಸೂಕ್ತ ಕ್ರಮ ಜರುಗಿಸಿಲ್ಲ , ಆದ್ದರಿಂದ ಈ ಕೂಡಲೇ ವ್ಯವಸ್ಥೆ ಮಾಡಬೇಕು ,

5. ಭವಿಷ್ಯ ನಿಧಿ ಮತ್ತು ಇ ಎಸ್ ಐ ಪಾವತಿಸದೆ ವಂಚಿಸಿರುವುದು : 2018 ರಿಂದ ಪೌರಕಾರ್ಮಿಕರು ಮತ್ತು ಮೇಸ್ತಿಗಳು ಬಿ ಬಿ ಎಂ ಪಿ ಹಾಗೂ ನಗರಸ್ಥಳೀಯ ಸಂಸ್ಥೆಗಳ ಅಡಿಯಲ್ಲಿ ನೇರವಾಗಿ ಮಾಸಿಕ ವೇತನ ಪಡೆಯುತ್ತಿದ್ದಾರೆ . 2018 ರಿಂದ ಇಲ್ಲಿಯವರೆಗೂ ಭವಿಷ್ಯ ನಿಧಿ ಮತ್ತು ಇ ಎಸ್ ಐ ವಂತಿಗೆಯನ್ನು ಕಾರ್ಮಿಕರಿಂದ ಕಡಿತ ಮಾಡುತ್ತಿದ್ದಾರೆ , ಆದರೆ ಕಾರ್ಮಿಕರ ಭವಿಶ್ಯ ನಿಧಿ ಖಾತೆಗೆ ನೇರವಾಗಿ ಪಾವತಿಸಿರುವ ಕುರಿತು ಸರಿಯಾದ ಮಾಹಿತಿ ಇಲ್ಲ . ಅದ್ದರಿಂದ ಈ ತಕ್ಷಣ ಎಲ್ಲಾ ಕಾರ್ಮಿಕರ ಖಾತೆಗಳಿಗೆ ನೇರವಾಗಿ ಜಮೆ ಮಾಡಬೇಕು . ಈ ಕುರಿತು ಸೂಕ್ತ ದಾಖಲಾತಿಗಳನ್ನು ಕಾರ್ಮಿಕರಿಗೆ ಒದಗಿಸಬೇಕು , 6. ಪೌರಕಾರ್ಮಿಕರು , ಮಸ್ತಿಗಳನ್ನು ಖಾಯಂ ನೇಮಕಾತಿ ಮಾಡಲು ರೂಪಿಸಿರುವ ವಯೋಮಿತಿ 45 ವರ್ಷಗಳು , ಈ ನಿಯಮದಿಂದ ಬಹುತೇಕ ಹಾಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಅನ್ಯಾಯವಾಗಲಿದೆ . ಅದ್ದರಿಂದ ಸದರಿ ಕಾರ್ಮಿಕರ ಖಾಯಂ ನೇಮಕಾತಿ ವಯಸ್ಸು ಕನಿಷ್ಠ 50 ವರ್ಷಗಳಿಗೆ ಹೆಚ್ಚಿಸಬೇಕು . 7. ಪೌರಕಾರ್ಮಿಕರು , ಮೇಸ್ತ್ರಿಗಳನ್ನು ಹಾಗೂ ಲೋಡರ್ ಮತ್ತು ಕಸದ ವಾಹನ ಚಾಲಕರು ಮತ್ತು ಯುಜಿಡಿ ಸ್ವಚ್ಚತಗಾರರು ಕೊರೋನಾ ಸೊಂಕು ವ್ಯಾಪಕವಾಗಿ ಹರಡುತ್ತಿದ್ದರು ತಮ್ಮ ಪ್ರಾಣಗಳನ್ನು ಲೆಕ್ಕಿಸದೆ ನಿರಂತರವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ . ಈ ಸಂದರ್ಭದಲ್ಲಿ ಅನೇಕರು ಕರೋನಾ ಸೋಂಕಿಗೆ ಬಲಿಯಾಗಿದ್ದಾರೆ . ಅಂತವರಿಗೆ ಇದೂವರೆವಿಗೂ ಪರಿಹಾರ ದೊರೆತಿಲ್ಲ . ಆದ್ದರಿಂದ ಈ ತಕ್ಷಣವೇ ಪಿ . ಎಂ ಕೇರ್ ಫಂಡ್ ಅಥಾವ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಿಂದ ತಲಾ ರೂ.30.ಲಕ್ಷ ಪರಿಹಾರ ನೀಡಬೇಕು ,

ಮುತ್ಯಾಲಪ್ಪ ,ಅದ್ಯಕ್ಷರು

ಬೆಂ . ನಗರಜಿಲ್ಲೆ

ಎನ್ ಪಿ ಶ್ರೀನಿವಾಸಲು , ಅಧ್ಯಕ್ಷರು , ಬೆಂ.ನಗರ ,

ಮುನಿರಾಜು, ರಾಜ್ಯ ಪ್ರಧಾನ ಕಾರ್ಯದರ್ಶಿ ,

ನಾರಾಯಣ ( ಮೈಸೂರು ) ರಾಜ್ಯಾದ್ಯಕ್ಷರು

City Today News

9341997936

ಪಂಚಾಯತ್ ರಾಜ್ ಸಾಧಕರಿಗೆ “ ಡಾ ॥ ಚಿಕ್ಕಕೊಮಾರಿಗೌಡ ದತ್ತಿ ಪ್ರಶಸ್ತಿ ‘ ಪುರಸ್ಕಾರ

ಪಂಚಾಯತ್ ರಾಜ್ ಸಾಧಕರಿಗೆ “ ಡಾ ॥ ಚಿಕ್ಕಕೊಮಾರಿಗೌಡ ದತ್ತಿ ಪ್ರಶಸ್ತಿ ‘ ಪುರಸ್ಕಾರ ಕರ್ನಾಟಕ ಪಂಚಾಯತ್ ರಾಜ್ ಪರಿಷತ್ 1962 ರಲ್ಲಿ ಅಂದಿನ ಪ್ರಧಾನಿ ಶ್ರೀ ಪಂಡಿತ್ ಜವಾಹರ್ ಲಾಲ್ ನೆಹರೂರವರಿಂದ ಉದ್ಘಾಟಿಸಲ್ಪಟ್ಟ ಸಂಸ್ಥೆಯಾಗಿರುತ್ತದೆ . ಕರ್ನಾಟಕದ ಮೂರು ಹಂತದ ( ಜಿಲ್ಲಾ , ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿ ) ಪಂಚಾಯತ್ ರಾಜ್ ಸಂಸ್ಥೆಗಳ ಪ್ರಾತಿನಿಧಿಕ ಸಂಸ್ಥೆಯಾಗಿರುತ್ತದೆ . ಕರ್ನಾಟಕ ರಾಜ್ಯದ ಪಂಚಾಯತ್ ರಾಜ್ ಇತಿಹಾಸದಲ್ಲೇ ಮೊದಲ ಬಾರಿಗೆ ಕರ್ನಾಟಕ ಪಂಚಾಯತ್ ರಾಜ್ ಪರಿಷತ್‌ನ ವತಿಯಿಂದ ದಿನಾಂಕ 2-9-2021ನೇ ಗುರುವಾರ ಬೆಳಿಗ್ಗೆ 11.00 ಗಂಟೆಗೆ ಬೆಂಗಳೂರಿನ ಕುಮಾರ ಪಾರ್ಕ್ ಪೂರ್ವದಲ್ಲಿರುವ ಗಾಂಧಿ ಭವನದ ಬಾಪು ಸಭಾಂಗಣದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ವಿಶೇಷ ಸಾಧನೆ ಮಾಡಿರುವ ಪಂಚಾಯತ್ ರಾಜ್ ಪ್ರತಿನಿಧಿಗಳಿಗೆ , ಅಧಿಕಾರಿಗಳಿಗೆ ಹಾಗೂ ಪಂಚಾಯತ್ ರಾಜ್ ಸಂಸ್ಥೆಗೆ ‘ ಡಾ || ಚಿಕ್ಕಕೊಮಾರಿಗೌಡ ದತ್ತಿ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಗುವುದು . ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀಶ್ರೀಶ್ರೀ ಡಾ || ನಿರ್ಮಲಾನಂದನಾಥ ಮಹಾಸ್ವಾಮೀಜಿರವರು ವಹಿಸಲಿದ್ದಾರೆ . ಕರ್ನಾಟಕ ಪಂಚಾಯತ್ ರಾಜ್ ಪರಿಷತ್‌ನ ಕಾರ್ಯಾಧ್ಯಕ್ಷರು ಹಾಗೂ ಮಾಜಿ ಸಂಸದರಾದ ಶ್ರೀ ಸಿ . ನಾರಾಯಣಸ್ವಾಮಿರವರು ಅಧ್ಯಕ್ಷತೆ ವಹಿಸಲಿದ್ದಾರೆ . ಉದ್ಘಾಟನೆಯನ್ನು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷರಾದ ನಾಡೋಜ ವೊಡೆ ಪಿ , ಕೃಷ್ಣರವರು ನೆರವೇರಿಸಲಿದ್ದಾರೆ . ಕಾರ್ಯಕ್ರಮದಲ್ಲಿ ಡಾ || ಚಿಕ್ಕಕೊಮಾರಿಗೌಡರ ಕೃತಿ “ ಬಾಳೊಂದು ನಾಟಕ ” ಪರಮಪೂಜ್ಯರಿಂದ ಬಿಡುಗಡೆಯಾಗಲಿದೆ . ಕೃತಿಯನ್ನು ಕುರಿತು ಖ್ಯಾತ ಚಿತ್ರಸಾಹಿತಿ , ನಿರ್ದೇಶಕ ಹಾಗೂ ನಿರ್ಮಾಪಕರಾದ ಶ್ರೀ ಸಿ.ವಿ. ಶಿವಶಂಕರ್‌ರವರು ಮಾತನಾಡಲಿದ್ದಾರೆ . ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಪ್ರಮೋದ ಹೆಗಡೆ ರವರು “ ಕರ್ನಾಟಕ ಪಂಚಾಯತ್ ರಾಜ್ ಒಂದು ಅವಲೋಕನ ” ಕೃತಿಯನ್ನು ಬಿಡುಗಡೆಗೊಳಿಸಿ ದತ್ತಿ ಉಪನ್ಯಾಸವನ್ನು ನೀಡಲಿದ್ದಾರೆ . ಪರಿಷತ್ತಿನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಕೆ.ಎಸ್ . ಸತೀಶ್ ರವರು ಕೃತಿ ಪರಿಚಯ ಮಾಡಲಿದ್ದಾರೆ . ಪರಿಷತ್‌ನ ಕೋಶಾಧಿಕಾರಿಗಳು , ಸಾಹಿತಿಗಳು ಹಾಗೂ ಗ್ರಾಮೀಣಾಭಿವೃದ್ಧಿ ಚಿಂತಕರಾದ ಡಾ || ಚಿಕ್ಕಕೊಮಾರಿಗೌಡರು ತಮ್ಮ ಹೆಸರಿನಲ್ಲಿ ಕರ್ನಾಟಕ ಪಂಚಾಯತ್ ರಾಜ್ ಪರಿಷತ್ತಿನಲ್ಲಿ ಐದು ಲಕ್ಷ ರೂಗಳನ್ನು ದತ್ತಿ ನಿಧಿಯಾಗಿ ಇಟ್ಟಿದ್ದು ಪ್ರತಿ ವರ್ಷ ಡಾ || ಚಿಕ್ಕಕೊಮಾರಿಗೌಡರ ಹೆಸರಿನಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ವಿಶೇಷ ಸಾಧನೆ ಮಾಡಿರುವ ಜನಪ್ರತಿನಿಧಿಗಳು , ಅಧಿಕಾರಿಗಳು ಹಾಗೂ ಪಂಚಾಯತ್ ರಾಜ್ ಸಂಸ್ಥೆಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು . ರಾಜ್ಯದಲ್ಲಿರುವ ಗ್ರಾಮ ಪಂಚಾಯಿತಿಗಳಲ್ಲೇ ಅತ್ಯಂತ ವಿನೂತನ ಕಾರ್ಯಕ್ರಮಗಳ ಮೂಲಕ ಗ್ರಾಮ ಸ್ವರಾಜ್ಯದ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಡಿಜಿಟಲ್ ಲೈಬ್ರರಿ , ಜನಔಷಧಿ ಕೇಂದ್ರ , ಶೇ . 100 ರಷ್ಟು ಶೌಚಾಲಯ , ಆತ್ಯುತ್ತಮ ಘನತ್ಯಾಜ್ಯ ವಿಲೇವಾರಿ ಹೀಗೆ ವಿಶೇಷ ಸಾಧನೆ ಮಾಡಿರುವ ಬೆಂಗಳೂರು ನಗರ ಜಿಲ್ಲೆಯ , ಬೆಂಗಳೂರು ಉತ್ತರ ತಾಲ್ಲೂಕಿನ ರಾಜಾನುಕುಂಟೆ ಗ್ರಾಮ ಪಂಚಾಯಿತಿಗೆ ‘ ಅತ್ಯುತ್ತಮ ಗ್ರಾಮ ಪಂಚಾಯಿತಿ ಪ್ರಶಸ್ತಿ ‘ ನೀಡಿ ಗೌರವಿಸಲಾಗುವುದು .

ಮಾಜಿ ಶೌಚಾಲಯವಿಲ್ಲದ ಮನೆಯವರ ಕಾಲಿಗೆ ಬೀಳುವ ಮೂಲಕ ರಾಜ್ಯದಲ್ಲಿಯೇ ಮೊದಲ ಬಾರಿಗೆ ಶೇ .100 ರಷ್ಟು ಶೌಚಾಲಯ ನಿರ್ಮಾಣ ಮಾಡಿಸಿದ ಹಾಗೂ ಮಾದರಿ ಬಹು ಗ್ರಾಮ ಪಂಚಾಯಿತಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡಿರುವ ಕೊಪ್ಪಳ ಜಿಲ್ಲಾ ಪಂಚಾಯತ್‌ನ ಮಾಜಿ ಅಧ್ಯಕ್ಷರಾದ ಶ್ರೀ ಜನಾರ್ಧನ ಹುಲಗಿ ರವರಿಗೆ “ ಅತ್ಯುತ್ತಮ ಪಂಚಾಯತ್ ರಾಜ್ ಜನಪ್ರತಿನಿಧಿ ಪ್ರಶಸ್ತಿ ‘ ನೀಡಿ ಗೌರವಿಸಲಾಗುವುದು . ಶೇ .100 ರಷ್ಟು ಶೌಚಾಲಯ ನಿರ್ಮಾಣ , ಮಾದರಿ ಅಂಗನವಾಡಿ ನಿರ್ಮಾಣ , ತಿಪ್ಪ ಸಂಸ್ಕರಣ ಘಟಕಗಳ ನಿರ್ಮಾಣ . ಶ್ರಮದಾನದ ಮೂಲಕ ಗ್ರಾಮೀಣಾಭಿವೃದ್ಧಿ ಮುಂತಾದ ಚಟುವಟಿಕೆಗಳ ಮೂಲಕ ತಮ್ಮ ಗ್ರಾಮ ಪಂಚಾಯಿತಿಯನ್ನು ಮಾದರಿ ಗ್ರಾಮ ಪಂಚಾಯಿತಿಯನ್ನಾಗಿಸಿದ ಜಿಲ್ಲೆಯ ರೆಡ್ಡರ ನಾಗನೂರ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶ್ರೀಮತಿ ಪ್ರೇಮಕ್ಕ ಎಂ . ತಿಮ್ಮನಗೌಡರ್ ರವರಿಗೆ ‘ ಅತ್ಯುತ್ತಮ ಪಂಚಾಯತ್‌ ರಾಜ್‌ ಮಹಿಳಾ ಪ್ರತಿನಿಧಿ ಪ್ರಶಸ್ತಿ ‘ ನೀಡಿ ಗೌರವಿಸಲಾಗುವುದು . ತಾಲ್ಲೂಕು ಪಂಚಾಯಿತಿಯ ವಿದ್ಯಾವಂತ ಅಧ್ಯಕ್ಷರಾಗಿ ತಾಲ್ಲೂಕಿನಲ್ಲಿ ಶೌಚಾಲಯ ನಿರ್ಮಾಣ , ಕುಡಿಯುವ ನೀರಿನ ಯೋಜನೆಗಳ ಅನುಷ್ಠಾನ ಮುಂತಾದ ಜನಪರ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನ ಮಾಡುವ ಮೂಲಕ ಸಮರ್ಥ ಆಡಳಿತ ನೀಡಿದ ಹಾಗೂ ಸಾಮಾಜಿಕ ನ್ಯಾಯದ ಪರವಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಚಾಮರಾಜನಗರ ತಾಲ್ಲೂಕಿನ ಶ್ರೀ ಹೆಚ್.ವಿ , ಚಂದ್ರುರವರಿಗೆ ‘ ಅತ್ಯುತ್ತಮ ಪಂಚಾಯತ್ ರಾಜ್ ಪರಿಶಿಷ್ಟ ಜಾತಿ / ಪಂಗಡದ ಜನಪ್ರತಿನಿಧಿ ಪ್ರಶಸ್ತಿ ‘ ನೀಡಿ ಗೌರವಿಸಲಾಗುವುದು . ದಕ್ಷ ಆಡಳಿತಗಾರರಾಗಿ , ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳಿಗೆ ಸೂಕ್ತ ಸಹಕಾರ ಮತ್ತು ಮಾರ್ಗದರ್ಶನ ನೀಡುವ ಮೂಲಕ ತಾವು ಕಾರ್ಯನಿರ್ವಹಿಸಿದ ಗ್ರಾಮ ಪಂಚಾಯಿತಿಗಳನ್ನು ಮಾದರಿ ಗ್ರಾಮ ಪಂಚಾಯಿತಿಗಳನ್ನಾಗಿಸಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ಕೆ.ಎಸ್ , ಗಣೇಶ್ , ಬೀಡಿ ಗ್ರಾಮ ಪಂಚಾಯಿತಿ , ಖಾನಾಪುರ ತಾಲ್ಲೂಕು , ಬೆಳಗಾವಿ ಜಿಲ್ಲೆ ಇವರಿಗೆ ಅತ್ಯುತ್ತಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಶಸ್ತಿ ‘ ನೀಡಿ ಗೌರವಿಸಲಾಗುವುದು , ಚನ್ನಪಟ್ಟಣ ತಾಲ್ಲೂಕಿನ ಹಾರೋಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀ ಹೆಚ್ . ಟಿ . ಶಂಕರ್ ರವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಗುವುದು , ದತ್ತಿ ನಿಧಿ ಸ್ಥಾಪಕರು ಹಾಗೂ ಪರಿಷತ್‌ನ ಕೋಶಾಧ್ಯಕ್ಷರಾದ ಡಾ || ಚಿಕ್ಕಕೊಮಾರಿಗೌಡರು , ಉಪಾಧ್ಯಕ್ಷರು ಮಾಜಿ ಶಾಸಕರಾದ ಶ್ರೀ ಡಿ.ಆರ್.ಪಾಟೀಲ್‌ರವರು , ಉಪಾಧ್ಯಕ್ಷರು ಹಾಗೂ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಮಾಜಿ ಉಪಾಧ್ಯಕ್ಷರಾದ ಶ್ರೀ ವಿ.ವೈ. ಘೋರ್ಪಡೆರವರು ಹಾಗೂ ಕಾರ್ಯಕಾರಿ ಸಮಿತಿ ಮತ್ತು ಆಡಳಿತ ಮಂಡಳಿ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ . ವಂದನೆಗಳೊಂದಿಗೆ ,

ಕೆ.ಎಸ್ . ಸತೀಶ್

ಪ್ರಧಾನ ಕಾರ್ಯದರ್ಶಿ

ಕರ್ನಾಟಕ ಪಂಚಾಯತ್ ರಾಜ್

City Today News

9341997936

CAMPAIGN AGAINST HIGH-RISE BUILDING WATER TARIFF BY BWSSB

Bangalore, Karnataka, 30″ Aug 2021 The BWSSB since July 2013 introduced new tariff for High Rise Buildings – defined in the BWSSB Act as Buildings Having More than Four Floors – attracting Rs. 22/- per thousand litters. The tariff is about 200% hike in the Table Rates prescribed in the Act. For instance, if one consumes 15000 litres per month under Table Rates the chargeable amount is Rs. 133/- whereas the High-Rise Building Tariff is Rs.330/-.

Contrary to definition for High Rise Building Tariff, BWSSB is wrongly interpreting and applying the said Tariff for Buildings which are having FOUR FLOORS ONLY and below that mark. There is also discrimination in application of the Rules. This is affecting the middle-class consumers. Though the billing is made for High Rise Buildings, water supply is made to the ground level and the consumers are making their own arrangements for lifting the water to individual flats and maintain delivery pipelines.

On a brief comparison to other cities there is no tariff separately for High Rise Buildings. There is free water in Delhi. As per information available, in Mumbai it is Rs.3.50 per thousand litres. Kerala and Chennai charge Rs. 50/- and Rs.80/- per flat per month.

BBMP in their budget of FY 2020-21 have announced free water up-to 10000 litres and allocated Rs.43 crores for making payment to BWSSB. The shocking factor is if one consumes 10001 litres per month under the Table Rates chargeable amount is around Rs. 100/- and under the High – Rise Building Tariff it is Rs.242/-.

In our case, we reside in 4 floors and 3 floors only. We are fighting this draconian rise in water charges for the past 8 years and just to get a response to our objections we had to move a Writ Petition before the Karnataka High Court seeking directions to the Officials to respond. The speaking order passed by the Official was untenable and subsequently the Board Officials had many rounds of discussions to solve the issue of definition of High Rise Building thereby making the Speaking Order redundant.

Consumers who reside in buildings with FOUR FLOORS or BELOW, join hands with us to seek justice. Let us boldly and loudly say:

Table Rates ಬೇಕು- Highrise Building Tariff ಬೇಡ

BDA FLATS OWNERS/ALLOTTEES ASSOCIATIONS KALLAHALLI

City Today News

9341997936

1 ರಿಂದ 8 ನೇ ತರಗತಿಯವರಿಗೆ ಶಾಲೆಗಳನ್ನು ಪ್ರಾರಂಭಿಸುವುದರ ಜೊತೆಗೆ ಖಾಸಗಿ ಶಾಲೆಗಳ ವಿವಿಧ ಬೇಡಿಕೆಗಳನ್ನು ಈಡೇರಿಲು ಆಗ್ರಹ

1 , ಕ್ರಿಯಾಶೀಲ ಮುಖ್ಯಮಂತ್ರಿ ಗಳು ಮತ್ತು ವಿಶೇಷ ಆಲೋಚನೆ ಇರುವ ಶಿಕ್ಷಣ ಮಂತ್ರಿಗಳು ನಮ್ಮ ಸಮಸ್ಯೆಗಳನ್ನು ಬಗೆಹರಿಸುವ ವಿಶ್ವಾಸದೊಂದಿಗೆ , ದಿನಾಂಕ 30-08-2021 ರಂದು ಬೆಳಗ್ಗೆ 11 ಗಂಟೆಗೆ ಸನ್ಮಾನ್ಯ ಶಿಕ್ಷಣ ಸಚಿವರು ತಾಂತ್ರಿಕ ಸಲಹಾ ಸಮಿತಿಯ ಸಭೆಯನ್ನು ಅನೇಕ ತಜ್ಞರ ಸಲಹೆಯಂತೆ ಮತ್ತು ಈಗಾಗಲೇ 9 ರಿಂದ 12 ನೇ ತರಗತಿಯವರಿಗೆ ಶಾಲೆಗಳು ಕಳೆದ ಒಂದು ವಾರದಿಂದ ನಡೆಯುತ್ತಿದ್ದು , ಯಾವುದೇ ಅನಾಹುತಗಳಾಗಲಿ ಅಥವಾ ಮತ್ತಿತರ ಕೋವಿಡ್ ಸಮಸ್ಯೆಗಳಾಗಲಿ ಕಂಡುಬಂದಿಲ್ಲ . ಅದ್ದರಿಂದ ಕೂಡಲೇ 1 ರಿಂದ 8 ನೇ ತರಗತಿಯವರಿಗೂ ಶಾಲೆಗಳು ನಡೆಸಲು ಅನುಮತಿ ನೀಡಬೇಕಾಗಿ ರುಪ್ಪ ಕರ್ನಾಟಕ ಆಗ್ರಹಿಸುತ್ತದೆ . 2. ಕೋವಿಡ್ ನಿಂದ ಆರ್ಥಿಕವಾಗಿ ಖಾಸಗಿ ಶಾಲೆಗಳು ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿರುವುದು ತಮಗೆ ತಿಳಿದಿರುವ ವಿಚಾರ . ಸರ್ಕಾರಕ್ಕೆ ಮತ್ತು ಇಲಾಖೆಗೆ ಈಗಾಗಲೇ ಸಾಕಷ್ಟು ಬಾರಿ ಮನವಿ ಮಾಡಿದ್ದರು ಶಾಲೆಗಳಿಗೆ 2020-21ನೇ ಸಾಲಿನ ಆರ್.ಟಿ.ಈ.ಹಣ ಬಿಡುಗಡೆ ಮಾಡಿರುವುದಿಲ್ಲ ಅದರಿಂದ ಕೂಡಲೇ ಹಣ ಬಿಡುಗಡೆ ಮಾಡಬೇಕಾಗಿ ವಿನಂತಿ .

3 . ಇಂದಿನ ಶಿಕ್ಷಣ ಸಚಿವರು ಕೊಟ್ಟ ಭರವಸೆಯಂತೆ 2000 ವರೆಗೆ ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ ಬಿಡುಗಡೆ ಮಾಡಲು ಒಪ್ಪಿದ್ದರು ಆದ್ದರಿಂದ ಅದನ್ನು ಅನುಷ್ಠಾನಗೊಳಿಸಲು ಈ ಮೂಲಕ ಒತ್ತಾಯಿಸುತ್ತಿದ್ದೇವೆ 4 ರಾಜ್ಯದ ಅನೇಕ ಬಿ.ಇ.ಓಗಳು ಖಾಸಗಿ ಶಾಲೆಗಳ ಟಿ.ಸಿ.ಯನ್ನು ಅನಧಿಕೃತವಾಗಿ ನಿಡುತ್ತಿದ್ದು , ತತ್ತಕ್ಷಣ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು . ಖಾಸಗಿ ಶಾಲಾ ವಿಚಾರದಲ್ಲಿ ಇಲಾಖೆಯ ಅಸ್ತಕ್ಷೇಪ ಹೆಚ್ಚಾಗಿದ್ದು ಕೂಡಲೇ ಖಾಸಗಿ ಶಾಲಾ ಸಂಘಟನೆಗಳ ಮುಖ್ಯಸ್ಥರನ್ನು ಒಳಗಂಡಂತೆ ಪ್ರತ್ಯೇಕ ಪ್ರಾಧಿಕಾರ ರಚಿಸಬೇಕು . 5. ಶಿಕ್ಷಕರ ದಿನಚಾರಣೆ ಅಂಗವಾಗಿ ರಾಜ್ಯ ಉತ್ತಮ ಶಿಕ್ಷಕರ ಪ್ರಶಸ್ತಿ ಯನ್ನು ಖಾಸಗಿ ಶಾಲೆಗಳಿಗೂ ವಿಸ್ತರಿಸಬೇಕು . 6. ಸರ್ಕಾರ ಘೋಷಿಸಿದಂತೆ ಶಿಕ್ಷಕರ ಪ್ಯಾಕೇಜ್ ಐದು ಸಾವಿರ ರೂಗಳನ್ನು ಕೇವಲ 172000 ಬಿಡುಗಡೆ ಶಿಕ್ಷಕರಿಗೆ ಬಿಡುಗಡೆ ಮಾಡುತ್ತಿದೆ ಉಳಿದ ಸಾವಿರಾರು ಶಿಕ್ಷಕರ ಹಣ ಯಾವಾಗ ಪಾವತಿ ಮಾಡುವುದು ತಕ್ಷಣ ಕ್ರಮ ಕೈಗೊಳ್ಳಿ .

ಡಾಕ್ಟರ್ ಹಾಲನೂರು ಲೇಪಾಕ್ಷ ಅಧ್ಯಕ್ಷರು Rupsa ಕರ್ನಾಟಕ

City Today News

9341997936